Tuesday, 15 September 2020

" ಜನ್ಮಕುಂಡಲಿಯಲ್ಲಿರುವ ದ್ವಾದಶ ಭಾವಗಳು ಏನನ್ನು ಸೂಚಿಸುತ್ತವೆ ಗೊತ್ತಾ "

" ಜನ್ಮಕುಂಡಲಿಯಲ್ಲಿರುವ ದ್ವಾದಶ ಭಾವಗಳು ಏನನ್ನು ಸೂಚಿಸುತ್ತವೆ ಗೊತ್ತಾ "

ನಿಮ್ಮ ಜನ್ಮಕುಂಡಲಿಯ ಆರನೇ ಸ್ಥಾನದಲ್ಲಿ ರಾಹುವಿದ್ದಾನೆ, ಪಂಚಮ ಭಾವದಲ್ಲಿ ಗುರುವಿದ್ದಾನೆ ಎನ್ನುವುದನ್ನು ಕೇಳಿರುತ್ತೀರಿ. ಈ ಜನ್ಮಕುಂಡಲಿಯಲ್ಲಿ ಭಾವಗಳು ಎಂದರೆ ಏನು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

    
ನಿಮ್ಮ ಜನ್ಮಕುಂಡಲಿಯಲ್ಲಿ ಶನಿಯು ಆರನೇ ಭಾವದಲ್ಲಿ ಇದ್ದರೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಗುರುವು ಪಂಚಮ ಭಾವದಲ್ಲಿದ್ದರೆ ಸಂತಾನ ಪ್ರಾಪ್ತಿಯಾಗುವುದು ಎಂದು ಜ್ಯೋತಿಷಿಗಳು ಹೇಳಿರುವುದನ್ನು ಕೇಳಿರುತ್ತೀರಿ. ಈ ಪಂಚಮ ಭಾವ, ದಶಮ ಭಾವ ಎಂದರೆ ಏನು ಎನ್ನುವುದರ ಬಗ್ಗೆ ಸಂದೇಹವಿರಬಹುದು. ಈ ಸಂದೇಹಕ್ಕೆ ಉತ್ತರ ಇಲ್ಲಿದೆ ನೋಡಿ.

ಪ್ರತಿಯೊಬ್ಬರ ಜನ್ಮಕುಂಡಲಿಯಲ್ಲಿಯೂ ದ್ವಾದಶ ಮನೆಗಳು ಇರುತ್ತವೆ. ದ್ವಾದಶ ಅಂದರೆ ಹನ್ನೆರಡು. ನಿಮ್ಮ ಜಾತಕದಲ್ಲಿ ಲಗ್ನ ಎಂದು ಗುರುತಿಸಿರುತ್ತಾರೋ ಅದೇ ಪ್ರಥಮ ಭಾವವಾಗಿರುತ್ತದೆ. ಲಗ್ನ ಪ್ರಥಮ ಭಾವವಾದರೆ ಅದರ ಮುಂದಿನ ಮನೆ ದ್ವಿತೀಯ ಭಾವವಾಗಿರುತ್ತದೆ. ಹೀಗೆ ಲಗ್ನವು ಸೇರಿ ಒಟ್ಟು ಹನ್ನೆರಡು ಮನೆಗಳು ಕುಂಡಲಿಯಲ್ಲಿ ಇರುತ್ತವೆ. ಹೀಗೆ ಇರುವಂತಹ ಹನ್ನೆರಡು ಮನೆಗಳೂ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹನ್ನೆರಡೂ ಮನೆಗಳು ಯಾವ ಅಂಶವನ್ನು ಪ್ರತಿನಿಧಿಸುತ್ತವೆ ಎನ್ನುವುದನ್ನು ನೋಡೋಣ ಬನ್ನಿ.

ಪ್ರಥಮ ಭಾವ
ಪ್ರಥಮ ಸ್ಥಾನ ಅಂದರೆ ಪ್ರಥಮ ಭಾವವನ್ನು ತನು ಸ್ಥಾನ ಎಂದು ಕರೆಯುತ್ತಾರೆ. ಇದು ಶರೀರ ಸುಖ, ಆರೋಗ್ಯ, ವರ್ಣ, ಆಚರಣೆ, ಆಯುಷ್ಯ, ಸ್ವಭಾವ, ಗುಣ, ಧರ್ಮ, ಮನದ ಸ್ಥಿರತೆ ಇದು ಪ್ರಥಮ ಭಾವದ ಲಕ್ಷಣ. ಯಾವುದಾದರೂ ದೋಷ ಪೂರಿತ ಗ್ರಹಗಳು ಈ ಸ್ಥಾನದಲ್ಲಿದ್ದರೆ ಆರೋಗ್ಯದಲ್ಲಿ ಸಮಸ್ಯೆ, ಮಾನಸಿಕ ಒತ್ತಡದಂತಹ ಸಮಸ್ಯೆಗಳು ಕಂಡುಬರುವುದು, ಅದೇ ಉತ್ತಮ ಸ್ಥಾನದಲ್ಲಿದ್ದರೆ ಉತ್ತಮ ಆರೋಗ್ಯ, ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ, ಹೀಗೆ ಶುಭ ಫಲಗಳು ಕಂಡುಬರುತ್ತವೆ.

ದ್ವಿತೀಯ ಭಾವ
ಮನುಷ್ಯನ ಸಂಪತ್ತಿನ ಸ್ಥಿತಿ, ದ್ರವ್ಯ, ನೇತ್ರ, ಮುಖ, ವಾಕ್ ಸಿದ್ಧಿ, ಸಂಪತ್ತಿನಲ್ಲಿ ಏಳಿಗೆ ಇದು ದ್ವಿತೀಯ ಭಾವದ ಲಕ್ಷಣವಾಗಿದೆ.

ತೃತೀಯ ಭಾವ

ತೃತೀಯ ಸ್ಥಾನವನ್ನು ಸಹೋದರ ಸ್ಥಾನವೆಂದು ಕರೆಯುತ್ತಾರೆ. ಪರಾಕ್ರಮ, ವ್ಯಕ್ತಿಯ ಸೋದರಿ- ಸಹೋದರರೊಂದಿಗಿನ ಬಾಂಧವ್ಯ ಇದು ತೃತೀಯ ಭಾವವೆಂದು ಕರೆಯುತ್ತಾರೆ. ಇದನ್ನು ಸಹಜ ಸ್ಥಾನವೆಂದೂ ಕರೆಯುತ್ತಾರೆ.

ಚತುರ್ಥ ಭಾವ
ನಾಲ್ಕನೇ ಸ್ಥಾನವನ್ನು ಸುಖ ಸ್ಥಾನವೆಂದು ಕರೆಯಲಾಗುತ್ತದೆ. ಮನೆ, ಆಸ್ತಿ, ವಾಹನ, ತಾಯಿಯ ಸ್ವಭಾವ, ವಿದ್ಯೆ, ಆಯುಷ್ಯ ವಿಚಾರ ಈ ಭಾವದ ಲಕ್ಷಣವಾಗಿದೆ. ಶುಭ ಗ್ರಹಗಳಿದ್ದರೆ ಒಳ್ಳೆಯ ಫಲಗಳನ್ನೂ, ಪಾಪ ಗ್ರಹಗಳಿದ್ದರೆ ಕೆಟ್ಟಫಲವನ್ನೂ ಅನುಭವಿಸಬೇಕಾಗಬಹುದು.

ಪಂಚಮ ಭಾವ
ಪಂಚಮ ಭಾವ ಅಂದರೆ ಐದನೇ ಸ್ಥಾನವನ್ನು ಸುತಸ್ಥಾನವೆಂದು ಕರೆಯಲಾಗುತ್ತದೆ. ಸಂತತಿಯ ಸೌಖ್ಯ, ವಿದ್ಯೆ, ಬುದ್ಧಿ, ಧೋರಣೆ, ಚಾತುರ್ಯ ಇದು ಐದನೇ ಭಾವದ ಲಕ್ಷಣವಾಗಿದೆ. ಈ ಭಾವದಲ್ಲಿ ಗುರುವಿದ್ದರೆ ಪುತ್ರಯೋಗವೆಂದೂ, ಬುಧ, ಶನಿಗಳಿದ್ದರೆ ದತ್ತು ಪುತ್ರಯೋಗವೆಂದೂ ಹೇಳಲಾಗುತ್ತದೆ. ರಾಹುವಿದ್ದರೆ ಸರ್ಪದೋಷ ಕಂಡುಬರಬಹುದು.

ಷಷ್ಠಮ ಭಾವ
ಆರನೇ ಸ್ಥಾನವನ್ನು ರಿಪು ಭಾವವೆಂದು ಕರೆಯುತ್ತಾರೆ. ವ್ಯಕ್ತಿಗೆ ಬರುವ ನಾನಾ ರೋಗಗಳು, ಶತ್ರು ಪೀಡೆ, ಭಯ, ಸಂಕಟ, ಕಷ್ಟ, ಅಪಮಾನ, ಧಕ್ಕೆ, ವಿಚಾರ ಇದು ಆರನೇ ಭಾವದ ಲಕ್ಷಣ. ಈ ಸ್ಥಾನದಲ್ಲಿ ರಾಹುವಿದ್ದರೆ ಒಳ್ಳೆಯದೆಂದು ಹೇಳಲಾಗುತ್ತದೆ.

ಸಪ್ತಮ ಭಾವ
ಏಳನೇ ಸ್ಥಾನವನ್ನು ಜಾಯಾಸ್ಥಾನವಾಗಿದ್ದು, ವಿವಾಹ, ಸ್ತ್ರೀ ಸೌಖ್ಯ, ಪತಿಪತ್ನಿಯರಲ್ಲಿ ಪ್ರೇಮ, ವ್ಯಾಪಾರ, ಪತ್ನಿಯ ಸ್ವಭಾವ, ರೂಪ, ಲಾವಣ್ಯ, ವರ್ತನೆ, ಅಭಿಮಾನ, ಗರ್ವ, ಪ್ರವಾಸ, ಗರ್ಭಾಶಯದ ವಿಚಾರ ಇವು ಏಳನೇ ಭಾವದ ಲಕ್ಷಣ. ಸಪ್ತಮ ಭಾವದಲ್ಲಿ ಶುಕ್ರಗ್ರಹವಿದ್ದರೆ ಒಳ್ಳೆಯ ಸಂಗಾತಿಯನ್ನು ಪಡೆದು ಅದರ್ಶ ದಾಂಪತ್ಯವನ್ನು ನಡೆಸುತ್ತಾರೆಂದು ಹೇಳಲಾಗುತ್ತದೆ.

ಅಷ್ಟಮ ಭಾವ
ಎಂಟನೇ ಸ್ಥಾನವನ್ನು ಮೃತ್ಯು ಸ್ಥಾನವೆಂದು ಕರೆಯಲಾಗುತ್ತದೆ. ಮರಣ ಭಯ, ಆಕಸ್ಮಿಕವಾಗಿ ದ್ರವ್ಯಪ್ರಾಪ್ತಿ, ವಿಷಜಂತುಗಳ ಭಯ, ಶತ್ರು, ಅಪಮೃತ್ಯು, ಆತ್ಮಹತ್ಯೆ, ಅಪಘಾತ ಇವು ಎಂಟನೇ ಭಾವದ ಲಕ್ಷಣಗಳು. ಅಷ್ಟಮ ಸ್ಥಾನದಲ್ಲಿ ಶನಿಯಿದ್ದರೆ ಶತಾಯುಷಿಯೆಂದು ಹೇಳಲಾಗುತ್ತದೆ.

ನವಮ ಭಾವ

ಒಂಭತ್ತನೇ ಭಾವವನ್ನು ಧರ್ಮಸ್ಥಾನ ಎಂದು ಕರೆಯುತ್ತಾರೆ. ತೀರ್ಥಯಾತ್ರೆ, ಪ್ರವಾಸ, ಭಾಗ್ಯ, ಕರ್ಮಫಲ, ಧರ್ಮಾಚರಣೆ, ದೇವರ ದರ್ಶನ ಸೇವೆ ಇವು ಈ ಸ್ಥಾನದ ಲಕ್ಷಣಗಳು. ಈ ಸ್ಥಾನದಲ್ಲಿ ಗುರುವು ಬಲಿಷ್ಠನಾಗಿದ್ದರೆ ಅಥವಾ ಶುಭ ಗ್ರಹಗಳಿದ್ದರೆ ಅತ್ಯಂತ ಧಾರ್ಮಿಕನೂ, ಭಾಗ್ಯವಂತನೂ ಆಗುತ್ತಾನೆ. ಪಾಪ ಗ್ರಹಗಳಿದ್ದರೆ ವಿರುದ್ಧ ಫಲವನ್ನು ಅನುಭವಿಸಬೇಕಾಗಬಹುದು.

ದಶಮ ಭಾವ
ಹತ್ತನೇ ಸ್ಥಾನವನ್ನು ಕರ್ಮಸ್ಥಾನವೆಂದು ಕರೆಯುತ್ತಾರೆ. ಪಿತೃಸುಖ, ತಂದೆಯ ಸ್ವಭಾವ, ಗುಣ, ರೂಪ, ಉದ್ಯೋಗ, ಸಾಧನೆ, ಕೀರ್ತಿ, ವಿಚಾರ ಇದು ಹತ್ತನೇ ಭಾವದ ಲಕ್ಷಣವಾಗಿದೆ. ಹತ್ತನೇ ಭಾವದಲ್ಲಿ ಸೂರ್ಯನಿದ್ದರೆ ಸರ್ಕಾರಿ ಅಧಿಕಾರಿಯಾಗುವ ಯೋಗವಿರುತ್ತದೆ. ಪಾಪಗ್ರಹಗಳಿದ್ದರೆ ನಿರುದ್ಯೋಗಿಯೂ, ಆಲಸಿಯೂ ಆಗುತ್ತಾನೆ.

ಏಕಾದಶ ಭಾವ

ಹನ್ನೊಂದನೇ ಸ್ಥಾನವನ್ನು ಲಾಭ ಸ್ಥಾನವೆಂದು ಕರೆಯಲಾಗುತ್ತದೆ. ದ್ರವ್ಯ, ಸಂಪಾದನೆ, ಗೆಳೆಯರ ಸುಖ, ಆಪ್ತ, ಪರಿವಾರದವರ ಸುಖ ಇದು ಹನ್ನೊಂದನೇ ಭಾವದ ಲಕ್ಷಣವಾಗಿದೆ. ಇಲ್ಲಿ ಶುಭಗ್ರಹಗಳಿದ್ದರೆ ಜೀವನದಲ್ಲಿ ಒಳ್ಳೆಯ ಲಾಭವನ್ನು ಪಡೆಯುವಂತಹ ಲಕ್ಷಣಗಳಿವೆ.

ದ್ವಾದಶ ಭಾವ
ಹನ್ನೆರಡನೇ ಸ್ಥಾನವನ್ನು ವ್ಯಯಸ್ಥಾನವೆಂದು ಕರೆಯುತ್ತಾರೆ. ಶತ್ರು ಭಯ, ಮಾನಹಾನಿ, ಕ್ಲೇಶ, ಶಾರೀರಿಕ ಆಪತ್ತು, ಜೀವನದಲ್ಲಿ ಕಷ್ಟ, ಅಪಘಾತ, ಬಂಧನ, ಗೆಳೆಯನ ಸಲುವಾಗಿ ದ್ರವ್ಯ ನಾಶ ಇದು ಹನ್ನೆರಡನೇ ಭಾವದ ಲಕ್ಷಣವಾಗಿದೆ. ಇಲ್ಲಿ ಕೇತುವಿದ್ದರೆ ಒಳ್ಳೆಯ ಆಧ್ಯಾತ್ಮ ಜೀವಿಯೆಂದೂ, ಚಂದ್ರನು ಕ್ಷೀಣವಾಗಿದ್ದರೆ ಅತ್ಯಂತ ವಿಕಾರಿಯೂ, ಪಾತಕಿ ಎಂದು ಹೇಳಲಾಗುತ್ತದೆ.
ಪೋಸ್ಟ್ನ ಮೂಲಕ ನಿಮ್ಮ ಹಾಗೂ ನಿಮ್ಮ ಮಕ್ಕಳ ಜಾತಕ( ಜನ್ಮ ಕುಂಡಲಿ )ಯನ್ನು ಪಡೆಯಲು ಸಂಪರ್ಕಿಸಿ. 
9108668047 
ಜೋತಿಷ್ಯ ಸಲಹೆ ಹಾಗು ಪರಿಹಾರ whatsup ಕೂಡ ಮಾಡಿ 👏

ಜಾತಕದಲ್ಲಿ ರಾಹು ಕೇತುಗಳ ಪಾತ್ರ ಏನು

" ಜಾತಕದಲ್ಲಿ ರಾಹು ಕೇತುಗಳ ಪಾತ್ರ ಏನು "
ರಾಹು ಕೇತುಗಳಿಂದ ಶುಭ ಅಶುಭ ಫಲಗಳು ಇದ್ದೇ ಇರುತ್ತವೆ. ಕೆಲವರು ರಾಹು ಕೇತುಗಳಿಗೆ ಹೆದರುತ್ತಾರೆ. ರಾಹುವನ್ನು ಕಾಲ ರುದ್ರನೆಂದೂ, ಕೇತುವನ್ನು ಕ್ರಮಕಾರಕನೆಂದೂ ಹೇಳುತ್ತಾರೆ. ರಾಹುವಿನ ಉಚ್ಚ ಸ್ಥಾನ ಮಿಥುನ. ಸ್ವಕ್ಷೇತ್ರ ಕನ್ಯಾ. ನೀಚ ಸ್ಥಾನ ಧನು. ಚಂದ್ರ ಮತ್ತು ಮಂಗಳ ರಾಹುವಿನ ವೈರಿಗಳು. ಬುಧ, ಶುಕ್ರ ಮತ್ತು ಶನಿಗಳು ಮಿತ್ರರು. ಕುಂಡಲಿಯ 3, 6 ಮತ್ತು 12ನೇಯ ಸ್ಥಾನದಲ್ಲಿ ರಾಹು ಇದ್ದರೆ ಇಂಥವರ ಜಾತಕರಿಗೆ ಒಳ್ಳೆಯ ಫಲ ನೀಡಲು ಪೂರಕನಾಗಿರುತ್ತಾನೆ. ಅನಿಷ್ಟವನ್ನು ನಿವಾರಿಸಲು ಶಕ್ತನಾಗುತ್ತಾನೆ. ಕುಂಡಲಿಯಲ್ಲಿ 1, 2, 4, 5, 7, 8, 9 ಮತ್ತು 10ನೇಯ ಸ್ಥಾನಗಳಲ್ಲಿ ರಾಹು ಇದ್ದರೆ ಶುಭ ಫಲ ಕೊಡುವುದಿಲ್ಲ. ಕೇತುಗೆ ಧನು ರಾಶಿ ಉಚ್ಚವಾಗಿದೆ. ಮಿಥುನ ನೀಚ ಸ್ಥಾನ. ಅದರ ಸ್ವಕ್ಷೇತ್ರ ಮೀನ ರಾಶಿ. ಕೇತುನ ಮೂಲ ತ್ರಿಕೋಣ ಸಿಂಹ. ರಾಹು ಅಥವಾ ಕೇತುವು ಕುಂಡಲಿಯ ದ್ವಿತೀಯ ಇಲ್ಲವೇ ಸಪ್ತಮ ಸ್ಥಾನದಲ್ಲಿದ್ದು, ಧನಾದಿಪತಿ ಇಲ್ಲವೇ ಸಪ್ತಮಾಧಿಪತಿಯು ಅಶುಭ ಗ್ರಹದಿಂದ ಯುಕ್ತನಾಗಿದ್ದರೆ ಆ ದೆಸೆಯಲ್ಲಿ ಯಾವುದೇ ಒಳ್ಳೆಯ ಫಲವನ್ನು ಕೊಡುವುದಿಲ್ಲ. 1, 4, 7, 10 ಕೇಂದ್ರ ಸ್ಥಾನ 5, 9 ತ್ರಿಕೋಣ ಸ್ಥಾನದೊಡನೆ ರಾಹು ಇಲ್ಲವೇ ಕೇತು ದ್ವಿಸ್ವಭಾವ ರಾಶಿಯಲ್ಲಿದ್ದರೆ ಆ ಗ್ರಹಗಳ ದೆಸೆಯಲ್ಲಿ ಅಧಿಕಾರ, ಸಂಪತ್ತು ದೊರೆಯುವುದು. ವಷಭ, ಸಿಂಹ, ವಶ್ಚಿಕ ಮತ್ತು ಮಕರ ಇದು ಸ್ಥಿರ ರಾಶಿ. ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಯೊಡನೆ ರಾಹು ಇಲ್ಲವೇ ಕೇತುವು ಕುಂಡಲಿಯಲ್ಲಿದ್ದರೆ ಇಲ್ಲವೇ ಮೇಷ, ಕರ್ಕಾಟಕ, ತುಲಾ ಮತ್ತು ಧನು ಈ ಚರ ರಾಶಿಯಲ್ಲಿ ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಗಳಿಂದ ರಾಹು ಇಲ್ಲವೇ ಕೇತು ಕೂಡಿದರೆ ಆ ಗ್ರಹಗಳ ದೆಸೆಯಲ್ಲಿ ಜಾತಕನಿಗೆ ಬಹಳ ಸಂಪತ್ತು ಬರುತ್ತದೆ. ರಾಹು ಇಲ್ಲವೇ ಕೇತು ಅಶುಭ ಮನೆಯಲ್ಲಿ ಇದ್ದರೆ ಒಳ್ಳೆಯ ಫಲವು ಸಿಗುವುದಿಲ್ಲ. ರಾಹು ಕೇತುಗಳು ಕುಂಡಲಿಯ ಅನಿಷ್ಟ ಸ್ಥಾನದಲ್ಲಿದ್ದರೆ ಈ ಸಮಯದಲ್ಲಿ ಅನಿಷ್ಟ ಫಲವನ್ನು ಕೊಡುತ್ತದೆ. ರಾಹು ಕೇತುಗಳು ಮೇಷ, ವಷಭ, ಕರ್ಕಾಟಕ, ಸಿಂಹ, ತುಲಾ, ವಶ್ಚಿಕ, ಧನು ಮತ್ತು ಮಕರ ರಾಶಿಗಳಲ್ಲಿ ಕೇಂದ್ರದ ಅಧಿಪತಿಯಿಂದಾಗಲೀ ಅಥವಾ ತ್ರಿಕೋಣಾಧಿಪತಿಯಿಂದ ಕೂಡಿದ್ದರೆ ಜಾತಕರು ಬಹಳ ಹಣವಂತರಾಗುತ್ತಾರೆ. ಸ್ತ್ರೀಯರು ಮೇಷ ಲಗ್ನದಲ್ಲಿ ಜನಿಸಿದರೆ ಲಗ್ನದಲ್ಲಿ ರಾಹು, ಶುಕ್ರನಿದ್ದರೆ ಇವರು ಒಂದಕ್ಕಿಂತಲೂ ಜಾಸ್ತಿ ಮದುವೆಯಾಗುತ್ತಾರೆ. ತತೀಯದಲ್ಲಿ ರಾಹುವು ಮಂಗಳನಿಂದ ಯುಕ್ತನಾಗಿದ್ದರೆ ಇವರ ತಾಯಿಯ ಬಲ ಕಾಲಿಗೆ ತೊಂದರೆ ಬರುತ್ತದೆ. ಲಗ್ನದಲ್ಲಿ ಶನಿ ಏಕಾದಶ ಸ್ಥಾನದಲ್ಲಿ ರಾಹು ಇದ್ದರೆ ಇಂತಹ ಜಾತಕರು ಜೀವನ ಪೂರ್ತಿ ಸಂಪತ್ತಿನಿಂದ ಕೂಡಿದವರಾಗುತ್ತಾರೆ. ಲಗ್ನದಲ್ಲಿ ರಾಹು ದ್ವಿತೀಯದಲ್ಲಿಶನಿ ಇದ್ದರೆ ಜಾತಕನು ತನ್ನ ಆಯುಷ್ಯವನ್ನೆಲ್ಲಾ ಬಡಿದಾಟದಲ್ಲಿಯೇ ಕಳೆಯುತ್ತದೆ. ಲಗ್ನದಲ್ಲಿ ರಾಹು, ಮಂಗಳ ಇಲ್ಲವೇ ಗುರುನಿಂದ ಯುಕ್ತರಾಗಿದ್ದರೆ ಇಂಥವರು ಸರಕಾರದ ದಂಡಕ್ಕೆ ಗುರಿಯಾಗುತ್ತಾರೆ.ಜೋತಿಷ್ಯ ಹಾಗೂ ಪರಿಹಾರ  9108668047

Saturday, 5 September 2020

ದುಷ್ಟ ಶಕುನಿ

ಮಹಾಭಾರತದ ದುಷ್ಟ ಶಕುನಿ ದೇವಾಲಯ ಯಾಕೆ ಹೋಗ್ಬರಬೇಕು ಹಾಗೆ ಇದ್ರ ಹಿಂದಿರೋ ಕಥೆ ಕೇಳಿದ್ರೆ ಇಷ್ಟ್ ದಿನ ಬಯ್ದವರು ಸ್ವಲ್ಪ ಬೇಜಾರು ಪಟ್ಕೋತೀರಾ. ಭೀಷ್ಮನ ಮೇಲೆ ಹಾಗೂ ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಕೌರವರ ಮಾವನಾದ ಶಕುನಿಯ ಒಂದು ರಣತಂತ್ರವನ್ನು ರೂಪಿಸಿದ್ದ ಮಹಾಭಾರತ ಯುದ್ಧ ನಡೆಯಬೇಕಾದರೆ ಮೂಲ ಕಾರಣ ಎಂದು ಹೇಳಲಾಗುವ ಶಕುನಿಗೆ ಒಂದು ದೇವಾಲಯ ಕಟ್ಟಿದ್ದಾರೆ ಎಂದು ಕೇಳಿದರೆ ನಿಮಗೆ ಆಶ್ಚರ್ಯ ಆಗದೆ ಇರುವುದಿಲ್ಲ ಆದರೆ ಈ ದೇವಾಲಯದ ಇಂದಿನ ರಹಸ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು.
ಮಹಾಭಾರತದ ಖಳ ನಟರಾದ ಶಕುನಿ ಹಾಗೂ ದುರ್ಯೋಧನ ಇಬ್ಬರಿಗೂ ಕೇರಳದ ಕೊಲ್ಲಂನಲ್ಲಿ ದೇವಾಲಯಗಳನ್ನು ಕಟ್ಟಿಸಲಾಗಿದೆ ಈ ದೇವಾಲಯಗಳಿಗೆ ಪವಿತ್ರ ಶ್ವರ ಹಾಗೂ ಪೊರುವಹೈ ಎಂದು ಕರೆಯಲಾಗುತ್ತದೆ .
ಶಕುನಿ ದೇವಾಲಯವನ್ನು ಮಾಯಾಂಕೊಟ್ಟು ಮಲಂಚರುವು ಮಲನಾದ ಎಂದು ಕರೆಯುತ್ತಾರೆ ಮಹಾಭಾರತದ ಮೂಲ ಸೂತ್ರಧಾರಿ ಈತ ಆತನ ಗುಣಗಳು ಕೆಟ್ಟದ್ದೇ ಆಗಿದ್ದರೂ ಆತನ ಮನಸ್ಸು ಒಳ್ಳೆಯದು ಎಂದು ಪೂರ್ವಿಕರು ಈ ಸ್ಥಳದ ಮಹಿಮೆಯನ್ನು ಕೊಂಡಾಡುತ್ತಾರೆ ಶಕುನಿ ಹಾಗೆ ತನ್ನ ದುಷ್ಟಬುದ್ಧಿಯನ್ನು ತೋರಿಸಲು ಒಂದು ದೊಡ್ಡ ಕಣ್ಣೀರಿನ ಕಥೆಯೇ ಕಾರಣ ಆತ ತನ್ನ ಬಾಲ್ಯದಲ್ಲಿ ಅನುಭವಿಸಿದ ನೋವೇ ಇದಕ್ಕೆ ಕಾರಣ .
ಶಕುನಿ ಹಿಂದಿನ ಕಣ್ಣೀರಿನ ಕಥೆ
ಮಹಾಭಾರತದಂತಹ ಪೌರಾಣಿಕ ಕಥೆಯನ್ನು ಓದಿದವರು, ಕೇಳಿದವರು ಮತ್ತು ನೋಡಿರುವವರು ಶಕುನಿಯ ಕುತಂತ್ರ ಬುದ್ದಿಯ ಬಗ್ಗೆ ತಿಳಿದುಕೊಂಡಿರುತ್ತಾರೆ. ಅವನನ್ನು ನೋಡಿ ಅಪಹಾಸ್ಯ ಮಾಡುವವರೇ ಹೆಚ್ಚು.ಹಾಗೆ ಈಗಿನ ಜನ ಸಾಮಾನ್ಯರು ಕೂಡ ಏನಾದರೂ ಕುತಂತ್ರ ಬುದ್ಧಿಯನ್ನು ಮಾಡಿದಲ್ಲಿ ಶಕುನಿಯ ಹೆಸರನ್ನು ಹೇಳುತ್ತಾರೆ ಮತ್ತು ಅವರನ್ನು ಶಕುನಿಗೆ ಹೋಲಿಸುತ್ತಾರೆ. ಮಹಾಭಾರತದ ಭೀಕರ ಯುದ್ಧಕ್ಕೆ,, ಕೌರವ ಸಾಮ್ರಾಜ್ಯದ ಪತನಕ್ಕೆ,ಶಕುನಿಯ ಕುತಂತ್ರವೇ ಕಾರಣ ಮತ್ತೆ ಅವನ ಕೆಟ್ಟ ಆಲೋಚನೆಗಳೇ ಕಾರಣ ಎಂದು ಎಲ್ಲರೂ ಭಾವಿಸಿದ್ದಾರೆ.ಅದು ಸತ್ಯವೂ ಹೌದು, ಆದರೆ ಆ ಕುತಂತ್ರದ ಹಿಂದೆ ಆ ಕುತಂತ್ರಿಯ ಮನದಲ್ಲೂ ಕೂಡ ಭರಿಸಲಾಗದ ಮನ ಕಲುಕುವ ನೋವು, ದುಃಖ ಇದೆ ಎನ್ನುವುದು ನಿಮಗೆ ಗೊತ್ತೇ ? ಇದರ ಹಿಂದೆ ಒಂದು ಮನ ಮಿಡಿಯುವ ಕಥೆಯಿದೆ ಅದೇನೆಂದರೆ
ಮಹಾಭಾರತದ ಕಾಲದಲ್ಲಿ ಗಾಂಧಾರ ಎಂಬ ಸಾಮ್ರಾಜ್ಯವಿತ್ತು. ಆ ಸಾಮ್ರಾಜ್ಯವನ್ನು ಆಳುತ್ತಿದ್ದವರು ಶುಭಲ ಎಂಬ ರಾಜ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ದೃತರಾಷ್ಟ್ರನಿಗೆ ಮೂರು ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಇದ್ದಳು. ಗಾಂಧಾರ ಸಾಮ್ರಾಜ್ಯದ ಶುಭಲ ರಾಜನಿಗೂ ಕೂಡಾ ಮೂರು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಆ ಹೆಣ್ಣು ಮಗಳೇ, ಧೃತರಾಷ್ಟ್ರನ ಪತ್ನಿ ಗಾಂಧಾರಿ, ನೂರನೇ ಮಗನೇ ಮಹಾ ಕುತಂತ್ರಿ ಶಕುನಿ, ಶಕುನಿಗೆ ತಂಗಿ ಗಾಂಧಾರಿ ಎಂದರೆ ಬಹಳ ಪ್ರೀತಿ.
ತಂಗಿಯಾದ ಗಾಂಧಾರಿಗೆ ಕುಜ ದೋಷವಿರುವ ಕಾರಣ , ಆಕೆಯನ್ನು ವರಿಸುವ ಗಂಡು ಬಹುಬೇಗ ಸಾಯುತ್ತಾನೆ ಎಂದು ಜ್ಯೋತಿಷ್ಯರು ಹೇಳಿರುತ್ತಾರೆ. ಆದ್ದರಿಂದ ಮಹಾರಾಜ ಶುಭಲ ಮುಕ್ತವಾಗಿ ಒಂದು ಗಂಡು ಮೇಕೆಯ ಜೊತೆಗೆ ಗುಪ್ತವಾಗಿ ಗಾಂಧಾರಿಯ ವಿವಾಹವನ್ನು ಮಾಡಿಸಿದ. ನಂತರ ಆ ಮೇಕೆಯನ್ನು ಬಲಿ ಕೊಡುತ್ತಾರೆ. ಗಾಂಧಾರಿ ವಿಧವೆಯಾಗುತ್ತಾಳೆ.
ಹೀಗಿರುವಾಗಲೇ ಧೃತರಾಷ್ಟ್ರನ ತಾಯಿ ಅಂಬಿಕಾಳ ಕಣ್ಣಿಗೆ ಗಾಂಧಾರಿಯ ಸೌಂದರ್ಯವನ್ನು ನೋಡಿ ಆಕೆಯನ್ನು ತನ್ನ ಮಗ ದೃತರಾಷ್ಟ್ರನೊಂದಿಗೆ ವಿವಾಹ ಮಾಡಿಸಲು ಮನಸ್ಸು ಮಾಡಿ, ಮದುವೆ ಮಾಡಿಸಬೇಕೆಂದು ನಿರ್ಧರಿಸುತ್ತಾಳೆ. ಆದರೆ ಕುರುಡನಾದ ತನ್ನ ಮಗನಿಗೆ ಶುಭಲ ರಾಜ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಿಲ್ಲವೆಂದು ಅಬ್ಬರಿಸಿದ . ಅಂಬಿಕಾ ಭೀಷ್ಮನ ಬಳಿಗೆ ಬಂದು ಗಾಂಧಾರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೋಗಿ ಆ ಸಾಮ್ರಾಜ್ಯವನ್ನು ನಾಶಪಡಿಸಿ ಗಾಂಧಾರಿಯನ್ನು ಕರೆದುಕೊಂಡು ಬರುವಂತೆ ಹೇಳಿದಳು.
ಆಗ ನ್ಯಾಯವಾದಿಯಾದ ಭೀಷ್ಮ ಇದು ಅನ್ಯಾಯ, ಅಧರ್ಮ, ಎಂದೆಲ್ಲ ಹೇಳಿದರೂ, ಅವನ ಮಾತಿಗೆ ಬೆಲೆ ಕೊಡದೆ ಒಂದು ಕಾಲದಲ್ಲಿ ಭೀಷ್ಮ ಅಂಬಿಕೆಗೆ ಕೊಟ್ಟ ಮಾತನ್ನು ನೆನಪಿಸಿಕೊಳ್ಳುತ್ತಾನೆ, ಮಾನಸಿಕವಾಗಿ ಭೀಷ್ಮನನ್ನು ನಿಂಧಿಸುತ್ತಾಳೆ, ವಿಧಿ ಇಲ್ಲದೇ ಭೀಷ್ಮ ಅಂಬಿಕೆಯ ಆಜ್ಞೆಯಂತೆಯೇ ಗಾಂಧಾರ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಗಾಂಧಾರಿಯನ್ನು ಕರೆದುಕೊಂಡು ಬಂದು ಧೃತರಾಷ್ಟನೊಂದಿಗೆ ಮದುವೆ ಮಾಡಿಸುತ್ತಾನೆ.
ಆಗ ತನ್ನ ತಂಗಿಗೆ ಒಬ್ಬ ಕುರುಡನನ್ನು ಮದುವೆ ಮಾಡಿಸಿದ ಕಾರಣ ಶಕುನಿಯನ್ನು ಅದು ಕೆರಳಿಸುತ್ತದೆ. ಹಾಗೆಯೇ ಗಾಂಧಾರ ಸಾಮ್ರಾಜ್ಯದ ಮೇಲೆ ಆದ ಅಕ್ರಮ, ದಾಳಿಗೆ ಮತ್ತು ತನ್ನ ತಂಗಿಗೆ ಆದ ಅನ್ಯಾಯಕ್ಕೆ , ಮೋಸಕ್ಕೆ ಭೀಷ್ಮನ ಮೇಲೆ ದ್ವೇಷ ತೀರಿಸಿಕೊಳ್ಳಬೇಕೆಂದು ಶಕುನಿ ನಿರ್ಧರಿಸುತ್ತಾನೆ. ಆದರೆ ಇತ್ತ ದೃತರಾಷ್ಟ್ರನಿಗೆ ಗಾಂಧಾರಿಗೆ ಇದು ಎರಡನೇ ವಿವಾಹವೆಂದು,ಹೀಗೆ ನಡೆದ ವಿವಾಹ ಎರಡನೇ ವಿವಾಹವೆಂದು ತಿಳಿಯುತ್ತದೆ.
ಆಗ ಕುಪಿತರಾದ ಧೃತರಾಷ್ಟ್ರ ಗಾಂಧಾರಿಯ ತಂದೆ ಶುಭಲ ಮತ್ತು ತನ್ನ ಸಹೋದರರನ್ನು ಬಂಧಿಸಿ ಅನ್ನ, ನೀರು ಇಲ್ಲದೆ ಅತಿ ಕ್ರೂರವಾಗಿ ಸಾಯಿಸಬೇಕೆಂದು, ಯೋಚಿಸಿ ದಿನನಿತ್ಯ ಕೇವಲ ಒಬ್ಬರು ತಿನ್ನುವಷ್ಟು ಆಹಾರವನ್ನು ಮಾತ್ರ ಅಷ್ಟೂ ಜನಕ್ಕೆ ಕೊಡುತ್ತಿದ್ದ. ಬಂದಿಯಾಗಿದ್ದ ಶಿವನ ಒಂದು ಬಟ್ಟಲು ಆಹಾರವನ್ನು ನಾವೆಲ್ಲರೂ ತಿಂದು ಬದುಕುವುದು ಅಸಾಧ್ಯ. ನಮ್ಮೆಲ್ಲರ ಸಾವು ಖಚಿತ , ನಮಗಾಗಿರುವ ಅನ್ಯಾಯಕ್ಕೆ ಮೋಸಕ್ಕೆ ನಾವು ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕೆಂದು. ಯೋಚಿಸಿ ಅದಕ್ಕಾಗಿ ನಮ್ಮಲ್ಲೊಬ್ಬನನ್ನು ಬದುಕಿಸಬೇಕು ಎಂದು ನಿರ್ಧರಿಸಿ ಎಲ್ಲರಿಗಿಂತಲೂ ಕಿರಿಯವನಾಗಿದ್ದ.
ಆಸಾಮಾನ್ಯ ಪ್ರತಿಭೆಯಾಗಿದ್ದ ,ರಾಜನೀತಿಯಲ್ಲಿ ಪರಿಣಿತನಾಗಿದ್ದ , ಪಾರಂಗತರಾಗಿದ್ದ ಶಕುನಿಗೆ , ತಮ್ಮ ಅನ್ನವನ್ನೆಲ್ಲ ದಿನನಿತ್ಯ ಕೊಟ್ಟು ಅವನನ್ನು ಬದುಕಿಸಿ,ನಮ್ಮೆಲ್ಲ ಸೇಡಿಗೆ ನೀನು ಪ್ರತೀಕಾರ ತೀರಿಸಿಕೊಳ್ಳಬೇಕು. ದೃತರಾಷ್ಟ್ರ ಮತ್ತು ಅವನ ಮಕ್ಕಳು ನಮ್ಮಂತೆಯೇ ನರಳಿ ನರಳಿ ಸಾಯುವ ಹಾಗೆ ಮಾಡು ಎಂದು ಹೇಳಿ ಜೊತೆಗೆ ನಾನು ಸತ್ತ ಮೇಲೆ ನನ್ನ ದೇಹದ ಮಾಂಸವನ್ನು ತಿಂದು ನನ್ನ ದೇಹದ ಬೆನ್ನಿನ ಎಲುಬುಗಳಿಂದ ಪಗಡೆಯನ್ನು ತಯಾರಿಸಿ ಇಟ್ಟುಕೋ, ಅದರೊಳಗೆ ನನ್ನ ಆತ್ಮ ಇರುತ್ತದೆ ಆ ಪಗಡೆಯಲ್ಲಿಯೇ ಇರುತ್ತದೆ. ನೀನು ಹೇಳುವ ಹಾಗೆ ಆ ಪಗಡೆಗಳು ಕೇಳುಟ್ತಾವೇ. ನನ್ನ ಆತ್ಮ ಅವುಗಳನ್ನು ನೋಡಿಕೊಳ್ಳುತ್ತದೆ. ನಿಮಗೆ ಜಯವಾಗಲಿ. ಎಂದು ಹೇಳುತ್ತಾ ರಾಜ ಶುಭಲ ತನ್ನ ಪ್ರಾಣವನ್ನು ಬಿಡುತ್ತಾನೆ. ಅಂದಿನಿಂದ ಶಕುನಿ ಕೌರವರಿಗೆ ಆತ್ಮೀಯವಾಗಿ ಎಲ್ಲರನ್ನೂ ವಂಚಿಸಳು ನಿರ್ಧರಿಸುತ್ತಾನೆ.ಹೀಗೆ ಶಕುನಿ ಕೆಟ್ಟವನಾಗಲು ಅವನ ಜೀವಿನದ ಹಿಂದಿರುವ ಭರಿಸಲಾಗದ ನೋವೇ ಕಾರಣ.
ದೇವಾಲಯ ಇತಿಹಾಸ
ಕುರುಕ್ಷೇತ್ರ ಯುದ್ಧ ನಡೆಯುತ್ತಿದ್ದಾಗ ಶಕುನಿ ಹಾಗೂ ಆತನ ಸೋದರ ಸಂಬಂಧಿಗಳು ಪ್ರಯಾಣ ಬೆಳೆಸಿ ಈ ಸ್ಥಳವನ್ನು ತಲುಪಿದರು ಎಂದು ಹೇಳಲಾಗುತ್ತದೆ ಆ ನಂತರ ಕೌರವರು ತಮ್ಮ ಆಯುಧಗಳು ಹಾಗೂ ರಕ್ಷಾಕವಚಗಳನ್ನು ಇಲ್ಲಿ ಆಯ್ಕೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ ಆದ್ದರಿಂದಲೇ ಈ ಸ್ಥಳಕ್ಕೆ ಪಕುತೇಶ್ವರ ಎಂಬ ಹೆಸರು ಬಂದಿತ್ತು ಎಂದು ಅನೇಕ ಜಾನಪದ ಕಥೆಗಳು ಹೇಳುತ್ತವೆ.
ಮಹಾಭಾರತದ ರಕ್ತಸಿಕ್ತ ಯುದ್ಧ ಮುಗಿದ ಮೇಲೆ ಶಕುನಿ ಮೋಕ್ಷವನ್ನು ಪಡೆಯಲು ಈ ಸ್ಥಳವನ್ನು ತಲುಪಿದರಂತೆ ಆಧ್ಯಾತ್ಮಿಕ ದೇವತೆಗಳು ಹಾಗೂ ಜ್ಞಾನ ಸಿದ್ಧಿಯಿಂದ ಮೋಕ್ಷವನ್ನು ಪಡೆದುಕೊಳ್ಳಲು ಶಕುನಿ ಬಹಳವಾಗಿ ಪ್ರಯತ್ನ ಪಟ್ಟು ಒಂದು ಒಳ್ಳೆಯ ಆತ್ಮವಾಗಿ ಪರಿವರ್ತನೆಯಾದರು ಎಂದು ಹೇಳುತ್ತವೆ ಸ್ಥಳ ಪುರಾಣಗಳು .
ಆದ್ಯಾತ್ಮಿಕ ನಂಬಿಕೆ
ಆದ್ದರಿಂದ ಇಲ್ಲಿನ ಜನರು ತಾವು ತಿಳಿಯದೆಯೂ ಹಾಗೂ ತಿಳಿದು ಯಾವುದಾದರೂ ತಪ್ಪು ಮಾಡಿದರೆ ಈ ಸ್ಥಳದಲ್ಲಿ ಬಂದು ಪೂಜೆ ಮಾಡಿದರೆ ಅವರ ಪಾಪ ಕರ್ಮಗಳಿಗೆ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ತಾವು ಮಾಡಿದ ಹಿಂದಿನ ಜನ್ಮದ ಕರ್ಮಗಳಿಂದ ಯಾವುದಾದರೂ ರೋಗ ರುಜಿನಗಳಿಂದ ನರಳುತ್ತಿದ್ದರೆ ಇಲ್ಲಿ ಮುಕ್ತಿ ಸಿಗುವುದು ಎಂದು ನಂಬಲಾಗಿದೆ

Friday, 4 September 2020

ಕಾಗೆ ಜನ್ಮ ಮತ್ತು ಅದ್ಭುತ ಸಂದೇಶ

ಕಾಗೆ ಜನ್ಮ ಮತ್ತು ಅದ್ಭುತ ಸಂದೇಶ !
▬▬▬▬▬▬ஜ۩۞۩ஜ▬▬▬▬▬▬
ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬನು ಪ್ರಶ್ನಿಸಿದನಂತೆ:- "ಸ್ವಾಮೀಜಿ, ನಾವೇಕೆ,ಮಹಾಲಯದ ಸಂದರ್ಭ ಕಾಗೆಗಳಿಗೆ ಉಣಬಡಿಸಿ ಉಪಚರಿಸುತ್ತೇವೆ? ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರಾ?  ಅವರೇಕೆ ಕಾಗೆಗಳಂಥ ಹೀನ ಜನ್ಮ ತಾಳಬೇಕು? ಇನ್ಯಾವುದೇ ಶ್ರೇಷ್ಠ ಹಕ್ಕಿಯಾಗಕೂಡದೆ?
ಸ್ವಾಮೀಜಿ ನಸುನಕ್ಕು ಹೇಳಿದರು...
ಕಾಗೆಯನ್ನು ನಾವು ಕಾಕಾ ಅಂತ ಕರೆಯುತ್ತೇವೆ.
ಬೇರಾವುದೇ ಹಕ್ಕಿಯನ್ನು ಅದು ಕೂಗುವ ದನಿಯಿಂದ ಕರೆಯುವ ರೂಢಿ ಇಲ್ಲ.
ನಮ್ಮೆಲ್ಲರ ಮುದ್ದಿನ ಗಿಳಿಯನ್ನಂತೂ ಕೀಕೀ ಅಂತ ಅನ್ನೆವು ತಾನೇ?.
ಕಾ ಅಂದರೆ ಕಾಪಾಡು ಎಂದರ್ಥ.
ನಮ್ಮ ಹಿರಿಯರನ್ನು ಕರೆದು, "ರಕ್ಷಿಸಿ,ರಕ್ಷಿಸಿ" ಎಂದು ನಾವು ಬೇಡಿಕೊಳ್ಳುವೆವು.
ಕಾಗೆ ಸುಲಭವಾಗಿ ಕಾಣ ಸಿಗುತ್ತದೆ. ಅಷ್ಟೇ ಅಲ್ಲ,ಅದಕ್ಕೆ ಏನನ್ನು ಕೊಟ್ಟರೂ ತಿನ್ನುತ್ತದೆ.
ನಮ್ಮ ಸುತ್ತಮುತ್ತಲ ಪರಿಸರವನ್ನು ಕಾಗೆಯಷ್ಟು ಶುದ್ಧಗೊಳಿಸುವ ಪಕ್ಷಿ ಇನ್ನೊಂದಿಲ್ಲ. ಅದಕ್ಕೇ,ಅದನ್ನು,ಕೀಳು ದರ್ಜೆಯ ಹಕ್ಕಿ ಅನ್ನುತ್ತೇವೇನೋ?
ಅದೊಂದು ಸುಂದರ ಹಕ್ಕಿ ಕೂಡ. ಯಾಕೆ ಗೊತ್ತೆ? ಸರಿಯಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವ ಹಕ್ಕಿ ಅದೊಂದೇ. ಸದಾ ಮಂಕಾಗಿರುವ ಕೋಳಿಯೂ ತಡವಾಗಿ ಕೂಗುವುದು. ಬ್ರಾಹ್ಮೀ ಮುಹೂರ್ತದಲ್ಲಿ ನೀವು ಧ್ಯಾನ ಮಾಡಲು ಅದು ಪ್ರೇರಣೆ.
ಆಹಾರ ಸಿಕ್ಕಿದರೆ ಅದು ತನ್ನ ಬಳಗವನ್ನೇ ಕರೆಯುತ್ತದೆ.
ಸಂಜೆಯಾದಾಗ ತನಗೆ ಆಹಾರ ಕರುಣಿಸಿದ ದೇವರಿಗೆ ಕಾಕಾ ಎಂದು ಧನ್ಯವಾದ ಹೇಳುತ್ತದೆ.
ಶಾಸ್ತ್ರವನ್ನು ಅನುಸರಿಸುವ ಕಾಗೆ ಸಂಜೆ ಆದ ನಂತರ ಆಹಾರ ಮುಟ್ಟದು.
ಈ ಉತ್ತಮ ಸಂಪ್ರದಾಯವನ್ನು ಪಾಲಿಸುವ ಜನರು ವಿರಳವಾಗುತ್ತಿದ್ದಾರೆ. ಆದ್ದರಿಂದಲೇ ಇವುಗಳನ್ನು ಪಿತೃ ರೂಪಿಗಳೆಂದು ಕಾಣುತ್ತಾರೆ.
ದಿನಾ ಕಾಗೆಗೆ ಆಹಾರ ಕೊಟ್ಟು ನೋಡಿ.ತುಂಬ ಖುಶಿ ಪಡುತ್ತದೆ. ನೀವೂ ಸಂತೃಪ್ತಿ ಹೊಂದುತ್ತೀರಿ.
ಪಿತೃ ಪಕ್ಷಕ್ಕಾಗಿ ಪುರಾವರ್ತನೆ !
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)