Saturday, 28 September 2019

ಪಿತೃ ಪಕ್ಷ ಏಕೆ ಮಾಡುವರು?? ಮಾಡಿದರೆ ನಮ್ಮ ಪೂರ್ವಜರು ಸಂತೃಪ್ತರಾಗುವರೇ??

ಪಿತೃ ಪಕ್ಷ ವೆಂಬುದು ನಮ್ಮ ಹಿರಿಯ ತಲೆಮಾರುಗಳಿಗೆ ಗೌರವ ಪ್ರದಾನ ಮಾಡುವುದಾಗಿದೆ.. ವಿಶೇಷವಾಗಿ ಆಹಾರ ಅರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸುವುದಾಗಿದೆ..

ಇದನ್ನು ಯಾರು ಮಾಡುವರು?? ಎಷ್ಟು ದಿನಗಳವರೆಗೆ ಪಿತೃ ಪಕ್ಷ ಮಾಡುತ್ತಾರೆ??

ಇದನ್ನು ಹಿಂದೂ ಧರ್ಮದವರು ಮಾಡುತ್ತಾರೆ.. ಇದನ್ನು 16 ಚಂದ್ರಮಾನ ದಿನಗಳಲ್ಲಿ ಮಾಡುವರು.. ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಬರುವ ಈ ಆಚರಣೆಯು ಬಾದ್ರಪದ ಹುಣ್ಣಿಮೆಯಲ್ಲಿ ಶುರುವಾದರೆ ಮಹಾಲಯ ಅಮವಾಸೆಯಲ್ಲಿ ಮುಗಿಯುತ್ತದೆ.. ದಕ್ಷಿಣ ಹಾಗು ಪಶ್ಚಿಮ ಭಾರತದಲ್ಲಿ ಇದನ್ನು ಗಣೇಶ ಹಬ್ಬ ಆದ ನಂತರ ಆಚರಣೆ ಮಾಡುವುದು ಪದ್ದತಿ..

ಪುರಾಣದ ಪ್ರಕಾರ ಮರಣ ಹೊಂದಿದ ನಮ್ಮ ಮೂರು ತಲೆಮಾರಿನ ಪೂರ್ವಜರು ಭೂಮಿ ಮತ್ತು ಸ್ವರ್ಗದ ನಡುವಿನ ಕ್ಷೇತ್ರದಲ್ಲಿ ವಾಸ ಮಾಡುತ್ತಿರುತ್ತಾರೆ..ಈ ಕ್ಷೇತ್ರಕ್ಕೆ ಪಿತೃ ಲೋಕ ಎನ್ನುವರು.. ಮುಂದಿನ ಪೀಳಿಗೆ ಸತ್ತ ನಂತರ ಅವರ ಆತ್ಮವನ್ನ ಯಮರಾಜ ತೆಗೆದುಕೊಂಡ ನಂತರ ಮೊದಲ ಪೀಳಿಗೆ ಸ್ವರ್ಗ ಸೇರುತ್ತದೆ..

ಹಿತಿಹಾಸದ ಕತೆಗಳ ಪ್ರಕಾರ ಪಿತೃ ಪಕ್ಷ ಶುರುವಾದಾಗ ಸೂರ್ಯ ತನ್ನ ರಾಶಿ ಬದಲಾವಣೆ ಮಾಡುವನು.. ಅಂದಿನಿಂದ 1 ತಿಂಗಳುಗಳ ಕಾಲ ನಮ್ಮ ಪೂರ್ವಜರ ಆತ್ಮ ಪಿತೃ ಲೋಕ ಬಿಟ್ಟು ತಮ್ಮ ವಂಶಸ್ತರ ಮನೆಯಲ್ಲಿ ನೆಲೆಸುತ್ತವೆ ಎಂಬ ನಂಬಿಕೆ ಇದೆ.. ಈ ಒಂದು ತಿಂಗಳಲ್ಲಿ ಮೊದಲ ಹದಿನೈದು ದಿನ ಪೂರ್ವಜರನ್ನು ಒಲಿಸಿಕೊಳ್ಳಲು ಅನ್ನ ಸೇವೆಯನ್ನು ಮಾಡುತ್ತೇವೆ..

ಈ ಆಚರಣೆಯನ್ನು ಸಾಮನ್ಯವಾಗಿ ಗಂಡು ಮಕ್ಕಳು ನೆರೆವೇರಿಸಿಕೊಂಡು ಬರುತ್ತಾರೆ.. ಪಿತೃ ಪಕ್ಷ ಮಾಡದಿದ್ದರೆ ಆತ್ಮಗಳಿಗೆ ಮೋಕ್ಷ ವಿಲ್ಲವೆಂಬುದು ನಂಬಿಕೆ ಆದಾಗ್ಯೂ ಕೆಲವರ ಮನೆಯಲ್ಲಿ ಈ ಆಚರಣೆಯ ಸಂಪ್ರದಾಯವಿರುವುದಿಲ್ಲ..

No comments:

Post a Comment