Sunday, 28 August 2022

ಸರ್ಪದೋಷ

ಸರ್ಪದೋಷಗಳಲ್ಲಿ ಎಷ್ಟು ವಿಧವಾದ ಸರ್ಪದೋಷಗಳಿವೆ  ತೀಳಿಸುವೆ.

1) 3ನೆ  ಮನೆಯಲ್ಲಿ  ರಾಹು  9ನೆ  ಮನೆಯಲ್ಲಿ  ಕೇತು  ಇದ್ರೆ  ವಾಸುಕಿ  ಕಾಲ ಸರ್ಪ  ಯೋಗ ಬರುತ್ತದೆ.

2)  ರಾಹು  1ನೆ ಮನೆಯಲ್ಲಿದ್ದು  ಕೇತು  7ನೆ ಮನೆಯಲ್ಲಿದ್ರ್  ಅನಂತ  ಕಾಳ ಸರ್ಪ  ಯೋಗ ಬರುತ್ತದೆ.

3) ರಾಹು  2ನೆ  ಮನೆಯಲ್ಲಿದ್ದು ಕೇತು  8ನೆ  ಮನೆಯಲ್ಲಿದ್ರ್   ಕುಳಿಕ ಕಾ ಳ ಸರ್ಪ  ಯೋಗ ಬರುತ್ತದೆ.

4)4ನೆ  ಮನೆಯಲ್ಲಿ  ರಾಹು  10ನೆ  ಮನೆಯಲ್ಲಿ  kethu  ಇದ್ದಾಗ  ಶಂಖ ಫಲ  ಕಾಳ್  ಸರ್ಪ ಯೋಗ ಬರುತ್ತದೆ.

5) 5ನೆ  ಮನೆಯಲ್ಲಿ  ರಾಹು  11ನೆ  ಮನೆಯಲ್ಲಿ ಕೇತು  ಇದ್ದಾಗ  ಪದ್ಮಕಾಲ  ಸರ್ಪ  ಯೋಗ ಬರುತ್ತದೆ.

6) 6ನೆ  ಮನೆಯಲ್ಲಿ  ರಾಹು   12 ನೆ  ಮನೆಯಲ್ಲಿ  ಕೇತು  ಇದ್ದಾಗ   ಮಹಾ ಪದ್ಮ ಕಾಲ  ಸರ್ಪ  ಯೋಗ ಬರುತ್ತದೆ.

7)ರಾಹು  7ನೆ  ಮನೆಯಲ್ಲಿ  ಕೇತು  1ನೆ  ಮನೆಯಲ್ಲಿ  ಇದ್ರೆ    ತಕ್ಷಕ  ಕಾಲ ಸರ್ಪ  ಯೋಗ
ಬರುತ್ತದೆ.

8) 8ನೆ  ಮನೆಯಲ್ಲಿ  ರಾಹು  2ನೆ  ಮನೆಯಲ್ಲಿ  ಕೇತು  ಇದ್ರೆ  ಕಾರ್ಕೋಟಕ  ಕಾಲ ಸರ್ಪ  ಯೋಗ ಬರುತ್ತದೆ.

 9)9ನೆ  ಮನೆಯಲ್ಲಿ  ರಾಹು  3ನೆ  ಮನೆಯಲ್ಲಿ  ಕೇತು  ಇದ್ರೆ  ಶಕ್ಚೂಡ ಕಾಲ ಸರ್ಪ ದೋಷ ಬರುತ್ತದೆ.

 10)ಯೋಗರಾಹು  ಹತ್ತನೇ  ಮನೆಯಲ್ಲಿ  ಕೇತು  ನಾಲ್ಕನೇ  ಮನೆಯಲ್ಲಿ  ಇದ್ರೆ   ಘಾತಕ  ಅಥವಾ  ಪಾತಕ  ಕಾಲ  ಸರ್ಪ  ಯೋಗ ಬರುತ್ತದೆ.

ರಾಹು ಮತ್ತು ಕೇತು ಗ್ರಹಗಳ ಮಧ್ಯೆ ಮಿಕ್ಕ 7 ಗ್ರಹಗಳಿದ್ದರೆ❓

11) ರಾಹು  11ನೆ  ಮನೆ ಯಲ್ಲಿದ್ದು  ಕೇತು  5ನೆ  ಮನೆಯಲ್ಲಿ ಇದ್ರೆ   ವಿಷ  ಧರ  ಕಾಲ ಸರ್ಪ ಯೋಗ ಬರುತ್ತದೆ.

12) ರಾಹು  12ನೆ  ಮನೆಯಲ್ಲಿ ಇದ್ಧು  ಕೇತು  6ನೆ  ಮನೆಯಲ್ಲಿ ಇದ್ರೆ   ಶೇಷ ನಾಗ  ಕಾಲ ಸರ್ಪ  ಯೋಗ ಬರುತ್ತದೆ.

ಜೀವನಾವಧಿಯ  42ವರ್ಷ ಧ ವರೆಗೂ  ಕಾಲ ಸರ್ಪ  ಯೋಗ ವು  ತೊಂದರೆ ನೀಡುತ್ತದೆ.
 ನನಗೆ ತಿಳಿದಿರುವ ಪ್ರಕಾರ .....ಕೇತು (ಬಾಲ) ವಿನಿಂದ ರಾಹು ಮಧ್ಯೆ ಎಲ್ಲಾ ಗ್ರಹಗಳು ಸೇರಿದಾಗ..ಇದು ಕಾಲಸರ್ಪ ಯೋಗ...ಎನ್ನುತ್ತಾರೆ..

       
 ರಾಹು (ಬಾಯಿಂದ) ವಿನಿಂದ. ಕೇತು  (ಬಾಲ ) ....ವಿನೊಳಗೆ ಎಲ್ಲಾ ಗ್ರಹಗಳು  ಬಂದರೆ ಇದು ಕಾಲ ಸರ್ಪ ದೋಷ ಎನ್ನುತ್ತಾರೆ....🙏💐

ಶ್ರೀ ಹರಿ.

ಪುಷ್ಷಾ ಆಚಾರ್ಯರು. ಪಿ  (ಮುಂದುವರಿಯುವುದು)

*ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು*.


೧. *ಅರಿಸಿನ:* _ಗೌರಿದೇವೀ._
೨. *ಕುಂಕುಮ:*_ಮಹಾಲಕ್ಷ್ಮೀ_
೩. *ಸಿಂಧೂರ:* _ಸರಸ್ವತೀ_
೪. *ಕನ್ನಡಿ:* _ರೂಪಲಕ್ಷ್ಮೀ._
೫. *ಬಾಚಣಿಗೆ:*_ಶೃಂಗಾರಲಕ್ಷ್ಮೀ._

೬. *ಕಾಡಿಗೆ:*_ಲಜ್ಜಾಲಕ್ಷ್ಮೀ._
೭. *ಅಕ್ಕಿ:*_ಶ್ರೀ ಲಕ್ಷ್ಮೀ._
೮. *ತೊಗರಿಬೇಳೆ :*_ವರಲಕ್ಷ್ಮೀ_
೯. *ಉದ್ದಿನಬೇಳೆ:*_ಸಿದ್ದಲಕ್ಷ್ಮೀ_
೧೦ *ತೆಂಗಿನಕಾಯಿ:*_ಸಂತಾನಲಕ್ಷ್ಮೀ_

೧೧. *ವೀಳ್ಯದ ಎಲೆ:*_ಧನಲಕ್ಷ್ಮೀ_
೧೨. *ಅಡಿಕೆ಼:*_ಇಷ್ಟಲಕ್ಷ್ಮೀ_
೧೩. *ಫಲ (ಹಣ್ಣು):* _ಜ್ಞಾನಲಕ್ಷ್ಮೀ_
೧೪. *ಬೆಲ್ಲ:*_ರಸಲಕ್ಷ್ಮೀ_
೧೫. *ವಸ್ತ್ರ:*_ವಸ್ತ್ರಲಕ್ಷ್ಮೀ_
೧೬. *ಹೆಸರುಬೇಳೆ:* _ವಿದ್ಯಾಲಕ್ಷ್ಮೀ_

 *ಮುತೈದೆ ದೇವತೆಯರು *೧೬ ಜನರು*  
ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..

*ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ,  ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..*

_ಸೀರೆ ಸೆರಗಿನಲ್ಲಿ_ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..

ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ *ವೇಣುಪಾತ್ರ* ಎಂದು ಹೇಳುತ್ತಾರೆ..

ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..

ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ *೧೬* ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..

 *೧೬* ದೇವತೆಗಳು ನಿತ್ಯಸುಮಂಗಲಿಯರು.

ಈ *೧೬* ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..

ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..

೧೬ ಅರಿಸಿನ ದಾರ, 
೧೬ ಗಂಟುಗಳು, 
೧೬ ಬಾಗಿನ, 
೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..

 ದಾನಗಳು ಮತ್ತು ಫಲಗಳು

ನಾವು ಮಾಡುವ ಪೂಜೆ, ವ್ರತಗಳಲ್ಲಿ ಬಾಗಿನ ಕೊಡುವ ಪದ್ಧತಿ ಇದೆ. ದೇವಿಗೆ ಮಾಡುವ ಪೂಜೆಗಳಲ್ಲಿ ಇದು ಸಾಮಾನ್ಯ. ಬಾಗಿನವನ್ನು ಮರದ ಜೊತೆಯಲ್ಲಿ ಇಟ್ಟು ಕೊಡುತ್ತಾರೆ.

 ಬಾಗಿನದ ಸಾಮಾನುಗಳ ಪಟ್ಟಿ ಇಲ್ಲಿದೆ:

1 ಜೊತೆ ಮೊರ - ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಿ

ಧಾನ್ಯಗಳು - ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ

ಬೆಲ್ಲದ ಅಚ್ಚು,ಉಪ್ಪು,ತೆಂಗಿನಕಾಯಿ,ಹಣ್ಣು

ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ

ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ರವಿಕೆ ಬಟ್ಟೆ

*೧. ಅರಿಸಿನ ದಾನ 
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

*೨. ಕುಂಕುಮ ದಾನ 
 ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
ದೃಷ್ಟಿದೋಷ ನಿವಾರಣೆ ಆಗುತ್ತದೆ..
ಕೋಪ, ಹಠ,ಕಮ್ಮಿ ಆಗುತ್ತದೆ..

*೩. ಸಿಂಧೂರ ದಾನ:*
 ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

*೪. ಕನ್ನಡೀ(ರೂಪಲಕ್ಷ್ಮೀ) 
 ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

*೫. ಬಾಚಣಿಗೆ :
ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

*೬. ಕಾಡಿಗೆ 
  ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

*೭. ಅಕ್ಕಿ :
ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌
ಆರೋಗ್ಯಭಾಗ್ಯವಾಗುತ್ತದೆ..
ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

*೮. ತೊಗರಿಬೇಳೆ :
 ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.
ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
ರಕ್ತದೊತ್ತಡ (B.P) (normal) ನಾರಮಲ್ ಆಗಿ ಆರೋಗ್ಯವಂತರಾಗುತ್ತಾರೆ..
ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

*೯. ಉದ್ದಿನ ಬೇಳೆ  
 ಪಿತೃಶಾಪ ನಿವಾರಣೆಯಾಗುತ್ತದೆ..
ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
ಅಪಮೃತ್ಯುಗಳು ನಿವಾರಣೆಯಾಗುತ್ತದೆ..
ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

*೧೦. ತೆಂಗಿನಕಾಯಿ :
 ಇಷ್ಟಾರ್ಥಸಿದ್ಧಿಯಾಗುತ್ತದೆ.. , 
ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

*೧೧. ವೀಳ್ಯದೆಲೆ :
 ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

*೧೨. ಅಡಿಕೆ :
 ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ".!
ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..
ಬರೀ ಅಡಿಕೆಯನ್ನು ತಿಂದರೆ " ಬ್ರಹ್ಮಹತ್ಯಾ" ದೋಷ ಬರುವುದು.
ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

*೧೩. ಫಲದಾನ   
ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..
ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ಼.‌.

ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

*೧೪. ಬೆಲ್ಲ (ರಸಲಕ್ಷ್ಮೀ) :
 ಬೆಲ್ಲದ ಅಭಿಮಾನ ದೇವತೆ "ರಸಲಕ್ಷ್ಮೀ"..
ಬೆಲ್ಲದಲ್ಲಿ " ಬ್ರಹ್ಮದೇವರು" , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..

ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..
ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..

*೧೫. "ವಸ್ತ್ರಲಕ್ಷ್ಮೀ" :
 ಸುಮಂಗಲಿಯರು ಪ್ರತ್ಯಕ್ಷ "ಸ್ತ್ರೀದೇವತೆ" ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..
ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..
ಹೀಗೆ ಮಾಡುವದರಿಂದ "ವಸ್ತ್ರ" ದಾರಿದ್ರ್ಯ ನಿವಾರಣೆಯಾಗುತ್ತದೆ..
ಕುಲದೇವತೆ ತೃಪ್ತಿಯಾಗುತ್ತದೆ..
ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..

*೧೬. "ಹೆಸರುಬೇಳೆ" 
 ವಿದ್ಯಾಲಕ್ಷ್ಮೀ -  
 ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ  ಎಲ್ಲರಿಗೂ ಸಂತೋಷವಾಗುತ್ತದೆ..
ವಿದ್ಯೆ ಎಂದರೆ "ಸರಸ್ವತೀ", ಲಕ್ಷ್ಮೀ ಎಂದರೆ " ಶ್ರೀ ಮಹಾಲಕ್ಷ್ಮೀ" ಎಂದು ಅರ್ಥ..
ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..
ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..
ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ಼..
ದೇವಿಗೆ "ಹೆಸರುಬೇಳೆ" ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..
ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ಼.‌
ಗ್ಯಾಸ್, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ..

*ಮೊರದ ಜೊತೆ ಬಾಗಿನ*

ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು - ಗೆಜ್ಜೆವಸ್ತ್ರ, ಶ್ರೀಗಂಧ, ಊದಿನ ಕಡ್ಡಿ, ಇತ್ಯಾದಿ ಇಡುತ್ತಾರೆ. ಸ್ವರ್ಣ ಗೌರಿ ವ್ರತ, ಮಂಗಳ ಗೌರಿ ವ್ರತ, ಮಾರ್ಗಶಿರಮಹಾಲಕ್ಷ್ಮಿ ವ್ರತ, ಸಿರಿಯಾಳ ಷಷ್ಠಿ ಮುಂತಾದ ಪೂಜೆಗಳಲ್ಲಿ ಬಾಗಿನ ಕೊಡುತ್ತಾರೆ. ಮೊರದ ಜೊತೆ ಬಾಗಿನವನ್ನು ಸುಮಂಗಲಿಯರಿಗೆ ಕೊಟ್ಟು ಆಶೀರ್ವಾದ ಪಡೆದುಕೊಳ್ಳುವ ಪದ್ಧತಿ ಇದೆ.

ಸಾಮಾನ್ಯವಾಗಿ ಎಲ್ಲ ಸಾಮಾನುಗಳನ್ನೂ ದೊಡ್ಡ ಮೊರದ ಒಳಗೆ  ಪೂಜಾ ಸಮಾನು ಮಾರುವ ಆಂಗಡಿಗಳಲ್ಲಿ ಸಿಗುತ್ತದೆ. ನಾನೂ ಇಂತಹದನ್ನೆ ಉಪಯೂಗಿಸಿದ್ದೀನಿ. ಚಿಕ್ಕಮೊರದಲ್ಲಿ ಎಲ್ಲ ಸಾಮಾನು ಹಿಡಿಸುವುದಿಲ್ಲ . ಹೀಗಾಗಿ ಒಂದು ದೊಡ್ಡ ಮರ ಅಥವ ಡಬ್ಬಿ ಯಲ್ಲಿ ಎಲ್ಲ ಸಾಮಾನು ಇಟ್ಟು ಬಾಗಿನ ಕೊಡಬಹುದು

ಈ ವಿಚಾರಗಳು ತುಂಬಾ ಇದೆ಼, ಎಲ್ಲರೂ ವಿಚಾರಗಳನ್ನು ತಿಳಿದುಕೊಂಡು ಆಚರಿಸಲಿ ಎಂಬ ಕಾರಣಕ್ಕೆ ತಿಳಿಸೋ ಒಂದು ಪ್ರಯತ್ನ ಅಷ್ಟೇ.

ಗೌರಿ ಪ್ರತಿಯೊಂದು ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳು ಕೊಟ್ಟರೆ ಆ ಗಂಡು ಮಕ್ಕಳಿಗೆ  ಹಾಗೂ ತೆಗೆದುಕೊಂಡ
ಹೆಣ್ಣು ಮಕ್ಕಳಿಗೆ ಶುಭವಾಗುವುದು.

ಹೆಣ್ಣು ಮಕ್ಕಳು ನಿಮ್ಮ ಒಡಹುಟ್ಟಿದವರೆ ಆಗಬೇಕು ಅಂತಿಲ್ಲ ಸಹೋದರ ಸಹೋದರಿಯರ ಮನೋಭಾವ ಇರಬೇಕು ಆಷ್ಟೆ.

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Saturday, 27 August 2022

ಪೂಜೆಯಲ್ಲಿ ನಿಷಿದ್ಧ ಕಾರ್ಯಗಳು



1 ಗಣೇಶನಿಗೆ ತುಳಸಿ ಏರಿಸಬಾರದು. 
2 ಅಮ್ಮನವರಿಗೆ ದೂರ್ವೆ ಏರಿಸಬಾರದು. 
3 ಶಿವಲಿಂಗಕ್ಕೆ ಕೇತಕೀಪುಷ್ಪ ಏರಿಸಬಾರದು.
4 ವಿಷ್ಣುವಿಗೆ ಅಕ್ಷತೆಯ ತಿಲಕ ಇಡಬಾರದು. 
5 ಒಂದೇ ಪೂಜಾಕೋಣೆಯಲ್ಲಿ ಎರಡು (ಸಾಲಿಗ್ರಾಮ) ಶಂಖಗಳಿರಬಾರದು.
6 ಒಂದು ದೇವಸ್ಥಾನದಲ್ಲಿ ಮೂರು ಗಣೇಶವಿಗ್ರಹಗಳನ್ನು ಇಡಬಾರದು. 
7 ತುಳಸೀ ದಳಗಳನ್ನು ಜಗಿದು ತಿನ್ನಬಾರದು. 
8 ದೇವಾಲಯದ ಮುಖ್ಯದವಾರದ ಎದುರು ಕೆಳಗೆ  ಚಪ್ಪಲಿ ಶೂಗಳನ್ನು ಬಿಡಬಾರದು. 
9 ದೇವರ ದರ್ಶನ ಮಾಡಿ  ಹಿಂತಿರುಗುವಾಗ ಗಂಟೆ ಬಾರಿಸಬಾರದು. 
10 ಆರತಿಯನ್ನು ಒಂದೇ ಕೈಯಿಂದ ತೆಗೆದುಕೊಳ್ಳಬಾರದು. 
11 ಮನೆಯಲ್ಲಿ ಪೂಜಿಸುವ ಶಿವಲಿಂಗ ಹೆಬ್ಬೆರಳಿಗಿಂತ ದೊಡ್ಡದಿರಬಾರದು. 
12 ಶಿವಲಿಂಗವನ್ನು ತುಳಸೀಗಿಡದಲ್ಲಿ ಇಡಬಾರದು. 
13 ಗರ್ಭಿಣಿಯರು ಶಿವಲಿಂಗವನ್ನು ಮುಟ್ಟಬಾರದು. 
14 ದೇವಸ್ಥಾನದಲ್ಲಿ ಸ್ತ್ರೀಯರು ತೆಂಗಿನ ಕಾಯಿ ಒಡೆಯಬಾರದು. 
15 ಕುಟುಂಬದಲ್ಲಿ ಸೂತಕ ಇದ್ದಾಗ ಪೂಜಿಸುವ ವಿಗ್ರಹಗಳನ್ನು ಮುಟ್ಟಬಾರದು. 
16 ಶಿವನಿಗೆ ಪೂರ್ಣ ಪ್ರದಕ್ಷಿಣೆ ಬರಬಾರದು. 
17 ಶಿವನ ಅಭಿಷೇಕದ ತೀರ್ಥ ಹರಿಯುತ್ತಿದ್ದರೆ ಅದನ್ನು ದಾಟಬಾರದು. 
18 ಒಂದು ಕೈಯಿಂದ ನಮಸ್ಕರಿಸಬಾರದು. 
19 ನೀವು ಹಚ್ಚುವ ದೀಪವನ್ನು ಬೇರೆಯವರು ಹಚ್ಚಿದ ದೀಪದಿಂದ ಹಚ್ಚಬಾರದು. 
20 ತೀರ್ಥ ತೆಗೆದುಕೊಳ್ಳುವಾಗ ಬಲಗೈ ಕೆಳಗೆ ಒಂದು ಕರವಸ್ತ್ರವನ್ನೋ ನ್ಯಾಪ್ ಕಿನ್ ಆಗಲೀ ಇಟ್ಟುಕೊಳ್ಳಬೇಕು, ತೀರ್ಥದ ಒಂದು ಹನಿಯೂ ಕೆಳಕ್ಕೆ ಬೀಳಬಾರದು. 
21 ತೀರ್ಥ ಕುಡಿದು ಕೈಯನ್ನು ತಲೆಗೆ ಅಥವಾ ಶಿಖೆಗೆ ಒರೆಸಿಕೊಳ್ಳಬಾರದು. ಬದಲಿಗೆ ಕಣ್ಣುಗಳಿಗೆ ಹಚ್ಚಿಕೊಳ್ಳಬೇಕು, ಗಾಯತ್ರಿಯು ಶಿಖೆಯಲ್ಲಿ ನೆಲೆಸಿರುತ್ತಾಳೆ, ದೇವಿಗೆ ಅಪವಿತ್ರತೆ ಉಂಟಾಗುತ್ತದೆ. 
22 ದೇವರಿಗೆ ಹಣ ಇತ್ಯಾದಿ ದುರಾಸೆ ತೋರಿಸಬಾರದು, 
23 ಸ್ತ್ರೀಯರು ಹನುಂತ ದೇವರನ್ನು  ಶನಿದೇವರನ್ನು ಮುಟ್ಟಿ ನಮಿಸಬಾರದು. 
24 ಅವಿವಾಹಿತ ಸ್ತ್ರೀಯರು ಹನುಮಂತದೇವರ,  ಶನಿದೇವರ ಕಾಲಿಗೆ ಬೀಳದೇ ನಿಂತೇ ನಮಿಸಬೇಕು. 
25 ದೇವಸ್ಥಾನದ, ಅಥವಾ ಪೂಜಾಕೋಣೆಯ ಆವರಣವನ್ನು  ಯಾವಾಗಲೂ ಶುಚಿಯಾಗಿಟ್ಟುಕೊಳ್ಳಬೇಕು. 
26 ದೇವಾಲಯದಲ್ಲಿ ಜನಜಂಗುಳಿಯಿದ್ದಾಗ ಭಗವಂತನ ನಾಮ ಸ್ಮರಣೆಮಾಡುತ್ತ ನಿಮ್ಮ ಸರದಿಯಲ್ಲಿ ಮುಂದೆ ಹೋಗುತ್ತಿರಬೇಕು. 
27 ಭೈರವ ದೇವಾಲಯವನ್ನು ಬಿಟ್ಟು ಉಳಿದ ದೇವಾಲಯಗಳಲ್ಲಿ ಕುಡುಕರು  ಪ್ರವೇಶಿಸಬಾರದು. 
28 ದೇವಾಲಯವನ್ನು ಪ್ರವೇಶಿಸುವ ಮೊದಲು  ಬಲಗಾಲನನಿಟ್ಟು ಮತ್ತು ದೇವಾಲಯದಿಂದ ಹಿಂತಿರುಗುವಾಗ ಮೊದಲು ಎಡಗಾಲನ್ನು ಹೊರಗಿಟ್ಟು ಹೋಗಬೇಕು. 
29 ದೇವಸ್ಥಾನದಲ್ಲಿ ಗಂಟೆಯನ್ನು ಬಹಳ ಜೋರಾಗಿ ಕರ್ಕಶವಾಗಿ ಬಾರಿಸಬಾರದು. 
30 ಸಾಧ್ಯವಾದರೆ ದೇವಸ್ಥಾನಕ್ಕೆ ಹೋಗಿಬರಲು ಬೇರೆ ಜೊತೆ  ಬಟ್ಟೆಗಳನ್ನೇ ಇಟ್ಟುಕೊಂಡು, ಧರಿಸಿ ಹೋಗಬೇಕು.  
31 ದೇವಾಲಯ ಬಹಳ ದೂರ ಇಲ್ಲದಿದ್ದರೆ ಶೂ, ಚಪ್ಪಲಿ ಹಾಕದೇ ಹೋಗಬೇಕು. 
32 ದೇವರ ದರ್ಶನವನ್ನು ನಿಂತು ತೆರೆದ ಕಣ್ಣುಗಳಿಂದ ಪಡೆದು ಹಾಗೆಯೇ ಹಿಂತಿರುಗಬಾರದು, ಎರಡು ನಿಮಿಷ ಕುಳಿತು ದೇವರ ದರ್ಶನದ ಮಾಧುರ್ಯವನ್ನು ಅನುಭವಿಸಬೇಕು. 
33 ಆರತಿ ತೆಗೆದುಕೊಂಡ ಅನಂತರ ಅಥವಾ ದೀಪ ಮುಟ್ಟಿದ ಅನಂತರ ಕೈ ತೊಳೆದುಕೊಳ್ಳಬೇಕು.
ಇವುಗಳನ್ನು ಪ್ರಾಚೀನ ಋಷಿಗಳು  ತಿಳಿಸಿಕೊಟ್ಟಿದ್ದಾರೆ.

Wednesday, 24 August 2022

ವಿನಾಯಕನ ಲೋಕ - ಸ್ವಾನಂದ ಲೋಕ!

ವಿನಾಯಕನ ಲೋಕ - ಸ್ವಾನಂದ ಲೋಕ!
ಸತ್ಯಲೋಕದಲ್ಲಿ ಬ್ರಹ್ಮ, ವೈಕುಂಠದಲ್ಲಿ ಮಹಾವಿಷ್ಣು, ಕೈಲಾಸದಲ್ಲಿ ಮಹೇಶ್ವರ.. ಹೀಗೆ ಒಬ್ಬೊಬ್ಬ ದೇವನಿಗೂ ಒಂದೊಂದು ಲೋಕ. ಹಾಗಿದ್ದಲ್ಲಿ ವಿಶ್ವಮಾನ್ಯನಾದ ವಿನಾಯಕ ಇರುವ ಲೋಕ ಯಾವುದು? ಗಣೇಶ ತನ್ನ ಅಪ್ಪ- ಅಮ್ಮನ ಜೊತೆ ಕೈಲಾಸದಲ್ಲೇ ವಿರಾಜಮಾನನಾಗಿರುತ್ತಾನೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ'ಶ್ರೀ ಗಣೇಶ ಪುರಾಣ'ದ ಉಪಾಸನ ಖಂಡದ51ನೇ ಅಧ್ಯಾಯದಲ್ಲಿ ಹೇಳಿರುವಂತೆ ಗಣೇಶನಿಗೆ ಪ್ರತ್ಯೇಕ ಲೋಕವಿದೆ. 'ಸ್ವಾನಂದ ಲೋಕ' ಎಂದು ಅದರ ಹೆಸರು. ಇದನ್ನು ʼನಿಜಲೋಕʼ, ʼದಿವ್ಯಲೋಕʼವೆಂದೂ ಕರೆಯುತ್ತಾರೆ.
ಪುರಾಣಗಳಲ್ಲಿ ವರ್ಣಿಸಲ್ಪಟ್ಟಿರುವ ಇತರ ಲೋಕಗಳಿಗಿಂತ ಗಣೇಶನ ಲೋಕಕ್ಕೆ ಪ್ರತ್ಯೇಕ ಸ್ಥಾನವಿದೆ. ಈ ಲೋಕ ಐದು ಸಾವಿರ ಯೋಜನಗಳಷ್ಟು ವಿಸ್ತಾರವಾದುದು. ರತ್ನಖಚಿತವಾದ ಸುವರ್ಣಭೂಮಿಯಲ್ಲಿ ಹತ್ತು ದಿಕ್ಕುಗಳನ್ನು ಬೆಳಗುತ್ತ ಸಮಷ್ಟಿ ವೃಷ್ಟಿರೂಪ ಜಗದಾತ್ಮಕವಾಗಿ ವಿನಾಯಕನು ಇಲ್ಲಿ ನೆಲೆಸಿದ್ದಾನೆ.
ಲೋಕದ ತುಂಬೆಲ್ಲ ಇಕ್ಷು ಸಾಗರ (ಕಬ್ಬಿನ ರಸದ ಸಮುದ್ರ). ಅದರ ಮಧ್ಯೆ ಸಾವಿರ ದಳಗಳ ಶ್ವೇತ ಕಮಲದ ಕರ್ಣಿಕೆಯಲ್ಲಿ ರತ್ನಖಚಿತವಾದ ಸುವರ್ಣ ಮಂಚ ಶೋಭಿಸುತ್ತಿದೆ. ಆ ಮಂಚದ ಮೇಲೆ ಬಾಲ ಸ್ವರೂಪಿಯಾಗಿ, ರಕ್ತವರ್ಣದ ಪೀತಾಂಬರವನ್ನು ಧರಿಸಿದ, ಅರ್ಧಚಂದ್ರಕಿರೀಟ, ಮುತ್ತು ಮಣಿ ಮಾಣಿಕ್ಯಾದಿ ಹೊನ್ನಾಭರಣ ಧರಿಸಿದ, ತ್ರಿನೇತ್ರಧಾರಿಯಾದ, ಶಯನಭಂಗಿಯಲ್ಲಿ ಇರುವ(ಯೋಗ ನಿದ್ರಾರೂಢನಾದ) ವಿನಾಯಕ ವಿರಾಜಿಸುತ್ತಿದ್ದಾನೆ.
ಸರ್ವಸಿದ್ಧಿಗಳಿಗೂ ಕಾರಣರಾದ ಸಿದ್ಧಿ-ಬುದ್ಧಿ ದೇವಿಯರು ಗಣಪನ ಪಾದ ಪೂಜಿಸುತ್ತ, ಅಣಿಮಾ-ಗರಿಮಾದೇವಿಯರು ಶ್ವೇತ ಚಾಮರ ಸೇವೆಗೈಯುತ, ಜ್ವಾಲಿನಿ-ತೇಜಿನಿ ದೇವಿಯರಿಬ್ಬರೂ ದೇವದೇವನ ಎರಡೂ ಪಾರ್ಶ್ವಗಳಲ್ಲಿ ಪುಷ್ಪಾರ್ಚನೆಗೈಯುತ್ತ ಛತ್ರಿಯನ್ನು ಹಿಡಿದು ಶೋಭಿಸುತ್ತಿರುತ್ತಾರೆ. ಮಹಿಮಾ-ಪ್ರತಿಮೆಯರಿಗೆ ದೇವನ ದೃಷ್ಟಿ ಗೋಚರವಾಗಿ ಸಮೀಪದಲ್ಲೇ ರತ್ನಖಚಿತ ಸುವರ್ಣ ಜಲಪಾತ್ರೆ ಹಿಡಿದು ನಿಂತಿರುತ್ತಾರೆ.
ಸಾಮವೇದ ಪುರುಷನು ಗಣೇಶನ ಮಹಿಮೆಯನ್ನು ಗುಣಗಾನ ಮಾಡುತ್ತಿರುತ್ತಾನೆ. ಎಲ್ಲ ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೂರ್ತಿವತ್ತಾಗಿ ಬಂದು ಶ್ರೀ ಗಣೇಶನ ಮಹಿಮೆಯನ್ನು ಕೊಂಡಾಡುತ್ತಿರುತ್ತವೆ. ಈ ಎಲ್ಲ ರಸಮಯ ಸನ್ನೀವೇಶಗಳನ್ನು ಒಳಗೊಂಡ 'ಸ್ವಾನಂದ ಲೋಕ'ವನ್ನು ನೆನೆಯುವುದೇ ನೀಡುವುದು ಒಂದು ಅಲೌಕಿಕ ಆನಂದ!
ಸ್ವಾನಂದ ಲೋಕದ ಬಾಲಗಣಪನ ದೇಗುಲವನ್ನು ಕನಕಪುರ ರಸ್ತೆಗೆ ಮೂರು ಕಿ.ಮೀ ದೂರದಲ್ಲಿರುವ ತಾತಗುಣಿಯ ಅಗರ ಗ್ರಾಮದ ಸ್ವಾನಂದಾಶ್ರಮದಲ್ಲಿ ಕಾಣಬಹುದು. ಒಂಬತ್ತು ಎಕರೆ ವಿಸ್ತೀರ್ಣದ ದೇವಾಲಯದ ಸಂಕೀರ್ಣ ಪ್ರದೇಶವು ಹಚ್ಚ ಹಸಿರಿನ ಉದ್ಯಾನವನಗಳನ್ನು ಹೊಂದಿದೆ, ಇದು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತದೆ.   ಆಶ್ರಮವು ಮುಖ್ಯ ದೇವಾಲಯದ ಸುತ್ತಲೂ, ಸತ್ಯ ಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಹೀಗೆ ನಾಲ್ಕು ಯುಗದ ಗಣಪತಿಗಳಿಗೆ ನಾಲ್ಕು ದೇವಾಲಯಗಳು ಮತ್ತು ಗಣಪತಿಯ ವಿವಿಧ ಅಭಿವ್ಯಕ್ತಿಗಳ 32 ವಿಗ್ರಹಗಳನ್ನು ಹೊಂದಿದೆ.  ಸ್ವಾನಂದಾಶ್ರಮ ಸಂಕೀರ್ಣದಲ್ಲಿ ಸುಬ್ರಹ್ಮಣ್ಯ ದೇವರಿಗೆ ಮತ್ತು ಪಾರ್ವತಿ ದೇವಿಗೆ ಮತ್ತೊಂದು ದೇವಾಲಯವಿದೆ.  ಇಲ್ಲಿ ಪಾರ್ವತಿ ದೇವಿ ಹಾವಿನ ಮೇಲೆ ಕುಳಿತಿದ್ದಾಳೆ. ಇಲ್ಲಿನ ಗೋಶಾಲೆಯಲ್ಲಿ ಗೋವುಗಳನ್ನು ನೋಡಿಕೊಳ್ಳಲಾಗುತ್ತಿದೆ.  ಆಶ್ರಮವು ಸುತ್ತಲಿನ ಗ್ರಾಮೀಣ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ, ಇತರ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತೊಡಗಿಸಿಕೊಂಡಿದೆ.
ಜೀವನದಲ್ಲಿ ಕೆಲವೊಮ್ಮೆ ಕೆಲವೊಂದು ಅಲೌಕಿಕ ಅನುಭೂತಿಯ ಸಂದರ್ಭಗಳು ತಾನೇ ತಾನಾಗಿ ಸಹಜವಾಗಿ ಬಂದೊದಗುತ್ತವೆ. ಎಂದೋ ಘಟಿಸಬೇಕಾದ ಧನಾತ್ಮಕ ಘಟನೆಗಳು ಎಂದೋ ಒಂದು ದಿನದಿಂದ ಇದ್ದಕ್ಕಿದ್ದಂತೆಯೇ ಆರಂಭವಾಗಿ ಬಿಡುತ್ತದೆ. ಇತ್ತೀಚೆಗೆ ನನ್ನ ಗೆಳತಿಯರೊಂದಿಗೆ ಆಕಸ್ಮಿಕವಾಗಿ ಸ್ವಾನಂದ ಗಣಪತಿಯನ್ನು ದರ್ಶಿಸುವ ಸೌಭಾಗ್ಯ ನನಗೆ ದೊರೆಯಿತು. ಸ್ವಾನಂದ ಗಣಪತಿಯ ದೇವಾಲಯದ ದ್ವಾರವನ್ನು ದಾಟಿ ಒಳಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ಸ್ವಾನಂದದ ಅನುಭವವಾಯಿತು. ಪರಿಸರ ಅತ್ಯಂತ ಪ್ರಶಾಂತವಾಗಿತ್ತು. ತಾನೇ ತಾನಾಗಿ ಸಹಜವಾಗಿ ನನ್ನೊಳಗೆ ಭಕ್ತಿಭಾವ ಮೂಡಿತು. ಹಲವಾರು ವರುಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರೂ, ಒಮ್ಮೆಯೂ ಸ್ವಾನಂದಾಶ್ರಮಕ್ಕೆ ಹೋಗಿರಲಿಲ್ಲ.  ಬಹುಶಃ ಇದು ದೇವರೇ ನನಗೆ ಒದಗಿಸಿದ ಒಂದು ಸುಯೋಗ!
ನಾವು ಒಂದು ಕ್ಷೇತ್ರದ ದೇವರನ್ನು ದರ್ಶನ ಮಾಡಲೆಂದೇ ಹೋಗುವುದು ಬೇರೆ.  ಒಂದು ಕ್ಷೇತ್ರದ ದೇವರೇ ನಮ್ಮನ್ನು ದರ್ಶಿಸಲು ಬಾ ಎಂದು ಕರೆಸಿಕೊಳ್ಳುವುದೇ ಬೇರೆ!  ಈ ಎರಡರಲ್ಲಿ ಎರಡನೆಯದು ಅತ್ಯಂತ ಶ್ರೇಷ್ಠವೆಂದು ನನ್ನ ಭಾವನೆ! ಒಂದನೆಯದು ನಮ್ಮಿಚ್ಛೆ, ಎರಡನೆಯದು ದೈವೇಚ್ಛೆ! ಒಂದನೆಯದು ನಮ್ಮಿಂದ ನಿರ್ಧಾರಿತ, ಎರಡನೆಯದು ದೈವ ನಿರ್ಧಾರಿತ.  ಎರಡನೆಯದಕ್ಕೆ ತಾನೇ ತಾನಾಗಿ ಕಾಲ ಕೂಡಿಬರಬೇಕು, ಯೋಗ ಕೂಡಿ ಬರಬೇಕು.  ಹಾಗೆ ಕೂಡಿ ಬಂದ ಯೋಗವೇ ನಮ್ಮ ಪಾಲಿಗೆ ಅದೃಷ್ಟವೆಂದು ಭಾವಿಸಿ ನಮ್ಮ ಕೈಲಾದ ಸೇವೆಯನ್ನು ಮಾಡಬೇಕು. ಆತ್ಮೀಯ ಬಂಧುಗಳೇ, ನಿಮಗೂ ಸಹ ಇಂತಹ ಸುಯೋಗ ಕೂಡಿ ಬರಬಹುದು, ಸ್ವಾನಂದ ಗಣಪತಿ ನಿಮ್ಮನ್ನೂ ಸ್ವಾಗತಿಸಬಹುದು!.. ಅಂತಹ ಸುಯೋಗ ನಿಮಗೂ ಕೂಡಿ ಬರಲಿ.

ಶ್ರೀಕೃಷ್ಣರ್ಪಣಮಸ್ತು

Wednesday, 3 August 2022

Garuda Purana: ಮರಣಾನಂತರ ಸುಮಾರು 12 ಲಕ್ಷ ಕಿ.ಮೀ ದೂರ ಕ್ರಮಿಸುತ್ತವೆ ಆತ್ಮ; ಎದುರಾಗುವ ಕಷ್ಟಗಳು ಎಂಥವು ಗೊತ್ತಾ?

ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟು, ಬದುಕು, ಸಾವು ಇವೆಲ್ಲವೂ ನಂಬಿಕೆಗಳಿಂದಲೇ ಹೆಣೆಯಲ್ಪಟ್ಟಿವೆ. ಹುಟ್ಟು ಪೂರ್ವಜನ್ಮದ ಫಲ ಎಂದು ನಂಬಲಾಗುವಂತೆಯೇ, ಈ ಜನ್ಮದ ಫಲಗಳನ್ನು ಸಾವಿನ ನಂತರ ಅನುಭವಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ. ಈ ಕುರಿತು ಗರುಡ ಪುರಾಣದಲ್ಲೂ ಕೆಲ ಅಂಶಗಳಿದ್ದು, ಯಾರು ಪಾಪಕರ್ಮಗಳನ್ನೆಸಗಿ ಸಾಯುತ್ತಾರೋ ಅವರು ಮರಣಾನಂತರ ಅಷ್ಟೇ ಕಠಿಣ ಶಿಕ್ಷೆಯನ್ನು ಎದುರಿಸುತ್ತಾರೆ ಎಂದೆನ್ನಲಾಗಿದೆ. ಬದುಕಿರುವಾಗ ಇನ್ನೊಬ್ಬರಿಗೆ ಉದ್ದೇಶಪೂರ್ವಕವಾಗಿಯೇ ಮೋಸ ಮಾಡಿದವರಿಗೆ, ವಂಚಿಸಿದವರಿಗೆ, ಹಿಂಸಿಸಿದವರಿಗೆ ಸತ್ತ ಮೇಲೆ ಸಿಗುವ ಘನಘೋರ ಶಿಕ್ಷೆಗಳು ಎಂಥವು ಎಂದು ತಿಳಿಯುತ್ತಾ ಹೋದರೆ ಎಂತಹ ಗಟ್ಟಿಗರೂ ಒಮ್ಮೆ ನಡುಗಬೇಕು.

ಗರುಡ ಪುರಾಣದಲ್ಲಿ ಹೇಳುವಂತೆ ಮರಣಾನಂತರ ಆ ವ್ಯಕ್ತಿಯನ್ನು ಒಂದು ದಿನದ ಸಲುವಾಗಿ ಯಮಲೋಕಕ್ಕೆ ಕರೆದುಕೊಂಡು ಹೋಗಲಾಗುತ್ತದೆಯಂತೆ. ಅಲ್ಲಿ ಅವರ ಜೀವನದ ಪುಣ್ಯ, ಪಾಪಗಳ ಪಟ್ಟಿಯನ್ನು ಲೆಕ್ಕ ಹಾಕಲಾಗುತ್ತದೆ. ನಂತರ ಅದೆಲ್ಲವನ್ನೂ ಪರಿಶೀಲಿಸಿ ಕರ್ಮಗಳ ಆಧಾರದ ಮೇಲೆ ಆ ವ್ಯಕ್ತಿಯನ್ನು ಸ್ವರ್ಗಕ್ಕೆ ಕಳುಹಿಸಬೇಕೋ ಅಥವಾ ನರಕಕ್ಕೆ ನೂಕಬೇಕೋ ಎನ್ನುವ ತೀರ್ಮಾನವಾಗುತ್ತದೆ.

ಒಂದುವೇಳೆ ಬದುಕಿನಲ್ಲಿ ಜಾಸ್ತಿ ಪುಣ್ಯಕಾರ್ಯಗಳನ್ನು ಮಾಡಿದ್ದರೆ ಅವರಿಗೆ ಕುಟುಂಬಸ್ಥರು ಪಿಂಡಪ್ರದಾನ ಮಾಡುತ್ತಿದ್ದಂತೆಯೇ ಸ್ವರ್ಗದ ಬಾಗಿಲು ತೆರೆದುಕೊಳ್ಳುತ್ತದೆ. ಅಪ್ಪಿತಪ್ಪಿ ಪಾಪಕೃತ್ಯಗಳನ್ನೇ ಹೆಚ್ಚು ಎಸಗಿದ್ದರೆ ಅವರಿಗೆ ನರಕ ಕಟ್ಟಿಟ್ಟಬುತ್ತಿ. ಅದು ಕೂಡಾ ನರಕದತ್ತ ಬೆಳೆಸುವ ಪಯಣ ತೀರಾ ಕಷ್ಟಕರವಾಗಿರಲಿದ್ದು ಅಲ್ಲಿಗೆ ತಲುಪಲು 99 ಸಾವಿರ ಯೋಜನಗಳ ದೂರ ಕ್ರಮಿಸಬೇಕು. ಅಂದರೆ, ಮೃತರ ಪಾಪಾತ್ಮವು 11 ಲಕ್ಷದ 99 ಸಾವಿರದ 988 ಕಿಲೋ ಮೀಟರ್​ ದೂರವನ್ನು ನರಕದ ಪ್ರಯಾಣಕ್ಕಾಗಿ ಕ್ರಮಿಸಬೇಕಾಗುತ್ತದೆ.


ಈ ಸುದೀರ್ಘ ಪ್ರಯಾಣದಲ್ಲೂ ಅನೇಕ ಹಂತಗಳನ್ನು ದಾಟಬೇಕಾಗಿದ್ದು, ಹಲವು ಪರೀಕ್ಷೆಗಳು ಎದುರಾಗಲಿವೆ. ಶಿಕ್ಷೆಯ ಕಠಿಣತೆ ಹೇಗಿರುತ್ತದೆ ಎಂದರೆ ಲಕ್ಷಾಂತರ ಕಿಲೋ ಮೀಟರ್​ ಪ್ರಯಾಣದಲ್ಲೆಲ್ಲೂ ವಿಶ್ರಾಂತಿ ಪಡೆಯಲು ಕುಳಿತುಕೊಳ್ಳಲು ಜಾಗವಾಗಲೀ, ದಾಹ ತೀರಿಸಿಕೊಳ್ಳಲು ನೀರಾಗಲೀ ಸಿಗುವುದಿಲ್ಲ. ನಡೆಯುತ್ತಾ ಹೋದಂತೆ ಬಿಸಿಲಿನ ಝಳ ಹೆಚ್ಚುತ್ತಾ ಹೋಗಿ ಮೈ ಸುಡಲಾರಂಭಿಸಿದರೂ ಒಂದು ಅಡಿ ಜಾಗದಲ್ಲೂ ನೆರಳು ಸಿಗಲಾರದು. ಆ ಮಟ್ಟಿಗೆ ಕಠಿಣ ಸವಾಲುಗಳು ಎದುರಾಗುತ್ತಾ ಹೋಗುತ್ತವೆ.


ಈ ಸಂಕಷ್ಟದಿಂದ ನರಳುತ್ತಾ ಸಾಗುವ ಆತ್ಮ ಇನ್ನೇನು ನರಕದ ಬಾಗಿಲಿಗೆ ಬರಬೇಕು ಎನ್ನುವಷ್ಟರಲ್ಲಿ ದಟ್ಟ ಕಾಡೊಂದನ್ನು ದಾಟುವ ಸವಾಲು ಬರುತ್ತದೆ. ಕಾಡಲ್ಲಾದರೂ ಆಯಾಸ ಪರಿಹರಿಸಿಕೊಳ್ಳಬಹುದು ಎಂದುಕೊಂಡರೆ ಅಲ್ಲಿ ಸುತ್ತಲೂ ಧಗಧಗಿಸುವ ಬೆಂಕಿ, ಅದರ ನಡುವೆಯೂ ಕಾಡುವ ಕ್ರೂರ ಪ್ರಾಣಿಗಳು, ಸೊಳ್ಳೆ, ದುಂಬಿ, ಕಾಗೆ, ರಣಹದ್ದು, ಗೂಬೆ ಮುಂತಾದವುಗಳು ಆತ್ಮವನ್ನು ಮತ್ತಷ್ಟು ಪರದಾಡಿಸಿಬಿಡುತ್ತವೆ. ಆ ಸಂದರ್ಭದಲ್ಲಿ ಆತ್ಮ ಅವುಗಳಿಂದ ಬಚಾವಾಗಲಿಕ್ಕಾಗಿ ಕೊಳಚೆ, ಮೂತ್ರಾದಿಗಳಿಂದ ತುಂಬಿಕೊಂಡ ಗುಂಡಿಯಲ್ಲೆಲ್ಲಾ ಮುಳುಗಿ ಏಳಬೇಕಾಗುತ್ತದೆ. ಅಷ್ಟಾದ ನಂತರವೂ ಗಾಢ ಅಂಧಕಾರದಲ್ಲೇ ಸಾಗುವ ಆತ್ಮ ನರಕದಲ್ಲೂ ಪ್ರತಿಕ್ಷಣ ಪರಿತಪಿಸುವಷ್ಟು ಹೀನಾಯ ಮಟ್ಟದ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಹೀಗಾಗಿ, ಮರಣಾನಂತರ ಆತ್ಮ ಘನಘೋರ ಶಿಕ್ಷೆ ಅನುಭವಿಸಬಾರದೆಂದರೆ ಜೀವನದುದ್ದಕ್ಕೂ ಸತ್ಯದ ಹಾದಿಯನ್ನೇ ಅನುಸರಿಸಬೇಕು. ಎಷ್ಟೇ ಕಷ್ಟ, ಸವಾಲು ಎದುರಾದರೂ ಯಾವುದೇ ಕಾರಣಕ್ಕೂ ಎದೆಗುಂದದೆ ನ್ಯಾಯಪಥದಲ್ಲೇ ಸಾಗಬೇಕು. ಆಗ ಮಾತ್ರ ಬದುಕು ಪರಿಪೂರ್ಣಗೊಂಡು ಮುಕ್ತಿ ಲಭಿಸುವುದು ಸಾಧ್ಯ.