Wednesday, 31 December 2025

ಶ್ರಾದ್ಧ ಕರ್ಮದ ಉದ್ದೇಶವೇನು?

ಶ್ರಾದ್ಧ ಕರ್ಮದ ಉದ್ದೇಶವೇನು?

ಕರ್ಮಭೂಮಿ  ಎನಿಸಿದ  ಈ  ಭರತ  ಖಂಡದ  ಸನಾತನ  ಧರ್ಮಗಳಲ್ಲಿ  " ಶ್ರಾದ್ಧ "  ಕರ್ಮವು  ಮುಖ್ಯವಾಗಿದೆ.  ಇದು  ಅತ್ಯಂತ  ಶ್ರೇಯಸ್ಕರವಾದ  ಕರ್ಮವಾಗಿದೆ.  ಇದಕ್ಕೆ        "  ಪಿತೃಯಜ್ಞ  "  ವೆಂದು  ಕರೆಯುವುದುಂಟು.

ಶ್ರಾದ್ಧ  ಎಂದರೇನು ?

ನಮ್ಮ  ಜನ್ಮಕ್ಕೆ ಕಾರಣರಾಗಿ,  ನಮ್ಮನ್ನು  ಹೆತ್ತು  ಹೊತ್ತು  ಸಾಕಿ,  ಸಲಹಿ  ನಮ್ಮ  ಉದ್ದಾರಕ್ಕೇ  ಶ್ರಮಿಸಿ,  ನಮ್ಮನ್ನಗಲಿ  ಹೋದ  ತಂದೆ -ತಾಯಿ  ಹಿರಿಯರು  ಮುಂತಾದವರನ್ನು  ಸ್ಮರಿಸಿ,  ಅವರನ್ನು  ಕುರಿತು  ಶ್ರದ್ಧೆಯಿಂದ  ಅನ್ನಜಲಾದಿಗಳನ್ನು  ಕೊಡುವ  ಪಿತೃಕಾರ್ಯಕ್ಕೆ  "  ಶ್ರಾದ್ಧ  "  ವೆಂದು  ಹೆಸರು.
ಪಿತೃಗಳನ್ನುದ್ದೇಶಿಸಿ  ಶ್ರದ್ದೆಯಿಂದ  ಕೊಡಲ್ಪಟ್ಟ  ದ್ರವ್ಯವನ್ನು    ಮಾನಸಿಕವಾಗಿ ಭಾವನೆಯಿಂದ ಮಾಡುವ ಆಚರಣೆ  ಶ್ರಾದ್ಧವೆಂದು  ಹೆಸರು.

ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗ ಅಥವಾ ನರಕವೋ ಪ್ರಾಪ್ತಿ. 
ಸ್ವರ್ಗ ಅಥವಾ ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ.
 ಅಥವಾ ಸತ್ತ ಮರು ಘಳಿಗೆ ಜೀವಿಯು ಬೇರೊಂದು ದೇಹವನ್ನು ಪಡೆಯುತ್ತದೆ.
ಮೋಕ್ಷ ವಾದರೆ ಪುನರ್ಜನ್ಮವಿಲ್ಲವೆಂದು ನಂಬಿಕೆ. 
ಜೀವಿಯು ತನ್ನ ಯೋಗ್ಯತಾನುಸಾರವಾಗಿ ಕರ್ಮವನ್ನು ಅನುಸರಿಸಿ ತನ್ನ ಗತಿಯನ್ನು ಅಥವಾ ಮಾರ್ಗವನ್ನು ಪಡೆಯುತ್ತದೆ .....

ಈ ಎಲ್ಲಾ ಕಾರಣದಿಂದ.....

ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು?

ಅವರಿಗೆ ಶ್ರಾದ್ಧಕರ್ಮಗಳು,ಭೋಜನ,ತರ್ಪಣಗಳು ಏಕೆ ಬೇಕು?  ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು?
 
ಸಾಮಾನ್ಯವಾಗಿ ಆಸ್ತಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. 
ಆದರೆ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕು? ಇದರಿಂದೇನು ಉಪಯೋಗ? 
ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ.... 
ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ತಂದೆತಾಯಿಯರ ಮೃತತಿಥ ಅಥವಾ ಪುಣ್ಯತಿಥಿ ಆಚರಿಸೋಣ. 

ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು?
ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ.
ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು  ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಪ್ತವಾಗುವಂತಹದ್ದು. ಕೇವಲ ಕಲಿಕೆಯಿಂದ ಮಾತ್ರ ಬರುವಂತಹದ್ದಲ್ಲ. ಅಂತಹಾ ಹುದ್ದೆಯನ್ನು ಅಲಂಕರಿಸಿದ್ದಾರೆ ನಮ್ಮ ಭೌತಿಕ ವ್ಯಾವಹಾರಿಕ ಪ್ರಪಂಚದ ಪಿತೃಗಳು. ಅಂದರೆ ಭಾವನಾತ್ಮಕ ತಂದೆಯೆಂದು ಅರ್ಥ. ವ್ಯಕ್ತಿಗತವಾಗಿ ಆ ಸ್ಥಾನವನ್ನು ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನಾವು. ಹಾಗಿದ್ದಾಗ ಅವರ ನಿರ್ವಹಣೆಯಲ್ಲಿ ಅನರ್ಹರು ಎಂದರೆ ನಾವು ಅನರ್ಹರು ಎಂದೇ ಅರ್ಥ.

ಅಂತಹಾ ಪಿತೃಸ್ಥಾನ ಪಟ್ಟವು ಪ್ರತಿಯೊಬ್ಬ ಜೀವಿಯೂ ಬಯಸಿ ಪಡೆಯುವ ಪಟ್ಟ. ಅದರ ಮಹತ್ವವೆಷ್ಟಿರಬಹುದು ಚಿಂತಿಸಿ? ಅದನ್ನು ಪಡೆದು ನಿರ್ವಹಿಸಿ, ಯಶಸ್ವಿಯಾಗಿ ನಮ್ಮನ್ನು ಈ ಲೋಕಕ್ಕೆ, ಸಮಾಜಕ್ಕೆ ಕೊಟ್ಟು ತಾವು ತೇರ್ಗಡೆಯಾಗಿ ವಿರಮಿಸಿದ ತಂದೆತಾಯಿಯ ಸ್ಥಾನ ಪೂಜಾರ್ಹವಲ್ಲವೇ ಚಿಂತಿಸಿ? ಅಂತಹಾ ಸ್ಥಾನವನ್ನು ಗೌರವಿಸುವುದು ಧರ್ಮವಲ್ಲವೇ? ಇದು ಶ್ರಾದ್ಧದ ಹಿನ್ನಲೆಯಲ್ಲಿರುವ ಮಾನವೀಯ ಧರ್ಮ.

ಶ್ರಾದ್ಧ ಕ್ರಿಯೆಯು ದೈವಿಕವಾಗಿದ್ದರೂ ವೈಜ್ಞಾನಿಕತೆಗೆ ಎಟುಕಲಾರದ ವಿಷಯವಲ್ಲ. ಪಂಚಭೂತಗಳಿಂದ
ಭೌತಿಕ ಶರೀರ ಉಂಟಾಗಿದೆ. ಮರಣಾನಂತರ ಇದು ನಾಶವಾದರೂ, ತೇಜಸ್ಸು, ಪಂಚವಾಯು ಮತ್ತು
ಆಕಾಶ ತತ್ವಗಳು ಮನೋಮಯ ಕೋಶದೊಡನೆ ಕರ್ಮಾನುಸಾರ ಶರೀರಾಂತರವನ್ನು ಸೇರುವುದು.
ತಂದೆಯ ಸೂಕ್ಷ್ಮ ಶರೀರಕ್ಕೂ ಪುತ್ರನ ಸೂಕ್ಷ್ಮ ಶರೀರಕ್ಕೂ ಪರಸ್ಪರ ಆಕರ್ಷಣೆಯ ಋಣಾನುಬಂಧವಿದೆ.
ಪಿತೃವಿನ ಮರಣಾನಂತರವೂ ಈ ಸಂಬಂಧವು ತೊಲಗಲಾರದು. ಆದಕಾರಣ ಪುತ್ರಕೃತ ಸಂಸ್ಕಾರಗಳು ಪಿತೃಗಳ ಸದ್ಗತಿಗೆ ಸಾಧಕಗಳಾಗುವುದು. ಇದು ಶಾಸ್ತ್ರಸಿದ್ಧ
 ಮೃತ ವ್ಯಕ್ತಿಯ ಸೂಕ್ಷ್ಮ ಶರೀರವು ಯಾವ ಅಜ್ಞಾತ ಯೋನಿಯಲ್ಲಿದ್ದರೂ (ಆಕಾಶದ ಶಬ್ದ, ವಾಯುವಿನ ಸ್ಪರ್ಶ, ತೇಜಸ್ಸಿನ ತರಂಗಗಳು ಇಲ್ಲಿಂದಲ್ಲಿಗೆ ಸದಾ ಪ್ರವಹಿಸುತ್ತಿರುವ ಕಾರಣ) ಮಾಡುವ ಶ್ರಾದ್ಧದಲ್ಲಿ ಕ್ರಿಯಾಶಕ್ತಿ, ಮಂತ್ರಶಕ್ತಿ, ದ್ರವ್ಯಶಕ್ತಿಗಳು ಸಮ್ಮಿಳಿತವಾಗಿ ಲೋಕಾಂತರದಲ್ಲಿರುವ ಪಿತೃಗಳಿಗೆ (ಪಿಂಡ ತಿಲತರ್ಪಣಗಳು) ರೂಪಾಂತರ ಹೊಂದಿ ಆಹಾರವಾಗಿ ಪರಿಣಮಿಸುತ್ತದೆ. ಮಾನವನ ಸೀಮಿತ ದೃಷ್ಟಿಗೆ ಇದು ಗೋಚರಿಸದಿದ್ದರೂ "ಶ್ರಾದ್ಧೇ ಯೋಗಃ ಪ್ರವರ್ತತೇ' ಎಂದು ಋಷಿಗಳು ಈ ಸೂಕ್ಮ ರಹಸ್ಯವನ್ನು ಮನಗಂಡಿದ್ದಾರೆ.

ಇನ್ನು ಮೃತಾನಂತರ ಅವರಿಗೇಕೆ ತರ್ಪಣ? ಪಿಂಡಪ್ರಧಾನ ಎಂಬ ಪ್ರಶ್ನೆಗಳಿವೆ. ಜನರೇ, ಈ ದೃಷ್ಟಿಯಿಂದ ಚಿಂತಿಸಬೇಕು –

 ತಂದೆಯು ಮೃತನಾಗುವುದಿಲ್ಲ, ದೇಹ ಮಾತ್ರ ನಾಶವಾಗಿದೆ. ತಂದೆಯು ಪುನರ್ಜನ್ಮ ಪಡೆದಿಲ್ಲ, ಆತ್ಮವು ಮಾತ್ರ ಪಡೆದಿದೆ. ತಂದೆ ಎಂಬ ಸ್ಥಾನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ತಂದೆಯಾಗಿಯೇ ಉಳಿದಿರುತ್ತಾರೆ. ಆತ್ಮವು ಮಾತ್ರ ಪುನರ್ಜನ್ಮ ಪಡೆದು ಹುಟ್ಟಿಬರಬಹುದು. ಆದರೆ ಅದು ಪ್ರಾಣಿಯಾಗಿ ಹುಟ್ಟಿತು ಎಂದು ಯಾರೂ ಪ್ರಸಕ್ತಕಾಲದ ವಿಳಾಸ ಹೇಳುವಾಗ ತನ್ನ ತಂದೆಯು ಪ್ರಾಣಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದು ಗೊತ್ತಿದ್ದರೂ ತಾನು ಪ್ರಾಣಿಯ ಮಗನೆಂದು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಪುನರ್ಜನ್ಮ ಸಿಕ್ಕಿದೆಯೋ, ಬಿಟ್ಟಿದೆಯೇ ಅದು ಬೇರೆಯ ವಿಚಾರ. ಈ ಶ್ರಾದ್ಧವನ್ನು ಮಾಡಬೇಕಾದ ಮಗನು ಬದುಕಿರುವವರೆಗೆ, ತಂದೆ ಎಂಬ ಭಾವನಾತ್ಮಕ ಅಸ್ತಿತ್ವವು ಪುನರ್ಜನ್ಮ ಪಡೆಯುವುದಿಲ್ಲ. ಆ ಪಟ್ಟ ಈ ಮಗನಿಗೆ ಸಿಗದೇ ಇರಬಹುದು. ಅಲ್ಲಿಂದ ಮುಂದೆ ಹುಟ್ಟಿದ ಆ ಮಗನಿಂದ ಶ್ರಾದ್ಧವಿಲ್ಲ, ಬೇಕಿಲ್ಲ. ಆದರೆ ತಂದೆಯ ಸ್ಥಾನ ನಿರ್ವಹಿಸಿದ ಈ ಬ್ರಹ್ಮಚಾರೀ ಮಗನನ್ನಾದರೂ ಈ ಭೂಮಿಗೆ ಕೊಟ್ಟ ತಂದೆಯು ತನ್ನ ಸ್ಥಾನ ನಿರ್ವಹಣೆ ಮಾಡಿದ್ದಾರೆ. ಅಲ್ಲಿಯವರೆಗೆ ಶ್ರಾದ್ಧ ಸಾಧುವೇ, ಸತ್ಯವೇ, ನ್ಯಾಯವೇ ಆಗಿರುತ್ತದೆ. ಅದು ಈ ಮಗನ ಅಸ್ತಿತ್ವವನ್ನು ಉಳಿಸಿಕೊಡುತ್ತದೆ ನೆನಪಿರಲಿ. 

ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ. ಪ್ರತೀ ಜೀವಿಯೂ ಒಂದೊ ತಂದೆಯಾಗಿ ಅಥವಾ ತಾಯಿಯಾಗಿ ಸಾಫಲ್ಯತೆ ಕಾಣುವ ನಮ್ಮ ಆಧ್ಯಾತ್ಮಿಕ, ದೈವೀಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ಯಾ- ತಾಯಿ. ಈ ಪದವಿಗಾಗಿ ಪ್ರತೀಜೀವಿಯೂ ಹಾರೈಸುತ್ತದೆ. ಅಂತಹಾ ಪದವಿ ಆಕಾಂಕ್ಷೆಯಾದ ಪ್ರತೀಜೀವಿಯೂ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ತಂತುವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದೆ ಸಂತಾನ ಲಭ್ಯವಿಲ್ಲದೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ, ಪ್ರತಿಯೊಬ್ಬರ ಮುಖ್ಯ ಕರ್ತವ್ಯ. ಅದು ಆ ಸ್ಥಾನವನ್ನು ಗೌರವಿಸಿದಂತೆ. 

ಇಲ್ಲಿ  ಕೆಲವರು  ಪ್ರಶ್ನೆ  ಕೇಳುವುದುಂಟು -  ನಮ್ಮನ್ನಗಲಿ  ಹೋದ  ಪಿತೃಗಳಿಗೆ  ನಾವು  ಕೊಡುವ  ಜಲಾಂಜಲಿ,  ಪಿಂಡಪ್ರದಾನದಿಂದ  ಅವರು  ಹೇಗೆ  ತೃಪ್ತರಾಗುತ್ತಾರೆ ?  ನಾವು  ಇಲ್ಲಿ  ಬ್ರಾಹ್ಮಣನಿಗೆ  ದಾನವಾಗಿ  ಕೊಟ್ಟದ್ದು  ಪಿತೃಗಳಿಗೆ  ಹೇಗೆ  ತಲುಪುತ್ತದೆ ?

                           ಉತ್ತರ.

ನಾವು  ಕೊಟ್ಟ  ಅನ್ನವನ್ನು  ಅಂದರೆ  ಅದರ  ಸಾರ  ಭಾಗವನ್ನು ನಮ್ಮ ಭಾವನೆಯನ್ನು ಶ್ರದ್ಧೆಯನ್ನು  ಭಗವಂತನು  ಸ್ವೀಕರಿಸಿ  ಅದನ್ನು  ನಮ್ಮ  ಪಿತೃಗಳು  ಯಾವ  ಯೋನಿಯಲ್ಲಿ  ಹುಟ್ಟಿ,  ಎಲ್ಲಿ  ಇರುವರೋ,  ಅಲ್ಲಿ  ಅವರಿಗೆ  ಆಹಾರರೂಪವಾಗಿ  ಸೂಕ್ತರೀತಿಯಲ್ಲಿ  ಕೊಟ್ಟು  ಸಂತೋಷ  ಪಡಿಸುತ್ತಾನೆ  ಭಗವಂತ.

ಯಥಾ  ಧೇನುಸಹಸ್ರೇಷು  
ವತ್ಸೋ  ವಿಂದತಿ  ಮಾತರಃ।
ತಥಾ  ಪೂರ್ವಕೃತಂ
ಕರ್ಮ  ಕರ್ತಾರಮನುವಿಂದತಿ॥". 
  
ಸಾವಿರಾರು  ಹಸುಗಳ  ಹಿಂಡಿನಲ್ಲಿದ್ದರೂ  ಕರು,
  ತನ್ನ  ತಾಯಿ  ಧೇನುವನ್ನು  ಹುಡುಕಿಕೊಂಡು  ಅದರ  ಬಳಿಗೆ  ಹೋಗುವಂತೆ,

ಪುತ್ರ " ಅಂದರೆ...

ಜೀವತೋ ವಾಕ್ಯ ಕರಣಾತ್ 
ಪ್ರತ್ಯಬ್ಧಂ ಭೂರಿ ಭೋಜನಾತ್ 
ಗಯಾಯಾಂ ಪಿಂಡ ದಾನಾಶ್ಚ
 ತ್ರಿಭಿಃ ಪುತ್ರಸ್ಯ ಪುತ್ರತಾ

" ಪುತ್ " ಎಂಬ ನರಕದಿಂದ ಪಾರು ಮಾಡುವವನೇ ಪುತ್ರನು. 

ತಂದೆ ತಾಯಿಗಳು ಜೀವಿಸುರುವಾಗ ಅವರಿಗೆ ಅಧೀನನಾಗಿದ್ದು ಅವರ ಮಾತನ್ನು ನಡೆಸಿ ಕೊಡುವುದು. 

ಮೃತರಾದ ಮೇಲೆ ಪ್ರತಿ ವರ್ಷವೂ ಕಾಲ ಪ್ರಾಪ್ತ ಶ್ರಾದ್ಧ ಮಾಡುವುದು.

ಒಂದು ಬಾರಿಯಾದರೂ ಗಯಾಕ್ಕೆ ಹೋಗಿ ಮೃತ ತಂದೆ ತಾಯಿಯನ್ನು ಉದ್ಧೇಶಿಸಿ ವಿಷ್ಣು ಪಾದದಲ್ಲಿ ಪಿಂಡ ಪ್ರದಾನ ಮಾಡುವುದು. 

ಈ ಮೂರರಿಂದ " ಪುತ್ರ " ನೆನಿಸುವನು! 
" ಪುರು ತ್ರಾಯತೇ ಇತಿ ಪುತ್ರಃ " ಎಂಬಂತೆ ಇತರ ಬಂಧುಗಳಕ್ಕಿಂತ ತಂದೆ ತಾಯಿಯನ್ನು ಚೆನ್ನಾಗಿ ರಕ್ಷಿಸುವನು. 

ಉಪನಿಷದ್ವಾಕ್ಯದಂತೆ ಪುತ್ರ ಎಂದರೆ?
ಪಾಪ ಫಲ ರೂಪವಾಗಿ ಬರುವ ದುಃಖ ರೂಪವಾದ " ಪುತ್ " ಎಂಬ ನರಕದಿಂದ ಬಿಡಿಸುವ ಅಥವಾ ರಕ್ಷಿಸುವ ಮಗನನ್ನು ಮಾತ್ರವೇ " ಪುತ್ರ " ಎನ್ನುತ್ತಾರೆ. ಈ ರೀತಿಯಾದ ಪುತ್ರನನ್ನು ಮಾತ್ರವೇ ಪಡೆಯಬೇಕೆಂದು ಇಹ ಮತ್ತು ಪರ ಲೋಕದಲ್ಲಿಯೂ ಅಪೇಕ್ಷಿಸುತ್ತಾರೆ!

ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹುಮುಖ್ಯ ಋಣಗಳಲ್ಲೊಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ. ಹೀಗಾಗಿ ಪಿತೃ ಕಾರ್ಯಕ್ಕೆ ಅರ್ಹರಾದವರು ಅದನ್ನು ಮಾಡಲೇಬೇಕು ಮತ್ತು ಕಿರಿಯರು ಇದರ ಪ್ರಸಾದ, ಮಂತ್ರಾಕ್ಷತೆ ಪಡೆಯಬೇಕು.  

 ಒಬ್ಬರ ಮೂರು ತಲೆಮಾರುವರೆಗಿನ ಹಿರಿಯರು/ಪೂರ್ವಜರು/ಪಿತೃಗಳ ( ಸ್ಥಾನ) ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ 
ಅಂದರೆ ಈ ಪಿತೃಲೋಕದಲ್ಲಿ ಮೂರು ತಲೆಮಾರಿನ ಭಾವನಾಶಕ್ತಿ ಗಳು  ಇರುತ್ತವೆ. ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ  ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯ. 

ಪರಮ ದುರ್ಲಭವಾದ ಮನುಷ್ಯಜನ್ಮದ ಸಾಫಲ್ಯತೆಯು ಅದನ್ನು ಪಡೆದ ನಮ್ಮ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪರಮಾತ್ಮ ನಮಗೆ ಈ ಜನ್ಮವನ್ನು ಏತಕ್ಕಾಗಿ ನೀಡಿದ್ದಾನೆ ಎಂದರೆ ಹಿಂದಿನ ಜನ್ಮದ ಪಾಪ ಶೇಷಗಳನ್ನು ಅನುಭವಿಸಿ ಮುಗಿಸಿ ಮತ್ತೆ ಇನ್ನೂ ಹೆಚ್ಚಿನದಾದ ಪುಣ್ಯಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು. ಶಾಸ್ತ್ರಗಳ ಪ್ರಕಾರ ಮೃತರ ಆತ್ಮಗಳಿಗೆ ಶಾಶ್ವತ ಪಿತೃಲೋಕ ಪ್ರಾಪ್ತಿಯಾಗುವಂತೆ ಮಾಡುವುದು ಅವರ ಮಕ್ಕಳ ಕರ್ತವ್ಯ.

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕೂಡ ತನ್ನ ತಂದೆ ದಶರಥನ ಮರಣ ವಾರ್ತೆಯನ್ನು ಕೇಳಿ ತಕ್ಷಣವೇ ಸಮೀಪದ ನದಿಯಲ್ಲಿ ಹೋಗಿ ದಕ್ಷಿಣಾ ಭಿಮುಖವಾಗಿ ತನ್ನ ಕೈಯ ಬೊಗಸೆಯಲ್ಲಿ ನೀರನ್ನು ಹಿಡಿದುಕೊಂಡು ಗತಿಸಿಹೋದ ತನ್ನ ತಂದೆಗೆ ಉತ್ತಮ ಲೋಕ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾನೆ. ಇದರ ಪರಿಪೂರ್ಣ ಅರ್ಥ ಭಾವನಾತ್ಮಕವಾಗಿ ಪಿತೃಗಳನ್ನು ತೃಪ್ತಿಪಡಿಸಲು ನಮ್ಮ ಭಾವನೆಯನ್ನು ಅದರಲ್ಲಿ ಸೇರಿಸುವಂತಹ ಒಂದು ಪ್ರಕ್ರಿಯೆ

ಕಚ್ಚಾಡುವ ಮನೆ, ಕಾದಾಡುವ ಮಕ್ಕಳು, ಅಶಾಂತಿ-ಅತೃಪ್ತಿಯ ಗೃಹವಾಸ, ಇವೆಲ್ಲವುಗಳಿಗೆ ಕಾರಣ "ಪಿತೃಶಾಪ" ಎನ್ನುತ್ತದೆ ಜ್ಯೋತಿಃಶಾಸ್ತ್ರ. 
ಮುಂದುವರೆಯುತ್ತದೆ......

ಈ ವಿಷಯದಲ್ಲಿ ಹೆಚ್ಚಿನ ಜಿಜ್ಞಾಸೆಯ ಪ್ರಶ್ನೆಗಳಿದ್ದರೆ ವಾಟ್ಸಪ್ ಅಥವಾ ಕಾಲ್ ಮಾಡಬಹುದು

ಗರುಡ ಪುರಾಣ ಪಾರಾಯಣ ಮತ್ತು ಪ್ರವಚನ ಬೇಕಾದಲ್ಲಿ

ಮನೆಯಲ್ಲಿ ಶ್ರಾದ್ಧಾದಿಗಳನ್ನು ಮಾಡಲು ಅನಾನುಕೂಲ ಇದ್ದಲ್ಲಿ
ನಮ್ಮಲ್ಲಿ ಯೋಗ್ಯತಾನುಸಾರ ಶಾಸ್ತ್ರೋಕ್ತವಾಗಿ ಶ್ರಾದ್ಧಾದಿಗಳನ್ನು ತರ್ಪಣವನ್ನು ಪಿತೃ ಕಾರ್ಯಗಳನ್ನು ಮಾಡಿಕೊಡಲಾಗುತ್ತದೆ.

ಪ್ರಶಾಂತ ಭಟ್ 
ಜ್ಯೋತಿಷ್ಯರು ಮತ್ತು ಪುರೋಹಿತರು
098866 00332

ekadashi niyamagalu

ವೈಕುಂಠ ಏಕಾದಶಿ

***ವೈಕುಂಠ ಏಕಾದಶಿ.......***
 *ಏಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನವೇ ವೈಕುಂಠ ಏಕಾದಶಿ.* 

 *ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುವರು. ಈ ದಿನ ದೇವಾಲಯದ ಉತ್ತರ ದ್ವಾರದಲ್ಲಿ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸುತ್ತಾರೆ.*

 *ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಧನುರ್ಮಾಸದ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ. ಸೂರ್ಯನು ಧನಸ್ಸು ರಾಶಿ ಪ್ರವೇಶ ಮಾಡಿ ಮಕರ ಸಂಕ್ರಮಣದವರೆಗೂ ಈ ರಾಶಿಯಲ್ಲಿ ಇರುತ್ತಾನೆ.*

*ಗರುಡವಾಹನನಾದ ವಿಷ್ಣು ವೈಕುಂಠದಿಂದ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕದಲ್ಲಿ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದುದರಿಂದ ಈ ದಿನವನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಈ ದಿನ ಉಪವಾಸವಿದ್ದು ವಿಷ್ಣುವಿನ ದರ್ಶನ ಮಾಡಬೇಕು. ಮಾಸದ ಏಕಾದಶಿಯ ದಿನ ಶ್ರೀಮನ್ನಾರಾಯಣನು ಯೋಗನಿದ್ರೆಯಿಂದ ಏಳುವನು. ಈ ದಿನ ವಿಷ್ಣು ದರ್ಶನ ಮಾತ್ರದಿಂದ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನಕ್ಕೆ ಅಷ್ಟು ಮಹತ್ವವಿದೆ.* 

*ಮಹಾವಿಷ್ಣುವು ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೇ ಇದು. ಬಹಳ ದಿನಗಳವರೆಗೆ ಮುರ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ. ಅದಕ್ಕಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು. ಏಕಾದಶಿ ದೇವಿಯನ್ನು ಉಪವಾಸದಿಂದ, ದರ್ಶಿಸಿ, ಪೂಜಿಸಿ ಪಾಪ ಪರಿಹಾರ ಮಾಡಿಕೊಳ್ಳಬೇಕು ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಮತ್ತು ಮನಸ್ಸು ಒಟ್ಟು 11, ಹನ್ನೊಂದು ಇಂದ್ರಿಯಗಳನ್ನೂ ನಿಗ್ರಹ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು.*
*ಅಮೃತ ಮತ್ತು ಹಾಲಾಹಲ ಉದ್ಭವಿಸಿದ ದಿನವಿದು. ಶಿವ ನೀಲಕಂಠನಾದ ದಿನ. ಈ ದಿನ ದೇವರ ದರ್ಶನ ಮಾಡಿ ಹರಿ ನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ತುಳಸಿ ಎಲೆ ಅರ್ಪಿಸಬೇಕು. ಇದರಿಂದ ಮೋಕ್ಷ ಪ್ರಾಪ್ತಿ ಖಂಡಿತವಾಗಿ ಲಭಿಸುವುದು. ಪುಷ್ಯ ಮಾಸವನ್ನು ಶೂನ್ಯಮಾಸವೆಂತಲೂ ಕರೆಯುವರು. ಈ ಸಮಯದಲ್ಲಿ ಯಾವುದೇ ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ. ಕಾರಣ ಇಲ್ಲಿ ಪ್ರತಿಫಲ ಶೂನ್ಯ. ಆದ್ದರಿಂದ ಈ ಪೂರ್ತಿ ಮಾಸವನ್ನು ವಿಷ್ಣುವನ್ನು ಆರಾಧಿಸುವುದರ ಮೂಲಕ ವಿಷ್ಣುವಿಗೆ ಅರ್ಪಣೆ ಮಾಡಬೇಕು.*🌺🙏🕉️

ನಮ್ಮದು ಇದೇ ಕೊನೆಯ*** ಜನ್ಮವಾ? ಮೋಕ್ಷ..ಅಥವಾ ಮುಕ್ತಿಯ ಬಗ್ಗೆ..ನಮ್ಮ ಜನ್ಮ ಜಾತಕದಲ್ಲಿ ಸ್ಪಷ್ಟವಾಗಿ ಗೊತ್ತಾಗತ್ತಾ..??ಹೇಗೆ??

***ನಮ್ಮದು ಇದೇ ಕೊನೆಯ*** ಜನ್ಮವಾ? ಮೋಕ್ಷ..ಅಥವಾ ಮುಕ್ತಿಯ ಬಗ್ಗೆ..ನಮ್ಮ ಜನ್ಮ ಜಾತಕದಲ್ಲಿ ಸ್ಪಷ್ಟವಾಗಿ ಗೊತ್ತಾಗತ್ತಾ..??ಹೇಗೆ?? ಯಾವ ರೀತಿ.. 👇
        ದಾಸರ ಪದದಲ್ಲಿ ಒಂದು ಸಾಲು ಹೀಗಿದೆ.. " 84 ಲಕ್ಷ ಜೀವ ರಾಶಿ ದಾಟಿ ಬಂದ ಈ ಶರೀರ " ಅಂತ.. ಹಾಗೆ ಶಂಕರಾಚಾರ್ಯರು.. ಭಜ.. ಗೋವಿಂದಂ ನ.. ಒಂದು ಸಾಲು ಹೀಗಿವೆ.. " ಪುನರಪಿ ಜನನಂ ಪುನರಪಿ ಮರಣಮ್.. ಪುನರಪಿ ಜನನಿ ಜಟರೆ ಶಯನಮ್.. " ಎಂದು... ದಾಸರು.. ಮತ್ತು ಶಂಕರರು.. ಹೇಳಿದ.. ಈ ಸಾಲುಗಳ ಒಳ ಮರ್ಮ ಅರ್ಥ ಏನೆಂದು ಆಳವಾಗಿ ಗಮನಿಸಿ.. ಅರಿತರೆ.. ದಾಸರು ಹೇಳಿದಂತೆ.. ಈ ಮನುಷ್ಯ ಶರೀರ ಹೊಸದಾಗಿರಬಹುದು.. ಆದ್ರೆ ಶರೀರದೊಳಗಿನ ಆತ್ಮ ಹಳೆಯದು.. ಆ ಆತ್ಮ..84 ಲಕ್ಷ ಜೀವ ರಾಶಿಯ ಯೋನಿಯಲ್ಲಿ ಜನಿಸಿ.. ಕೊನೆಗೆ.. ಮನುಷ್ಯ ಜನ್ಮಕ್ಕೆ.. ಬಂದು ಬೀಳತ್ತೆ.. ಮತ್ತೆ ಅದೇ ಪುರಂದರ ದಾಸರು.. ಹೇಳ್ತಾರೆ.. "ಮನುಷ್ಯ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ " ಅಂತ..ಆ ಆತ್ಮ 84 ಜನ್ಮ ರಾಶಿ ದಾಟಿದ ಮೇಲೆಯೇ.. ಕೊನೆಯ ಘಟ್ಟದಲ್ಲಿ ಆ ಆತ್ಮಕ್ಕೆ ಮನುಷ್ಯ ಜನ್ಮ ಪ್ರಾಪ್ತಿಯಾಗತ್ತೆ... ಆ ಮನುಷ್ಯ ಜನ್ಮದಲ್ಲಿ.. ಒಂದೇ ಜನ್ಮವೀರತ್ತಾ?? ಇಲ್ಲ.. ಸಾಕಷ್ಟು.. ಮನುಷ್ಯ ಜನ್ಮವನ್ನ ಆ ಆತ್ಮ ಪಡೆಯಲೇಬೇಕು.... ಆದಿ ಶಂಕರಾಚಾರ್ಯರು ಅದನ್ನೇ ಹೇಳಿದ್ದು.. "ಪುನರಪಿ ಜನನಂ ಪುನರಪಿ ಮರಣಮ್ ಪುನರಪಿ ಜನನಿ ಜಟರೆ ಶಯನಮ್" ಎಂದು..ಆತ್ಮಕ್ಕೆ ಎಲ್ಲಾ 84 ಲಕ್ಷ ಜೀವ ರಾಶಿ ದಾಟಿ ಬಂದ ನಂತರ ಒಂದಿಷ್ಟು ಮನುಷ್ಯ ಜನ್ಮಗಳು ಇರತ್ತೆ.. ಮತ್ತೆ ಜನನವಾಗ್ತಾನೆ.. ಮತ್ತೆ ಮರಣ ಹೊಂದುತ್ತಾನೆ.. ಹೀಗೆ recycling ತರ ಆಗ್ತಾನೆ.. ಇರತ್ತೆ..
      ಹಾಗಾದ್ರೆ..ಆ ಆತ್ಮ ಮನುಷ್ಯ ಜನ್ಮ ಪಡೆದಮೇಲೆ.. ಮುಕ್ತಿ ಅಥವಾ ಮೋಕ್ಷ ಯಾವಾಗಾ..?? ಅದು ಹೇಗೆ ಗೊತ್ತಾಗತ್ತೇ.. ನಮ್ಮ ಜನ್ಮ ಜಾತಕದಲ್ಲಿ ಹೇಗೆ ಗೊತ್ತಾಗತ್ತೇ..??ಎಂಬ ಪ್ರಶ್ನೆಗಳಿಗೆ.. ಹೌದು ನೂರಕ್ಕೆ ನೂರರಷ್ಟು..ಗೊತ್ತಾಗತ್ತೆ..
ಯಾವ ರೀತಿ..??👇
      ಒಬ್ಬ ಮನುಷ್ಯನ ಜನ್ಮವಾದಗ.. ಒಂದು ನಿರ್ದಿಷ್ಟ ದಿನ ನಿರ್ದಿಷ್ಟ ವೇಳೆ.. ಕಾಲ.. ತಿಥಿ ನಕ್ಷತ್ರ ಮಾಸ ಅಂತ ಇದ್ದೆ ಇರತ್ತೆ.... ಒಂದು ಆತ್ಮ ಬೇರೆ ಬೇರೆ.. ಜೀವರಾಶಿಗಲ್ಲಿ.. ಜನನ ಮರಣವಾಗಿ... ಮನುಷ್ಯ ಜನ್ಮಕ್ಕೆ ಬಂದಾಗ ಆ ಆತ್ಮ ರಾಶಿ ನಕ್ಷತ್ರ ಚಕ್ರಕ್ಕೆ ಬೀಳತ್ತೆ... ಸ್ಪಷ್ಟವಾಗಿ ವಿವರಿಸಬೇಕಂದ್ರೆ.. Total ಆಗಿ..27 ನಕ್ಷತ್ರ.. ಆ 27 ನಕ್ಷತೆಕ್ಕೆ.. ಭಾಗವಾಗಿ..12 ರಾಶಿಗಳು.. ಒಂದು ಶಿಶು ಮೊದಲನೆಯ ನಕ್ಷತ್ರ..ಮೊದಲನೇ ಪಾದದಲ್ಲಿ ಜನವಾಗಿದ್ರೆ.. ಆ ಶಿಶುವಿನದ್ದು.. ಮೊದಲನೇ ಮನುಷ್ಯ ಜನ್ಮವೆಂದು ಅರ್ಥ.. ಮೊದಲನೇ ನಕ್ಷತ್ರ ಯಾವುದು?? ಅಶ್ವಿನಿ.. ನಕ್ಷತ್ರ ಮೊದಲನೇ ಪಾದ.. ಮತ್ತು ನಾಲ್ಕು ಪಾದ... ಬಂದು.. ಮೇಷ ರಾಶಿ.... ಈ ನಕ್ಷತ್ರದ.. ನಾಲ್ಕು ಪಾದಗಳಲ್ಲಿ.. ನಾಲ್ಕು ಬಾರಿ ಮನುಷ್ಯ ಜನ್ಮ ಬಂದ್ರೆ.. Next.. ನಕ್ಷತ್ರಕ್ಕೆ.. ಬೀಳತ್ತೆ.. ಅದು ಬಂದು ಭರಣಿ.. ನಕ್ಷತ್ರ.. ರಾಶಿ ಮೇಷ.. ಆ ನಾಲ್ಕು.. ಪಾದ ಪೂರ್ಣಗೊಂಡಾಗ.. ಮತ್ತೆ.. ಆ ಆತ್ಮ ಮುಂದಿನ.. ನಕ್ಷತ್ರವಾದ.. ಕೃತಿಕ ನಕ್ಷತ್ರದಲ್ಲಿ ಪೂರ್ಣ 4 ಪಾದಗಳನ್ನ ಪೂರ್ಣಗೊಳಿಸಬೇಕು.. ಮತ್ತೆ... ಮುಂದಿನದ್ದು... ಹೀಗೆ.. ಆ ಆತ್ಮ.. ಹುಟ್ಟು ಸಾವಿನ ಮಧ್ಯ.. ರಾಶಿ ನಕ್ಷತ್ರದ ಸಾಲಿನಲ್ಲಿ ಜನನವಾಗುತಿರತ್ತೆ... ಮತ್ತೆ ಅಲ್ಲಿಂದ ಪ್ರಾರಂಭ ಅಂತ್ಯ...ಮತ್ತೆ ಅಂತ್ಯದಿಂದ ಪ್ರಾರಂಭ..🙏ಒಂದು ರೀತಿ ಸರತಿ ಸಾಲಿನಲ್ಲಿ ನಿಂತಂತೆ..
       ರಾಶಿ ನಕ್ಷತ್ರದ ಕೊನೆಯ ಘಟ್ಟ ಯಾವುದು...?? ಮೀನ ರಾಶಿಯವರು.. ಮೀನ ರಾಶಿಯನ್ನ ಮೋಕ್ಷ ರಾಶಿ ಎಂದು.. ಜ್ಯೋತಿಷ್ಯದಲ್ಲಿ ಹೇಳಲಾಗತ್ತೆ...ಈ ಮೀನರಾಶಿ ಭಗವಂತನ ಪಾದವನ್ನ ಸೂಚಿಸುತ್ತೆ.. ಮತ್ತು.. ಈ ಮೀನ ರಾಶಿಯವರನ್ನ..." Old souls " ಎಂದು ಕರೀತಾರೆ.. ಅಂದ್ರೆ ಹಳೆಯ ಆತ್ಮಗಳು ಎಂದರ್ಥ.... ಕಾರಣ ಇಷ್ಟೇ.. ಅವರು.. ಎಲ್ಲಾ.. ಜೀವರಾಶಿಗಳಲ್ಲಿ ಜನನವಾಗಿ.. ಮನುಷ್ಯರಾಗಿ ರಾಶಿ ನಕ್ಷತ್ರ.. ಚಕ್ರಕ್ಕೆ ಬಿದ್ದು..ಮೋಕ್ಷದ ಸರತಿ ಸಾಲಿನ ಕೊನ್ ಕೊನೆಯ ಘಟ್ಟದಲ್ಲಿ ಇದ್ದಾರೆ..ಎಂದರ್ಥ.. ಈ ಮೀನ ರಾಶಿಯಲ್ಲಿ.. ಪೂರ್ವಭಾದ್ರ ಪದ ನಕ್ಷತ್ರದ ಕೊನೆಯ ಪಾದ.. ಉತ್ತರಾಭಾದ್ರಾ ನಕ್ಷತ್ರದ ನಾಲ್ಕು ಪಾದಗಳು.. ಮತ್ತು.. ರೇವತಿ ನಕ್ಷತ್ರದ..4 ಪಾದಗಳಲ್ಲಿ ಬೀಳತ್ತೆ...🙏🙏
 ಸಹಜವಾಗಿ ಈ ಮೀನದವ್ರು ಯಾರ ತಂಟೆಗೆ ಹೋಗುವವರಲ್ಲ.. ಆಧ್ಯಾತ್ಮ ಪರಮಾತ್ಮನಲ್ಲಿ ಲೀನವಾಗಿರ್ತಾರೆ..6 th sence.. ತುಂಬಾ Active ಆಗಿರತ್ತೆ.. ನೀವು ಆ ರಾಶಿಯವರ ಬಗ್ಗೆ ಗಮನಿಸಿರಬಹುದು.. ಅವರದ್ದೇ ಲೋಕದಲ್ಲಿ ಮುಳುಗಿ ಹೋಗಿರ್ತಾರೆ.. Phylospy ಮಾತಾಡ್ತಿತಾರೆ ಯಾವಾಗ್ಲು.. ಶಾOತಿ ಪ್ರಿಯರು.. ಇನ್ನೂ ಅನೇಕ ಸಾತ್ವಿಕ ಲಕ್ಷಣಗಳು..
       ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಮೋಕ್ಷದ ಬಗ್ಗೆ.. ಈ ಒಂದು ರೀತಿ ಗೋಚಾರವಿದೆ ಎಂದು ಹೇಳಲಾಗತ್ತೆ..🙏🙏
     ಕೊನೆಯದಾಗಿ...ಇದೇ ರಾಶಿ ನಕ್ಷತ್ರದಲ್ಲಿ ಜನಿಸಬೇಕೆಂದು ಯಾರು ಸಹ ಕೇಳಿಕೊಂಡು ಬಂದಿರ್ವದಿಲ್ಲ.. ಅದೆಲ್ಲ ನಮ್ಮ ಪೂರ್ವರ್ಜಿತ ಪಾಪ ಪುಣ್ಯ ಕರ್ಮಗಳ ಲೆಕ್ಕಾಚಾರಕ್ಕೆ ಅನುಗುಣವಾಗಿ..ಅನುಗ್ರಹ.. 🙏
ll ಸತ್ಕರ್ಮಬಿಷ್ಷ್ಠ ಸತ್ಫಲಮ್.. ದುಷ್ಕರ್ಮ ಯೇವ ದುಷ್ಮಫಲಮ್.. ಅತ್ಯುತ್ಕಟ ಪುಣ್ಯ ಪಾಪಾನಾಮ್ ಭವಮಿಹO ll ಮನುಷ್ಯನಾಗಿ ಹುಟ್ಟಿದ ಮೇಲೆ.. ಎಲ್ಲವನ್ನು ಅನುಭವಿಸಲೇ ಬೇಕು....
ll ಧರ್ಮಾಥ ಕಾಮ ಮೋಕ್ಷ...ll ಮೂಕ್ಷ ಮಾರ್ಗವೇ ಮನುಷ್ಯನ ನಿಜವಾದ ಸಾಧನೆ.. ಅದು.. ಭವಂತವನ ಅನುಷ್ಠಾನದಲ್ಲಿ.. ಒಳ್ಳೆಯ ಕರ್ಮಗಳಲ್ಲಿ ದೀನ ದುರ್ಬಲರ ಸೇವಾ ದಾನ ಧರ್ಮಗಳಲ್ಲಿ ಮಾತ್ರ ಸಾಧ್ಯ🙏🙏 
       ✍️$@M🔱

ಹೋಮದಲ್ಲಿ ಅಷ್ಟದ್ರವ್ಯವನ್ನು ಬಳಸುವ ಪರಿಕಲ್ಪನೆಯು ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು.

🙏✨🕉️   ಹೋಮದಲ್ಲಿ ಅಷ್ಟದ್ರವ್ಯವನ್ನು ಬಳಸುವ ಪರಿಕಲ್ಪನೆಯು ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು...!!🌺🌺
                                     
                                     🍁"ಅಷ್ಟ ದ್ರವ್ಯ ಗಣಪತಿ"🍁

🔯ಅಷ್ಟ ದ್ರವ್ಯ ಗಣಪತಿ ಹೋಮವನ್ನು ಮಾಡುವುದರಿಂದ ಗಣೇಶನು ಆ ವ್ಯಕ್ತಿಯ ವ್ಯಾಪಾರ, ಹಣಕಾಸು, ವೃತ್ತಿ ಹಾಗೂ ಇನ್ನಿತರ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ ಮತ್ತು ವಿವಾಹದಲ್ಲಿನ ಅಡೆತಡೆಗಳನ್ನು ದೂರಾಗಿಸುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾದರೆ, ಅಷ್ಟ ದ್ರವ್ಯ ಗಣಪತಿ ಹೋಮವನ್ನು ಮಾಡುವುದು ಹೇಗೆ..? ಈ ಹೋಮದ ಪ್ರಯೋಜನವೇನು..? ಮತ್ತು ಈ ಹೋಮಕ್ಕೆ ಬೇಕಾಗುವ ಸಾಮಾಗ್ರಿಗಳಾವುವು ?

🔥ಗಣಪತಿ ಅಷ್ಟ ದ್ರವ್ಯ ಹೋಮ ಏಕೆ..?

🌽ಭಗವಾನ್ ಗಣೇಶ ಹಿಂದೂ ಧರ್ಮದ 5 ಪ್ರಾಥಮಿಕ ದೇವರುಗಳಲ್ಲಿ ಒಬ್ಬನು. ಉಳಿದ 4 ದೇವರೆಂದರೆ ಬ್ರಹ್ಮ, ವಿಷ್ಣು, ಶಿವ ಮತ್ತು ದುರ್ಗಾ ದೇವಿ. ಜನರು ಈ 5 ದೇವತೆಗಳನ್ನು ಪೂಜಿಸುತ್ತಾರೆ ಏಕೆಂದರೆ ಅವರು ತಮ್ಮ ಜೀವನದಲ್ಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆಯಿದೆ.

🌽‘ಅಷ್ಟ’ ಎಂದರೆ ‘ಎಂಟು’ ಮತ್ತು ‘ದ್ರವ್ಯ’ ಎಂದರೆ ‘ವಸ್ತುಗಳು’. ಈ ಹೋಮಕ್ಕೆ ಪ್ರಮುಖವಾಗಿ 8 ವಸ್ತುಗಳು ಅತ್ಯಗತ್ಯ. ಗಣಪತಿ ಹೋಮದ ಅಷ್ಟ ದ್ರವ್ಯವು ಎಳ್ಳೆಣ್ಣೆ, ಜೋನಿ ಬೆಲ್ಲ, ಕಬ್ಬು, ಜೇನುತುಪ್ಪ, ತೆಂಗಿನಕಾಯಿ, ತುಂಡಾದ ಅಕ್ಕಿ, ಬಾಳೆಹಣ್ಣು, ಅಕ್ಷತೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ 8 ವಸ್ತುಗಳೊಂದಿಗೆ ಗಣಪತಿ ಹೋಮವನ್ನು ಮಾಡಿದಾಗ, ಹೋಮದಿಂದ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು. ಜನರು ಈ ಹೋಮವನ್ನು ಪ್ರಮುಖ ಘಟನೆಗಳು ಮತ್ತು ಉದ್ಯಮಗಳಲ್ಲಿ ಯಶಸ್ಸು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲು ಮಾಡುತ್ತಾರೆ.

🔥ಗಣಪತಿ ಅಷ್ಟ ದ್ರವ್ಯ ಹೋಮದ ಫಲ:

🌷ತಮ್ಮ ಜೀವನ ಮತ್ತು ವ್ಯವಹಾರದಲ್ಲಿ ಸಮೃದ್ಧಿಯನ್ನು ಸಾಧಿಸಲು ಬಯಸುವವರಿಗೆ ಗಣಪತಿ ಅಷ್ಟದ್ರವ್ಯ ಹೋಮವು ಸೂಕ್ತವಾಗಿದೆ.

🌷ಈ ಹೋಮವು ನಿಮ್ಮ ಅಗತ್ಯತೆಗಳನ್ನು ನಿವಾರಿಸಿ, ಜೀವನದಲ್ಲಿ ಸಂಕೀರ್ಣ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

🌷ಇದು ಎಲ್ಲಾ ಅಂಶಗಳಲ್ಲಿ ಯಶಸ್ಸನ್ನು ತರುತ್ತದೆ ಇದರಿಂದ ನೀವು ಸಂತೋಷದ ಜೀವನವನ್ನು ನಡೆಸಬಹುದು.

🌷ನೀವು ಮದುವೆಯಲ್ಲಿ ಅಥವಾ ವಿವಾಹದಲ್ಲಿ ವಿಳಂಬವನ್ನು ಎದುರಿಸುತ್ತಿದ್ದರೆ ಇದು ಮದುವೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.

🔥ಇವುಗಳನ್ನು ಕೂಡ ಹೋಮದಲ್ಲಿ ಬಳಸಲಾಗುತ್ತದೆ:

🎊ಕೆಲವೆಡೆ ಒಣಕೊಬ್ಬರಿ, ಬೆಲ್ಲ, ಹುರಿದ ಅಕ್ಕಿ, ಬಾಳೆಹಣ್ಣು (ಕದಳಿ ಬಾಳೆಹಣ್ಣು), ಜೇನು, ಎಳ್ಳು, ಕಬ್ಬು, ಹುರಿದ ಅಕ್ಕಿಯನ್ನು ಅಷ್ಟ ದ್ರವ್ಯವಾಗಿ ಅರ್ಪಿಸುತ್ತಾರೆ.

🎊ಕೆಲವು ಸಮುದಾಯಗಳಲ್ಲಿ, ಅಷ್ಟ ದ್ರವ್ಯಗಳೆಂದರೆ ಬಾಳೆಹಣ್ಣು, ತೆಂಗಿನಕಾಯಿ, ಜೇನುತುಪ್ಪ, ಕಬ್ಬು, ತುಪ್ಪ, ಮೋದಕ, ಬೆಲ್ಲ ಮತ್ತು ಅಕ್ಕಿ ಅರಳು.

🎊ಹೋಮದಲ್ಲಿ ಅಷ್ಟದ್ರವ್ಯವನ್ನು ಬಳಸುವ ಪರಿಕಲ್ಪನೆಯು ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು. ದಕ್ಷಿಣ ಭಾರತದ ಹಿಂದೂಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ.

🎉ಗಣೇಶನ ಜನ್ಮದಿನವನ್ನು ಆಚರಿಸುವ ಹಬ್ಬವಾದ ಗಣೇಶ ಚತುರ್ಥಿಯಂದು ಸಾಮಾನ್ಯವಾಗಿ ಭಕ್ತರು ಅಷ್ಟ ದ್ರವ್ಯ ಗಣಪತಿ ಹೋಮವನ್ನು ಮಾಡುತ್ತಾರೆ. ಅಥವಾ ನೀವು ನಿಮ್ಮ ಪಂಡಿತರ ಸಲಹೆಯ ಮೇರೆಗೆ ಈ ಹೋಮವನ್ನು ಯಾವಾಗ ಬೇಕಾದರೂ ಮಾಡಬಹುದು. ಭಕ್ತರು ಗಣೇಶನನ್ನು ಮೆಚ್ಚಿಸಲು ಮತ್ತು ಅವನ ಆಶೀರ್ವಾದವನ್ನು ಕೋರಲು ಇದನ್ನು ಮಾಡುತ್ತಾರೆ.

Thursday, 4 December 2025

ಶ್ರೀಕೃಷ್ಣ ಮತ್ತು ಬಲರಾಮರು ::

ಶ್ರೀಕೃಷ್ಣ ಮತ್ತು ಬಲರಾಮರು ::

ಯಾದವ ಕುಲದ ಮಹಾರಾಜ ವಸುದೇವನಿಗೆ ರೋಹಿಣಿ ಮೊದಲ ಪತ್ನಿ. ದೇವಕಿ 2 ನೇ ಪತ್ನಿ. ದೇವಕಿ,ವಸುದೇವನ ಮದುವೆಯನ್ನು ತುಂಬಾ ಸಂತೋಷದಿಂದ ಮಾಡಿಕೊಟ್ಟ ದೇವಕಿಯ ಅಣ್ಣ ಕಂಸನಿಗೆ "ನಿನ್ನ ತಂಗಿ ದೇವಕಿಗೆ ಹುಟ್ಟಿದ 8ನೇ ಮಗುವಿನಿಂದ ನಿನಗೆ ಮರಣವಾಗುತ್ತದೆ" ಅಂತ ಒಂದು ಅಶರೀರವಾಣಿ ಕೇಳುತ್ತದೆ. ಆದ್ದರಿಂದ ಸಿಟ್ಟಿನಿಂದ ಕಂಸನು ತಂಗಿ ದೇವಕಿ ಮತ್ತು ವಸುದೇವನನ್ನು ಸೆರೆಮನೆಗೆ ತಳ್ಳಿದ.

ಆದ್ದರಿಂದ ವಸುದೇವ " ತನ್ನ ಮೊದಲ ಪತ್ನಿಯನ್ನು ತನ್ನ ಗೆಳೆಯ ನಂದಗೋಪ ಮತ್ತು :: ಯಶೋದೆಯ ಮನೆಯಲ್ಲಿರಲು" ಹೇಳಿದನು. ಹೀಗಾಗಿ ರೋಹಿಣಿಯು ಇವರ ಮನೆಯಲ್ಲಿ ಇದ್ದಳು.

ಇತ್ತ ದೇವಕಿ ವಸುದೇವನಿಗೆ ಹುಟ್ಟಿದ ಮೊದಲನೆಯ ಮಗುವಿನಿಂದ ಹಿಡಿದು ಮಕ್ಕಳನ್ನು ಕಂಸನು ಕೊಲ್ಲುತಿದ್ದ. 7 ನೇ ಮಗುವೇ ಬಲರಾಮ. ಇವನ ಭ್ರೂಣವನ್ನು ರೋಹಿಣಿಯ ಗರ್ಭಕ್ಕೆ ಟ್ರಾನ್ಸ್ಫರ್ ಮಾಡಿದರು. ಆದ್ದರಿಂದ ವಸುದೇವ ತಂದೆ, ರೋಹಿಣಿ ಬಾಡಿಗೆ ತಾಯಿಯಾಗಿ ಬಲರಾಮನು ವಸುದೇವನ ಮೊದಲ ಮಗನಾಗಿ ಹುಟ್ಟಿದ. ಇವನಿಗೆ ಕೃಷಿಯಲ್ಲಿ ಆಸಕ್ತಿ. ಆದ್ದರಿಂದ ನೇಗಿಲು ಬಲರಾಮನ ಗುರುತು ಮತ್ತು ಅಸ್ತ್ರ.

ದೇವಕಿ ವಸುದೇವನಿಗೆ ನಂತರದ ಮಗು ಹೆಣ್ಣು ಮಗು ಹುಟ್ಟಿತು. ಆದರೂ ಕೂಡ ಕಂಸ ಕೊಲ್ಲಲು ಹೋದ. ಆದರೆ "ಕೂಡಲೇ ಅವನ ಕೈತಪ್ಪಿಸಿಕೊಂಡು ಮಹಾಶಕ್ತಿ ದೇವಿಯಾಗಿ ಬದಲಾಗಿ, ಮುಂದಿನ ಮಗುವೇ ನಿನ್ನ ಮರಣಕ್ಕೆ ಕಾರಣ. ನೀನು ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ" ಎಂದು ಹೇಳಿ ಮಾಯವಾಯಿತು.

ಕೊನೆಯಲ್ಲಿ 8ನೇ ಗಂಡುಮಗುವಾಗಿ ಶ್ರೀಕೃಷ್ಣ ಹುಟ್ಟಿದ. ಇತ್ತ ನಂದಗೋಪನಿಗೆ ಹೆಣ್ಣುಮಗು ಹುಟ್ಟಿತ್ತು. ತಂದೆತಾಯಿ ಶ್ರೀಕೃಷ್ಣನನ್ನು ಕಾಪಾಡುವ ಸಲುವಾಗಿ ಶ್ರೀಕೃಷ್ಣನನ್ನು ಯಶೋದೆಯ ಪಕ್ಕದಲ್ಲಿ ಮಲಗಿಸಿ, ಅವರಿಗೆ ಹುಟ್ಟಿದ ಹೆಣ್ಣುಮಗುವನ್ನು ವಸುದೇವ ಸೆರೆಮನೆಗೆ ತಂದನು. ಹೀಗಾಗಿ ಶ್ರೀಕೃಷ್ಣ ದೇವಕಿ ವಸುದೇವನ ಎರಡನೇ ಮಗನಾಗುತ್ತಾನೆ. ಬಲರಾಮ ಮತ್ತು ಕೃಷ್ಣರಿಬ್ಬರೂ ವಸುದೇವ ಮತ್ತು ದೇವಕಿ ದಂಪತಿಗಳ ಪುತ್ರರು.

ಬಲರಾಮ ಮತ್ತು ಕೃಷ್ಣರಿಬ್ಬರೂ ಒಟ್ಟಿಗೆ ಬೆಳೆಯುತ್ತಾರೆ. ಕಂಸನ ವಧೆಯನ್ನು ಮಾಡಿದ ಮೇಲೆ ದೇವಕಿ ವಸುದೇವನ ಸೆರೆಮನೆವಾಸ ಮುಗಿಯುತ್ತದೆ. ನಂತರ ರೋಹಿಣಿ ಮತ್ತು ವಸುದೇವರಿಗೆ ಒಂದು ಹೆಣ್ಣುಮಗು ಹುಟ್ಟುತ್ತದೆ. ಅವಳೇ ಸುಭದ್ರ ಅಥವಾ ಸುಭದ್ರೆ.ಬಲರಾಮ ಮತ್ತು ಶ್ರೀಕೃಷ್ಣರ ಪ್ರೀತಿಯ ತಂಗಿ.

ಪುರಿ ಜಗನ್ನಾಥದಲ್ಲಿ ಬಲರಾಮ ಮತ್ತು ಶ್ರೀಕೃಷ್ಣರ ಜೊತೆಗೆ ತಂಗಿ ಸುಭದ್ರೆಗೂ ನಿತ್ಯ ಪೂಜೆ ನಡೆಯುತ್ತದೆ.

ಅಷ್ಟೇ ಅಲ್ಲ, ಶ್ರೀ ಮಹಾವಿಷ್ಣುವಿನ ಅವತಾರವೇ ಶ್ರೀಕೃಷ್ಣ. ಆದಿಶೇಷನೇ ಬಲರಾಮ.

Monday, 24 November 2025

ಅಷ್ಟ ದಿಕ್ಪಾಲಕರು

ಅಷ್ಟ ದಿಕ್ಪಾಲಕರು

ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ.
ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ.
 ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು: ಇಂದ್ರ-ಪೂರ್ವ, ಕುಬೇರ-ಉತ್ತರ, ಯಮ-ದಕ್ಷಿಣ, ವರುಣ-ಪಶ್ಚಿಮ, ಈಶಾನ (ಶಿವ)- ಈಶಾನ್ಯ, ಅಗ್ನಿ-ಆಗ್ನೇಯ, ವಾಯು-ವಾಯುವ್ಯ, ನಿಋತಿ(ರಾಕ್ಷಸ)- ನೈಋುತ್ಯ.

ಇಂದ್ರ: ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿಧಿದೇವತೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ.

 ಅಗ್ನಿ: ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಧಿಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ. 

ಯಮ: ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ ಮೃತ್ಯುದೇವತೆ. ಕಾಲಪುರುಷ ಎಂತಲೂ ಕರೆಯುತ್ತಾರೆ. ಈತ ದಕ್ಷಿಣ ದಿಕ್ಕಿನ ಅಧಿಧಿಪತಿ. ಇವನು ಸೂರ್ಯನ ಮಗ. ಶನಿಯ ತಮ್ಮ. ಈತನ ಆಯುಧ ದಂಡ.

 ನಿಋುತಿ: ನೈಋುತ್ಯ ದಿಕ್ಕಿನ ಒಡೆಯ. ನಿಋುತಿಯ ಆಯುಧ ಖಡ್ಗ. ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾನೆ.ಇತನ ಆರಾಧನೆಯಿಂದ ದೀರ್ಘಾಯಸ್ಸು ಲಭಿಸುತ್ತದೆ.

 ಪಶ್ಚಿಮದಲ್ಲಿ ವರುಣ: ವರುಣನ ಆಯುಧ ಪಾಶ. ಸರ್ವ ಜಲ ತತ್ವಗಳಿಗೆ ದೇವತೆ.

ವಾಯು: ವಾಯುವ್ಯ ದಿಕ್ಕಿನ ದೇವತೆ. ಇವನ ಆಯುಧ ಅಂಕುಶ. ಹನುಮನ ತಂದೆ. ಈತನನ್ನು ಪವನ, ಪ್ರಾಣ ಎಂತಲೂ ಕರೆಯುತ್ತಾರೆ. ಭಗವದ್ಗೀತೆಯ ಹತ್ತನೆಯ ಅಧ್ಯಾಯವಾದ ವಿಭೂತಿಯೋಗದಲ್ಲಿ ಶ್ರೀಕೃಷ್ಣನು ತನ್ನ ಭಾವ ವಾಯುವಿನಂತೆ ಇದೆ ಎಂದು ಹೇಳುತ್ತಾನೆ.

 ಕುಬೇರ: ಕುಬೇರ ಮಿಶ್ರವಸುವಿನ ಮಗ. ಈತನ ಆಯುಧ ಗಧೆ. ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಧನ ದೇವತೆ.

ಈಶಾನ: ಇವನ ಆಯುಧ ತ್ರಿಶೂಲ. ಸಂಪತ್ತು, ಆರೋಗ್ಯ ಹಾಗೂ ಯಶಸ್ಸಿನ ದೇವತೆ. ಈತ ಜ್ಞಾನವನ್ನು ಕೊಟ್ಟು, ದುಃಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ.

ಪಂಚಮುಖಿ ಆಂಜನೇಯ

***ಪಂಚಮುಖಿ  ಆಂಜನೇಯ*** 
ರಾಮಾಯಣದಲ್ಲಿ, ಶ್ರೀರಾಮನ
 ಜೊತೆ ಕೇಳಿ ಬರುವ ಹೆಸರು ಆಂಜನೇಯ. ರಾಮನ ಭಂಟ ಹನುಮಂತನು ಕಲಿಯುಗದ ಭಕ್ತರಿಗೆ  ಶಕ್ತಿಯುತ ದೇವರಾಗಿದ್ದಾನೆ. ಪಂಚಮುಖಿ ಆಂಜನೇಯ ಭಕ್ತರ ಎಲ್ಲಾ ಕಷ್ಟಕಾರ್ಪಣ್ಯ ಗಳನ್ನು  ನಾಶ ಪಡಿಸುತ್ತಾನೆ. ಸೀತಾಮಾತೆಯನ್ನು ರಾವಣ ಅಪಹರಣ ಮಾಡಿದ ನಂತರದಲ್ಲಿ  ಅನೇಕ ಘಟನೆಗಳು ನಡೆದು, 

ಕೊನೆಯದಾಗಿ ರಾಮನ  ವಾನರ ಸೈನ್ಯ ಮತ್ತು ರಾವಣನ ಸೈನ್ಯ ರಾಕ್ಷಸರ ನಡುವೆ ಭೀಕರ ಕದನವಾಗುತ್ತದೆ. ಯುದ್ಧದಲ್ಲಿ ರಾವಣನ ತಮ್ಮ ಕುಂಭಕರ್ಣ ಹಾಗೂ ಮಗ ಇಂದ್ರಜಿತು ಮರಣ ಹೊಂದುತ್ತಾರೆ. ಇದರಿಂದ ಕಂಗೆಟ್ಟ ರಾವಣನಿಗೆ ಸೋಲಿನ ಭಯ ಆವರಿಸಿತು. ಹೇಗಾದರೂ ಮಾಡಿ  ರಾಮನನ್ನು ಸೋಲಿಸಬೇಕೆಂದು ಹಟತೊಟ್ಟು ಪಾತಳದ ಅಧಿಪತಿಯಾಗಿದ್ದ ತನ್ನ ಸಹೋದರ ( ದೂರ ಸಂಬಂಧಿ) ಅಹಿರಾವಣನ ಸಹಾಯ ಪಡೆಯುತ್ತಾನೆ ಎಂಬ ವಿಷಯ ವಿಭೀಷಣನಿಗೆ ತಿಳಿಯಿತು.

 ಅವನು ರಾಮ ಲಕ್ಷ್ಮಣರನ್ನು ಯಾರಿಗೆ ಕಾಣದಂತೆ ಮುಚ್ಚಿಡಬೇಕು ಎಂದು  ಹನುಮಂತನಿಗೆ ಹೇಳಿದನು. ಹನುಮಂತನು ತನ್ನ  ಬಾಲವನ್ನು ದೊಡ್ಡದಾಗಿ ವಿಸ್ತರಿಸಿಕೊಂಡು ಕೋಟೆ ಕಟ್ಟಿ ಅದರಲ್ಲಿ ರಾಮ ಲಕ್ಷ್ಮಣರನ್ನು ಮುಚ್ಚಿಟ್ಟನು.

ಆದರೆ ಮಾಯಾವಿ ಅಹಿರಾವಣ, ವಿಭೀಷಣನ ವೇಶದಲ್ಲಿ ಬಂದು, ರಾಮನನ್ನು ನೋಡಬೇಕೆಂದು ಹೇಳಿ, ಮೋಸ ದಿಂದ  ರಾಮ-ಲಕ್ಷ್ಮಣರನ್ನು  ಅಪಹರಿಸಿಕೊಂಡು ಹೋಗಿ ಪಾತಾಳದಲ್ಲಿ ಇಡುತ್ತಾನೆ.  ಇದನ್ನು ತಿಳಿದ ಹನುಮಂತನು ಪಾತಾಳಲೋಕಕ್ಕೆ ಹೊರಡುತ್ತಾನೆ. ಪಾತಾಳದ ಬಾಗಿಲಲ್ಲಿ  ವಿಚಿತ್ರ ಪ್ರಾಣಿಯೊಂದು ಎದುರಾಗುತ್ತದೆ. ಅದರ ಮುಖ ವಾನರ ನಂತೆ, ದೇಹ ಮೀನಿನಂತೆ ಇರುತ್ತದೆ. 

ಅವನೇ ಪಾತಾಳದ  ದ್ವಾರಪಾಲಕ ಮಕರಧ್ವಜ. ಇವನು ಹನುಮನ ಪುತ್ರನಾಗಿದ್ದನು. ಹನುಮ ಲಂಕಾದಹನ ಮಾಡಿದ ನಂತರ  ಉರಿತಾಪ ತಾಳಲಾರದೆ ಸಮುದ್ರಕ್ಕೆ ಜಿಗಿದನು.ಆಗ ಅವನ ದೇಹದಿಂದ  ಬಿದ್ದ ಬೆವರ ಹನಿ ಒಂದು ಮೀನು ನುಂಗಿತು. ಮೀನಿನಿಂದ  “ಮಕರದ್ವಜ” ಹುಟ್ಟಿದನು. ಇವನು ಮಹಾ ಪರಾಕ್ರಮಿ, ವೀರನು ಆಗಿದ್ದಾನೆ ಎಂದು ತಿಳಿದ ಅಹಿರಾವಣ
ಅವನನ್ನು ಕರೆಸಿ  ಪಾತಾಳಲೋಕದ  ದ್ವಾರಪಾಲಕ ನನ್ನಾಗಿ ಮಾಡಿದನು.  

ಹನುಮಂತ ತನ್ನ ದಿವ್ಯ ದೃಷ್ಟಿಯಿಂದ ಇದನ್ನು ಅರಿತು.  ಮಕರದ್ವಜನಿಗೆ ಪಾತಾಳದ ಒಳಗೆ ಹೋಗಲು ಬಿಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಮಕರಧ್ವಜ ನನ್ನ ಕರ್ತವ್ಯವನ್ನು ಮಾಡುತ್ತೇನೆ ಬಿಡುವುದಿಲ್ಲ ಎನ್ನುತ್ತಾನೆ. 

ಹನುಮಂತನು  ಅವನೊಡನೆ  ಹೊರಾಡಿ  ಅವನನ್ನು ಒಂದು  ಕಂಬಕ್ಕೆ ಕಟ್ಟಿ ನಂತರ ಪಾತಾಳಕ್ಕೆ ಬರುತ್ತಾನೆ. ಅಹಿರಾವಣನನ್ನು  ಸಂಹರಿ ಸಲು  ಪಾತಾಳಲೋಕದ  ಐದು  ದಿಕ್ಕಿನಲ್ಲಿ ಇಟ್ಟಿರುವ  ಐದು ದೀಪಗಳನ್ನು ಒಂದೇ ಬಾರಿಗೆ ಆರಿಸಬೇಕು. ಆಗ ಮಾತ್ರ ಅಹಿರಾವಣನನ್ನು ಸಂಹರಿಸಲು ಸಾಧ್ಯ ಎಂಬುದನ್ನು 
ಮೊದಲೇ ತಿಳಿದಿದ್ದ  ಹನುಮಂತನು, ಶ್ರೀರಾಮನನ್ನು ಮನಸ್ಸಿನಲ್ಲಿ ಸ್ಮರಿಸಿ ಪಂಚಮುಖಿ ಅವತಾರವನ್ನು ತಾಳುತ್ತಾ ನೆ.  

ತನ್ನ ಐದು ಮುಖಗಳಿಂದ ಪಾತಾಳದ 5 ದಿಕ್ಕಿನಲ್ಲಿದ್ದ ಐದು ದೀಪಗಳನ್ನು ಒಂದೇ ಸಲಕ್ಕೆ ಆರಿಸಿ ಅಹಿರಾವಣನ ನ್ನು ಸಂಹಾರ ಮಾಡಿ ಬಂಧಿಸಿಟ್ಟಿದ್ದ ರಾಮಲಕ್ಷ್ಮಣರನ್ನು ತನ್ನ ಭುಜದ ಮೇಲೆ  ಕೂರಿಸಿಕೊಂಡು ಸ್ವಸ್ಥಾನಕ್ಕೆ ಬರುತ್ತಾನೆ. 

ಆಂಜನೇಯನ  ಪಂಚಮುಖಗಳ ಹೆಸರು :- ಹನುಮಂತ,  ಗರುಡ,  ವರಹಾ, ನರಸಿಂಹ,  ಮತ್ತು ಹಯಗ್ರೀವ.
ವಾನರ ರೂಪದ, ಹನುಮಂತನ ಮುಖ:-  ಪೂರ್ವದ ಕಡೆ ಇದ್ದು, ಸಾತ್ವಿಕತೆ,  ಪವಿತ್ರತೆ  ಹಾಗೂ ಸಂತೋಷವನ್ನು  ಕೊಡುವುದು. 
ಎರಡನೇ ರೂಪ:-  ನರಸಿಂಹನ ರೂಪ, ದಕ್ಷಿಣದ ಕಡೆ ಮುಖ ಮಾಡಿರುವ ನರಸಿಂಹನು,  ಭಕ್ತರ  ಎಲ್ಲಾ ವಿಧದ ಭಯ, ಪಾಪಗಳು, ಆತ್ಮ ಮತ್ತು ದೆವ್ವಗಳ ಪ್ರಭಾವವನ್ನು  
ಅಳಿಸಿ ಹಾಕುತ್ತಾನೆ ಮತ್ತು ಅನುಗ್ರಹಿಸುತ್ತಾನೆ.

ಮೂರನೆ ಮುಖ:- ಗರುಡನ ಮುಖ, ಇದು ಪಶ್ಚಿಮ ದಿಕ್ಕಿಗೆ ಇದ್ದು, ಭಕ್ತರ ಎಲ್ಲಾ ವಿಧದ ಕಾಯಿಲೆಗಳು, ನಕಾರಾತ್ಮಕ 
ದುಷ್ಟ ಶಕ್ತಿಗಳಾದತೆ ಮಾಟ- ಮಂತ್ರ ,ವಿಷ  ಮತ್ತು ಭಯವನ್ನು ನಿಗ್ರಹಿಸುತ್ತಾನೆ..

ನಾಲ್ಕನೆ ಮುಖ:- ವರಹಾ ರೂಪ. ಇದು ಉತ್ತರ ದಿಕ್ಕಿಗಿದೆ.  ಧನ ಸಂಪತ್ತು, ಸುಖ- ಸಮೃದ್ಧಿ ಥ್ಯಾಂಕ್ಯು  ಸಂತೋಷ, ನೆಮ್ಮದಿ ಕೊಡುವುದರ ಜೊತೆಗೆ ಗ್ರಹಗಳ ಭಾದೆ ನಿವಾರಣೆ ಮಾಡು ತ್ತಾನೆ.

ಐದನೆ ಮುಖ:- ಹಯಗ್ರೀವ- ಇದು ಊರ್ದ್ವ ಮುಖವಾಗಿದೆ ಅಂದರೆ  ಮೇಲ್ಮುಖವಾಗಿದ್ದು, ಭಕ್ತ ಜನಗಳ  ಅಭಿಮಾನವ ನ್ನು ಗಳಿಸುವಲ್ಲಿ, ಆ ಸಮಯಕ್ಕೆ ತಕ್ಕಂತೆ  ಭಕ್ತರ ಮಾತು ಮಾರ್ಪಾಡಾಗುತ್ತದೆ. 

ಜ್ಞಾನ, ಭಕ್ತಿ ಶಕ್ತಿ ಜೊತೆಗೆ ಆತ್ಮೀಯ ಸ್ನೇಹಿತರು, ಬುದ್ಧಿವಂತಿಕೆ, ಒಳ್ಳೆಯ ಮಕ್ಕಳು  ಹಾಗೂ ಸದ್ಗತಿಯನ್ನು ಕೊಡುತ್ತದೆ.  ಅಲ್ಲದೆ ಈ ರೂಪವು ಅವರ  ಎಲ್ಲಾ  ಆಸೆಗಳನ್ನು  ಬಹುಬೇಗ ಈಡೇರಿಸುತ್ತದೆ. ಪಂಚ 
ಮುಖಿ ಆಂಜನೇಯ  ವಿಗ್ರಹಗಳು  ತುಂಬಾ ಅಪರೂಪ.

 ಪಂಚಮುಖಿ ಆಂಜನೇಯನನ್ನು ಪೂಜಿಸುವುದರಿಂದ ಅನೇಕ ತೊಂದರೆಗಳು ನಿವಾರಣೆಯಾಗಿ, ದುಷ್ಟಶಕ್ತಿಗಳು ಹತ್ತಿರವೂ ಸುಳಿಯುವುದಿಲ್ಲ.
ಓಂ ನಮೋ ಭಗವತೇ ಪಂಚವದನಾಯ ಮಹಾಬಲ 
ಪ್ರಚಂಡ ಸಕಲ ಬ್ರಹ್ಮಾಂಡ ನಾಶಕಾಯ ಸಕಲ 
ಭೂತ ಪ್ರೇತ ಪಿಶಾಚ ಶಾಕಿನಿ ಡಾಕಿನಿ ಯಕ್ಷಿಣಿ 
ಪೂತನಾ ಮಹಾಮಾರಿ ಸಕಲ ವಿಘ್ನ ನಿವಾರಣಾಯ ಸ್ವಾಹ

ಓಂ ಆಂಜನೇಯಾಯ ವಿದ್ಮಹೇ!
ಮಹಾಬಲಾಯ ಧೀಮಹೀ!
ತನ್ನೋ ಹನುಮಾನ್ ಪ್ರಚೋದಯಾತ್ !!

🌹🙏🏻🌹ಓಂ ನಮೋ ಭಗವಾನ್ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯೇ ನಮಃ.🌹🙏🏻🌹

🌹🙏🏻🌹 ಸರ್ವೆ ಜನೋ ಸುಖಿನೋ ಭವಂತು.🌹🙏🏻🌹
🌹🙏🏻🌹 ಕೃಷ್ಣಂ ವಂದೇ ಜಗದ್ಗುರುಂ.🌹🙏🏻🌹
🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️

Sunday, 20 July 2025

ನಾಗ ಎಂದರೆ ಯಾರು?

***ನಾಗ ಎಂದರೆ ಯಾರು?***              ಕುಟುಂಬದ ಮನೆಗಳಲ್ಲಿ ಪೂಜಿಸುವ ನಾಗ ಯಾರು? ಸರ್ಪ ಮೊಟ್ಟೆ ಕಪ್ಪೆಗಳನ್ನು ತಿನ್ನುವುದಾದರೆ ನಾಗಾರಾಧನೆಯಲ್ಲಿ ಅಷ್ಟೊಂದು ಶುದ್ಧಾಚಾರ ಏಕೆ ಪಾಲಿಸುತ್ತಾರೆ?

ನಾಗ ಎಂದಾಗ ನಮಗೆ ನೆನಪಿಗೆ ಬರುವುದು ನಾಗರಹಾವು..‌ನಾಗರ ಪಂಚಮಿ.. ನಾಗಬನಗಳು..ಕುಟುಂಬದ ನಾಗದೇವರು ಇನ್ನೂ ಮುಂದುವರಿದರೆ ನವನಾಗಗಳಾದ ಆದಿಶೇಷ,ವಾಸುಕಿ, ಕಾರ್ಕೋಟಕ, ತಕ್ಷಕ, ಅನಂತ, ಕಂಬಲ, ಕಾಲೀಯ, ಧಾರ್ತರಾಷ್ಟ್ರ ಇತ್ಯಾದಿ.

ನಾಗರಪಂಚಮಿಯಂದು ನಾವು ಪೂಜಿಸುವುದು ಅಥವಾ ಕುಟುಂಬದಲ್ಲಿ ಪೂಜಿಸಲ್ಪಡಬೇಕಾಗಿರುವುದು ನಾಗವೇ ಹೊರತು ಹಾವಲ್ಲ.
ಸರ್ಪದೋಷ ಹಾಗೂ ನಾಗದೋಷ ಎರಡೂ ಒಂದೇ ಅಲ್ಲ..
ನಮ್ಮ ಕೈಯಿಂದ ಸರ್ಪದ ಸಾವಾದರೆ ಸರ್ಪದೋಷ ತಗಲುತ್ತದೆಯೇ ಹೊರತು ನಾಗದೋಷವಲ್ಲ..ನಾಗಗಳು ಪಾತಾಳದಲ್ಲಿ ವಾಸವಿದ್ದವೇ ಹೊರತು ಸರ್ಪಗಳಲ್ಲ..
ನಾಗ ಮತ್ತು ಸರ್ಪ ಎರಡೂ ಒಂದೇ ಅಲ್ಲ. ಹಾಗಿದ್ದರೆ ಎರಡರ ನಡುವೆ ವ್ಯತ್ಯಾಸ ಏನು?

ಹಾಗಿದ್ದರೆ ಈ ನಾಗ ಎಂದರೆ ಯಾರು? ಕುಟುಂಬದ ಮನೆಗಳಲ್ಲಿ ಪೂಜಿಸುವ ನಾಗ ಯಾರು? ಸರ್ಪ ಮೊಟ್ಟೆ ಕಪ್ಪೆಗಳನ್ನು ತಿನ್ನುವುದಾದರೆ ನಾಗಾರಾಧನೆಯಲ್ಲಿ ಅಷ್ಟೊಂದು ಶುದ್ಧಾಚಾರ ಏಕೆ ಪಾಲಿಸುತ್ತಾರೆ?

ನಾವೆಲ್ಲರೂ ನಾಗವಂಶಿಗಳೇ? ಮನುಷ್ಯ ನಾಗ ಯೋನಿಯಲ್ಲಿ ಜನಿಸುತ್ತಾನೆಯೇ? ಈ ಎಲ್ಲಾ ಗೊಂದಲ, ಪ್ರಶ್ನೆಗಳು ನಮ್ಮಲ್ಲಿ ಬಂದಿರಬಹುದಲ್ಲವೇ?

ಸ್ಪಷ್ಟವಾದ ವಿವರಣೆ ನಿಮಗಾಗಿ ಇಲ್ಲಿದೆ.

ನಾಗ ಎಂದರೆ ಅರ್ಧ ಮನುಷ್ಯ ಹಾಗೂ ಅರ್ಧ ಹಾವಿನ ರೂಪವಿರುವ ಪ್ರಜಾತಿ ಮತ್ಸ್ಯ ಪ್ರಜಾತಿಯಂತೆ.

ನಮ್ಮ ಹಿಂದಿನ ತಲೆಮಾರುಗಳಲ್ಲಿ ಯಾವುದೋ ಒಬ್ಬ ತುಂಬಾ ಸಾತ್ವಿಕವಾದ ವ್ಯಕ್ತಿ ತನ್ನ ಮರಣಾನಂತರ ಮತ್ತೆ ಯಾವುದೇ ಯೋನಿಯಲ್ಲಿ ಮರುಜನ್ಮ ತಾಳದೆ ಇದ್ದು ಒಂದು ವೇಳೆ 16 ವರ್ಷಗಳವರೆಗೆ ಆತನಿಗೆ
ಆತನ ವಂಶಸ್ಥರು ಅಥವಾ ಮುಂದಿನ ತಲೆಮಾರಿನವರಿಂದ ಪಿತೃಕಾರ್ಯಗಳು ಸರಿಯಾಗಿ ನಡೆಯದೇ ಇದ್ದು ಅಥವಾ ಸರಿಯಾಗಿ ನಡೆದ ನಂತರವೂ ಆತನ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗದೇ ಉಳಿದರೆ ಹಾಗೂ ಅವರ ಆತ್ಮ ತನ್ನ ಪರಿವಾರದ ಅಥವಾ ಪರಿಸರಕ್ಕೆ ಒಳ್ಳೆಯದು ಮಾಡಬೇಕೆಂದು ಬಯಸಿದ್ದಲ್ಲಿ ಅಂಥವ ಸಂದರ್ಭದಲ್ಲಿ ನಾಗಯೋನಿಯಲ್ಲಿ 
ಜನ್ಮತಾಳುತ್ತದೆ..

ಇಂತಹ ದಿವ್ಯ ಆತ್ಮಗಳು ಅವರ ಪರಿವಾರದವರಿಗೆ ಕನಸಲ್ಲಿ ಕಾಣಿಸಿಕೊಂಡು ತನ್ನನ್ನು ನಂಬಿ ಪೂಜಿಸುವಂತೆ ಸೂಚಿಸುವುದು ನಡೆಯುತ್ತದೆ. 

ಈ ಆಯಾಮಗಳು ನಾವೀಗ ಕಾಣುವಂತಹ ಸಹಜ ಸರ್ಪವಲ್ಲದೆ ನಾಗವಾಗಿರುತ್ತದೆ.  

ನಂತರ ಆ ಪರಿವಾರದವರು ಆ ಗತಿಸಿಹೋದ ಪೂರ್ವಜರ ಹೆಸರು ತಿಳಿದಿದ್ದರೆ ಅವರ ಹೆಸರಿನ‌ ನಾಗನನ್ನು ನಂಬುತ್ತಾ ಬರುತ್ತಾರೆ.

ದಕ್ಷಿಣಭಾರತದಲ್ಲಿ ಇದು ಹೆಚ್ಚಾಗಿ ಪ್ರಚಲಿತದಲ್ಲಿದೆ. 

ಗುಜಾರಾತಿನಲ್ಲಿ ಈ ರೀತಿ ಮನುಷ್ಯರ ಹೆಸರಿನೊಂದಿಗೆ ಪೂಜಿಸುವ ಪದ್ಧತಿ ಇದೆ.. ಇವರನ್ನು ನಾಗ ಗಳನ್ನು 'ಮಹಾರಾಜ್' ಎಂದು ಕರೆಯುತ್ತಾರೆ.‌ ಪ್ರತ್ಯೇಕವಾದ ನಿಜ ಹೆಸರಿನೊಂದಿಗೆ ಕೊನೆಯಲ್ಲಿ 'ಮಹಾರಾಜ್' ಎಂದು ಸೇರಿಸಿ ಪೂಜಿಸುತ್ತಾರೆ.

ಇನ್ನು ನಮ್ಮಲ್ಲಿ ಅದನ್ನು ನಾಗಬ್ರಹ್ಮ (ನಾಗಬೆಮ್ಮೆರ್) ವೆಂದು ಸಾಮಾನ್ಯವಾಗಿ ಒಂದೇ ವರ್ಗಕ್ಕೆ ಸೇರಿಸಲಾಗಿದೆ ಅನಿಸುವುದು ಸಹಜ. ನಾಗರಾಜ ಎಂದು ಕರೆಯುವುದೂ ರೂಢಿಯಲ್ಲಿದೆ.

ಸೂರ್ಯನನ್ನು ಪೂಜಿಸುವವರು ಸೂರ್ಯವಂಶಿ, ಚಂದ್ರನ ಆರಾಧಕರು ಚಂದ್ರವಂಶಿಯಂತೆ ನಾಗನ ಆರಾಧಕರು ನಾಗವಂಶಿ ಎಂದು‌ ಕರೆಯಲ್ಪಡುತ್ತಾರೆ.

ಪ್ರತಿ ಕುಟುಂಬದವರಿಗೂ ಬೇರೆ ಬೇರೆ ಕಡೆ ನಾಗಬನಗಳಿರುವುದರ ಹಿಂದಿನ ರಹಸ್ಯವೂ ಆ ಪರಿವಾರದಲ್ಲಿ ಈ ಹಿಂದೇ ಎಷ್ಟೋ ತಲೆಮಾರುಗಳ ಹಿಂದೆ ಈ ರೀತಿ ಗತಿಸಿ ಮೋಕ್ಷದೊರೆಯದೆ ನಾಗ ಯೋನಿಯಲ್ಲಿ ಇನ್ನೊಂದು (ಜನ ಸಾಮಾನ್ಯರಿಗೆ ತಲುಪಲು ಅಸಾಧ್ಯವಾದ) ಆಯಾಮದಲ್ಲಿ ಜನಿಸಿರುವ ಪೂರ್ವಜರೇ ಆಗಿರುತ್ತಾರೇ ಹೊರತು ಸಾಮಾನ್ಯ ಸರ್ಪಗಳಲ್ಲ..

'ಪತಂಜಲಿ ಸೂತ್ರ' ಬರೆದ ಪತಂಜಲಿ ಇದೇ ನಾಗ ಪ್ರಜಾತಿಗೆ ಸೇರಿದವರು. 

ನಮಗೆಲ್ಲ ಗೊತ್ತಿರುವ ಹಾಗೆ ನಾಗನಿಗೆ ಯಾವತ್ತಿಗೂ ಸಾತ್ವಿಕವಾದ ಆಹಾರವನ್ನು ನೀಡಲಾಗುತ್ತದೆ. ಅದೇ ಸರ್ಪ ಮೊಟ್ಟೆ, ಕಪ್ಪೆ ತಿನ್ನುವುದನ್ನೂ ನೋಡಿರುತ್ತೇವೆ.
ಸರ್ಪಗಳಿಗೆ ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲ.. ಆದರೆ ಅದೇ ನಾಗ ಪ್ರಜಾತಿಗೆ ಇದೆ.
ಹಾಗಾಗಿ ಸರ್ಪಗಳಿಗೆ ಕೆಲವು ಕಡೆ ನೋಡಿರುವಂತೆ ಯಾವುದೇ ಕಾರಣಕ್ಕೆ ನೇರವಾಗಿ ಹಾಲು ಹಾಕುವುದು ತುಂಬಾ ದೊಡ್ಡ ತಪ್ಪು. ಇದರಿಂದ ಸರ್ಪಗಳಿಗೆ ತೊಂದರೆಯಾಗುತ್ತದೆ.

ಇವೆರಡೂ ಸರಿಯಾದ ಜ್ಞಾನವಿಲ್ಲದೆ ಭಕ್ರಿಮಾರ್ಗದಲ್ಲಿ ಕಲಬೆರಕೆಯಾಗಿರುವ ಕಾರಣ ನಮ್ಮ ಧರ್ಮವನ್ನು ಕೀಳಾಗಿ‌ ಕಾಣುವವರಿಗೂ  ನಾವು ಕಲ್ಲಿಗೆ ಹಾಲೆರೆಯುತ್ತೇವೆ ಆದರೆ ಅದೇ ನಿಜವಾದ ಹಾವು ಬಂದರೆ ಹಾಲು ನೀಡುವುದಿಲ್ಲ ಎಂದೆಲ್ಲ ಹೇಳುತ್ತಾರೆ. ಅವರಿಗೂ ಸರಿಯಾಗಿ ತಿಳಿದಿಲ್ಲ..‌ನಮ್ಮವರಿಗೂ ಸರಿಯಾಗಿ ತಿಳಿದಿರುವುದಿಲ್ಲ. 

ಈಗ ನಾಗ ಮತ್ತು ಸರ್ಪಗಳ ನಡುವಿನ ಅಂತರ ತಿಳಿಯದೇ ಭಕ್ತಿಯ ಹೆಸರಲ್ಲಿ, ಭಕ್ತಿಮಾರ್ಗದಲ್ಲಿ ಎಲ್ಲವೂ ಕಲಬೆರಕೆಯಾಗಿದೆ‌‌‌‌.

ಇದೇ ರೀತಿ ಆ ಪೂರ್ವಜರೇನಾದರೂ ತಾಮಸಿಕ (ಮಾಂಸಾಹಾರ ಭಕ್ಷಣೆ ಇತ್ಯಾದಿ) ರೀತಿಯಲ್ಲಿ ಬದುಕು ಸಾಗಿಸಿ ಮೋಕ್ಷ ಸಿಗದೇ ಇದ್ದಾಗ ಆ ಆತ್ಮಗಳು ತಮ್ಮ ಪರಿವಾರಕ್ಕೆ ಸಹಾಯ ಮಾಡಬೇಕು ಎಂಬ ಆಸೆಯಿಂದ ಇದ್ದರೆ ಅವರು ವೀರ ಯೋನಿಯಲ್ಲಿ ಜನಿಸುತ್ತಾರೆ..

ಈ ವೀರ ಯೋನಿ‌ ಹಾಗೂ ಅದರ ಪರಂಪರೆಯ ಹಾಗೂ ವೀರರು ಬಗ್ಗೆ ಹೆಚ್ಚಾಗಿ ಜನಸಾಮಾನ್ಯರಿಗೆ ಹೊರಗಡೆ ಯಾರಿಗೂ ತಿಳಿದಿರುವುದಿಲ್ಲ. ಸ್ವಲ್ಪ ಗೂಢವಾಗಿಯೇ ಇದನ್ನು ಇಟ್ಟಿರುತ್ತಾರೆ.

ನಾಗ ಎನ್ನುವುದು ದೈವಗಳಂತೆ ಆದರೆ ಸಾತ್ವಿಕ ಶಕ್ತಿ. ಹಾಗಿದ್ದರೂ ನಾಗ ಪ್ರಸಾದವನ್ನು ಯಾವುದೇ ಕಾರಣಕ್ಕೂ ನಮ್ಮ ಹುಬ್ಬಿನ ನಡುವೆ ಧರಿಸಬಾರದು. ದೈವದ ಪ್ರಸಾದಕ್ಕೂ ಇದು ಅನ್ವಯವಾಗುತ್ತದೆ.

ಈ ಹಿಂದೆ ತಿಳಿಸಿದಂತೆ ಕೇವಲ ದೇವಿ,ಶಿವ, ವಿಷ್ಣು,ಗಣಪತಿ, ಸುಬ್ರಹ್ಮಣ್ಯ ಈ ಮೂಲ ಪರಬ್ರಹ್ಮ ತತ್ವಗಳ‌ ಪ್ರಸಾದವನ್ನು ಮಾತ್ರ ಹುಬ್ಬುಗಳ ನಡುವೆ ಧರಿಸಬಹುದು.

ಮತ್ತೆ ಉಳಿದ ಯಾವುದೇದೇವರ, ದೈವದ ಪ್ರಸಾದ ನಮ್ಮ ಕಂಠಕ್ಕೆ ಹಾಕಿಕೊಳ್ಳಬೇಕು. ಇಲ್ಲವಾದರೆ ನಾವೇ ನಮ್ಮ ಆತ್ಮಶಕ್ತಿಯನ್ನು ನಮ್ಮ ಮರಣಾನಂತರ ಪರಮಾತ್ಮನಲ್ಲಿ ಒಂದಾಗಿಸುವುದಕ್ಕೆ ನಾವೇ ಅಡ್ಡಗಾಲು ಹಾಕಿದಂತೆ. ಅಷ್ಟೊಂದು ಮಹತ್ತರವಾದ ಗೂಢ ವಿಷಯವಿದು. 
ಈ ಮೊದಲು ತಿಳಿಯದೇ ಹಾಕಿದ್ದರೆ ಪರವಾಗಿಲ್ಲ.. 

ನಂಬಿಕೊಂಡು ಬಂದಿರುವ ಎಲ್ಲ ದೇವರ, ದೈವದ ಆರಾಧನೆ, ಅವರ ಮೇಲಿನ ಗೌರವ ಎಲ್ಲವೂ ಹಾಗೇ ಇರಲಿ. ಆದರೆ ಈ ಒಂದು ವಿಷಯ ನೆನಪಿನಲ್ಲಿಟ್ಟರೆ ಸಾಕು.

ದೈವಗಳನ್ನೂ ಇತ್ತೀಚೆಗೆ ಸಾತ್ವಿಕ ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆ ಆರಂಭವಾಗಿದೆ. ಮಾಂಸಾಹಾರ ಅಥವಾ ಬಲಿ ಪದ್ಧತಿ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ. 

ನಮ್ಮಲ್ಲಿನ ಅನೇಕ ಮಾರಿಯಮ್ಮ ಹಾಗೂ ಉಗ್ರ ಶಕ್ತಿಯರ ದೇವಸ್ಥಾನಗಳನ್ನು ವೈದೀಕರಣ ಮಾಡುತ್ತಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಮಂಗಳಾದೇವಿ,  ಬಪ್ಪನಾಡು, ಸಸಿಹಿತ್ಲು ಭಗವತಿ, ಉರ್ವ, ಬೋಳಾರ ಇತ್ಯಾದಿ ದೇವಸ್ಥಾನಗಳನ್ನು ಕ್ರಮೇಣ ದೇವಿ ಶಕ್ತಿಯ ಸಾತ್ವಿಕ ಅಂಶಗಳೊಂದಿಗೆ ಸೇರಿಸುವ ಕಾರ್ಯ ನಡೆದಿದೆ. ಈ ಹಿಂದೆ ಕಟೀಲನ್ನು ಕೂಡ ವೈದೀಕರಣ ಮಾಡಿರುವುದರ ಬಗ್ಗೆ ಅನೇಕರ ಅಸಮಾಧಾನ ವ್ಯಕ್ತ ಪಡಿಸಿದ್ದರು..
ಮೊದಲಿನಿಂದಲೂ ಉಳ್ಳಾಲ್ತಿ ಎಂದು ಕರೆಯಲ್ಪಡುವ ಶಕ್ತಿಯನ್ನು ವೈದೀಕರಣದ‌ನಂತರ ದುರ್ಗಾಪರಮೇಶ್ವರಿ
ಎಂದು ಕರೆಯುವುದು ವಾಡಿಕೆಗೆ ಬಂತು. ಬಪ್ಪನಾಡಿನ ದುರ್ಗಾಪರಮೇಶ್ವರಿ ಯ ಹೆಸರೂ ವೈದೀಕರಣವಾದ ನಂತರ ಬಂದ ಹೆಸರು ಎನ್ನುತ್ತದೆ ಮೂಲ ಇತಿಹಾಸ.

ಸಾತ್ವಿಕ ಶಕ್ತಿಗಳು ಯಾವುದೇ ರೀತಿಯಲ್ಲಿ ಯಾರಿಗೇ ಆಗಲಿ ತೊಂದರೆ ಉಂಟುಮಾಡುವುದಿಲ್ಲ. ನಂಬಿದವರನ್ನು ಕೈಬಿಡುವುದಿಲ್ಲ. ರಾಜಸಿಕ ಶಕ್ತಿಗಳು ತಮ್ಮನ್ನು ನಂಬಿದವರ ರಕ್ಷಣೆ‌ಮಾಡುತ್ತದೆ. ತಾಮಸಿಕ ಶಕ್ತಿಗಳು ತಮಗೆ ಬೇಕಾದನ್ನು ನೀಡದೇ ಹೋದರೆ ಕೆಲವೊಂದು ಬಾರಿ ನಂಬಿದವರೆಂದೂ ನೋಡದೆ ತಮ್ಮ ಉಗ್ರ ಸ್ವರೂಪವನ್ನೂ ತೋರುತ್ತದೆ. ಇದೇ ಕಾರಣಕ್ಕೆ ಕಾಲಾಂತರದಲ್ಲಿ ಅನೇಕ ಕಡೆ ವೈದೀಕರಣ, ಜೀರ್ಣೋದ್ಧಾರ, ಬ್ರಹ್ಮಕಲಶಗಳಂತಹ ಕೆಲಸಗಳು ಆರಂಭವಾಯಿತು. (ಸಂಗ್ರಹಿಸಿದ್ದು)

Thursday, 17 July 2025

ಯಾರು ಶ್ರೇಷ್ಠರು

***ಯಾರು ಶ್ರೇಷ್ಠರು👇👇***
ದೇವಲೋಕದಲ್ಲಿ ನಾರದ ಮಹರ್ಷಿಗಳು ಹಾಗೂ ತುಂಬುರು ಮಹರ್ಷಿಗಳು ಮಹಾನ್ ಸಂಗೀತ ವಿದ್ವಾಂಸರಾಗಿದ್ದರು ಇಬ್ಬರಿಗೂ ತಮ್ಮ ಜ್ಞಾನದ ಬಗ್ಗೆ ಅಪಾರವಾದ ಹೆಮ್ಮೆಯಿತ್ತು. ಒಮ್ಮೆ ಇಬ್ಬರು ಪರಸ್ಪರ ಮಾತನಾಡುತ್ತಾ ನನ್ನ ಸಂಗೀತ ಜ್ಞಾನವೇ ಅಧಿಕ ನನ್ನ ಸಂಗೀತ ಜ್ಞಾನವೇ ಅಧಿಕ ಇಂದು ಪರಸ್ಪರ ವಾಗ್ವದಕ್ಕೆ ಒಳಗಾದರು ಏನೇ ಮಾಡಿದರಖ ಇಬ್ಬರು ತಮ್ಮ ತಮ್ಮ ಪಟ್ಟುಗಳನ್ನು ಬಿಡಲ್ಲ. ತಮ್ಮ ಜಗಳವನ್ನು ತೀರ್ಮಾನಿಸಲು ವಿಷ್ಣುವಿನ ಬಳಿಗೆ ಹೋದರು. ಆದರೆ ವಿಷ್ಣು ಅವರ ವಾದಗಳನ್ನು ಆಲಿಸುತ್ತಾ ಯಾವ ತೀರ್ಮಾನವನ್ನು ಕೊಡಲಿಲ್ಲ ಏಕೆಂದರೆ ಒಬ್ಬರ ಬಗ್ಗೆ ತೀರ್ಮಾನ ಕೊಟ್ಟರೆ ಮತ್ತೊಬ್ಬರಿಗೆ ಸಿಟ್ಟು ಬರುತ್ತದೆ ಅನ್ಯಾಯವಾಗಿ ಅವರಿಬ್ಬರ ನಡುವೆ ಕಲಹ ಏರ್ಪಡುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದೆನಣಿಸಿದ ಮಹಾವಿಷ್ಣು ಅವರಿಬ್ಬರನ್ನು ಕೂರಿಸಿಕೊಂಡು,
    "ನೀವಿಬ್ಬರು ಮಹಾನ್ ಸಂಗೀತಗಾರರು ಅದರಲ್ಲಿ ಅನುಮಾನವೇ ಇಲ್ಲ ಆದರೆ ನನಗೆ ಸಂಗೀತದ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ ಏಕೆಂದರೆ ನಾನೇನು ಸಂಗೀತವನ್ನು ನುಡಿಸುವುದಿಲ್ಲ.ನಿಮ್ಮ ಸಂಗೀತ ಜ್ಞಾನವನ್ನು ಅಳೆಯಲು ನಾನು ಶಕ್ತನಲ್ಲ. ನಿಮ್ಮ ಸಂಗೀತಜ್ಞಾನವನ್ನು ಅಳೆದು ಅದಕ್ಕೆ ಸೂಕ್ತವಾದ ತೀರ್ಮಾನವನ್ನು ಕೊಡಲು ನನ್ನ ಭಕ್ತನಾದ ಹನುಮಂತನಿಂದ ಮಾತ್ರ ಸಾಧ್ಯ ಅವನು ಈಗ ಹಿಮಾಲಯದ ತಪ್ಪಲಲ್ಲಿ ನನ್ನ ಧ್ಯಾನವನ್ನು ಮಾಡುತ್ತಾ ಕುಳಿತಿದ್ದಾನೆ. ನೀವು ಅಲ್ಲಿಗೆ ಹೋಗಿ ಅವನಿಂದ ನ್ಯಾಯವನ್ನು ಪಡೆಯಿರಿ. ಅವನ ತೀರ್ಮಾನದಿಂದ ನಿಮ್ಮಿಬ್ಬರಲ್ಲಿ ಯಾರು ಖ್ಯಾತ ಸಂಗೀತಗಾರರು ಎಂಬುದು ಬೆಳಕಿಗೆ ಬರುತ್ತದೆ ನೀವು ಹನುಮಂತ ಸಂಪರ್ಕಿಸಿ" ಎಂದು ಹೇಳಿದನು.
    ಅಂತೆಯೇ ನಾರದ ಮಹರ್ಷಿಗಳು ಹಾಗೂ ತುಂಬು ಮಹರ್ಷಿಗಳು ಹನುಮಂತನನ್ನು ಹುಡುಕುತ್ತಾ ಹಿಮಾಲಯದ ತಪ್ಪಲಿಗೆ ಧಾವಿಸಿದರು. ಆದರೆ ಎಷ್ಟೇ ಹುಡುಕಿದರು ಅವರಿಗೆ ಹನುಮಂತನು ಗೋಚರವಾಗಲಿಲ್ಲ. ಆದರೆ ಬೆಟ್ಟದ ಯಾವುದೋ ಒಂದು ಭಾಗದಿಂದ ಸುಶ್ರಾವ್ಯವಾಗಿ ಪಟಿಸುತ್ತಿರುವ ರಾಮಧ್ಯಾನ ಮಾತ್ರ ಕೇಳಿಬರುತ್ತಿತ್ತು.ಆಗ ಅವರು ಹನುಮಂತನನ್ನು ಹುಡುಕುತ್ತಾ ಹುಡುಕುತ್ತಾ ಹೋದಾಗ, ಹಿಮಾಲಯದಲ್ಲಿರುವ ದಟ್ಟವಾದ ಹಿಮದ ಬಂಡೆಗಳಿಂದ ತುಂಬಿರುವ ಪ್ರದೇಶದಲ್ಲಿ ಹನುಮಂತನು ರಾಮಧ್ಯಾನದಲ್ಲಿ ತಲ್ಲೀನರಾಗಿರುವುದು ನೋಡಿದರು.
    ಹನುಮಂತನನ್ನು ಎಷ್ಟು ಬಾರಿ ಕರೆದರೂ ಅವನಿಗೆ ತನ್ನ ಭಕ್ತಿ ಪರಾಕಾಷ್ಠೆಯಲ್ಲಿರುವಾಗ ನಾರದ ಮಹರ್ಷಿಗಳ ಹಾಗೂ ತುಂಬುರರ ಕರೆಗಳು ಕೇಳಿಸಲೇ ಇಲ್ಲ. ಕೊನೆಗೆ ಹನುಮಂತ ನೊಂದಿಗೆ ಇವರೂ ರಾಮಧ್ಯಾನ ವನ್ನು ಪಟಿಸಲು ಪ್ರಾರಂಭಿಸಿದರು ಸಾಕಷ್ಟು ಕಾಲ ರಾಮನನ್ನು ಪ್ರಾರ್ಥಿಸಿದ ಮೇಲೆ ಹನುಮಂತನು ಎತ್ತಲಿಂದಲೋ ರಾಮಧ್ಯಾನ ಕೇಳುತ್ತಿದೆಯಲ್ಲ ಎನ್ನುತ್ತಾ ಕಣ್ಣು ಬಿಟ್ಟನು. ಆಗ ದೂರದಲ್ಲಿ ನಿಂತು ರಾಮನಾಮವನ್ನು ಜಪಿಸುತ್ತಿದ್ದ ನಾರದ ಮಹರ್ಷಿಗಳು ಹಾಗೂ ತುಕಬುಲರನ್ನು ಕಂಡು,
    "ಸ್ವಾಮಿ, ತಮ್ಮಿಬ್ಬರಿಗೂಗೂ ಸಾಷ್ಟಾಂಗ ನಮಸ್ಕಾರಗಳು ಇದೇನು ತಾವು ಇಲ್ಲಿವರೆಗೂ ಪಾದಗಳನ್ನು ಬೆಳೆಸಿದ್ದೀರಿ? ನನ್ನಿಂದ ಏನಾದರೂ ಕಾರ್ಯವಾಗಬೇಕಾಗಿದೆಯೇ? ದಯಮಾಡಿ ತಿಳಿಸಿರಿ ಖಂಡಿತ ಮಾಡಿಕೊಡುವೆ" ಎಂದನು. ಆಗ ನಾರದ ಮಹರ್ಷಿಗಳು,
    ಹನುಮಂತ ನಿನಗೆ ಗೊತ್ತಿರುವಂತೆ ನಾವಿಬ್ಬರೂ ಅಸಾಮಾನ್ಯ ಸಂಗೀತ ವಿದ್ವಾಂಸರು ಈಗ ನಮ್ಮಿಬ್ಬರಲ್ಲೂ ಒಂದು ಸಣ್ಣ ಕಲಹ ಏರ್ಪಟ್ಟಿದೆ. ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬುದು ಗೊತ್ತಾಗಬೇಕಾಗಿದೆ ನಾವಿಬ್ಬರು ವಿಷ್ಣುವಿನ ಮುಂದೆ ನಮ್ಮ ಕಚೇರಿಯನ್ನು ಏರ್ಪಡಿಸಿ ಅವನನ್ನು ತಿಳಿಸಿದ್ದೇವೆ. ವಿಷ್ಣುವಿನ ಬಳಿ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂದು ಕೇಳಿದರೆ ಅದಕ್ಕೆ 
"ನಾನೇನು ದೊಡ್ಡ ಸಂಗೀತ ವಿದ್ವಾಂಸನಲ್ಲ ಇದರ ಬಗ್ಗೆ ನಿಮಗೆ ಸರಿಯಾದ ತೀರ್ಪು ಬೇಕಿದ್ದರೆ ಹೋಗಿ ನನ್ನ ಭಕ್ತನಾದ ಹನುಮಂತನನ್ನು ವಿಚಾರಿಸಿ ಅವನು ನ್ಯಾಯವಾದ ತೀರ್ಪನ್ನು ಕೊಡುತ್ತಾನೆ" ಎಂದು ಹೇಳಿದ. ಅದಕ್ಕೋಸ್ಕರವಾಗಿ ನಾವಿಬ್ಬರೂ ನಿನ್ನ ಬಳಿ ಬಂದಿದ್ದೇವೆ ನಮ್ಮ ಸಂಗೀತಗಳನ್ನು ನಿನಗೆ ಒಪ್ಪಿಸುತ್ತೇವೆ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ತೀರ್ಪನ್ನು ಕೊಡಬೇಕು ಎಂದು ಕೇಳಿಕೊಂಡರು.
    ಅದಕ್ಕೆ ಹನುಮಂತನು ಸಮ್ಮತಿ ನೀಡಿದಾಗ ಒಬ್ಬರಾದ ಮೇಲೆ ಒಬ್ಬರಂತೆ ಒಬ್ಬರು ಮಹರ್ಷಿಗಳು ತಮ್ಮ ವಿದ್ವತ್ತಿನ ಮಹತ್ವವನ್ನು ಸಂಗೀತದ ಮೂಲಕ ಉಣಬಡಿಸಿದರು ತಾಳ್ಮೆಯಿಂದ ಇಬ್ಬರ ಸಂಗೀತಗಳನ್ನು ಕೇಳಿದ ಹನುಮಂತನು,
    "ನೀವಿಬ್ಬರೂ ತುಂಬಾ ಚೆನ್ನಾಗಿ ಸಂಗೀತವನ್ನು ನುಡಿ ಸುತ್ತೀರಿ ಹಾಗಾಗಿ ನಿಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂದು ಹೇಳುವುದೇ ಕಷ್ಟ ಒಬ್ಬರಿಗೆ ಇನ್ನೊಬ್ಬರು ಪೂರಕವಾಗಿ ಹಾಡುತ್ತೀರಿ. ನಮ್ಮ ಎರಡು ಕಣ್ಣುಗಳಲ್ಲಿ ಯಾವ ಕಣ್ಣು ಶ್ರೇಷ್ಠ ಎಂದು ಕೇಳಿದರೆ ಹೇಳುವುದು ಕಷ್ಟ ಎರಡು ಕಣ್ಣುಗಳಂತೆ ನೀವಿಬ್ಬರೂ ಅದ್ಭುತವಾಗಿ ಹಾಡುತ್ತೀರಿ. ಅದರಲ್ಲಿ ಅನುಮಾನವೇ ಇಲ್ಲ.ಆದರೆ ನಾನು ಅಂತಿಮ ತೀರ್ಮಾನ ಕೊಡುವುದಕ್ಕೆ ಮುಂಚೆ ನನ್ನ ಸಂಗೀತ ನಾದವನ್ನು ಕೇಳಿ" ಎಂದು ಹೇಳಿದನು. ಅದಕ್ಕೆ ನಾರದ ಮತ್ತು ತುಂಬುರು ಮಹರ್ಷಿಗಳು ಒಪ್ಪಿಕೊಂಡು ಹನುಮಂತನ ನಾದವನ್ನು ಕೇಳಲು ತಯಾರಾದರು.
    ಹನುಮಂತನ ರಾಮಧ್ಯಾನ ಸಂಗೀತ ಕಚೇರಿಯನ್ನು ಪ್ರಾರಂಭಿಸಿದ. ಅದೆಂತಹ ಭಕ್ತಿ, ಆದೆಂತಹ ಆನಂದ, ಅದೆಂತಹ ತನ್ಮಯತೆ, ಆ ಮಧುರವಾದ ಕಂಠಸಿರಿಗೆ ಹೋಲಿಕೆಯೇ ಇಲ್ಲ, ಆತನು ತನ್ನ ನಾದವನ್ನು ಅರ್ಥಾತ್ ರಾಮನಾಮವನ್ನು ಪಟಿಸುತ್ತಾ ಹೋದಂತೆ ಹಿಮಾಲಯ ಪರ್ವತಗಳಲ್ಲಿ ಇರುವ ಬಂಡೆಗಳೆಲ್ಲ ಕರಗತೊಡಗಿದವು. ಹರಿದುಬಂದ ಆ ನೀರಿನಲ್ಲಿ ಹನುಮಂತ ಮತ್ತು ದುಂಬುರು ಮಹರ್ಷಿಗಳು ಮುಳುಗಿ ಹೋದರು. ಆ ಪ್ರವಾಹವನ್ನು ತಾಳಲಾಗದೆ ಇಬ್ಬರು
    "ಸಾಕು ನಿಲ್ಲಿಸು ಹನುಮಂತ, ನಿನ್ನ ನಾದ ಪ್ರವಾಹವನ್ನು ನಿಲ್ಲಿಸು" ಎಂದು ಹೇಳತೊಡಗಿದರು. ಅವರ ಪ್ರಾರ್ಥನೆಗೆ ಕಿವಿಗೊಟ್ಟ ಹನುಮಂತನು ತನ್ನ ಸಂಗೀತದ ನಾದವನ್ನು ನಿಲ್ಲಿಸಿದನು. ಹನುಮಂತನು ತನ್ನ ಸಂಗೀತ ಪ್ರವಾಹವನ್ನು ನಿಲ್ಲಿಸಿದ ತಕ್ಷಣ ಪ್ರವಾಹದೋಪಾದಿಯಲ್ಲಿ ಹರಿಯುತ್ತಿರುವ ನೀರಿನ ಪ್ರವಾಹವು ಹಾಗೆ ನಿಂತುಹೋಯಿತು. ಔ ಮತ್ತೊಮ್ಮೆ ಹಿಮದ ಬಂಡೆಗಳಾಗಿ ಪರಿವರ್ತನೆಗೊಂಡವು. ಇಬ್ಬರು ಮಹರ್ಷಿಗಳು ಬಂಡೆಗಳ ಮಧ್ಯೆ ಸಿಲುಕಿ ಹಾಕಿಕೊಂಡು ಹೊರಬರಲಾಗದೆ ವಿಲವಿಲ ಒದ್ದಾಡ ತೊಡಗಿದರು. ಆಗ ಹನುಮಂತನೇ ಮತ್ತೊಮ್ಮೆ ತನ್ನ ಸಂಗೀತವನ್ನು ಪ್ರಾರಂಭಿಸಿ ಬಂಡೆಗಳು ಕರಗುವಂತೆ ಮಾಡಬೇಕಾಯಿತು. ಹನುಮಂತನ ಸಂಗೀತ ಸಾಗರದ ಅಸಾಮಾನ್ಯ ಪ್ರತಿಭೆಯನ್ನು ಕಂಡು ಇಬ್ಬರು ಮಹರ್ಷಿಗಳು ಮೂಕಸ್ಮಿತರಾದರು. 
       "ಹನುಮಂತ, ನೀನು ಒಬ್ಬ ಅಸಾಮಾನ್ಯ ಸಂಗೀತಗಾರ, ಏಕೆಂದರೆ ನಿನ್ನ ಸಂಗೀತದಲ್ಲಿ ನಾದದ ಜೊತೆಗೆ ರಾಮನ ಅನನ್ಯವಾದ ಭಕ್ತಿ ಮಿಳಿತವಾಗಿದೆ. ಯಾರಿಂದಲೂ ನಿನ್ನನ್ನು ಮೀರಿಸಲು ಸಾಧ್ಯವಿಲ್ಲ"
 ಎಂದು ಅವನನ್ನು ಹಾಡಿ ಹೊಗಳುತ್ತಾ ಸ್ವರ್ಗದತ್ತ ಪ್ರಯಾಣ ಬೆಳೆಸಿದರು.

Tuesday, 8 July 2025

ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಹಿಂದೆ ನಿಮಗೆ ಗಜಕೇಸರಿ ಯೋಗದ ಬಗ್ಗೆ ತಿಳಿಸಿಕೊಟ್ಟಿದ್ದೆ. ಈ ದಿನ ದೋಷವೊಂದರ ಬಗ್ಗೆ ತಿಳಿದುಕೊಳ್ಳೋಣ. ಪದೇ ಪದೇ ಕೇಳಿರಬಹುದಾದ, ಪರಿಚಿತವಾದ ಪದ ಇದು. ವಿಶೇಷವಾಗಿ ವಿವಾಹ ಸಂದರ್ಭದಲ್ಲಿ ವಧುವಿನ ಕಡೆಯವರು ಚಿಂತೆಗೆ ಈಡಾಗುತ್ತಾರೆ. ಅದಕ್ಕೆ ಕಾರಣ ಜನ್ಮ ಜಾತಕದಲ್ಲಿನ ಕುಜ ದೋಷ. ಹೆಣ್ಣುಮಕ್ಕಳ ಪೋಷಕರನ್ನು ಬಹಳ ಚಿಂತೆಗೆ ಗುರಿ ಮಾಡುವ ಈ 'ಕುಜ ದೋಷ'ದ ಬಗ್ಗೆ ಮಾಹಿತಿ ಇಲ್ಲಿದೆ.

ಈ ಹಿಂದೆ ನಿಮಗೆ ಗಜಕೇಸರಿ ಯೋಗದ ಬಗ್ಗೆ ತಿಳಿಸಿಕೊಟ್ಟಿದ್ದೆ. ಈ ದಿನ ದೋಷವೊಂದರ ಬಗ್ಗೆ ತಿಳಿದುಕೊಳ್ಳೋಣ. ಪದೇ ಪದೇ ಕೇಳಿರಬಹುದಾದ, ಪರಿಚಿತವಾದ ಪದ ಇದು. ವಿಶೇಷವಾಗಿ ವಿವಾಹ ಸಂದರ್ಭದಲ್ಲಿ ವಧುವಿನ ಕಡೆಯವರು ಚಿಂತೆಗೆ ಈಡಾಗುತ್ತಾರೆ. ಅದಕ್ಕೆ ಕಾರಣ ಜನ್ಮ ಜಾತಕದಲ್ಲಿನ ಕುಜ ದೋಷ. ಹೆಣ್ಣುಮಕ್ಕಳ ಪೋಷಕರನ್ನು ಬಹಳ ಚಿಂತೆಗೆ ಗುರಿ ಮಾಡುವ ಈ 'ಕುಜ ದೋಷ'ದ ಬಗ್ಗೆ ಮಾಹಿತಿ ಇಲ್ಲಿದೆ.


ಕುಜ ಅಂದರೆ ಅಗ್ನಿ ತತ್ವದ ಗ್ರಹ. ಜನ್ಮ ಜಾತಕದಲ್ಲಿ ಯಾವ ಸ್ಥಾನಗಳಲ್ಲಿ ಕುಜ ಗ್ರಹ ಇದ್ದರೆ ದೋಷಪೂರಿತ ಆಗುತ್ತದೆ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಅದಕ್ಕೆ ಮುನ್ನ ಕುಜ ದೋಷ ಇದೆ ಎಂದಾಕ್ಷಣ ಭಯ ಪಡುವ ಅಗತ್ಯ ಇಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಧೈರ್ಯಗೆಡಬೇಡಿ.


ಭಾರತದಲ್ಲಿ ಜನಿಸುವವರ ಪೈಕಿ ಶೇಕಡಾ ಅರವತ್ತರಿಂದ ಎಪ್ಪತ್ತರಷ್ಟು ಮಂದಿಗೆ ಕುಜ ದೋಷಕಾರಿಯಾಗಿ ಇದ್ದೇ ಇರುತ್ತದೆ. ಅದೇ ರೀತಿಯಾಗಿ ದೋಷವು ಪರಿಹಾರ ಕೂಡ ಆಗಿರುತ್ತದೆ. ಆದರೆ ಆ ದೋಷ ಪರಿಹಾರ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಂಡರೆ ಆಯಿತು. ದೋಷಕಾರಿ ಹೌದು ಎಂದಾದರೆ ಅದನ್ನು ಪರಿಹರಿಸಿಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.

1, 4, 7, 8, 12ನೇ ಸ್ಥಾನಗಳು

ಕುಜ ದೋಷ ಎಂದರೇನು?

ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು. ಲಗ್ನದಿಂದ ಎರಡು, ನಾಲ್ಕು, ಏಳು, ಎಂಟು ಅಥವಾ ಹನ್ನೆರಡನೇ ಸ್ಥಾನಗಳ ಪೈಕಿ ಯಾವುದೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಅದು ದೋಷವಾಗಿ ಮಾರ್ಪಾಡಾಗುತ್ತದೆ. ಈ ರೀತಿ ದೋಷ ಇರುವವರಿಗೆ ಕುಜ ದೋಷ ಇರುವವರ ಜತೆಗೇ ವಿವಾಹ ಮಾಡಬೇಕು. ಆಗ ಅವರ ಜೀವನ ಚೆನ್ನಾಗಿರುತ್ತದೆ. ಸಂತಾನದಲ್ಲಿ ಸಮಸ್ಯೆಗಳಾಗುವುದಿಲ್ಲ. ಯಾವುದೇ ಸಮಸ್ಯೆಗಳಾಗುವುದಿಲ್ಲ. ಪುರುಷರ ಜಾತಕದಲ್ಲಿ ಲಗ್ನದಿಂದ ಎರಡು, ಏಳು ಅಥವಾ ಎಂಟರಲ್ಲಿ ಇರುವ ಕುಜ ಉಗ್ರ ಸ್ವರೂಪದ ದೋಷವನ್ನು ನೀಡಿದರೆ, ಸ್ತ್ರೀಯರಿಗೆ ಏಳು, ಎಂಟು ಹಾಗೂ ಹನ್ನೆರಡು ಕುಜ ದೋಷ ಉಗ್ರವಾದ ಸ್ಥಾನ. ಆದರೆ ಇದಕ್ಕೆ ಸ್ವಾಭಾವಿಕವಾಗಿಯೇ ಪರಿಹಾರಗಳಿರುತ್ತವ..


ಸ್ವಾಭಾವಿಕ ಪರಿಹಾರಗಳೇನು?

ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ.


ಪರಿಹಾರ ಮಾಡಿಕೊಳ್ಳಲಿಲ್ಲ ಅಂದರೆ ಏನಾಗುತ್ತದೆ?

ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ. ವಿವಾಹ ವಿಚ್ಛೇದನ ಆಗಬಹುದು. ದಂಪತಿ ಮಧ್ಯೆ ಮನಸ್ತಾಪ ಆಗುತ್ತದೆ. ಒಂದೇ ಮನೆಯಲ್ಲಿದ್ದರೂ ವೈವಾಹಿಕ ಸುಖ ಅನುಭವಿಸಲು ಆಗುವುದಿಲ್ಲ. ಸಂತಾನ ಸಮಸ್ಯೆಗಳಾಗುತ್ತವೆ. ಇನ್ನು ಕುಜನನ್ನು ಭೂಮಿ ಪುತ್ರ ಎನ್ನುತ್ತಾರೆ. ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸ ಕೈ ಹಿಡಿಯುವುದಿಲ್ಲ. ರಿಯಲ್ ಎಸ್ಟೇಟ್, ಕೃಷಿ ಪ್ರಗತಿ ಆಗುವುದಿಲ್ಲ. ಆದ್ದರಿಂದ ಕುಜ ದೋಷವುಳ್ಳವರ ಹೆಸರಲ್ಲಿ ಭೂಮಿ ನೋಂದಣಿ ಮಾಡಿಕೊಂಡರೆ ಅದು ಉಳಿಯದೆ, ಮಾರಾಟ ಆಗಿಬಿಡುತ್ತದೆ. ಕಾಯಿಲೆ ಕಾಣಿಸಿಕೊಂಡು, ಅದರ ನಿವಾರಣೆಗಾಗಿ ಹಣಕಾಸಿನ ಅಗತ್ಯ ಕಂಡುಬಂದು, ಆ ಭೂಮಿ ಮಾರಾಟ ಮಾಡಬೇಕಾದ ಸಂದರ್ಭ ಬರುತ್ತದೆ.


ಯಾವ ನಕ್ಷತ್ರಗಳಿಗೆ ಕುಜ ದೋಷ ಇರುವುದಿಲ್ಲ?

ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರಾ ನಕ್ಷತ್ರದವರಿಗೆ ಕುಜ ದೋಷವಿದ್ದರೂ ಶಾಂತಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವರು ವಿವಾಹ ಜೀವನದಲ್ಲಿ ತೊಂದರೆ ಅನುಭವಿಸುತ್ತಲೇ ಇರುತ್ತಾರೆ. ಕೆಲವರು ನಲವತ್ತು-ಐವತ್ತನೇ ವರ್ಷದಲ್ಲಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ. ಹಾಗಂತ ಕುಜ ದೋಷದ ಪರಿಣಾಮ ಕುಜ ದಶೆ, ಕುಜ ಭುಕ್ತಿ, ಗೋಚಾರದಲ್ಲಿ ನಿಮ್ಮ ನಕ್ಷತ್ರಕ್ಕೆ ಕುಜ ಪರಿಣಾಮ ಬೀರುವ ಸ್ಥಿತಿಯಲ್ಲಿ ಬಂದಾಗ ತೊಂದರೆ ಆಗುತ್ತದೆ.



ಕುಜ ದೋಷದ ಪರಿಹಾರ ಮಾರ್ಗಗಳೇನು?

ಕುಜನ ಗಾಯತ್ರಿ ಮಂತ್ರವಾದ ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ ತನ್ನಃ ಕುಜಃ ಪ್ರಚೋದಯಾತ್ ಅನ್ನು ನಿತ್ಯವೂ ಹೇಳಿಕೊಂಡರೆ ಕುಜ ದೋಷದ ಪ್ರಭಾವ ಕಡಿಮೆ ಆಗುತ್ತದೆ. ಕೆಂಪು ವಸ್ತ್ರ ದಾನ ಮಾಡುವುದರಿಂದ, ಯಥಾ ಶಕ್ತಿ ತೊಗರಿಬೇಳೆ ಧಾನ್ಯ ಮಾಡುವುದರಿಂದ, ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದರ್ಶನ ಹಾಗೂ ಅಲ್ಲಿ ಸೇವೆ ಮಾಡುವುದರಿಂದ, ಲಕ್ಷ್ಮಿ ನರಸಿಂಹ ಸ್ವಾಮಿ ಆರಾಧನೆ ಮಾಡುವುದರಿಂದ ಹಾಗೂ ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದ ಕೂಡ ಕುಜ ದೋಷ ಪ್ರಭಾವ ಕಡಿಮೆ ಆಗುತ್ತದೆ. ಆದರೆ ಸ್ವಯಂ ವೈದ್ಯ ಹೇಗೆ ಅಪಾಯಕಾರಿ ಹಾಗೂ ನಿರುಪಯೋಗಿಯೋ ಸ್ವಯಂ ಜ್ಯೋತಿಷ್ಯವೂ ಹಾಗೆಯೇ. ಆದ್ದರಿಂದ ನಿಮ್ಮ ಜಾತಕವನ್ನು ಒಮ್ಮೆ ತಜ್ಞ ಜ್ಯೋತಿಷಿಗಳಲ್ಲಿ ತೋರಿಸಿ. ಯೋಗ-ದೋಷಗಳ ಬಗ್ಗೆ ತಿಳಿದುಕೊಳ್ಳಿ. ಯೋಗವನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳಿ. ದೋಷ ಪರಿಹಾರ ಮಾಡಿಸಿಕೊಳ್ಳಿ.

ಜಾತಕದಲ್ಲಿ ಕಂಡುಬರುವ ಕುಜದೋಷಕ್ಕೆ ಏನು ಪರಿಹಾರ ಗೊತ್ತಾ?

ವ್ಯಕ್ತಿಯ ಮದುವೆಯಲ್ಲಿ ತಡವಾದರೆ ಅಥವಾ ಮದುವೆಯಲ್ಲಿ ಇನ್ನಿತರ ಸಮಸ್ಯೆಗಳು ಕಂಡುಬಂದರೆ ಅದಕ್ಕೆಲ್ಲಾ ಕುಜದೋಷವೇ ಕಾರಣ ಎನ್ನುವುದಾಗಿ ಹೇಳಲಾಗುತ್ತದೆ. ಹಾಗದರೆ ಕುಜದೋಷ ಎಂದರೇನು, ಇದರಿಂದಾಗುವ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳೇನು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.


ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಒಬ್ಬ ಮನುಷ್ಯನಿಗೆ ಒಂದಲ್ಲಾ ಒಂದು ದೋಷಗಳು ಇದ್ದೇ ಇರುತ್ತದೆ. ಶನಿದೋಷ, ಕುಜ ದೋಷ, ಗುರುದೋಷ ಹೀಗೆ ವ್ಯಕ್ತಿಯ ಜೀವನವನ್ನು ಈ ಗ್ರಹಗಳು ಆಧರಿಸುತ್ತವೆ. ಇದರಲ್ಲಿ ಮುಖ್ಯವಾಗಿ ಕಂಡುಬರುವ ದೋಷವೆಂದರೆ ಕುಜ ದೋಷ ಅಥವಾ ಮಂಗಲ ದೋಷ ಅಥವಾ ಮಾಂಗಲಿಕ ದೋಷವೆಂದೂ ಕರೆಯುತ್ತಾರೆ.

ಹಿಂದೂ ಧರ್ಮದಲ್ಲೂ ಕುಜ ದೋಷವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಕುಜದೋಷವು ವ್ಯಕ್ತಿಯ ಜೀವನ, ಮದುವೆ ಮೇಲೆ ಪರಿಣಾಮ ಬೀರುತ್ತದೆ, ಆತನಿಗೆ ದುರಾದೃಷ್ಟವನ್ನು ತರುವುದು ಎನ್ನಲಾಗುತ್ತದೆ. ಕುಜದೋಷವಿರುವವರಿಗೆ ಮದುವೆಯಾಗುವುದಿಲ್ಲ ಅಥವಾ ಕುಜದೋಷವಿರುವವರನ್ನು ಮದುವೆಯಾದರೆ ಸಂಗಾತಿಯು ಕೆಲವೇ ದಿನಗಳಲ್ಲಿ ಮರಣವನ್ನಪ್ಪುತ್ತಾರೆ ಹೀಗೆ ಹಲವು ನಂಬಿಕೆಗಳಿವೆ.

ಕುಜ ಎಂದರೆ
ಬ್ರಹ್ಮ ವೈವರ್ತ ಪುರಾಣದಲ್ಲಿ ಹೇಳುವಂತೆ, ಕುಜ ಭೂಮಿಯ ಪುತ್ರ. 'ಕು' ಎಂದರೆ ಭೂಮಿ, 'ಜ' ಎಂದರೆ ಹುಟ್ಟು. ಭಗವಾನ್‌ ವಿಷ್ಣು ಹಾಗೂ ಭೂದೇವಿಯ ಒಗ್ಗಟ್ಟಿನ ಸಂಕೇತವಾದ ಸಾಗರದಾಳದ ಹವಳದಿಂದ ಹುಟ್ಟಿದವನೇ 'ಕುಜ' ಎನ್ನಲಾಗುತ್ತದೆ. ಹಾಗಾಗಿ ಕುಜನನ್ನು ಭೌಮ ಎಂದೂ ಕರೆಯಲಾಗುತ್ತದೆ. ಕೆಂಪು ಬಣ್ಣದಲ್ಲಿರುವ ಕುಜ ಗ್ರಹದ ಪ್ರಧಾನ ದೇವತೆ ಸುಬ್ರಹ್ಮಣ್ಯ.

ಮಂಗಲ ದೋಷ

ಏನಿದು ಕುಜ ದೋಷ?
ಕುಜ ಎಂದರೆ ಅಗಗ್ನಿ ತತ್ವದ ಗ್ರಹ. ಕುಜ ದೋಷವನ್ನು ಜನ್ಮಕುಂಡಲಿಯಲ್ಲಿ ಲಗ್ನದಿಂದ ನೋಡಲಾಗುತ್ತದೆ. ಲಗ್ನದಲ್ಲಿ ಕುಜನು 1,2,4,7,8 ಹಾಗೂ 12ನೇ ಮನೆಯಲ್ಲಿದ್ದರೆ ಕುಜದೋಷವಿದೆ ಎಂದು ಹೇಳಲಾಗುತ್ತದೆ. ಪುರುಷರ ಜಾತಕದಲ್ಲಿ ಲಗ್ನದಲ್ಲಿ ಎರಡು, ಏಳು ಅಥವಾ ಎಂಟರಲ್ಲಿ ಕುಜನು ಇದ್ದರೆ ಉಗ್ರಸ್ವರೂಒದ ದೋಷ ಕಂಡುಬರುತ್ತದೆ. ಮಹಿಳೆಯರಲ್ಲಿ ಏಳು, ಎಂಟು ಹಾಗೂ ಹನ್ನೆರಡನೇ ಮನೆಯಲ್ಲಿದ್ದರೆ ಕುಜ ದೋಷದ ಸ್ವರೂಪ ಹೆಚ್ಚಾಗಿರುತ್ತದೆ. ಮಾಂಗಲಿಕ ದೋಷವಿರುವವರಿಗೆ ಮಂಗಳಗ್ರಹವು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಂಗಳಕಾರ್ಯದಲ್ಲಿ ತೊಡಕುಗಳು ಎದುರಾಗುತ್ತದೆ.

ಕುಜದೋಷದದ ಲಕ್ಷಣಗಳು
ಜನ್ಮಕುಂಡಲಿಯ ಮೊದಲ ಮನೆಯಲ್ಲಿ ಕುಜನಿದ್ದರೆ ವೈವಾಹಿಕ ಜೀವನದಲ್ಲಿ ಕಲಹ ಹಾಗೂ ಹಿಂಸೆ ಕಂಡುಬರುತ್ತದೆ. ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹವಿರುವವರು ಆಕ್ರಣಕಾರಿಗಳು ಮತ್ತು ಅಸಭ್ಯರಾಗಿರುವವರು. ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು 1ನೇ ಮನೆಯಲ್ಲಿ ಮಂಗಳವಿರುವ 4ನೇ ಅಂಶದ ಲಕ್ಷಣ . 7ನೇ ಅಂಶವೆಂದರೆ ಚಿಂತೆ ಹಾಗೂ ಪತಿ ಹಾಗೂ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ತಂದಿಡುವುದು. ಎಂಟನೇ ಅಂಶವೆಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯವನ್ನು ತಂದಿಡಬಹುದು

ಎರಡನೆಯ ಮನೆಯಲ್ಲಿ ಕುಜನಿದ್ದರೆ ವ್ಯಕ್ತಿಯ ಮದುವೆ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆಯಾಗಬಹುದು, ಮಂಗಳ ಗ್ರಹವು ಎರಡನೇ ಮನೆಯಲ್ಲಿದ್ದರೆ ವ್ಯಕ್ತಿಯ ಕುಟುಂಬದೊಂದಿಗಿನ ಸಂಬಂಧದೊಂದಿಗೆ ಪರಿಣಾಮ ಬೀರುವುದು. ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳವನ್ನುಂಟು ಮಾಡಬಹುದ

ನಾಲ್ಕನೇ ಮನೆಯಲ್ಲಿ ಕುಜನಿದ್ದರೆ ವೃತ್ತಿಯಲ್ಲಿ ಯಶಸ್ಸು ಸಿಗದು ಹಾಗೂ ಪದೇ ಪದೇ ಉದ್ಯೋಗ ಬದಲಿಸಬೇಕಾಗಬಹುದು. ಮಂಗಳನು ನಾಲ್ಕನೇ ಮನೆಯಲ್ಲಿದ್ದರೆ ಸ್ಥಿರ ಸಂಪತ್ತು ಹಾಗೂ ಸಮೃದ್ಧಿ ಕಂಡುಬರುವುದು, ಆದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವವು

ಕುಜನು ಏಳನೇ ಮನೆಯಲ್ಲಿದ್ದರೆ ವ್ಯಕ್ತಿಯ ಶಕ್ತಿಯು ಕ್ರೋಧದಲ್ಲಿ ವ್ಯಯವಾಗುವುದು, ತನ್ನಲ್ಲಿರುವ ಅಧಿಕಾರ ಸ್ಥಾಪಿಸುವ ಗುಣದಿಂದಾಗಿ ಮನೆಯಲ್ಲಿ ಹೊಂದಾಣಿಕೆ ಕಂಡುಬರದು. ಈ ದೋಷವಿರುವವರು ಅನಾರೋಗ್ಯ ಹೊಂದಿರುವ ಪತ್ನಿಯನ್ನು ಪಡೆಯಬಹುದು ಅಥವಾ ಮಹಿಳೆಯರಿಗೆ ದೋಷವಿದ್ದರೆ ಬಹಳ ಕೋಪಿಷ್ಠ ಪತಿ ಸಿಗಬಹುದು
ಕುಜದೋಷ

ಕುಜನು ಎಂಟನೇ ಮನೆಯಲ್ಲಿದ್ದರೆ ಆಗ ವ್ಯಕ್ತಿಯು ಪೋಷಕರಿಂದ ದೂರವಾಗುವನು. ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳಬೇಕಾಗುವುದು. ಮಂಗಳನು ವೈವಾಹಿಕ ಜೀವನದಲ್ಲಿ ಖಿನ್ನತೆ ಉಂಟುಮಾಡಬಹುದು. ಆರ್ಥಿಕ ಪರಿಸ್ಥಿತಿ, ಸಂಗಾತಿಯ ಅನಾರೋಗ್ಯ ಮತ್ತು ಇನ್ನಿತರ ಕಾರಣಗಳಿಂದ ಖಿನ್ನತೆ ಉಂಟಾಗಬಹುದು. ಹನ್ನೆರಡನೆ ಮನೆಯಲ್ಲಿ ಕುಜನಿದ್ದರೆ ಮಾನಸಿಕ ಸಮಸ್ಯೆ, ಆರ್ಥಿಕ ನಷ್ಟ ಹಾಗೂ ಶತ್ರುಗಳು ಹೆಚ್ಚಾಗುವರು

ಕುಜ ದೋಷ ಪರಿಹಾರ ಕ್ರಮಗಳು
  • ಮಂಗಲ ದೋಷವಿರುವ ಹುಡುಗ ಮತ್ತು ಹುಡುಗಿ ಮದುವೆಯಾದರೆ ದೋಷವು ನಿವಾರಣೆಯಾಗುವುದು
  • ಕುಜದೋಷವಿರುವವರಿಗೆ ಕುಂಭ ವಿವಾಹ ಮಾಡಿದರೆ ದೋಷ ದೂರವಾಗುವುದು
ಕುಂಭ ವಿವಾಹ: ಮದುವೆಯಾಗುವ ಹುಡುಗ ಅಥವಾ ಹುಡುಗಿಗೆ ಜಾತಕದಲ್ಲಿ ಮಂಗಲ ದೋಷ ಕಂಡು ಬಂದರೆ, ದೋಷದ ಋಣಾತ್ಮಕ ಪರಿಣಾಮಗಳನ್ನು ನಿವಾರಿಸಲು ಕುಂಭ ವಿವಾಹ ಎನ್ನುವ ವಿಧಿಯನ್ನು ಮಾಡಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ದೋಷವಿರುವ ವ್ಯಕ್ತಿಯು ಬಾಳೆಗಿಡ, ಅಶ್ವತ್ಥ ಮರ ಅಥವಾ ವಿಷ್ಣುವಿನ ಬೆಳ್ಳಿ ಅಥವಾ ಚಿನ್ನದ ಮೂರ್ತಿಯನ್ನು ವಿವಾಹವಾಗಬೇಕು
ಕುಜದೋಷ ನಿವಾರಣೆಗೆ ಪರಿಣಾಮಕಾರಿ ಪರಿಹಾರವೆಂದರೆ ಮಂಗಳವಾರದ ಉಪವಾಸ. ದೋಷವಿರುವವರು ಈ ದಿನ ಉಪವಾಸ ಮಾಡಿ ಬರಿ ತೊಗರಿ ಬೇಳೆಯಿಂದ ಮಾಡಿದ ಆಹಾರವನ್ನು ಮಾತ್ರ ಸೇವಿಸಬೇಕು

ಇದನ್ನೂ ಓದಿ ಶನಿ ನಿಮ್ಮ ಹೆಗಲೇರಿದೆಯೇ? ಇಲ್ಲಿದೆ ನೋಡಿ ಪರಿಹಾರ ಕ್ರಮಗಳು

ಮಂತ್ರ ಪಠಣ

  • ಕುಜದೋಷ ನಿವಾರಿಸಲು ಮಂಗಳವಾರ ಮಂಗಲ ಮಂತ್ರವನ್ನು ಪಠಿಸಬೇಕು. " ಓಂ ಆಂ ಅಂಗಾರಕಾಯ ನಮಃ| ಓಂ ಭೌಂ ಭೌಮಾಯ ನಮಃ'' ಈ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದು
  • ಕುಜ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಕುಜ ದೋಷದ ಪ್ರಭಾವ ಕಡಿಮೆಯಾಗುವುದು
    'ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ, ತನ್ನೋ ಕುಜಃ ಪ್ರಚೋದಯಾತ್‌'
  • ಮಂಗಲಿಕ ದೋಷವಿರುವವರು ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್‌ ಚಾಲೀಸವನ್ನು ಪಠಿಸಬೇಕು
    ನಮಃ ಸುರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ
    ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ
  • ಮಂಗಳವಾರದಂದು ಪೂಜೆ ಮಾಡುವುದು ಹಾಗೂ ದೇವಸ್ಥಾನಗಳಿಗೆ ಹೋಗುವುದರಿಂದ ಮಂಗಲದೋಷವನ್ನು ಕಡಿಮೆ ಮಾಡಿಕೊಳ್ಳಬಹುದು
  • ಜ್ಯೋತಿಷ್ಯದ ಪ್ರಕಾರ ಮಂಗಲ ದೋಷ ಅಥವಾ ಕುಜ ದೋಷವಿರುವವರು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು
  • ಕುಜದೋಷವಿರುವವರು 28ರ ಹರೆಯದ ನಂತರ ಮದುವೆಯಾಗಬೇಕು, ವಯಸ್ಸಾದಂತೆ ದೋಷದ ಪ್ರಭಾವವೂ ತಗ್ಗುವುದು
  • ಕುಜ ದೋಷವಿರುವವರು ಮಂಗಳವಾರದ ದಿನ ದಾನ ಮಾಡಿದರೆ ದೋಷದ ಪ್ರಭಾವ ತಗ್ಗುವುದು. ಕೆಂಪು ವಸ್ತ್ರ, ಆಹಾರ ಮುಖ್ಯವಾಗಿ ತೊಗರಿ ಬೇಳೆಯಿಂದ ಮಾಡಿದ ಆಹಾರ ಅಥವಾ ತೊಗರಿ ಬೇಳೆ ದಾನ ಮಾಡಬೇಕು.
  • ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರ ದರ್ಶನ ಹಾಗೂ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದಲೂ ದೋಷದ ಪ್ರಭಾವ ತಗ್ಗುವುದು
  • ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದಲೂ ಕುಜ ದೋಷ ನಿವಾರಣೆಯಾಗುವುದು.
ಕುಜ ದೋಷವಿರದ ನಕ್ಷತ್ರಗಳು
ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯಾ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಭಾದ್ರಾ ನಕ್ಷತ್ರದವರಿಗೆ ಕುಜದೋಷವಿದ್ದರೂ ಶಾಂತಿ ಮಾಡಿಸಿಕೊಳ್ಳುವ ಅಗತ್ಯವಿಲ್ 

ಅಂಗಾರಕನೇ ಸುಬ್ರಹ್ಮಣ್ಯ

ಅಂಗಾರಕನೇ ಸುಬ್ರಹ್ಮಣ್ಯ

ಸುಬ್ರಹ್ಮಣ್ಯನಿಂದ ಪಂಚಪಾತಕ ದೋಷ ನಿವಾರಣೆಯಾಗುತ್ತದೆ ಎನ್ನುವುದು ಶಾಸ್ತ್ರದ ಅಭಿಮತ. ಜನ್ಮ ಕುಂಡಲಿಯಲ್ಲಿ ಕುಜ ಅಥವಾ ಸುಬ್ರಹ್ಮಣ್ಯನ ಪ್ರಭಾವ ಹೇಗಿದೆ ಎಂದು ನೋಡೋಣ.

ಷಷ್ಠಿ ಏನಿದರ ಸೃಷ್ಟಿ

ಸುಬ್ರಹ್ಮಣ್ಯನಿಂದ ಪಂಚಪಾತಕ ದೋಷ ನಿವಾರಣೆಯಾಗುತ್ತದೆ ಎನ್ನುವುದು ಶಾಸ್ತ್ರದ ಅಭಿಮತ. ಜನ್ಮ ಕುಂಡಲಿಯಲ್ಲಿ ಕುಜ ಅಥವಾ ಸುಬ್ರಹ್ಮಣ್ಯನ ಪ್ರಭಾವ ಹೇಗಿದೆ ಎಂದು ನೋಡೋಣ.

* ಮಂಡಗದ್ದೆ ಪ್ರಕಾಶ್‌ಬಾಬು

ಪಾಡ್ಯದಿಂದ ಬರುವ ಆರನೆಯ ದಿನವೇ ಷಷ್ಠಿ. ಮಾರ್ಗಶಿರ ಮಾಸ ಶುಕ್ಲಪಕ್ಷದ ಷಷ್ಠಿಯೇ ಸುಬ್ರಹ್ಮಣ್ಯ ಷಷ್ಠಿ. ಸುಬ್ರಹ್ಮಣ್ಯ ಆರಾಧನೆಗೆ ಪ್ರಶಸ್ತವಾದ ದಿನ. ಸುಬ್ರಹ್ಮಣ್ಯ ಜನನ ದಿನವೆಂದೂ ಹೇಳುತ್ತಾರೆ. ಪರಾಶರ ಮುನಿಗಳು ಸುಬ್ರಹ್ಮಣ್ಯನ ಎಲ್ಲಾ ಗುಣಗಳನ್ನು ಕುಜ (ಅಂಗಾರಕ)ನಲ್ಲಿ ತುಂಬುತ್ತಾರೆ. ಸುಬ್ರಹ್ಮಣ್ಯನ ಉಪಾಸನೆಗೆ ಕುಜನೇ ಕಾರಕನೆಂದು ಕಶ್ಯಪ, ಅತ್ರಿ ಮತ್ತು ಕಣ್ವ ಮುನಿಗಳು ತಿಳಿಸಿದ್ದಾರೆ. ಸುಬ್ರಹ್ಮಣ್ಯನ ಜನನ ಪಂಚಾಗ್ನಿಗಳಿಂದ ಆದ ಕಾರಣ ಅವನಲ್ಲಿ ಅಗ್ನಿ ತತ್ವ, ಜಲ ತತ್ವ, ವಾಯು ತತ್ವ, ಆಕಾಶ ತತ್ವ, ಭೂ ತತ್ವ ಕಾರಕನಾಗಿದ್ದಾನೆ. ಆ ಕಾರಣ ಸುಬ್ರಹ್ಮಣ್ಯನ ಉಪಾಸನೆಯಿಂದ ಪಂಚ ಪಾತಕ ದೋಷಗಳು ನಿವಾರಣೆಯಾಗುತ್ತವೆ.

ಕುಂಡಲಿಯಲ್ಲಿ ಕುಜ :

ಮೇಷ ಮತ್ತು ವೃಶ್ಚಿಕ ರಾಶಿ ಕುಜನ ಸ್ವಂತ ಮನೆಯಾಗಿದೆ. ಈತ ಸ್ವಭಾವದಲ್ಲಿ ಕ್ರೂರ. ಒಂದು ರಾಶಿಯಲ್ಲಿ ಸುಮಾರು 45 ದಿನ ಇರುವನು. ಕುಜನಿಗೆ ಗುರು, ಚಂದ್ರ, ರವಿ ಮಿತ್ರರು. ಬುಧ ಶತ್ರು ಗ್ರಹ. ಶುಕ್ರ ಮತ್ತು ಶನಿ ಸಮನಾಗಿದ್ದಾನೆ. ಈತನ ದೆಶೆ 7 ವರ್ಷ. ಧಾನ್ಯ ತೊಗರಿ ಬೇಳೆ. ಲಗ್ನ ಭಾವದಿಂದ ಐದನೇ ಮನೆಯಲ್ಲಿ ಕುಜನಿದ್ದರೆ ಸಂತಾನಕ್ಕೆ ತೊಂದರೆ ಆಗಬಹುದು. ಲಗ್ನದಿಂದ ಚಂದ್ರನಿಂದ ಮತ್ತು ಶುಕ್ರನಿಂದ 1,2,4,5,7, 12ರಲ್ಲಿ ಕುಜನಿದ್ದರೆ ಕುಜ ದೋಷ. ಪುರುಷನಿಗೆ 2, 7, 8 ರಲ್ಲಿ ಇದ್ದರೆ ಹಾಗೂ ಮಹಿಳೆಗೆ 4,8, 12ರಲ್ಲಿ ಇದ್ದರೆ ಕುಜ ದೋಷ ಹೆಚ್ಚಿರುತ್ತದೆ. ಕುಜ ಮತ್ತು ಚಂದ್ರ ಒಂದೇ ಮನೆಯಲ್ಲಿದ್ದರೆ ಲಕ್ಷ್ಮೇನಾರಾಯಣ ಯೋಗ ಉಂಟಾಗುತ್ತದೆ. ಕುಜನು ಚಂದ್ರನ ನಕ್ಷತ್ರದಲ್ಲಿದ್ದು ಆ ಚಂದ್ರನನ್ನು ಗುರು ನೋಡಿದರೆ ಗುರುವನ್ನು ಶುಕ್ರನು ನೋಡಿದರೆ ಆತ ಸುಬ್ರಹ್ಮಣ್ಯನ ಆರಾಧನೆಯಿಂದ ಸಿದ್ಧಿ ಮಾಡಿಕೊಂಡು ನೂರಾರು ಜನರಿಗೆ ಅದನ್ನು ಸದ್ವಿನಿಯೋಗ ಮಾಡಿ ಖ್ಯಾತಿ ಹೊಂದುತ್ತಾನೆ.

ಪುನರ್ವಸು ನಕ್ಷತ್ರದ 4ನೇ ಪಾದದಲ್ಲಿ ಕುಜನಿದ್ದರೆ, ಗುರು ಬಲಿಷ್ಟನಾದರೆ ಜಪವನ್ನು ಮಾಡಿ ಸುಬ್ರಹ್ಮಣ್ಯನನ್ನು ಒಲಿಸಿಕೊಳ್ಳಬಹುದು. ವಿಶಾಖ ನಕ್ಷತ್ರದ 4ನೇ ಪಾದದಲ್ಲಿ ಕುಜನಿದ್ದರೆ, ನದಿ ತೀರ, ಸಮುದ್ರ ತೀರದ ಹತ್ತಿರ ಜಪ ಮಾಡಿ ಸುಬ್ರಹ್ಮಣ್ಯನನ್ನು ಒಲಿಸಿಕೊಳ್ಳಬಹುದು.

ಪೂರ್ವಾಭಾದ್ರ ನಕ್ಷತ್ರದ 4ನೇ ಪಾದದಲ್ಲಿ ಕುಜನಿದ್ದರೆ, ಆತ್ಮೋದ್ಧಾರಕ್ಕಾಗಿ, ಮೋಕ್ಷಕ್ಕಾಗಿ ಕಠಿಣ ಸಾಧನೆ ಮಾಡುತ್ತಾನೆ. ಲಗ್ನದಿಂದ ಕುಜ ಮತ್ತು ಗುರು 5ನೇ ಮನೆಯಲ್ಲಿದ್ದರೆ ಸುಬ್ರಹ್ಮಣ್ಯನ ಆರಾಧನೆಯಿಮದ ಆತ್ಮಜ್ಞಾನ ಪಡೆಯುತ್ತಾನೆ.

ಕಥೆಯೊಂದರ ಪ್ರಕಾರ ಸುಬ್ರಹ್ಮಣ್ಯ ನವಿಲು ಮತ್ತು ಕೋಳಿಯನ್ನು ಇಟ್ಟುಕೊಂಡು ಆಟವಾಡುತ್ತಿದ್ದನಂತೆ. ಇದನ್ನು ನೋಡಿದ ಪರಾಶರ ಮುನಿಗಳು ಕೋಳಿಯ ಕಾರಕತ್ವವನ್ನು ಕುಜನಿಗೆ ಕೊಡುತ್ತಾರೆ. ಆದ್ದರಿಂದ ಜಾತಕದಲ್ಲಿ ಕುಜನು ಬಲಿಷ್ಠನಾಗಿದ್ದರೆ ಆ ಜಾತಕದವರು ಕೋಳಿ ವ್ಯಾಪಾರ, ಕೋಳಿ ಫಾರಂ ಅಥವಾ ಮೊಟ್ಟೆ ವ್ಯಾಪಾರವನ್ನು ಮಾಡುತ್ತಾರೆ ಎಂದು ಗ್ರಹಿಸಬಹುದು. ಆದರೆ ಶನಿ ದೃಷ್ಟಿ ಇದ್ದರೆ ವ್ಯಾಪಾರ ನಷ್ಟವಾಗುತ್ತದೆ. ರಾಹು ಸಂಪರ್ಕವಿದ್ದರೆ ಕೋಳಿಗಳ ಸಂತಾನ ನಾಶವಾಗುವ ಸಾಧ್ಯತೆ ಹೆಚ್ಚು.

ಪರಿಹಾರ

ಸಂತಾನಕ್ಕೆ ಮತ್ತು ವಿವಾಹಕ್ಕೆ ಅಡೆತಡೆ ಇದ್ದರೆ ಸುಬ್ರಹ್ಮಣ್ಯನ ಆರಾಧನೆ ಅಂದರೆ ಆಶ್ಲೇಷ ಬಲಿ, ಸರ್ಪ ಸಂಸ್ಕಾರ ಮಾಡಿ ದೋಷ ಪರಿಹಾರ ಮಾಡಿಕೊಳ್ಳಬಹುದು.

ಸುಬ್ರಹ್ಮಣ್ಯ ಷಷ್ಠಿಯ ದಿನ ಹುತ್ತ ಇದ್ದಲ್ಲಿಗೆ ಹೋಗಿ ಪೂಜಿಸಿದರೆ ಸರ್ಪದೋಷ, ಕುಜದೋಷ, ನೇತ್ರ ಭಾದೆ, ಚರ್ಮವ್ಯಾಧಿಗಳು ಪರಿಹಾರವಾಗುತ್ತವೆ.