Monday, 24 November 2025

ಅಷ್ಟ ದಿಕ್ಪಾಲಕರು

ಅಷ್ಟ ದಿಕ್ಪಾಲಕರು

ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ.
ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ.
 ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು: ಇಂದ್ರ-ಪೂರ್ವ, ಕುಬೇರ-ಉತ್ತರ, ಯಮ-ದಕ್ಷಿಣ, ವರುಣ-ಪಶ್ಚಿಮ, ಈಶಾನ (ಶಿವ)- ಈಶಾನ್ಯ, ಅಗ್ನಿ-ಆಗ್ನೇಯ, ವಾಯು-ವಾಯುವ್ಯ, ನಿಋತಿ(ರಾಕ್ಷಸ)- ನೈಋುತ್ಯ.

ಇಂದ್ರ: ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿಧಿದೇವತೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ.

 ಅಗ್ನಿ: ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಧಿಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ. 

ಯಮ: ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ ಮೃತ್ಯುದೇವತೆ. ಕಾಲಪುರುಷ ಎಂತಲೂ ಕರೆಯುತ್ತಾರೆ. ಈತ ದಕ್ಷಿಣ ದಿಕ್ಕಿನ ಅಧಿಧಿಪತಿ. ಇವನು ಸೂರ್ಯನ ಮಗ. ಶನಿಯ ತಮ್ಮ. ಈತನ ಆಯುಧ ದಂಡ.

 ನಿಋುತಿ: ನೈಋುತ್ಯ ದಿಕ್ಕಿನ ಒಡೆಯ. ನಿಋುತಿಯ ಆಯುಧ ಖಡ್ಗ. ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾನೆ.ಇತನ ಆರಾಧನೆಯಿಂದ ದೀರ್ಘಾಯಸ್ಸು ಲಭಿಸುತ್ತದೆ.

 ಪಶ್ಚಿಮದಲ್ಲಿ ವರುಣ: ವರುಣನ ಆಯುಧ ಪಾಶ. ಸರ್ವ ಜಲ ತತ್ವಗಳಿಗೆ ದೇವತೆ.

ವಾಯು: ವಾಯುವ್ಯ ದಿಕ್ಕಿನ ದೇವತೆ. ಇವನ ಆಯುಧ ಅಂಕುಶ. ಹನುಮನ ತಂದೆ. ಈತನನ್ನು ಪವನ, ಪ್ರಾಣ ಎಂತಲೂ ಕರೆಯುತ್ತಾರೆ. ಭಗವದ್ಗೀತೆಯ ಹತ್ತನೆಯ ಅಧ್ಯಾಯವಾದ ವಿಭೂತಿಯೋಗದಲ್ಲಿ ಶ್ರೀಕೃಷ್ಣನು ತನ್ನ ಭಾವ ವಾಯುವಿನಂತೆ ಇದೆ ಎಂದು ಹೇಳುತ್ತಾನೆ.

 ಕುಬೇರ: ಕುಬೇರ ಮಿಶ್ರವಸುವಿನ ಮಗ. ಈತನ ಆಯುಧ ಗಧೆ. ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಧನ ದೇವತೆ.

ಈಶಾನ: ಇವನ ಆಯುಧ ತ್ರಿಶೂಲ. ಸಂಪತ್ತು, ಆರೋಗ್ಯ ಹಾಗೂ ಯಶಸ್ಸಿನ ದೇವತೆ. ಈತ ಜ್ಞಾನವನ್ನು ಕೊಟ್ಟು, ದುಃಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ.

ಪಂಚಮುಖಿ ಆಂಜನೇಯ

***ಪಂಚಮುಖಿ  ಆಂಜನೇಯ*** 
ರಾಮಾಯಣದಲ್ಲಿ, ಶ್ರೀರಾಮನ
 ಜೊತೆ ಕೇಳಿ ಬರುವ ಹೆಸರು ಆಂಜನೇಯ. ರಾಮನ ಭಂಟ ಹನುಮಂತನು ಕಲಿಯುಗದ ಭಕ್ತರಿಗೆ  ಶಕ್ತಿಯುತ ದೇವರಾಗಿದ್ದಾನೆ. ಪಂಚಮುಖಿ ಆಂಜನೇಯ ಭಕ್ತರ ಎಲ್ಲಾ ಕಷ್ಟಕಾರ್ಪಣ್ಯ ಗಳನ್ನು  ನಾಶ ಪಡಿಸುತ್ತಾನೆ. ಸೀತಾಮಾತೆಯನ್ನು ರಾವಣ ಅಪಹರಣ ಮಾಡಿದ ನಂತರದಲ್ಲಿ  ಅನೇಕ ಘಟನೆಗಳು ನಡೆದು, 

ಕೊನೆಯದಾಗಿ ರಾಮನ  ವಾನರ ಸೈನ್ಯ ಮತ್ತು ರಾವಣನ ಸೈನ್ಯ ರಾಕ್ಷಸರ ನಡುವೆ ಭೀಕರ ಕದನವಾಗುತ್ತದೆ. ಯುದ್ಧದಲ್ಲಿ ರಾವಣನ ತಮ್ಮ ಕುಂಭಕರ್ಣ ಹಾಗೂ ಮಗ ಇಂದ್ರಜಿತು ಮರಣ ಹೊಂದುತ್ತಾರೆ. ಇದರಿಂದ ಕಂಗೆಟ್ಟ ರಾವಣನಿಗೆ ಸೋಲಿನ ಭಯ ಆವರಿಸಿತು. ಹೇಗಾದರೂ ಮಾಡಿ  ರಾಮನನ್ನು ಸೋಲಿಸಬೇಕೆಂದು ಹಟತೊಟ್ಟು ಪಾತಳದ ಅಧಿಪತಿಯಾಗಿದ್ದ ತನ್ನ ಸಹೋದರ ( ದೂರ ಸಂಬಂಧಿ) ಅಹಿರಾವಣನ ಸಹಾಯ ಪಡೆಯುತ್ತಾನೆ ಎಂಬ ವಿಷಯ ವಿಭೀಷಣನಿಗೆ ತಿಳಿಯಿತು.

 ಅವನು ರಾಮ ಲಕ್ಷ್ಮಣರನ್ನು ಯಾರಿಗೆ ಕಾಣದಂತೆ ಮುಚ್ಚಿಡಬೇಕು ಎಂದು  ಹನುಮಂತನಿಗೆ ಹೇಳಿದನು. ಹನುಮಂತನು ತನ್ನ  ಬಾಲವನ್ನು ದೊಡ್ಡದಾಗಿ ವಿಸ್ತರಿಸಿಕೊಂಡು ಕೋಟೆ ಕಟ್ಟಿ ಅದರಲ್ಲಿ ರಾಮ ಲಕ್ಷ್ಮಣರನ್ನು ಮುಚ್ಚಿಟ್ಟನು.

ಆದರೆ ಮಾಯಾವಿ ಅಹಿರಾವಣ, ವಿಭೀಷಣನ ವೇಶದಲ್ಲಿ ಬಂದು, ರಾಮನನ್ನು ನೋಡಬೇಕೆಂದು ಹೇಳಿ, ಮೋಸ ದಿಂದ  ರಾಮ-ಲಕ್ಷ್ಮಣರನ್ನು  ಅಪಹರಿಸಿಕೊಂಡು ಹೋಗಿ ಪಾತಾಳದಲ್ಲಿ ಇಡುತ್ತಾನೆ.  ಇದನ್ನು ತಿಳಿದ ಹನುಮಂತನು ಪಾತಾಳಲೋಕಕ್ಕೆ ಹೊರಡುತ್ತಾನೆ. ಪಾತಾಳದ ಬಾಗಿಲಲ್ಲಿ  ವಿಚಿತ್ರ ಪ್ರಾಣಿಯೊಂದು ಎದುರಾಗುತ್ತದೆ. ಅದರ ಮುಖ ವಾನರ ನಂತೆ, ದೇಹ ಮೀನಿನಂತೆ ಇರುತ್ತದೆ. 

ಅವನೇ ಪಾತಾಳದ  ದ್ವಾರಪಾಲಕ ಮಕರಧ್ವಜ. ಇವನು ಹನುಮನ ಪುತ್ರನಾಗಿದ್ದನು. ಹನುಮ ಲಂಕಾದಹನ ಮಾಡಿದ ನಂತರ  ಉರಿತಾಪ ತಾಳಲಾರದೆ ಸಮುದ್ರಕ್ಕೆ ಜಿಗಿದನು.ಆಗ ಅವನ ದೇಹದಿಂದ  ಬಿದ್ದ ಬೆವರ ಹನಿ ಒಂದು ಮೀನು ನುಂಗಿತು. ಮೀನಿನಿಂದ  “ಮಕರದ್ವಜ” ಹುಟ್ಟಿದನು. ಇವನು ಮಹಾ ಪರಾಕ್ರಮಿ, ವೀರನು ಆಗಿದ್ದಾನೆ ಎಂದು ತಿಳಿದ ಅಹಿರಾವಣ
ಅವನನ್ನು ಕರೆಸಿ  ಪಾತಾಳಲೋಕದ  ದ್ವಾರಪಾಲಕ ನನ್ನಾಗಿ ಮಾಡಿದನು.  

ಹನುಮಂತ ತನ್ನ ದಿವ್ಯ ದೃಷ್ಟಿಯಿಂದ ಇದನ್ನು ಅರಿತು.  ಮಕರದ್ವಜನಿಗೆ ಪಾತಾಳದ ಒಳಗೆ ಹೋಗಲು ಬಿಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಮಕರಧ್ವಜ ನನ್ನ ಕರ್ತವ್ಯವನ್ನು ಮಾಡುತ್ತೇನೆ ಬಿಡುವುದಿಲ್ಲ ಎನ್ನುತ್ತಾನೆ. 

ಹನುಮಂತನು  ಅವನೊಡನೆ  ಹೊರಾಡಿ  ಅವನನ್ನು ಒಂದು  ಕಂಬಕ್ಕೆ ಕಟ್ಟಿ ನಂತರ ಪಾತಾಳಕ್ಕೆ ಬರುತ್ತಾನೆ. ಅಹಿರಾವಣನನ್ನು  ಸಂಹರಿ ಸಲು  ಪಾತಾಳಲೋಕದ  ಐದು  ದಿಕ್ಕಿನಲ್ಲಿ ಇಟ್ಟಿರುವ  ಐದು ದೀಪಗಳನ್ನು ಒಂದೇ ಬಾರಿಗೆ ಆರಿಸಬೇಕು. ಆಗ ಮಾತ್ರ ಅಹಿರಾವಣನನ್ನು ಸಂಹರಿಸಲು ಸಾಧ್ಯ ಎಂಬುದನ್ನು 
ಮೊದಲೇ ತಿಳಿದಿದ್ದ  ಹನುಮಂತನು, ಶ್ರೀರಾಮನನ್ನು ಮನಸ್ಸಿನಲ್ಲಿ ಸ್ಮರಿಸಿ ಪಂಚಮುಖಿ ಅವತಾರವನ್ನು ತಾಳುತ್ತಾ ನೆ.  

ತನ್ನ ಐದು ಮುಖಗಳಿಂದ ಪಾತಾಳದ 5 ದಿಕ್ಕಿನಲ್ಲಿದ್ದ ಐದು ದೀಪಗಳನ್ನು ಒಂದೇ ಸಲಕ್ಕೆ ಆರಿಸಿ ಅಹಿರಾವಣನ ನ್ನು ಸಂಹಾರ ಮಾಡಿ ಬಂಧಿಸಿಟ್ಟಿದ್ದ ರಾಮಲಕ್ಷ್ಮಣರನ್ನು ತನ್ನ ಭುಜದ ಮೇಲೆ  ಕೂರಿಸಿಕೊಂಡು ಸ್ವಸ್ಥಾನಕ್ಕೆ ಬರುತ್ತಾನೆ. 

ಆಂಜನೇಯನ  ಪಂಚಮುಖಗಳ ಹೆಸರು :- ಹನುಮಂತ,  ಗರುಡ,  ವರಹಾ, ನರಸಿಂಹ,  ಮತ್ತು ಹಯಗ್ರೀವ.
ವಾನರ ರೂಪದ, ಹನುಮಂತನ ಮುಖ:-  ಪೂರ್ವದ ಕಡೆ ಇದ್ದು, ಸಾತ್ವಿಕತೆ,  ಪವಿತ್ರತೆ  ಹಾಗೂ ಸಂತೋಷವನ್ನು  ಕೊಡುವುದು. 
ಎರಡನೇ ರೂಪ:-  ನರಸಿಂಹನ ರೂಪ, ದಕ್ಷಿಣದ ಕಡೆ ಮುಖ ಮಾಡಿರುವ ನರಸಿಂಹನು,  ಭಕ್ತರ  ಎಲ್ಲಾ ವಿಧದ ಭಯ, ಪಾಪಗಳು, ಆತ್ಮ ಮತ್ತು ದೆವ್ವಗಳ ಪ್ರಭಾವವನ್ನು  
ಅಳಿಸಿ ಹಾಕುತ್ತಾನೆ ಮತ್ತು ಅನುಗ್ರಹಿಸುತ್ತಾನೆ.

ಮೂರನೆ ಮುಖ:- ಗರುಡನ ಮುಖ, ಇದು ಪಶ್ಚಿಮ ದಿಕ್ಕಿಗೆ ಇದ್ದು, ಭಕ್ತರ ಎಲ್ಲಾ ವಿಧದ ಕಾಯಿಲೆಗಳು, ನಕಾರಾತ್ಮಕ 
ದುಷ್ಟ ಶಕ್ತಿಗಳಾದತೆ ಮಾಟ- ಮಂತ್ರ ,ವಿಷ  ಮತ್ತು ಭಯವನ್ನು ನಿಗ್ರಹಿಸುತ್ತಾನೆ..

ನಾಲ್ಕನೆ ಮುಖ:- ವರಹಾ ರೂಪ. ಇದು ಉತ್ತರ ದಿಕ್ಕಿಗಿದೆ.  ಧನ ಸಂಪತ್ತು, ಸುಖ- ಸಮೃದ್ಧಿ ಥ್ಯಾಂಕ್ಯು  ಸಂತೋಷ, ನೆಮ್ಮದಿ ಕೊಡುವುದರ ಜೊತೆಗೆ ಗ್ರಹಗಳ ಭಾದೆ ನಿವಾರಣೆ ಮಾಡು ತ್ತಾನೆ.

ಐದನೆ ಮುಖ:- ಹಯಗ್ರೀವ- ಇದು ಊರ್ದ್ವ ಮುಖವಾಗಿದೆ ಅಂದರೆ  ಮೇಲ್ಮುಖವಾಗಿದ್ದು, ಭಕ್ತ ಜನಗಳ  ಅಭಿಮಾನವ ನ್ನು ಗಳಿಸುವಲ್ಲಿ, ಆ ಸಮಯಕ್ಕೆ ತಕ್ಕಂತೆ  ಭಕ್ತರ ಮಾತು ಮಾರ್ಪಾಡಾಗುತ್ತದೆ. 

ಜ್ಞಾನ, ಭಕ್ತಿ ಶಕ್ತಿ ಜೊತೆಗೆ ಆತ್ಮೀಯ ಸ್ನೇಹಿತರು, ಬುದ್ಧಿವಂತಿಕೆ, ಒಳ್ಳೆಯ ಮಕ್ಕಳು  ಹಾಗೂ ಸದ್ಗತಿಯನ್ನು ಕೊಡುತ್ತದೆ.  ಅಲ್ಲದೆ ಈ ರೂಪವು ಅವರ  ಎಲ್ಲಾ  ಆಸೆಗಳನ್ನು  ಬಹುಬೇಗ ಈಡೇರಿಸುತ್ತದೆ. ಪಂಚ 
ಮುಖಿ ಆಂಜನೇಯ  ವಿಗ್ರಹಗಳು  ತುಂಬಾ ಅಪರೂಪ.

 ಪಂಚಮುಖಿ ಆಂಜನೇಯನನ್ನು ಪೂಜಿಸುವುದರಿಂದ ಅನೇಕ ತೊಂದರೆಗಳು ನಿವಾರಣೆಯಾಗಿ, ದುಷ್ಟಶಕ್ತಿಗಳು ಹತ್ತಿರವೂ ಸುಳಿಯುವುದಿಲ್ಲ.
ಓಂ ನಮೋ ಭಗವತೇ ಪಂಚವದನಾಯ ಮಹಾಬಲ 
ಪ್ರಚಂಡ ಸಕಲ ಬ್ರಹ್ಮಾಂಡ ನಾಶಕಾಯ ಸಕಲ 
ಭೂತ ಪ್ರೇತ ಪಿಶಾಚ ಶಾಕಿನಿ ಡಾಕಿನಿ ಯಕ್ಷಿಣಿ 
ಪೂತನಾ ಮಹಾಮಾರಿ ಸಕಲ ವಿಘ್ನ ನಿವಾರಣಾಯ ಸ್ವಾಹ

ಓಂ ಆಂಜನೇಯಾಯ ವಿದ್ಮಹೇ!
ಮಹಾಬಲಾಯ ಧೀಮಹೀ!
ತನ್ನೋ ಹನುಮಾನ್ ಪ್ರಚೋದಯಾತ್ !!

🌹🙏🏻🌹ಓಂ ನಮೋ ಭಗವಾನ್ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯೇ ನಮಃ.🌹🙏🏻🌹

🌹🙏🏻🌹 ಸರ್ವೆ ಜನೋ ಸುಖಿನೋ ಭವಂತು.🌹🙏🏻🌹
🌹🙏🏻🌹 ಕೃಷ್ಣಂ ವಂದೇ ಜಗದ್ಗುರುಂ.🌹🙏🏻🌹
🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️