Saturday, 30 September 2023

Story of Ananthapadmanabha Vrata:-

#ರಮ್ಯಪುರಾಣಪುಣ್ಯಕಥೆಗಳು 

Story of Ananthapadmanabha Vrata:-

This year, Anantha Chaturdashi will be celebrated on September 28. This auspicious day is dedicated to worship Vishnu. Lord Vishnu is called Anantha, which means there is no end.

Sri Gurubhyo Namaha

Soota Maharishi will tell this story toilets in Nimasaranya. Dharmarajan who is living in the forest by being a devotee on the banks of Bhagirathi river in the east
He used to work the hardest. Yudhishthira who bowed down to Sri Krishna who came there as a great man at that time, Shri Krishna, the idol of mercy, with my brothers, we are suffering deeply from exile. When asked to tell me if there is any vratha to overcome these difficulties, there is a vratha called 'Anantha Vratha' which gives all the sex to men and women. Dharmarayan tells Krishna to tell the story of that vratha to be performed on Shukla Paksha Chaturdashi in Bhadrapada month.

There was a Brahmin named Sumantha in the era of artificial age. He belongs to Vasista clan. He had completed his studies. He married a virgin named 'Deeksha', daughter of Bhrugu Maharshi. 'Deeksha' Devi became pregnant and gave birth to a baby girl with all qualities. The child was named 'Sheela'. Deeksha Devi died of extreme fever. Then Sumantha married a virgin named 'Karkasha' so that he would not be troubled by the activities of Yajna. She was also a quarrel bell with a very cruel nature.

When daughter 'Sheela' got married, Sumantha gave her daughter to the great Majesty 'Koundinya' sages and married. Sending her husband's house, when asked the wife to give her son-in-law some clothes, she said there is nothing to give. Without finding any other way, Sumantha gave the remaining flour that he brought for the wedding and sent his son-in-law's daughter. Koundinya went to his asylum in a cart with a rich manner wife.

Park a cart on a river bank in the middle of the way,
The county’s headed to the river to make an afternoon since it’s noon. On that day, 'Anantha Chaturdashi', so many women wore red sarees and worshiped Anantha Padmanabha Swamy with great devotion. Koundinya's sheela saw it, went to him and asked, "Mothers, what is the worship you are worshiping, what is the name of it, tell me a little too."

The women, "we are worshipping the infinity. Today is Bhadrapada Shukla Chaturdashi. If Mahavishnu is worshipped with Anantha and Yamuna today, all your wishes will be fulfilled.
Sheela, who was happy to know this, made a vrata with her help, tied Anantha's thread in hand, gave the flour to Brahmins and gave some food to her husband
She ate the leftover and came to the asylum with her husband. Immediately after visiting the Ashram, by the grace of Anantha Swamy, the infinite supreme world-like wealth was found with the glory of Vratha Swami. Koundinya Mahamuni's Ashram shined with guest treats from all the wealth and grains. Sheela wore all the jewels and became equal to Savithri. The relatives who saw this were talking that she is happy by the grace of Ananthapadmanabha.

So once a county saw the red thread in his wife's hand, to ask what it was, she informed about infinity vrata and as a result of fasting, she has received wealth and wealth by the grace of the Lord. Angry countinas over hearing this, claim all the grain they have received, as a result of their penance, removing the thread from their wife's hand and set it into a nearby fire. Sheela immediately ran out of fear and removed the thread and put it in milk and saved it. (Normally, when women make any vrata stories, tie a thread and dissolve it, we put it on the plants where milk comes in milk. Plant where milk comes is, poisonous, flowering plant. ) Because of this act of Koundinya, his wealth was destroyed day by day. Counties who realize this know that this happened because of their ego, they wander in the woods search for the very infinity. After suffering a lot of difficulty, Ananthanu appreciates his loyalty and devotion and blesses him. Then the countinas celebrate the Anantha's vratha, gained wishes from its influence, experience all wealth, salvation in thisparagus and still shining as a 'rehabilitation star' amongst the tribes.

From this story in Bhaishyottarapurana, it is a vratha to imagine the Mahatma of Ananthapadmanabha Swamy in Anantha, who gives infinite boons, 'Anantha Padmanabha Mahavishnuvu, Anantha Milana Vratha in Padmanaba. This is called 'Moksha Vrata'. It is said that this vratha was told by Sri Krishna to the Pandavas in exile and made Dharmaraja to do vratha and led to their victory. Celebrated by Agastya Maharshi
Janaka, Sagar, Dilipa, Harishchandra, Bharatadis celebrate this vratha
Because of its influence, he happily followed the state and became famous.

"Akashhat Patitam Toyam Yatha Gachhati Sagaram,
Salutations to all: Keshava Pratigachhati.
Everyone is happy Santhu Survey Santhu Niramaya
Survey Bhadrani Pashyantu Maa Kashchith sad Bhagbhaveth"

As the water falling from the sky reaches the ocean, the salutation done to all the gods will reach Keshava. May all be happy, may all be healthy, may all see good, may no one see sorrow.

With greetings,
Written by:- Asha Nagabhushan. 

ಕಲ್ಕಿ ಅವತಾರ

ಕಲ್ಕಿ ಅವತಾರ  :-

ಧರ್ಮ ನಾಶವಾಗಿ ಅಧರ್ಮ ತಲೆ ಎತ್ತಿ ದುಷ್ಟರ ಕೃತ್ಯ ಹೆಚ್ಚಾದಾಗ ಪಾಪದ ಕೊಡ ತುಂಬಿದಾಗ ಭಗವಂತ ಅವತಾರ ಎತ್ತಿ ಬರುತ್ತಾನೆ ಎನ್ನುವುದು ನಮಗೆ ಭಗವಂತ ವಿಷ್ಣುವಿನ ದಶಾವತಾರ ಗಳಿಂದ ತಿಳಿಯುತ್ತದೆ. ತ್ರೇತಾಯುಗದಲ್ಲಿ ರಾವಣನ ಸಂಹಾರ ಮಾಡಲು ರಾಮ ಅವತಾರ ಎತ್ತಿದ ಹಾಗೆ ದ್ವಾಪರದಲ್ಲಿ ಕಂಸನ ಸಂಹಾರ ಮಾಡಲು 'ಕೃಷ್ಣ' ಅವತಾರವೆತ್ತಿ ಬರುತ್ತಾನೆ. ಅದೇ ರೀತಿ ಕಲಿಕಾಲದಲ್ಲಿ ಕಲಿಯ ಆರ್ಭಟ ಜಾಸ್ತಿಯಾದಾಗ ಧರ್ಮ ರಕ್ಷಣೆ ಮಾಡಲು ಭಗವಂತ ಅವತಾರ ಎತ್ತಿ ಬರುತ್ತಾನೆ ಎಂದು ಭಾಗವತದಲ್ಲೂ ತಿಳಿಸಿದ್ದಾರೆ. ಹಿಮಾಲಯದ ತಪ್ಪಲಲ್ಲಿರುವ 'ಶಂಭಲಾ' ಎಂಬ ಗ್ರಾಮದಲ್ಲಿ' ವಿಷ್ಣುವೀಷ' ಎಂಬ ಬ್ರಾಹ್ಮಣ ನಿದ್ದನು. ಇವನ ಪತ್ನಿ ಸುಮತಿ. ಇವನು ದಾನ ಧರ್ಮದಂಥ ಪುಣ್ಯಕಾರ್ಯ ಗಳನ್ನು ಮಾಡಿ ಭಗವಂತನನ್ನು ಧ್ಯಾನಿಸುತ್ತಾ ಪೂಜಿಸುತ್ತಾ ನೇಮ ನಿಷ್ಠ ನಾಗಿದ್ದನು. ಇವರಿಗೆ ನಾಲ್ಕು ಜನ ಮಕ್ಕಳು ಕವಿ -ಪ್ರಾಜ್ಯ ಸುಮಂತ, ಎಂಬ ಮೂರು ಮಕ್ಕಳನ್ನು ಪಡೆದು ನೆಮ್ಮದಿಯ ಸಂಸಾರ ಸಾಗಿಸುತ್ತಿದ್ದ. ಈ ಬ್ರಾಹ್ಮಣನ ಸಂಸಾರ ಮತ್ತು ಮನೆ ಆ ಗ್ರಾಮಕ್ಕೆ ಮಂಗಳಕರವಾಗಿ ಶೋಭಾಯಮಾನವಾಗಿತ್ತು.

ಸುಮತಿ ನಾಲ್ಕನೇ ಗರ್ಭ ಧರಿಸಿ ದಿನ ತುಂಬಿದಾಗ ಮುದ್ದಾದ ಗಂಡು ಮಗು ವಿಗೆ ಜನ್ಮ ನೀಡಿದಳು. ಆಗ ಬಂದ ಜ್ಯೋತಿಷ್ಯರು- ಋಷಿಮುನಿಗಳು ಮಗು ವನ್ನು ನೋಡಿ ಈ ಮಗು ಸಾಧಾರಣವಾದ ಮಗುವಲ್ಲ ಸಾಕ್ಷಾತ್ ವಿಷ್ಣು  ಅವ ತರಿಸಿ ಬಂದಂತಿದೆ.  ಈ ಮಗು ವಿಷ್ಣುವಿನ ಅಂಶವಾಗಿದೆ ಎಂದು ಹರಸಿ ಹೊರ ಟರು.  ಮತ್ತೆ ಕೆಲ ದಿನಗಳಲ್ಲಿ ಚಿರಂಜೀವಿಗಳಾದ ಪರಶುರಾಮ, ವ್ಯಾಸರು, ಹನುಮಂತ, ಬಲಿಚಕ್ರವರ್ತಿ,ವಿಭೀಷಣ ಮುಂತಾದ ವರೆಲ್ಲ  ದಾನ ಕೇಳುವ ಬ್ರಾಹ್ಮಣರ ವೇಶದಲ್ಲಿ ಬಂದರು. ವಿಷ್ಣುವೀಶ ಅವರನ್ನು ಆದರಿಸಿ ಒಳಗೆ ಕರೆದು ಆದರೋಪಚಾರ ಮಾಡಿ ಅವರಿಗೆ ಯಥೋಚಿತ ಸತ್ಕಾರ ನೀಡಿದನು. ವಿಷ್ಣುವೀಶ ನ ಸತ್ಕಾರ ಸ್ವೀಕರಿಸಿ ಅವರೆಲ್ಲರೂ ಮಗುವಿನ ಬಳಿ ಬಂದು ಮಗು ವಿಗೆ 'ಕಲ್ಕಿ'ಎಂದು ನಾಮಕರಣ ಮಾಡಿ  ಬ್ರಾಹ್ಮಣನಿಗೆ ಧನ್ಯವಾದ ಹೇಳಿ ಅವರವರ ಆಶ್ರಮಕ್ಕೆ ತೆರಳಿದರು.

ಕಲ್ಕಿ  ಹುಣ್ಣಿಮೆಯ ಚಂದ್ರನಂತೆ ಶೋಭಿಸುತ್ತಿದ್ದ. ಮಗು ಬೆಳೆದು ಬಾಲಕನಾದ ತಂದೆ ಅವನಿಗೆ ಆಚಾರ್ಯರ ಮೂಲಕ ವಿದ್ಯೆ ಕಲಿಸುವ ವ್ಯವಸ್ಥೆ ಮಾಡಿದನು ಕಲ್ಕಿ ಬಹಳ ಶ್ರದ್ಧೆಯಿಂದ ವಿದ್ಯೆ ಕಲಿತು ಎಲ್ಲಾ ವಿದ್ಯೆಯನ್ನು ಕರಗತ ಮಾಡಿ ಕೊಂಡನು. ಒಂದು ದಿನ ಒಬ್ಬ ಕಡ್ಡಿ ಗಾತ್ರದಂತ  ಕೃಶ  ಶರೀರದ ವೃದ್ಧ  ಬ್ರಾಹ್ಮ ಣನೊಬ್ಬ ಬಂದನು. ಕಲ್ಕಿ ಅವನನ್ನು ನೋಡಿ ವಿಚಾರಿಸಿ ಕರೆದು ಸತ್ಕರಿಸಿದ. ಆ ಬ್ರಾಹ್ಮಣ ಕಲ್ಕಿಗೆ ಹೇಳಿದ ನೋಡು ಮಗು ನಾನು 'ಕೃತ' ಚತುರ್ಯುಗಗಳಿಗೂ  ನಾನೇ ಮೊದಲನೆಯವನು. ಈಗ ಕಲಿಯುಗ ನಡೆಯುತ್ತಿದೆ ಅನ್ಯಾಯ ಅಧರ್ಮ ತಾಂಡವವಾಡಿ  ತಲೆಯೆತ್ತಿ ಮೆರೆಯುತ್ತಿದೆ. ಜನರು ಮೋಸ ವಂಚನೆ ಯಲ್ಲಿ ತೊಡಗಿದ್ದಾರೆ. ಧರ್ಮದ ವಿಚಾರ ಧರ್ಮಾಚರಣೆಗಳಿಗೆ  ಬಾಯಿ ಕಟ್ಟಿ ದ್ದಾರೆ.  ಇಂಥ ಅಧರ್ಮ ಅನೀತಿಯಿಂದಾಗಿ ನಾನು ವೃದ್ಧನಾಗಿ ಕೃಶನಾಗಿದ್ದೇನೆ ಎಂದಾಗ  ಬಾಲಕ ಆಶ್ಚರ್ಯದಿಂದ ನೀವು ಹೇಳುತ್ತಿರುವುದು ನಿಜವೇ ಹಾಗಾ ದರೆ ಆ 'ಕಲಿ' ಯಾರು? ಅವನು ಯಾಕೆ ಜನರನ್ನು ಅಧರ್ಮ ಮಾರ್ಗಕ್ಕೆ ಎಳೆ ದೊಯ್ಯುತ್ತಾನೆ ಎಂದು ಕೇಳಿದ.

ಮಗು ಕಲಿಯ ಕಥೆ ಬಹಳ ವಿಸ್ತಾರವಾಗಿದೆ. ಬ್ರಹ್ಮನಿಂದಲೇ ಮೊದಲು ಪಾಪ ಹುಟ್ಟಿತು. ಪಾಪದ ಇನ್ನೊಂದು ರೂಪ ಅಧರ್ಮ. ಅಧರ್ಮನು ಮಿಥ್ಯೆಯನ್ನು ಮದುವೆಯಾದನು. ಇವರಿಬ್ಬರ ಸಂತಾನ  'ಧಂಬ' ಎಂಬವನು ಹುಟ್ಟಿದನು. ಮುಂದೆ ಇವನು ಬೆಳೆದು ಮಾಯೆಯನ್ನು ಮದುವೆಯಾದ, ಧಂಬ ಮತ್ತು ಮಾಯೆ ಯಿಂದ ಲೋಭ ಮತ್ತು ವಿಕೃತಿ ಎಂಬುವರನ್ನು ಪಡೆದರು. ಇವರಿ ಬ್ಬರು ಮುಂದೆ 'ಕ್ರೋದ' ಗಳನ್ನು ಪಡೆದರು.‌  ಮುಂದೆ ಕ್ರೋಧ ಮತ್ತು ಹಿಂಸೆ ಯಿಂದ  'ಕಲಿ' ಹುಟ್ಟಿದ. ಕಲಿಯ ಪೀಳಿಗೆಯಿಂದ ನರಕ- ಮೃತ್ಯು- ಭಯ -ದುರುಕ್ತಿ. ಇವರೆಲ್ಲ ಉತ್ಪತ್ತಿ ಆದರು. ಇವರೆಲ್ಲರ  ರಾಜ ಕಲಿಯಾದ್ದರಿಂದ  ಎಲ್ಲಾ ಕಡೆ ವ್ಯಸನ -ಭಯ -ಚಿಂತೆ - ಪಾಪ ಕೃತ್ಯಗಳೇ ತುಂಬಿದವು. ಇವುಗ ಳಿಂದಾಗಿ 'ಧರ್ಮ'  ಮಂಕಾಗಿ  ಯಾರಿಗೂ ಕಾಣದೆ ಸಂಕಟ ಪಡುತ್ತಿದ್ದಾನೆ . ಹೀಗೆ ಎಲ್ಲೆಡೆಯೂ ಅಧರ್ಮವೇ  ಮೆರೆದಾಡುತ್ತಿದೆ.  ಎಂದು ಬ್ರಾಹ್ಮಣ ಹೇಳಿ ದ್ದನ್ನು ಕೇಳಿ ಕಲ್ಕಿ ಕೇಳಿದ ಹಾಗಾದರೆ ಇದಕ್ಕೆ ಪರಿಹಾರ ಏನು ಇದೆ ಎಂದು.
ವೃದ್ಧನಾಗಿದ್ದ 'ಕೃತ'ನು ಹೇಳಿದ ನೀನು ಈಗ ಮಹೇಂದ್ರ ಪರ್ವತಕ್ಕೆ ಹೋಗಿ ಪರಶುರಾಮರಲ್ಲಿ  ಎಲ್ಲಾ ಶಸ್ತ್ರ ಶಾಸ್ತ್ರ ವಿದ್ಯೆಗಳನ್ನು ಕಲಿತು ಮುಂದೆ ಧರ್ಮ ವನ್ನು ನೀನು ರಕ್ಷಣೆ ಮಾಡಬೇಕು ಎಂದನು. ಕೃತನಿಗೆ ಕಲ್ಕಿ ಯು ನಮಸ್ಕರಿಸಿ ಬೀಳ್ಕೊಟ್ಟನು. ನಂತರ ತಂದೆಯ ಅನುಮತಿ ಪಡೆದು ಪರಶುರಾಮರನ್ನು ಕಾಣಲು ಮಹೇಂದ್ರ ಪರ್ವತಕ್ಕೆ ಹೊರಟನು.

ಪರಶುರಾಮರನ್ನು ಹುಡುಕಿ ಅವರಲ್ಲಿ ಶಿಷ್ಯನನ್ನಾಗಿ ಪಡೆಯುವಂತೆ ಪ್ರಾರ್ಥಿಸಿ ಅವರಿಂದ  ಸಕಲ ವಿದ್ಯಾಭ್ಯಾಸವನ್ನು ಮುಗಿಸಿದನು. ಹೊರಡುವಾಗ ಗುರುಗಳಲ್ಲಿ ಗುರುದಕ್ಷಿಣೆ ಏನು ಕೊಡಲಿ ಎಂದು ಕೇಳಿದನು ಆಗ ಪರಶುರಾಮರು ನನಗೆ ಗುರುದಕ್ಷಿಣೆ ಏನೂ ಬೇಡ ಮಗು ಈ ಜಗತ್ತಿನಲ್ಲಿ ನಡೆಯುತ್ತಿರುವ ಅನ್ಯಾಯ ಅಧರ್ಮಗಳನ್ನು ನಿಲ್ಲಿಸಿ ಧರ್ಮಸ್ಥಾಪನೆ ಮಾಡು
ಇದೇನೇ ನೀನು ನನಗೆ ಕೊಡುವ ಗುರುದಕ್ಷಿಣೆ ಎಂದು ಹರಸಿ ಬೀಳ್ಕೊಟ್ಟರು.
ಕಲ್ಕಿಗೆ ಇಬ್ಬರು ಪತ್ನಿಯರು ಮೊದಲನೇ ಪತ್ನಿ ಲಕ್ಷ್ಮಿ ರೂಪವಾದ ಪದ್ಮಾವತಿ, ಎರಡನೇ ಪತ್ನಿ ವೈಷ್ಣವ ಶಕ್ತಿ ರೂಪ ಹೊಂದಿದವಳು. ತ್ರೇತಾಯುಗದಿಂದಲೂ ವಿಷ್ಣುವನ್ನು ವಿವಾಹವಾಗುವ ಕನಸನ್ನು ಕಂಡವಳು, ರಾಮನನ್ನೇ ಪಡೆಯಲು ಕಾತರಿಸಿ ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭದ ನಡುವಿನ ಸಮಯದಲ್ಲಿ ವೈಷ್ಣವಿ ದೇವಿಯಾಗಿ ಕಲ್ಕಿಯನ್ನು ವಿವಾಹವಾದಳು. ಕಲ್ಕಿ 
ತಂದೆ ಇಬ್ಬರು ಪತ್ನಿಯರಿಂದ ನಾಲ್ಕು ಜನ ಮಕ್ಕಳನ್ನು ಪಡೆದನು. ಅವರು ಜಯ- ವಿಜಯ- ಮೇಘವಾಹ- ಬಲಾಹಕ. ಕಲ್ಕಿಯ ಬರುವಿಕೆಗಾಗಿ ಚಿರಂಜೀವಿಗಳು ಮುಕ್ತಿ ಮತ್ತು ಮೋಕ್ಷಕ್ಕಾಗಿ ಕಾಯುತ್ತಿದ್ದರು.  ಪರಶುರಾಮರ ಶಿಷ್ಯನಾಗಿ ದಿವ್ಯ ಅಸ್ತ್ರ ಶಸ್ತ್ರ ಶಾಸ್ತ್ರಗಳ ವಿದ್ಯೆಯನ್ನು ಕಲಿತನು. ಮುಂದೆ ಕಲಿಯನ್ನು ನಿಗ್ರಹಿಸಲು ಜೊತೆಗೆ ತನ್ನ ನಾಲ್ಕು ಜನ ಸಹೋದರರು ಮತ್ತು ಏಳು ಜನ ಚಿರಂಜೀವಿಗಳು ಪರಶುರಾಮ- ಹನುಮಂತ  -ವ್ಯಾಸರು- ಕೃಪಾ ಚಾರ್ಯರು- ಅಶ್ವತ್ಥಾಮ -ವಿಭೀಷಣ- ಬಲಿ ಚಕ್ರವರ್ತಿ ಇವರುಗಳ ಸಹಾಯ ಪಡೆದು  ಕಲಿಯನ್ನು  ನಿಗ್ರಹಿಸಿದನು.

ಕಲಿಯನ್ನು  ನಿಗ್ರಹಿಸುವುದು ಒಬ್ಬರಿಂದ ಸಾಧ್ಯವಿಲ್ಲ ರಾಮಾವತಾರದಲ್ಲಿ ರಾಮನ ಬಂಟನಾಗಿದ್ದ ಹನುಮಂತನ ಒಬ್ಬನೇ ಎಲ್ಲವನ್ನು ಮಾಡುತ್ತಿದ್ದ ಹಾಗೆ ಕೃಷ್ಣಾವತಾರದಲ್ಲಿ ಕೌರವರನ್ನು ನಿಗ್ರಹಿಸಲು ಐದು ಜನ ಪಾಂಡವರನ್ನು ಜೊತೆಯಲ್ಲಿಟ್ಟುಕೊಂಡನು ಹಾಗೆ ನಿಮಿತ್ತ ಮಾತ್ರಕ್ಕೆ ದ್ರೌಪದಿ ಇದ್ದಳು. ಕಲ್ಕಿಯ
ಉದ್ದೇಶಿತ  ಕಾರ್ಯ ಮುಗಿಯುವ ತನಕ ಚಿರಂಜೀವಿಗಳು ಕಲ್ಕಿಯ ನಾಲ್ಕು ಜನ ಸಹೋದರರು  ಕಲ್ಕಿಯ ಜೊತೆ ಇರುತ್ತಾರೆ. 

ಪರಶುರಾಮಲಿಂದ ನಾನಾರ್ಜನೆ ಪಡೆದು ಮಹೇಂದ್ರ ಪರ್ವತದಿಂದ ಬಂದ ಕಲ್ಕಿ ಶಿವನನ್ನು ಕುರಿತು ಘೋರ ತಪಸ್ಸು ಮಾಡಿದನು. ಶಿವನು ತಪಸ್ಸಿಗೆ ಮೆಚ್ಚಿ
ದಿನಾಂಕ. ಕಲ್ಕಿಯು ಶಿವನಿಂದ  ದೇವದತ್ತ ಎಂಬ ಒಂದು ಶ್ವೇತಾಶ್ವ, ಮತ್ತು ಶಕ್ತಿಯುತ ವಾದ ಖಡ್ಗ, ಹಾಗೂ ಲೋಕದ ವಿಷಯಗಳನ್ನೆಲ್ಲ ಬಲ್ಲಂತ ಒಂದು ಗಿಳಿಯನ್ನು ಪಡೆದುಕೊಂಡನು. ಅದಾಗಲೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದ
'ಧರ್ಮ'ದೇವತೆ ಸದ್ಗುಣಗಳ ಪರಿವಾರ ಸಮೇತ ವಾಗಿ ಕಲ್ಕಿಯ ಎದುರಿಗೆ ಬಂದು ನಮ್ಮನ್ನೆಲ್ಲ ಕಾಪಾಡಿ ಧರ್ಮ ವನ್ನು ರಕ್ಷಿಸಬೇಕು ಎಂದು ಪ್ರಾರ್ಥಿಸಿ ದಾಗ ಅವರಿಗೆಲ್ಲ ರಕ್ಷಿಸುವೆನೆಂದು ಮಾತುಕೊಟ್ಟು ಕಳಿಸಿ ನಂತರ ಶ್ವೇತಾಶ್ವ ಏರಿ, ಕೈಯಲ್ಲಿ ಖಡ್ಗ ಹಿಡಿದು ಚಂಡಮಾರುತದಂತೆ  ಕುದುರೆಯನ್ನು ಹಾರಿಸಿ 'ಕಲಿ' ನೆಲೆಯಾದ 'ವಿಷಸನ' ಪಟ್ಟಣಕ್ಕೆ  ಬಂದನು.  ಎಲ್ಲೆಂದರಲ್ಲಿ ಗೋ ಮಾಂಸದ ರಾಶಿ ರಾಶಿಗಳು ಕಣ್ಣಿಗೆ ರಾಚುತಿದ್ದು, ಹಾದಿ ಬೀದಿಗಳಲ್ಲಿ ಜೂಜಾಟ ಮಧ್ಯ ಸೇವನೆ ಮಾಡುತ್ತಿದ್ದ ವ್ಯಸನಿಗಳ  ಮೇಲೆ ದಾಳಿ ನಡೆಸಿ ಎಲ್ಲವನ್ನು  ನಾಶ ಮಾಡಿದನು.  ವಿಷಯ ತಿಳಿದ 'ಕಲಿ' ತನ್ನ ವಾಹನವಾದ ಗೂಬೆ ಮೇಲೆ  ಬಂದು 'ಕಲ್ಕಿ' ಮೇಲೆ ಯುದ್ಧ ನಡೆಸಿದನು. 'ಕಲ್ಕಿ'ವೀರಾವೇಶದಿಂದ ಹೋರಾಡಿ 'ಕಲಿ' ಯನ್ನು ಹೊಡೆದು ಓಡಿಸಿದನು. ಅಡಗಿದ್ದ 'ಧರ್ಮದೇವತೆ'  ಹೊರಗೆ ಬಂದೆ ನೆಮ್ಮದಿಯಾಗಿ ನೆಲೆಸುವಂತೆ ಮಾಡಿದನು.

( ಕಲ್ಕಿ ಹುಟ್ಟೇ ಇಲ್ಲ  ಕಲಿಯುಗದ ಅಂತ್ಯ ಬಂದೇ ಇಲ್ಲ ಅದು ಹೇಗೆ ಎಂದು 
ಅನ್ನಿಸಬಹುದು. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಭಾಗವಹಿಸಿ ದಾಗ 90 ವರ್ಷವಾಗಿತ್ತು. ಹಾಗೆ ಭೂಲೋಕದ ಒಂದು ವರ್ಷ ಬ್ರಹ್ಮನಿಗೆ ಒಂದು ದಿನ,  ಹೀಗಿರುವಾಗ ' ಕಲ್ಕಿ' ಈಗಾಗಲೇ  ಜನ್ಮ ತಾಳಿದ್ದು ಗೋಚರ ವಾಗದಂತೆ ಇರಬಹುದು. ಅಧರ್ಮ ಪೂರ್ತಿ ತುಂಬಿದಾಗ  ಹಾರುವ ಬಿಳಿ ಕುದುರೆ ಏರಿ ಖಡ್ಗ  ಝಳಪಿಸುತ್ತಾ ಬರುತ್ತಾನೆ ಕಾಯಬೇಕು ಅಷ್ಟೇ, ಇದು ನನ್ನ ಅನಿಸಿಕೆ)

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ!
ಅಭ್ಯುಥ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ !!

ಪರಿತ್ರಾಣಾಯ ಸಾಧೂನಾಂ  ವಿನಾಶಯ ಚ ದುಷ್ಕೃತಾಂ!
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ!! 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಚಂಡಿಕೇಶ್ವರ


ಚಂಡಿಕೇಶ್ವರ:- 

ಸಾಮಾನ್ಯವಾಗಿ  ಶಿವನ ದೊಡ್ಡ  ದೇಗುಲಗಳಿಗೆ  ಹೋದಾಗ ಪ್ರದಕ್ಷಿಣೆ ಯನ್ನು ಅರ್ಧ ಚಂದ್ರಾಕಾರ  ಮಾಡುತ್ತೇವೆ.  ಇದನ್ನು 'ಸೋಮಸೂತ್ರ' ಎನ್ನುತ್ತಾರೆ. ಶಿವನ ಪಾಣಿಪೀಠದಿಂದ  ಗೋಮಕಿ ಬಾಯಿಂದ ತೀರ್ಥ ಬೀಳುವ  ಜಾಗದ ತನಕ  ಹೋಗುತ್ತೇವೆ. ಅದನ್ನು ದಾಟಿ ಹೋಗುವುದಿಲ್ಲ. ಏಕೆಂದರೆ ಶಿವನ ಶಿರದಿಂದ ಇಳಿದು ಬಂದ ಅಭಿಷೇಕದ ತೀರ್ಥದಲ್ಲಿ ಗಂಗೆ ಹಾಗೂ ಗಣಗಳು ಇರುತ್ತಾರೆ  ಅಂಥ   ಪವಿತ್ರ ತೀರ್ಥವನ್ನು ದಾಟಬಾರದು ಹಾಗೂ ತೀರ್ಥದಲ್ಲಿ ಶಿವನ ಸಕಾರಾತ್ಮಕ ಅಪಾರ  ಶಕ್ತಿ ಇದ್ದು, ಅದರ ಪ್ರಭಾವ ಮನುಷ್ಯನ ದೇಹದ ಮುಖ್ಯವಾದ ಶಕ್ತಿ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಸುತ್ತು ಪ್ರದಕ್ಷಿಣೆ ಹಾಕಬಾರದು ಎನ್ನುತ್ತಾರೆ. 

ಶಿವನ ದೇವಸ್ಥಾನದಲ್ಲಿ  ಕೆಲವು  ಆಚರಣೆಗಳನ್ನು ಕಾಣುತ್ತೇವೆ. ಆಲಯದ ಒಳಗೆ ಹೋದಾಗ ಶಿವ ದರ್ಶನ ಮಾಡಿ ಬರುವಾಗ ನಂದಿಯ ಕಿವಿಯ ಮೇಲ್ಭಾಗವನ್ನು ಹೆಬ್ಬೆರಳಿನಿಂದ ತೋರುಬೆರಳೆತನಕ ಹಿಡಿದು ಶಿವನನ್ನು ನೋಡುತ್ತಾ  ಇಷ್ಟಾರ್ಥಗಳನ್ನು ಹೇಳುತ್ತೇವೆ. ಧ್ಯಾನಾಸಕ್ತನಾದ ಶಿವನು ನಂದಿಯ ಮೂಲಕ ತಿಳಿಯುತ್ತಾನೆಎಂಬ ನಂಬಿಕೆ ಇದೆ. ಶಿವನ ದೇವಸ್ಥಾನ ದಿಂದ ವಿಭೂತಿ - ಪತ್ರೆ -ಫಲ -ಪುಷ್ಪ- ಪ್ರಸಾದ ಏನನ್ನೇ ತರುವುದಾದರೂ ಶಿವನ ಕುಟುಂಬದವನೇ ಆಗಿರುವ  'ಚಂಡಿಕೇಶ್ವರನ  ಕಿವಿ ಬಳಿ ಜೋರಾಗಿ ಚಪ್ಪಾಳೆ ಹೊಡೆಯುವುದರ ಮೂಲಕ ತಿಳಿಸಿ ತರಬೇಕು. ಶಿವ ಮಂದಿರಗಳಲ್ಲಿ ಶಿವನ ಕುಟುಂಬವಾದ  ಗಣಪತಿ, ಶಿವ-  ಪಕ್ಕದ ಗುಡಿಗಳಲ್ಲಿ ಪಾರ್ವತಿ, ಹಾಗೆ  ಸುಬ್ರಹ್ಮಣ್ಯ, ಈಶ್ವರನ ಎದುರಿಗೆ ನಂದಿ- ಹಾಗೆ ಬೃಂಗಿ ಮತ್ತು ಚಂಡಿಕೇಶ್ವರ ಮೂರ್ತಿಗಳನ್ನು ಇಟ್ಟಿರುತ್ತಾರೆ. ಶಿವನ ಗಣಗಳಲ್ಲಿ ನಂದಿ- ಬೃಂಗಿಯರ ಹಿನ್ನೆಲೆ ಸಾಧಾರಣ ಗೊತ್ತಿರುತ್ತದೆ. 'ಚಂಡಿಕೇಶ್ವರ'ನ  ಕುರಿತಾಗಿ ಒಂದು ಕಥೆ ಇದೆ.

ದಕ್ಷಿಣ ಭಾರತದಲ್ಲಿ ಮಣಿಯಾರ್ ನದಿಯ ದಡದಲ್ಲಿ ಒಂದು ಅಗ್ರಹಾರವಿದ್ದು 
ಅಲ್ಲಿ 'ಈಚದತ್ತ' ಶರ್ಮಾ ಎಂಬ ಬ್ರಾಹ್ಮಣ ವೇದಪಂಡಿತನಿದ್ದು ಮಕ್ಕಳಿಗೆ ವೇದ ಪಾಠ ಹೇಳಿಕೊಡುತ್ತಿದ್ದರು.  ಚಂದೇಶನು ತಂದೆಯಂತೆ ವೇದಪಾರಂಗತ
ನಾಗಿದ್ದು, ಆರಾಧ್ಯ ದೈವ ವಾದ ಶಿವನ ಭಕ್ತನಾಗಿದ್ದನು. ಶಿವಧ್ಯಾನ ಶಿವ ಪೂಜೆ ಮಾಡುವುದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ನಿತ್ಯವೂ ಮಣಿಯಾರ್ ನದಿಯಲ್ಲಿ ಸ್ನಾನ, ದೇವತಾರಾಧನೆ ಮಾಡಿ ವೇದಾಧ್ಯಯನ ಮಾಡುತ್ತಿದ್ದ.  ಅಂದು ನದಿಯಲ್ಲಿ ಸ್ನಾನ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ಬರುತ್ತಿರುವಾಗ ಒಬ್ಬ ಗೋಪಾಲಕ ಒಂದು ಹಸುವನ್ನು ಮನ ಬಂದಂತೆ ಹೊಡಿಸುತ್ತಿದ್ದ ಇದನ್ನು ಕಂಡ ಚಂದೇಶನ ಮನಸ್ಸಿಗೆ ನೋವಾಯಿತು. ಆತ ಹೇಳಿದ ಹೇ ಗೋಪಾಲಕ ಗೋವು ದೈವ ಸಮಾನವಾದದು ಅದನ್ನು ಹಿಂಸಿಸುವುದು ಹೊಡೆಯುವುದು ಸರಿಯಲ್ಲ ನಿನಗೆ ಈ ಹಸುವನ್ನು ಸಾಕುವುದು ಕಷ್ಟವಾದರೆ ನಾನು ಆದರ ಪಾಲನೆ ಪೋಷಣೆ ಮಾಡುತ್ತೇನೆ ಎಂದು ಹೇಳಿದ. ಕೋಪದಲ್ಲಿದ್ದ ಗೋಪಾಲಕ ಆಯಿತು ನನ್ನ ಎಲ್ಲಾ ಗೋವುಗಳನ್ನು ನಿನಗೆ ಕೊಡುತ್ತೇನೆ ಅದರ ಎಲ್ಲಾ ಜವಾ ಬ್ದಾರಿ ನಿನ್ನ ಮೇಲಿದೆ ಆದರೆ ಅದರ ಮೇಲಿನ ಹಕ್ಕು ನನ್ನದು ಅವುಗಳ ಹಾಲು ನನಗೆ ಸಿಗಬೇಕು ಎಂದನು. ಚಂದೇಶನು ಷರತ್ತುಗಳಿಗೆ  ಸಂತೋಷದಿಂದ ಒಪ್ಪಿ ಅವನು ನದಿಯ ದಡದಲ್ಲಿ ಇದ್ದು ಗೋ ಪೋಷಣೆ ಮಾಡುತ್ತಾ, ಜೊತೆ ಯಲ್ಲಿ ವೇದಾಧ್ಯಯನ ಮುಂದುವರೆಸಿದ. ಚಂದೇಶನ ಪಾಲನೆ ಪೋಷಣೆ ಯಿಂದ ಗೋವುಗಳು ತೃಪ್ತಿ ಹೊಂದಿ ಚಂದೇಷನನ್ನು ಪ್ರೀತಿಸತೊಡಗಿದವು.

ಚಂದೇಶನು ನಿತ್ಯವೂ ಕಾಡಿಗೆ ಹೋಗಿ ಹುಲ್ಲು ಸೊಪ್ಪು ತಂದು ಹಸುಗಳಿಗೆ ಮೇವನ್ನು ಹಾಕುತ್ತಿದ್ದನು. ಮೇವು ತರುವ ಸಲುವಾಗಿ ಅವನ ಬಳಿ ಚಿಕ್ಕ ಕೊಡಲಿಯನ್ನು ಇಟ್ಟುಕೊಂಡಿದ್ದನು.  ಚಂದೇಶನ ಪ್ರೀತಿಯ ಆರೈಕೆಯಿಂದ ಗೋವುಗಳು ಅವಾಗಿಯೇ ಹಾಲು ಸುರಿಸಲು ಪ್ರಾರಂಭಿಸಿದವು. ಹಾಲನ್ನು ಸಂಗ್ರಹಿಸಲು ಮಣ್ಣಿನ ದೋಣಿ  ಮಾಡಿ ಹಾಲನ್ನು ಸಂಗ್ರಹಿಸುತ್ತಿದ್ದನು. ಅವನ ನಿತ್ಯ ಪೂಜೆಗಾಗಿ ನದಿಯಿಂದ  ಮರಳನ್ನು ತಂದು ಶಿವಲಿಂಗ  ತಯಾರಿಸಿದನು. ಮಣ್ಣಿನ ದೋಣಿಗಳಲ್ಲಿ ಹಾಲನ್ನು  ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದನು.

ಒಂದು ದಿನ  ಅಗ್ರಹಾರದಿಂದ ಬರುತ್ತಿದ್ದ ಒಬ್ಬ ವ್ಯಕ್ತಿ . ಅಲ್ಲಿ ಗೋವುಗಳು ತಾವಾಗಿಯೇ ಹಾಲು ಸುರಿಸುವುದನ್ನು ಹಾಗೂ ಚಂದೇಶನು ಹಾಲನ್ನು ಸಂಗ್ರಹಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದನು. ಇದನ್ನು  ಅಗ್ರಹಾರದಲ್ಲಿದ್ದ  ಗೋವುಗಳ ಯಜಮಾನನಿಗೆ ತಿಳಿಸಿದನು.  ಯಜಮಾನ ಚಂದೇಶನ ತಂದೆಯಲ್ಲಿ  ದೂರು ಹೇಳಿದನು. ತನ್ನ ಮಗ ಅನ್ಯರ ಹಸುವಿನ ಹಾಲನ್ನು  ಶಿವನಿಗೆ ಅಭಿಷೇಕ ಮಾಡುವುದನ್ನು ಕೇಳಿ ಕೋಪಗೊಂಡು ಕಣ್ಣಾರೆ ನೋಡಬೇಕೆಂದು ಚಂದೇಶನಿದ್ದಲ್ಲಿಗೆ ಬಂದನು.
ಆದರೆ ಆ ಸಮಯದಲ್ಲಿ ಚಂದೇಶನ  ಏಕಾಗ್ರತೆಯಿಂದ ಶಿವನಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದನು. ಗೋವುಗಳು ಸಹ ಇದನ್ನು ನೋಡುತ್ತಿದ್ದವು  ಈಚದತ್ತ ಶರ್ಮನು ಮಗನನ್ನು ಕರೆದನು, ಕೇಳಲಿಲ್ಲವೆಂದು ಹತ್ತಿರಕ್ಕೆ ಹೋಗಿ ಅಲುಗಾಡಿಸಿದರೂ, ಧ್ಯಾನ ಮಗ್ನನಾಗಿದ್ದ ಚಂದೇಶನಿಗೆ ಎಚ್ಚರ ಆಗಲಿಲ್ಲ ಕೋಪಗೊಂಡ ಈಚದತ್ತ ಹಾಲು ತುಂಬಿಸಿ ಸಂಗ್ರಹಿಸಿಟ್ಟ ಮಣ್ಣಿನ ದೋಣಿ ಗಳನ್ನು  ಕಾಲಿಂದ ಒದ್ದನು. ಹಾಲು ತುಂಬಿದ ಮಡಿಕೆಗಳು ಒಡೆದ
ತುಂಡುಗಳು ಮರಳಿನ ಶಿವಲಿಂಗಕ್ಕೆ ತಾಗಿ ಶಿವಲಿಂಗವು ಬಿರಿಯಿತು. ತಕ್ಷಣ ಎಚ್ಚರಗೊಂಡ  ಚಂದೇಶ, ಕೋಪಗೊಂಡು ತನ್ನ ಶಿವ ಧ್ಯಾನವನ್ನು ಭಂಗ ಮಾಡಿ, ಅಭಿಷೇಕಕ್ಕೆ ಇಟ್ಟ ಹಾಲಿನ ಮಡಿಕೆಗಳನ್ನು ಕಾಲಿನಿಂದ ಒದ್ದು ಒಡೆದು ಆ ಚೂರುಗಳಿಂದ ಶಿವನ ಲಿಂಗವನ್ನು ಭಿನ್ನ  ಮಾಡಿದ ನಿನ್ನ ಕಾಲುಗಳಿಗೆ ತಕ್ಕ ಶಾಸ್ತಿ ಮಾಡುವೆ ಎಂದು ತಂದೆಯೆನ್ನದೇ ಅವನ  ಎರಡು ಕಾಲುಗಳನ್ನು ಕತ್ತರಿಸಿದನು. ತಂದೆಯ ಎರಡು ಕಾಲಿನಿಂದಲೂ ರಕ್ತ ಹರಿಯುವುದು ನೋವಿನಿಂದ ನೆರಳುತ್ತಾ ರಕ್ತದ ಮೇಲೆ ಕುಳಿತುಬಿಟ್ಟನು. 

ತಂದೆ ಎನ್ನದೆ ತನ್ನ ಆರಾಧ್ಯ ದೈವ ಶಿವನ ಧ್ಯಾನಕ್ಕೆ ಅಪಚಾರ ಮಾಡಿದವನ ಕಾಲುಗಳನ್ನು ಕತ್ತರಿಸಿದ ಚಂದೇಶನ ಭಕ್ತಿಗೆ ಮೆಚ್ಚಿ  ಭಿನ್ನವಾದ ಮರಳಿನ ಲಿಂಗದೊಳಗಿಂದ ಶಿವನು  ಪ್ರತ್ಯಕ್ಷನಾದನು.  ಸಾಮಾನ್ಯ ಮಾನವನಾದ ಚಂದೇಶನ  ಶಿವ ಭಕ್ತಿಗೆ ಮೆಚ್ಚಿ ಚಂದೇಷನನ್ನು ತನ್ನ ಕುಟುಂಬದ ಸದಸ್ಯರನ್ನು ಗಣಪತಿ - ಸುಬ್ರಹ್ಮಣ್ಯರ ಜೊತೆ ಇವನು ತನ್ನ ಮಗನೆಂದು ಸ್ವೀಕರಿಸಿದನು.
ಚಂದೇಷನ  ಹೆಸರನ್ನು ಚಂಡಿಕೇಶ್ವರ ಎಂದು ಮರುನಾಮಕರಣ ಮಾಡಿದನು. ಶಿವನ ಅನುಗ್ರಹದಿಂದ ಈಚದತ್ತ ಶರ್ಮನಿಗೆ ಕಾಲುಗಳು ಬಂದವು. 

ಹೀಗೆ ಶಿವನ ಗುಡಿಯಲ್ಲಿ ಇರುವ ಚಂಡಿಕೇಶ್ವನಿಗೆ ಮುಂದೆ ಚಪ್ಪಾಳೆ  ಅಥವಾ ಚಿಟಿಕೆ ಹೊಡೆಯಬೇಕು ಏಕೆಂದರೆ  ಪರಮೇಶ್ವರನು ಧ್ಯಾನದಲ್ಲಿ ನಿರತನಾಗಿ ದ್ದುಳು.  ಚಂಡಿಕೇಶ್ವರ ಸದಾ ಕಾಲವು ಶಿವನ ಧ್ಯಾನದಲ್ಲಿ ಮಗ್ನ ನಾಗಿರುತ್ತಾನೆ. ಹಾಗೆಂದ ಮಾತ್ರಕ್ಕೆ ಅವನಿಗೆ ಗೊತ್ತಿಲ್ಲದಂತೆ ಭಕ್ತರು ಶಿವನ ಪತ್ರ ಪುಷ್ಪ ಪ್ರಸಾದ ಭಸ್ಮ, ಇಂಥ ಯಾವುದೇ ವಸ್ತುವನ್ನು ತೆಗೆದುಕೊಂಡು ಹೋಗಬೇಕಾ ದರೆ, ಧ್ಯಾನದಲ್ಲಿ ಮುಳುಗಿರುವ ಚಂಡಿಕೇಶವನಿಗೆ ಚಪ್ಪಾಳೆ ತಟ್ಟಿ ಎಚ್ಚರ ಮಾಡಿ ಒಯ್ಯುವ ಶಿವನಿಗೆ ಪೂಜೆ ಮಾಡಿದ ಪ್ರಸಾದಗಳನ್ನು ಅವನಿಗೆ ತೋರಿಸಿ ತೆಗೆದುಕೊಂಡು ಹೋಗುವ ಪದ್ಧತಿ ಬಂದಿದೆ. ಇದನ್ನು ಕೆಲವರು ಈಶ್ವರನಿಗೆ ಕಿವಿ ಕೇಳುವುದಿಲ್ಲ ಎಂದು ತಿಳಿದಿದ್ದಾರೆ ಆದರೆ ಅವನು ಧ್ಯಾನದಲ್ಲಿ ಮಗ್ನನಾಗಿ ರುತ್ತಾನೆ ಧ್ಯಾನದಿಂದ ಎಚ್ಚರಗೊಳಿಸಲು ಚಪ್ಪಾಳೆ ತಟ್ಟಬೇಕು. ಈ ರೀತಿ
ಸಾಮಾನ್ಯ ಮಾನವನಾಗಿದ್ದ ಸಂದೇಶನ ಭಕ್ತಿಗೆ ಶಿವನು ಮೆಚ್ಚಿ ತನ್ನ ಕುಟುಂಬದ ಸದಸ್ಯನನ್ನಾಗಿ ( ಮಗನಾಗಿ) ಮಾಡಿಕೊಂಡನು.

ಕರ ಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ  ವಾ ಮಾನಸಂ ವಾಪರಾಧಮ್
ನಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ!!

ನನ್ನ ಕೈ ಕಾಲುಗಳ ಕ್ರಿಯೆಗಳಿಂದ ಮಾತಿನಿಂದ,
ಶರೀರದಿಂದ, ಕಣ್ಣು ಕಿವಿಗಳಿಂದ, ಮನಸ್ಸಿನಿಂದ,
ಅಥವಾ ಕರ್ಮಗಳಿಂದ, ನಿರ್ಧಾರಿತ ಕೆಲಸವನ್ನು ಮಾಡುವಾಗ,
ಯಾವ ಪಾಪಗಳಾಗಿದೆಯೋ, ಅವೆಲ್ಲವನ್ನು ಕ್ಷಮಿಸು
ಹೇ ಮಹಾದೇವ ಶಂಭೋ ಜಯವಾಗಲಿ,
ಕರುಣಾ ಸಾಗರನಾದ ನಿನ್ನಲ್ಲಿ ಅವೆಲ್ಲವನ್ನು ಅರ್ಪಿಸುತ್ತೇನೆ.

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

Monday, 4 September 2023

ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಏಕೆ ? ಕಾರಣ ಇಲ್ಲಿದೆ.

ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಏಕೆ ? ಕಾರಣ ಇಲ್ಲಿದೆ.  🌹

ಶ್ರಿರಾಮ,ಸೀತೆ,ಲಕ್ಷ್ಮಣರು ವನವಾಸಕ್ಕೆಂದು,ಅಯೋಧ್ಯೆಯಿಂದ ಹೊರಟು,ಗುಹನಿಂದ ಗಂಗೆಯನ್ನು ದಾಟಿ,ಮುಂದೆ ಸಾಗಿ,ದಟ್ಟಡವಿಯನ್ನು ಪ್ರವೇಶಿಸಿದರು.
ನಡೆದು ದಣಿದ  ಸೀತಾಮಾತೆಗೆ ಬಹಳ ಬಾಯಾರಿಕೆಯಾಗಿತ್ತು.
ಅಡವಿಯಲ್ಲಿ ಹತ್ತಿರದಲ್ಲೆಲ್ಲಿಯೂ ನೀರು
ಕಾಣಿಸಲಿಲ್ಲ.ದೂರ ದೂರದ ವರೆಗೆ ಬರೀ ಕಾಡೇ ಕಾಣುತ್ತಿತ್ತು. 
ಆಗ ಶ್ರೀ ರಾಮನು ವಿಧಿಯನ್ನು ಪ್ರಾರ್ಥಿಸಿ,
"ಹೇ,ವನದೇವತೆಯೇ! ಕೃಪೆ ಮಾಡಿ ಎಲ್ಲಾದರೂ ಹತ್ತಿರದಲ್ಲಿ ನೀರಿದ್ದರೆ,ಅಲ್ಲಿಗೆ ಹೋಗುವ ಮಾರ್ಗವನ್ನು ತೋರಿಸು",ಎಂದು ಬೇಡಿಕೊಂಡನು.
ಆಗ ಅಲ್ಲೊಂದು ನವಿಲು ಬಂದು ಶ್ರೀ ರಾಮನಿಗೆಹೇಳಿತು...
"ಇಲ್ಲೇ ಸ್ವಲ್ಪ ದೂರದಲ್ಲಿ ಒಂದು ಜಲಾಶಯವಿದೆ.ನಡೆಯಿರಿ ನಾನು ಮಾರ್ಗವನ್ನು ತೋರಿಸುವೆನು.ಆದರೆ ಮಾರ್ಗದಲ್ಲಿ ನೀವು ದಾರಿ ತಪ್ಪುವ ಸಾಧ್ಯತೆ ಇದೆ" ಎಂದಿತು.
ಶ್ರೀರಾಮನು ಹಾಗೇಕೆ ? ಎಂದು ಕೇಳಿದ್ದಕ್ಕೆ, ನವಿಲು "ನಾನು ಹಾರುತ್ತಾ ಹೋಗುತ್ತೇನೆ.
ನೀವು ನಡೆಯುತ್ತಾ ಬರುವಿರಿ.
ಹಾರುತ್ತಿರುವ ನನ್ನನ್ನು ನೀವು ಹಿಂಬಾಲಿಸಲಾಗದೆ ದಾರಿ ತಪ್ಪಬಹುದು.
ನಿಮಗೆ ದಾರಿ ತಿಳಿಯಲು,ನಾನು ಹಾರುತ್ತ ನನ್ನ ಒಂದೊಂದೇ  ಗರಿಯನ್ನು ಕಿತ್ತು ಕೆಳಗೆ ಹಾಕುತ್ತಾ ಹೋಗುವೆನು.ನೀವು ಬಿದ್ದ ಗರಿಯನ್ನು ಅನುಸರಿಸಿ ಬಂದರೆ ಜಲಾಶಯವನ್ನು ಸುಲಭವಾಗಿ ತಲುಪುವಿರಿ" ಎಂದು ಹೇಳಿತು.

ನವಿಲು ಗರಿಗಳು ವಿಶೇಷ ಸಮಯ ಹಾಗೂ ವಸಂತ ಋತುವಿನಲ್ಲಿ ಮಾತ್ರ ತಾವಾಗಿಯೇ ಉದುರುತ್ತವೆ. ಬಲವಂತವಾಗಿ ತೆಗೆದರೆ ನವಿಲಿನ ಸಾವು ನಿಶ್ಚಿತ.
ಇಲ್ಲಾಗಿದ್ದೂ ಅದೇ!!

ಆ ನವಿಲು ತನ್ನ ಕೊನೆಯ ಗರಿಯನ್ನು ಕಿತ್ತು ಉದುರಿಸಿ,ಕೊನೆಯ ಉಸಿರು ತೆಗೆದುಕೊಳ್ಳುವ ಮುನ್ನ ಅದರ ಮನಸ್ಸಿನಲ್ಲೊಂದು ಭಾವನೆ ಬಂದಿತು.!!

"ಯಾರು ಜಗತ್ತಿನ ಬಾಯಾರಿಕೆಯನ್ನು ತೀರಿಸುವರೋ,ಅಂತಹ ಪ್ರಭುವಿನ ಬಾಯಾರಿಕೆ ತೀರಿಸುವ ಸೌಭಾಗ್ಯ ಇಂದು ನನ್ನ ಪಾಲಿಗೆ ಬಂದಿದೆ.ನನ್ನ ಜೀವನ ಪಾವನವಾಯಿತು.ಇನ್ನು ನನ್ನ ಜೀವನದಲ್ಲಿ ಯಾವ ಆಸೆಯೂ ಉಳಿದಿಲ್ಲ" ಎಂದುಕೊಂಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ಪ್ರಭು ಶ್ರೀರಾಮನು ನವಿಲಿಗೆ ಹೇಳಿದನು.  "ನನಗಾಗಿ ನೀನು ನಿನ್ನ ಗರಿಗಳನ್ನ ಕಿತ್ತು ಜೀವನವನ್ನೇ ತ್ಯಾಗ ಮಾಡುತ್ತಿರುವೆ. ನನ್ನ ಮೇಲೆ ನಿನ್ನ ಋಣವಿದೆ. ಈ ಋಣವನ್ನು ನನ್ನ ಮುಂದಿನ ಅವತಾರದಲ್ಲಿ ಖಂಡಿತವಾಗಿಯೂ ತೀರಿಸುವೆನು.  
ನಿನ್ನ ಗರಿಯನ್ನು ಸದಾ ನನ್ನ ತಲೆಯಲ್ಲಿ  ಧರಿಸುವೆನು" ಎಂದನು.
ನವಿಲಿನ ಪ್ರಾಣಪಕ್ಷಿಯು ಹಾರಿ ಹೋಯಿತು.ಪ್ರಭುವು ಅದಕ್ಕೆ ಮೋಕ್ಷವನ್ನು ಕರುಣಿಸಿದನು.

ಆನಂತರ ಮುಂದಿನ  ಶ್ರೀಕೃಷ್ಣಾವತಾರದಲ್ಲಿ ಸದಾ ತನ್ನ ಮುಕುಟದ ಮೇಲೆ ನವಿಲುಗರಿ ಧರಿಸುವುದರ ಮೂಲಕ ನವಿಲಿಗೆಕೊಟ್ಟ ವಚನವನ್ನು ಈಡೇರಿಸಿದನು.

ಇದರಲ್ಲಿರುವ ತತ್ವ...

ಋಣ ತೀರಿಸಲು,ಭಗವಂತನಿಗೇ ಪುನಃ ಜನ್ಮಧರಿಸ ಬೇಕಾಗುವುದೆಂದಮೇಲೆ,
ನಾವಂತೂ ಹುಲು ಮಾನವರು.ನಾವು ಎಷ್ಟೊಂದು ಋಣದಲ್ಲಿ ಇದ್ದೇವೆ.
ಅಳೆಯಲು ಸಾಧ್ಯವೇ? ಆ ಋಣ ಕಳೆಯಲು ಎಷ್ಟು ಜನ್ಮವೆತ್ತಿ ಬರಬೇಕಾಗುವುದೋ ಏನೋ??
ಆದ್ದರಿಂದ ಬದುಕಿದ್ದಾಗಲೇ ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನು ಮಾಡೋಣ.

🦚ಜೈ ಶ್ರೀ ಕೃಷ್ಣ 🦚

Sunday, 27 August 2023

ಯಜುರ್ವೇದದ ಉಪಾಕರ್ಮ ನಡೆಯುವ ಸಂಧರ್ಭದಲ್ಲಿಸಾಧಾರಣವಾಗಿ ಆಚರಣೆ ಮಾಡುವ ಮಾಹಿತಿ.

ಯಜುರ್ವೇದದ ಉಪಾಕರ್ಮ ನಡೆಯುವ ಸಂಧರ್ಭದಲ್ಲಿ
ಸಾಧಾರಣವಾಗಿ ಆಚರಣೆ ಮಾಡುವ ಮಾಹಿತಿ.

ಉಪಾಕರ್ಮ ( ಜನಿವಾರದ ಹಬ್ಬ ) ನೂಲು ಹುಣ್ಣಿಮೆ ಮತ್ತು ರಕ್ಷಾ ಬಂಧನ RAKSHA BANDHAN :  ಶ್ರಾವಣ ಮಾಸದ ಹುಣ್ಣಿಮೆ ದಿನ ಯಜುರ್ವೇದ ಉಪಾಕರ್ಮವನ್ನು, ಚತುರ್ದಶಿ ದಿನ ಋಗ್‌ವೇದ ಉಪಾಕರ್ಮವನ್ನು ಆಚರಿಸುತ್ತ ಬಂದಿರುವುದು ನಮ್ಮ ಭಾರತದ ದೇಶಾದ್ಯಂತ ಆಚರಿಸಲಾಗುತ್ತದೆ.  

 ಒಂದೊಂದು ಬಾರಿ ಎರೂಡ ಒಟ್ಟಿಗೆಯೂ ಬರಬಹುದು. ಈ ಹಬ್ಬವನ್ನು ಜನಿವಾರದ ಹಬ್ಬ ಎಂದೂ ಕರೆಯುತ್ತಾರೆ. ಉಪಾಕರ್ಮ ಒಂದು ವೈದಿಕ ಕ್ರಿಯಾವಿಧಿ , ಈ ಕ್ರಿಯಾವಿಧಿಯನ್ನು ದೈನಂದಿನ ಜೀವನದಲ್ಲಿ ಸಂಧ್ಯಾ ವಂದನೆ ಮಾಡುವ ಸಮುದಾಯದವರು ಆಚರಿಸುತ್ತಾರೆ . ಇದನ್ನು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿ,  ಭಜನೆಮನೆಗಳಲ್ಲಿ , ಯಜಮಾನರ ಪೇಟೆ ಮನೆಗಳಲ್ಲಿ, ಮತ್ತು ದೇವಾಲಯದಲ್ಲಿ ಸಾಮೂಹಿಕವಾಗಿ ಆಚರಿಸುವರು. 

 ಜಾತಕದಲ್ಲಿ 3ನೇ ಭಾವ ಸೋದರ ಸೋದರಿಯರ ವಿಷಯ ತಿಳಿಯಬಹುದು. ಈ ಭಾವದಲ್ಲಿ ಶುಭ ಗ್ರಹಗಳಿದ್ದರೆ ಪ್ರೀತಿ-ಪ್ರೇಮ ಇರುವ ಸಹೋದರ ಸಹೋದರಿಯರು ಸಿಗುತ್ತಾರೆ. ಪಾಪಗ್ರಹ ಇದ್ದರೆ ಬಾಂಧವ್ಯ ಕಡಿಮೆ ಇರುವುದು ಎನ್ನಲಾಗುತ್ತದೆ.

ಉಪಾಕರ್ಮದ  ದಿನ ಗಾಯಿತ್ರಿ ಜಪವನ್ನು ಲೋಕ ಕಲ್ಯಾಣದ ದೃಷ್ಟಿಯಲ್ಲಿ ಮಾಡುತ್ತಾರೆ ಹಾಗೂ ಹಳೆಯ ಜನಿವಾರವನ್ನು ವಿಸರ್ಜಿಸುತ್ತಾರೆ. 

ವರ್ಷದಲ್ಲಿ ಮಾಡಿದ ಪಾಪವನ್ನು ಕಳೆಯಲು ಗಾಯಿತ್ರಿ ಮಂತ್ರ ಜಪಿಸುವ ಸಂಪ್ರದಾಯ ವಾಗಿರುತ್ತದೆ . 

ಜಾತಕದಲ್ಲಿ 9ನೇ ಬಾವದಲ್ಲಿ ಶನಿಗ್ರಹವು ಇದ್ದು ಅದಕ್ಕೆ ಯಾವ ದೃಷ್ಟಿಯಿಲ್ಲದೆ ಇದ್ದರೆ ಆತನು ಜಪ ಧ್ಯಾನ ಹೆಚ್ಚು ಹೆಚ್ಚು ಮಾಡುತ್ತಾರೆ. ಧಾರ್ಮಿಕ ಕಾರ್ಯಗಳು ಸಹ ಹೆಚ್ಚು ಮಾಡುತ್ತಾರೆ.

ನೂಲು ಹುಣ್ಣಿಮೆ ದಿನ ತಮ್ಮ ಮನೆಯಲ್ಲಿನ ನೂಲುಗಳನ್ನು ತಂದು ಕಳಸ ಪ್ರತಿಷ್ಠೆ ಮಾಡಿ ಎಲ್ಲಾ ರೀತಿಯ ನೇಕಾರಿಕೆಯ ವಸ್ತುಗಳನ್ನು ಮತ್ತು ಕತ್ತಿ ಗುಂಡು ಇತರೆ ಆಯುಧಗಳ ಪೂಜೆ ಮಾಡುವ ಪದ್ಧತಿ ಇರುತ್ತೆ. 

ಅದೇ ದಿನ ರಕ್ಷಾ ಬಂಧನ ಅಥವಾ ರಾಖಿ ಹಬ್ಬವನ್ನು ಸೋದರ ಸೋದರಿಯರು ಆಚರಿಸುತ್ತಾರೆ. ಇವರುಗಳ ಅಕ್ಕರೆ, ಅನುರಾಗಗಳು ಜೀವನ ಪರ್ಯಂತ ಇರಬೇಕೆಂದು ನೆನಪಿಸುವ ದಿನವಿದು.

ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.

ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತ ದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನನ್ನ ಮನದಲ್ಲಿ ಮೂಡಿಸುತ್ತದೆ.
ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ

ಆದರೆ ಈ ಬಾರಿ ಶ್ರವಣ ಮಾಸದ ಬದಲಾಗಿ ಈ ಬಾರಿ ಗ್ರಹಣ ದೋಷವಿದ ಕಾರಣ ಭಾದ್ರಪದ ಮಾಸದಲ್ಲಿ ಉಪಾಕರ್ಮ ವನ್ನು ಮಾತ್ರ ಆಚರಣೆ ನಡೆಯುತ್ತಿದೆ.

ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ

ಹಿಂದಿನ ಕಾಲದಲ್ಲಿ ಇಂದಿನ ರೀತಿಯಲ್ಲಿ ಜಾತಿ ಪದ್ದತಿಗಳು ಇಲ್ಲದೇ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ವರ್ಣಾಶ್ರಮ ಪದ್ದತಿ ಜಾರಿಯಲ್ಲಿತ್ತು. ಈ ವರ್ಣಾಶ್ರಮಗಳು ಹುಟ್ಟಿನಿಂದ ಬಾರದೇ ಅವರವರ ಪಾಲಿಸುವ ವೃತ್ತಿಯಿಂದ ನಿರ್ಧರಿಸಲ್ಪಡುತ್ತಿತ್ತು. ಜ್ಞಾನಾರ್ಜನೆಗಾಗಿ ಗುರುಕುಲಕ್ಕೆ ಮಕ್ಕಳನ್ನು ಕಳುಹಿಸುವ ಮುಂಚೆ ಉತ್ತಮವಾದ ಸಂಸ್ಕಾರ ಮತ್ತು ಮನಸ್ಸಿನ ಕೊಳೆಗಳನ್ನು ಕಳೆದು ಪರಬ್ರಹ್ಮಪ್ರಾಪ್ತಿಗಾಗಿ, ಮತ್ತು ತನ್ಮೂಲಕ ಸತ್ಪುರುಷರಾಗುವುದಕ್ಕಾಗಿ ಉಪನಯನವನ್ನು ಮಾಡುತ್ತಿದ್ದರು.

ಸಾಮಾನ್ಯವಾಗಿ ಆರರಿಂದ ಎಂಟು ವಯಸ್ಸಿನ ಒಳಗಿನ ಗಂಡು ಮಕ್ಕಳಿಗೆ ಉಪನಯನ ಮಾಡುವುದು ನಡೆದು ಬಂದಿರುವ ಸಂಪ್ರದಾಯ. ಹುಟ್ಟಿನಿಂದ ಅಲ್ಲಿಯವರೆಗೂ ತಾಯಿಯ ಮಡಿಲಲ್ಲೇ ಬೆಳೆದ ಗಂಡು ಮಕ್ಕಳು ಅಂದಿನ ಕಾಲದಲ್ಲಿ ಕೆಲವೊಂದು ಬಾರೀ ಇನ್ನೂ ತಾಯಿಯ ಹಾಲನ್ನೇ ಕುಡಿಯುತ್ತಿದ್ದ ಮಕ್ಕಳಿಗೆ ಕಡೆಯದಾಗಿ ಮಾತೃ ಭೋಜನ ಮಾಡಿಸಿ ಬ್ರಹ್ಮೋಪದೇಶ ಮಾಡಿಸುತ್ತಿದ್ದರು. ಈ ರೀತಿಯಾಗಿ ಬ್ರಹ್ಮೋಪದೇಶ ಮಾಡಿದ ನಂತರವೇ ಅವರಿಗೆ ಎರಡನೇ ಜನ್ಮ ಪ್ರಾಪ್ತಿಯಾದಂತೆ ಎಂದು ದ್ವಿಜ ಎಂದೂ ಕರೆಯುತ್ತಿದ್ದರು. ಮಕ್ಕಳಿಗೆ ಆಚಾರ್ಯ ಮುಖೇನ ಶಾಸ್ತ್ರೋಕ್ತವಾಗಿ ತಂದೆಯಿಂದ ಗಾಯತ್ರೀ ಮಂತ್ರದ ಉಪದೇಶವಾಗಿ ಸ್ವಸಾಮರ್ಥ್ಯ, ಪಾಂಡಿತ್ಯ ಮತ್ತು ಸಮೃದ್ಧಿಯ ಸಂಕೇತವಾದ ಮೂರು ಎಳೆಗಳ ಬ್ರಹ್ಮ ಗಂಟು ಉಳ್ಳ ಜನಿವಾರವನ್ನು ಧಾರಣೆ ಮಾಡಿಸುತ್ತಾರೆ. ಆ ಮೂರು ಎಳೆಗಳು, ಸ್ವಸಾಮರ್ಥ್ಯದ ದೇವಿ (ಪಾರ್ವತಿ), ಪಾಂಡಿತ್ಯದ ದೇವಿ (ಸರಸ್ವತಿ) ಮತ್ತು ಸಮೃದ್ದಿ ಅಥವಾ ಧನ ದೇವಿ (ಲಕ್ಷ್ಮಿ) ಈ ಮೂರೂ ದೇವಿಯರ ಆಶೀರ್ವಾದ ಸುಖಜೀವನ ನಡೆಸಲು ಇರಲೇ ಬೇಕಾದ ಕಾರಣ ಸದಾ ಕಾಲವೂ ಮೂರು ಎಳೆಗಳ ಜನಿವಾರವನ್ನು ಧರಿಸಿರುವುದು ಅವಶ್ಯಕವಾಗಿತ್ತು.

ಸಾಧಾರವಾಗಿ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯ ವರ್ಣಾಶ್ರಮ ಪಾಲಿಸುವುವರು ತಮ್ಮ ಗಂಡು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಈ ರೀತಿಯಲ್ಲಿ ಬ್ರಹ್ಮೋಪದೇಶ ಮಾಡಿಸಿ ಗುರು ಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿ ಕೊಡುತ್ತಿದ್ದರು. ಗುರುಕುಲದಲ್ಲಿ ಆ ವಿಧ್ಯಾರ್ಥಿಗಳು ಗಾಯತ್ರಿಯ ಔಪಾಸನೆಯೊಂದಿಗೆ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಾ ತಮ್ಮ ಸ್ವಸಾಮಥ್ಯದ ಅನುಗುಣವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಸಾಧಾರಣವಾಗಿ ಎಲ್ಲಾ ವಸ್ತುಗಳಿಗೆ ಒಂದು ನಿರ್ಧಿಷ್ಟ ಅವಧಿಯಿರುತ್ತದೆ. ಆ ಅವಧಿ ಮುಗಿದಂತೆಲ್ಲಾ ಅದನ್ನು ಬದಲಿಸುವುದು ಜಗದ ನಿಯಮ. ಹಾಗಾಗಿ ಕಾಲ ಕಾಲಕ್ಕೆ ಅನುಗುಣವಾಗಿ ನಮ್ಮ ಬಟ್ಟೆ, ಗೃಹೋಪಯೋಗಿ ವಸ್ತುಗಳು, ವಾಹನ ಇತ್ಯಾದಿಗಳನ್ನು ಹೊಸದರೊಂದಿಗೆ ಬದಲಾಯಿಸುತ್ತಿರುತ್ತೇವೆ. ಅಂತಯೇ ಈ ಜನಿವಾರವನ್ನೂ ಮೈಲಿಗೆ, ಪುರುಡು ಮತ್ತು ಸೂತಕಗಳ ಹೊರತಾಗಿ ವರ್ಷಕ್ಕೊಮ್ಮೆ ಬದಲಿಸುವ ಸಂಪ್ರದಾಯವಿದೆ. ಹಾಗೆ ಜನಿವಾರವನ್ನು ಬದಲಾಯಿಸುವ ದಿನವನ್ನು ಉಪಾಕರ್ಮ ಎನ್ನುತ್ತಾರೆ. ಉಪಾಕರ್ಮ ಪದದ ಅರ್ಥ “ಹೊಸ ಆರಂಭ”. ಸಮಯದೊಂದಿಗೆ ಹಳೆಯದಾದ ಯಾವುದನ್ನಾದರೂ ಬದಲಾಯಿಸಬೇಕು
ಅಥವಾ ನವೀಕರಿಸಬೇಕು ಇಲ್ಲವೇ ಪುನಃ ಶಕ್ತಿಯುತಗೊಳಿಸಬೇಕು ಎಂದರ್ಥ. ಉಪಾಕರ್ಮವನ್ನು ವರ್ಷಕ್ಕೆ ಒಂದು ಬಾರಿ ಶ್ರಾವಣ ಮಾಸದ ಶುಕ್ಲ ಪಕ್ಷದ ಶ್ರವಣ ನಕ್ಷತ್ರದ ದಿನದಂದು ಋಗ್ವೇದಿಗಳು ಮತ್ತು ಹುಣ್ಣಿಮೆಯ ದಿನ ಯಜುರ್ವೇದಿಗಳು ಆಚರಿಸುತ್ತಾರೆ. ಹಾಗಾಗಿ ಈ ದಿನವನ್ನು ನೂಲು ಹುಣ್ಣಿಮೆ ಎಂದೂ ಕರಾವಳಿಯ ಕಡೆ ಕರೆಯುವುದುಂಟು. ಅಂದು ಉಪನಯನವಾದವರು ಶಾಸ್ತ್ರೋಕ್ತವಾಗಿ ತಮ್ಮ ಜನಿವಾರವನ್ನು ಗೌತಮಾದಿ ಸಪ್ತ ಋಷಿಗಳಿಗೆ ಶ್ರಾದ್ಧ ತರ್ಪಣಗಳನ್ನು ನೀಡುವುದರ ಮೂಲಕ ಬದಲಾಯಿಸುತ್ತಾರೆ.

ಹಿಂದೆಲ್ಲಾ ಕುಲಪುರೋಹಿತರೇ ಮನೆಗಳಿಗೇ ಆಗಮಿಸಿ ನಡೆಸುತ್ತಿದ್ದ ಉಪಾಕರ್ಮ ಇಂದು ಸಮಯಾ ಭಾವದಿಂದ ದೇವಸ್ಥಾನಗಳಲ್ಲಿಯೋ ಇಲ್ಲವೇ ಕೆಲವು ಸಂಘ ಸಂಸ್ಥೆಗಳ ಮುಖಾಂತರವೋ ಇಲ್ಲವೇ ಹಿರಿಯ ಪುರೋಹಿತರ ಮನೆಗಳಲ್ಲಿ ಸಾಮೂಹಿಕವಾಗಿ ಆಚರಿಸಲ್ಕಡುತ್ತಿದೆ. ಹಾಗೆ ಸಾಮೂಹಿಕವಾಗಿ ಆಚರಿಸಲ್ಪಡುವ ಕಡೆ , ಮೊದಲು ವಿಘ್ನವಿನಾಶಕ ಗಣೇಶನ ಪೂಜೆ ಮಾಡಿ ನಂತರ ಸಪ್ತ ಋಷಿಗಳ ಮಂಡಲಗಳನ್ನು ಮಾಡಿ ಅಲ್ಲಿ ಸಪ್ತ ಋಷಿಗಳ ಆಹ್ವಾನೆ ಮಾಡಿ ಅವರಿಗೆ ಶ್ರಧ್ಧಾ ಭಕ್ತಿಯಿಂದ ಶೋಡಶೋಪಚಾರ ಪೂಜೆ ಮಾಡಿದ ನಂತರ ತಂದಿದ್ದ ಜನಿವಾರಗಳಿಗೆ ಪೂಜೆ ಮಾಡಿ ಆಚಾರ್ಯರಿಗೂ ಮತ್ತು ಅಲ್ಲಿರುವ ಹಿರಿಯರಿಗೂ ಯಥಾ ಶಕ್ತಿ ದಕ್ಷಿಣೆಯೊಂದಿಗೆ ಜನಿವಾರವನ್ನು ದಾನ ಮಾಡಿ, ಅಕ್ಕಿಯ ಹಿಟ್ಟಿನ ಗುಳಿಗೆಯನ್ನು ಹಲ್ಲಿಗೆ ತಾಕದಂತೆ ಸ್ವೀಕರಿಸಿ ಶ್ರೌತ ಸ್ಮಾರ್ತಾದಿ ನಿತ್ಯ ನೈಮಿತ್ತಿಕ ಕರ್ಮಾನುಷ್ಠಾನ ಯೋಗ್ಯತಾ ಸಿದ್ಯರ್ಥಂ ಎಂದು ಸಂಕಲ್ಪ ಮಾಡಿ ಮೂರು ವೇದಗಳ ಛಂದಸ್ಸನ್ನು ಮತ್ತು ಬ್ರಹ್ಮ , ವಿಷ್ಣು , ರುದ್ರ ಈ ಮೂವರು ದೇವತೆಗಳ ಹೆಸರಿನಲ್ಲಿ (ಜನಿವಾರದ 3 ದಾರಗಳು ಪ್ರತಿನಿಧಿಸುತ್ತವೆ ಎಂದೂ ನಂಬಿಕೆ ಇದೆ ) ಯಜ್ಞೋಪವೀತ ಧಾರಣ ಮಂತ್ರವನ್ನು ಕರ ಷಡಂಗ-ವಿನ್ಯಾಸ ಪೂರ್ವಕ, ದೇಹಕ್ಕೆ ಆವಾಹನೆ ಮಾಡಿಕೊಂಡು ಸೂರ್ಯನ ಮತ್ತು ಪೃಥಿವೀ ಸ್ತುತಿಯ ವೇದ ಮಂತ್ರಗಳೊಂದಿಗೆ – ದಾರಣಮಂತ್ರ ಹೇಳಿ ಧರಿಸಲಾಗುವುದು.

ಯಜ್ಞೋಪವೀತ ಧಾರಣ ಮಂತ್ರ

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. “ತತ್ಸವಿತುರ್ವರೇಣ್ಯಮ್” ಮೊದಲ ಚರಣ. “ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ”. “ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.

ಯಜ್ಞೋಪವೀತಂ ಪರಮಂಪವಿತ್ರಂ | ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮಂಚಶುಭ್ರಂ |ಯಜ್ಞೋಪವೀತಂ ಬಲಮಸ್ತು ತೇಜಃ||

ಈ ಶ್ಲೋಕದ ಅರ್ಥ ಹೀಗಿದೆ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು.

ಈ ಮಂತ್ರೋಚ್ಛಾರ ಮಾಡಿದ ನಂತರ ಜನಿವಾರವನ್ನು ಧಾರಣೆ ಮಾಡಿ ಯಥಾ ಶಕ್ತಿ 32, 64, 108 ಅಥವಾ 1000 ಗಾಯತ್ರಿ ಜಪ ಮಾಡಬೇಕು.

ಬ್ರಹ್ಮಚಾರಿಗಳು ಮೂರೆಳೆಯ ಒಂದು ಜನಿವಾರವನ್ನು ಮಾತ್ರಾ ಧರಿಸಿದರೆ,
ಗೃಹಸ್ಥರು / ವಿವಾಹಿತರು ಮೂರೆಳೆಯ ಎರಡು ಜನಿವಾರ ಧಾರಣೆ ಮಾಡುತ್ತಾರೆ. ಮೊದಲನೇ ಜನಿವಾರ ತನ್ನದಾದರೆ ಮತ್ತೊಂದು ತನ್ನ ಪತ್ನಿಯ ಪರವಾಗಿ ಧರಿಸುತ್ತಾರೆ. ಅಕಸ್ಮಾತ್ ಎರಡನೇ ಮದುವೆ ಯಾದವರು ಮೂರನೇ ಜನಿವಾರವನ್ನೂ ಧರಿಸುತ್ತಾರೆ.
ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ, ದೇವರಿಗೆ ಅಥವಾ ಹಿರಿಯರಿಗೆ ನಮಸ್ಕರಿಸುವಾಗ ಹೆಗಲ ಮೇಲೆ ಉತ್ತರೀಯ(ಶಾಲು) ಇರಲೇ ಬೇಕೆಂಬುದು ಒಂದು ರೂಢಿಯಲ್ಲಿರುವ ಧಾರ್ಮಿಕ ನಿಯಮ. ಹಾಗಾಗಿ ಉತ್ತರೀಯವಿಲ್ಲದಿದ್ದರೂ, ಅದಕ್ಕೆ ಲೋಪ ಬಾರದಂತೆ ಉತ್ತರೀಯದ ಬದಲಾಗಿ ಮತ್ತೊಂದು ಹೆವ್ವಿನ ಜನಿವಾರನ್ನೂ ಧರಿಸುವುದು ರೂಢಿಯಲ್ಲಿದೆ.
ಇನ್ನೂ ಕೆಲವು ಗೃಹಸ್ಥರು ನಾಲ್ಕು ಜನಿವಾರ ಧರಿಸುವುದೂ ಉಂಟು. ಅಕಸ್ಮಾತ್ ಕಾರಾಣಾಂತರಗಳಿಂದ ಜನಿವಾರ ಕಿತ್ತು ಹೋದಲ್ಲಿ, ಅದನ್ನು ಆದಷ್ಟು ಬೇಗ ಬರುವ ಅಪರಾಹ್ನದೊಳಗೆ ಹೊಸ ಜನಿವಾರರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ಅಕಸ್ಮಾತ್ ಕಿತ್ತು ಹೋದರೂ ಅದೊಂದು ಜನಿವಾರ ತೆಗೆದರೆ ಲೋಪವಾಗುವುದಿಲ್ಲ. ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ-ಅಗತ್ಯವೂ ಇರುವುದಿಲ್ಲ. ಹಾಗಾಗಿ ಕೆಲವರು ಮುಂಜಾಗ್ರತಾ ಕ್ರಮವಾಗಿ ನಾಲ್ಕು ಜನಿವಾರ ಹಾಕಿಕೊಳ್ಳುವರು
ಹಾಗೆ ಜನಿವಾರ ಬದಲಾಯಿಸಿದ ನಂತರ ತಂದೆ ಇಲ್ಲದವರು ತಮ್ಮ ಪಿತೃಗಳಿಗೆ ತರ್ಪಣ ನೀಡಿದ ನಂತರ ಸಪ್ತ ಋಷಿ ಮಂಡಲಗಳಿಗೆ
ಸತ್ವದ ಹಿಟ್ಟಿನ ನೈವೇದ್ಯ ಮಾಡಿ, ಮಹಾ ಮಂಗಳಾರತಿ ಮಾಡುವ ಮೂಲಕ ಉಪಾಕರ್ಮ ವಿಧಿ ವಿಧಾನಗಳು ಸಂಪೂರ್ಣಗೊಳ್ಳುತ್ತದೆ.

ಹಳೆಯ ಜನಿವಾರವನ್ನು ಮಾರನೇಯ ದಿನ ಸಂಧ್ಯಾವಂದನೆ ಮಾಡಿದ ನಂತರ ಸೊಂಟದ ಕೆಳಗಿನ ಮೂಲಕ ತೆಗೆದು ಅದನ್ನು ಛಿನ್ನ ಮಾಡಿ (ಒಂದೆಳೆಯನ್ನು ಕತ್ತರಿಸಿ) ಕೆರೆ/ನದಿಯ ನೀರಿಗೋ ಇಲ್ಲವೇ ಯಾರೂ ತುಳಿಯದ ಜಾಗದಲ್ಲಿ ವಿಸರ್ಜಿಸುತ್ತಾರೆ.

ಉಪಾಕರ್ಮದ ಸತ್ವದ ಹಿಟ್ಟು

ಉಪಾಕರ್ಮದ ದಿನ ಮಾತ್ರವೇ ಸಿದ್ಧ ಪಡಿಸುವ ವಿಶೇಷವಾದ ಪ್ರಸಾದವೇ ಸತ್ವದ ಹಿಟ್ಟು. ಪೂಜೆಗೆ ಬಂದವರೆಲ್ಲರೂ ತಂದಿದ್ದ ಬಗೆ ಬಗೆಯ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ, ಅಕ್ಕಿ ಹಿಟ್ಟು, ಬೆಲ್ಲ, ಜೇನುತುಪ್ಪಾ, ಹಾಲು, ಮೊಸರು, ತುಪ್ಪಾ ಮತ್ತು ಎಳ್ಳನ್ನು ಜೊತೆಗೆ ಕಾಯಿ ತುರಿ ಸೇರಿಸಿ ಹದವಾಗಿ ಬೆರೆಸಿದರೆ ಸತ್ವದ ಹಿಟ್ಟು ಸಿದ್ಧವಾಗುತ್ತದೆ. ಎಲ್ಲಾ ಪರಿಕರಗಳು ಹಸಿ ಪದಾರ್ಥಗಳಾಗಿದ್ದರೂ ತಿನ್ನಲು ಬಹಳ ರುಚಿಯಾಗಿತ್ತದೆ. ಸಾಧಾರಣವಾಗಿ ಬಂದವರೆಲ್ಲರೂ ಯಥಾ ಶಕ್ತಿ ತಾವು ತಂದ ಡಬ್ಬಿಗಳಲ್ಲಿ ಈ ಪ್ರಸಾದವನ್ನು ತುಂಬಿ ಕೊಂಡು ಮನೆಗೆ ಹೋಗಿ ತಮ್ಮ ಕುಟುಂಬದೊಡನೆ ಉಪಾಕರ್ಮದ ಪ್ರದಾದವಾಗಿ ಸ್ವೀಕರಿಸುವ ಪದ್ದತಿ ಇದೆ.

ಹೀಗೆ ಉಪಾಕರ್ಮ ಮುಗಿಸಿಕೊಂಡು ಮನೆಯೊಳಗೆ ನೇರವಾಗಿ ನುಗ್ಗುವಂತಿಲ್ಲ. ಉಪಾಕರ್ಮದ ನಂತರ ಮನೆಗ ಮುಂಬಾಗಿಲಿನ ಹೊಸಿಲಿನಲ್ಲಿ ನಿಂತರೆ ಒಳಗಿನಿಂದ ಹಿರಿಯ ಮುತ್ತೈದೆಯರು ಇಲ್ಲವೇ ಚಿಕ್ಕ ಹೆಣ್ಣು ಮಕ್ಕಳು ನೂತನ ಜನಿವಾರಧಾರಿಗಳಿಗೆ ಆರತಿ ಬೆಳಗಿ ಒಳಗೆ ಬರಮಾಡಿಕೊಳ್ಳುತ್ತಾರೆ. ನಂತರ ಜನಿವಾರ ಧಾರಿಗಳೆಲ್ಲರೂ ಆರತಿ ಬೆಳಗಿದವರಿಗೆ ಯಥಾ ಶಕ್ತಿ ಕಾಣಿಕೆಯನ್ನು ನೀಡುವ ಸಂಪ್ರದಾಯ ಕೆಲವರ ಮನೆಯಲ್ಲಿ ರೂಢಿಯಲ್ಲಿದೆ. ಅಂದಿನ ಉಪಹಾರಕ್ಕೆ ಜನಿವಾರದ ಸಂಕೇತವಾಗಿ ಉದ್ದುದ್ದನೆಯ ಒತ್ತು ಶ್ಯಾವಿಗೆಯನ್ನು ಮಾಡುವ ರೂಢಿ ಹಲವರ ಮನೆಯಲ್ಲಿದೆ.

ಸಮಯಾಭಾವದಿಂದಲೋ ಇಲ್ಲವೇ ನಾನಾ ಕಾರಣಗಳಿಂದ ಈ ರೀತಿಯಾಗಿ ಶಾಸ್ತ್ರೋಕ್ತವಾಗಿ ಉಪಾಕರ್ಮದ ನಿಯಮಿತ ವಿಧಿ ವಿಧಾನಗಳ ಮುಖಾಂತರ ಜನಿವಾರ ಬದಲಿಸಿಕೊಳ್ಳಲು ಆಗದಿದ್ದವರು ಮನೆಯಲ್ಲಿಯೇ ಬೆಳಿಗ್ಗೆ ಸಂಧ್ಯಾವಂಧನೆ ಮಾಡಿ ಜನಿವಾರಗಳಿಗೆ ಅರಿಶಿನ ಹಚ್ಚಿ ಕುಂಕುಮದ ಮೂಲಕ ಪೂಜೆ ಮಾಡಿ ಯಜ್ಞೋಪವೀತ ಧಾರಣೆಯ ಮಂತ್ರ ಪಠಿಸುತ್ತಾ ನೂತನ ಜನಿವಾರ ಧರಿಸಿ ಯಥಾ ಶಕ್ತಿ ಗಾಯತ್ರೀ ಮಂತ್ರ ಜಪಿಸಿ ಮಾರನೆಯ ದಿನ ಸಂಧ್ಯಾವಂದನೆ ಮಾಡಿದ ನಂತರ ಹಳೆಯ ಜನಿವಾರವನ್ನು ವಿಸರ್ಜಿಸ ಬೇಕು.

ಜನಿವಾರ ಕೇವಲ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯರಿಗೇ ಮಾತ್ರವೇ ಮೀಸಲಾಗಿಲ್ಲದೇ, ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದಾಗಿದೆ . ಅದಕ್ಕೆ ನಮ್ಮ ಶಾಸ್ತ್ರ ಸಂಪ್ರದಾಯಗಳಲ್ಲಿ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ಹಾಗೆ ಸರಿಯಾಗಿ ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿ ಹೋಗಿ ಯಜ್ಞೋಪವೀತ ಫಲ ಆತನಿಗೆ ಲಭಿಸುವುದಿಲ್ಲ.
*ಯಜ್ಞೋಪವೀತ(ಜನಿವಾರ)*
🌺🌺🌺🌺🌺🌺🌺
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ *ಯಜ್ಞೋಪವೀತ ಧಾರಣೆ* ಜನಿವಾರದ ಧರಿಸಿದರೇ ಏನು ಪ್ರಯೋಜನ ವಿದೆ...! ಬಲ ಕಿವಿಯಲ್ಲಿ ಹಾಕಿದರೆ.. ಏನು ಆಗುವುದು.!  ನಿಯಮಗಳನ್ನು ಪಾಲಿಸಬೇಕು.. ಬೇಡ ವೇ.. ಬ್ರಹ್ಮಾ ಗಂಟು.. ಗಾಯತ್ರಿ ಮಂತ್ರ ಕ್ಕೆ.. ಸೂರ್ಯ ದೇವನು ಕೊಟ್ಟ ವೇದ ಮಾತೇ ಯಾ ಕೊಡುಗೆಯನ್ನು ಏನು.... 

ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.

" *ಉಪನಯನ* " ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ.

ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.

ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ.

 ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸ ಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.

ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ. ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು.  ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸ ಬೇಕು, ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡ ಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳ ಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.

ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.

ಯಜ್ಞೋಪವೀತದ ಉದ್ದ ತೊಂಬತ್ತಾರು ಇಂಚುಗಳಷ್ಟಿರ ಬೇಕು. ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಅರವತ್ತ ನಾಲ್ಕು  ಕಲೆಗಳನ್ನು ಹಾಗೂ ಮೂವತ್ತೆರಡು ವಿದ್ಯೆಗಳನ್ನು ಕಲಿಯುವ ಹಂಬಲವಿರ ಬೇಕು. ಆತ ಆ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು. ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ಅಂಗಗಳು,  ಆರು ದರ್ಶನಗಳು, ಮೂರು ಸೂತ್ರ ಗ್ರಂಥಗಳು, ಒಂಬತ್ತು ಅರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ. ವಾಸ್ತು ನಿರ್ಮಾಣ, ಚಿತ್ರಕಲೆ, ಸಾಹಿತ್ಯ, ಯಂತ್ರ ನಿರ್ಮಾಣ, ಆಭರಣ ತಯಾರಿಕೆ,  ಕೃಷಿ ಜ್ಞಾನ ಮುಂತಾದವು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸ ಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. "ತತ್ಸವಿತುರ್ವರೇಣ್ಯಮ್” ಮೊದಲ ಚರಣ. "ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ". "ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.

*ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ*:-

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||

ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ

 
*ಯಜ್ಞೋಪವೀತದ ನಿಯಮಗಳು*:-

* ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು  ಬಲಗಿವಿಯ ಮೇಲೆ ಹಾಕಿ ಕೊಳ್ಳ ಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿ ಕೊಳ್ಳ ಬೇಕು.            ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ.
* ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸ ಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರ ಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸ ಬೇಕು.
* ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.

* ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯ ಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು.

  *ಯಜ್ಞೋಪವೀತದ ವೈಜ್ಞಾನಿಕ ಮಹತ್ವ*:-

* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು   ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ   ವಿಷಾಣುಗಳು ನಾಶಗೊಳ್ಳುತ್ತವೆ.

* ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನು
ಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು
ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.

* ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.

* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.

* ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.

* ವ್ಯಕ್ತಿಯ ಎಡ ಬೆನ್ನಿನ ಭಾಗದಲ್ಲಿ ಹೊಟ್ಟೆಯ ಕಡೆ ಸಾಗುವ ಒಂದು ಪ್ರಾಕೃತಿಕ ರೇಖೆಯಿರುತ್ತದೆ. ಈ ರೇಖೆ ವಿದ್ಯುತ್ ಪ್ರವಾಹದಂತೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಯಜ್ಞೋಪವೀತವನ್ನು ಧರಿಸುವುದರಿಂದ ಈ ರೇಖೆಯ ಶಕ್ತಿ ಕಡಿಮೆಯಾಗುತ್ತದೆ. ಆಗ ವ್ಯಕ್ತಿಯ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ.

* ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.

* ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವಾಗ ಕಿವಿಯನ್ನು
ಹಿಂಡಲಾಗುತ್ತಿತ್ತು. ಇದಕ್ಕೆ ಕಾರಣ ಕಿವಿಗೂ ಹಾಗೂ ಮೆದುಳಿಗೂ ಇರುವ
ಸಂಪರ್ಕ. ಕಿವಿಯನ್ನು ಎಳೆದಾಗ ವಿದ್ಯಾರ್ಥಿಯ ಮೆದುಳು ಜಾಗೃತವಾಗುತ್ತಿತ್ತು. ವಿದ್ಯಾರ್ಥಿಯ ಆಲಸ್ಯತನ ದೂರವಾಗುತ್ತಿತ್ತು. ಹಾಗೇ
ಯಜ್ಞೋಪವೀತವನ್ನೂ ಕಿವಿಯ ಮೇಲೆ ಹಾಕಿ ಕೊಂಡಾಗ ನಮ್ಮಲ್ಲಿರುವ ಆಲಸ್ಯತನ ದೂರಾಗಿ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ.

ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ.

▬▬▬▬▬ஜ۩۞۩ஜ▬▬▬۩۞۩ஜ▬▬▬▬▬*॥ಸರ್ವೆಜನಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು||
         ▬▬▬▬▬ஜ۩۞۩ஜ▬▬▬▬▬

.

ಉಪಾಕರ್ಮ

ಮಂಗಳವಾರದಂದು ಋಗ್ವೇದ ಉಪಾಕರ್ಮ

ಮಂಗಳವಾರದಂದು ಋಗ್ವೇದ ಉಪಾಕರ್ಮ

ಉಪಾಕರ್ಮ 
ಉಪಾಕರ್ಮವನ್ನು ಶ್ರಾವಣಮಾಸದಲ್ಲಿ ಬರುವ ದಿನದಂದು ಋಗ್ವೇದಿಗಳು ಯಜುರ್ವೇದಿಗಳು ಉಪಾಕರ್ಮವನ್ನು ಮಾಡಿಕೊಳ್ಳಬೇಕು.  ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.

ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತ್ಯವ್ಯವನ್ನು ಸೂಚಿಸುತ್ತದೆ.

ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋಪವೀತವು ದೇವ ಋಣ, ಋಷಿ‌ಋಣ ಮತ್ತು ಪಿತೃ‌ಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರಬೇಕೆಂದು ತಿಳಿ ಹೇಳುತ್ತದೆ.

ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ ತ್ರಿಕಾಲಸಂಧ್ಯಾವಂದನೆಯನ್ನು ಮಾಡಿಮುಗಿಸು ಎನ್ನುತ್ತಿದೆ

ಈ ಯಜ್ಞೋಪವೀತವು. ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವುದರ ಸಂಕೇತ.

ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞ ನಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತ‌ಋಷಿಗಳನ್ನು ಪೂಜಿಸಿ, ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಟವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಠಗೊಳಿಸುವದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
**********

ಉಪಾಕರ್ಮ ಮತ್ತು ಉತ್ಸರ್ಜನ ಎಂಬ ವೇದವ್ರತಗಳು:
ಲೇಖನ- ಶ್ರೀ ನಾಗರಾಜಶಾಸ್ತ್ರಿ
ವೇದವ್ರತಗಳಲ್ಲಿ ಎರಡು ವಿಧ. ಉಪಾಕರ್ಮ ಮತ್ತು ಉತ್ಸರ್ಜನ ವಿಧಿಗಳು.ಉಪಾಕರ್ಮದ ಬಗ್ಗೆ ಹಲವಾರು ರೀತಿಯ ಸಂಪ್ರದಾಯಗಳು ಇವೆ. ಆದರೇ ಈಗಿನ ಕಾಲಕ್ಕೆ ಅದು ಕೇವಲ ಜನಿವಾರ ಹಾಕಿಕೊಳ್ಳುವ ಕಾರ್ಯಕ್ರಮವೆಂದೇ ಪ್ರತೀತಿಯಾಗಿರುವದು ವಿಷಾದನೀಯ. ಇದು ಕೇವಲ ಒಂದು ಸಾಂಕೇತಿಕವಾದ ಸಂಪ್ರದಾಯವಾಗಿರುವದು ಶೋಚನೀಯ.ಈಗಿನ ಕಾಲಕ್ಕೆ ಇದು ಕೇವಲ "ಅಹಂ ಬ್ರಹ್ಮಾಸ್ಮಿ" " ಹೆಮ್ಮೆಯಿಂದ ಹೇಳು ಬ್ರಾಹ್ಮಣನೆಂದು" ಎಂಬ ಸಂಪ್ರದಾಯಕ್ಕೆ ಸೇರಿರುವಂತೆ ಕೇವಲ ಔಪಚಾರಿಕ ವಿಷಯಮೌಢ್ಯತೆಯಾಗಿರುವದು ದುರ್ದೈವ ಹಾಗೂ ಖಂಡನೀಯ. ಆದರೇ ಈ ಉಪಾಕರ್ಮ ಮತ್ತು ಉತ್ಸರ್ಜನ ಎಂಬ ಎರಡು ವಿಧಿಗಳಿಗೂ ಮತ್ತು ಜನಿವಾರ ಹಾಕಿಕೊಳ್ಳುವ ಕ್ರಿಯೆಗೂ ಯಾವದ್ವಿಧವಾದ ಸಂಬಂಧವೂ ಇರುವದಿಲ್ಲ.ಇದರ ಬಗ್ಗೆ ಪ್ರಶ್ನೋತ್ತರ ಮಾಲಿಕೆಯನ್ನು ಸಹೃದಯರಿಗೆ ಅರ್ಪಿಸಬೇಕೆಂದು ಈ ಕಿರು ಹೊತ್ತಿಗೆಯನ್ನು ಪರಿಚಯಿಸಿಕೊಡುತ್ತಿದ್ದೇನೆ.ಇದರಿಂದ ವೇದಾಧ್ಯಯನದ ಪುನರುತ್ಥಾನವಾದರೇ ಸಂಪ್ರದಾಯದ ಪುನರುತ್ಥಾನವಾದಂತೆಯೇ ಎನ್ನುವದರಲ್ಲಿ ಸಂಶಯವಿಲ್ಲ.

೧.ಪ್ರ: ಉಪಾಕರ್ಮ ಎಂದರೇನು ?

ಉ: "ಉಪಾಕರ್ಮ" ಅಥವಾ ಉಪಕ್ರಮ ಎಂದರೆ ಪ್ರಾರಂಭ.

೨.ಪ್ರ: - ಯವುದರ ಪ್ರಾರಂಭ ?

ಉ: ವೇದಾಧ್ಯಯನದ ಪ್ರಾರಂಭ.

೩. ಪ್ರ:- ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?

ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.

೪.ಪ್ರ:- ವೇದಗಳ ಅಧ್ಯಯನದ ಆರಂಭ ಮತ್ತು ವಿರಮನ ಯಾವಾಗ ಹೇಗೆ ಮಾಡಬೇಕು.?

ಉ: ಆಪಸ್ತಂಬರು ಇದಕ್ಕೆ ಸೂತ್ರವನ್ನು ಹೇಳಿದ್ದಾರೆ.
"ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅಧ್ಯಾಯೋ ಪ್ರಾಕೃತ್ಯ ತೈಷ್ಯಾಂ ಪೌರ್ಣಮಾಸ್ಯಾಂ ರೋಹಿಣ್ಯಾಂ ವಾ ವಿರಮೇತ್ "

ಮೇಲಿನ ಶ್ಲೋಕದ ಅರ್ಥವೇನೆಂದರೆ :- ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ವೇದಾಧ್ಯಯನವನ್ನು ಪ್ರಾರಂಭಿಸಿ ಪುಷ್ಯ ಮಾಸದ ಹುಣ್ಣಿಮೆಯ ದಿನದಲ್ಲಾಗಲೀ ಅಥವಾ ಪುಷ್ಯಮಾಸದ ರೋಹಿಣೀ ನಕ್ಷತ್ರಯುಕ್ತ ದಿನದಲ್ಲಾಗಲೀ ವಿರಮಿಸ ಬೇಕು.ಅರ್ಥಾತ್ ಅಧ್ಯಯನದ ಕಾಲ ಕೇವಲ ಐದು ತಿಂಗಳು.

೫.ಪ್ರ:- ಕೇವಲ ಐದು ತಿಂಗಳಷ್ಟೇ ಅಧ್ಯಯನವನ್ನು ಏಕೆ ಮಾಡಬೇಕು ?

ಉ: ಇದಕ್ಕೆ ನಿರ್ದಿಷ್ಟವಾದ ಕಾರಣವೇನೆಂಬುದು ತಿಳಿದಿಲ್ಲ.ಆದರೂ ಕಲಿತದ್ದದ್ದನ್ನು ಮನನ ಮಾಡಬೇಕೆಂದು ಮತ್ತು ಮಿಕ್ಕ ಕಾಲದಲ್ಲಿ ವೇದಾಂಗಗಳನ್ನು ಅಧ್ಯಯನ ಮಾಡುವದಕ್ಕಾಗಿ ಅನುಕೂಲವಾಗಲಿ ಎಂದು ಸೂತ್ರಕಾರರು ಹೀಗೆ ಹೇಳಿರಬಹುದು.ಹಾಗೂ ಹಿಂದಿನ ಗುರುಕುಲ ಪದ್ಧತಿಯನ್ನು ಪರಿಶೀಲಿಸಿದಾಗ ನಮಗೆ ತಿಳಿಯುವ ವಿಷಯವೇನೆಂದರೇ ಮಾಘಮಾಸದಿಂದಾಚೆಗೆ ಹಬ್ಬಹರಿದಿನಗಳೂ, ಯಜ್ಞಯಾಗಾದಿಗಳೂ ನಡೆಯುವ ಕಾಲವಾದ್ದರಿಂದ ಅಧ್ಯಾಪಕರು ವ್ಯಾವಹಾರಿಕ , ದ್ರವ್ಯ ಸಂಗ್ರಹಣೆ ಹಾಗೂ ವಿತರಣೆಗೆ ಕಾಲಾವಕಾಶವು ಬೇಕಾದ್ದರಿಂದ ಈ ರೀತಿಯಾಗಿ ಕಾಲಾನುಕೂಲವನ್ನು ಮಾಡಿಕೊಂಡಿರಬಹುದಾಗಿದೆ.

೬. ವೇದವ್ರತಗಳಾದ ಈ ಉಪಾಕರ್ಮ ಮತ್ತು ಉತ್ಸರ್ಜನಗಳಿಗೆ ಅಧಿಕಾರಿಗಳಾರು ?

ಉ:- ವೇದಾಧ್ಯಯನವನ್ನು ಮಾಡುವವರೇ ಇದಕ್ಕೆ ಅಧಿಕಾರಿಗಳು. ಹಾಗೂ ವೇದಾಧ್ಯಯನ ಮಾಡಿರುವವರಿಗೇ ಬ್ರಹ್ಮಯಜ್ಞವನ್ನೂ ಹೇಳಿರುವದು. ಯಾವುದಾದರೊಂದು ಶಾಖೆಯನ್ನು ವೇದಾಂಗಗಳೊಡನೆ ಪರಿಪೂರ್ಣ ಅಧ್ಯಯನ ಮಾಡಿ ಪ್ರತಿನಿತ್ಯ ಸಂಧ್ಯೋಪಾಸನೆ,ಬ್ರಹ್ಮಯಜ್ಞ,ಅಗ್ನಿಕಾರ್ಯ ,ವೇದ ಪಠನ ಹಾಗೂ ಅನುಷ್ಠಾನ ಮಾಡುವವರಿಗೆ ಈ ವ್ರತಗಳನ್ನು ಮಾಡಲೇಬೇಕೆಂಬ ನಿಯಮವಿಲ್ಲ.

೭.ಪ್ರ:- ಉಪಾಕರ್ಮ ಮತ್ತು ಉತ್ಸರ್ಜನಗಳ ಔಚಿತ್ಯವೇನು ?

ಉ:- ವೇದಸಮೂಹವನ್ನು ಪ್ರಪಂಚದ ಒಳಿತಿಗಾಗಿ ಕಂಡುಕೊಟ್ಟ ,ದ್ರಷ್ಟಾರರಾದ ಋಷಿಗಳಿಗೂ ಅದನ್ನು ಹೇಳಿಕೊಟ್ಟ ಅಧ್ಯಾಪಕರಿಗೂ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವದೇ ಇದರ ಮುಖ್ಯ ಉದ್ದೇಶ. ಅದಕ್ಕನುಗುಣವಾಗಿ ಆಯಾ ದೇವತೆಗಳಿಗೂ , ಆಯಾ ಮಂತ್ರಗಳ ದ್ರಷ್ಟಾರರಾದ ಋಷಿಗಳಿಗೂ ಹೋಮಗಳ ಮೂಲಕ ಹವಿಸ್ಸುಗಳನ್ನು ,ತರ್ಪಣಗಳನ್ನೂ ಕ್ರಮವಾಗಿ ಕೊಡಬೇಕು.

೮.ಪ್ರ:-ಉಪಾಕರ್ಮ ಮತ್ತು ಉತ್ಸರ್ಜನಗಳ ಸಂಪ್ರದಾಯವೇನು ?

ಉ:- ಉಪಾಕರ್ಮವು ಎರಡು ವಿಧ.ಕಾಂಡೋಪಾಕರ್ಮ ಮತ್ತು ಅಧ್ಯಾಯೋಪಾಕರ್ಮ.

ಕಾಂಡೋಪಾಕರ್ಮ: ಗುರುಕುಲದಲ್ಲಿ ಯಜುರ್ವೇದದ ಅಧ್ಯಯನವನ್ನು ಪ್ರಾರಂಬಿಸಿದಾಗ ಇದನ್ನು ಮಾಡಬೇಕು.ಉಪಾಕರ್ಮವನ್ನು ಪ್ರತಿಯೊಂದು ಕಾಂಡದ ಆದಿಯಲ್ಲೂ , ಉತ್ಸರ್ಜನವನ್ನು ಅಂತ್ಯದಲ್ಲೂ ಮಾಡಬೇಕು.ಇದನ್ನು ಯಜುರ್ವೇದದ ಏಳು ಕಾಂಡ ಸಂಹಿತೆ, ಮೂರು ಆಷ್ಟಕ ಬ್ರಾಹ್ಮಣ ,ಆರು ಆರಣ್ಯಕಗಳು,ಏಕಾಗ್ನಿಕಾಂಡ ಮತ್ತು ನಾಲ್ಕು ಉಪನಿಷತ್ತುಗಳು (ಇಷ್ಟೂ ಸೇರಿ ಮಾಡುವದಕ್ಕೆ ಸಾರಸ್ವತ ಪಾಠವೆನ್ನುತ್ತಾರೆ) ಇವುಗಳ ಅಧ್ಯಯನ ಸಂಪೂರ್ಣವಾಗುವವರೆಗೂ ಮಾಡುವದಕ್ಕೆ ಕಾಂಡೋಪಾಕರ್ಮ ಎಂಬುದಾಗಿ ಹೇಳುತ್ತಾರೆ.

ಅಧ್ಯಾಯೋಪಾಕರ್ಮ: ಇದು ಸಾಮಾನ್ಯವಾಗಿ ವೇದದ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ.ಪ್ರತಿವರ್ಷವೂ ಶ್ರಾವಣ ಹುಣ್ಣಿಮೆಯಲ್ಲಿ ಉಪಕ್ರಮಿಸಿ ಪುಷ್ಯ ಹುಣ್ಣಿಮೆಯಲ್ಲಿ ಉತ್ಸರ್ಜಿಸುವ ಕ್ರಮ.

೯.ಪ್ರ:- ಈ ಕರ್ಮಗಳನ್ನು ಮಾಡಲಾಗದಿದ್ದರೇ ಪ್ರಾಯಶ್ಚಿತ್ತವೇನು ?

ಉ: ಇವುಗಳು ನಿತ್ಯನೈಮಿತ್ತಿಕಕರ್ಮಗಳಾದ್ದರಿಂದ ಇವುಗಳನ್ನು ಮಾಡಲೇ ಬೇಕು.ಮಾಡದೇ ಇರುವದರಿಂದ ಪ್ರತ್ಯವಾಯ ದೋಷಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ಇದಕ್ಕೆ ಪ್ರಾಯಶ್ಚಿತ್ತವೆಂಬ ಮಾರ್ಗವಿಲ್ಲ.ಆದರೂ ಗೃಹ್ಯಸೂತ್ರಗಳಲ್ಲಿ ಇದಕೆ ಪ್ರಾಯಶ್ಚಿತ್ತಕರ್ಮಗಳನ್ನೂ ಹೇಳಿರುತ್ತಾರೆ.

೧೦.ಪ್ರ:- ಜನಿವಾರ ಹಾಕಿಕೊಳ್ಳುವುದಕ್ಕೂ ಉಪಾಕರ್ಮೋತ್ಸರ್ಜನಕ್ಕೂ ಏನೂ ಸಂಬಂಧವಿಲ್ಲ ಎಂದಿರಲ್ಲ.ಅದು ಹೇಗೆ ?

ಉ:- ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೇ ಜನಿವಾರ ಹಾಕಿಕೊಳ್ಳುವದು ಉಪಾಕರ್ಮೋತ್ಸರ್ಜನಗಳ ಒಂದು ಅಂಗವಲ್ಲ.ಅದು ನಾವು ಪವಿತ್ರರಾಗಿ,ಶುಚಿರ್ಭೂತರಾಗಿದ್ದೇವೆ ಎಂಬ ಭಾವನೆಯನ್ನು ದೃಢಪಡಿಸುವ ಕೇವಲ ಸಾಂಕೇತಿಕವಾದ ಕ್ರಿಯೆ.ಜನಿವಾರ ಹಾಕಿಕೊಳ್ಳುವದೇ ಉಪಾಕರ್ಮೋತ್ಸರ್ಜನಗಳಲ್ಲ.ಹೀಗೆ ಮಾಡಿ ಕೃತಾರ್ಥರಾದೆವು ಎಂಬುವದು ಇತ್ತೀಚಿನ ಒಂದು ಸಾಂಪ್ರದಾಯಿಕವಾದ ಅಪಾಯಕಾರೀ ಭ್ರಾಂತಿ ಎನ್ನುವದರಲ್ಲಿ ತಪ್ಪೇನಿಲ್ಲ.

೧೧.ಪ್ರ:- ಪ್ರಥಮೋಪಾಕರ್ಮ ಎಂದರೇನು?

ಉ:- ಇದರಲ್ಲಿ ವಿಶೇಷವಾದ ಯಾವ ಅರ್ಥವೂ ಇಲ್ಲ. ಉಪನಯನವಾದಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದೆವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.

೧೨.ಪ್ರ:- ಉಪಾಕರ್ಮೋತ್ಸರ್ಜನಗಳ ಪ್ರಯೋಜನವೇನು?

ಉ:- ಇದರ ಮುಖ್ಯ ಮಹತ್ವ ಎಂದರೆ ನಮ್ಮ ಆರ್ಷೇಯಪದ್ಧತಿಯು ನಿರಂತರವಾಗಿ ಮುಂದುವರೆಯಲಿ ಎಂಬುವದು. ನಾವು ಕಲಿತದ್ದನ್ನು ಮೆಲುಕು ಹಾಕುತ್ತಾ ಅರ್ಥಾತ್ ಮನನ ಮಾಡಿಕೊಳ್ಳುವದು ಮತ್ತೂ ಅದರಿಂದುಂಟಾದ ಜ್ಞಾನವನ್ನು ಲೋಕೋಪಯೋಗಕ್ಕೆ ಮಾಡಿಕೊಳ್ಳುವದು ಇನ್ನೊಂದು. ಮೇಲ್ನೋಟಕ್ಕೆ ಹೀಗೆ ಕಂಡರೂ ಇದರಲ್ಲಿ ಅತಿಮುಖ್ಯವಾದ ಮಹತ್ತರವಾದ ಉದ್ದೇಶವೂ ಇದೆ.ಅದು ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂಬುವದು.

೧೩.ಪ್ರ:- ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂದರೆ ಏನು ?

ಉ:- ಯಾತಯಾಮತೆ ಎಂದರೆ ಹಳಸುವದು,ನಿಸ್ಸಾರವಾಗುವದು ಎಂದರ್ಥ. ಇದಕ್ಕೂ ವೇದಕ್ಕೂ ಏನುಸಂಬಂಧವೆಂದರೆ ವೇದಗಳು ಹಿಂದಿನ ಕಾಲದಿಂದಲೂ ಗುರುಮುಖೇನ ಶಿಷ್ಯನಿಗೆ ಪುಸ್ತಕಗಳ ನೆರವಿಲ್ಲದೇ ನಡೆದು ಬಂದ ಆರ್ಷೇಯಪದ್ಧತಿಯು.ಇದು ನಿರಂತರವಾಗಿ ನಡೆಯಬೇಕೆಂಬುದೇ ಇದರ ಮುಖ್ಯ ಉದ್ದೇಶ. ಅದು ಹೇಗೆಂದರೇ , ಯಾವ ವೇದಗಳೇ ಆಗಲೀ ಶಾಸ್ತ್ರಗಳೇ ಆಗಲಿ ಅದಕ್ಕೆ ಅಧಿಕಾರಿ,ವಿಷಯ,ಸಂಬಂಧ ಮತ್ತು ಪ್ರಯೋಜನಗಳೆಂಬ ಅನುಬಂಧ ಚತುಷ್ಟಯಗಳು ಇದ್ದೇ ಇರುತ್ತದೆ.ವೇದಮಂತ್ರಗಳಿಗೆ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳಿರುತ್ತದೆ.ಇವುಗಳನ್ನು ಸ್ಮರಿಸಿಕೊಂಡೇ ಮಂತ್ರಗಳನ್ನು ಹೇಳಿಕೊಳ್ಳಬೇಕೆಂಬ ನಿಯಮವೂ ಇದೆ. ಹೀಗೆ ಹೇಳಿಕೊಳ್ಳದಿದ್ದರೇ ಮಂತ್ರಾರ್ಥಗಳೂ ಮತ್ತು ಅವುಗಳಿಂದುಂಟಾಗುವ ಜ್ಞಾನವೂ ಪೂರ್ತಿಯಾಗುವದಿಲ್ಲ ಎಂಬ ಭಾವನೆ.ಯಜುರ್ವೇದದ ಮಂತ್ರಗಳಿಗೆ ಈ ಸೌಲಭ್ಯವು ಮರೆಯಾಗಿರುವದು ಈ ಯಾತಯಾಮತಾ ದೋಷದಿಂದಲೇ ಎನ್ನುವದರಲ್ಲಿ ಸಂಶಯವಿಲ್ಲ. ಆದರೂ ಕೆಲವು ಯಜುರ್ವೇದ ಮಂತ್ರಗಳಿಗೆ ಭಟ್ಟ ಭಾಸ್ಕರರೂ ,ವಿಷ್ಣುಸೂರಿಗಳೂ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳನ್ನು ಅವರ ಭಾಷ್ಯದಲ್ಲಿ ಅಲ್ಲಲ್ಲಿ ಸೂಚಿಸಿರುತ್ತಾರೆ. ಉಪಾಕರ್ಮೋತ್ಸರ್ಜನಗಳಲ್ಲಿ ನಾವು ಈ ವಿಧಾನವನ್ನು ಕಂಡುಕೊಳ್ಳಬಾಹುದಾಗಿದೆ. ಅದರಿಂದ ಇವುಗಳು ಮನುಷ್ಯನ ಸ್ಮೃತಿಯಲ್ಲಿ ಅಳಿಯದೇ ನಿಲ್ಲವದು.ಇದೇ ಈ ಉಪಾಕರ್ಮೋತ್ಸರ್ಜನಗಳ ಮುಖ್ಯ ಧ್ಯೇಯೋದ್ದೇಶ.

೧೪.ಪ್ರ:- ಬ್ರಹ್ಮಯಜ್ಞಕ್ಕೂ ಉಪಾಕರ್ಮೋತ್ಸರ್ಜನ ಕರ್ಮಕ್ಕೂ ಏನು ವ್ಯತ್ಯಾಸ?

ಉ:- ಬ್ರಹ್ಮಯಜ್ಞವು ನಿತ್ಯ ಕರ್ಮಗಳಲ್ಲಿ ಸೇರಿರುತ್ತದೆ. ಬ್ರಹ್ಮ ಎಂದರೆ ವೇದಗಳು ಯಜ್ಞ ಎಂದರೆ ಅದ್ಯಯನ ಮಾಡುವದು.ಗುರುಮುಖೇನ ಕಲಿತದ್ದನ್ನು ನಿತ್ಯ ಅಧ್ಯಯಿಸಿ ಮನದಟ್ಟು ಮಾಡಿಕೊಳ್ಳುವದೇ ಇದರ ಉದ್ದೇಶವು.

ಉಪಾಕರ್ಮೋತ್ಸರ್ಜನ ಕರ್ಮಗಳು ನೈಮಿತ್ತಿಕ ಕರ್ಮಗಳು . ಇದಕ್ಕೆ ಮೇಲೆ ಹೇಳಿದ ಕೃತಜ್ಞತಾ ಸೂಚಿಸುವ ಮತ್ತು ಯಾತಯಾಮತಾ ದೋಷನಿವಾರಣೆ ಎಂಬ ಉದ್ದೇಶಗಳೇ ಮೂಲ.
ಹರಿಃ ಓಂ ತತ್ ಸತ್ ||

ಯಜ್ಞೋಪವೀತ(ಜನಿವಾರ)
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ:

Rigveda Upakarma
ಋಗ್ವೇದ  ಉಪಾಕರ್ಮ   ಹಿನ್ನಲೆ  ಮತ್ತು ವಿಧಿ ವಿಧಾನಗಳು 

                                       ಉಪಾಕರ್ಮ  ಅಂದರೆ  " ಆರಂಭ"  (ಸಂಸ್ಕೃತ :उपाकर्म), ಅಂದರೆ ಅಂದಿನಿಂದ  ಶುರು ಎಂದು ಅರ್ಥ.  ಕನ್ನಡ  ಜನಾಂಗದವರು  ಇದನ್ನು ಜನಿವಾರದ  ಹುಣ್ಣಿಮೆ (ನೂಲು ಹುಣ್ಣಿಮೆ)  ಅಥವಾ ಜನಿವಾರದ ಹಬ್ಬವೆಂದು  ಆಚರಿಸುವುರು .ಈ  ಹಬ್ಬದ ಉಗಮ   ವೇದ ಕಾಲದಿಂದಲೂ  ನಮ್ಮ  ದೇವಾನು ದೇವತೆಗಳು ,ಋಷಿ , ಮುನಿಗಳಿಂದ  ಆಚರಿಸಲ್ಪಟ್ಟಿದೆ .

                                  ಉಪಾಕರ್ಮ ಹಬ್ಬವನ್ನು  ಶ್ರಾವಣ ಮಾಸದ ಶುಕ್ಲಪಕ್ಷದ  ಹುಣ್ಣಿಮೆಯೆಂದು  ( ನೂಲು ಹುಣ್ಣಿಮೆ) ,ಧನಿಷ್ಠ  ನಕ್ಷತ್ರದಂದು   ಹೋಮವನ್ನು  ಮಾಡಿ  ಮತ್ತು  ಹೊಸ  ಜನಿವಾರದ ಧಾರಣೆ ಮಾಡುತ್ತಾರೆ .ಅಂದಿನ ದಿನ ನಮ್ಮ ಉತ್ತರ ಭಾರತದವರು  ರಕ್ಷಾ ಬಂಧನ  ಹಬ್ಬವನ್ನು ಆಚರಿಸುತ್ತರೆ. ಅಣ್ಣ-ತಂಗಿ ,ಅಕ್ಕ-ತಮ್ಮ ,ಅಣ್ಣ-ಅತ್ತಿಗೆಯರ  ರಕ್ಷೆಗಾಗಿ  ರಕ್ಷಾಬಂಧನ ( ಬಣ್ಣ ಬಣ್ಣದ ದಾರಗಳಲ್ಲಿ  ಪುಷ್ಪಗಳು,ಮಣಿಗಳು ,ಎಲೆಗಳು  ಹೀಗೆ  ಅತ್ಯಾಕರ್ಶವಾಗಿ ಕಾಣಿಸಲು  ಬೊಂಬೆಗಳು,ನವರತ್ನಗಳನ್ನು  ಅಳವಡಿಸುತ್ತಾರೆ )ಉಡುಗೊರೆಯನ್ನು ದೊಡ್ಡವರು ಚಿಕ್ಕವರಿಗೆ ಕೊಡುತ್ತಾ  ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ . 

ದಂತಕಥೆ :
               ಒಮ್ಮೆ ಬ್ರಹ್ಮದೇವನಿಗೆ ತನ್ನ ಜ್ಞಾನ ಮತ್ತು ತಾನೇ ಸೃಷ್ಟಿಕರ್ತ ನಾಗಿರುವ  ಬಗ್ಗೆ ಜಂಭವಾಗಿ  ತಾನೇ ಶ್ರೇಷ್ಠನೆಂದು ತ್ರಿಮೂರ್ತಿಗಳಲ್ಲಿ  ಎಂದು  ವಾದವನ್ನು ಮಂಡಿಸಿದ ಆಗ ಮಹಾವಿಷ್ಣು  ಬ್ರಹ್ಮದೇವನು ಆಸೀನರಾಗಿದ್ದ ಕಮಲದ ೨ ನೀರಿನ ಹನಿಯಿಂದ ಮಧು ಮತ್ತು ಕೈಠಭ ಎಂಬ ರಾಕ್ಷಸರನ್ನು ಸೃಷ್ಟಿಸಿ ಅವರಿಗೆ ಬ್ರಹ್ಮನು ರಚಿಸಿದ ೪ ವೇದಗಳನ್ನು ಅಪಹರಿಸಬೇಕಂದು ಆಜ್ಞಾಪಿಸುತ್ತಾನೆ . ಮಹಾವಿಷ್ಣುವಿನ ಆಣತಿಯಂತೆ ಮಧು ಮತ್ತು ಕೈಠಭರು ಬ್ರಹ್ಮನಿಂದ ವೇದಗಳನ್ನು ಅಪಹರಿಸುತ್ತಾರೆ. ಆಗ ಬ್ರಹ್ಮದೇವನು ಮಹಾವಿಷ್ಣುವನ್ನು ಪ್ರಾರ್ಥಿಸಿ ತಾನು ಮಾಡಿದ ತಪ್ಪು ಅರಿವಾಯಿತು ನಿನ್ನ ಆಜ್ಞೆಯಿಲ್ಲದೆ ಎಲ್ಲೂ  ಏನು ನಡೆಯುವುದಿಲ್ಲ ಎಂದು ಅರಿವಾಯಿತು ನನ್ನ ಮಹಾಪರಾಧವನ್ನು  ಮನ್ನಿಸಿ ಆ ವೇದಗಳನ್ನು ಸಂರಕ್ಷಿಸಬೇಕಂದು ಕೋರುತ್ತಾನೆ .   

                                      ಆಗ   ಮಹಾವಿಷ್ಣು   ಹಯಗ್ರೀವನಾಗಿ ( ಕುದುರೆಯಾಗಿ)  ಅವತಾರ ತಾಳಿ ಮಧು  ಮತ್ತು ಕೈಠಭರಿಂದ  ವೇದಗಳನ್ನು ಸಂರಕ್ಷಿಸಿದ ಎಂದು ಪುರಾಣದಲ್ಲಿ  ಉಲ್ಲೇಖವಿದೆ . ಈ ದಿನವನ್ನು "ಹಯಗ್ರೀವ ಉತ್ಪತ್ತಿ " ಎಂದು ಆಚರಿಸುತ್ತಾರೆ . ಎಲ್ಲಾ  ವೇದಗಳನ್ನು ಸಂರಕ್ಷಿಸಿದ ದಿನವಾದ್ದರಿಂದ ಅಂದಿನ ದಿನದಿಂದ "ಉಪಾಕರ್ಮ" ಹಬ್ಬವನ್ನು ಆಚರಿಸುವರು . 
**********

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬ 
ಉಪಾಕರ್ಮವನ್ನು ಶ್ರಾವಣಮಾಸದಲ್ಲಿ ಬರುವ ದಿನದಂದು ಋಗ್ವೇದಿಗಳು ಯಜುರ್ವೇದಿಗಳು ಉಪಾಕರ್ಮವನ್ನು ಮಾಡಿಕೊಳ್ಳಬೇಕು.  ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.

ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತ್ಯವ್ಯವನ್ನು ಸೂಚಿಸುತ್ತದೆ.

ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋಪವೀತವು ದೇವ ಋಣ, ಋಷಿ‌ಋಣ ಮತ್ತು ಪಿತೃ‌ಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರಬೇಕೆಂದು ತಿಳಿ ಹೇಳುತ್ತದೆ.

ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ ತ್ರಿಕಾಲಸಂಧ್ಯಾವಂದನೆಯನ್ನು ಮಾಡಿಮುಗಿಸು ಎನ್ನುತ್ತಿದೆ

ಈ ಯಜ್ಞೋಪವೀತವು. ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವುದರ ಸಂಕೇತ.

ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞ ನಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತ‌ಋಷಿಗಳನ್ನು ಪೂಜಿಸಿ, ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಟವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಠಗೊಳಿಸುವದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
**********

ಉಪಾಕರ್ಮ ಮತ್ತು ಉತ್ಸರ್ಜನ ಎಂಬ ವೇದವ್ರತಗಳು:
ಲೇಖನ- ಶ್ರೀ ನಾಗರಾಜಶಾಸ್ತ್ರಿ
ವೇದವ್ರತಗಳಲ್ಲಿ ಎರಡು ವಿಧ. ಉಪಾಕರ್ಮ ಮತ್ತು ಉತ್ಸರ್ಜನ ವಿಧಿಗಳು.ಉಪಾಕರ್ಮದ ಬಗ್ಗೆ ಹಲವಾರು ರೀತಿಯ ಸಂಪ್ರದಾಯಗಳು ಇವೆ. ಆದರೇ ಈಗಿನ ಕಾಲಕ್ಕೆ ಅದು ಕೇವಲ ಜನಿವಾರ ಹಾಕಿಕೊಳ್ಳುವ ಕಾರ್ಯಕ್ರಮವೆಂದೇ ಪ್ರತೀತಿಯಾಗಿರುವದು ವಿಷಾದನೀಯ. ಇದು ಕೇವಲ ಒಂದು ಸಾಂಕೇತಿಕವಾದ ಸಂಪ್ರದಾಯವಾಗಿರುವದು ಶೋಚನೀಯ.ಈಗಿನ ಕಾಲಕ್ಕೆ ಇದು ಕೇವಲ "ಅಹಂ ಬ್ರಹ್ಮಾಸ್ಮಿ" " ಹೆಮ್ಮೆಯಿಂದ ಹೇಳು ಬ್ರಾಹ್ಮಣನೆಂದು" ಎಂಬ ಸಂಪ್ರದಾಯಕ್ಕೆ ಸೇರಿರುವಂತೆ ಕೇವಲ ಔಪಚಾರಿಕ ವಿಷಯಮೌಢ್ಯತೆಯಾಗಿರುವದು ದುರ್ದೈವ ಹಾಗೂ ಖಂಡನೀಯ. ಆದರೇ ಈ ಉಪಾಕರ್ಮ ಮತ್ತು ಉತ್ಸರ್ಜನ ಎಂಬ ಎರಡು ವಿಧಿಗಳಿಗೂ ಮತ್ತು ಜನಿವಾರ ಹಾಕಿಕೊಳ್ಳುವ ಕ್ರಿಯೆಗೂ ಯಾವದ್ವಿಧವಾದ ಸಂಬಂಧವೂ ಇರುವದಿಲ್ಲ.ಇದರ ಬಗ್ಗೆ ಪ್ರಶ್ನೋತ್ತರ ಮಾಲಿಕೆಯನ್ನು ಸಹೃದಯರಿಗೆ ಅರ್ಪಿಸಬೇಕೆಂದು ಈ ಕಿರು ಹೊತ್ತಿಗೆಯನ್ನು ಪರಿಚಯಿಸಿಕೊಡುತ್ತಿದ್ದೇನೆ.ಇದರಿಂದ ವೇದಾಧ್ಯಯನದ ಪುನರುತ್ಥಾನವಾದರೇ ಸಂಪ್ರದಾಯದ ಪುನರುತ್ಥಾನವಾದಂತೆಯೇ ಎನ್ನುವದರಲ್ಲಿ ಸಂಶಯವಿಲ್ಲ.

೧.ಪ್ರ: ಉಪಾಕರ್ಮ ಎಂದರೇನು ?

ಉ: "ಉಪಾಕರ್ಮ" ಅಥವಾ ಉಪಕ್ರಮ ಎಂದರೆ ಪ್ರಾರಂಭ.

೨.ಪ್ರ: - ಯವುದರ ಪ್ರಾರಂಭ ?

ಉ: ವೇದಾಧ್ಯಯನದ ಪ್ರಾರಂಭ.

೩. ಪ್ರ:- ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?

ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.

೪.ಪ್ರ:- ವೇದಗಳ ಅಧ್ಯಯನದ ಆರಂಭ ಮತ್ತು ವಿರಮನ ಯಾವಾಗ ಹೇಗೆ ಮಾಡಬೇಕು.?

ಉ: ಆಪಸ್ತಂಬರು ಇದಕ್ಕೆ ಸೂತ್ರವನ್ನು ಹೇಳಿದ್ದಾರೆ.
"ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅಧ್ಯಾಯೋ ಪ್ರಾಕೃತ್ಯ ತೈಷ್ಯಾಂ ಪೌರ್ಣಮಾಸ್ಯಾಂ ರೋಹಿಣ್ಯಾಂ ವಾ ವಿರಮೇತ್ "

ಮೇಲಿನ ಶ್ಲೋಕದ ಅರ್ಥವೇನೆಂದರೆ :- ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ವೇದಾಧ್ಯಯನವನ್ನು ಪ್ರಾರಂಭಿಸಿ ಪುಷ್ಯ ಮಾಸದ ಹುಣ್ಣಿಮೆಯ ದಿನದಲ್ಲಾಗಲೀ ಅಥವಾ ಪುಷ್ಯಮಾಸದ ರೋಹಿಣೀ ನಕ್ಷತ್ರಯುಕ್ತ ದಿನದಲ್ಲಾಗಲೀ ವಿರಮಿಸ ಬೇಕು.ಅರ್ಥಾತ್ ಅಧ್ಯಯನದ ಕಾಲ ಕೇವಲ ಐದು ತಿಂಗಳು.

೫.ಪ್ರ:- ಕೇವಲ ಐದು ತಿಂಗಳಷ್ಟೇ ಅಧ್ಯಯನವನ್ನು ಏಕೆ ಮಾಡಬೇಕು ?

ಉ: ಇದಕ್ಕೆ ನಿರ್ದಿಷ್ಟವಾದ ಕಾರಣವೇನೆಂಬುದು ತಿಳಿದಿಲ್ಲ.ಆದರೂ ಕಲಿತದ್ದದ್ದನ್ನು ಮನನ ಮಾಡಬೇಕೆಂದು ಮತ್ತು ಮಿಕ್ಕ ಕಾಲದಲ್ಲಿ ವೇದಾಂಗಗಳನ್ನು ಅಧ್ಯಯನ ಮಾಡುವದಕ್ಕಾಗಿ ಅನುಕೂಲವಾಗಲಿ ಎಂದು ಸೂತ್ರಕಾರರು ಹೀಗೆ ಹೇಳಿರಬಹುದು.ಹಾಗೂ ಹಿಂದಿನ ಗುರುಕುಲ ಪದ್ಧತಿಯನ್ನು ಪರಿಶೀಲಿಸಿದಾಗ ನಮಗೆ ತಿಳಿಯುವ ವಿಷಯವೇನೆಂದರೇ ಮಾಘಮಾಸದಿಂದಾಚೆಗೆ ಹಬ್ಬಹರಿದಿನಗಳೂ, ಯಜ್ಞಯಾಗಾದಿಗಳೂ ನಡೆಯುವ ಕಾಲವಾದ್ದರಿಂದ ಅಧ್ಯಾಪಕರು ವ್ಯಾವಹಾರಿಕ , ದ್ರವ್ಯ ಸಂಗ್ರಹಣೆ ಹಾಗೂ ವಿತರಣೆಗೆ ಕಾಲಾವಕಾಶವು ಬೇಕಾದ್ದರಿಂದ ಈ ರೀತಿಯಾಗಿ ಕಾಲಾನುಕೂಲವನ್ನು ಮಾಡಿಕೊಂಡಿರಬಹುದಾಗಿದೆ.

೬. ವೇದವ್ರತಗಳಾದ ಈ ಉಪಾಕರ್ಮ ಮತ್ತು ಉತ್ಸರ್ಜನಗಳಿಗೆ ಅಧಿಕಾರಿಗಳಾರು ?

ಉ:- ವೇದಾಧ್ಯಯನವನ್ನು ಮಾಡುವವರೇ ಇದಕ್ಕೆ ಅಧಿಕಾರಿಗಳು. ಹಾಗೂ ವೇದಾಧ್ಯಯನ ಮಾಡಿರುವವರಿಗೇ ಬ್ರಹ್ಮಯಜ್ಞವನ್ನೂ ಹೇಳಿರುವದು. ಯಾವುದಾದರೊಂದು ಶಾಖೆಯನ್ನು ವೇದಾಂಗಗಳೊಡನೆ ಪರಿಪೂರ್ಣ ಅಧ್ಯಯನ ಮಾಡಿ ಪ್ರತಿನಿತ್ಯ ಸಂಧ್ಯೋಪಾಸನೆ,ಬ್ರಹ್ಮಯಜ್ಞ,ಅಗ್ನಿಕಾರ್ಯ ,ವೇದ ಪಠನ ಹಾಗೂ ಅನುಷ್ಠಾನ ಮಾಡುವವರಿಗೆ ಈ ವ್ರತಗಳನ್ನು ಮಾಡಲೇಬೇಕೆಂಬ ನಿಯಮವಿಲ್ಲ.

೭.ಪ್ರ:- ಉಪಾಕರ್ಮ ಮತ್ತು ಉತ್ಸರ್ಜನಗಳ ಔಚಿತ್ಯವೇನು ?

ಉ:- ವೇದಸಮೂಹವನ್ನು ಪ್ರಪಂಚದ ಒಳಿತಿಗಾಗಿ ಕಂಡುಕೊಟ್ಟ ,ದ್ರಷ್ಟಾರರಾದ ಋಷಿಗಳಿಗೂ ಅದನ್ನು ಹೇಳಿಕೊಟ್ಟ ಅಧ್ಯಾಪಕರಿಗೂ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವದೇ ಇದರ ಮುಖ್ಯ ಉದ್ದೇಶ. ಅದಕ್ಕನುಗುಣವಾಗಿ ಆಯಾ ದೇವತೆಗಳಿಗೂ , ಆಯಾ ಮಂತ್ರಗಳ ದ್ರಷ್ಟಾರರಾದ ಋಷಿಗಳಿಗೂ ಹೋಮಗಳ ಮೂಲಕ ಹವಿಸ್ಸುಗಳನ್ನು ,ತರ್ಪಣಗಳನ್ನೂ ಕ್ರಮವಾಗಿ ಕೊಡಬೇಕು.

೮.ಪ್ರ:-ಉಪಾಕರ್ಮ ಮತ್ತು ಉತ್ಸರ್ಜನಗಳ ಸಂಪ್ರದಾಯವೇನು ?

ಉ:- ಉಪಾಕರ್ಮವು ಎರಡು ವಿಧ.ಕಾಂಡೋಪಾಕರ್ಮ ಮತ್ತು ಅಧ್ಯಾಯೋಪಾಕರ್ಮ.

ಕಾಂಡೋಪಾಕರ್ಮ: ಗುರುಕುಲದಲ್ಲಿ ಯಜುರ್ವೇದದ ಅಧ್ಯಯನವನ್ನು ಪ್ರಾರಂಬಿಸಿದಾಗ ಇದನ್ನು ಮಾಡಬೇಕು.ಉಪಾಕರ್ಮವನ್ನು ಪ್ರತಿಯೊಂದು ಕಾಂಡದ ಆದಿಯಲ್ಲೂ , ಉತ್ಸರ್ಜನವನ್ನು ಅಂತ್ಯದಲ್ಲೂ ಮಾಡಬೇಕು.ಇದನ್ನು ಯಜುರ್ವೇದದ ಏಳು ಕಾಂಡ ಸಂಹಿತೆ, ಮೂರು ಆಷ್ಟಕ ಬ್ರಾಹ್ಮಣ ,ಆರು ಆರಣ್ಯಕಗಳು,ಏಕಾಗ್ನಿಕಾಂಡ ಮತ್ತು ನಾಲ್ಕು ಉಪನಿಷತ್ತುಗಳು (ಇಷ್ಟೂ ಸೇರಿ ಮಾಡುವದಕ್ಕೆ ಸಾರಸ್ವತ ಪಾಠವೆನ್ನುತ್ತಾರೆ) ಇವುಗಳ ಅಧ್ಯಯನ ಸಂಪೂರ್ಣವಾಗುವವರೆಗೂ ಮಾಡುವದಕ್ಕೆ ಕಾಂಡೋಪಾಕರ್ಮ ಎಂಬುದಾಗಿ ಹೇಳುತ್ತಾರೆ.

ಅಧ್ಯಾಯೋಪಾಕರ್ಮ: ಇದು ಸಾಮಾನ್ಯವಾಗಿ ವೇದದ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ.ಪ್ರತಿವರ್ಷವೂ ಶ್ರಾವಣ ಹುಣ್ಣಿಮೆಯಲ್ಲಿ ಉಪಕ್ರಮಿಸಿ ಪುಷ್ಯ ಹುಣ್ಣಿಮೆಯಲ್ಲಿ ಉತ್ಸರ್ಜಿಸುವ ಕ್ರಮ.

೯.ಪ್ರ:- ಈ ಕರ್ಮಗಳನ್ನು ಮಾಡಲಾಗದಿದ್ದರೇ ಪ್ರಾಯಶ್ಚಿತ್ತವೇನು ?

ಉ: ಇವುಗಳು ನಿತ್ಯನೈಮಿತ್ತಿಕಕರ್ಮಗಳಾದ್ದರಿಂದ ಇವುಗಳನ್ನು ಮಾಡಲೇ ಬೇಕು.ಮಾಡದೇ ಇರುವದರಿಂದ ಪ್ರತ್ಯವಾಯ ದೋಷಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ಇದಕ್ಕೆ ಪ್ರಾಯಶ್ಚಿತ್ತವೆಂಬ ಮಾರ್ಗವಿಲ್ಲ.ಆದರೂ ಗೃಹ್ಯಸೂತ್ರಗಳಲ್ಲಿ ಇದಕೆ ಪ್ರಾಯಶ್ಚಿತ್ತಕರ್ಮಗಳನ್ನೂ ಹೇಳಿರುತ್ತಾರೆ.

೧೦.ಪ್ರ:- ಜನಿವಾರ ಹಾಕಿಕೊಳ್ಳುವುದಕ್ಕೂ ಉಪಾಕರ್ಮೋತ್ಸರ್ಜನಕ್ಕೂ ಏನೂ ಸಂಬಂಧವಿಲ್ಲ ಎಂದಿರಲ್ಲ.ಅದು ಹೇಗೆ ?

ಉ:- ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೇ ಜನಿವಾರ ಹಾಕಿಕೊಳ್ಳುವದು ಉಪಾಕರ್ಮೋತ್ಸರ್ಜನಗಳ ಒಂದು ಅಂಗವಲ್ಲ.ಅದು ನಾವು ಪವಿತ್ರರಾಗಿ,ಶುಚಿರ್ಭೂತರಾಗಿದ್ದೇವೆ ಎಂಬ ಭಾವನೆಯನ್ನು ದೃಢಪಡಿಸುವ ಕೇವಲ ಸಾಂಕೇತಿಕವಾದ ಕ್ರಿಯೆ.ಜನಿವಾರ ಹಾಕಿಕೊಳ್ಳುವದೇ ಉಪಾಕರ್ಮೋತ್ಸರ್ಜನಗಳಲ್ಲ.ಹೀಗೆ ಮಾಡಿ ಕೃತಾರ್ಥರಾದೆವು ಎಂಬುವದು ಇತ್ತೀಚಿನ ಒಂದು ಸಾಂಪ್ರದಾಯಿಕವಾದ ಅಪಾಯಕಾರೀ ಭ್ರಾಂತಿ ಎನ್ನುವದರಲ್ಲಿ ತಪ್ಪೇನಿಲ್ಲ.

೧೧.ಪ್ರ:- ಪ್ರಥಮೋಪಾಕರ್ಮ ಎಂದರೇನು?

ಉ:- ಇದರಲ್ಲಿ ವಿಶೇಷವಾದ ಯಾವ ಅರ್ಥವೂ ಇಲ್ಲ. ಉಪನಯನವಾದಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದೆವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.

೧೨.ಪ್ರ:- ಉಪಾಕರ್ಮೋತ್ಸರ್ಜನಗಳ ಪ್ರಯೋಜನವೇನು?

ಉ:- ಇದರ ಮುಖ್ಯ ಮಹತ್ವ ಎಂದರೆ ನಮ್ಮ ಆರ್ಷೇಯಪದ್ಧತಿಯು ನಿರಂತರವಾಗಿ ಮುಂದುವರೆಯಲಿ ಎಂಬುವದು. ನಾವು ಕಲಿತದ್ದನ್ನು ಮೆಲುಕು ಹಾಕುತ್ತಾ ಅರ್ಥಾತ್ ಮನನ ಮಾಡಿಕೊಳ್ಳುವದು ಮತ್ತೂ ಅದರಿಂದುಂಟಾದ ಜ್ಞಾನವನ್ನು ಲೋಕೋಪಯೋಗಕ್ಕೆ ಮಾಡಿಕೊಳ್ಳುವದು ಇನ್ನೊಂದು. ಮೇಲ್ನೋಟಕ್ಕೆ ಹೀಗೆ ಕಂಡರೂ ಇದರಲ್ಲಿ ಅತಿಮುಖ್ಯವಾದ ಮಹತ್ತರವಾದ ಉದ್ದೇಶವೂ ಇದೆ.ಅದು ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂಬುವದು.

೧೩.ಪ್ರ:- ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂದರೆ ಏನು ?

ಉ:- ಯಾತಯಾಮತೆ ಎಂದರೆ ಹಳಸುವದು,ನಿಸ್ಸಾರವಾಗುವದು ಎಂದರ್ಥ. ಇದಕ್ಕೂ ವೇದಕ್ಕೂ ಏನುಸಂಬಂಧವೆಂದರೆ ವೇದಗಳು ಹಿಂದಿನ ಕಾಲದಿಂದಲೂ ಗುರುಮುಖೇನ ಶಿಷ್ಯನಿಗೆ ಪುಸ್ತಕಗಳ ನೆರವಿಲ್ಲದೇ ನಡೆದು ಬಂದ ಆರ್ಷೇಯಪದ್ಧತಿಯು.ಇದು ನಿರಂತರವಾಗಿ ನಡೆಯಬೇಕೆಂಬುದೇ ಇದರ ಮುಖ್ಯ ಉದ್ದೇಶ. ಅದು ಹೇಗೆಂದರೇ , ಯಾವ ವೇದಗಳೇ ಆಗಲೀ ಶಾಸ್ತ್ರಗಳೇ ಆಗಲಿ ಅದಕ್ಕೆ ಅಧಿಕಾರಿ,ವಿಷಯ,ಸಂಬಂಧ ಮತ್ತು ಪ್ರಯೋಜನಗಳೆಂಬ ಅನುಬಂಧ ಚತುಷ್ಟಯಗಳು ಇದ್ದೇ ಇರುತ್ತದೆ.ವೇದಮಂತ್ರಗಳಿಗೆ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳಿರುತ್ತದೆ.ಇವುಗಳನ್ನು ಸ್ಮರಿಸಿಕೊಂಡೇ ಮಂತ್ರಗಳನ್ನು ಹೇಳಿಕೊಳ್ಳಬೇಕೆಂಬ ನಿಯಮವೂ ಇದೆ. ಹೀಗೆ ಹೇಳಿಕೊಳ್ಳದಿದ್ದರೇ ಮಂತ್ರಾರ್ಥಗಳೂ ಮತ್ತು ಅವುಗಳಿಂದುಂಟಾಗುವ ಜ್ಞಾನವೂ ಪೂರ್ತಿಯಾಗುವದಿಲ್ಲ ಎಂಬ ಭಾವನೆ.ಯಜುರ್ವೇದದ ಮಂತ್ರಗಳಿಗೆ ಈ ಸೌಲಭ್ಯವು ಮರೆಯಾಗಿರುವದು ಈ ಯಾತಯಾಮತಾ ದೋಷದಿಂದಲೇ ಎನ್ನುವದರಲ್ಲಿ ಸಂಶಯವಿಲ್ಲ. ಆದರೂ ಕೆಲವು ಯಜುರ್ವೇದ ಮಂತ್ರಗಳಿಗೆ ಭಟ್ಟ ಭಾಸ್ಕರರೂ ,ವಿಷ್ಣುಸೂರಿಗಳೂ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳನ್ನು ಅವರ ಭಾಷ್ಯದಲ್ಲಿ ಅಲ್ಲಲ್ಲಿ ಸೂಚಿಸಿರುತ್ತಾರೆ. ಉಪಾಕರ್ಮೋತ್ಸರ್ಜನಗಳಲ್ಲಿ ನಾವು ಈ ವಿಧಾನವನ್ನು ಕಂಡುಕೊಳ್ಳಬಾಹುದಾಗಿದೆ. ಅದರಿಂದ ಇವುಗಳು ಮನುಷ್ಯನ ಸ್ಮೃತಿಯಲ್ಲಿ ಅಳಿಯದೇ ನಿಲ್ಲವದು.ಇದೇ ಈ ಉಪಾಕರ್ಮೋತ್ಸರ್ಜನಗಳ ಮುಖ್ಯ ಧ್ಯೇಯೋದ್ದೇಶ.

೧೪.ಪ್ರ:- ಬ್ರಹ್ಮಯಜ್ಞಕ್ಕೂ ಉಪಾಕರ್ಮೋತ್ಸರ್ಜನ ಕರ್ಮಕ್ಕೂ ಏನು ವ್ಯತ್ಯಾಸ?

ಉ:- ಬ್ರಹ್ಮಯಜ್ಞವು ನಿತ್ಯ ಕರ್ಮಗಳಲ್ಲಿ ಸೇರಿರುತ್ತದೆ. ಬ್ರಹ್ಮ ಎಂದರೆ ವೇದಗಳು ಯಜ್ಞ ಎಂದರೆ ಅದ್ಯಯನ ಮಾಡುವದು.ಗುರುಮುಖೇನ ಕಲಿತದ್ದನ್ನು ನಿತ್ಯ ಅಧ್ಯಯಿಸಿ ಮನದಟ್ಟು ಮಾಡಿಕೊಳ್ಳುವದೇ ಇದರ ಉದ್ದೇಶವು.

ಉಪಾಕರ್ಮೋತ್ಸರ್ಜನ ಕರ್ಮಗಳು ನೈಮಿತ್ತಿಕ ಕರ್ಮಗಳು . ಇದಕ್ಕೆ ಮೇಲೆ ಹೇಳಿದ ಕೃತಜ್ಞತಾ ಸೂಚಿಸುವ ಮತ್ತು ಯಾತಯಾಮತಾ ದೋಷನಿವಾರಣೆ ಎಂಬ ಉದ್ದೇಶಗಳೇ ಮೂಲ.
ಹರಿಃ ಓಂ ತತ್ ಸತ್ ||

ಯಜ್ಞೋಪವೀತ(ಜನಿವಾರ)
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ:

Rigveda Upakarma
ಋಗ್ವೇದ  ಉಪಾಕರ್ಮ   ಹಿನ್ನಲೆ  ಮತ್ತು ವಿಧಿ ವಿಧಾನಗಳು 

                                       ಉಪಾಕರ್ಮ  ಅಂದರೆ  " ಆರಂಭ"  (ಸಂಸ್ಕೃತ :उपाकर्म), ಅಂದರೆ ಅಂದಿನಿಂದ  ಶುರು ಎಂದು ಅರ್ಥ.  ಕನ್ನಡ  ಜನಾಂಗದವರು  ಇದನ್ನು ಜನಿವಾರದ  ಹುಣ್ಣಿಮೆ (ನೂಲು ಹುಣ್ಣಿಮೆ)  ಅಥವಾ ಜನಿವಾರದ ಹಬ್ಬವೆಂದು  ಆಚರಿಸುವುರು .ಈ  ಹಬ್ಬದ ಉಗಮ   ವೇದ ಕಾಲದಿಂದಲೂ  ನಮ್ಮ  ದೇವಾನು ದೇವತೆಗಳು ,ಋಷಿ , ಮುನಿಗಳಿಂದ  ಆಚರಿಸಲ್ಪಟ್ಟಿದೆ .

                                  ಉಪಾಕರ್ಮ ಹಬ್ಬವನ್ನು  ಶ್ರಾವಣ ಮಾಸದ ಶುಕ್ಲಪಕ್ಷದ  ಹುಣ್ಣಿಮೆಯೆಂದು  ( ನೂಲು ಹುಣ್ಣಿಮೆ) ,ಧನಿಷ್ಠ  ನಕ್ಷತ್ರದಂದು   ಹೋಮವನ್ನು  ಮಾಡಿ  ಮತ್ತು  ಹೊಸ  ಜನಿವಾರದ ಧಾರಣೆ ಮಾಡುತ್ತಾರೆ .ಅಂದಿನ ದಿನ ನಮ್ಮ ಉತ್ತರ ಭಾರತದವರು  ರಕ್ಷಾ ಬಂಧನ  ಹಬ್ಬವನ್ನು ಆಚರಿಸುತ್ತರೆ. ಅಣ್ಣ-ತಂಗಿ ,ಅಕ್ಕ-ತಮ್ಮ ,ಅಣ್ಣ-ಅತ್ತಿಗೆಯರ  ರಕ್ಷೆಗಾಗಿ  ರಕ್ಷಾಬಂಧನ ( ಬಣ್ಣ ಬಣ್ಣದ ದಾರಗಳಲ್ಲಿ  ಪುಷ್ಪಗಳು,ಮಣಿಗಳು ,ಎಲೆಗಳು  ಹೀಗೆ  ಅತ್ಯಾಕರ್ಶವಾಗಿ ಕಾಣಿಸಲು  ಬೊಂಬೆಗಳು,ನವರತ್ನಗಳನ್ನು  ಅಳವಡಿಸುತ್ತಾರೆ )ಉಡುಗೊರೆಯನ್ನು ದೊಡ್ಡವರು ಚಿಕ್ಕವರಿಗೆ ಕೊಡುತ್ತಾ  ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ . 

ದಂತಕಥೆ :
               ಒಮ್ಮೆ ಬ್ರಹ್ಮದೇವನಿಗೆ ತನ್ನ ಜ್ಞಾನ ಮತ್ತು ತಾನೇ ಸೃಷ್ಟಿಕರ್ತ ನಾಗಿರುವ  ಬಗ್ಗೆ ಜಂಭವಾಗಿ  ತಾನೇ ಶ್ರೇಷ್ಠನೆಂದು ತ್ರಿಮೂರ್ತಿಗಳಲ್ಲಿ  ಎಂದು  ವಾದವನ್ನು ಮಂಡಿಸಿದ ಆಗ ಮಹಾವಿಷ್ಣು  ಬ್ರಹ್ಮದೇವನು ಆಸೀನರಾಗಿದ್ದ ಕಮಲದ ೨ ನೀರಿನ ಹನಿಯಿಂದ ಮಧು ಮತ್ತು ಕೈಠಭ ಎಂಬ ರಾಕ್ಷಸರನ್ನು ಸೃಷ್ಟಿಸಿ ಅವರಿಗೆ ಬ್ರಹ್ಮನು ರಚಿಸಿದ ೪ ವೇದಗಳನ್ನು ಅಪಹರಿಸಬೇಕಂದು ಆಜ್ಞಾಪಿಸುತ್ತಾನೆ . ಮಹಾವಿಷ್ಣುವಿನ ಆಣತಿಯಂತೆ ಮಧು ಮತ್ತು ಕೈಠಭರು ಬ್ರಹ್ಮನಿಂದ ವೇದಗಳನ್ನು ಅಪಹರಿಸುತ್ತಾರೆ. ಆಗ ಬ್ರಹ್ಮದೇವನು ಮಹಾವಿಷ್ಣುವನ್ನು ಪ್ರಾರ್ಥಿಸಿ ತಾನು ಮಾಡಿದ ತಪ್ಪು ಅರಿವಾಯಿತು ನಿನ್ನ ಆಜ್ಞೆಯಿಲ್ಲದೆ ಎಲ್ಲೂ  ಏನು ನಡೆಯುವುದಿಲ್ಲ ಎಂದು ಅರಿವಾಯಿತು ನನ್ನ ಮಹಾಪರಾಧವನ್ನು  ಮನ್ನಿಸಿ ಆ ವೇದಗಳನ್ನು ಸಂರಕ್ಷಿಸಬೇಕಂದು ಕೋರುತ್ತಾನೆ .   

                                      ಆಗ   ಮಹಾವಿಷ್ಣು   ಹಯಗ್ರೀವನಾಗಿ ( ಕುದುರೆಯಾಗಿ)  ಅವತಾರ ತಾಳಿ ಮಧು  ಮತ್ತು ಕೈಠಭರಿಂದ  ವೇದಗಳನ್ನು ಸಂರಕ್ಷಿಸಿದ ಎಂದು ಪುರಾಣದಲ್ಲಿ  ಉಲ್ಲೇಖವಿದೆ . ಈ ದಿನವನ್ನು "ಹಯಗ್ರೀವ ಉತ್ಪತ್ತಿ " ಎಂದು ಆಚರಿಸುತ್ತಾರೆ . ಎಲ್ಲಾ  ವೇದಗಳನ್ನು ಸಂರಕ್ಷಿಸಿದ ದಿನವಾದ್ದರಿಂದ ಅಂದಿನ ದಿನದಿಂದ "ಉಪಾಕರ್ಮ" ಹಬ್ಬವನ್ನು ಆಚರಿಸುವರು . 
**********

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

Sunday, 22 January 2023

ರಾಧೆಯ ಅಂತ್ಯ ಹೇಗಾಯಿತು ಯಾಕೆ ರಹಸ್ಯವಾಗಿದೆ ಅಷ್ಟೊಂದು ಪ್ರೀತಿಸಿದರು ಕೃಷ್ಣನೇಕೆ ರಾಧೆಯನ್ನು ವಿವಾಗವಾಗಲಿಲ್ಲ…ಗೊತ್ತಾ

ರಾಧೆಯ ಮರಣ ಯಾಕೆ ಇಂದಿಗೂ ರಹಸ್ಯವಾಗಿದೆ? ಕೃಷ್ಣನೇಕೆ ರಾಧೆಯನ್ನು ಮದುವೆಯಾಗಲಿಲ್ಲ?ಪುರಾಣದಲ್ಲಿ ನಾವು ರಾಧೆಯ ಬಗ್ಗೆ ಮಾತನಾಡುವಾಗಲೆಲ್ಲ ಕೃಷ್ಣನ ಉಲ್ಲೇಖ ಮಾಡದೆ ಆಕೆಯ ಕುರಿತಾದ ಚರ್ಚೆ ಪೂರ್ಣಗೊಳಿಸಲು ಸಾಧ್ಯವೇ ಇಲ್ಲ ಎನ್ನಬಹುದು ಕಾರಣ ಅವರಿಬ್ಬರದು ಕೇವಲ ಎಲ್ಲಾ ಬಗೆಯ ಲೌಕಿಕ ಹಾಗೂ ಭೌತಿಕ ಅನುರಾಗಗಳಿಗೂ ಮೀರಿದ ಒಂದು ದಿವ್ಯ ಆಧ್ಯಾತ್ಮಿಕ ಬಂಧ ಸ್ವಚ್ಛ ಶುದ್ಧ ಹಾಗೂ. ನಿರ್ಮಲವಾದಂತ ಪ್ರೇಮಕ್ಕೆ ಇವರಿಬ್ಬರದು ಒಂದು ಉದಾಹರಣೆಯಾಗಿಯೇ ನಿಲ್ಲುತ್ತದೆ ರಾಧಾ ಹಾಗೂ ಕೃಷ್ಣ ಇವರಿಬ್ಬರ ನಡುವೆ ಪ್ರೇಮಾನು ರಾಗವು ಎಂದಿನಿಂದಲೂ ಇದೆ ಮಹಾವಿಷ್ಣು ಅಥವಾ ನಾರಾಯಣನು ಕೃಷ್ಣನ ಅವತಾರವನ್ನು ಎತ್ತಿದ ದಿನದಿಂದಲೇ ಇತ್ತ ಆತನ ಪ್ರಿಯ ಮಡದಿಯಾದ ಶ್ರೀ ಲಕ್ಷ್ಮಿ ನಿಜವಾದ ಆಧ್ಯಾತ್ಮಿಕ ಪ್ರೇಮವೆಂದರೆ ಏನು ಎಂದು ನಿರೂಪಿಸಿಕೊಡುವುದರ ಸಲುವಾಗಿ ಭೂಲೋಕದಲ್ಲಿ ಯಮುನಾ ನದಿ ತೀರದ ರಾವಲ್ ನಗರದಲ್ಲಿ 
ವೃಷಭಾನು ಹಾಗೂ ಕೀರ್ತಿ ಎನ್ನುವವರ ದಂಪತಿಗಳ ಮಗಳಾಗಿ ಜನಿಸುತ್ತಾಳೆ ಇಲ್ಲಿಂದಲೇ ರಾಧಾ ಹಾಗೂ ಕೃಷ್ಣ ಇವರಿಬ್ಬರ ಪ್ರೇಮ ಕಥೆ ಪ್ರಾರಂಭವಾಗುತ್ತದೆ ಇವರಿಬ್ಬರೂ ಸಹ ಪರಸ್ಪರರಿಗಾಗಿಯೇ ಜನ್ಮ ಪಡೆದರು ಯಾಕೆ ಅವರ ಮದುವೆ ಜರುಗಲಿಲ್ಲ ಹಾಗೂ ಕೃಷ್ಣ ಯಾಕೆ ರಾಧೆಯನ್ನು ತೊರೆದು ಹೋದ ಕೃಷ್ಣನ ನೆಚ್ಚಿನ ಮುರಾರಿ ಅಥವಾ ಆತನ ಕೊಳಲು ಯಾಕೆ ಮುರಿದು ಹೋಯಿತು.

ಕೊನೆಗೆ ರಾಧೆಯ ಮರಣ ಹೇಗೆ ಹಾಗೂ ಯಾಕೆ ಸಂಭವಿಸಿತು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ರಾಧೆಯು ಹುಟ್ಟಿದಾಗ ಆಕೆ ಕಣ್ಣನ್ನೇ ತೆರೆದಿರಲಿಲ್ಲ ಯಾವಾಗ ತಾನು ಕೃಷ್ಣನನ್ನು ನೋಡುವೆನೋ ಆಗಷ್ಟೇ ಕಣ್ಣನ್ನು ತೆರೆದು ಜಗತ್ತನ್ನು ನೋಡುವೆನು ಎಂದು ವಚನವನ್ನು ಪಡೆದುಕೊಂಡು ಬಂದವಳು ರಾಧಾಕೃಷ್ಣ ಇವರಿಬ್ಬರ ನಡುವೆ ಮುಗಿಯದ ಅನುಬಂಧ ಇತ್ತು.

ಇದು ಎಲ್ಲರಿಗಿಂತ ಹಾಗೂ ಎಲ್ಲದಕ್ಕಿಂತ ಪರಮ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ ಆಕೆ ತನ್ನ ಐದನೇ ವಯಸ್ಸಿನವರೆಗೂ ಸಹ ಆಕೆ ಕಣ್ಣನ್ನು ತೆರೆದಿರಲಿಲ್ಲ ಕೃಷ್ಣ ಬಂದು ಅವಳ ಎದುರು ಬಂದು ನಿಂತಾಗಲೇ ಆಕೆ ಕಣ್ಣನ್ನು ಬಿಟ್ಟು ಜಗತ್ತನ್ನು ನೋಡಿದ್ದು! ಕೃಷ್ಣನು ತನ್ನ ಲೀಲೆಗಳಿಂದ ಹಾಗೂ ತನ್ನ ಮಧುರ ಗಾಯನದಿಂದಾಗಿ ಬೃಂದಾವನದಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದ.


ರಾಧಾಕೃಷ್ಣರ ಪ್ರೇಮ ಅವರಿಬ್ಬರಿಗೂ ಎಂಟನೇ ವಯಸ್ಸು ಇದ್ದಾಗಿನಿಂದಲೂ ಶುರುವಾಗಿತ್ತು ಯಾವಾಗಲೂ ಕೃಷ್ಣ ತನ್ನ ಕೊಳಲ ನಾದದಿಂದ ಶಿಶ್ರಾವ್ಯವಾಗಿ ನುಡಿಸುತ್ತಿದ್ದನೋ ಆಗ ರಾಧೆ ಕೃಷ್ಣನು ನುಡಿಸಿದ ನಾದದಿಂದ ಅವನಿದ್ದಂತಹ ಸ್ಥಳಕ್ಕೆ ಬರುತ್ತಿದ್ದಳು ಇವರಿಬ್ಬರೂ ಆ ಮಧುರವಾದ ನಾದದ ಉನ್ಮಾದದಲ್ಲಿ ಗಂಟೆಗಟ್ಟಲೆ ಅದನ್ನು ಆಸ್ವಾದಿಸುತ್ತಾ ಕಳೆದು ಹೋಗುತ್ತಿದ್ದರು ಯಮುನಾ ನದಿಯ ತೀರದಲ್ಲಿ ಅದೆಷ್ಟೋ ಒಂದು ಪರಸ್ಪರ ಆಲಂಗಿಸಿಕೊಂಡು ಮೈಮರೆಯುತ್ತಿದ್ದರು.

ಬಯಲಾಯ್ತು ಮಕರ ಜ್ಯೋತಿ ರಹಸ್ಯ ಬೆಂಕಿ ಹಚ್ಚೋ ಜಾಗ..ಸುಂದರಿಗೆ ಅಯ್ಯಪ್ಪ ಸ್ವಾಮಿ ಮಾತು…ಯಾವಾಗ ಮದುವೆ ಆಗ್ತಾರೆ ಗೊತ್ತಾ ?

ಅಯ್ಯಪ್ಪ ಸ್ವಾಮಿಯ ಲವ್ ಸ್ಟೋರಿ.ಬ್ರಹ್ಮನಿಂದ ವಿಚಿತ್ರವಾದ ವರ ಪಡೆದ ಮಹಿಶಿ, ಮಹಿಷಾಸುರನ ಅಂತ್ಯದ ಬಳಿಕ ಅವನ ತಂಗಿ ಮಹಿಷಿ ಬ್ರಹ್ಮನ ತಪಸ್ಸು ಮಾಡುತ್ತಾಳೆ ಆಕೆಯ ತಪಸ್ಸಿಗೆ ಮೆಚ್ಚಿದ ಬ್ರಹ್ಮ ಪ್ರತ್ಯಕ್ಷವಾದಾಗ ಶಿವ ಮತ್ತು ವಿಷ್ಣುವಿಗೆ ಜನಿಸಿದ ಮಗುವಿನಿಂದಲೇ ನನ್ನ ಸಾವಾಗಬೇಕು ಬೇರೆ ಯಾರು ನನ್ನನ್ನು ಕೊಲ್ಲಕ್ಕೆ ಆಗಬಾರದು ಎಂದು ವರ ಕೇಳುತ್ತಾಳೆ ಬ್ರಹ್ಮವರನ್ನು ಕೊಡುತ್ತಾನೆ.

ನಂತರ ಮಹಿಷಿ ಭೂಮಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಳು. ಹೀಗಾಗಿ ವಿಷ್ಣು ಮೋಹಿನಿ ರೂಪತಾಳಿ ಶಿವನೊಂದಿಗೆ ಸೇರಿ ಇಬ್ಬರ ಸಂಗಮದಿಂದ ಒಂದು ಮಗುವಿನ ಜನನವಾಯಿತು ಅವರೇ ಶಬರಿಮಲೆಯ ಅಯ್ಯಪ್ಪ ನಂತರ ರಾಜ ರಾಜಶೇಖರನ ಮನ ಸೇರಿದ ಅಯ್ಯಪ್ಪ ಅಲ್ಲೇ ಬೆಳೆದು ದೊಡ್ಡವರಾದರೂ ಬಳಿಕ ಮಹಿಷಿಯನ್ನು ಕೊಂದು ವಾಪಸ್ ಹೊರಡುತ್ತಾರೆ.


ಆಗ ಸಾಕು ತಂದೆಯ ಮನವಿ ಮೇರೆಗೆ ಮಕರಿ ಸಂಕ್ರಾಂತಿಯಂದು ನಕ್ಷತ್ರದ ರೂಪದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಮಾಯವಾಗುತ್ತಾರೆ. ಅಲ್ಲಿಂದ ಇಲ್ಲಿಯ ತನಕ ಪ್ರತಿವರ್ಷ ಸಾವಿರಾರು ಭಕ್ತರು ಜ್ಯೋತಿರೂಪದ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಶಬರಿ ಮಲೆಗೆ ಮಹಿಳೆಯರು ಯಾಕೆ ಹೋಗಬಾರದು ಸಂಪ್ರದಾಯದ ಹಿಂದೆ ರೋಚಕ ಲವ್ ಸ್ಟೋರಿ ಇದೆ ಮಹಿಷಿ ಅಸಲಿಗೆ ರಾಕ್ಷಸಿಯಾಗಿರಲಿಲ್ಲ ಆಕೆ ಸುಂದರ ಹುಡುಗಿಯಾಗಿದ್ದಳು ಆದರೆ ಶಾಪದಿಂದಾಗಿ ರಾಕ್ಷಸಿಯ ಜೀವನ ಸಿಕ್ಕಿತು.


ಆದರೆ ಅಯ್ಯಪ್ಪ ಮಹಿಷಿಯನ್ನು ವದಿಸಿದ ಬಳಿಕ ಆಕೆ ತನ್ನ ಮೊದಲಿನ ರೂಪಕ್ಕೆ ಬಂದಳು ಜೊತೆಗೆ ಅಯ್ಯಪ್ಪನ ಕಡೆಗೆ ಮೋಹಿತಳಾಗಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಳು. ಆದರೆ ಆಕೆಯ ಮನವಿಯನ್ನು ನಿರಾಕರಿಸಿದ ಅಯ್ಯಪ್ಪ ನಾನು ಈಗ ಕಾಡಿಗೆ ಹೋಗಿ ನೆಲೆಸಬೇಕು ನನಗಾಗಿ ಬರುವ ಭಕ್ತರ ಕಷ್ಟಗಳನ್ನು ಆಲಿಸಬೇಕು ಎನ್ನುತ್ತಾರೆ.

ಜೊತೆಗೆ ಒಂದು ಮಾತು ಕೊಡುತ್ತಾರೆ ಯಾವಾಗ ನನ್ನ ಬಳಿಗೆ ಕನ್ಯಾ ಸ್ವಾಮಿಗಳು ಅಂದರೆ ಮೊದಲ ಬಾರಿಗೆ ಮಾಲೆ ಧರಿಸುವವರು ಬರೋದು ನಿಲ್ಲುತ್ತದೋ ಅಂದು ನಾನು ನಿನ್ನನ್ನು ಮದುವೆಯಾಗುತ್ತೇನೆ ಎನ್ನುತ್ತಾರೆ ಅದಕ್ಕೆ ಯುವತಿ ಸಂತೋಷದಿಂದ ಒಪ್ಪಿಕೊಳ್ಳುತ್ತಾಳೆ. ಪಕ್ಕದಲ್ಲಿ ಇದ್ದು ಕಾಯುವುದಾಗಿ ಹೇಳುತ್ತಾಳೆ ಆಕೆ ಅಂದು ನೆಲೆಸಿದ ಸ್ಥಳವೇ ಮಲ್ಲಿಕಾಪುರದಮ್ಮ ದೇಗುಲವಾಗಿದೆ ಶಬರಿಮಲೆಗೆ ಹೋಗುವಾಗ ಈ ದೇವಸ್ಥಾನ ಸಿಗುತ್ತದೆ ಕನ್ಯ ಸ್ವಾಮಿಗಳು ಅಯ್ಯಪ್ಪನ ಸನ್ನಿಧಾನಕ್ಕೆ ಬರುವುದು ಇನ್ನೂ ಕಡಿಮೆಯಾಗಿಲ್ಲ ವರ್ಷ ವರ್ಷ ಜಾಸ್ತಿ ಆಗುತ್ತದೆ ಇದೇ ಕಾರಣಕ್ಕೆ ಅಂದಿನಿಂದ ಇಂದಿನವರೆಗೂ ಮಲ್ಲಿಕಾಪುರದಮ್ಮ ಕಾಯುತ್ತಲೇ ಇದ್ದಾರೆ.

ಹೀಗಾಗಿ ಬ್ರಹ್ಮಚಾರಿಯಾಗಿ ದರ್ಶನಕ್ಕೆ ಯುವತಿಯರು ಹೋದರೆ ಮಲ್ಲಿಕಾಪುರದಮ್ಮ ಗೆ ಮೋಸವಾಗುತ್ತದೆ ಹೀಗಾಗಿ ಯುವತಿರು ಮತ್ತು ಮಹಿಳೆಯರು ಹೋಗಬಾರದು ಎನ್ನುವಂತಹ ನಂಬಿಕೆ. ಈ ಒಂದು ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಹೋಗಬಾರದು ಎನ್ನುವಂತಹ ಪ್ರತೀತಿಯಿದೆ ಇಂದಿಗೂ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಯುವತಿಯರು ಪಡೆಯಲು ಆಗುತ್ತಿಲ್ಲ.








Sunday, 1 January 2023

ಭಾರತದ ಮಹಾನ್ ಪುರಾಣಗಳು ‌ ‌ ‌ ಅಷ್ಟಾದಶ ಪುರಾಣ

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌  ‌  ‌   ‌   ‌    ‌     ‌            ‌            ‌            ‌      ‌                                                                                       ‌‌ *ಭಾರತದ ಮಹಾನ್ ಪುರಾಣಗಳು* ‌                        ‌      ‌       ‌                                                                                        ಅಷ್ಟಾದಶ ಪುರಾಣಗಳೆಂದು ಪ್ರಖ್ಯಾತವಾಗಿರುವ ಹದಿನೆಂಟು ಪುರಾಣಗಳನ್ನು ಭಗವಾನ್ ವೇದವ್ಯಾಸ ಮಹರ್ಷಿಗಳು ಬರೆದಿದ್ದಾರೆ. ಆ ಹದಿನೆಂಟು ಪುರಾಣಗಳು ಹೀಗಿವೆ :
ಮದ್ವಯಂ ಭದ್ವಯಂಚೈವ ಬ್ರತ್ರಯಂ ವ ಚತುಷ್ಟಯಂ ಅ ನಾ ಪ ಲಿಂ ಗ ಕೂ ಸ್ಕಾ ನಿ ಪುರಾಣಾನಿ ಪ್ರಚಕ್ಷತಃ
- ಮ ಕಾರದಿಂದ ಎರಡು ಪುರಾಣಗಳು 
- ಭ ಕಾರದಿಂದ ಎರಡು ಪುರಾಣಗಳು
- ಬ್ರ ಕಾರದಿಂದ ಮೂರು ಪುರಾಣಗಳು
- ವ ಕಾರದಿಂದ ನಾಲ್ಕು ಪುರಾಣಗಳು
- ಅ ಕಾರದಿಂದ ಒಂದು 
- ನ ಕಾರದಿಂದ ಒಂದು
- ಪ ಕಾರದಿಂದ ಒಂದು 
- ಲಿಂ ಕಾರದಿಂದ ಒಂದು 
- ಗ ಕಾರದಿಂದ ಒಂದು 
- ಕೂ ಕಾರದಿಂದ ಒಂದು 
-ಸ್ಕಾ ಕಾರದಿಂದ ಒಂದು ಒಟ್ಟು ಹದಿನೆಂಟು ಪುರಾಣಗಳಿವೆ.
 ‌                                                                                                              ೧ ಮತ್ಸ್ಯ ಪುರಾಣ 
೨ ಮಾರ್ಕಂಡೇಯ ಪುರಾಣ 
೩ ಭಾಗವತ ಪುರಾಣ 
೪ ಭವಿಷ್ಯತ್ ಪುರಾಣ 
೫ ಬ್ರಹ್ಮ ಪುರಾಣ
೬ ಬ್ರಹ್ಮಾಂಡ ಪುರಾಣ
೭ ಬ್ರಹ್ಮ ವೈವರ್ತ ಪುರಾಣ
೮ ವರಾಹ ಪುರಾಣ
೯ ವಾಮನ ಪುರಾಣ
೧೦ ವಾಯು ಪುರಾಣ
೧೧ ವಿಷ್ಣು ಪುರಾಣ
೧೨ ಅಗ್ನಿ ಪುರಾಣ
೧೩ ನಾರದ ಪುರಾಣ
೧೪ ಪದ್ಮ ಪುರಾಣ
೧೫ ಲಿಂಗ ಪುರಾಣ
೧೬ ಗರುಡ ಪುರಾಣ
೧೭ ಕೂರ್ಮ ಪುರಾಣ
೧೮ ಸ್ಕಂದ ಪುರಾಣ
                                                                                                        ೧ *ಮತ್ಸ್ಯ ಪುರಾಣ*
                                                                                                                                    ಈ ಮತ್ಸ್ಯ ಪುರಾಣದಲ್ಲಿ ೧೪೦೦೦ ಶ್ಲೋಕಗಳಿವೆ. ಪುರಾಣಗಳಲ್ಲಿ ಅತೀ ಪ್ರಾಚೀನವಾದುದು ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ. ಇದರಲ್ಲಿ ಮಹಾವಿಷ್ಣುವಿನ ಪ್ರಥಮ ಅವತಾರವಾದ ಮತ್ಸ್ಯಾವತಾರ ಧರಿಸಿದ ಶ್ರೀಮನ್ನಾರಾಯಣನು ಈ ಪುರಾಣವನ್ನು ಮನುವಿಗೆ ಬೋಧಿಸಿದ್ದಾನೆ. ಸಾವಿತ್ರಿ ಚರಿತ್ರೆ, ಕಾರ್ತಿಕೇಯ ಚರಿತ್ರೆ, ಯಯಾತಿ ಚರಿತ್ರೆ ಮತ್ತು ಮಾನವ ಧರ್ಮಾಚರಣೆಯ ವಿಷಯಗಳು ವಾರಣಾಸಿ ಪ್ರಯಾಗ, ತ್ರಿಪುರದಹನ  ಮುಂತಾದ ಕ್ಷೇತ್ರ ವಿವರಗಳು ಈ ಪುರಾಣದಲ್ಲಿವೆ.
 ‌                                                                                                           ೨ *ಮಾರ್ಕಂಡೇಯ ಪುರಾಣ*
 ‌                                                                                                                                                                                      ಈ ಪುರಾಣದಲ್ಲಿ ೯೦೦೦ ಶ್ಲೋಕಗಳಿವೆ. ಇದು ‌ಜೈಮಿನಿ ಹಾಗೂ ಮಾರ್ಕಂಡೇಯ‌ ಮುನಿಗಳ ನಡುವಿನ ಸಂಭಾಷಣೆಯ ರೂಪದಲ್ಲಿದೆ. ಮಾರ್ಕಂಡೇಯ ಮಹಾಮುನಿಗಳಿಂದ ವಿವರಿಸಲ್ಪಟ್ಟ ಪುರಾಣವಿದು. ಇದರಲ್ಲಿ ಜಗತ್ತಿನ ಸೃಷ್ಟಿ, ಅಗ್ನಿ, ಸೂರ್ಯ, ಬ್ರಹ್ಮಾದಿ ದೇವತೆಗಳ ಸ್ತುತಿ ಇವೆ.  ಶಿವ ವಿಷ್ಣುಗಳ ಮಹಾತ್ಮೆಗಳು ಮತ್ತು ಇಂದ್ರ, ಅಗ್ನಿ ಸೂರ್ಯರ ಮಹಿಮೆಗಳು ಮತ್ತು ಇದರ ಮುಖ್ಯ ಭಾಗವಾಗಿ ಸುಪ್ರಸಿದ್ಧ ಸಪ್ತಶತಿ ಎಂಬ *ದೇವಿ ಮಹಾತ್ಮೆ* ಮುಂತಾದ ವಿಷಯಗಳಿವೆ. ಈಗ ನಾವು ಮಾಡುತ್ತಿರುವ ಚಂಡಿಯಾಗ, ಶತ ಚಂಡಿಕಾ ಹೋಮ, ಸಹಸ್ರ ಚಂಡಿಯಾಗ ಮುಂತಾದ ಯಾಗಗಳಿಗೆ ಮಾರ್ಕಂಡೇಯ ಪುರಾಣವೇ ಆಧಾರವಾಗಿದೆ.
                                                                                                                                                    ೩ *ಭಾಗವತ ಪುರಾಣ*
                                                                                                        ಈ ಮಹಾ ಪುರಾಣದಲ್ಲಿ ೧೮೦೦೦ ಶ್ಲೋಕಗಳಿವೆ. ಈ ಪುರಾಣವನ್ನು ವ್ಯಾಸ ಮಹರ್ಷಿಗಳು ಶುಕಮಹರ್ಷಿಗೆ ಬೋಧಿಸಿದ್ದಾರೆ. ಹದಿನೆಂಟು ಪುರಾಣಗಳಲ್ಲೇ ಬಹಳ ಪ್ರಸಿದ್ಧವಾಗಿದೆ. ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ. ಜ್ಞಾನ ಹಾಗೂ ಭಕ್ತಿ ಎರಡೂ ‌ವಿಚಾರಗಳೂ ಭಾಗವತದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಶುಕ ಮಹರ್ಷಿಗಳು ಪರೀಕ್ಷಿತ್ ಮಹಾರಾಜ (ಅಭಿಮನ್ಯುಮಗ ) ನಿಗೆ ಬೋಧಿಸಿದ್ದಾರೆ. ಈ ಭಾಗವತ ಪುರಾಣದಲ್ಲಿ ಹನ್ನೆರಡು ಸ್ಕಂದಗಳಿವೆ. ಶ್ರೀಮನ್ನಾರಾಯಣನ ದಶಾವತಾರ ಕಥೆಗಳು ಈ ಪುರಾಣದಲ್ಲಿವೆ. ರಾಮಾಯಣ ಮಹಾಭಾರತಗಳಿಗಿರುವ ಪ್ರಾಶಸ್ತ್ಯವೇ ಈ ಭಾಗವತ ಪುರಾಣಕ್ಕಿದೆ. ವಿಷ್ಣು ಭಕ್ತರಿಗೆ ಈ ಪುರಾಣ ಅಮೃತ ಸಮಾನವಾಗಿದೆ.
 ‌                                                                                                    ೪ *ಭವಿಷ್ಯತ್ ಪುರಾಣ*
                                                                                                               ಈ ಪುರಾಣದಲ್ಲಿ ೧೪೫೦೦ ಶ್ಲೋಕಗಳಿವೆ. ಮನು ಬ್ರಹ್ಮ ನಿಗೆ ಸೂರ್ಯ ದೇವನು ಈ ಪುರಾಣವನ್ನು ಬೋಧಿಸಿದ್ದಾನೆ. ಈ ಪುರಾಣದಲ್ಲಿ ಸೂರ್ಯದೇವೋಪಾಸನೆ ಅಗ್ನಿದೇವೋಪಾಸನೆ ಮತ್ತು ಚತುರ್ವಿಧ ವರ್ಣಾಶ್ರಮ ಧರ್ಮಗಳು ತಿಳಿಸಲಾಗಿದೆ. ಮುಖ್ಯವಾಗಿ ಭವಿಷ್ಯತ್ ಕಾಲದಲ್ಲಿ ನಡೆಯಲಿರುವ ಅನೇಕ ಆಶ್ಚರ್ಯಕರ ವಿಷಯಗಳು ಈ ಪುರಾಣದಲ್ಲಿ ನಿಕ್ಷಿಪ್ತವಾಗಿವೆ.
 ‌                                                                                                                                   ೫ *ಬ್ರಹ್ಮ ಪುರಾಣ*
‌                                                                                                                                  ಈ ಪುರಾಣದಲ್ಲಿ ೧೦,೦೦೦ ಶ್ಲೋಕಗಳಿವೆ. ಈ ಪುರಾಣವನ್ನು ಆದಿ ಪುರಾಣವೆಂದು ಸೂರ್ಯ ಪುರಾಣವೆಂದು ಕರೆಯುವ ರೂಢಿ ಇದೆ. ಇದರಲ್ಲಿ ಎರಡು ಭಾಗಗಳಿವೆ. ಪೂರ್ವ ಭಾಗದಲ್ಲಿ ಬ್ರಹ್ಮಾಂಡದ ರಚನೆಯ ಬಗ್ಗೆ ಮಾಹಿತಿ ಇದೆ. ಎರಡನೇ ಭಾಗವಾದ ಉತ್ತರ ಭಾಗದಲ್ಲಿ ರಾಮ ಹಾಗೂ ಕೃಷ್ಣರ ಕಥೆಗಳು ‌ಬರುತ್ತವೆ. ಬ್ರಹ್ಮ ದೇವರು ಈ ಪುರಾಣವನ್ನು ದಕ್ಷ ಬ್ರಹ್ಮ ( ಪಾರ್ವತಿಯ ತಂದೆ) ನಿಗೆ ಬೋಧಿಸಿದ್ದಾನೆ ಈ ಪುರಾಣದಲ್ಲಿ ಕೃಷ್ಣ ಮಾರ್ಕಂಡೇಯ ಕಶ್ಯಪರ ಚರಿತ್ರೆಗಳು ವರ್ಣಾಶ್ರಮ ಧರ್ಮದ ವಿಷಯಗಳು ಧರ್ಮ ಮಾರ್ಗದ ವಿಷಯಗಳು ಸ್ವರ್ಗ ನರಕಲೋಕದ ವಿಷಯಗಳು ಈ ಪುರಾಣದಲ್ಲಿವೆ.
 ‌                                                                                                                                     ೬ *ಬ್ರಹ್ಮಾಂಡ ಪುರಾಣ*
 ‌                                                                                                                                       ಈ ಪುರಾಣದಲ್ಲಿ ೧೨,೦೦೦ ಶ್ಲೋಕಗಳಿವೆ. ಮರೀಚಿ ಮಹರ್ಷಿ  ಸೃಷ್ಟಿಕರ್ತ ಬ್ರಹ್ಮನಿಗೆ ಬೋಧಿಸಿದ ಪುರಾಣವಿದು. ಈ ಪುರಾಣದಲ್ಲಿ ರಾಧಾಕೃಷ್ಣ ವೃತ್ತಾಂತಗಳು, ರಾಮ ಪರಶುರಾಮ ಚರಿತ್ರೆಗಳು, ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ, ಶಿವ ಸ್ತೋತ್ರ, ಕೃಷ್ಣ ಸ್ತೋತ್ರ, ಗಂಧರ್ವ ಶಾಸ್ತ್ರ ಖಗೋಳ ಶಾಸ್ತ್ರ, ಪಾಪ ಪುಣ್ಯಗಳ ವಿವರಣೆಗಳು ಈ ಪುರಾಣದಲ್ಲಿವೆ.
 ‌                                                                                                                                                    ೭ *ಬ್ರಹ್ಮ ವೈವರ್ತ ಪುರಾಣ*
                                                                                                                       ಈ ಪುರಾಣದಲ್ಲಿ ೧೮,೦೦೦ ಶ್ಲೋಕಗಳಿವೆ. ಇದು ನಾಲ್ಕು ಭಾಗಗಳಲ್ಲಿ ಇದೆ. ಮೊದಲನೆಯ ಭಾಗದಲ್ಲಿ ಪ್ರಕೃತಿಯ ಸೃಷ್ಟಿಯ ಬಗ್ಗೆ, ಎರಡನೇ ಭಾಗದಲ್ಲಿ ‌ಪ್ರಕೃತಿಯ ಭಾಗವಾದ ಸ್ತ್ರೀ ದೇವತೆಗಳ ಬಗ್ಗೆ, ಮೂರನೆಯ ಭಾಗದಲ್ಲಿ ಗಣೇಶ, ಪಾರ್ವತಿ, ಶಿವ ಮುಂತಾದವರ ಬಗ್ಗೆ, ನಾಲ್ಕನೇ ಭಾಗದಲ್ಲಿ ಕೃಷ್ಣನ ಜನ್ಮ ವೃತ್ತಾಂತದ ಬಗ್ಗೆ ವಿವರಗಳಿವೆ.  ಸಾವರ್ಣೀ ಬ್ರಹ್ಮನಿಂದ ನಾರದ ಮಹರ್ಷಿಗಳಿಗೆ ಉಪದೇಶ ಮಾಡಿರುವ ಪುರಾಣವಿದು. ಸ್ಕಂದ ಗಣೇಶ ರುದ್ರ ಕೃಷ್ಣ ವೈಭವಗಳು ದುರ್ಗಾ ಲಕ್ಷ್ಮಿ ಸರಸ್ವತಿ ಸಾವಿತ್ರಿ ರಾಧ ಮುಂತಾದವರ ಚರಿತ್ರೆಗಳು ಈ ಪುರಾಣದಲ್ಲಿವೆ. ಪಂಚ ಶಕ್ತಿಗಳ ( ಪೃಥ್ವಿ ಅಪ್ ತೇಜೋ ವಾಯು ಆಕಾಶಗಳು ) ಪ್ರಭಾವ ಮತ್ತು ಸೃಷ್ಟಿಗೆ ಕಾರಣವಾದ ಭೌತಿಕ ಜಗತ್ತು ಮುಂತಾದ ವಿಷಯಗಳು ಈ ಪುರಾಣದಲ್ಲಿವೆ.
 ‌                                                                                                ೮ *ವರಾಹ ಪುರಾಣ*
 ‌                                                                                                                                                                           ಈ ಪುರಾಣದಲ್ಲಿ ೨೪,೦೦೦ ಶ್ಲೋಕಗಳಿವೆ.
ವರಹಾವತಾರ ಧರಿಸಿ ಶ್ರೀ ವಿಷ್ಣು ಭೂದೇವಿಗೆ ಬೋಧಿಸಿದ ಪುರಾಣವಿದು. ನಾರಾಯಣ ಉಪಾಸನಾ ವಿಧಾನ ಮತ್ತು ಪಾರ್ವತಿ ಪರಮೇಶ್ವರರ ಚರಿತ್ರೆಗಳು, ಧರ್ಮಶಾಸ್ತ್ರ ಮತ್ತು ವ್ರತಕಲ್ಪಗಳು ಪುಣ್ಯ ಕ್ಷೇತ್ರಗಳ ವಿವರಣೆಗಳು ಈ ಪುರಾಣದಲ್ಲಿವೆ.
 ‌                                                                                                                   ೯ *ವಾಮನ ಪುರಾಣ*
 ‌                                                                                                                               ಈ ಪುರಾಣದಲ್ಲಿ ೧೦,೦೦೦ ಶ್ಲೋಕಗಳಿವೆ.
ಪುಲಸ್ತ್ಯ ಋಷಿ ನಾರದರಿಗೆ ಉಪದೇಶ ಮಾಡಿದ ಪುರಾಣವಿದು. ಶಿವಲಿಂಗೋಪಾಸನೆ, ಶಿವಪಾರ್ವತಿಯರ ಕಲ್ಯಾಣ, ಶಿವ ಚರಿತ್ರೆ, ಗಣೇಶ್ವರ ಚರಿತ್ರೆ, ಕಾರ್ತಿಕೇಯ ಚರಿತ್ರೆ, ಭೂಗೋಳ ಚರಿತ್ರೆ ಋತು ವಿಶೇಷಗಳು ಈ ಪುರಾಣದಲ್ಲಿವೆ. ವಿಷ್ಣುವಿನ ವಾಮನ‌ ಅವತಾರದ ಕಥೆಗಳು, ಸಾತ್ವಿಕನ ಗುಣ ಲಕ್ಷಣಗಳು, ದಾನದ ಮಹತ್ವ ಮುಂತಾದ ವಿಚಾರಗಳನ್ನು ಇದರಲ್ಲಿ ವಿವರಿಸಲಾಗಿದೆ.
 ‌                                                                                        ೧೦. *ವಾಯು ಪುರಾಣ*
 ‌                                                                                                                      ಈ ಪುರಾಣದಲ್ಲಿ ೨೪,೦೦೦ ಶ್ಲೋಕಗಳಿವೆ. ಮಹಾ ಶಕ್ತಿಶಾಲಿಯಾದ ವಾಯುದೇವನಿಂದ ಹೇಳಲಾಗಿರುವುದರಿಂದ ಈ ಪುರಾಣಕ್ಕೆ ವಾಯು ಪುರಾಣವೆಂದು ಹೆಸರು ಬಂದಿದೆ. ಮಹೇಶ್ವರನ ಮಹಾತ್ಮೆ, ಕಾಲಮಾನ ವಿವರಣೆ ಮತ್ತು ಭೂಮಂಡಲ ಸೌರಮಂಡಲ ವಿಶೇಷಗಳು ರಹಸ್ಯಗಳು ಈ ಪುರಾಣದಲ್ಲಿವೆ. ಜಗತ್ತನ್ನು ಏಳು ದ್ವೀಪಗಳ ವಿಭಾಗ ಮಾಡಿ ಅದರ ವಿವರ, ಬೇರೆಬೇರೆ ಖಂಡಗಳಲ್ಲಿರುವ ಜನರ ಜೀವನ ವಿಚಾರ, ಏಳು ಲೋಕಗಳ ವಿವರ, ನಾಲ್ಕು ಯುಗಗಳ ವಿಚಾರ, ಸಂಗೀತ ವಿದ್ಯೆ, ವೇದ ವಿದ್ಯೆ, ವಿವಿಧ ವರ್ಣಾಶ್ರಮ ಧರ್ಮಗಳ ಕರ್ತವ್ಯ ಜವಾಬ್ದಾರಿಗಳ ವಿವರ ಇತ್ಯಾದಿ ಇದರಲ್ಲಿ ಅಡಕವಾಗಿವೆ.
 ‌                                                                                                                           ೧೧ *ವಿಷ್ಣು ಪುರಾಣ*
                                                                                                                                                          ಈ ಪುರಾಣದಲ್ಲಿ ೨೩,೦೦೦ ಶ್ಲೋಕಗಳಿವೆ. ಪರಾಶರ ಮಹರ್ಷಿ (ವ್ಯಾಸರ ತಂದೆ) ತನ್ನ ಶಿಷ್ಯನಾದ ಮೈತ್ರೇಯ ಮುನಿಗೆ ಬೋಧಿಸಿದ ಪುರಾಣವಿದು. ಶ್ರೀ ಮಹಾವಿಷ್ಣುವಿನ ಮಹಾತ್ಮೆಯ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ಶ್ರೀ ಕೃಷ್ಣ ಧೃವ ಪ್ರಹ್ಲಾದ ಭರತರಾಜನ ಚರಿತ್ರೆಗಳು ಈ ಪುರಾಣದಲ್ಲಿವೆ.

‌      ‌                                                                                    ೧೨ *ಅಗ್ನಿ ಪುರಾಣ*
                                                                                                                            ಈ ಪುರಾಣದಲ್ಲಿ ೧೫,೪೦೦ ಶ್ಲೋಕಗಳಿವೆ. ಅಗ್ನಿದೇವರಿಂದ ವಶಿಷ್ಠ ಮಹರ್ಷಿಗಳಿಗೆ ಈ ಪುರಾಣವನ್ನು ಬೋಧಿಸಲಾಗಿದೆ. ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ‌ಕಾವ್ಯ, ನಾಟಕಗಳ ಲಕ್ಷಣಗಳು, ರಸ ವರ್ಣನೆಗಳು, ಮಂತ್ರ ಮತ್ತು ಮಂತ್ರ ‌ವಿಧಾನಗಳು, ರಾಜಧರ್ಮ ಮುಂತಾದ ‌ವಿಚಾರಗಳು ಹೇಳಲ್ಪಟ್ಟಿದೆ. ಇದರಲ್ಲಿ ಶಿವ ಗಣೇಶ ದುರ್ಗಾ ಉಪಾಸನಾ ವಿಷಯಗಳಿವೆ ಮತ್ತು ವ್ಯಾಕರಣ ಛಂದಸ್ಸು ಜ್ಯೋತಿಷ್ಯ ಆಯುರ್ವೇದ ರಾಜಕೀಯ ಲೌಕಿಕ ಭೂಗೋಳ ಖಗೋಳ ವಿಷಯಗಳನ್ನು ವಿಶದೀಕರಿಸಲಾಗಿದೆ. ಧರ್ಮಶಾಸ್ತ್ರ, ‌ಆಯುರ್ವೇದ, ಅಲಂಕಾರ, ಛಂದಸ್ಸು ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿದೆ.
 ‌                                                                                                      ೧೩ *ನಾರದ ಪುರಾಣ*
                                                                                                ಈ ಪುರಾಣದಲ್ಲಿ ೨೫,೦೦೦ ಶ್ಲೋಕಗಳಿವೆ. ಬ್ರಹ್ಮ ಮಾನಸ ಪುತ್ರರಾಗಿರುವ ಸನಕ, ಸನಂದನ , ಸನತ್ಕುಮಾರ, ಸನಾತನ ಎಂಬ ನಾಲ್ಕು ಜನರಿಗೆ ನಾರದ ಮಹರ್ಷಿಗಳು ಬೋಧಿಸಿದ ಪುರಾಣವಿದು. ಅತೀ ಪವಿತ್ರ ಪ್ರಸಿದ್ದವಾದ ವೇದ ಪಾದಸ್ತವಂ ( ಶಿವ ಸ್ತೋತ್ರ) ಈ ಪುರಾಣದಲ್ಲಿದೆ. ವೇದಾಂಗ ವಿಷಯಗಳು ವ್ರತ, ನಿಯಮ ವಿಷಯಗಳು ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ.
 ‌                                                                                                                                                                             ೧೪ *ಸ್ಕಂದ ಪುರಾಣ*
                                                                                      ಹದಿನೆಂಟು ಪುರಾಣಗಳಲ್ಲಿ ಈ ಪುರಾಣವೇ ವಿಸ್ತೃತವಾಗಿದೆ. ಸ್ಕಂದ ಪುರಾಣದಲ್ಲಿ ೮೧,೦೦೦ ಶ್ಲೋಕಗಳಿವೆ.  ಪರಮೇಶ್ವರನ‌ ಕುಮಾರನಾದ ಸುಬ್ರಹ್ಮಣ್ಯ ಸ್ವಾಮಿಯ‌ ಜೀವನ ‌ಲೀಲೆಗಳ ಕುರಿತಾದ ‌ವಿವರಣೆಯೇ‌ ಈ ಪುರಾಣದಲ್ಲಿವೆ. ಈ ಪುರಾಣದೊಳಗೆ ಕಾಶೀಖಂಡ, ಕೇದಾರಖಂಡ, ರೇವಖಂಡ, ವೈಷ್ಣವಖಂಡ, ಉತ್ಕಳಖಂಡ, ಕುಮಾರಿಕಾಖಂಡ, ಬ್ರಹ್ಮ ಖಂಡ, ಬ್ರಹ್ಮೋತ್ತರಖಂಡ, ಅವಂತಿಕಾಖಂಡ ಮುಂತಾದ ಖಂಡಗಳಿವೆ. ಅನೇಕಾನೇಕ ವಿಷಯಗಳು ಸ್ಕಂದ ಪುರಾಣದಲ್ಲಿವೆ. ಅಷ್ಟಾದಶ ಪುರಾಣಗಳಲ್ಲಿ ಈ ಪುರಾಣಕ್ಕೆ ಪ್ರತ್ಯೇಕ ಪ್ರಾಮುಖ್ಯತೆಯಿದೆ. ವೆಂಕಟಾಚಲ ಮಹಾತ್ಮ (ತಿರುಮಲ ) ವೈಷ್ಣವ ಖಂಡದಲ್ಲಿದೆ. ಜಗನ್ನಾಥ ಕ್ಷೇತ್ರದ ಬಗ್ಗೆ ಉತ್ಕಳ ಖಂಡದಲ್ಲಿದೆ ಅರುಣಾಚಲದ ಬಗ್ಗೆ ಕುಮಾರಿಕಾ ಖಂಜದಲ್ಲಿದೆ ಸತ್ಯ ನಾರಾಯಣ ಸ್ವಾಮಿಯ ಬಗ್ಗೆ ರೇವಾ ಖಾಂಡದಲ್ಲಿದೆ.
 ‌                                                                                                                                       ೧೫ *ಲಿಂಗ ಪುರಾಣ*
                                                                                                                                                                                                                  ಲಿಂಗ ಪುರಾಣದಲ್ಲಿ ಶಿವದೇವನ ಉಪದೇಶಗಳು, ಮಹಾತ್ಮೆ, ಲೀಲೆಗಳು, ಲಿಂಗದ ಮಹಿಮೆ‌ ಮುಂತಾದವುಗಳು ಈ ಪುರಾಣದ ಮುಖ್ಯ ವಸ್ತು. ಲಿಂಗ ರೂಪದ ಶಿವನ ಮಹಿಮೆ ಆರಾಧನೆ ವ್ರತಗಳು ಈ ಪುರಾಣದಲ್ಲಿವೆ. ಲಿಂಗದಿಂದ ಉಂಟಾಗಿರುವ ಸೃಷ್ಟಿ ಸ್ಥಿತಿ ಲಯ ರೂಪಗಳಾದ ಭಗವಂತನ ಲೀಲೆಗಳು, ನೀತಿ ಬೋಧೆಗಳು, ಖಗೋಳ ಜ್ಯೋತಿಷ್ಯ ಶಾಸ್ತ್ರಗಳು ಸಹ ಈ ಪುರಾಣದಲ್ಲಿವೆ. 
                                                                                                                                                                                                              ೧೬ *ಗರುಡ ಪುರಾಣ*
 ‌                                                                                             ಈ ಪುರಾಣದಲ್ಲಿ ೧೯,೦೦೦ ಶ್ಲೋಕಗಳಿವೆ. ಈ ಪುರಾಣವನ್ನು ಶ್ರೀ ಮಹಾವಿಷ್ಣು ಗರುಡನಿಗೆ ಉಪದೇಶ ಮಾಡಿದ್ದಾನೆ. ಜನನ ಮರಣದ ವಿಷಯಗಳು ಮತ್ತು ಮರಣದ ನಂತರ ಮನುಷ್ಯನಿಗೆ ಸಿಗುವ ಸ್ವರ್ಗ ನರಕಗಳು ನರಕ ಲೋಕದಲ್ಲಿ ಯಾವ ಯಾವ ತಪ್ಪು ಮಾಡಿದವರಿಗೆ ಯಾವ ಯಾವ ಶಿಕ್ಷೆಗಳನ್ನು ವಿಧಿಸುತ್ತಾರೆಂಬುದು ಈ ಪುರಾಣದಲ್ಲಿ ತಿಳಿಯಬಹುದು.
 ‌                                                                                                                                       ೧೭ *ಕೂರ್ಮ ಪುರಾಣ*
 ‌                                                                                                              ಈ ಪುರಾಣದಲ್ಲಿ ೧೭,೦೦೦ ಶ್ಲೋಕಗಳಿವೆ. ಕೂರ್ಮಾವತಾರ ವರಾಹ ನರಸಿಂಹ ಅವತಾರ ವಿಷಯಗಳು ಲಿಂಗರೂಪದಲ್ಲಿ ಶಿವನನ್ನು ಪೂಜಿಸುವ ವಿಷಯ ಖಗೋಳ ಭೂಗೋಳ ವಿಷಯಗಳು ಕಾಶಿ ಪ್ರಯಾಗಾದಿ ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ.
 ‌                                                                                                                                              ೧೮ *ಪದ್ಮ ಪುರಾಣ*                                                               ‌                                                                                       
ಈ ಮಹಾ ಪುರಾಣದಲ್ಲಿ ೮೫,೦೦೦ ಶ್ಲೋಕಗಳಿವೆ. ಪದ್ಮ ಪುರಾಣವನ್ನು ಓದಿದರೂ ಕೇಳಿದರೂ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಹದಿನೆಂಟು ಪುರಾಣಗಳಲ್ಲಿ ಪದ್ಮಪುರಾಣವೇ ದೊಡ್ಡದು.  ಪದ್ಮ ಪುರಾಣದಲ್ಲಿ ಐದು ಕಾಂಡಗಳಿವೆ. ಪ್ರಥಮ ‌ಸೃಷ್ಟಿ ಕಾಂಡದಲ್ಲಿ ‌ಭೀಷ್ಮ ಹಾಗೂ ಮುನಿ ಪುಲಸ್ಯರ ನಡುವಿನ ಸಂಭಾಷಣೆ ಇವೆ. ಇದರಲ್ಲಿ ಗ್ರಹಗಳ ಬಗ್ಗೆ, ಪುಷ್ಕರದ ಬಗ್ಗೆ ವಿವರಗಳಿವೆ. ಎರಡನೆಯ ಭೂಮಿ ಕಾಂಡದಲ್ಲಿ ಪೃಥ್ವಿಯ ಬಗ್ಗೆ ವಿವರಗಳಿವೆ. ಇದು ಆ ಕಾಲದ ಭೌಗೋಳಿಕ ಮಾಹಿತಿಯನ್ನು ನೀಡುತ್ತವೆ. ಮೂರನೆಯ ಸ್ವರ್ಗ ಕಾಂಡದಲ್ಲಿ ಅಂತರಿಕ್ಷ ಹಾಗೂ ಜಂಬೂದ್ವೀಪದ ಬಗ್ಗೆ ವಿವರಗಳಿವೆ. ನಾಲ್ಕನೆಯ ಪಾತಾಳ ಕಾಂಡದಲ್ಲಿ ರಾಮ ಹಾಗೂ ಕೃಷ್ಣರ ಬಗ್ಗೆ ವಿವರಗಳಿವೆ. ಕೊನೆಯ ಉತ್ತರ ಕಾಂಡದಲ್ಲಿ ಶಿವ ಹಾಗೂ ಪಾರ್ವತಿಯವರ ನಡುವಿನ ‌ಸಂಭಾಷಣೆಯ ರೂಪದಲ್ಲಿ ಧರ್ಮದ ವಿವಿಧ ವಿಷಯಗಳ ಬಗ್ಗೆ ಮಾಹಿತಿಗಳಿವೆ.