Sunday, 26 April 2020

ಪಂಡರಾಪುರ

ಪಂಡರಾಪುರದ ಹಲವು ರೋಚಕ ವಿಷಯಗಳು. ಭೀಮ ನದಿಯ ತಟದಲ್ಲಿ ಸ್ಥಿತವಾಗಿರುವ ದೇವಾಲಯವೇ ಪಂಡರಾಪುರ. ಈ ದೇವರು ವಿಷ್ಣು ಅಥವಾ ಕೃಷ್ಣನ ಅವತಾರ ಎನ್ನಲಾಗುತ್ತದೆ ಪ್ರತಿ ವರ್ಷ ಇಲ್ಲಿ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ಭೇಟಿ ಕೊಡುತ್ತಾರೆ ಹೌದು ಸ್ನೇಹಿತರೆ ಪಾಂಡುರಂಗ ವಿಠಲ ಸ್ಥಿತವಾದ ಈ ಮಹಾನ್ ಧಾರ್ಮಿಕ ನಗರವೇ ಪಂಡರಾಪುರ. ತಿರುಪತಿ ತಿಮ್ಮಪ್ಪ ಸಿರಿವಂತರ ದೇವತೆ ಎನಿಸಿದರೆ ಪಂಡರಾಪುರದ ವಿಠಲ ದೀನರ ದೇವತೆ ಎನಿಸಿದ್ದಾರೆ ಈ ಕಾರಣಕ್ಕೆ ದಕ್ಷಿಣ ಭಾರತದ ಬಡ ಮಧ್ಯಮ ವರ್ಗದ ಎಲ್ಲಾ ಜಾತಿಯ ಸಮುದಾಯಗಳ ಭಕ್ತರೇ ಹೆಚ್ಚು ಸಂಖ್ಯೆಯಲ್ಲಿ ಇವನ ದರ್ಶನ ಪಡೆಯುತ್ತಾರೆ. ಇಲ್ಲಿನ ಹಲವು ರೋಚಕ ವಿಷಯಗಳನ್ನು ತಿಳಿಸುತ್ತೇವೆ. ಪಂಡರಾಪುರ ಮುಖ್ಯವಾಗಿ ವಿಠಲನ ದೇವಾಲಯದಿಂದ ಹೆಸರುವಾಸಿ ಆಗಿದೆ ವಿಷ್ಣು ಅಥವಾ ಕೃಷ್ಣನ ಅವತಾರ ಎನ್ನಲಾಗುವ ವಿಠಲ ಇಲ್ಲಿ ತನ್ನ ಪತ್ನಿ ರುಕ್ಮಿಣಿ ಜೊತೆ ನೆಲಸಿದ್ದು ಭಕ್ತರನ್ನು ಯಾವಾಗಲೂ ಹರಸುತ್ತಾರೆ ಈ ದೇವಾಲಯ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಭೇಟಿ ನೀಡಲ್ಪಡುವ ದೇವಾಲಯ ಪೈಕಿ ಒಂದಾಗಿದೆ. ಪಂಡರಾಪುರದಲ್ಲಿ ಹರಿಯುವ ಪಾವನ ನದಿ ಚಂದ್ರ ಭಾಗದಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪಗಳು ನಾಶ ಆಗುತ್ತದೆ ಎಂದು ಜನರು ಭಾವಿಸುತ್ತಾರೆ. ಪಂಡರಾಪುರ ವಿಠಲನಿಗೆ ನಡೆದುಕೊಳ್ಳುವ ಸಹಸ್ರಾರು ಭಕ್ತರು ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಇದ್ದಾರೆ. ವಾರ್ಕರಿ ಪಂಥದವರು ವಿಠಲನ ಅಪ್ರತಿಮ ಜನಾಂಗ ಆಗಿದೆ ಪ್ರತಿ ವರ್ಷ ಆಷಾಢ ಏಕಾದಶಿ ಅಂದರೆ ಜೂನ್ ಅಥವಾ ಜುಲೈ ಅಲ್ಲಿ ಕಾರ್ತಿಕ ಏಕಾದಶಿ ಅಂದರೆ ನವೆಂಬರ್ ಅಲ್ಲಿ ವಾರ್ಕರಿ ಜನಾಂಗದವರು ವಿಠಲನ ಸನ್ನಿಧಿಗೆ ಪಾದ ಯಾತ್ರೆ ಕೈ ಗೊಳ್ಳುತ್ತಾರೆ ಇವರು ಗುಂಪು ಗುಂಪು ಆಗಿ ಪಾಲ್ಕೆ ಸಮೇತವಾಗಿ ವಿಠಲನ ದರ್ಶನಕ್ಕೆ ಪಂಡರಾಪುರ ತಲುಪುತ್ತಾರೆ ಈ ಗುಂಪುಗಳನ್ನು ದಿಂಡಿ ಎಂದೇ ಕರೆಯುತ್ತಾರೆ ಈ ಯಾತ್ರೆಯನ್ನು ಪಂಡರಾಪುರ ವರಿ ಎಂದು ಕರೆಯುತ್ತಾರೆ. ಈ ಯಾತ್ರೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಒಂದು ಅದ್ಬುತ ಸಂಪ್ರದಾಯ ಆಗಿದ್ದು ಲಕ್ಷ ಲಕ್ಷ ಜನ ಸಂಖ್ಯೆ ಬಂದು ಇಲ್ಲಿ ಸೇರುತ್ತಾರೆ. ಪಂಡರಾಪುರ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಭೀಮ ನದಿಯ ದಡದಲ್ಲಿ ಇದೆ.

ಪಂಡರಾಪುರ ಸೊಲ್ಲಾಪುರ ದಿಂದ ಸುಮಾರು 64 ಕಿಮೀ ದೂರದಲ್ಲಿ ಇದ್ದರೆ ಹುಬ್ಬಳ್ಳಿ ಧಾರವಾಡ ಇಂದ ಸುಮಾರು 316 ಕಿಮೀ ದೂರದಲ್ಲಿ ಇದೆ. ಹಾಗೆಯೇ ವಿಜಯಪುರ ದಿಂದ 111 ಕಿಮೀ ದೂರದಲ್ಲಿ ಇದ್ದರೆ ಕಲಬುರ್ಗಿ ಯಿಂದ ಸುಮಾರು 198 ಕಿಮೀ ದೂರದಲ್ಲಿ ಇದೆ. ಹಲವಾರು ಪ್ರವಾಸಿಗರು ಹಾಗೂ ಭಕ್ತಾದಿಗಳು ಹೆಚ್ಚಾಗಿ ಸೊಲ್ಲಾಪುರ ದಲ್ಲಿ ಇಳಿದು ಅಲ್ಲಿಂದ ಬಸ್ ಗಳ ಮೂಲಕ ಅಥವಾ ಟ್ಯಾಕ್ಸಿ ಮೂಲಕ ಪಂಡರಾಪುರ ತಲುಪುತ್ತಾರೆ. ಇಲ್ಲಿ ಉಳಿದುಕೊಳ್ಳಲು ಹಲವಾರು ಹೋಟೆಲ್ ಗಳು ಯಾತ್ರಿ ಪ್ರವಾಸಿಗಳು ಸಹಾಯಕ್ಕೆ ಸಿಗುತ್ತದೆ. 












Thursday, 23 April 2020

ಪರಮಾತ್ಮನ ಆಶ್ರಯ ದಲ್ಲಿ ಇದ್ದವರು ಖಂಡಿತವಾಗಿ ಸುಖವಾಗಿರುತ್ತಾರೆ

🙏ಶುಭ ಸುಪ್ರಭಾತ 🙏

 **ಪರಮಾತ್ಮನ ಆಶ್ರಯ ದಲ್ಲಿ ಇದ್ದವರು ಖಂಡಿತವಾಗಿ ಸುಖವಾಗಿರುತ್ತಾರೆ**

ಒಂದು ಗುಬ್ಬಚ್ಚಿಯ ನಂಬಿಕೆಯ ಕತೆ  - ಮಹಾಭಾರತದ  ಕತೆಯಿಂದ .

🕊🕊🕊🕊🕊🕊🕊🕊🕊🕊🕊🕊🕊🕊
ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ಸೈನ್ಯದ ಮತ್ತು ಆನೆಗಳ ಕುದುರೆಗಳ ರಥದ ಚಲನೆಗೆ  ರಣರಂಗದ ಸಿದ್ಧತೆಯು ನಡೆಯುತ್ತಿತ್ತು ,ಅದಕ್ಕಾಗಿ ಆನೆಗಳನ್ನು ದೊಡ್ಡ ದೊಡ್ಡ ಮರಗಳನ್ನು ಉರುಳಿಸಿ ನೆಲವನ್ನು ಸಮತಟ್ಟು ಮಾಡಲು   ಉಪಯೋಗಿಸುತ್ತಿದ್ದರು , 

ಅಲ್ಲಿಯ ಒಂದು ಮರದಮೇಲೆ ಒಂದು ಸಣ್ಣ ಗುಬ್ಬಚ್ಚಿಯು ತನ್ನ ನಾಲ್ಕು ಮರಿಗಳೊಂದಿಗೆ ವಾಸಿಸುತ್ತಿತ್ತು,  ಹಾಗಿರುವಾಗ ಅದು ವಾಸವಾಗಿದ್ದ ಮರವು ಉರುಳಿಸಾಲಾಗಿ  ಗುಬ್ಬಚ್ಚಿಯ ಗೂಡು ತನ್ನ ಮರಿಗಳೊಂದಿಗೆ ನೆಲಕ್ಕೆ ಬಿತ್ತು 

 ದೇವರ ದಯೆಯಿಂದ ಮರಿಗಳು ಬದುಕಿ ಉಳಿದವು..ಆದರೆ ಮರಿಗಳು ಇನ್ನು ಸಣ್ಣದಾದ ಕಾರಣ ಅವುಗಳಿಗೆ ಹಾರಾಡಲು ತಿಳಿದಿರಲಿಲ್ಲ ಬಿದ್ದ ಮರಿಗಳಿಗೆ  ತೊಂದರೆ ಆಗಲಿಲ್ಲ. 

ದುರ್ಬಲ ಮತ್ತು ಹೆದರಿದ ಗುಬ್ಬಚ್ಚಿಯು ಸಹಾಯಕ್ಕಾಗಿ ಸುತ್ತ ನೋಡಲು  ದೂರದಲ್ಲಿ ಶ್ರೀ ಕೃಷ್ಣ ಅರ್ಜುನನ ಜೊತೆಗೆ ಸಮರಾಂಗಣವನ್ನು ವೀಕ್ಷಿಸುವುದನ್ನು ಕಂಡಿತು. 

ಅದನ್ನು ನೋಡುತ್ತಲೇ ಗುಬ್ಬಚ್ಚಿಯು ತನ್ನ ಸಣ್ಣ ಸಣ್ಣ ರೆಕ್ಕೆಗಳನ್ನು ಬಡಿಯುತ್ತ ಶ್ರೀ ಕೃಷ್ಣನ ರಥದ ಬಳಿಗೆ ಹೋಗಿ , 
ಹೇ ಕೃಷ್ಣ ನನ್ನ ಕಂದಮ್ಮಗಳನ್ನು ಉಳಿಸು , ಇಲ್ಲದಿದ್ದರೆ ನಾಳೆ ಯುದ್ಧ ಆರಂಭವಾದಾಗ ನನ್ನ ಮರಿಗಳು ಕಾಲಿನಡಿಗೆ ಬಿದ್ದು ನಾಶವಾಗುತ್ತವೆ....!!

ಆಗ ಶ್ರೀಕೃಷ್ಣ  ನನಗೆ ನಿನ್ನ ಮಾತು ಕೇಳುತ್ತಿದೆ ...ಆದರೆ ನಾನು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಏನನ್ನು ಮಾಡಲಾರೆ.  ಮಾಡಲಾಗುವುದಿಲ್ಲ ...!!!

ಆಗ ಗುಬ್ಬಚ್ಚಿಯು ನನಗೆ ತಿಳಿದಿದೆ ನೀನು ಜಗದ ರಕ್ಷಕ , ನಾನು ನನ್ನ ಮಕ್ಕಳ ಕ್ಷೇಮವನ್ನು ನಿನ್ನ ಕೈಯಲ್ಲಿಡುತ್ತಿದ್ದೇನೆ ಅವುಗಳನ್ನು ನೀನು ನಾಶ ಪಡಿಸಬಹುದು ಇಲ್ಲ ಪೊರೆದು ಸಲಹ ಬಹುದು , ಅದು ನಿನಗೆ ಬಿಟ್ಟಿದ್ದು...!!

ಆಗ ಶ್ರೀ ಕೃಷ್ಣ ಜನ ಸಾಮಾನ್ಯರಂತೆ ...ಕಾಲಚಕ್ರವು ತನ್ನಷ್ಟಕ್ಕೆ ತಾನೇ ಸುತ್ತುತ್ತದೆ ಯಾವುದೇ ಅಡೆತಡೆಗಳಿಲ್ಲದೆ...
ಹಾಗಾಗಿ ನಾನು ಏನನ್ನು ಮಾಡಲಾರೆ..

ಈ ಎಲ್ಲ ತತ್ವಶಾಸ್ತ್ರ ನಾನರಿಯೆ, ನಾನರಿತಿರುವುದು ನೀನೇ ಕಾಲ ಕಾಲನಿಯಾಮಕ  ಜಗದ ರಕ್ಷಕ ಹಾಗಾಗಿ ನಾನು ನಿನಗೆ ಶರಾಣಾಗಿದ್ದೇನೆ ...!!

ಅದಕ್ಕೆ ಶ್ರೀಕೃಷ್ಣ  ಹಾಗಿದ್ದರೆ ಮೂರು ವಾರಕ್ಕೆ ಬೇಕಾಗುವಷ್ಟು ಆಹಾರವನ್ನು ನಿನ್ನ ಗೂಡಿನಲ್ಲಿ ಸಂಗ್ರಹಿಸಿಡು...!!

ಇದನ್ನು ಅರಿಯದ ಅರ್ಜುನ  ಗುಬ್ಬಚ್ಚಿಯನ್ನು ನೋಡಿ ಅದನ್ನು ರಥದ ಸನಿಹದಿಂದ ಓಡಿಸುವ ಪ್ರಯತ್ನದಲ್ಲಿರಲು .. ಕೃಷ್ಣ ಗುಬ್ಬಚ್ಚಿಯತ್ತ ಒಂದು ಮುಗುಳುನಗೆ ಬೀರಲು ಅದು ತಕ್ಕ ರೆಕ್ಕೆ ಬಡಿದು ಧನ್ಯವಾದಗಳನ್ನು ಹೇಳಿ ಸಂತೋಷದಿಂದ ಹಾರಿ ಹೋಯಿತು...!!

ಮತ್ತೆರಡು ದಿನಗಳ ಬಳಿಕ ಯಾವಾಗ ಯುದ್ಧಾರಂಭದ ಶಂಖನಾದ ಕೇಳಿಸಿತೋ ,, ಆಗ ಕೃಷ್ಣ ಅರ್ಜುನನಬಳಿ ಅವನ ಬಿಲ್ಲುಬಾಣವನ್ನು ಕೇಳಲು , ಆಶರ್ಯ ಚಕಿತನಾದ ಅರ್ಜುನ ..

 ಹೌದು ನೀನು ಯುದ್ಧರಂಗದಲ್ಲಿ ಅಸ್ತ್ರವನ್ನು  ಎತ್ತಲಾರೆ ಅಂದಿದ್ದೆ ಮತ್ತೇಕೆ? .... ಅಲ್ಲದೆ ತನ್ನಂತ ಮೇಧಾವಿ ಬಿಲ್ಲುಗಾರನಿರಲು    ಕೃಷ್ಣನೇಕೆ  ಅಸ್ತ್ರ ಹಿಡಿಯಬೇಕು?... ಎನ್ನುವ ಮನೋಭಾವದಿಂದ ...
ಹೇ ಕೃಷ್ಣ ಹೇಳು ಎಲ್ಲಿ ಯಾರನ್ನು ಹೊಡೆದುರುಳಿಸಬೇಕು...?

ಅರ್ಜುನನ ಕೈಯಿಂದ ಬಿಲ್ಲುಬಾಣ ತೆಗೆದುಕೊಂಡ ಕೃಷ್ಣ ದೂರದಲ್ಲಿದ್ದ ಆನೆಯತ್ತ ಗುರಿಹಿಡಿದು ಅದನ್ನು ಹೊಡೆದುರುಳಿಸದೆ ಅದರ ಕುತ್ತಿಗೆಯ ಗಂಟೆ ಗೆ ಗುರಿಯಿಟ್ಟು ಅಲ್ಲಿ ಕಿಡಿಗಳು ಹಾರುವಂತೆ ಮಾಡಿದ .ಘಂಟೆ ಕೆಳಗೆ ಬೀಳುವಂತೆ ಮಾಡಿದ ..

ಸುಲಭವಾಗಿ ಹೊಡೆಯಬೇಕಾದುದನ್ನು ಹೊಡೆಯದೆ  ತಪ್ಪುಗುರಿಯಿಟ್ಟದ್ದನ್ನು  ಕಂಡ ಅರ್ಜುನ ...
ನಾನು ಹೊಡೆಯಲೇ....
ಅದಕ್ಕುತ್ತರಿಸದೆ ಕೃಷ್ಣ ಆತನ ಬಿಲ್ಲುಬಾಣವನ್ನು  ಆತನಿಗೆ ಹಿಂದಕ್ಕೆ ಕೊಟ್ಟು  ಅದರ ಅಗತ್ಯವಿಲ್ಲ ನನ್ನ ಕೆಲಸವಾಯಿತು..ಅನ್ನುತ್ತಲೇ..

ಹೌದು ಯಾತಕ್ಕಾಗಿ ಆನೆಗೆ ಗುರಿಯಿಟ್ಟೆ ಕೇಶವ....?

ಈ ಆನೆಯು ಆ ಗುಬ್ಬಚ್ಚಿ ವಾಸವಾಗಿದ್ದ ಮರವನ್ನು ಉರುಳಿಸಿತ್ತು.

 ಹೌದಾ ಯಾವ ಗುಬ್ಬಚ್ಚಿ ... ಮತ್ತೆ ಆನೆಗೆ ಯಾವುದೇ ಹಾನಿಯಾಗಲಿಲ್ಲ  ಆದರೆ ಅದರ  ಕುತ್ತಿಗೆಯ ಘಂಟೆ ಹೋಯಿತು.?..ಎಂದು ಕೇಳಲು...

 ಕೃಷ್ಣ ಮಾತನ್ನು ತಳ್ಳಿಹಾಕುತ್ತ  ಶಂಖವನ್ನು ಊದುವಂತೆ ಹೇಳಲು... ಶಂಖನಾದದೊಂದಿಗೆ ..
ಯುದ್ಧ ಆರಂಭವಾಯಿತು...

ಸಹಸ್ರಾರು ಜೀವಹಾನಿಯಾಯಿತು ಆ ಕುರುಕ್ಷೇತ್ರದ 18  ದಿನದ ಯುದ್ಧದಲ್ಲಿ ...
ಪಾಂಡವರು ವಿಜಯಶಾಲಿಗಳಾದರು... 

ಮತ್ತೆ ಶ್ರೀಕೃಷ್ಣ ಅರ್ಜುನನ ಜೊತೆಗೆ ಯುದ್ಧ ಭೂಮಿಯ ವೀಕ್ಷಣೆಗೆ ಹೊರಟ..

ಹಲವು ಹೆಣಗಳು ಅವುಗಳ ಅಂತ್ಯಕ್ರಿಯೆಗೆ ಕಾಯುವಂತಿತ್ತು... 

ರಣರಂಗದಲ್ಲಿ ತುಂಡಾದ ಕೈಗಳು ಜರ್ಜರಿತವಾದ ದೇಹಗಳು. ಅರೆಬರೆ ಸತ್ತ ಆನೆಗಳು...
ಒಮ್ಮೆಲೇ ಕೃಷ್ಣ ಅಲ್ಲೇ ನಿಂತು  ಅಲ್ಲಿ ಬಿದ್ದಿರುವ ಆನೆಯ ಘಂಟೆಯತ್ತ ನೋಡಿದ ...
ಹೇ ಅರ್ಜುನ ನನಗಾಗಿ ಆ ಆನೆಯ ಘಂಟೆಯನ್ನು ಎತ್ತು..

ಶ್ರೀಕೃಷ್ಣನ ಆದೇಶ ವಿಶೇಷವಲ್ಲದಿದ್ದರೂ ಏನೋ ಅರ್ಥವಾದವನಂತೆ .. ಈ ಯುದ್ಧಭೂಮಿ...ವಿಶಾಲವಾದ ಕ್ಷೇತ್ರದಲ್ಲಿ ಸಾಕಷ್ಟು ಇತರ ವಿಷಯಗಳನ್ನು ತೆರವುಗೊಳಿಸುವ ಅಗತ್ಯವಿದೆ.. ಹಾಗಿರುವಾಗ ಈ ಒಂದು ಸಣ್ಣ ಘಂಟೆಯನ್ನು ಯಾಕೆ ಎತ್ತಲು ಹೇಳಿದ  ಎನ್ನುವಂತೆ ಕೃಷ್ಣನತ್ತ ಪ್ರಶ್ನಿಸುವಂತೆ  ನೋಡಲು...!¡

 ಹೌದು ಇದು   ಅದೇ ಘಂಟೆ... ನಾನು ಆನೆಗೆ ಹೊಡೆದು ಉರುಳಿಸಿದ ಘಂಟೆ   ..
ಅರ್ಜುನನು ಮರುಮಾತಿಲ್ಲದೆ ಘಂಟೆಯನ್ನು ಎತ್ತಲು ಬಾಗಿ ಅದನ್ನು ಎತ್ತಿದಾಗ .. ಅರ್ಜುನನ ಪ್ರಪಂಚವೇ ಬದಲಾಯಿತು....ನೋಡುತ್ತಿದ್ದಂತೆ...
ಒಂದು. ಎರಡು ಮೂರು ನಾಲ್ಕು ... ನಾಲ್ಕು ಮರಿಗಳು ಹಾರುತ್ತಲೇ  ತಾಯಿ ಗುಬ್ಬಚ್ಚಿಯು ಹಾರಿಯೂ ಹಾರಿತು. .
ಸಂತಸದಲ್ಲಿ ಹಾರುತ್ತಲೇ ಶ್ರೀಕೃಷ್ಣನಿಗೆ ಸುತ್ತು ಬಂದು  ತನ್ನ ಕೃತಜ್ಞತೆಯನ್ನು ತೋರಿಸಿತು.. 

ಆ ಒಂದು ಘಂಟೆ 18  ದಿನ.....
ಗುಬ್ಬಚ್ಚಿಮತ್ತು ಸಂಸಾರಕ್ಕೆ ರಕ್ಷಣೆ ಕೊಟ್ಟಿತು . 

ಕ್ಷಮಿಸು ಕೃಷ್ಣ .. ನಿನ್ನನ್ನು ನರರೂಪದಲ್ಲಿ ಕಂಡು ಸಾಮಾನ್ಯ ಮನುಜರಂತೆ ನಾನು ನೀನಾರೆಂಬುದನು ಮರೆತೆ...

ಮಹಾಭಾರತದಲ್ಲಿ ಕೇಳಿದ ವಿಷಯ ...
ಲಾಕ್ ಡೌನ್  ಸಮಯದಲ್ಲಿ ಉಚಿತವೆನಿಸಿತು. ಘಂಟೆಯೊಳಗೆ ಕುಳಿತು ಜೀವ ಬದುಕಿಸಿಕೊಂಡಂತೆ... ಮನೆಯೊಳಗಿದ್ದು ಅಮೂಲ್ಯ ಜೀವವನ್ನು ಉಳಿಸಿಕೊಳ್ಳೋಣ ... 

   🙏  ಶ್ರೀ ಕೃಷ್ಣಾರ್ಪಣಮಸ್ತು  🙏

ಯಜ್ಞೋಪವೀತ(ಜನಿವಾರ

""""""""" ಯಜ್ಞೋಪವೀತ(ಜನಿವಾರ)"""''""
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ:

ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.

"ಉಪನಯನ" ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ.

ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.

ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ.

 ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸ ಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.

ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ. ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು.  ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸ ಬೇಕು, ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡ ಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳ ಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.

ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.

ಯಜ್ಞೋಪವೀತದ ಉದ್ದ ತೊಂಬತ್ತಾರು ಇಂಚುಗಳಷ್ಟಿರ ಬೇಕು. ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಅರವತ್ತ ನಾಲ್ಕು  ಕಲೆಗಳನ್ನು ಹಾಗೂ ಮೂವತ್ತೆರಡು ವಿದ್ಯೆಗಳನ್ನು ಕಲಿಯುವ ಹಂಬಲವಿರ ಬೇಕು. ಆತ ಆ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು. ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ಅಂಗಗಳು,  ಆರು ದರ್ಶನಗಳು, ಮೂರು ಸೂತ್ರ ಗ್ರಂಥಗಳು, ಒಂಬತ್ತು ಅರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ. ವಾಸ್ತು ನಿರ್ಮಾಣ, ಚಿತ್ರಕಲೆ, ಸಾಹಿತ್ಯ, ಯಂತ್ರ ನಿರ್ಮಾಣ, ಆಭರಣ ತಯಾರಿಕೆ,  ಕೃಷಿ ಜ್ಞಾನ ಮುಂತಾದವು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸ ಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. "ತತ್ಸವಿತುರ್ವರೇಣ್ಯಮ್” ಮೊದಲ ಚರಣ. "ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ". "ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.

ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ:-

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||

ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ

 
ಯಜ್ಞೋಪವೀತದ ನಿಯಮಗಳು:-

* ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಎಡಗಿವಿಯ ಮೇಲೆ ಹಾಕಿ ಕೊಳ್ಳ ಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿ ಕೊಳ್ಳ ಬೇಕು.            ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ.
* ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸ ಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರ ಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸ ಬೇಕು.
* ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.

* ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯ ಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು.

  ಯಜ್ಞೋಪವೀತದ ವೈಜ್ಞಾನಿಕ ಮಹತ್ವ:-

* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು   ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ   ವಿಷಾಣುಗಳು ನಾಶಗೊಳ್ಳುತ್ತವೆ.

* ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನು
ಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು
ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.

* ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.

* ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.

* ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.

* ವ್ಯಕ್ತಿಯ ಎಡ ಬೆನ್ನಿನ ಭಾಗದಲ್ಲಿ ಹೊಟ್ಟೆಯ ಕಡೆ ಸಾಗುವ ಒಂದು ಪ್ರಾಕೃತಿಕ ರೇಖೆಯಿರುತ್ತದೆ. ಈ ರೇಖೆ ವಿದ್ಯುತ್ ಪ್ರವಾಹದಂತೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಯಜ್ಞೋಪವೀತವನ್ನು ಧರಿಸುವುದರಿಂದ ಈ ರೇಖೆಯ ಶಕ್ತಿ ಕಡಿಮೆಯಾಗುತ್ತದೆ. ಆಗ ವ್ಯಕ್ತಿಯ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ.

* ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.

* ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವಾಗ ಕಿವಿಯನ್ನು
ಹಿಂಡಲಾಗುತ್ತಿತ್ತು. ಇದಕ್ಕೆ ಕಾರಣ ಕಿವಿಗೂ ಹಾಗೂ ಮೆದುಳಿಗೂ ಇರುವ
ಸಂಪರ್ಕ. ಕಿವಿಯನ್ನು ಎಳೆದಾಗ ವಿದ್ಯಾರ್ಥಿಯ ಮೆದುಳು ಜಾಗೃತವಾಗುತ್ತಿತ್ತು. ವಿದ್ಯಾರ್ಥಿಯ ಆಲಸ್ಯತನ ದೂರವಾಗುತ್ತಿತ್ತು. ಹಾಗೇ
ಯಜ್ಞೋಪವೀತವನ್ನೂ ಕಿವಿಯ ಮೇಲೆ ಹಾಕಿ ಕೊಂಡಾಗ ನಮ್ಮಲ್ಲಿರುವ ಆಲಸ್ಯತನ ದೂರಾಗಿ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ.

ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ.

ಶಂಖದ_ಬಗ್ಗೆ_ಸ್ವಲ್ಪ_ಮಾಹಿತಿ

#ಶಂಖದ_ಬಗ್ಗೆ_ಸ್ವಲ್ಪ_ಮಾಹಿತಿ 

ಶಂಖನಾದದಿಂದ ಬರುವ ಕಂಪನ ಭೂಮಿಯಲ್ಲಿರುವ ಅನೇಕ ಕೆಟ್ಟ ಶಕ್ತಿಗಳನ್ನು ನಾಶಪಡಿಸುತ್ತದೆ.. ಪರಿಸರ ಮಾಲಿನ್ಯದಿಂದ ಒಜೋನ್ ಪದರಗಳಲ್ಲಿ ರಂದ್ರಗಳುಂಟಾಗುವುದು ಸಹಜ... ಶಂಖನಾದದಿಂದ ತಕ್ಕಮಟ್ಟಿಗೆ ಒಜೋನ್ ಪದರಗಳಲ್ಲಿ ರಂಧ್ರಗಳುಂಟಾಗದಂತೇ ತಡೆಯಬಹುದೆಂದು ವಿಜ್ಞಾನಿಗಳು ತಿಳಿಸಿದ್ದಾರೆ.. ಹಾಗೇ ಶಂಖನಾದವನ್ನು ಕೇಳಿದಾಗ ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿಗಳ (Positive Psychological Vibrations ) ಸಂಚಾರವಾಗುತ್ತದೆ.. ಇದರಿಂದ ಧೈರ್ಯ, ನಿರ್ಣಯ, ನಂಬಿಕೆ, ಆತ್ಮವಿಶ್ವಾಸ, ಮುಂತಾದ ಗುಣಗಳು ಜಾಗೃತವಾಗುತ್ತವೆ.. ಶಂಖವನ್ನು ನಿಯಮಿತವಾಗಿ ಊದುವುದರಿಂದ ಶ್ವಾಸಕೋಶಗಳು ಬಲಿಷ್ಟಗೊಳ್ಳುತ್ತವೆ.. ಶ್ವಾಸಸಂಬಂಧಿ ಖಾಯಿಲೆಗಳು ಕಡಿಮೆಯಾಗುತ್ತವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ.. ನಮ್ಮ ಸನಾತನ ಸಂಸ್ಕೃತಿಯಲ್ಲಿ ಶಂಖಕ್ಕೆ ಪೂಜ್ಯಸ್ಥಾನವನ್ನು ನೀಡಲಾಗಿದೆ.. ಧಾರ್ಮಿಕಕಾರ್ಯಕ್ರಮಗಳನ್ನು ಶಂಖನಾದದ ಮೂಲಕವೇ ಪ್ರಾರಂಭಿಸಲಾಗುತ್ತದೆ.. ಜಗತ್ತಿನ ಪರಿಪಾಲಕನಾದ ಮಹಾವಿಷ್ಣುವಿನ ಕೈಯ್ಯಲ್ಲೂ ಶಂಖವನ್ನು ಕಾಣಬಹುದು. ಮಹಾಭಾರತ ಯುದ್ಧದಲ್ಲೂ ಯುದ್ಧ ಪ್ರಾರಂಭವಾಗುವಾಗ ಶಂಖನಾದ ಮೊಳಗುತ್ತಿತ್ತು.. ಶಂಖದ ಹೆಸರುಗಳು :- ವಿಷ್ಣುವಿನ ಶಂಖದ ಹೆಸರು ಪಾಂಚಜನ್ಯ, ಅರ್ಜುನನ ಶಂಖದ ಹೆಸರು ದೇವದತ್ತ, ಯುಧಿಷ್ಠಿರನ ಶಂಖದ ಹೆಸರು ಅನಂತವಿಜಯ, ನಕುಲನ ಸುಘೋಷ , ಸಹದೇವನ ಮಣಿಪುಷ್ಫಕ ಶಂಖಗಳನ್ನು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.. ಶಂಖಗಳಲ್ಲೂ ಅನೇಕ ವಿಧಗಳಿವೆ.. ಶಂಖಗಳ ಆಕೃತಿಗೆ ಅನುಗುಣವಾಗಿ ಈ ರೀತಿ ವಿಂಗಡಿಸಲಾಗಿದೆ.. ದಕ್ಷಿಣಾವರ್ತಿ ಶಂಖ, ವಾಮವರ್ತಿ ಶಂಖ, ಗೌಮುಖಿ ಶಂಖ, ಗಣೇಶ ಶಂಖ, ಕಾವುರಿ ಶಂಖ , ಮೋತಿ ಶಂಖ , ಹೀರಾಶಂಖ ಮುಂತಾದವುಗಳಾಗಿವೆ.

#ಸರ್ವೆ_ಜನ_ಸುಖಿನೋಭವಂತು

ನಮ್ಮ ನಡುವೆಯೇ ಇರೋ ಈ ನಾಲ್ವರು ಅಂದು ಸೀತಾಮಾತೆ ನೀಡಿದ್ದ ಆ ಶಾಪವನ್ನ ಈಗಲೂ ಅನುಭವಿಸುತ್ತಿದ್ದಾರೆ

ಹಿಂದೂ ಧರ್ಮದಲ್ಲಿ ಅನೇಕ ಕಥೆಗಳು ಈಗಲೂ ಚಾಲ್ತಿಯಲ್ಲಿವೆ. ಈ ಕಥೆಗಳೆಲ್ಲಾ ಇಂದಿಗೂ ನಮ್ಮೆಲ್ಲರ ಜೀವನಕ್ಕೆ ನೇರವಾಗಿ ಸಂಬಂಧಿಸಿದೆ ಎಂದೇ ಹೇಳಬಹುದು, ಕೆಲವು ಕಥೆಗಳು ಸಹ ಸಾಕಷ್ಟು ಪುರಾತನವಾಗಿವೆ, ಅಷ್ಟೇ ಅಲ್ಲ ಅದು ರಾಮಾಯಣ ಕಾಲದಿಂದ ಈಗಲೂ ನಮ್ಮ ಜೀವನಕ್ಕೆ ಅನ್ವಯಿಸುತ್ತದೆ. ಈ ಕಥೆಯನ್ನು ಕೇಳಿದ ಬಳಿಕ ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ ಆದರೆ ಇವುಗಳೆಲ್ಲಾ ಸಾರ್ವಕಾಲಿಕ ಸತ್ಯವೇ ಆಗಿವೆ.

ರಾಮ, ಲಕ್ಷ್ಮಣ ಹಾಗು ಸೀತಾಮಾತೆ ವನವಾಸದ ಸಂದರ್ಭದಲ್ಲಿ ನಡೆದ ಹಲವಾರು ಘಟನೆಗಳು ಈಗಲೂ ಪ್ರಸ್ತುತವಾಗಿವೆ ಹಾಗು ಜನರ ಜೀವನದ ಮೇಲೆ ಪ್ರಭಾವ ಬೀರುತ್ತಲೇ ಇವೆ. ರಾಮ ವನವಾಸದಲ್ಲಿದ್ದ ಸಂದರ್ಭದಲ್ಲಿ ಅವರ ತಂದೆ ದಶರಥರ ದೇಹಾಂತ್ಯವಾಗಿರುವ ಸುದ್ದಿ ಬರುತ್ತದೆ. ಆ ಸುದ್ದಿ ಕೇಳಿದಾಕ್ಷಣ ಶ್ರೀರಾಮನಿಗೆ ಒಮ್ಮೆ ಸಿಡಿಲು ಬಡಿದ ಅನುಭವವಾಗುತ್ತದೆ‌. ಆದರೆ 14 ವರ್ಷ ವನವಾಸ ಮುಗಿಸಿತೇ ಆಯೋಧ್ಯೆಗೆ ಬರಬೇಕು ಎನ್ನುವ ಕೈಕೆಯಿ ಮಾತನ್ನ ಮೀರದ ರಾಮ ತಂದೆಯ ಅಂತ್ಯಕ್ರಿಯೆಗೆ ಹೋಗಲು ಸಾಧ್ಯವಾಗುವುದಿಲ್ಲ.

ಮಾವನವರ ದೇಹಾಂತ್ಯವಾಗಿದೆ ಎಂಬ ವಿಷಯ ತಿಳಿದ ಕೂಡಲೇ ತನ್ನ ಮೈದುನನಾದ ಲಕ್ಷ್ಮಣನಿಗೆ ಸುದ್ದಿ ತಿಳಿಸಿ ದಶರಥ ಮಹಾರಾಜರಿಗೆ ಪಿಂಡದಾನ ಮಾಡಲು ಬೇಕಾದ ಸಾಮಗ್ರಿಗಳನ್ನ ತರಲು ಸೀತಾಮಾತೆ ಲಕ್ಷ್ಮಣನಿಗೆ ತಿಳಿಸುತ್ತಾಳೆ. ಅತ್ತಿಗೆಯ ಆಜ್ಞೆಯನ್ನ ಪಾಲಿಸಲು ಲಕ್ಷ್ಮಣ ಪಿಂಡಪ್ರದಾನಕ್ಕೆ ಬೇಕಾದ ಸಾಮಗ್ರಿಗಳನ್ನ ತರಲು ಕಾಡಿನಲ್ಲಿ ಹೊರಟುಹೋದ‌. ಬಹಳ ಹೊತ್ತಾದರೂ ಲಕ್ಷ್ಮಣ ಬರಲೇ ಇಲ್ಲ. ಕಾಯುತ್ತ ಕೂತಿದ್ದ ಸೀತಾಮಾತೆ ಯಾಕೋ ಲಕ್ಷ್ಮಣ ಬರೋಕೆ ಇನ್ನೂ ತಡವಾಗಬಹುದು ಎಂದರಿತು ತಾವೇ ಸುತ್ತಮುತ್ತಲಿನ ಪ್ರದೇಶದಲ್ಲಿ ತಮಗೆ ಬೇಕಾದ ವಸ್ತುಗಳನ್ನ ಜೋಡಿಸಿಕೊಂಡು ದಶರಥ ಮಹಾರಾಜರ ಪಿಂಡದಾನವನ್ನ ಮಾಡುತ್ತಾಳೆ. ಇದಕ್ಕೆ ಸಾಕ್ಷಿಯಾಗಿ ಒಬ್ಬ ಪಂಡಿತ, ಹಸು, ಕಾಗೆ ಹಾಗು ಫಲ್ಗು ನದಿಯ ಸಮ್ಮುಖದಲ್ಲಿ ಪಿಂಡ ಪ್ರದಾನ ಮಾಡುತ್ತಾಳೆ.

ಆದರೆ ರಾಮ ಹಾಗು ಲಕ್ಷ್ಮಣ ವಾಪಸ್ಸಾದ ಬಳಿಕ ಸೀತಾಮಾತೆ ತಾನು ಪಿಂಡದಾನವನ್ನ ಮಾಡಿದ್ದಾಗಿ ಹಾಗು ಅದಕ್ಕೆ ಈ ನಾಲ್ವರು ಸಾಕ್ಷಿ, ಬೇಕಿದ್ದರೆ ನೀವು ಇವರನ್ನ ಕೇಳಬಹುದು ಎನ್ನುತ್ತಾಳೆ. ಯಾವಾಗ ರಾಮ ಎಂಬ ನಾಲ್ವರನ್ನ ಈ ಬಗ್ಗೆ ಪ್ರಶ್ನಿಸಿದಾಗ ಅವರ‌್ಯಾರೂ ಉತ್ತರಿಸದೆ ಮೌನವಾಗಿ ಬಿಡುತ್ತಾರೆ‌. ಆಗ ಶ್ರೀರಾಮ ಸೀತೆಯ ಮೇಲೆ ಕೋಪಗೊಳ್ಳುತ್ತಾನೆ‌. ಈ ವಿಷಯದಿಂದ ಸೀತಾಮಾತೆ ಬೇಸರಗೊಳ್ಳುತ್ತಾಳೆ, ಬಳಿಕ ಆಕೆ ತಕ್ಷಣವೇ ದಶರಥ ಮಹಾರಾಜರ ಆತ್ಮವನ್ನ ಕರೆದು ಈ ಬಗ್ಗೆ ತಿಳಿಸುತ್ತಾಳೆ. ದಶರಥ ಮಹಾರಾಜರ ಆತ್ಮವು ಸೀತೆ ನನ್ನ ಪಿಂಡದಾನ ಮಾಡಿದ್ದಾಳೆ, ಈ ನಾಲ್ವರೂ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುತ್ತದೆ.

ಮತ್ತೇನು, ತನ್ನ ಅಪಮಾನ ಮಾಡಿದ ಈ ನಾಲ್ವರ ಮೇಲೂ ಕ್ರೋಧಿತರಾಗಿ ಅವರೆಲ್ಲರಿಗೂ ಶಾಪ ನೀಡುತ್ತಾಳೆ. ಪಂಡಿತನಿಗೆ ಶಾಪ ನೀಡುತ್ತ ನಿನಗೆ ತಿನ್ನಲು ಅದೆಷ್ಟ ಆಹಾರ ಸಿಗಲಿ, ರಾಜ‌ಮಹಾರಾಜರ ಬಳಿ ಹಣ ಸಿಕ್ಕರೂ ಕೂಡ ನೀನು ಸದಾ ದರಿದ್ರನಾಗೆ ಇರು ಎನ್ನುತ್ತಾಳೆ, ಫಲ್ಗು ನದಿಗೆ ಶಾಪ ನೀಡುತ್ತ ಎಷ್ಟೇ ಮಳೆ ಬಂದರೂ ನೀನೂ ಒಣಗಿಹೋಗು ಎಂದು ಶಾಪ ನೀಡುತ್ತಾಳೆ. ನಿನ್ನನ್ನ ಜನ ಪೂಜಿಸಿದರೂ ನೀನು ಅಲ್ಲಿ ಇಲ್ಲಿ ಓಡಾಡುತ್ತ ಮೇವಿಗಾಗಿ ಪರದಾಡು ಎಂದು ಆಕಳಿಗೆ ಶಾಪ ನೀಡುತ್ತಾಳೆ. ಕೊನೆಯದಾಗಿ ನೀನು ಒಬ್ಬನೇ ತಿಂದರೂ ನಿನ್ನ ಹೊಟ್ಟೆ ತುಂಬದೆ ನೀನು ನಿನ್ನ ಕಾಗೆಗಳ ಗುಂಪಲ್ಲೇ ಕಚ್ಚಾಡಿ‌ ತಿಂದು ಹೊಟ್ಟೆ ತುಂಬಿಸಿಕೋ ಎಂದು ಕಾಗೆಗೆ ಶಾಪ ಕೊಡುತ್ತಾಳೆ.

ಸೀತಾಮಾತೆ ಅಂದು ನೀಡಿದ್ದ ಶಾಪದ ಪರಿಣಾಮಗಳನ್ನ ನಾವು ಇಂದಿಗೂ ಕಾಣಬಹುದಾಗಿದ್ದು ಅದನ್ನ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಇದೇ ಕಾರಣದಿಂದ ರಾಮಾಯಣ ಇಂದಿಗೂ ನಮ್ಮ ಜೀವನಕ್ಕೆ ಪ್ರಸ್ತುತವಾಗೇ ಕಾಣುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸಿ ಹಾಗು ಈ ಅಂಕಣವನ್ನ ನಿಮ್ಮ ಸ್ನೇಹಿತರ, ಕುಟುಂಬಸ್ಥರ ಜೊತೆ ಹಂಚಿಕೊಳ್ಳಿ.

Saturday, 11 April 2020

ಅಪಾರ ಸಂಪತ್ತು: ಪದ್ಮನಾಭಸ್ವಾಮಿ ದೇವಸ್ಥಾನದ ನಿಗೂಢ ಕೊಠಡಿ ತೆರೆಯಲು ನಿಮಗೆ ಧಮ್ ಇದ್ದೀಯ..?

ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ಈ ಪ್ರಪಂಚಕ್ಕೆ ಗೊತ್ತು ಏಕೆಂದರೆ ಅಲ್ಲಿ ಸಿಕ್ಕ ನಿಧಿಯಿಂದ ಈ ಲೇಖನದಲ್ಲಿ ನಾವು ಪದ್ಮನಾಭ ಸ್ವಾಮಿ ದೇವಾಲಯದ ಹಿಸ್ಟ್ರಿ ಬಗ್ಗೆ ಮತ್ತು ಅದರ ಮಿಸ್ಟ್ರಿ ಬಗ್ಗೆ ತಿಳಿದುಕೊಳ್ಳೋಣ.ಕೇರಳ ರಾಜ್ಯದ ತಿರುವನಂತಪುರಂನಲ್ಲಿರುವ ಈ ಪದ್ಮನಾಭಸ್ವಾಮಿ ದೇವಾಲಯ ದೇಶದ ಅತಿ ಪುರಾತನ ದೇವಾಲಯಗಳಲ್ಲಿ ಒಂದು, ಇದರಲ್ಲಿ ಆಶ್ಚರ್ಯ ಏನು ಅಂದ್ರೆ ದೇವಾಲಯವನ್ನು ನಿರ್ಮಾಣ ಮಾಡಿದ ಡೇಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಆದ್ರೆ 500 ಬಿಸಿಯಿಂದ 300 ಏಡಿ ಮಧ್ಯದಲ್ಲಿ ಬಂದ ಸಾಹಿತ್ಯಗಳಲ್ಲಿ ಈ ದೇವಾಲಯದ ಉಲ್ಲೇಖಗಳಿವೆ ಅಂತ ಹೇಳ್ತಾರೆ 9 ನೇ ಶತಮಾನದ ಕವಿ ನಮಾಲ್ವರ್ ತನ್ನ ಕವನಗಳಲ್ಲಿ ಈ ದೇವಾಲಯದ ಬಗ್ಗೆ ತುಂಬಾ ಅದ್ಭುತವಾಗಿ ಬರೆದಿದ್ದಾರಂತೆ, ಆಗಿನ ಕಾಲದಲ್ಲಿ ಈ ದೇವಾಲಯವನ್ನು ದೇವಾಲಯದ ಹತ್ತಿರ ಇರುವ ಕೆಲವು ಸ್ಥಳಗಳನ್ನು ಪ್ಯೂರ್ ಗೋಲ್ಡ್ ನಿಂದ ನಿರ್ಮಾಣ ಮಾಡಿರುವುದರಿಂದ ಈ ದೇವಾಲಯವನ್ನು ಬಂಗಾರದ ದೇವಾಲಯ ಅಂತ ಕೂಡ ಕರೀತಾರೆ.


ತಿರುವಂಕೋರ್ ರಾಜ ಕುಟುಂಬದ ಆಳ್ವಿಕೆಯಲ್ಲಿದ್ದ ಈ ದೇವಾಲಯ ಮಹಾ ವಿಷ್ಣುವನ್ನು ಪೂಜಿಸುವ ನೂರಾ ಎಂಟು ದಿವ್ಯ ಕ್ಷೇತ್ರಗಳಲ್ಲಿ ಒಂದು ಆದ್ರೆ ಈ ದೇವಾಲಯದಲ್ಲಿರುವ ಆರು ಗ್ರೌಂಡ್ ಪ್ಲೋರ್ ಕೊಠಡಿಗಳು ಪ್ರಪಂಚ ವನ್ನು ತನ್ನ ಕಡೆ ಸೆಳೆಯೊ ರೀತಿ ಮಾಡುತ್ತೆ.


2011ರಲ್ಲಿ ಸುಪ್ರೀಂ ಕೋರ್ಟ್ ಆದೇಶದಿಂದ ಆ ಆರು ಕೊಠಡಿಗಳನ್ನು ಓಪನ್ ಮಾಡ್ತಾರೆ ಈ ಆರು ಕೊಠಡಿಗಳಿಗೆ ಎ , ಬಿ , ಸಿ , ಡಿ , ಈ , ಎಫ್ ಎನ್ನುವ ಹೆಸರಿಡ್ತಾರೆ ಆದ್ರೆ ಈ ಆರು ಕೊಠಡಿಗಳಲ್ಲಿ ಬಿ ಕೊಠಡಿಯನ್ನು ಮಾತ್ರ ಓಪನ್ ಮಾಡಲಿಲ್ಲ ಉಳಿದ ಐದು ಕೊಠಡಿಗಳಲ್ಲಿ ಸಿಕ್ಕ ನಿಧಿ ಪ್ರಪಂಚವನ್ನೇ ಆಶ್ಚರ್ಯ ಪಡುವ ರೀತಿ ಮಾಡುತ್ತೆ ಸಾವಿರಾರು ವಜ್ರ ವೈಢೂರ್ಯಗಳು ಚಿನ್ನದ ನಾಣ್ಯಗಳು ವಜ್ರದ ಕಿರೀಟಗಳು ಮುತ್ತು ರತ್ನಗಳು ಮೂರೂವರೆ ಅಡಿ ಮಹಾವಿಷ್ಣುಮೂರ್ತಿ ವಿಗ್ರಹ ರೋಮ್ ನೆಪೋಲಿಯನ್ ಕಾಲದ ನಾಣ್ಯಗಳು ಸಿಕ್ಕಿವೆ.

ಒಂದು ನಾಣ್ಯ ಎರಡು ಕೋಟಿಗಿಂತ ಹೆಚ್ಚು ಬೆಲೆ ಬಾಲ್ಯೂತ್ತಂತೆ ಇನ್ನು ಎಷ್ಟೊ ಊಹಿಸಲಾರದ ಬಂಗಾರ ವಜ್ರಗಳು ಸಿಕ್ಕಿವೆ ಇವುಗಳ ಬೆಲೆ ಸುಮಾರು ಒಂದು ಟ್ರಿಲಿಯನ್ ಡಾಲರ್ ಇರಬಹುದು ಅಂತ ಅಂದಾಜು ಮಾಡಿದ್ದಾರೆ ನಂತರ ಇದು ನಮ್ಮ ದೇಶದಲ್ಲೇ ಅತಿ ಹೆಚ್ಚು ಸಂಪತ್ತು ಇರುವ ದೇವಾಲಯವಾಗಿ ಪ್ರಸಿದ್ಧಿಯಾಗುತ್ತದೆ, ಇನ್ನು ಮಿಸ್ಟ್ರೀಯಾಗಿ ಉಳಿದಿರುವ ಬಿ ಕೊಠಡಿ ಬಗ್ಗೆ ಹೇಳ್ಬೇಕು ಅಂದ್ರೆ ಈ ಕೊಠಡಿಗೆ ಉಳಿದ ಕೊಠಡಿಗಳ ರೀತಿ ಲಾಕ್ ಸಿಸ್ಟಮ್ ಇಲ್ಲ ಚರಿತ್ರೆ ಏನು ಹೇಳುತ್ತೆ ಅಂದರೆ ಬಿ ಕೊಠಡಿಯನ್ನು ನಾಗ ಬಂಧದಿಂದ ಮುಚ್ಚಿ ಹಾಕಿದ್ದಾರೆ ಅಂತ.

ನಾಗಬಂಧ ಅಂದ್ರೆ ಪುರಾತನ ಕಾಲದ ಪವರ್ ಫುಲ್ ಲಾಕಿಂಗ್ ಮ್ಯಾಕಾನಿಸಮ್ ಅಂದುಕೊಳ್ಳೋಣ ಆದರೆ ಇದು ಯಾವುದೇ ಯಂತ್ರೋಪಕರಣಗಳ ಸಹಾಯವಿಲ್ಲದೆ ಮಂತ್ರಗಳ ಸಹಾಯದಿಂದ ಮುಚ್ಚಿರುವ ವಿಧಾನ ಇದು ತುಂಬಾ ಅಪಾಯ ಕೂಡ ಈ ಬಿ ಕೊಠಡಿಯ ಬಾಗಿಲ ಮೇಲೆ ಕೆತ್ತಿರುವ ಎರಡು ನಾಗರಹಾವುಗಳು ಈ ನಾಗ ಬಂಧ ಶಕ್ತಿಯಿಂದ ಆ ಕೊಠಡಿಯನ್ನು ರಕ್ಷಿಸುತ್ತಿವೆ ಅಂತ ಹೇಳ್ತಾರೆ. ತುಂಬಾ ಶಕ್ತಿಯುತವಾದ ಗರುಡ ಮಂತ್ರವನ್ನು ಉಪಯೋಗಿಸಿದಾಗ ಮಾತ್ರ ಈ ನಾಗಬಂಧ ಬಿಡುಗಡೆಯಾಗುತ್ತಂತೆ ಆ ಗರುಡ ಮಂತ್ರ ಸರಿಯಾಗಿ ಗೊತ್ತಿರುವ ಮಹಾ ಸಾಧುಗಳಿಗೆ ಮಾತ್ರ ಈ ಕೊಠಡಿಯನ್ನು ತೆಗೆಯಲು ಸಾಧ್ಯವಾಗುತ್ತದೆ ಇದು ಸಾಮಾನ್ಯ ಜನರಿಂದ ಆಗುವ ಕೆಲಸವಲ್ಲ.


ಆ ಗರುಡ ಮಂತ್ರವನ್ನು ಬಿಟ್ಟು ಬೇರೆ ರೀತಿಯಲ್ಲಿ ಈ ಬಾಗಿಲನ್ನು ತೆರೆಯಲು ಸಾಧ್ಯವಿಲ್ಲ ಒಂದು ವೇಳೆ ಪ್ರಯತ್ನ ಮಾಡಿದರೆ ತೆರೆಯುವುದಕ್ಕೆ ಪ್ರಯತ್ನ ಮಾಡೋ ವ್ಯಕ್ತಿಗಳು ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಆಧುನಿಕ ಕಾಲದಲ್ಲಿ ನಾಗ ಬಂಧವನ್ನು ಹಾಕುವುದಾಗಲಿ ತೆಗೆಯುವರಾಗಲಿ ಯಾರೂ ಇಲ್ಲ ಎಲ್ಲಾ ಫೇಕ್ ಮಂತ್ರವಾದಿಗಳು ಬಾಬಾಗಳೆ ಇದ್ದಾರೆ, ಈ ಒಂದು ಬಿ ಕೊಠಡಿಯಲ್ಲಿ ಉಳಿದ ಐದು ಕೊಠಡಿಗಳಿಗಿಂತ ಬೆಲೆಬಾಳುವ ವಸ್ತುಗಳು ಇರೋದ್ರಿಂದ ಇದಕ್ಕೆ ನಾಗಬಂಧ ಇದೆ ಅಂತ ಕೆಲವರು ಏನು ಅಪಾಯ ಇರುವುದರಿಂದ ಮಂತ್ರಗಳನ್ನು ಬಳಸಿ ನಾಗ ಬಂಧ ಹಾಕಿದ್ದಾರೆ ಎಂದು ಕೆಲವರು ವಾದ ಮಾಡ್ತಾರೆ ಈ ಬಿ ಕೊಠಡಿಯನ್ನು ಬಲವಂತವಾಗಿ ಖಂಡಿತ ಯಾವುದೋ ಒಂದು ದುರಂತ ನಡೆಯುತ್ತದೆ ಅಂತ ನಂಬುವವರೇ ತುಂಬಾ ಜನ ಇದ್ದಾರೆ.


ಕೆಲವು ಜನರ ನಂಬಿಕೆ ಏನು ಅಂದ್ರೆ ಈ ಬಿ ಕೊಠಡಿಯ ಒಳಗೆ ಇನ್ನೊಂದು ಕೊಠಡಿ ಇದೆ ಅಂತ ಅದರ ಒಳಗೆ ಹೋದ್ರೆ ಪ್ಯೂರ್ ಗೋಲ್ಡ್ನಿಂದ ಮಾಡಿದ ಕೋಣೆ ಇರುತ್ತೆ ಅಂತ ಅಲ್ಲಿನ ನಿಜವಾದ ರಹಸ್ಯ ಅಡಗಿದೆ ಅಂತ ಹೇಳ್ತಿದ್ದಾರೆ, ಅಲ್ಲಿ ಮಾನವರ ಊಹೆಗೆ ಸಿಗದ ಅದ್ಭುತ ಅಡಗಿದೆ ಅಂತ ಹೇಳುವವರು ತುಂಬಾ ಜನ ಇದ್ದಾರೆ ಅದಕ್ಕೆ ಕೇರಳ ಗೌರ್ಮೆಂಟ್ ಪದ್ಮನಾಭ ಸ್ವಾಮಿ ದೇವಾಲಯವನ್ನು ಸ್ಪೆಷಲ್ ಸೆಕ್ಯುರಿಟಿ ಝೋನ್ ಅಂತ ಡಿಕ್ಲೇರ್ ಮಾಡುತ್ತೆ. ಮೆಟಲ್ ಡಿಟೆಕ್ಟರ್, ಎಕ್ಸ್ ರೇ ಬ್ಯಾಗೇಜ್ ಸ್ಕ್ಯಾನರ್, ಸೆಕ್ಯುರಿಟಿ ಕ್ಯಾಮರಾ ನಿಂದ ಸುಮಾರು 250 ಜನ ಪೊಲೀಸ್ ಫೋರ್ಸ್ ನಿಂದ ದೇವಾಲಯವನ್ನು ರಕ್ಷಣೆ ಮಾಡುತ್ತಿದ್ದಾರೆ ಈ ಆಧುನಿಕ ವಿಜ್ಞಾನ ಅರ್ಥ ಮಾಡಿಕೊಳ್ಳಲಿಕ್ಕೆ ಆಗದ ವಿಷಯಗಳು ಇನ್ನೂ ಇದೆ ಅಂತ ತಿಳಿದುಕೊಳ್ಳಲು ಈ ಮಿಸ್ಟ್ರಿ ಒಂದು ಉದಾಹರಣೆ ಇದೆಲ್ಲ ನಿಜನೋ ಸುಳ್ಳೋ ಅನ್ನೋದನ್ನು ಪಕ್ಕಕೆ ಇಟ್ರೆ ತಕ್ಷಣಕ್ಕೆ ಇದೊಂದು ದೊಡ್ಡ ಮಿಸ್ಟರಿನೆ, ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಸಂಬಂಧಪಟ್ಟ ಮಾಹಿತಿ.





ಅದೆಷ್ಟು ಕಾಡಿತ್ತು ಗೊತ್ತಾ ಆ ದರಿದ್ರ ವಜ್ರ..? ಕೃಷ್ಣದೇವರಾಯನ ಆಸ್ಥಾನವನ್ನೇ ಮುಳುಗಿಸಿತ್ತು,ಎಲ್ಲಿ ಇದೆ ಈಗ ಇದು.?

ನಮಸ್ಕಾರ ಸ್ನೇಹಿತರೇ ಎಂದು ನಾನು ನಿಮಗೆ ಒಂದು ಅಪರೂಪದ ವಜ್ರದ ಕಥೆಯನ್ನು ಹೇಳಲು ಬಂದಿದ್ದೇನೆ ಹಾಗೂ ಈ ವಜ್ರದಿಂದ ಎಷ್ಟೋ ರಾಜಮನೆತನಗಳು ನಾಶವಾದವು ಎಂಬ ಕಥೆಯನ್ನು ಸಹ ಕೇಳೋಣ ಬನ್ನಿ . ನೀವೆಲ್ಲರೂ ಕೇಳಿರುತ್ತೀರಿ ವಿಜಯನಗರ ಸಾಮ್ರಾಜ್ಯದಲ್ಲಿ ಒಡವೆಗಳು ಬಂಗಾರಗಳು ವಜ್ರಗಳನ್ನು ಮಾರುವುದು ನಮಗೆಲ್ಲರಿಗೂ ತಿಳಿದೇ ಇದೆ ಅಂತಹ ವಜ್ರಗಳಲ್ಲಿ ಒಂದು ವಜ್ರ ವಿಜಯನಗರವನ್ನು ನಾಶ ಮಾಡಿದ್ದು ವಜ್ರದ ಬಗ್ಗೆ ತಿಳಿಯೋಣ.

ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದ ಈ ವಜ್ರವೂ ಅವರ ಅಂತ್ಯಕಾಲಕ್ಕೆ ಪ್ರವೇಶಿಸಿತ್ತು ಇನ್ನು ಈ ಅಶುಭ ವಜ್ರವೂ ಗೋಲ್ಕೊಂಡಾ ದಲ್ಲಿ ಇತ್ತು ಎಂದು ಹೇಳಲಾಗಿದೆ ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದ ಈ ವಜ್ರವೂ ನಂತರ ಅವರ ಮಗನನ್ನು ಕಳೆದುಕೊಳ್ಳುವ ಹಾಗೆ ಮಾಡಿತ್ತು ಮತ್ತು ಅವರ ತಂದೆ ಯಂತಿದ್ದ ತಿಮ್ಮರಸರ ಜೊತೆ ವಿರಸ ಮಾಡಿಕೊಂಡು ಕೃಷ್ಣದೇವರಾಯ ಅನಾರೋಗ್ಯಕ್ಕೆ ಒಳಗಾಗಿ ಅನಾರೋಗ್ಯ ಪೀಡಿತರಾಗಿ ಸಾವನ್ನಪ್ಪಿದ ನಂತರ ಅವರ ಮಲ ಸಹೋದರ ಅಚ್ಯುತರಾಯ ರಾಜನಾಗುತ್ತಾನೆ ನಂತರ ಇವರು ಸಹ ಸಾವನ್ನಪ್ಪಿ ತನ್ನ ಅಪ್ರಾಪ್ತ ಮಗನಾದ ವೆಂಕಟಾದ್ರಿ ಯನ್ನು ಉತ್ತರಾಧಿಕಾರಿಯಾಗಿ ಮಾಡುತ್ತಾರೆ ಇಂತಹದರ ನಡುವೇ ಸಿಂಹಾಸನಕ್ಕಾಗಿ ಕಲಹ ನಡೆಯುತ್ತಿತ್ತು.


ಈ ಆಸ್ಥಾನದ ಗೊಶಾಧ್ಯಕ್ಷ ಸಾಲ ಕಾಂ ತಿಮ್ಮಯ್ಯ ಮತ್ತು ಅಳಿಯ ರಾಮಯ್ಯರ ನಡುವೆ ಕಲಹ ನಡೆಯುತ್ತಿತ್ತು ಇನ್ನೂ ಹಳೆಯ ರಾಮಯ್ಯನ ಕಡೆ ರಾಜರ ಕುಟುಂಬ ಮತ್ತು ಇಡೀ ಆಸ್ಥಾನ ದವರ ಬೆಂಬಲ ಅಳಿಯ ರಾಮಯ್ಯನಿಗೆ ಲಿತ್ತು ಇಂತಹದರ ನಡುವೆ ತಿಮ್ಮಯ್ಯ ಸಿಂಹಾಸನ ದಕ್ಕಿಸಿಕೊಳ್ಳಲು ವುದಕ್ಕಾಗಿ ವಿಜಾಪುರದ ಆದಿಲ್ ಶಾ ಜೊತೆ ಒಂದು ಚಿಕ್ಕ ಅಪವಿತ್ರ ಮೈತ್ರಿಗೆ ಮುಂದಾಗುತ್ತಾನೆ ಈ ನಂತರ ತನ್ನ ಸೇನೆಯನ್ನು ತೆಗೆದುಕೊಂಡು ಬಂದು ವಿಜಯನಗರದ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದು ಸಿಂಹಾಸನವನ್ನು ಕೊಡಿಸುವಂತೆ ತಿಮ್ಮಯ್ಯ ಕೇಳಿಕೊಂಡಿದ್ದ ಮೊದಲೇ ಸುಲ್ತಾನ್ಗೆ ವಿಜಯನಗರದ ಆಸ್ಥಾನದ ಮೇಲೆ ಬಹಳ ಆಸೆಯಿತ್ತು.


ದಂಡೆತ್ತಿ ಬರುವ ವೇಳೆ ಅಷ್ಟರಲ್ಲಿ ಅಳಿಯನ ಜೊತೆ ರಾಜಿಗೆ ಒಳಗಾಗಿದ್ದ ತಿಮ್ಮಯ್ಯ ಸುಲ್ತಾನನಿಗೆ ದಾಳಿ ಮಾಡಲು ಬೇಡವೆಂದು ಬೇಡಿಕೊಂಡನು ಹಾಗೂ ಇದಕ್ಕಾಗಿ ಸಾಕಷ್ಟು ಹಣ ಒಡವೆಗಳನ್ನು ನೀಡುತ್ತಾನೆ ಅದರ ಜೊತೆಗೆ ಆ ವಜ್ರವೂ ಕೂಡ ಸುಲ್ತಾನನ ಆಸ್ಥಾನಕ್ಕೆ ಸೇರುತ್ತದೆ.ತಿಮ್ಮಯ್ಯ ಕೊಟ್ಟ ಹಣದಿಂದಲೇ ವಿಜಾಪುರದ ಕೋಟೆಯೂ ಸಹ ಕಟ್ಟಿದ್ದು ಆ ನಂತರ ಬಿಜಾಪುರದ ಸುಲ್ತಾನನ ಆಸ್ಥಾನಕ್ಕೆ ಸೇರಿದ ವಜ್ರವೂ ಇದರಿಂದ ಸುಲ್ತಾನನು ಅನಾರೋಗ್ಯದಿಂದ ಬಳಲುತ್ತಾನೆ ಹಾಗೂ ವೈದ್ಯರ ಯಾವ ಚಿಕಿತ್ಸೆಗೂ ಗುಣ ಕಾಣದೇ ಕೊನೆಗೆ ಇವರು ಸಹ ಸಾವನ್ನಪ್ಪುತ್ತಾರೆ.

ವಜ್ರ ಕೊಟ್ಟ ತಿಮ್ಮಯ್ಯ ಕೂಡ ಸತ್ತು ಹೋಗುತ್ತಾನೆ ನಂತರ ವಿಜಯನಗರದ ಅಪ್ರಾಪ್ತ ಅಚ್ಯುತ ಮಗ ವೆಂಕಟಾದ್ರಿ ಯನ್ನು ರಾಮಯ್ಯ ಗದ್ದುಗೆಯ ಮೇಲೆ ಕೂರಿಸಿದ್ದ ಈ ಕಡೆ ಬೊಕ್ಕಸ ತಿಮ್ಮ ರಾಯನಿಗೆ ರಾಜದ್ರೋಹ ಮಾಡಿದ್ದಕ್ಕೆ ಮರಣದಂಡನೆಯನ್ನು ನೀಡಿದ್ದರು . ಇನ್ನು ಇಬ್ರಾಹಿಂ ಮಗ ಹಾಲಿ ಆದಿಲ್ ಶಾ ಹಲವಾರು ಉಡುಗೊರೆಗಳೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕೆ ಆ ವಜ್ರವನ್ನು ಕಳಿಸಿದ ಈ ವಜ್ರವನ್ನು ಕಲಿಸಿದ ನಾಲ್ಕು ವರ್ಷದಲ್ಲೇ ವಿಜಯನಗರ ಸಾಮ್ರಾಜ್ಯವು ಅಲ್ಲೋಲ ಕಲ್ಲೋಲವಾಗಿ ನಾಶವಾಯಿತು ಹಾಗೂ ವಜ್ರ ಬಂದ ಸಮಯ ವಿಜಯ ನಗರದ ಮೇಲೆ ದಾಳಿ ಮಾಡಿದ ದಿಲ್ಲಿ ಸುಲ್ತಾನರು ವಿಜಯನಗರವನ್ನು ನಾಶ ಮಾಡಿ ಹೋದರು ಹಾಗೂ ಇಲ್ಲಿದ್ದ ಹಲವು ವಜ್ರಗಳು ವೈಢೂರ್ಯಗಳನ್ನು ಎತ್ತಿಕೊಂಡು ಹೋದರು.

ಇನ್ನು ದಾಳಿ ವೇಳೆ ಆ ವಜ್ರವನ್ನು ಎತ್ತಿಕೊಂಡು ಹೋದ ವ್ಯಾಪಾರವು ಆ ವಜ್ರವನ್ನು ಅರುವತ್ತು ಸಾವಿರ ಹೊನ್ನಿನ ಮಾರಬೇಕೆಂದು ಹೋಗುತ್ತಿದ್ದರು ಇದನ್ನು ತಿಳಿದು ಹಾಲಿ ಆದರ್ಶ ವಜ್ರವನ್ನು ಪಡೆಯೋದಕ್ಕೆ ಅಸಲಿನ ಇವಳನ್ನು ಗೋವಾಗೆ ಕಳುಹಿಸಿದ. ಇನ್ನು ಈ ಅಸಲಿನ ಹೆಂಗಸರನ್ನು ಹನಿ ಟ್ರ್ಯಾಪ್ ಮಾಡುವುದಕ್ಕಾಗಿ ಬಳಸುತ್ತಿದ್ದರು ಹಾಗೂ ಈಕೆ ವಜ್ರ ಮಾರಾಟಗಾರರನ್ನು ಭೇಟಿ ನೀಡಿ ಇಲ್ಲಿ ಸಿಗುವ ಬೆಲೆಗಿಂತ ಬಿಜಾಪುರಕ್ಕೆ ಬಂದರೆ ಇನ್ನೂ ಜಾಸ್ತಿ ಬೆಲೆ ಕೊಡಿಸುತ್ತೇನೆ ಈ ವಜ್ರಕ್ಕೆ ಎಂದು ಹೇಳಿ ಆತನನ್ನು ಒಪ್ಪಿಸುತ್ತಾರೆ ಅದೇ ರಾತ್ರಿ ಆ ವಜ್ರದ ಪಾಲುದಾರರಿಗೂ ಮತ್ತು ಅವನಿಗೂ ಜಗಳವಾಡಿ ಆ ವ್ಯಾಪಾರಿ ಸತ್ತು ಹೋಗುತ್ತಾನೆ ನಂತರ ಈ ವ್ಯಾಪಾರಿಗಳು ಮುಸು ಪೂರಾ ಬಾದ್ ಗೆ ಹೋಗುತ್ತಾರೆ.

ಛಲ ಬಿಡದೆ ಅಸಲ ಭಿನ್ನ ಅಲ್ಲಿಗೂ ಹೋಗಿ ಆ ವ್ಯಾಪಾರಿಗಳನ್ನು ಮನವೊಲಿಕೆ ಮಾಡಿ ಬಿಜಾಪುರಕ್ಕೆ ಕರೆತಂದು ಆ ವಜ್ರವನ್ನು ಸಿಗುವ ಹಾಗೆ ಮಾಡುತ್ತಾಳೆ .ಇನ್ನು ಆ ಆಸ್ಥಾನದಲ್ಲಿದ್ದ ಹಲವಾರು ವಜ್ರ ಪರೀಕ್ಷೆ ಮಾಡುವವರು ಈ ವಜ್ರದ ಮೇಲೆ ಕಪ್ಪು ಚುಕ್ಕಿ ಇದೆ ಆದ್ದರಿಂದ ಈ ವಜ್ರವು ದಾರಿದ್ರ ಉಳ್ಳ ವಜ್ರವು ಇದು ಎಲ್ಲಿ ಹೋದರೂ ದರಿದ್ರ ಎಂದು ಹೇಳುತ್ತಾರೆ.ಹೀಗೆ ಈ ವಜ್ರವು ಎಲ್ಲೆಲ್ಲಿ ಹೋಗುತ್ತದೆಯೋ ಅಲ್ಲೆಲ್ಲಾ ನಾಶವಾಗುತ್ತಾ ಇರುತ್ತದೆ ಕೊನೆಗೆ ರೋಮ್ ಸೇರಿದ ಈ ವಜ್ರವೂ ಅಲ್ಲಿಯೂ ಸಹ ಹಲವಾರು ದಾಳಿಗಳಿಂದ ರೋಮ್ ನಾಶವಾಗಿದ್ದು ಕೊನೆಗೆ ಇರಾನ್ ಸೇರಿದ ಈ ವಜ್ರವೂ ಎಲ್ಲಿ ಇದೆ ಹೇಗೆ ಏನಾಯಿತು ಎಂದು ಇನ್ನೂ ಯಾರಿಗೂ ತಿಳಿದಿಲ್ಲ.

ಇನ್ನೂ ಈ ವಜ್ರದ ಬಗ್ಗೆ ಅಲಿ ಆದಿಲ್ ಶಾ ಇವನ ಆಸ್ಥಾನದಲ್ಲಿದ್ದ ಇತಿಹಾಸಗಾರ ಪರಿಷ್ಟ ಇವನು ತನ್ನ ಪುಸ್ತಕದಲ್ಲಿ ಈ ವಜ್ರದ ಬಗ್ಗೆ ಬರೆದಿದ್ದಾನೆ.ಇಬ್ರಾಹಿಂ ಜುಬೇರ ಬರೆದಿರುವ ತನ್ನ ಪುಸ್ತಕದಲ್ಲಿ ಅಲಿ ಆದಿಲ್ ಶಾ ಬಗ್ಗೆ ಬರೆದಿರುವಾಗ ಈ ವಜ್ರದ ಕಥೆಯೂ ಸಹ ಇದೇ . ಇನ್ನು ಆ ಪುಸ್ತಕದ ಹೆಸರು ಬಸ್ ತೆನೆ ಸಲಾತಿನ್ ಎಂಬ ಪುಸ್ತಕವು ಈ ಪುಸ್ತಕದಲ್ಲಿ ಈ ವಜ್ರದ ಬಗ್ಗೆಯೂ ಸಹ ಬರೆದಿದ್ದಾರೆ.











ನಿಮ್ಮ ಆತ್ಮ ಎಷ್ಟು ಬಾರಿ ಪುರ್ನಜನ್ಮ ಪಡೆದಿದೆ ಎಂದು ತಿಳಿಸುವ ಸೂಚನೆಗಳಿವು..!

ಪುನರ್ಜನ್ಮದ ವಿಚಾರಗಳು ಎಲ್ಲರನ್ನೂ ಬೆರಗುಗೊಳಿಸುತ್ತವೆ. ಕೆಲವರು ಪುನರ್ಜನ್ಮವಿದೆ ಎಂದು ನಂಬಿದರೆ,ಮತ್ತೆ ಕೆಲವರು ಪುನರ್ಜನ್ಮ ವಿಲ್ಲ ಎಂದು ನಂಬುವರಿದ್ದಾರೆ ಎಂದು ಹೇಳಬಹುದು. ನಿಮ್ಮ ಹಿಂದಿನ ಜನ್ಮಕ್ಕೆ ಸಂಬಂಧಿಸಿದ ಭಾವನೆಗಳು ಪ್ರಸ್ತುತ ಜೀವನಕ್ಕೆ ಯಾವುದೇ ಸಂಬಂಧ ಹೊಂದಿಲ್ಲದಿದ್ದರೂ, ಅಂಥ ಭಾವನೆಗಳನ್ನು ನೀವು ಅನುಭವಿಸುತ್ತೀರಿ ಎಂದಾದರೆ ಅದು ಹಿಂದಿನ ಜನ್ಮಕ್ಕೂ ಈ ಜನ್ಮಕ್ಕೂ ಸಂಬಂಧ ಹೊಂದಿರಬಹುದು. ಯೆಸ್, ನಿಮಗೆ ಆಶ್ಚರ್ಯವಾಗಬಹುದು. ಕೆಲವೊಮ್ಮೆ ನಮ್ಮ ಜೀವನಶೈಲಿಗೆ ಸಂಬಂಧಿಸಿದ ಘಟನೆಗಳು ಅಥವಾ ಅಭ್ಯಾಸಗಳು ನಾವು ಅನುಭವಿಸುವುದನ್ನು ನೋಡುತ್ತಿರುತ್ತೇವೆ. ಇಂತಹ ಅನುಭವಗಳಿಂದ ಜನರು ಅಚ್ಚರಿಗೆ ಒಳಗಾಗುತ್ತಾರೆ. ನಿಮಗೆ ನಂಬಲಿಕ್ಕೆ ಸಾಧ್ಯವಾಗದೇ ಇರಬಹುದು ಆದರೆ ಈ ಅನುಭವಗಳು, ಘಟನೆಗಳು ನಿಮ್ಮ ಹಿಂದಿನ ಜೀವನಕ್ಕೆ ಸಂಬಂಧಿಸಿರಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಇಲ್ಲಿ ತಿಳಿಸಲಾದ ಸೂಚನೆಗಳು ನಿಮ್ಮಲ್ಲಿ ಕಂಡು ಬಂದರೆ ನೀವು ಸಹ ಹಲವು ಬಾರಿ ಪುನರ್ಜನ್ಮ ಪಡೆದೀರಿ ಎಂದು ಸೂಚಿಸುತ್ತದೆ. ನೀವು ಯಾವುದರ ಬಗ್ಗೆಯಾದರೂ ಹೆದರುತ್ತಿದ್ದರೆ, ನಿಮ್ಮ ವರ್ತಮಾನ ಜೀವನಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಸಹ ಭಯ ಕಾಡುತ್ತದೆ. ನಿಮ್ಮ ಆತ್ಮ ಎಷ್ಟು ಬಾರಿ ಪುನರ್ಜನ್ಮ ಪಡೆದಿದೆ? ಎಂದು ತಿಳಿಸುವ ಕೆಲವು ಸೂಚನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

1. ಒಂದೇ ಕನಸು ಪದೇ ಪದೇ ಬೀಳುವುದು

ನಿಮಗೆ ಒಂದೇ ಕನಸು ಪದೇ ಪದೇ ಬೀಳುತ್ತಿದ್ದರೆ ಹಿಂದಿನ ಜನ್ಮಕ್ಕೆ ಸಂಬಂಧಿಸಿದೆ ಎಂದು ಹೇಳಬಹುದು. ಕನಸಿನಲ್ಲಿ ಕಾಣುವ ಜನರು ನಿಮಗೆ ಪರಿಚಿತರಂತೆ ಕಾಣುತ್ತಾರೆ. ನೀವು ಅವರನ್ನು ಎಲ್ಲಿ ನೋಡಿದ್ದೀರಿ ಎಂಬುದು ನಿಮಗೆ ನೆನಪಿರುವುದಿಲ್ಲ. ಆದರೆ ಅವರನ್ನು ಎಲ್ಲೋ ನೋಡಿದ್ದೀರಿ ಎಂದು ನೀವು ಭಾವಿಸುತ್ತೀರಿ.

2. ಮೊದಲ ಭೇಟಿಯಲ್ಲೇ ಅಪರಿಚಿತರು ನಮ್ಮವರು ಎನ್ನುವ ಭಾವನೆ

ನೀವು ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾಗಲು ಹೋಗುತ್ತೀರಿ. ಆದರೆ ಭೇಟಿಯ ವೇಳೆ ಅವರು ನಮಗೆ ದೀರ್ಘಕಾಲದಿಂದಲೂ ಪರಿಚಿತರೋ ಎನ್ನುವ ಭಾವನೆ ನಮ್ಮಲ್ಲಿ ಮೂಡುತ್ತದೆ. ಇದರಿಂದ ವಿಚಿತ್ರವಾದ ಭಾವನೆ ಉಂಟಾಗುವ ಅನುಭವ ಕಾಣಬಹುದು. ಹೀಗೆ ಯಾಕಾಗುತ್ತಿದೆ.. ಅಪರಿಚಿತರ ಜತೆ ನಾವೇಕೆ ಇಷ್ಟು ಹತ್ತಿರವಾಗಿದ್ದೀವಿ ಎಂದು ನಿಮಗೆ ಅರ್ಥವಾಗದೇ ಇರಬಹುದು.

3. ಯಾವುದೇ ವಸ್ತು, ವ್ಯಕ್ತಿ ಬಗ್ಗೆ ವಿಶೇಷ ಕ್ರೇಜ್

ನೀವು ಯಾವುದಾದರೂ ವ್ಯಕ್ತಿ ಅಥವಾ ವಸ್ತು ಬಗ್ಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಿದ್ದರೆ ಅದು ಪುನರ್ಜನ್ಮವನ್ನು ಸೂಚಿಸುತ್ತದೆ. ಅಂದರೆ ವಯೋವೃದ್ಧರು, ಅನಾಥರು, ಅಥವಾ ಭಿಕ್ಷುಕರು ಕಂಡಾಗ ನಿಮಗೆ ಅವರ ಮೇಲೆ ವಿಶೇಷವಾದಂತಹ ಸಹಾನೂಭೂತಿ ಮೂಡುತ್ತದೆ. ಇವರಿಗಾಗಿ ಏನನ್ನಾದರೂ ಮಾಡಲು ನಿಮಗೆ ಆಸಕ್ತಿ ಹೆಚ್ಚುತ್ತದೆ.


4. ಕೆಟ್ಟದ್ದು ಸಂಭವಿಸಿದರೆ, ಮೊದಲೇ ಮುನ್ಸೂಚನೆ ದೊರೆಯುವುದು

ಕೆಲವು ಜನರಿಗೆ ಕೆಟ್ಟದ್ದು ಸಂಭವಿಸುವ ಮುನ್ನ ಮುನ್ಸುಚನೆ ದೊರೆಯುತ್ತದೆ. ಅಂದರೆ ಕೆಟ್ಟದ್ದು ಆಗುತ್ತದೆ ಎಂದು ಕೆಲವರು ತುಂಬಾ ಹೆದರುತ್ತಾರೆ. ಈ ಹೆದರಿಕೆಗೆ ಕಾರಣವೆಂದರೆ ಅವರ ಮನಸ್ಸಿನಲ್ಲಿ ಉಂಟಾಗುವ ಮುನ್ಸೂಚನೆಗಳೇ ಕಾರಣವಾಗುತ್ತದೆ. ಅಷ್ಟೋ ಬಾರಿ ಕೆಟ್ಟದ್ದು ಸಂಭವಿಸುತ್ತದದೆ ಎನ್ನುವ ಮೂನ್ಸುಚನೆ ದೊರೆಯುತ್ತದೆ. ಈ ಭಾವನೆ ಸುಳ್ಳು ಎಂದು ಅವರು ಅಲ್ಲಗಳೆಯುವುದಿಲ್ಲ. ಯಾಕೆಂದರೆ ಅಂಥವರಲ್ಲಿ ಕೆಟ್ಟದ್ದು ಸಂಭವಿಸುವುದರ ಬಗ್ಗೆ ಪ್ರೂವ್ ಆಗ್ತಾನೆ ಇರುತ್ತದೆ.

5. ಅನಗತ್ಯ ವಿಷಯಗಳ ಬಗ್ಗೆ ಭಯ ಕಾಡುತ್ತಿದ್ದರೆ

ಭಯ ಎನ್ನುವುದು ನೈಸರ್ಗಿಕ ವಿಷಯ ಎಂದು ಹೇಳಬಹುದು. ಆದರೆ ಬಣ್ಣ, ಸಂಖ್ಯೆ, ಸ್ಥಳ, ಬಟ್ಟೆ ಮುಂತಾದ ಅನಗತ್ಯ ವಿಷಯಗಳಿಗೆ ನೀವು ಭಯ ಪಡಲು ಪ್ರಾರಂಭಿಸುತ್ತೀರಾ. ಅದು ಸಾಮಾನ್ಯ ವಿಷಯವೆಂದು ನಿಮಗೆ ಎನ್ನಿಸುವುದಿಲ್ಲ. ಕೆಲವರಲ್ಲಿ ಭಯ ತುಂಬಾ ಅಧಿಕವಾಗಿರುತ್ತದೆ.

6. ಅಪರಿಚಿತ ಸ್ಥಳಗಳು..
ನೀವು ನಗರ, ರಸ್ತೆ, ಹಳ್ಳಿ, ಪಟ್ಟಣದ ಮೂಲಕ ಹಾದು ಹೋಗುತ್ತಿದ್ದರೆ ಆಗ ನಿಮಗೆ ಇದ್ದಕ್ಕಿದ್ದಂತೆ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅನ್ನಿಸುತ್ತದೆ. ಆ ಸ್ಥಳಗಳು ನಿಮಗೆ ಆಕರ್ಷಿಸುತ್ತವೆ ಎಂದು ಹೇಳಬಹುದು. ಈ ಸೂಚನೆಯೂ ಸಹ ನಿಮ್ಮ ಹಿಂದಿನ ಜನ್ಮಕ್ಕೆ ಸಂಬಂಧಿಸಿರಬಹುದು.

7. ಸಾಮಾಜಿಕ ಸ್ಥಾನಮಾನ, ಖ್ಯಾತಿ ಬಗ್ಗೆ ಯೋಚಿಸವುದಿಲ್ಲ

ಸಜಹವಾಗಿಯೇ ಮನುಷ್ಯ ಸಾಮಾಜಿಕ ಸ್ಥಾನಮಾನ ಹಾಗೂ ಖ್ಯಾತಿ ಪಡೆಯಲು ಹಂಬಲಿಸುತ್ತಾನೆ. ಇದನ್ನು ಪಡೆಯಲು ಸಾಕಷ್ಟು ಶ್ರಮ ವಹಿಸುವವರು ಇದ್ದಾರೆ. ಆದರೆ ಪುನರ್ಜನ್ಮ ಪಡೆದ ಆತ್ಮ ಸಾಮಾಜಿಕ ಸ್ಥಾನಮಾನ, ಖ್ಯಾತಿ ಇತರ ವಿಷಯಗಳಿಗಾಗಿ ಹಂಬಲಿಸುವುದಿಲ್ಲ. ಇದರ ಬದಲಾಗಿ ನೀವು ಆಧ್ಯಾತ್ಮಿಕವಾಗಿ ಬೆಳೆಯಲು ಬಯಸಬಹುದು. ಉತ್ತಮ ವ್ಯಕ್ತಿಯಾಗಿ ವಿಕಸನಗೊಳ್ಳಲು ಹಾಗೂ ಇತರ ಜನರಿಗೆ ಸಹಾಯ ಮಾಡಲು ನೀವು ಮುಂದಾಗಬಹುದು.

ಹಾವಿನ ತಲೆಯಲ್ಲಿ ನಾಗಮಣಿ ಹೇಗೆ ಉತ್ಪತ್ತಿಯಾಗುತ್ತದೆ?ಇದರ ಹಿಂದಿರುವ ರಹಸ್ಯವೇನು ಎಂದು ನಿಮಗೆ ಗೊತ್ತೇ ?

ಹಾವು ಎಂದಾಕ್ಷಣ ಬೆಚ್ಚಿ ಬೀಳುವ ಜನರೇ ಹೆಚ್ಚು. ಆದರೂ ಹಾವಿಗೆ ಹಾಲೆರೆಯುತ್ತಾರೆ. ಗುಡಿ ಕಟ್ಟಿಸಿ ದೇವರಂತೆ ಪೂಜಿಸುತ್ತಾರೆ. ಆದರೆ ವಿವಿಧ ಜಾತಿಯ ಹಾವುಗಳಲ್ಲಿ ನಾಗರ ಹಾವನ್ನು ಮಾತ್ರ ದೇವರಂತೆ ಪೂಜಿಸಲು ಕಾರಣವಿದೆ. ನಾಗರಹಾವಿಗೆ ಶಕ್ತಿಯುತವಾದ ನಾಗಮಣಿ ಇರುತ್ತದೆ ಎಂದು ಜನರ ನಂಬಿಕೆಯಾಗಿದೆ.

ಹಲವು ಚಲನಚಿತ್ರ ಹಾಗು ಧಾರಾವಾಹಿಗಳಲ್ಲಿ ನಾಗಮಣಿಯ ಬಗ್ಗೆ ತೋರಿಸುವ ಕಥೆಗಳನ್ನು ನೋಡಿದರೆ ಇದು ನಿಜವೇ ಎನ್ನುವ ಸಂಶಯ ಕೂಡ ನಮ್ಮ ಮನಸ್ಸಿನಲ್ಲಿ ಮೂಡಿ ಬರುತ್ತದೆ.ನಮ್ಮ ಹಿರಿಯರು ಹೇಳುವ ಕತೆಗಳು ಹಾಗೂ ಪುರಾಣಗಳ ಪ್ರಕಾರ ನಾಗಿಣಿ ಮತ್ತು ನಾಗ ಮಣಿಗಳು ನಿಜವಾಗಿಯೂ ಇರಬಹುದೇ ಎನ್ನುವ ಆಶ್ಚರ್ಯ ಉಂಟಾಗುತ್ತದೆ.

ಇನ್ನೂ ನಾಗಮಣಿಯ ಕುರಿತು ಹೇಳುವುದಾದರೆ ವಿಷ ಚಿಮ್ಮುವ ನಾಗರಹಾವಿನಲ್ಲಿ ನಾಗ ಮಣಿಯು ಹೇಗೆ ಉಂಟಾಗುತ್ತದೆ ಇದರ ಹಿಂದಿರುವ ರಹಸ್ಯವೇನು ಮಣಿಯನ್ನು ಯಾರಾದರೂ ಅಳವಡಿಸಿರುತ್ತಾರೆಯೇ ಅಥವಾ ಮಣಿಯನ್ನು ಉತ್ಪತ್ತಿ ಮಾಡುವ ಶಕ್ತಿ ಹಾವಿನಲ್ಲಿ ನಿಜವಾಗಿ ಇದೆಯೇ ಈ ಶಕ್ತಿಯುತವಾದ ನಾಗಮಣಿಯ ನಮಗೆ ಹೇಗೆ ಸಿಗುತ್ತವೆ ನಾಗಿಣಿ ಮತ್ತು ನಾಗಮಣಿ ಈ ಕಾಲದಲ್ಲಿಯೂ ಇರುತ್ತವೆಯೇ ಇಂತಹ ಹಲವು ಪ್ರಶ್ನೆಗಳ ಬಗ್ಗೆ ಆಸಕ್ತಿಕರ ವಿಷಯಗಳನ್ನು ತಿಳಿಯೋಣ.

ನಾಗ ಎಂದರೆ ಗಂಡು ಹಾವು, ನಾಗಿಣಿ ಎಂದರೆ ಹೆಣ್ಣು ಹಾವು ಎಂದರ್ಥ. ಹಾವು ತಮ್ಮ ರೂಪವನ್ನು ಬದಲಿಸುವ ಶಕ್ತಿಯನ್ನು ಹೊಂದಿರುತ್ತದೆ. ವಿಷಪೂರಿತವಾದ ಹಾವಿಗೆ ಮಾತ್ರ ಯಾವುದಾದರೂ ಒಂದು ಜೀವಿಯೊಳಗೆ ಪ್ರವೇಶಿಸುವ ಶಕ್ತಿ ಇರುತ್ತದೆ. ಕೆಲವು ಶಾಸ್ತ್ರಗಳು ಹೇಳುವಂತೆ ಇವು ಹೆಚ್ಚಾಗಿ ಮಾನವನ ರೂಪ ತಾಳುತ್ತವೆ.

ನಾಗರ ಹಾವು ಹೊಂದಿರುವ ರತ್ನವನ್ನು ನಾಗಮಣಿ ಎನ್ನುವರು. ಇದು ಅತ್ಯಂತ ಶಕ್ತಿಯುತವಾದದ್ದು, ಬೆಲೆ ಬಾಳುವಂಥದ್ದು, ಇದು ಮಾತ್ರ ಶಕ್ತಿಯನ್ನು ಹೊಂದಿರುತ್ತದೆ ಎನ್ನುವುದು ಹಿಂದೂಗಳ ನಂಬಿಕೆಯಾಗಿದೆ. ಈ ನಾಗಮಣಿಯನ್ನು ಕದಿಯಲು ಹೋದ ಹಲವರಿಗೆ ಹಾವು ಕಡಿತದಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಪುರಾಣಗಳು ಹೇಳುತ್ತವೆ. ನಾಗಮಣಿಯು ಹೇಗೆ ಉತ್ಪತ್ತಿಯಾಗುತ್ತದೆ ಎಂದು ಹಲವು ಪುಸ್ತಕಗಳಲ್ಲಿ ಈಗ ವಿವರಿಸಿ ತಿಳಿಸಿದ್ದಾರೆ.

ಪವಿತ್ರವಾದ ನವರತ್ನಗಳಲ್ಲಿ ನಾಗಮಣಿಯ ಕೂಡ ಒಂದು. ಸ್ವಾತಿ ನಕ್ಷತ್ರದಲ್ಲಿ ಬೀಳುವ ಮಳೆಯ ಹನಿಯ ನೀರು ನಾಗರ ಹಾವಿನ ಬಾಯಿಯೊಳಗೆ ಪ್ರವೇಶಿಸುವುದರಿಂದ ಮಣಿಯು ಉತ್ಪತ್ತಿಯಾಗುತ್ತದೆ. ನಾಗಮಣಿ ಹಲವು ಬಣ್ಣಗಳಲ್ಲಿ ಲಭಿಸುತ್ತದೆ. ಆದೂ ಹಳದಿ ಜೇನಿನ ಬಣ್ಣ, ತಿಳಿ ಹಸಿರು, ಕೆಂಪು ,ಬಿಳಿ ಬಣ್ಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತ.

ಕತ್ತಿಲಿನಲ್ಲಿ ಮಾತ್ರ ಹೊಳೆಯುವ ಶಕ್ತಿ ಈ ಮಣಿಗಳಿಗೆ ಇರುತ್ತದೆಯಂತೆ. ಇತಿಹಾಸ ಹೇಳುವಂತೆ ಭೂಮಿಯ ಮೇಲೆ ನೂರು ವರ್ಷಗಳ ಕಾಲ ಬದುಕುವ ನಾಗರಹಾವಿನಲ್ಲಿ ಮಾತ್ರವೇ ಈ ನಾಗ ಮಣಿಯು ಉತ್ಪತ್ತಿಯಾಗುತ್ತದೆ. ಒಂದು ಸಲ ನಾಗರ ಹಾವಿನಲ್ಲಿ ನಾಗಮಣಿ ಉಂಟಾದಲ್ಲಿ ಹಾವಿಗೆ ಅದ್ಭುತವಾದ ಶಕ್ತಿ ಸಾಮರ್ಥ್ಯಗಳು ಬರುತ್ತವೆ .

ಆಗ ಮಾತ್ರ ಈ ಹಾವು ಯಾವುದೇ ರೂಪಕ್ಕೆ ಬೇಕಾದರೂ ಬದಲಾಗಲು ಸಾಧ್ಯವಾಗುತ್ತದೆ. ಮಣಿಯನ್ನು ಹಾವಿನಿಂದ ದೂರ ಮಾಡಿದಲ್ಲಿ ಹಾವು ಸಾವನ್ನಪ್ಪುತ್ತದೆ. ಇನ್ನು ನಾಗಮಣಿಯನ್ನು ಹೊಂದಿರುವವರು ಅದೃಷ್ಟವಂತರು ಎಂದು ಭಾವಿಸುತ್ತಾರೆ. ಆ ವ್ಯಕ್ತಿಯು ಐಶ್ವರ್ಯವಂತನಾಗುತ್ತಾನೆ.

ಹಾವು ಮಣಿಯನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದ ಆ ಹಾವುಗಳನ್ನು ಮಾರಿ ಕೋಟಿಗಟ್ಟಲೆ ಹಣವನ್ನು ಗಳಿಸುವವರು ಸಹ ಇದ್ದಾರೆ. ಹಾವಿನ ತಲೆಯ ಒಳಗಾಗಲಿ, ತಲೆಯ ಮೇಲಾಗಲಿ, ಯಾವುದೇ ಮಣಿ ಇಲ್ಲವೆಂದು ಇದು ಬರೀ ಮೂಢನಂಬಿಕೆ ಎಂದು ಹೇಳುವವರು ಸಹ ಕೆಲವು ಜನರು ಇದ್ದಾರೆ.ಆದರೆ ಅದೇನೇ ಇರಲಿ ಈ ನಾಗ ಮಣಿಯನ್ನು ಕಣ್ಣಾರೆ ನೋಡಿರುವವರಿಗೆ ಮಾತ್ರ ಇದರ ಬಗ್ಗೆ ನಂಬಿಕೆ ಮತ್ತು ತಿಳುವಳಿಕೆ ಇರುತ್ತದೆ.


Wednesday, 8 April 2020

ತುಳು_ನಾಡಿನ_ಆರಾಧ್ಯ_ದೈವ_ಸ್ವಾಮಿ_ಕೊರಗಜ್ಜ

#ತುಳು_ನಾಡಿನ_ಆರಾಧ್ಯ_ದೈವ_ಸ್ವಾಮಿ_ಕೊರಗಜ್ಜ 

#ಇತಿಹಾಸ 

*ಮೂಲ ಕುತ್ತಾರು  ಕೊರಗಜ್ಜನ ನಿಜವಾಯಿನ ಕಥೆ* 

" ತುಳುನಾಡಿನ ನಂಬಿಕೆಯ ಕೊರಗಜ್ಜ "

 ಬರಹ:  ವಜ್ರ ಗುಜರನ್, ಮಾಡೂರು

ತುಳುನಾಡಿನ ಮಟ್ಟಿಗೆ ಆ ಹೆಸರೇ ಒಂದು ಕಾರ್ಣಿಕ ಶಕ್ತಿ. ಭಕ್ತಿಯಿಂದ ಆ ಹೆಸರು ಕೂಗಿದರೆ ಎಂಥಾ ಸಂಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ಸಿಕ್ಕ ಉದಾಹರಣೆಯಿದೆ. ಅದರಲ್ಲೂ ಎಷ್ಟೇ ಬೆಳೆಬಾಳುವ ವಸ್ತುಗಳು ಕಳೆದು ಹೋದರೂ ದಿಕ್ಕೇ ತೋಚದ ಲಕ್ಷಾಂತರ ಜನ ಮೊದಲು ಕರೆಯುವುದೇ ಆ ದೈವದ ಹೆಸರು. ಶತಶತಮಾನಗಳಿಂದಲೂ ತುಳುನಾಡಿನಲ್ಲಿ ದೈವೀ ಶಕ್ತಿಯ ದರ್ಶನ ಮಾಡಿಸುತ್ತಿರುವ ಆ ನಂಬಿಕೆಯ ದೈವವೇ ಸ್ವಾಮಿ ಕೊರಗಜ್ಜ.

ತುಳುನಾಡಿನ ಅದೆಷ್ಟೋ ಜನ ಇಂದಿಗೂ ತಮ್ಮ ವಸ್ತುಗಳು ಕಾಣೆಯಾದರೆ‌ ಮೊದಲ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಿಲ್ಲ. ಬದಲಾಗಿ ತಾವಿದ್ದ ಜಾಗದಲ್ಲೇ ಕಾರ್ಣಿಕ ಪುರುಷ ಕೊರಗಜ್ಜನ ನೆನೆದು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ. ಇಷ್ಟಾದರೆ ಸಾಕು ತಾವು ಕಳೆದುಕೊಂಡ ವಸ್ತುಗಳು ಮತ್ತೆ ಕೈ ಸೇರುವುದು ಸೂರ್ಯನಷ್ಟೇ ಸತ್ಯ ಎನ್ನುವುದು ಕೊರಗಜ್ಜನ ಭಕ್ತರ ನಂಬಿಕೆಯ ನುಡಿ. ಇನ್ನು ಕಷ್ಟಗಳು ಎದುರಾದಗಲೂ ಭಕ್ತ ವಲಯ ಕೊರಗಜ್ಜನ ಹೆಸರು ಕೂಗಿದರೆ ಸಾಕು ಕಷ್ಟಗಳೆಲ್ಲಾ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಮಾಯವಾಗುತ್ತದೆ ಎನ್ನುವ ಅಚಲ ನಂಬಿಕೆಯೂ ಇದೆ. ಇದೇ ಕಾರಣಕ್ಕೆ ತುಳುನಾಡಿನ ಆರಾಧ್ಯ ದೈವವಾಗಿ "ಕೊರಗಜ್ಜ' ಎಂದು ಕರೆಯಲ್ಪಡುವ ಕೊರಗ ತನಿಯನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತಿದ್ದು, ಧರ್ಮ ಮತ್ತು ಸತ್ಯದ ಪ್ರತೀಕವಾಗಿ ನಂಬಿದವರಿಗೆ ಇಂಬು ಕೊಡುವ ಧರ್ಮದೈವವಾಗಿ ಕೊರಗಜ್ಜ ತುಳುನಾಡಿನಲ್ಲಿ  ನೆಲೆ ನಿಂತಿದ್ದಾನೆ.(ತುಳುನಾಡಿನಲ್ಲಿ ದೈವಗಳನ್ನು ಪ್ರೀತಿಯಿಂದ ಏಕವಚನದಲ್ಲಿ ಕರೆಯುದಿದೆ). 

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರಗಜ್ಜನ ಪವಾಡಗಳು ಇಂದಿಗೂ ನಡೆಯುತ್ತಿದ್ದು, ಅನೇಕ ಉದಾಹರಣೆಗಳು ಕಾಣಸಿಗುತ್ತದೆ. ಕೊರಗಜ್ಜ ಸಮಾನತೆ ಸಾರುವ ದೈವವಾಗಿ ಎಲ್ಲ ಜಾತಿ ಹಾಗೂ ಧರ್ಮದ ಜನರು ಅಜ್ಜ ಎಂದು ನಂಬಿಕೊಂಡು ಬಂದಿದ್ದಾರೆ.  

ಸಾಮಾಜಿಕ ನ್ಯಾಯದ ಪ್ರತೀಕವಾಗಿ ಆರಾಧಿಸುವ ಕೊರಗಜ್ಜನನ್ನು ತುಳುನಾಡಿನ ಪ್ರತಿಯೊಂದು ಜಾತಿ ಧರ್ಮದ ಜನರು ನಂಬಿಕೊಂಡು ಬಂದಿದ್ದಾರೆ. ತುಳುನಾಡಿನ ದೈವರಾಧನೆಯ ಒಂದು ಭಾಗವಾಗಿ ಕೊರಗಜ್ಜನ ಆರಾಧನೆಯನ್ನು ಮಾಡಲಾಗುತ್ತದೆ. ಕೊರಗಜ್ಜನ ಮೂಲಸ್ಥಾನ ಕುತ್ತಾರಿನಲ್ಲಿದ್ದರೂ ಕೂಡ ಅವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಂಬಲಾಗುತ್ತಿದ್ದು, ಆಚರಣೆಗಳು ಮಾತ್ರ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿದೆ. 

ಕಳೆದು ಹೋದ ವಸ್ತು ಮತ್ತೆ ಸಿಗುತ್ತದೆ!
ಮಾನವನ ರೂಪದಲ್ಲಿ ಇದ್ದ ಕೊರಗತನಿಯ ಮಾಯಾ ರೂಪವನ್ನು ಪಡೆದು ದೈವೀ ಪುರುಷನಾಗುತ್ತಾನೆ ಎಂಬ ಪ್ರತೀತಿ ಇದೆ. ಹಾಗಾಗಿ ಮನುಷ್ಯರು ತಿನ್ನುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ಅಜ್ಜನಿಗೆ ನೀಡಲಾಗುತ್ತದೆ. ಉದಾಹರಣೆಗೆ ವೀಳ್ಯದೆಲೆ, ಅಡಿಕೆ ಸುಣ್ಣ, ತಂಬಾಕು, ಬೀಡಿ, ಶೇಂದಿ, ಚಕ್ಕುಲಿ, ಮದ್ಯ  ಹೆಚ್ಚಾಗಿ ಹರಕೆಯಾಗಿ ನೀಡಲಾಗುತ್ತದೆ. ಅಮೂಲ್ಯವಾದ ಅಥವಾ ಯಾವುದೇ ಸಣ್ಣ ವಸ್ತು ಕಳೆದು ಹೋದರೂ ಅಜ್ಜನನ್ನು ಮನಸ್ಸಿನಲ್ಲಿ ನೆನೆದು ಹರಕೆಯನ್ನು ಹೇಳಿದರೆ ಸಾಕು ಆ ವಸ್ತು ಮತ್ತೆ ಕೈ ಸೇರಿದ ಅನೇಕ ಉದಾಹರಣೆಗಳು ಇದೆ ಎಂಬ ಬಲವಾದ ನಂಬಿಕೆ ಇಂದಿಗೂ ಕೂಡ ತುಳುನಾಡಿನ ಜನರಲ್ಲಿ ಇದೆ. ಯಾವುದರಲ್ಲೂ ಭಕ್ತಿ ಮುಖ್ಯವಾಗಿ ಬೇಕಾಗುತ್ತದೆ. ಯಾವುದೇ ಜಾಗದಲ್ಲಿ ನಿಂತು ಮನಸಾರೆ `ಅಜ್ಜ' ಎಂದು ಕರೆದರೆ ನಾವಿದ್ದ ಜಾಗಕ್ಕೆ ಅಜ್ಜ ಬರುತ್ತಾನೆ ಎಂಬುವುದು ಭಕ್ತರ ನಂಬಿಕೆ

ಏಳು ಕಲ್ಲಿನಲ್ಲಿ ಪೂಜಿಸಲ್ಪಡುವ ಕೊರಗಜ್ಜ!
 ಹೊರ ರಾಜ್ಯದ ಅರಸು ದೈವಗಳು ಕುತ್ತಾರು ಪ್ರದೇಶದ ಮೂಲ ದೈವಗಳಾದ ಪಂಜಂದಾಯ ಹಾಗೂ ಬಂಟ ದೈವಗಳ ಜಾಗದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಕೊರಗತನಿಯಲ್ಲಿ ಬಂದ ಅರಸು ದೈವಗಳನ್ನು ಹೇಗಾದರೂ ಓಡಿಸುವಂತೆ ಕೇಳಿಕೊಳ್ಳುತ್ತಾರೆ. ಆಗ ಕೊರಗತನಿಯ(ಕೊರಗಜ್ಜ) ನಾನು ಅವರನ್ನು ಓಡಿಸಿದರೆ ನನಗೇನು ಕೊಡುತ್ತಿರಿ ಎಂದು ಕೇಳಿದಾಗ ತುಳುನಾಡಿನ ಪ್ರತಿಯೊಬ್ಬರು ನಿನ್ನನ್ನು ಆರಾಧಿಸುವಂತೆ, ಮನೆ ಮನೆಯಲ್ಲಿ ಅಗೆಲು ಹಾಗೂ ಕೋಲ ಸೇವೆ ನಿನಗೆ ನೀಡುವಂತೆ ಹಾಗೂ ಈ ಪ್ರದೇಶದ ಏಳು ಕಲ್ಲಿನಲ್ಲಿ ನಿನ್ನನ್ನು ಪೂಜಿಸಲಾಗುತ್ತದೆ ಎಂಬ ಆಭಯವನ್ನು ನೀಡುತ್ತಾರೆ. ದೈವಗಳ ಮಾತಿನ ನಂತರ ಕೊರಗ ತನಿಯ ದನದ ರಕ್ತವನ್ನು ಚೆಲ್ಲುತ್ತಾ ಅರಸು ದೈವಗಳನ್ನು ಓಡಿಸುತ್ತಾರೆ. ಮುಂದೆ ಡೆಕ್ಕಾರು ಕಲ್ಲು, ಬೊಳ್ಯಕಲ್ಲು(ರಾಣಿಪುರ), ಕಲ್ಲಾಪಿನಲ್ಲಿ, ಮುನ್ನೂರು ಗ್ರಾಮದಲ್ಲಿ, ಸೋಮೇಶ್ವರ ಕಲ್ಲು(ಯೆನೆಪೋಯ ಮೆಡಿಕಲ್ ಕಲೇಜು ಬಳಿ), ದೇರಳಕಟ್ಟೆ ಬಳಿಯ ಕಲ್ಲು ಹಾಗೂ ಕುತ್ತಾರು ಮೂಲಸ್ಥಾನದ ಕಲ್ಲು ಸೇರಿದಂತೆ ಏಳು ಕಡೆಗಳಲ್ಲಿ ಏಳು ಕಲ್ಲಿನಲ್ಲಿ ಕೊರಗಜ್ಜನನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಲಾಗುತ್ತದೆ ಎಂದು ಪಾಡ್ದನ ಕಥೆಯಲ್ಲಿ ಹೇಳಲಾಗುತ್ತಿದೆ. 

ರಾತ್ರಿ ಹೊತ್ತು ಬೆಳಕು ಹಾಕುವಂತಿಲ್ಲ! 
ಕೊರಗಜ್ಜನ ಭಕ್ತರು ಕುತ್ತಾರು ಅಜ್ಜನ ಕಟ್ಟೆಯ ಬಳಿ ರಾತ್ರಿ ಹೊತ್ತಿನಲ್ಲಿ ವಾಹನ ಚಲಾಯಿಸುವಾಗ ವಾಹನದ ಹೆಡ್‍ಲೈಟ್ ಹಾಕುವುದಿಲ್ಲ. ಇಲ್ಲಿ ಕೋಲ ನಡೆಯುವ ಸಂದರ್ಭದಲ್ಲಿ ಅಗರಬತ್ತಿಯ ಬೆಳಕು ಕೂಡ ಕಾಣಬಾರದು ಎಂಬ ನಿಯಮವಿದೆ. ಅನಾದಿಕಾಲದಿಂದಲೂ ಇದನ್ನು ಅನುಸರಿಸಿಕೊಂಡು ಬರಲಾಗುತ್ತಿದ್ದು. ಅಜ್ಜನ ಬಗೆಗಿನ ಮೂಲ ಸಂಸ್ಕ್ರತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿಗೂ ಕೂಡ ಅಜ್ಜನ ಅಗೇಲು ಸೇವೆ ಹಾಗೂ ಕೋಲ ಸೇವೆ ನಡೆಯುವ ಸಂದರ್ಭದಲ್ಲಿ ದೀಪ ಹಚ್ಚುವಂತಿಲ್ಲ, ಯಾವುದೇ ಬೆಳಕು ಹಾಕುವಂತಿಲ್ಲ. ಈ ಭಾಗದಲ್ಲಿ ರಾತ್ರಿ ಹೊತ್ತು ಸಂಚರಿಸುವ ಬಹುತೇಕ ಎಲ್ಲ ವಾಹನಗಳು ಹೆಡ್‍ಲೈಟ್ ಒಮ್ಮೆ ಡಿಮ್ ಡಿಪ್ ಮಾಡಿ ಹೋಗುತ್ತಾರೆ. ಈ ಹಿಂದೆ ಅನ್ಯ ಧರ್ಮದ ಯಾವುದೋ ಕಾರ್ಯಕ್ರಮದ ಸಂದರ್ಭ ಈ ಭಾಗದಲ್ಲಿ ಗ್ಯಾಸ್ಲೈಟ್ ಹಿಡಿದುಕೊಂಡು ಈ ಭಾಗದಲ್ಲಿ ಹೋಗುತ್ತಾರಂತೆ. ಈ ವೇಳೆ ಸ್ಥಳೀಯರು ಅಜ್ಜನ ಕಟ್ಟೆಯ ಬಳಿಯಲ್ಲಿ ಬೆಳಕನ್ನು ಹಾಕಬಾರದು ಎಂದು ಅವರಿಗೆ ಸಲಹೆ ನೀಡುತ್ತಾರಂತೆ. ಆದರೂ ಅದನ್ನು ಲೆಕ್ಕಿಸದೇ ಮುಂದೆ ನಡೆದ ಸಂದರ್ಭ ಅಲ್ಲಿಂದ ಮುಂದೆ ಸಾಗುವಾಗಲೇ ಆ ಮೂರು ಗ್ಯಾಸ್‍ಲೈಟ್‍ಗಳು ಪುಡಿಯಾಗುತ್ತದಂತೆ. ಅಷ್ಟೇ ಅಲ್ಲದೇ ಅವರು ಎಷ್ಟು ನಡೆದರೂ ಸಹ ಅವರು ಮುಟ್ಟಬೇಕಾದ ಸ್ಥಳ ಸಿಗುವುದಿಲ್ಲ, ನಂತರ ಅಜ್ಜನ ಕಟ್ಟೆಯ ಬಳಿ ಬಂದು ತಪ್ಪಾಯಿತೆಂದು ಬೇಡಿಕೊಂಡ ನಂತರವೇ ಅವರು ತಲುಪಬೇಕಾದ ಜಾಗಕ್ಕೆ ತಲುಪಿದರು ಎಂಬ ಕಥೆಯನ್ನು 75ರ ಹರೆಯದ ಭಕ್ತರೊಬ್ಬರು ವಿವರಿಸುತ್ತಾರೆ.

ಅಜ್ಜನೆಂದರೇ ಎಲ್ಲಿಲ್ಲದ ನಂಬಿಕೆ:

 ಕೊರಗಜ್ಜ ಅಥವಾ ಕೊರಗತನಿಯ ಎಂದು ಪ್ರೀತಿಯಿಂದ ಆರಾಧಿಸುವ ಅಜ್ಜನ ಮೇಲೆ ತುಳುನಾಡಿನ ಜನರಿಗೆ ಎಲ್ಲಿಲ್ಲದ ನಂಬಿಕೆ. ಯಾರೂ ಕೈ ಬಿಟ್ಟರೂ ಅಜ್ಜ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ ಮಾತು ಈ ಭಾಗದಲ್ಲಿ ಭಕ್ತರ ಬಾಯಿಯಲ್ಲಿ ಕೇಳಿ ಬರುತ್ತದೆ. ಯಾವುದೇ ಶುಭ ಸಮಾರಂಭದ ಸಂದರ್ಭದಲ್ಲಿ, ಹಟ್ಟಿಯಲ್ಲಿ ದನ ಕರು ಹಾಕುವ ಸಂದರ್ಭ, ಮಗು ಹುಟ್ಟಿದ ಸಂದರ್ಭದಲ್ಲಿ ಅಜ್ಜನಿಗೆ ವಿಶೇಷವಾಗಿ ಮದ್ಯ, ಶೇಂದಿ ಅಥವಾ ಅಜ್ಜನಿಗೆ ಪ್ರಿಯವಾದ ಪದಾರ್ಥಗಳನ್ನು ಭಕ್ತಿಯಿಂದ ನೀಡಲಾಗುತ್ತದೆ. ಹೊಸ ವಾಹನವನ್ನು ಖರೀದಿಸುವರು ಅಜ್ಜನ ಹೆಸರನ್ನು ತಮ್ಮ ವಾಹನದಲ್ಲಿ ಸ್ವಾಮಿ ಕೊರಗಜ್ಜ ಎಂದು ಹಾಕುತ್ತಾರೆ. ಈ ಮೂಲಕ ಅಜ್ಜನನ್ನು ತುಳುನಾಡಿನ ಪ್ರತಿಯೊಬ್ಬರು ಭಕ್ತಿಯಿಂದ ಆರಾಧಿಸುವುದನ್ನು ಕಾಣಬಹುದು.

ಅಗೆಲು ಸೇವೆ ಹಾಗೂ ಕೋಲ ಸೇವೆ:

ಕುತ್ತಾರು ಅಜ್ಜನ ಕಟ್ಟೆಯಲ್ಲಿ ಭಕ್ತಾದಿಗಳಿಂದ ಅಗೇಲು ಸೇವೆ ಹಾಗೂ ಕೋಲ ಸೇವೆ ನಡೆಯುತ್ತದೆ. ಕುತ್ತಾರಿನಲ್ಲಿ ಅಜ್ಜನ ಕಟ್ಟೆಯಲ್ಲಿ ಮಾತ್ರವಲ್ಲದೆ ತುಳುನಾಡಿನಲ್ಲಿ ಅಜ್ಜನ ಕಟ್ಟೆ ಎಂದು ನಂಬುವಲ್ಲಿ ಹರಕೆಯ ಅಗೇಲು ಸೇವೆ ಹಾಗೂ ಕೋಲಗಳನ್ನು ನಡೆಸಲಾಗುತ್ತದೆ. ಅಜ್ಜನಿಗೆ ಹರಕೆಯ ರೂಪದಲ್ಲಿ ನೀಡುವ ಅಗೇಲು ಸೇವೆಯಲ್ಲಿ ಕುಡು ಬಸಳೆ(ಹುರುಳಿ ಹಾಗೂ ಬಸಳೆ)ಯ ಪದಾರ್ಥ, ಮೀನಿನ ಪದಾರ್ಥ, ಕೋಳಿಯ ಪದಾರ್ಥ, ಉಪ್ಪಿನ ಕಾಯಿಯನ್ನು ಬಾಲೆಯ ಎಲೆಯಲ್ಲಿ ಬಡಿಸಲಾಗುತ್ತದೆ. ಚಕ್ಕುಲಿ, ಶೇಂದಿ, ಮದ್ಯ, ಎಲೆ ಅಡಿಕೆ ಈ ಸಂದರ್ಭದಲ್ಲಿ ಬಡಿಸಲಾಗುತ್ತದೆ. ಕುತ್ತಾರು ಕೊರಗಜ್ಜನ ಕಟ್ಟೆಗೆ ಸಂಜೆ 7 ಗಂಟೆಯ ನಂತರ ಮಹಿಳೆಯರಿಗೆ ಪ್ರವೇಶವಿಲ್ಲ. ಪ್ರಾತಃಕಾಲದಿಂದ ಸಂಜೆಯವರೆಗೂ ನೂರಾರು ಭಕ್ತರು ಕ್ಷೇತ್ರಕ್ಕೆ ಬಂದು ಅಜ್ಜನಲ್ಲಿ ಬಂದು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. 

ಅಪಪ್ರಚಾರ ಮಾಡಿದವರನ್ನು ಅಜ್ಜ ಸುಮ್ಮನೆ ಬೀಡುವುದಿಲ್ಲ!
ನಂಬಿದವರನ್ನು ಕೈಬಿಡುವುದಿಲ್ಲ. ಅಪಚಾರ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂಬ ಕೊರಗಜ್ಜನ ಮಾತಿಗೆ ಉದಾಹರಣೆ ಎಂಬಂತೆ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿಯಾಗಿದೆ. ಪಡುಬಿದ್ರೆಯ ಕಟಪಾಡಿ ಪೇಟೆಬೆಟ್ಟುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಅನ್ಯಕೋಮಿನ ಯುವಕರು ಕ್ಷೇತ್ರದ ಕಾಣಿಕೆ ಹುಂಡಿಯ ಹಣ ಕದ್ದು ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ. ಅಷ್ಟೇ ಅಲ್ಲದೇ ಅದೇ ಹುಂಡಿಗೆ ಕಾಂಡೋಮ್ ಹಾಕುತ್ತಾರೆ. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಅವರಲ್ಲಿ ಒಬ್ಬನಿಗೆ ಕಿಡ್ನಿ ಸಂಬಂಧಿ ಕಾಯಿಲೆ ಹಾಗೂ ಮತ್ತೊಬ್ಬನಿಗೆ ಸೊಂಟದ ಕೆಳಗೆ, ಎರಡು ಕಾಲು ಬಲಹೀನವಾಗುತ್ತದೆ. ತಜ್ಞರನ್ನು ಕಂಡು ಪರೀಕ್ಷಿಸಿದರೂ ಪ್ರಯೋಜನವಾಗದೇ ಜ್ಯೋತಿಷಿಯ ಬಳಿ ಕೇಳಿದಾಗ ಅಪಪ್ರಚಾರವಾದ ಬಗ್ಗೆ ತಿಳಿದು ಬರುತ್ತದೆ. ನಂತರ ಅವರು ಈ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಬಂದು ದೈವಗಳ ಮುಂದೆ ಕ್ಷಮೆಯಾಚಿಸಿದ ಘಟನೆಯನ್ನು ಈ ಸಂದರ್ಭದಲ್ಲಿ ನೆಪಿಸಿಕೊಳ್ಳಬಹುದು. 

ಸಾಮಾಜಿಕ ಜಾಲತಾಣಗಳಲ್ಲಿ ಕೊರಗಜ್ಜನ ಬಗ್ಗೆ ಅಪಹಾಸ್ಯ ಮಾಡಿದ್ದ ಮನೋಜ್ ಪಂಡಿತ್ ಎಂಬಾತನ ವಿರುದ್ದ ಕೇಸು ದಾಖಲಾಗಿತ್ತು. ಬಳಿಕ ಈತನ ತಾಯಿಗೆ ತೀವ್ರ ಅನಾರೋಗ್ಯವಾಗಿ ತನ್ನ ತಪ್ಪಿನಿಂದ ಹಾಗೂ ದೈವನಿಂದನೆಯಿಂದ ಹೀಗಾಗಿದೆ ಎಂದು ತಿಳಿದು ನಂತರ ವಿಚಾರವಾದಿಯಾಗಿದ್ದರೂ ಸಹ ಈತನೂ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಹರಕೆ ಒಪ್ಪಿಸಿ ಕ್ಷೆಮೆಯಾಚಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೊರಗ ತನಿಯ ಕೊರಗಜ್ಜನಾದ ಕಥೆ
ಪಣಂಬೂರಿನ ಓಡಿ ಮತ್ತು ಅಚ್ಚು ಮೈರೆದಿ ಎಂಬ ಕೊರಗ ದಂಪತಿಗಳಿಗೆ ಒಂದು ಗಂಡು ಮಗು ಹುಟ್ಟುತ್ತದೆ. ಅವನಿಗೆ ತನಿಯ ಎಂಬ ಹೆಸರನ್ನು ಇಟ್ಟಿದ್ದರು. ತನಿಯಯನಿಗೆ ಕೇವಲ 30ದಿವಸವಾಗುತ್ತಲೇ ಅವನ ತಂದೆ ಮತ್ತು ತಾಯಿ ವಿಧಿವಶವಾಗುತ್ತಾರೆ. ತನಿಯ ಅನಾಥನಾಗುತ್ತಾನೆ. ಅವನು ಅಳುತ್ತಿರುವಾಗ ಬೈದೆರೆ ಜಾತಿಗೆ ಸೇರಿದ ಮೈರಕ್ಕ ಬೈದೆದಿ ಮತ್ತು ಅವರ ಮಗ ಚೆನ್ನಯ್ಯನನ್ನು ತನಿಯ ನೋಡುತ್ತಾನೆ. ಮೈರಕ್ಕನ ಬಳಿ ಬಂದು ಅಮ್ಮಾ ನನಗೆ ಬಟ್ಟೆ ಕೊಡಿ ಎಂದು ಕೇಳುವಾಗ ಅವರು ತನ್ನ ತಲೆಯ ನೀರು ಹೀರಿಕೊಳ್ಳಲು ಕಟ್ಟಿದ ಬಟ್ಟೆಯನ್ನೇ ಆ ಮಗುವಿಗೆ ಕೊಟ್ಟು ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರೆ.
ಮೈರಕ್ಕ ಶೇಂದಿ ಮಾರುವವರಾಗಿದ್ದರು. ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ತನಿಯ ಎಷ್ಟೇ ದೊಡ್ಡ ಕೆಲಸವಾದರೂ ಅದನ್ನು ಮಾಡಿ ಮುಗಿಸುತ್ತಿದ್ದ. ಹೀಗಿರುವಾಗ ಒಂದು ದಿನ ತನಿಯನ ಬಳಿ ತಂದ ಶೇಂದಿಯನ್ನು ಮಂಡೆಗೆ ತುಂಬಿಸಲು ಹೇಳುತ್ತಾರೆ. ಅವನು ತುಂಬಿಸುತ್ತಾನೆ. ಆದರೆ ಇಲ್ಲಿ ವಿಚಿತ್ರ ಏನೆಂದರೆ ಏಳು ರಾತ್ರಿ ಏಳು ಹಗಲು ಕಳೆದರೂ ಶೇಂದಿ ಖಾಲಿಯಾಗುವುದಿಲ್ಲ. ಕಡೆಗೆ ಆ ಶೇಂದಿಯನ್ನು ಕದ್ರಿಯ ಮಂಜುನಾಥ ದೇವರಿಗೆ ಶೇಂದಿ ಎಲ್ಲಾ ಖಾಲಿಯಾದ್ರೆ ಕಂಚಿನ ಪೆÇಡಕೆಯನ್ನು ಅರ್ಪಿಸುತ್ತೇನೆಂದು ಹರಕೆ ಮಾಡುತ್ತಾನೆ. ಆವಾಗ ಶೇಂದಿ ಎಲ್ಲಾ ಖಾಲಿಯಾಗುತ್ತದೆ. ಖಾಲಿಯಾದ ಖುಷಿಯಲ್ಲಿ ತನಿಯನಿಗೆ ಅಡಿಕೆ ಮರದ ಎಲೆಯಿಂದ ಪೆÇಣಲಿಯನ್ನು ಮಾಡಿಕೊಡುತ್ತಾರೆ.

ಹೀಗೆ ಕಾಲ ಕಳೆದಂತೆ ತನಿಯ ದೊಡ್ಡವನಾಗುತ್ತಾನೆ. ಕದ್ರಿಗೆ ಹೇಳಿದ ಹರಕೆಯ ಪ್ರಕಾರ ಮೈರಕ್ಕ ಬೈದಿದಿ ಕಂಚಿನ ಪೆÇಡಕೆಯನ್ನು ಮಾಡಿಸುತ್ತಾಳೆ. ಅದನ್ನು ಎತ್ತಲು ಏಳು ಜನರ ಸಹಾಯ ಬೇಕಿತ್ತು. ಏಳು ಮಂದಿಯ ಊಟ, ಶೇಂದಿ, ಎಲೆ ಅಡಿಕೆಯನ್ನು ತಿಂದು ಏಳು ಜನ ಎತ್ತಿ ಹರಕೆ ತೀರಿಸುವ ಬದಲು ಅವನೊಬ್ಬನೇ ಅದನ್ನೆತ್ತಿಕೊಂಡು ಹೋಗಿ ಕದ್ರಿಯ ದೇವಾಸ್ಥಾನ ಹರಕೆಯನ್ನು ತೀರಿಸುತ್ತಾನೆ. ಅದನ್ನು ನೋಡಿದ ಜನರಿಗೆ ಆಶ್ಚರ್ಯವೆನಿಸುತ್ತದೆ. ತನಿಯ ಒಬ್ಬ ಅಸಾಮಾನ್ಯ ವ್ಯಕ್ತಿ ಎಂದು ಎಲ್ಲರೂ ತಿಳಿಯುತ್ತಾರೆ. ದೈವಸ್ಥಾನದ ಹೊರಗೆ ಮಾಪಾಲ ಹುಳಿಯನ್ನು ತನ್ನ ಹೆಂಡತಿ ಕೊಯ್ಯಲು ಹೋಗುವಾಗ ಮಾಯವಾಗಿ ಮಾಯಾ ಕಲ್ಲಾಗಿ ಅಲ್ಲಿ ನೆಲೆಯಾಗಿ ತುಳುನಾಡಿನ ಶಕ್ತಿಯಾಗಿ ಮೆರೆಯುತ್ತಾನೆ ಎಂದು ಪಾಡ್ದನ ಹೇಳಿದರೆ ಇನ್ನೊಂದು ಪಾಡ್ದನದ ಪ್ರಕಾರ ಮಾಪಲ ಹುಳಿಯನ್ನು ಕೊಯ್ಯಲು ಹೋಗುವಾಗ ಬ್ರಾಹ್ಮಣರು ಅವರನ್ನು ಕಡಿದು ಕೊಲ್ಲಲಾಗಿದೆ. ಅ ಮೇಲೆ ಅವರಿಗೆ ದೋಷ ಕಂಡು ಬರುವಾಗ ಕೊರಗಜ್ಜ ಎಂಬ ಹೆಸರಿನಲ್ಲಿ ನಂಬಿದರು ಎಂಬ ಪ್ರತೀತಿ ಇದೆ. ಇವೆಲ್ಲವೂ ಪಾಡ್ಹನ ಮೂಲಕ ಹೇಳಲಾಗುವ ಕಥೆಗಳಾಗಿದ್ದು ತುಳುನಾಡಿನ ಪ್ರತಿಯೊಂದು ದೈವಗಳ ಇತಿಹಾಸವು ಅಲಿಖಿತವಾಗಿದೆ.

ಕೊರಗಜ್ಜ ಕೋಲ ಸೇವೆ: 

ತುಳುನಾಡಿನ ದೈವರಾಧನೆಯಲ್ಲಿ ಕೋಲ ಸೇವೆ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದು ಕೊರಗ ಪಂಗಡಕ್ಕೆ ಸೇರಿದ ಜನಾಂಗದವರು ಈ ಕೊಲವನ್ನು ಕಟ್ಟುತ್ತಾರೆ.

ತಲೆಗೆ ಪಾಲೆಡ ಮುಟ್ಟಾಳೆ(ಅಡಿಕೆಯ ಹಾಳೆಯಿಂದ ಮಾಡಿದ ಕವಚ)ಸೊಂಟಕ್ಕೆ ಗೆಜ್ಜೆಯ ಪಟ್ಟಿ ಮೈ ತುಂಬಾ ಕಪ್ಪು ಮಸಿಯನ್ನು ಹಾಗೂ ಕೈಯಲ್ಲೊಂದು ಬೆತ್ತವನ್ನು ಹಿಡಿದು  ನರ್ತನವನ್ನು ಮಾಡುತ್ತಾರೆ.ಕೊರಗಜ್ಜನ ಕೋಲದಲ್ಲಿ ಪಾಡ್ಹನ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

Courtesy : Beauty of Tulunad 
ಬರಹ:  Vajra Gujaran ©

ಸರ್ವೆ ಜನ ಸುಖಿನೋಭವಂತು ಸಮಸ್ತ ಸನ್ಮಂಗಳಾಧಿ ಭವಂತು