Monday, 26 December 2022

*ದೇವರನ್ನು ಆಶ್ರಯಿಸುವ ವಿಧಾನ

# **ದೇವರನ್ನು ಆಶ್ರಯಿಸುವ ವಿಧಾನ:**
~~~~~~~~~~~~~~~~~~~

ದೇವರನ್ನು ನಾವು ಆಶ್ರಯಿಸುವುದನ್ನು ಮೂರು ರೀತಿಯಾಗಿ ವಿಭಾಗಿಸ ಬಹುದು.

**1.ಮಾರ್ಜಾಲ ಕಿಶೋರ ನ್ಯಾಯ.
2.ಮರ್ಕಟ ಕಿಶೋರ ನ್ಯಾಯ.
3.ಮತ್ಸ್ಯ ಕಿಶೋರ ನ್ಯಾಯ.**

**ಮಾರ್ಜಾಲ ಕಿಶೋರ ನ್ಯಾಯ** ---- ಬೆಕ್ಕು ತನ್ನ ಮರಿಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸುವಾಗ ಅದರ ಕತ್ತನ್ನು ಕಚ್ಚಿಕೊಂಡು ಉಪಾಯವಾಗಿ ಕೊಂಡೊಯ್ಯುತ್ತದೆ. ಆದರೆ ಮರಿಗೆ ಚೂರಾದರೂ ನೋವಾಗುವುದಿಲ್ಲ. ಹಾಗೆ ಭಗವಂತನನ್ನು ಆಶ್ರಯಿಸಿದವರಿಗೆ ಕರ್ಮಗಳನ್ನು ಕಳೆಯುತ್ತಾನೆ. ಆಗ ಮನುಷ್ಯ ಕಷ್ಟಗಳಲ್ಲಿ ತೊಳಲಾಡುತ್ತಾನೆ. ಅದರಿಂದ ಭಗವಂತ ಭಕ್ತನ ವಿಶ್ವಾಸಕ್ಕೆ ಚೂರೂ ಧಕ್ಕೆ ಬರದ ಹಾಗೆ ಕಾಪಾಡುತ್ತಾನೆ.

**ಮರ್ಕಟ ಕಿಶೋರ ನ್ಯಾಯ** --- ಕೋತಿ ತನ್ನ ಮರಿಯನ್ನು ಹಿಡಿದು ಕೊಳ್ಳುವುದೇ ಇಲ್ಲ. ಏಕೆಂದರೆ ಕೋತಿಯ ಮರಿ ಅಮ್ಮನನ್ನು ಎಷ್ಟು ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆಂದರೆ ತಾಯಿಗೆ ತಲೆ ಕೆಡಿಸಿ ಕೊಳ್ಳುವ ಅಗತ್ಯವೇ ಇಲ್ಲ. ಅದು ತನ್ನ ಪಾಡಿಗೆ ಸಲೀಸಾಗಿ ಹಾರಾಡುತ್ತದೆ. ಹಾಗೇ ಇಲ್ಲಿ ಭಕ್ತ ಭಗವಂತನನ್ನು ಎಷ್ಟು ಗಟ್ಟಿಯಾಗಿ ಆಶ್ರಯಿಸುತ್ತಾನೆಂದರೆ ಯಾವುದೇ ಕಷ್ಟಗಳು ಯಾವುದೇ ಪರಿಸ್ಥಿತಿಯೂ ಅವನ ನಂಬಿಕೆಯನ್ನು ಕದಲಿಸಲಾರದು. ಇದು ಅತ್ಯಂತ ಕಠಿಣ, ಅಷ್ಟೇ ಶ್ರೇಷ್ಠವಾದುದು.

**ಮತ್ಸ್ಯ ಕಿಶೋರ ನ್ಯಾಯ** --- ಮೀನಿನ ಮರಿ ಕೋಟ್ಯಾಂತರ ಮೈಲಿ ದೂರದಲ್ಲಿದ್ದರೂ ಅದು ತಾಯಿಯನ್ನು ನೆನೆದರೆ ಸಾಕು ಮರುಕ್ಷಣ ತಾಯಿ ಕಣ್ಣಮುಂದೆ ಇರುತ್ತದೆ. ಹಾಗೆ ಭಗವಂತನನ್ನು ಸರಿಯಾಗಿ ನೆನೆಸಿ ಕೊಳ್ಳುವ ಕಲೆ ಗೊತ್ತಿದ್ದರೆ ನಮ್ಮ ಮನಸು ಸದಾ ಅವನಲ್ಲಿಲ್ಲದಿದ್ದರೂ ಕರೆದೊಡನೆ ಬರುತ್ತಾನೆ.

**ಸರ್ವೇ ಜನಾ ಸುಖಿನೋ ಭವಂತು|
ಸಮಸ್ತ ಸನ್ಮಂಗಳಾನಿ ಭವಂತು ||**

 

 ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)

Monday, 19 December 2022

ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ?

ನಿತ್ಯಸತ್ಯ 

ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ? 

ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ? 😨

ಮನುಷ್ಯನು ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಿಸಬೇಕಾಗುತ್ತದೆ .

ಅವು 
೧) *ಮಲಿನ ಷೋಡಶ* 
೨) *ಮಧ್ಯಮ ಷೋಡಶ* 
೩) *ಉತ್ತಮ ಷೋಡಶ*
 ಎಂಬುದಾಗಿ ಮೂರು ವಿಭಾಗಗಳು .

*ಸ್ಥಾನೇ ದ್ವಾರೇ ಅರ್ಧಮಾರ್ಗೇ ಚ ಚಿತಾಯಾಂ ಶವ ಹಸ್ತಕೇ|*
*ಅಸ್ಥಿ ಸಂಚಯನೇ ಷಷ್ಠೋ ದಶಪಿಂಡಾ ದಶಾನ್ಹಿಕಾ||*

ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ *ಮಲಿನ ಷೋಡಶ* ಎಂದು ಹೆಸರು .

*ಪ್ರಥಮಂ ವಿಷ್ಣವೇ ದದ್ಯಾದ್ವಿತೀಯಂ ಶ್ರೀಶಿವಾಯ ಚ|*
*ಯಾಮ್ಯಾಯ ಪರಿವಾರಾಯ ತೃತೀಯಂ ಪಿಂಡಮುತ್ಸೃಜೇತ್||*
*ಚತುರ್ಥಂ ಸೋಮರಾಜಾಯ ಹವ್ಯವಾಹಾಯ ಪಂಚಮಮ್|*
*ಕವ್ಯವಾಹಾಯ ಷಷ್ಠಂ ಚ ದದ್ಯಾತ್ಕಾಲಾಯ ಸಪ್ತಮಮ್ ||*
*ರುದ್ರಾಯ ಚಾಷ್ಟಮಂ ದದ್ಯಾನ್ನವಮಂ ಪುರುಷಾಯ ಚ|*
*ಪ್ರೇತಾಯ ದಶಮಂ ಚೆವೈಕಾದಶಂ ವಿಷ್ಣವೇ ನಮಃ||*
*ದ್ವಾದಶಂ ಬ್ರಹ್ಮಣೇ ದದ್ಯಾದ್ವಿಷ್ಣವೇ ಚ ತ್ರಯೋದಶಮ್|*
*ಚತುರ್ದಶಂ ಶಿವಾಯೈವ ಯಮಾಯ ದಶಪಂಚಕಮ್||*
*ದದ್ಯಾತ್ಪುರುಷಾಯೈವ ಪಿಂಡಂ ಷೋಡಶಕಂ ಖಗ|*
*ಮಧ್ಯಂ ಷೋಡಶಕಂ ಪ್ರಾಹುರೇತತ್ತತ್ತ್ವವಿದೋ ಜನಾಃ||*
ಮೊದಲನೆಯ ಪಿಂಡವನ್ನು ವಿಷ್ಣುವಿಗೆ , ಎರಡನೆಯದನ್ನು ಶಿವನಿಗೆ , ಮೂರನೆಯದನ್ನು ಯಮನ ಕುಟುಂಬದವರಿಗೆ , ನಾಲ್ಕನೆಯದನ್ನು ಚಂದ್ರನಿಗೆ , ಐದನೆಯದನ್ನು ಅಗ್ನಿಗೆ , ಆರನೆಯದನ್ನು ಕವ್ಯವಾಹನಿಗೆ , ಏಳನೆಯದನ್ನು ಕಾಲನಿಗೆ , ಎಂಟನೆಯದನ್ನು ರುದ್ರನಿಗೆ , ಒಂಬತ್ತನೆಯದನ್ನು ಪರಮ ಪುರುಷನಿಗೆ , ಹತ್ತನೆಯದನ್ನು ಪ್ರೇತಕ್ಕೆ , ಹನ್ನೊಂದನೆಯದನ್ನು ವಿಷ್ಣುವಿಗೆ , ಹನ್ನೆರಡನೆಯದನ್ನು ಬ್ರಹ್ಮನಿಗೆ , ಹದಿಮೂರನೆಯದನ್ನು ವಿಷ್ಣುವಿಗೆ , ಹದಿನಾಲ್ಕನೆಯದನ್ನು ಶಿವನಿಗೆ , ಹದಿನೈದನೆಯದನ್ನು ಯಮನಿಗೆ , ಮತ್ತು ಹದಿನಾರನೆಯದನ್ನು ತತ್ಪುರುಷನಿಗೆ ಕೊಡಬೇಕು. ಹೀಗೆ ಹದಿನಾರು ಪಿಂಡದಾನಗಳು *ಮಧ್ಯಮ ಷೋಡಶ* ಎನಿಸಿಕೊಳ್ಳುವವು .

*ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ |*
*ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ ||*
*ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್|*
*ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ ||*

ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ನ್ಯೂನ ಷಾಣ್ಮಾಸಿಕಕ್ಕೆ (ಐದೂವರೆ ತಿಂಗಳಿಗೆ ) 1 , ಮತ್ತು ನ್ಯೂನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) 1 . ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು . 

ಇವುಗಳು *ಉತ್ತಮ ಷೋಡಶ* ಎಂದು ಕರೆಸಿಕೊಳ್ಳುವವು .

ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ *ಸೌಮ್ಯ* ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ *ಉತ್ತಮ ಷೋಡಶ* ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ . 

ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ .

 ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿವೆ , ಉತ್ಸವಾದಿಗಳನ್ನು ಮಾಡಬಾರದು .

ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ *ಮಮ ಸಮಸ್ತ ಪಿತೃಣಾಂ ನಿರತಿಶಯ ಸಾನಂದ ಬ್ರಹ್ಮಲೋಕ ಅವಾಪ್ತ್ಯರ್ಥಂ .......* ಎಂಬಲ್ಲಿ ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ . 

ಹೀಗಾಗಿ ಕನ್ಯಾದಾನ ಮಾತ್ರ ಬರ್ತದೆ . ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವುದಿಲ್ಲಾ ,

 ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡು ಮಗನ ಮದುವೆಯಾಗಲಿ , ಮುಂಜಿಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ .

ಹೀಗಾಗಿ ತೀರಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿವೆ , ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ  ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ .

✍️ ಬ್ರಾಹ್ಮಣ ಪ್ರೀಯ

ಶನಿ ದೇವರಿಗೆ ಹೆಂಡತಿಯಿಂದ ಶಾಪವಿದೆ

ವಾಟ್ಸಾಪ್ ನಲ್ಲಿ ಸಿಕ್ಕಿದ ಶ್ರೀ ಶನಿಮಹಾತ್ಮನ ಬಗ್ಗೆ ಹೀಗೊಂದು ಕಥೆ.

🌹ಓಂ ನಮಃ ಶಿವಾಯ 🌹

*ಶನಿ ದೇವರಿಗೆ  ಹೆಂಡತಿಯಿಂದ ಶಾಪವಿದೆ ಎಂದು ಎಷ್ಟು ಜನರಿಗೆ ಗೊತ್ತು*😅😅😅
 
*ಪುಣ್ಯಭೂಮಿ ರಾಷ್ಟ್ರ ವೇದಿಕೆ ಯಲ್ಲಿ ಇದು ನಿಮಗೆ ಗೊತ್ತೇ?  ಇದರ ಬಗ್ಗೆ ಪೂರ್ಣ ಮಾಹಿತಿ ಕೇವಲ ಈ ಗುಂಪಿನಲ್ಲಿ ಮಾತ್ರ ತಪ್ಪದೇ ಪೂರ್ಣ ಲೇಖನ ಓದಿ ಮತ್ತು ಇತರರಿಗೂ ತಲುಪಿಸಿ*🙏🙏🙏

*ಸ್ವತಃ ಪತ್ನಿಯಿಂದಲೇ ಶಾಪಗ್ರಸ್ಥನಾಗಿದ್ದ ಶನಿದೇವರು..! ಪತ್ನಿಯೇ ಶಾಪ ನೀಡಲು ಕಾರಣವೇನು..🙆‍♂️?*

*ಹೆಚ್ಚಿನ ಜನರು ಶನಿಯೆಂದರೆ ಭಯಪಡುತ್ತಾರೆ.* ಇದಕ್ಕೆ ಮುಖ್ಯ ಕಾರಣ ಅವರಿಗೆ ಹಿಂದೂ ಪುರಾಣಗಳ ಬಗೆಗಿನ ಅಲ್ಪ ಜ್ಞಾನವಿರಬಹುದು. 

*ಶನಿ ಕೇವಲ ಸಂಕಷ್ಟವನ್ನು ತರುವ ದೇವನಲ್ಲ. ಆತ ಒಲಿದರೆ ಎಂತವನನ್ನಾದರೂ ಶ್ರೀಮಂತನನ್ನಾಗಿಸುತ್ತಾನೆ. ನ್ಯಾಯಾಧೀಶನಾದ ಶನಿಯನ್ನೇ ಆತನ ಪತ್ನಿ ಶಪಿಸಲು ಕಾರಣವೇನು..?* ಇಂದಿಗೂ ಜನರು 

*ಶನಿಯೆಂದರೆ ಭಯಪಡಲು ಈಕೆಯೂ ಕಾರಣಳೇ..?*

*ಶನಿದೇವನು ಓರ್ವ ವ್ಯಕ್ತಿಯ ಕಾರ್ಯಕ್ಕೆ ಅನುಗುಣವಾಗಿ ಫಲವನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ.* ಶನಿವಾರ ಶನಿ ದೇವರಿಗೆ ಸಮರ್ಪಿಸಲಾಗಿದೆ. ಈ ದಿನ ಶನಿದೇವನನ್ನು ವಿಧಿ - ವಿಧಾನಗಳ ಪ್ರಕಾರ ಪೂಜಿಸಬೇಕು ಎನ್ನುವ ನಂಬಿಕೆಯಿದೆ. ಶನಿವಾರದಂದು ನಿಜವಾದ ಭಕ್ತಿ ಮತ್ತು ಶ್ರದ್ಧೆಯಿಂದ ಶನಿದೇವನನ್ನು ಪೂಜಿಸುವ ಸಾಧಕನ ಎಲ್ಲಾ ಆಸೆಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. *ಶನಿ ದೇವನು ಕೋಪದ ಸ್ವಭಾವದವನು*. 

*ಶನಿದೇವನು ಯಾರ ಮೇಲೆ ಪ್ರಸನ್ನನಾಗುತ್ತಾನೋ, ಆ ವ್ಯಕ್ತಿ ಎಷ್ಟೇ ಬಡವನಾಗಿದ್ದರೂ ಶೀಘೃದಲ್ಲೇ ಶ್ರೀಮಂತನಾಗುತ್ತಾನೆ*
*ಓರ್ವ ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲವ್ನನು ನಿಡುವ ಶನಿಯೇ ತನ್ನ ಪತ್ನಿಯಿಂದ ಶಾಪಗ್ರಸ್ಥನಾಗಿರುವುದು ನಿಮಗೆ ತಿಳಿದಿದೆಯೇ..?*

*ಶನಿದೇವನ ಪತ್ನಿಯರು ಎಷ್ಟು ಮಂದಿ ಇದ್ದಾರೆ  :*

*ಶನಿ ದೇವನನ್ನು ಮೆಚ್ಚಿಸುವ ಒಂದು ಮಾರ್ಗವೆಂದರೆ ಅವನ ಹೆಂಡತಿಯರನ್ನು ಪೂಜಿಸುವುದು.* ಪತ್ನಿಯರಲ್ಲಿ ಮೊದಲ *ಪತ್ನಿ ಧ್ವಜಿನಿ, ಧಾಮಿನಿ, ಕಂಕಾಲಿ, ಕಲಹಪ್ರಿಯ, ಕಂಟಕಿ, ತುರಂಗಿ, ಮಹಿಷಿ ಮತ್ತು ಅಜ* ಎಂಬ ಎಂಟು ಮಂದಿ ಪತ್ನಿಯರಿದ್ದರು ಎಂದು ಹೇಳಲಾಗುತ್ತದೆ. *ಶನಿದೇವನನ್ನು ಮೆಚ್ಚಿಸಬೇಕಾದರೆ* ಆತನ ಪತ್ನಿಯರಲ್ಲಿ ಯಾವುದೇ *ಒಬ್ಬ ಪತ್ನಿಯ ಹೆಸರನ್ನು ಜಪಿಸಬೇಕು.* ಶನಿವಾರದಂದು ಅವರ ಹೆಸರನ್ನು ಜಪಿಸಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. *ಶನಿದೇವನ ದೃಷ್ಟಿ ಶಾಪಗ್ರಸ್ಥವೆಂಬ ನಂಬಿಕೆಯಿದೆ. ಇದಕ್ಕೆ ಆತನ ಪತ್ನಿ ಧಾಮಿನಿಯೇ ಮುಖ್ಯ ಕಾರಣ.*......

*ಶನಿ ದೇವನು ಶ್ರೀಕೃಷ್ಣನ ಪರಮ ಭಕ್ತ  :*

ಶನಿದೇವನು ತನ್ನ ಬಾಲ್ಯದಿಂದಲೂ ಶ್ರೀಕೃಷ್ಣನ ಕಟ್ಟಾ ಭಕ್ತನಾಗಿದ್ದನು. ಆಗಾಗ ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಬಹಳ ಗಂಟೆಗಳ ಕಾಲ ಧ್ಯಾನದಲ್ಲಿ ತೊಡಗಿಕೊಳ್ಳುತ್ತಿದ್ದನು. ದೊಡ್ಡವನಾದ ಮೇಲೂ ಕೃಷ್ಣನ ಮೇಲಿನ ಪ್ರೀತಿ ಹಾಗೆಯೇ ಇತ್ತು. *ವಯಸ್ಕನಾದ ಮೇಲೆ ಚಿತ್ರರಥನ ಮಗಳಾದ ಧಾಮಿನಿಯನ್ನು ಶನಿಯು ವಿವಾಹವಾಗುತ್ತಾನೆ.* ಅವನ ಪತ್ನಿ *ಧಾಮಿನಿ ದೈವಿಕ ಶಕ್ತಿಯುಳ್ಳ* ಮಹಿಳೆ. ಅವಳು ಸುಂದರಿಯೊಂದಿಗೆ ಅತ್ಯಂತ ಬುದ್ಧಿವಂತಳಾಗಿದ್ದಳು.

*ಇದರಿಂದ ಶನಿದೇವನ ಮೇಲೆ ಪತ್ನಿ ಕೋಪಗೊಂಡಳು:*

ದಂತಕಥೆಯ ಪ್ರಕಾರ, ಶನಿದೇವನು ವಿವಾಹವಾದ ಚಿತ್ರರಥನ ಮಗಳು ಧಾಮಿನಿ ಪರಮ ತೇಜಸ್ವಿನಿಯಾಗಿದ್ದಳು. ಶನಿದೇವನ ಹೆಂಡತಿ ಧಾಮಿನಿ ಮಕ್ಕಳನ್ನು ಹೊಂದುವ ಆಸೆಯಿಂದ ತನ್ನ ಪತಿಯನ್ನು ತಲುಪಿದಳು. ಆದರೆ ಶನಿದೇವನು ಶ್ರೀ ಕೃಷ್ಣನ ಆರಾಧನೆಯಲ್ಲಿ ಮಗ್ನನಾಗಿದ್ದನು. ಪತ್ನಿಯ ಪ್ರಯತ್ನದ ನಂತರವೂ ಶನಿದೇವನ ಧ್ಯಾನಕ್ಕೆ ಯಾವುದೇ ಭಂಗ ಬರಲಿಲ್ಲ. ಹೆಂಡತಿ ಕಾದು ಸುಸ್ತಾಗಿದ್ದಳು. ಇದರಿಂದ ಕೋಪಗೊಂಡ ಶನಿದೇವನ ಪತ್ನಿ ಧಾಮಿನಿಯು ತನ್ನ ಸ್ವಂತ ಪತಿಯನ್ನು ಶಪಿಸುತ್ತಾಳೆ.

*ಅದಕ್ಕೇ ಶನಿದೇವ ತಲೆಬಾಗಿ ನಡೆಯುತ್ತಾನೆ:*

ಇಂದಿನಿಂದ ಯಾರು *ಶನಿಯನ್ನು ಕಣ್ಣೆತ್ತಿ ನೋಡುತ್ತಾರೋ ಅವರು ನಾಶವಾಗುತ್ತಾರೆ ಎಂದು ಶನಿಯನ್ನು ಆತನ ಪತ್ನಿ ಧಾಮಿನಿ ಶಪಿಸುತ್ತಾಳೆ.* ಶನಿದೇವನ ತಪಸ್ಸು ಮುಗಿದ ನಂತರ ಅವನು ನಾನು ತನ್ನ ಹೆಂಡತಿಯ ಮಾತನ್ನು ಏಕೆ ಕೇಳಲಿಲ್ಲ ಎಂದು ತನ್ನ ಹೆಂಡತಿಗೆ ವಿವರಿಸಿದನು. ಇಡೀ ಘಟನೆಯನ್ನು ತಿಳಿದ ಶನಿ ದೇವನ ಪತ್ನಿ ತನ್ನ ಬಗ್ಗೆ ಬೇಸರಗೊಳ್ಳುತ್ತಾಳೆ. ಅನಾವಶ್ಯಕವಾಗಿ ತನ್ನ ಸ್ವಂತ ಗಂಡನನ್ನು ಶಪಿಸಿದೆನಲ್ಲ ಎಂದು ಮರುಗುತ್ತಾಳೆ. ಶಾಪವನ್ನು ಹಿಂತೆಗೆದುಕೊಳ್ಳುವ ಶಕ್ತಿ ಹೆಂಡತಿಗೆ ಇರಲಿಲ್ಲವಾದ್ದರಿಂದ ಶನಿಯು ತನ್ನ ತಲೆಯನ್ನು ಬಗ್ಗಿಸಿ ನಡೆಯುತ್ತಾನೆ. ಹಾಗೂ ಅಂದಿನಿಂದ ಎಲ್ಲರೂ ಕೂಡ ಶನಿಯನ್ನು ತಲೆ ಎತ್ತಿ ನೋಡಲು ಭಯಪಡುತ್ತಾರೆ.

ಯಾವುದೇ ದೇವರನ್ನು ಪೂಜಿಸುವಾಗ ನಾವು ತಲೆ ಎತ್ತಿ ದೇವರನ್ನು ನೋಡುತ್ತಾ ಪೂಜೆಯನ್ನು ಮಾಡುತ್ತೇವೆ. *ಆದರೆ, ಶನಿ ದೇವನನ್ನು ಪೂಜಿಸುವಾಗ ನಾವು ಶನಿಯನ್ನು ತಲೆ ಎತ್ತಿ ನೋಡಿ ಪೂಜಿಸಬಾರದು*... ಆತನ *ಪಾದಗಳನ್ನು* ನೊಡುತ್ತಾ ಪೂಜೆಯನ್ನು ಮಾಡಬೇಕು. *ಇಲ್ಲದಿದ್ದರೆ ಶನಿ ನೀಡುವ ಕೆಟ್ಟ ಪರಿಣಾಮಗಳಿಗೆ ಬೆಲೆತೆರಬೇಕಾಗುತ್ತದೆ*
🙏🙏🙏🙏🙏🙏🙏🙏🙏

ಸಂಕಷ್ಟ ಹರ ಚತುರ್ಥಿ

ಸಂಕಷ್ಟ ಹರ ಚತುರ್ಥಿ ಮಹತ್ವ ಓದಿ ತಿಳಿಯಿರಿ .ತಿಳಿದು ಅಚರಿಸಿ .

ವಕ್ರತುಂಡ, ಗಜವದನ ಗಣೇಶ ವಿಘ್ನನಿವಾರಕನೆಂದೇ ಪ್ರಸಿದ್ಧ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಸಂಕಷ್ಟ ಹರ ಚತುರ್ಥಿ ಎಂದೇ ಹೆಚ್ಚು ಪರಿಚಿತ.

ಪ್ರತಿ ತಿಂಗಳ ಕೃಷ್ಣಪಕ್ಷದ 4 ನೆಯ ದಿನವನ್ನು(ಚತುರ್ಥಿ)ಯನ್ನು ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ ವ್ರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವಿದ್ದು, ಅದನ್ನು ಅಂಗಾರಕ (ಮಂಗಳ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ.

ಸಂಕಷ್ಟ ಹರ ಚತುರ್ಥಿಯ ಮಹತ್ವ:

ಸಂಕಷ್ಟಹರ ಚತುರ್ಥಿಯ ಆಚರಣೆಗಳಿಗೆ ಸನಾತನ ಧರ್ಮದಲ್ಲಿ ಎರಡು ಪ್ರಮುಖ ಹಿನ್ನೆಲೆಗಳಿವೆ. ಮೊದಲನೆಯದ್ದು ಚತುರ್ಥಿಯ ದಿನದಂದು ಅಂದರೆ ಯಾವ ದಿನ ಸಂಕಷ್ಟಹರ ಚತುರ್ಥಿಯ ಆಚರಣೆ ನಡೆಸಲಾಗುತ್ತದೆಯೋ ಆ ದಿನದಂದು ಗಣೇಶನನ್ನು ಸರ್ವೋಚ್ಛ ದೇವ ಎಂದು ಘೋಷಿಸಲಾಯಿತು ಎಂಬುದು ಒಂದು ನಂಬಿಕೆಯಾದರೆ, ಈ ದಿನದಂದು ಗಣೇಶ ಸ್ವತಃ ಧರೆಗಿಳಿದು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾನೆ, ಆದ್ದರಿಂದ ಚತುರ್ಥಿಯ ದಿನದಂದು ಪ್ರಾರ್ಥಿಸುವವರ ಸಂಕಷ್ಟಗಳು ಸುಲಭವಾಗಿ ಬಗೆಹರಿಯುತ್ತದೆ ಎಂಬುದು ಮತ್ತೊಂದು ನಂಬಿಕೆಯಾಗಿದೆ.

ಆಚರಣೆ ಹೇಗೆ?
ಸಾಧ್ಯವಾದಲ್ಲಿ ಉಪವಾಸ ಮಾಡಬಹುದು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು.
ಪೂಜೆ ಸಮಾಪ್ತಿಯಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಸಂಕಷ್ಟ ಹರ ವ್ರತದ ಕಥೆ

ಧರ್ಮರಾಯನಿಗೆ ಸೂತ ಮಹರ್ಷಿಗಳು ತಿಳಿಸಿದ ವ್ರತ
ದುರ್ಯೋಧನನ ಕುತಂತ್ರಕ್ಕೆ ಬಲಿಯಾಗಿ ತನ್ನ ರಾಜ್ಯ, ಐಶ್ವರ್ಯ ಎಲ್ಲವನ್ನೂ ಕಳೆದುಕೊಂಡು ತನ್ನ ತಮ್ಮಂದಿರೊಂದಿಗೆ ಕಾಡಿನ ಪಾಲಾಗಿ ದುಃಖದಲ್ಲಿ ಇದ್ದ ಧರ್ಮರಾಯನನ್ನು ಸೂತ ಪುರಾಣಿಕ ಮಹರ್ಷಿಗಳು ಸಮಾಧಾನ ಮಾಡಿದರು. ಆಗ ಧರ್ಮರಾಯನು ಸೂತರ ಬಳಿ ತನ್ನ ಕಷ್ಟಗಳೆಲ್ಲಾಲ್ಲ ಪರಿಹಾರವಾಗಿ ರಾಜ್ಯ ತನಗೆ ಮರಳಿ ಸಿಗಲು ಉತ್ತಮ ವ್ರತ ಪೂಜೆ ಒಂದನ್ನು ತಿಳಿಸಲು ಪ್ರಾರ್ಥಿಸಿದ.

ಆಗ ಪೂಜ್ಯರು ಧರ್ಮರಾಜನಿಗೆ ಸಾಕ್ಷಾತ್ ಪರಶಿವನೇ ಕುಮಾರಸ್ವಾಮಿಗೆ ತಿಳಿಸಿದ ವರಸಿದ್ಧಿ ವಿನಾಯಕ ವ್ರತವನ್ನು ಮಾಡಲು ತಿಳಿಸಿದರು. ಅಷ್ಟೇ ಅಲ್ಲ ನಳ ಮಹಾರಾಜನಿಗೆ ದಮಯಂತಿ ಸಿಕ್ಕಿದ್ದು ಹಾಗೂ ಕೃಷ್ಣ ಪರಮಾತ್ಮನಿಗೆ ಶಮಂತಕ ಮಣಿ ಸಹಿತ ಜಾಂಬವತಿ ಲಭಿಸಿದ್ದು ಇದೇ ವ್ರತವನ್ನು ಆಚರಣೆ ಮಾಡಿದ್ದರಿಂದ. ಶ್ರೀರಾಮ, ಭಗೀರಥ ಕೂಡ ಈ ವ್ರತದ ಆಚರಣೆ ಮಾಡಿದ್ದಾರೆ.

ಎಲ್ಲರೂ ಆಚರಿಸುವ ವ್ರತ
ಈ ವ್ರತವನ್ನು ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಹೀಗೆ ಎಲ್ಲ ವರ್ಣದವರೂ ಮಾಡಬಹುದು. ಯಾವುದೇ ಜಾತಿ- ಧರ್ಮ- ಮತ- ಭೇದಗಳಿಲ್ಲದೆ ಎಲ್ಲರೂ ಆಚರಣೆ ಮಾಡಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಯಾರು ಬೇಕಾದರೂ ಈ ವ್ರತ ಮಾಡಬಹುದು.

ಇನ್ನು ಈ ವ್ರತಾಚರಣೆಯಿಂದ ಧನಾಕಾಂಕ್ಷಿಗೆ ಧನ, ವಿದ್ಯೆ ಬೇಕಾದವರಿಗೆ ಉತ್ತಮ ವಿದ್ಯೆ, ಆರೋಗ್ಯ ಅವಶ್ಯಕತೆ ಇರುವವರಿಗೆ ಉತ್ತಮ ಆರೋಗ್ಯ... ಹೀಗೆ ಭಕ್ತರ ನಾನಾ ವಿಧ ಬೇಡಿಕೆಗಳನ್ನು ಈಡೇರಿಸುವ ಅತ್ಯುತ್ತಮ ವ್ರತ ಇದಾಗಿದೆ.

ಶ್ರೀ ಗಣೇಶ ಮಾನಸ ಪೂಜಾಸ್ತುತಿ

ನಾನಾರತ್ನ ವಿಚಿತ್ರಕಂ ರಮಣಕಂ ಸಿಂಹಾಸನಂ ಕಲ್ಪಿತಂ|
ಸ್ನಾನಂ ಜಾಹ್ನವಿವಾರಿಣಾ ಗಣಪತೇ ಪೀತಾಂಬರಂ ಗೃಹ್ಯತಾಂ||
ಕಂಠಂ ಮೌಕ್ತಿಕ ಮಾಲಿಕಾ ಶ್ರುತಿಯುಗೇ ದ್ವೇಧಾರಿತೆ ಕುಂಡಲೇ|
ನಾನಾರತ್ನ ವಿರಾಜಿತೊ ರವಿ ವಿಭಾಯುಕ್ತಃ ಕಿರೀಟಃ ಶಿರೇ||೧||

ಭಾಲೇ ಚರ್ಚಿತ ಕೇಶರಂ ಮೃಗಮದಾಮೋದಾಂಕಿತಂ ಚಂದನಂ|
ಕಸ್ತೂರೀ ತಿಲಕೋದ್ಭವಂ ಸುಕುಸುಮಂ ಮಂದಾರ ದೂರ್ವಾಶಮಿ||
ಗುಗ್ಗೂಲೋದ್ಭವ ಧೂಪಕಂ ವಿರಚಿತಂ ದೀಪಂ ಸವರ್ತ್ಯಾಯುತಂ|
ಭಕ್ಷ್ಯಂ ಮೋದಕ ಸಂಯುತಂ ಗಣಪತೇ ಕ್ಷೀರೋದನಂ ಗೃಹ್ಯತಾಮ್||೨||

ತಾಂಬೂಲಂ ಮನಸಾಮಯಾ ವಿರಚಿತಂ, ಜಂಬೂಫಲಂ ದಕ್ಷಿಣಾ|
ಸಾಷ್ಟಾಂಗ ಪ್ರಣತಿಂ ಸ್ತುತಿಂ ಬಹುವಿಧಾಂ ಪೂಜಾ ಗೃಹಾಣ ಪ್ರಭೋ||
ಮೇ ಕಾಮಃ ಸತತಂ ತವಾರ್ಚನವಿಧೌ ಬುದ್ಧಿಸ್ತವಾಲಿಂಗನೇ|
ಸ್ವೇಚ್ಛಾತೇ ಸುಖದರ್ಶನೆ ಗಣಪತೇ ಭಕ್ತಿಸ್ತು ಪಾದಾಂಬುಜೇ||೩||

ಅರ್ಥ:
ಎಲೈ ಗಣಪತೇ, ಹಲವು ಬಗೆಯ ರತ್ನಗಳಿಂದ ವಿಚಿತ್ರವೂ ರಮಣೀಯವೂ ಆದ ಸಿಂಹಾಸನ ಗಂಗಾಜಲದಿಂದ ಸ್ನಾನ ಮತ್ತು ಪೀತಾಂಬರಗಳನ್ನು ನೀನು ಸ್ವೀಕರಿಸು.
ಕೊರಳಲ್ಲಿ ಮುತ್ತಿನ ಮಾಲೆಯೂ ಕಿವಿಗಳಲ್ಲಿ ಸೂರ್ಯಕಾಂತಿಯಿಂದ ಮಿನುಗುವ ಕುಂಡಲಗಳೂ ತಮ್ಮ ತಲೆಯ ಮೇಲೆ ಹಲವಾರು ತರದ ರತ್ನಗಳಿಂದ ಶೋಭಿಸುವ ಮುಕುಟವೂ ಇವೆ.(೧)

ಕಸ್ತೂರಿಯಿಂದ ಸಂತೋಷವನ್ನು ಮಾಡುವ ಚಂದನವೂ ಮತ್ತು ಕೇಶರಲೇಪನವುಳ್ಳ ಹಣೆಯುಳ್ಳವನೂ ಒಳ್ಳೆ ಹೂವು,ಎಕ್ಕೆ ಹೂವು, ಗರಿಕೆ ಗಳಿಂದ ತಲೆಯನ್ನು. ಶೋಭಿತಗೊಳಿಸಿದವನೂ ಆದ ಗಣೇಶನೆ,ಗುಗ್ಗುಳದ ಧೂಪ ಮತ್ತು ಸುಂದರವಾದ ಬತ್ತಿಯುಳ್ಳ ದೀಪ, ಉಂಡೆಯ ಊಟ, ಮತ್ತು ಹಾಲು ಅನ್ನ ಇವನ್ನು ನೀನು ಸ್ವೀಕರಿಸು.(೨)

ನಾನು ಮನಸ್ಸಿನಿಂದ ತಯಾರಿಸಿದ ತಾಂಬೂಲ, ನೆರಳೆಹಣ್ಣು ದಕ್ಷಿಣೆ, ಸಾಷ್ಟಾಂಗ ನಮಸ್ಕಾರ, ಬಹುವಿಧ ಪೂಜೆ, ಸ್ತುತಿ ಇವೆಲ್ಲವನ್ನು ಪ್ರಭುವೆ ನೀನು ಸ್ವೀಕರಿಸು. ನನ್ನ ಬಯಕೆಯು ಯಾವಾಗಲೂ ನಿನ್ನ ಪೂಜೆಯಲ್ಲಿ, ಬುದ್ಧಿಯು ನಿನ್ನ ಧ್ಯಾನದಲ್ಲಿ, ನನ್ನ ಇಚ್ಛೆಯು ನಿನ್ನ ಮುಖದರ್ಶನದಲ್ಲಿ ಮತ್ತು ಭಕ್ತಿಯು ನಿಮ್ಮ ಚರಣಗಳಲ್ಲಿ ಎಲೈ ಗಣಪತಿಯೇ ನೆಲೆಗೊಳ್ಳಲಿ.

ಸಾಹಿತ್ಯ: ಪುರಂದರದಾಸರ ಸಾಹಿತ್ಯ

ಗಜವದನ ಬೇಡುವೆ |೨|
ಗಜವದನ ಬೇಡುವೆ ಗೌರಿ ತನಯ |೩|
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ!

ಪಾಶಾಂಕುಶಧರ ಪರಮ ಪವಿತ್ರ |೨|
ಮೂಷಕ ವಾಹನ ಮುನಿ ಜನ ಪ್ರೇಮ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ!

ಮೋದದಿ ನಿನ್ನಯ ಪಾದವ ತೋರೊ
ಸಾಧುವಂದಿತನೆ ಆದರದಿಂದಲಿ |೨|
ಸರಸಿಜನಾಭ ಶ್ರೀ ಪುರಂದರ ವಿಠ್ಠಲನ |೩|
ನಿರತ ನೆನೆಯುವಂತೆ ವರ ದಯ ಮಾಡೊ |೩|

ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ
ಗಜವದನ ಬೇಡುವೆ

ಎಲ್ಲಾ ಸಂಕಷ್ಟ ಹರ ಗಣಪತಿಯನ್ನು ಪೂಜಿಸಿ
ನಿಮ್ಮ ಇಷ್ಟಾರ್ಥ ಸಿದ್ಧಿಯಾಗುವಂತೆ ಅವನು ಅನುಗ್ರಹಿಸುತ್ತಾನೆ.

#ಕೃಪೆ_ನಿರ್ಮಲರಾಜೇಶ್

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

🙏🏻 *ಮಂಡೋದರಿ ಏಕೆ ಪ್ರಾತಃಸ್ಮರಣೀಯಳು?* 🙏🏻

🚩 *ಬ್ರಾಹ್ಮಣ ಪ್ರಿಯ* 🚩

🙏🏻 *ಮಂಡೋದರಿ ಏಕೆ ಪ್ರಾತಃಸ್ಮರಣೀಯಳು?* 🙏🏻

ಪ್ರಕೃತಿಮಾತೆಯ ಎಲ್ಲ ಲಕ್ಷಣಗಳನ್ನೂ ಹೊತ್ತು ಸ್ತ್ರೀ, ಸತಿ ಎಂದು ಕರೆಯಲ್ಪಡುವ ಪಂಚಕನ್ಯೆಯರ ಸ್ಮರಣಮಾತ್ರ ದಿಂದಲೇ, ಪಾಪ ನಾಶವಾಗುವುದು ಎಂಬ ನಂಬಿಕೆ ಇದೆ. ಪ್ರಾತಃಸ್ಮರಣೀಯ ಪಂಚಕನ್ಯೆ ಯರಲ್ಲಿ, ಮಂಡೋದರಿಯೂ  ಒಬ್ಬಳು. ಮಂಡೋದರಿ, ದೈತ್ಯಶಿಲ್ಪಿ ಮಯನ ಮಗಳು. ಆಕೆಯನ್ನು ಒತ್ತಾಯವಾಗಿ ಎಳೆದು ತಂದು, ರಾವಣ ಮದುವೆಯಾದ. ಅವನೋ, ಯಾರೂ ಇದಿರಿಲ್ಲದವನು. ತನ್ನ ಪಾಪಕರ್ಮ ಗಳಿಂದಲೇ ತನ್ನ  ನಾಶವನ್ನು ಬರ ಮಾಡಿಕೊಂಡವನು.

ಇಂಥವನ ಪತ್ನಿಯಾಗಿದ್ದ ಮಂಡೋದರಿ, ಸುಗುಣ ಸಂಪನ್ನೆ. ರಾವಣ, ಪರಮಪಾವನೆ, ಪತಿವ್ರತೆ, ಸದ್ಧರ್ಮಚಾರಿಣಿಯಾದ, ಸೀತೆಯನ್ನು ಹೇಡಿಯಂತೆ ಅಪಹರಿಸುವ ಯೋಜನೆ ಕೈಗೊಂಡ.  ಇದನ್ನರಿತ ಮಂಡೋದರಿ- “ಅದು ಅಧರ್ಮ. ಹಾಗೆ ಮಾಡಿದಲ್ಲಿ ನಿಮ್ಮ ಕುಲವೇ ನಾಶವಾಗುವುದು’ ಎಂದು ಗಂಡನಿಗೆ ಬುದ್ಧಿ ಹೇಳಿದಳು. ಆದರೆ, ಆತ ಆ ಮಾತನ್ನು ಪರಿಗಣಿಸದೆ ಸೀತಾಪಹರಣ ಮಾಡಿ, ತನ್ನ ಅಂತ್ಯವನ್ನು ತಾನೇ  ಸ್ವಾಗತಿಸಿದ.

ರಾಮ- ರಾವಣರ ಯುದ್ಧದಲ್ಲಿ, ಮಕ್ಕಳು ಸಾಯುತ್ತಾ ಬಂದ ಸನ್ನಿವೇಶವನ್ನು ಕೂಡಾ, ಮಂಡೋದರಿ ನಿರ್ವಿಕಾರ ಭಾವದಿಂದಲೇ ಸ್ವೀಕರಿಸುತ್ತಾಳೆ. ಗಂಡ ಕಡೆಯ ಬಾರಿಗೆ ಯುದ್ಧಕ್ಕೆ ಹೊರಟಾಗಲೂ, ಬುದ್ಧಿ ಮಾತುಗಳಿಂದ ಅವನ ಮನ ಪರಿವರ್ತನೆಗೆ ಯತ್ನಿಸುತ್ತಾಳೆ. ಅದಾವುದನ್ನೂ ಕೇಳದ ರಾವಣ ಯುದ್ಧದಲ್ಲಿ ಸತ್ತಾಗ,  ರಣರಂಗಕ್ಕೆ ಬಂದು ಗೋಳಾಡಿ, ರಾಮನಲ್ಲಿ ಶರಣಾಗಿ, ಯಾರ ಮಾತಿಗೂ ಬಗ್ಗದೇ ಚಿತೆಯನ್ನು ಏರುತ್ತಾಳೆ.

ವಿಭೀಷಣನನ್ನು ಅಭಿನಂದಿಸುತ್ತಾಳೆ, ಆಶೀರ್ವದಿಸುತ್ತಾಳೆ. ಸತೀ ಧರ್ಮವನ್ನು ಅರಿತಿದ್ದ ಮಂಡೋದರಿ, ಅದನ್ನು ಜೀವನವಿಡೀ ಪಾಲಿಸಿದಳು. ಅವಳದು ತ್ಯಾಗಮಯ ಜೀವನ. ಶ್ರೀರಂಗ ಮಹಾಗುರುಗಳ ಮಾತಿನಂತೆ- “ಸ್ತ್ರೀಯರು  ಸದ್ವಸ್ತುವನ್ನು, ಪುರುಷ ಸ್ವರೂಪವನ್ನು ಅರಿತ ಜ್ಞಾನಿಗಳಾಗಿದ್ದರೆ, ಅವರನ್ನು ಪುರುಷರೆಂದೇ, ಜ್ಞಾನಿಗಳು ಕರೆಯುತ್ತಾರೆ. ಪುರುಷ ಶರೀರವಿದ್ದರೂ, ಅದರ ಸ್ವರೂಪದ ಅರಿವಿಲ್ಲದ ಪ್ರಾಕೃತರನ್ನು, ಸ್ತ್ರೀಯರೆಂದೇ ಕರೆಯುತ್ತಾರೆ’.

ಮಂಡೋದರಿ ಈ ದೃಷ್ಟಿಯಲ್ಲಿ, ಸದ್ವಸ್ತುವನ್ನರಿತ   ಜ್ಞಾನಿಯೇ ಆಗಿದ್ದಾಳೆ. ಪತಿ ಅಧರ್ಮದ ಹಾದಿಯಲ್ಲಿ ಸಾಗುತ್ತಿದ್ದಾಗ, ಅದನ್ನು ಒಪ್ಪದೇ, ಆತನನ್ನು ಧರ್ಮದ ಹಾದಿ ಯಲ್ಲಿ ಕರೆದೊಯ್ಯಲು ಯತ್ನಿಸುವುದು; ಪತಿಯ ಪಾಪಕೃತ್ಯಕ್ಕೆ ಸಹಕರಿಸದೇ, ಧರ್ಮ ಪಾಲನೆಯೊಂದಿಗೆ  ಬದುಕುವುದು ಸತಿ ಧರ್ಮ. ಈ ಸೂಕ್ಷ್ಮವನ್ನು ಅರಿತು ಬದುಕಿ, ಜಗಕ್ಕೆ ಪ್ರಾತಃ ಸ್ಮರಣೀಯಳಾದಳು ಮಂಡೋದರಿ.

ಕೃಪೆ: *ಚಂಪಕಾ ನರಸಿಂಹಭಟ್, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

ದತ್ತಾತ್ರೇಯ ಜಯಂತಿ

🕉️ ಓಂ ಶ್ರೀ ಗುರುಭ್ಯೋ ನಮಃ 🕉️‌                  ‌                                               ‌
 *ದತ್ತಾತ್ರೇಯ ಜಯಂತಿ* 
      ‌                                                             
  ಇದೇ ಬುಧವಾರ ಡಿಸೆಂಬರ್ 7, 2022 ರಂದು *ಶ್ರೀ ದತ್ತ ಜಯಂತಿ*.             ‌‌    ‌            ‌     ‌    ‌     ‌                                                     ‌                                                                                                                                                      ಮಾರ್ಗಶಿರ ಮಾಸದ ಪೂರ್ಣಿಮೆಯಂದು ದತ್ತ ಜನ್ಮವಾದ ಕಾರಣ, ಈ ದಿನ ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ, ಈ ಮೂರೂ ದೇವರ ಶಕ್ತಿಯು ಕೇಂದ್ರಿತವಾಗಿ ದತ್ತಾತ್ರೇಯರಲ್ಲಿ ಸಮ್ಮಿಲಿತವಾಗಿದೆ ಎಂದು ಹೇಳಲಾಗುತ್ತದೆ. ಶ್ರೀ ಗುರುದೇವ ದತ್ತರ ಸ್ಮರಣೆ ಮಾತ್ರದಿಂದ  ಕಷ್ಟಗಳು ನಾಶವಾಗುತ್ತವೆ. ಈ ದಿನ ಶ್ರದ್ಧೆಯಿಂದ ಶ್ರೀ ಗುರು ದತ್ತಾತ್ರೇಯರನ್ನು ಪೂಜಿಸಿದಲ್ಲಿ ಶಿವ ಮತ್ತು ವಿಷ್ಣುವಿನ ಕೃಪೆ ಪ್ರಾಪ್ತವಾಗುವುದಲ್ಲದೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ.                        ‌    ‌    ‌                                                                                                                                                                              ‌                                                                                                                                                          ‌ ಭಗವಾನ್ ದತ್ತಾತ್ರೇಯನು ಬ್ರಹ್ಮ , ವಿಷ್ಣು ಮತ್ತು ಶಿವನ ದೈವಿಕ ರೂಪದಿಂದ ಜನಿಸಿದನು. ಭಗವಾನ್ ದತ್ತಾತ್ರೇಯ ಮತ್ತು ಈ ತ್ರಿಮೂರ್ತಿಗಳನ್ನು ದತ್ತಾತ್ರೇಯ ಜಯಂತಿಯ ದಿನದಂದು ಪೂಜಿಸಲಾಗುತ್ತದೆ. ದತ್ತಾತ್ರೇಯ ಭಗವಾನ್‌ನಲ್ಲಿ, ನೀವು ಎಲ್ಲಾ ಮೂರು ದೇವರುಗಳನ್ನು ನೋಡಬಹುದು. ದತ್ತ ಜಯಂತಿ ಒಂದು ಪ್ರಮುಖ ಹಿಂದೂ ಹಬ್ಬವಾಗಿದ್ದು, ಇದನ್ನು ಆಗ್ರಾಹ್ಯನ ಹುಣ್ಣಿಮೆಯ ರಾತ್ರಿ ಆಚರಿಸಲಾಗುತ್ತದೆ. ಭಗವಾನ್ ದತ್ತಾತ್ರೇಯನನ್ನು ಭಗವಾನ್ ವಿಷ್ಣುವಿನ 24 ಅವತಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅವರು ತಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಪರಿಸರವನ್ನು ಗಮನಿಸುವುದರ ಮೂಲಕ ಜ್ಞಾನವನ್ನು ಪಡೆದರು ಎಂದು ನಂಬಲಾಗಿದೆ.

ಭಗವಾನ್ ದತ್ತಾತ್ರೇಯನನ್ನು ಸಾಮಾನ್ಯವಾಗಿ ಮೂರು ತಲೆಗಳು ಮತ್ತು ಆರು ಕೈಗಳಿಂದ ಚಿತ್ರಿಸಲಾಗಿದೆ. ಅವನ ಮೂರು ತಲೆಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ರೂಪವನ್ನು ಪ್ರತಿನಿಧಿಸುತ್ತವೆ. ಆರು ಕೈಗಳಲ್ಲಿ ಬ್ರಹ್ಮನ ಕಮಂಡಲ ಮತ್ತು ಜಪಮಾಲೆ, ವಿಷ್ಣುವಿನ ಶಂಖ ಮತ್ತು ಚಕ್ರ, ಶಿವನ ತ್ರಿಶೂಲ ಮತ್ತು ಡಮರು. ಭಾರತದಾದ್ಯಂತ ದತ್ತಾತ್ರೇಯನಿಗೆ ಸಮರ್ಪಿತವಾಗಿರುವ ದೇವಾಲಯಗಳಲ್ಲಿ ದತ್ತ ಜಯಂತಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಕೆಲವು ಪ್ರಮುಖ ದೇವಾಲಯಗಳು ಕರ್ನಾಟಕದ ಗುಲ್ಬರ್ಗಾ ಬಳಿಯ ಗಂಗಾಪುರ, ಮಹಾರಾಷ್ಟ್ರದ ಕೊಲ್ಲಾಪುರದ ನರಸಿಂಹ ವಾಡಿ, ಕಾಕಿನಾಡ ಬಳಿಯ ಆಂಧ್ರಪ್ರದೇಶದ ಪಿಠಾಪುರ, ಸಾಂಗ್ಲಿಯ ಔದುಂಬರ್ ಮತ್ತು ಸೌರಾಷ್ಟ್ರದ ಗಿರ್ನಾರ್‌ನಲ್ಲಿವೆ. ಈ ಬಾರಿಯ ದತ್ತಾತ್ರೇಯ ಜಯಂತಿ ಯಾವಾಗ ಎಂದು ತಿಳಿಯೋಣ:

*ದತ್ತಾತ್ರೇಯ ಜಯಂತಿ ಮುಹೂರ್ತ*          ‌       ‌     ‌     ‌      ‌                                                                                                                    ದಿನಾಂಕ ಮತ್ತು ತಿಥಿ ಸಮಯಗಳು
ದತ್ತಾತ್ರೇಯ ಜಯಂತಿ: ಬುಧವಾರ, ಡಿಸೆಂಬರ್ 7, 2022
ಪೂರ್ಣಿಮಾ ತಿಥಿ ಪ್ರಾರಂಭ : ಡಿಸೆಂಬರ್ 07, 2022 ಬೆಳಗ್ಗೆ ಬುಧವಾರ 08:01ಕ್ಕೆ
ಪೂರ್ಣಿಮಾ ತಿಥಿ ಮುಕ್ತಾಯ: ಡಿಸೆಂಬರ್ 08, 2022 ಬೆಳಗ್ಗೆ ಗುರುವಾರ 09:37ಕ್ಕೆ
 ‌                                                                                                                                                                                                                                 *ದತ್ತಾತ್ರೇಯ ದೇವರ ಕಥೆ*
                                                                                                         ಭಗವಾನ್ ದತ್ತಾತ್ರೇಯರು ಮಹರ್ಷಿ ಅತ್ರಿ ಮತ್ತು ಅವರ ಪತ್ನಿ ಅನುಸೂಯಾದೇವಿ ಅವರ ಮಗ. ಅನುಸೂಯಾ ಮಹಾ ಪತಿವ್ರತೆ, ಸದ್ಗುಣಿ, ಶ್ರದ್ಧೆಯುಳ್ಳ ಮತ್ತು ಅತ್ಯಂತ ಸದ್ಗುಣಶೀಲ ಮಹಿಳೆ. ಅವರು ಬ್ರಹ್ಮ, ವಿಷ್ಣು ಮತ್ತು ಶಿವನ ಶಕ್ತಿ ಮತ್ತು ಗುಣಗಳನ್ನು ಹೊಂದಿರುವ ಮಗನಿಗಾಗಿ ಪ್ರಾರ್ಥಿಸಿದರು. ಅದರ ಫಲವಾಗಿ ದತ್ತಾತ್ರೇಯ ಜನನವಾಯಿತು. ಅವರನ್ನು ಭಾರತದ ಪ್ರಾಚೀನ ದೇವತೆಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ದತ್ತಾತ್ರೇಯನನ್ನು ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಅಥರ್ವವೇದದ ಭಾಗವಾಗಿರುವ ದತ್ತಾತ್ರೇಯ ಉಪನಿಷತ್, ತನ್ನ ಅನುಯಾಯಿಗಳಿಗೆ ಜ್ಞಾನೋದಯವನ್ನು ಪಡೆಯಲು ಸಹಾಯ ಮಾಡಲು ಅವನು ವಿವಿಧ ರೂಪಗಳನ್ನು ತೆಗೆದುಕೊಂಡಿದ್ದಾನೆ ಎಂದು ದೃಢೀಕರಿಸುತ್ತದೆ.

ಒಮ್ಮೆ ಸ್ವರ್ಗದಲ್ಲಿ, ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿ, ಮೂರು ದೇವತೆಗಳು ಶುದ್ಧತೆ ಮತ್ತು ಪರಿಶುದ್ಧತೆಯ ಬಗ್ಗೆ ಚರ್ಚಿಸುತ್ತಿದ್ದರು. ಆಗ ನಾರದರು ಅಲ್ಲಿಗೆ ಬಂದು ಮೂರು ದೇವತೆಗಳಿಗೆ ಅನುಸೂಯಾಳ ಬಗ್ಗೆ ತಿಳಿಸಿದರು. ಯಾರ ಬಗ್ಗೆ ಕೇಳಿದ ಮೂರು ದೇವತೆಗಳು ತಮ್ಮ ತಮ್ಮ ದೇವತೆಗಳೊಂದಿಗೆ ತಮ್ಮ ಪರಿಶುದ್ಧತೆಯನ್ನು ಮುರಿಯಲು ಹಠ ಮಾಡಿದರು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅವರಿಗೆ ಮನವರಿಕೆ ಮಾಡಲು ಸಾಧ್ಯವಾಗದಿದ್ದಾಗ, ಅವರು ಅನುಸೂಯೆಯಂತೆ ವೇಷ ಧರಿಸಿ ಆಶ್ರಮದಲ್ಲಿ ಅನುಸೂಯೆ ಮಾತ್ರ ಇದ್ದಾಗ ಅವರನ್ನು ಪರೀಕ್ಷಿಸಲು ಅವರ ಆಶ್ರಮಕ್ಕೆ ಹೋದರು.

ಅವರು ಋಷಿಗಳ ರೂಪದಲ್ಲಿ ಅಲ್ಲಿಗೆ ತಲುಪಿದರು. ಅವರನ್ನು ನೋಡಿದ ತಾಯಿ ಅನುಸೂಯಾ ಅವರನ್ನು ಸ್ವಾಗತಿಸಿ ಊಟಕ್ಕೆ ಕರೆದರು. ಆದರೆ ಋಷಿಮುನಿಗಳು  ನೀವು ನಮಗೆ ಬಟ್ಟೆಯಿಲ್ಲದ ನಿರ್ವಾಣ ರೂಪದಲ್ಲಿ ಆಹಾರವನ್ನು ನೀಡುತ್ತೀರಿ, ಆಗ ಮಾತ್ರ ನಾವು ತಿನ್ನುತ್ತೇವೆ ಎಂದು ಹೇಳಿದರು. ಇದನ್ನು ಕೇಳಿದ ಅನುಸೂಯಾ ತನ್ನ ದಿವ್ಯ ದೃಷ್ಟಿಯನ್ನು ನೋಡಿದಳು ಮತ್ತು ಅವನು ಯಾರೆಂದು ಗುರುತಿಸಿದಳು. ಇದಾದ ನಂತರ, ತ್ರಿದೇವ ಅವರನ್ನು ಪರೀಕ್ಷಿಸಲು ಬಂದಿದ್ದಾರೆ ಎಂದು ಅವರ ಪರೀಕ್ಷೆ ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ನಂತರ ಅವರು ಕಮಂಡಲದಿಂದ ನೀರನ್ನು ತೆಗೆದುಕೊಂಡು ಮಂತ್ರಗಳ ಶಕ್ತಿಯಿಂದ ಋಷಿಗಳ ಮೇಲೆ ನೀರನ್ನು ಪ್ರೋಕ್ಷಿಸಿದ ತಕ್ಷಣ ಮೂವರೂ ಋಷಿಗಳು ಮಕ್ಕಳಾದರು.

ಋಷಿಗಳು ಮಗುವಾದಾಗ ಅವರಲ್ಲಿ ತಾಯ್ತನ ಜಾಗೃತವಾಯಿತು. ಬಳಿಕ ಎದೆಹಾಲು ಕುಡಿಸಿ ಅವರ ಹಸಿವನ್ನು ನೀಗಿಸಿದರು. ಈ ರೀತಿಯಾಗಿ, ಅವರು ತಮ್ಮ ಆತಿಥ್ಯ ಉಳಿಸಿಕೊಂಡರು ಮತ್ತು ಅವರ ಪರಿಶುದ್ಧತೆಯನ್ನು ಸಹ ಉಳಿಸಿಕೊಂಡರು. ಮಕ್ಕಳೆಲ್ಲ ಹಸಿವು ಕಳೆದುಕೊಂಡಾಗ ಆಟವಾಡುತ್ತಾ ಮಲಗಿದರು. ಋಷಿ ಅತ್ರಿ ಅಲ್ಲಿಗೆ ತಲುಪಿದಾಗ, ಅವರು ಇಡೀ ಕಥೆಯನ್ನು ವಿವರಿಸಿದರು. ಇಬ್ಬರೂ ಸೇರಿ ಮಕ್ಕಳಿಗೆ ಆರೈಕೆ ಮಾಡತೊಡಗಿದರು.

ತ್ರಿಮೂರ್ತಿಗಳು ಹಿಂತಿರುಗದಿದ್ದಾಗ ಮೂವರೂ ದೇವಿಯರು ಗಲಿಬಿಲಿಗೊಂಡರು. ಆ ನಂತರ ಮಹರ್ಷಿ ನಾರದರು ಅವರನ್ನು ಮಾತಾ ಅನುಸೂಯರ ಆಶ್ರಮಕ್ಕೆ ಕರೆತಂದರು. ತ್ರಿಮೂರ್ತಿಗಳ ಇಲ್ಲದೇ ಲೋಕದ ಕಾರ್ಯಗಳು ತೊಂದರೆಗೀಡಾಗಿದೆ. ದಯವಿಟ್ಟು ಅವರನ್ನು ಮೂಲ ರೂಪಕ್ಕೆ ಹಿಂತಿರುಗಿಸಿ ಎಂದು ನಾರದ ಮುನಿ ಮಾತೆ ಅನುಸೂಯಾ ಅವರನ್ನು ಒತ್ತಾಯಿಸಿದರು. ತಾಯಿ ಅನುಸೂಯಾ, ಮಲಗಿದ್ದ ಮಕ್ಕಳನ್ನು ತೋರಿಸಿ, ಗಂಡನನ್ನು ಕರೆದುಕೊಂಡು ಹೋಗುವಂತೆ ಕೇಳಿದರು. ಆದರೆ ಮಾತೆಯರು ತನ್ನ ಗಂಡನನ್ನು ಮಗುವೆಂದು ಗುರುತಿಸಲು ಸಾಧ್ಯವಾಗದ ಕಾರಣ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಒಬ್ಬೊಬ್ಬರಾಗಿ ಮಕ್ಕಳನ್ನು ಎತ್ತಿ ಕೊಂಡರು, ಆದರೆ ಅವರು ಅವಳ ಗಂಡನಾಗಿರಲಿಲ್ಲ. ಇದರಿಂದ ಮೂವರು ಮಹಿಳೆಯರು ತೀವ್ರ ಮುಜುಗರಕ್ಕೊಳಗಾದರು.

ಸರಸ್ವತಿ ದೇವಿಯು ವಿಷ್ಣುವನ್ನು ಎತ್ತಿದಳು, ಪಾರ್ವತಿ ದೇವಿಯು ಬ್ರಹ್ಮನನ್ನು ಎತ್ತಿದಳು ಮತ್ತು ಲಕ್ಷ್ಮೀ ದೇವಿಯು ಶಿವನನ್ನು ಎತ್ತಿದಳು, ಇದನ್ನು ನೋಡಿದ ಮಾತೆ ಅನುಸೂಯಾ ಹೇಳಿದಳು - ನೀನು ನಿನ್ನ ಗಂಡಂದಿರನ್ನು ಗುರುತಿಸುವುದಿಲ್ಲವೇ. ಆಗ ಮೂವರು ಮಾತೆಯರು ತಮ್ಮ ಗಂಡಂದಿರನ್ನು ಅದೇ ರೂಪದಲ್ಲಿ ಹಿಂದಿರುಗಿಸುವಂತೆ ಬೇಡಿಕೊಂಡರು. ಇದರ ನಂತರ, ತಾಯಿ ಅವರನ್ನು ತನ್ನ ಮೂಲ ರೂಪದಲ್ಲಿ ಮಾಡಿದಳು. ಮೂರು ದೇವತೆಗಳು ಅನುಸೂಯಾ ಮಾತೆಯ ಬಗ್ಗೆ ಸಂತೋಷಪಟ್ಟರು ಮತ್ತು ಅವಳ ಆಶೀರ್ವಾದವನ್ನು ಕೋರಿದರು. ನಂತರ ಅವಳು ಮೂರು ದೇವತೆಗಳನ್ನು ತನ್ನ ಪುತ್ರರನ್ನಾಗಿ ಹೊಂದುವ ವರವನ್ನು ಕೇಳಿದನು. ತ್ರಿದೇವ ತಥಾಸ್ತು ಎಂದು ಹೇಳುತ್ತಾ ಅವರು ಆಕೆಯ ಮಾತೃವಾತ್ಸಲ್ಯದ  ಬಗ್ಗೆ ವ್ಯಾಮೋಹ ಗೊಂಡರು. ಹೀಗೆ ತ್ರಿಮೂರ್ತಿಗಳ ಆಶೀರ್ವಾದದಿಂದ ದತ್ತಾತ್ರೇಯ ಜನಿಸಿದರು ಮತ್ತು ಋಷಿ ಅತ್ರಿ ಮತ್ತು ಅನುಸೂಯಾ ತಾಯಿತಂದೆಯಾದರು.

*ದತ್ತಾತ್ರೇಯ ಜಯಂತಿ ಪೂಜಾ ವಿಧಿ*
                                                                                             ~ ದತ್ತಾತ್ರೇಯ ಜಯಂತಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕು.
~ ದಿನನಿತ್ಯದ ಚಟುವಟಿಕೆಗಳಿಂದ ನಿವೃತ್ತರಾದ ನಂತರ ಸ್ನಾನ ಮಾಡಿ.
~ ಈ ದಿನದಂದು ನದಿಗಳು ಮತ್ತು ಜಲಮೂಲಗಳಲ್ಲಿ ಸ್ನಾನವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
~ ಸಾಧ್ಯವಾದರೆ ನದಿಗೆ ಹೋಗಿ ಸ್ನಾನ ಮಾಡಿ.
~ ಸ್ನಾನ ಮಾಡಿದ ನಂತರ ಕೈಯಲ್ಲಿ ನೀರನ್ನು ತೆಗೆದುಕೊಂಡು ಉಪವಾಸ ಮಾಡುವ ಪ್ರತಿಜ್ಞೆ ಮಾಡಿ.
~ ಶುಭ್ರವಾದ ಬಟ್ಟೆಗಳನ್ನು ಧರಿಸಿ.
ದತ್ತಾತ್ರೇಯನ ಮೂರ್ತಿಗೆ ಅಭಿಷೇಕ, ಷೋಡಶೋಪಚಾರ ಸಹಿತವಾಗಿ ಆರಾಧನೆ ಮಾಡಿ.
~ ಅವಧೂತ ಗೀತೆ ಮತ್ತು ಜೀವನ್ಮುಕ್ತ ಗೀತೆಗಳ ಪವಿತ್ರ ಪುಸ್ತಕಗಳನ್ನು ಓದಿ.
ಅವುಗಳಲ್ಲಿ ಭಗವಾನ್ ದತ್ತಾತ್ರೇಯರ ಪ್ರವಚನಗಳಿವೆ.                                         ~ 'ಓಂ ದ್ರಾಂ ದತ್ತಾತ್ರೇಯ ಸ್ವಾಹಾ' ಮತ್ತು 'ಓಂ ಮಹಾನಾಥಾಯ ನಮಃ' ಮಂತ್ರಗಳೊಂದಿಗೆ
ಪ್ರಾರ್ಥಿಸಿ .
~ ಭಜನೆ ಕೀರ್ತನೆ ಮಾಡಿ ಎಲ್ಲರಿಗೂ ಪ್ರಸಾದ ವಿತರಿಸಿ.
~ ಮರುದಿನ ಸ್ನಾನ ಮಾಡಿ ಪೂಜಿಸಿ, ಅಗತ್ಯವಿರುವವರಿಗೆ ಆಹಾರ ನೀಡಿ ಮತ್ತು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಕ್ಷಿಣೆಯನ್ನು ನೀಡಿ.
~ ಈಗ ಆಹಾರವನ್ನು ಸೇವಿಸುವ ಮೂಲಕ ಉಪವಾಸವನ್ನು ಮುರಿಯಿರಿ.

*ದತ್ತಾತ್ರೇಯ ಜಯಂತಿ ಮಹತ್ವ*
                                                                                                   ಭಗವಾನ್ ದತ್ತಾತ್ರೇಯನು ಅಪರಿಮಿತ ಶಕ್ತಿಯನ್ನು ಹೊಂದಿದ್ದಾನೆ ಎಂದು ನಂಬಲಾಗಿದೆ. ಭಗವಾನ್ ದತ್ತಾತ್ರೇಯನು ಭಕ್ತರಿಗೆ ಜೀವನದ ಪ್ರಮುಖ ಸವಾಲುಗಳಿಂದ ಪರಿಹಾರವನ್ನು ನೀಡುತ್ತಾನೆ ಮತ್ತು ಸಮೃದ್ಧಿಯ ಮಾರ್ಗದಿಂದ ಅಡೆತಡೆಗಳನ್ನು ತೆಗೆದುಹಾಕುತ್ತಾನೆ. ಭಕ್ತರನ್ನು ತ್ರಿಮೂರ್ತಿಗಳ ಶಕ್ತಿಯಿಂದ ಆಶೀರ್ವದಿಸುತ್ತಾರೆ ಮತ್ತು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ.

ಭಗವಾನ್ ದತ್ತಾತ್ರೇಯನ ಆರು ಕೈಗಳು ಶಂಖ, ಚಕ್ರ, ಗದಾ, ತ್ರಿಶೂಲ, ಕಮಂಡಲ ಮತ್ತು ಆಶೀರ್ವಾದ ಮುದ್ರೆ ಹಿಡಿದಿವೆ. ಶಂಖ ಸ್ವರ್ಗೀಯ ಧ್ವನಿಯನ್ನು ಪ್ರತಿನಿಧಿಸುತ್ತದೆ; ಚಕ್ರವು ಸಮಯವನ್ನು ಪ್ರತಿನಿಧಿಸುತ್ತದೆ; ಗದಾ ಹೆಮ್ಮೆಯ ಸಂಕೇತ; ತ್ರಿಶೂಲ ಮೂರು ಪಟ್ಟು ಶಕ್ತಿಗಳನ್ನು ಪ್ರತಿನಿಧಿಸುತ್ತದೆ; ಕಮಂಡಲವು ಭಗವಾನ್ ದತ್ತಾತ್ರೇಯನನ್ನು ಭೂಮಿಯ ಮೇಲಿನ ಜೀವಧಾರಕನಾಗಿ ಚಿತ್ರಿಸುತ್ತದೆ; ಕಮಂಡಲ ವ್ಯಕ್ತಿಯ ಘನತೆ, ನಕಾರಾತ್ಮಕತೆ,  ದುಷ್ಟ ಆಲೋಚನೆಗಳನ್ನು ಸೂಚಿಸುತ್ತದೆ.

Monday, 5 December 2022

ಇತಿಹಾಸದ_ಪವಾಡ_ಸಿದ್ದ_ಶಿವನ_ದೇವಾಲಯವಿದು

#8_ತಿಂಗಳು_ನೀರಿನಲ್ಲೇ_ಮುಳುಗಿದ್ದು 

#ಕೇವಲ_4_ತಿಂಗಳು_ಭಕ್ತರಿಂದ_ಪೂಜೆ_ಸ್ವೀಕರಿಸುವ 

#ಇತಿಹಾಸದ_ಪವಾಡ_ಸಿದ್ದ_ಶಿವನ_ದೇವಾಲಯವಿದು
 

ಅನೇಕ ಋಷಿಮುನಿಗಳಿಗೆ ಆಶ್ರಯ ನೀಡಿ 8 ತಿಂಗಳು ನೀರಿನಲ್ಲೇ ಇದ್ದು 4 ತಿಂಗಳು ಭಕ್ತರಿಂದ ಪೂಜೆ ಸ್ವೀಕರಿಸುವ ದೇವಾಲಯ ಇರುವುದಾದರೂ ಎಲ್ಲಿ ಮತ್ತು ಅಷ್ಟು ತಿಂಗಳು ಈ ದೇವಾಲಯ ನೀರಿನಲ್ಲಿ ಇರಲು ಕಾರಣವಾದರು ಏನು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ .

 

 

ಈ ದೇವಾಲಯ ಇರುವುದು ಆಂಧ್ರ ಪ್ರದೇಶ #ಕರ್ನೂರ್ ಜಿಲ್ಲೆಯ 56 ಕಿಲೋಮೀಟರು ದೂರದಲ್ಲಿ #ಸಂಗಮೇಶ್ವರ ಎಂಬ ಗ್ರಾಮದಲ್ಲಿ ಸಂಗಮೇಶ್ವರ ಸ್ವಾಮಿ ದೇವಾಲಯವಿದೇ ,ಈ ದೇವಾಲಯ ಅತಿ ಪುರಾತನವಾದ ದೇವಾಲಯ, #ಧರ್ಮರಾಯ ಈ ದೇವಾಲಯವನ್ನು ಪ್ರತಿಷ್ಠಾಪಿಸಿದ ಎಂದು ಪುರಾಣಗಳು ಹೇಳುತ್ತದೆ .

 

ಸಂಗಮೇಶ್ವರ ದೇವಾಲಯ 7 ನದಿಗಳು ಕೂಡುವ ಪ್ರದೇಶ ಅದಕ್ಕೆ ಈ ಸ್ಥಳಕ್ಕೆ #ಸಪ್ತನದಿಗಳ_ಸಂಗಮ ಎಂದು ಕರೆಯುತ್ತಾರೆ. ಈ ದೇವಾಲಯದ ಪುರಾಣಕ್ಕೆ ಬಂದರೆ ಪೂರ್ವದಲ್ಲಿ ಇಲ್ಲಿ ದಕ್ಷಯಜ್ಞ ನಡೆದಿತ್ತು ಆ ಸಮಯದಲ್ಲಿ ದಕ್ಷ ಸತಿಯನ್ನು ಅವಮಾನ ಮಾಡಿದರಿಂದ ಅವಳು ಈ ಯಜ್ಞಕುಂಡದಲ್ಲಿ ಬಿದ್ದು ಮರಣ ಹೊಂದಿದಳು ಎಂದು ಸ್ಥಳ ಪುರಾಣ ಹೇಳುತ್ತದೆ .

 
ಪಾಂಡವರ ವನವಾಸ ಸಮಯದಲ್ಲಿ ಧರ್ಮರಾಯ ಇಲ್ಲಿ ಶಿವಲಿಂಗ ಪ್ರತಿಷ್ಠಾಪಿಸಬೇಕು ಎಂದು ನಿರ್ಧಾರ ಮಾಡುತ್ತಾನೆ ,ಧರ್ಮರಾಯನ ಆದೇಶದಂತೆ ಭೀಮ ಶಿವಲಿಂಗವನ್ನು ತರಲು ಕಾಶಿಗೆ ಹೋಗುತ್ತಾನೆ ,ಆದರೆ ಸರಿಯಾದ ಸಮಯಕ್ಕೆ ಭೀಮ ಬರುವುದಿಲ್ಲ ,

ಆ ಸಮಯದಲ್ಲಿ ಋಷಿಮುನಿಗಳ ಆದೇಶದಂತೆ ಒಂದು ಕಲ್ಲನ್ನು ಶಿವಲಿಂಗದಂತೆ ಪ್ರತಿಷ್ಠಾಪಿಸುತ್ತಾನೆ ,ಇದರಿಂದ ಕೋಪಗೊಂಡ ಭೀಮ ತನ್ನ ತಂದ ಶಿವಲಿಂಗವನ್ನು ನೀರಿಗೆ ಎಸೆಯುತ್ತಾನೆ ,ಭೀಮನನ್ನು ಸಮಾಧಾನ ಮಾಡುವುದಕ್ಕೆ ಧರ್ಮರಾಯ ಅವನ್ನು ತಂದ ಶಿವಲಿಂಗವನ್ನು ನದಿತೀರದಲ್ಲೇ ಪ್ರತಿಷ್ಠಾಪಿಸಿ ಅದಕ್ಕೆ #ಭೀಮಲಿಂಗ ಎಂದು ಹೆಸರು ಇಡುತ್ತಾನೆ.

 

ಭಕ್ತರು ಮೊದಲು ಭೀಮಲಿಂಗದ ದರ್ಶನ ಮಾಡಿದ ಮೇಲೆ ಸಂಗಮೇಶ್ವರ ಸ್ವಾಮಿಯ ದರ್ಶನ ಮಾಡುತ್ತಾರೆ. ಪ್ರಪಂಚದಲ್ಲಿ 7 ನದಿಗಳು ಸೇರುವ ಒಂದೇ ಒಂದು ಸ್ಥಳ ಸಂಗಮೇಶ್ವರ. 

ಈ ದೇವಾಲಯದಲ್ಲಿ ಎಲ್ಲ ದೇವಾಲಯಗಳ ತರಹ ಪೂಜೆಗಳು ದಿನ ನಡೆಯುದಿಲ್ಲ ,ತುಂಬಾ ತಿಂಗಳುಗಳು ನೀರಿನಲ್ಲಿ ಈ ದೇವಾಲಯ ಮುಳುಗಿರುತ್ತದೆ .