#8_ತಿಂಗಳು_ನೀರಿನಲ್ಲೇ_ಮುಳುಗಿದ್ದು
#ಕೇವಲ_4_ತಿಂಗಳು_ಭಕ್ತರಿಂದ_ಪೂಜೆ_ಸ್ವೀಕರಿಸುವ
#ಇತಿಹಾಸದ_ಪವಾಡ_ಸಿದ್ದ_ಶಿವನ_ದೇವಾಲಯವಿದು
ಅನೇಕ ಋಷಿಮುನಿಗಳಿಗೆ ಆಶ್ರಯ ನೀಡಿ 8 ತಿಂಗಳು ನೀರಿನಲ್ಲೇ ಇದ್ದು 4 ತಿಂಗಳು ಭಕ್ತರಿಂದ ಪೂಜೆ ಸ್ವೀಕರಿಸುವ ದೇವಾಲಯ ಇರುವುದಾದರೂ ಎಲ್ಲಿ ಮತ್ತು ಅಷ್ಟು ತಿಂಗಳು ಈ ದೇವಾಲಯ ನೀರಿನಲ್ಲಿ ಇರಲು ಕಾರಣವಾದರು ಏನು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ .
ಈ ದೇವಾಲಯ ಇರುವುದು ಆಂಧ್ರ ಪ್ರದೇಶ #ಕರ್ನೂರ್ ಜಿಲ್ಲೆಯ 56 ಕಿಲೋಮೀಟರು ದೂರದಲ್ಲಿ #ಸಂಗಮೇಶ್ವರ ಎಂಬ ಗ್ರಾಮದಲ್ಲಿ ಸಂಗಮೇಶ್ವರ ಸ್ವಾಮಿ ದೇವಾಲಯವಿದೇ ,ಈ ದೇವಾಲಯ ಅತಿ ಪುರಾತನವಾದ ದೇವಾಲಯ, #ಧರ್ಮರಾಯ ಈ ದೇವಾಲಯವನ್ನು ಪ್ರತಿಷ್ಠಾಪಿಸಿದ ಎಂದು ಪುರಾಣಗಳು ಹೇಳುತ್ತದೆ .
ಸಂಗಮೇಶ್ವರ ದೇವಾಲಯ 7 ನದಿಗಳು ಕೂಡುವ ಪ್ರದೇಶ ಅದಕ್ಕೆ ಈ ಸ್ಥಳಕ್ಕೆ #ಸಪ್ತನದಿಗಳ_ಸಂಗಮ ಎಂದು ಕರೆಯುತ್ತಾರೆ. ಈ ದೇವಾಲಯದ ಪುರಾಣಕ್ಕೆ ಬಂದರೆ ಪೂರ್ವದಲ್ಲಿ ಇಲ್ಲಿ ದಕ್ಷಯಜ್ಞ ನಡೆದಿತ್ತು ಆ ಸಮಯದಲ್ಲಿ ದಕ್ಷ ಸತಿಯನ್ನು ಅವಮಾನ ಮಾಡಿದರಿಂದ ಅವಳು ಈ ಯಜ್ಞಕುಂಡದಲ್ಲಿ ಬಿದ್ದು ಮರಣ ಹೊಂದಿದಳು ಎಂದು ಸ್ಥಳ ಪುರಾಣ ಹೇಳುತ್ತದೆ .
ಪಾಂಡವರ ವನವಾಸ ಸಮಯದಲ್ಲಿ ಧರ್ಮರಾಯ ಇಲ್ಲಿ ಶಿವಲಿಂಗ ಪ್ರತಿಷ್ಠಾಪಿಸಬೇಕು ಎಂದು ನಿರ್ಧಾರ ಮಾಡುತ್ತಾನೆ ,ಧರ್ಮರಾಯನ ಆದೇಶದಂತೆ ಭೀಮ ಶಿವಲಿಂಗವನ್ನು ತರಲು ಕಾಶಿಗೆ ಹೋಗುತ್ತಾನೆ ,ಆದರೆ ಸರಿಯಾದ ಸಮಯಕ್ಕೆ ಭೀಮ ಬರುವುದಿಲ್ಲ ,
ಆ ಸಮಯದಲ್ಲಿ ಋಷಿಮುನಿಗಳ ಆದೇಶದಂತೆ ಒಂದು ಕಲ್ಲನ್ನು ಶಿವಲಿಂಗದಂತೆ ಪ್ರತಿಷ್ಠಾಪಿಸುತ್ತಾನೆ ,ಇದರಿಂದ ಕೋಪಗೊಂಡ ಭೀಮ ತನ್ನ ತಂದ ಶಿವಲಿಂಗವನ್ನು ನೀರಿಗೆ ಎಸೆಯುತ್ತಾನೆ ,ಭೀಮನನ್ನು ಸಮಾಧಾನ ಮಾಡುವುದಕ್ಕೆ ಧರ್ಮರಾಯ ಅವನ್ನು ತಂದ ಶಿವಲಿಂಗವನ್ನು ನದಿತೀರದಲ್ಲೇ ಪ್ರತಿಷ್ಠಾಪಿಸಿ ಅದಕ್ಕೆ #ಭೀಮಲಿಂಗ ಎಂದು ಹೆಸರು ಇಡುತ್ತಾನೆ.
ಭಕ್ತರು ಮೊದಲು ಭೀಮಲಿಂಗದ ದರ್ಶನ ಮಾಡಿದ ಮೇಲೆ ಸಂಗಮೇಶ್ವರ ಸ್ವಾಮಿಯ ದರ್ಶನ ಮಾಡುತ್ತಾರೆ. ಪ್ರಪಂಚದಲ್ಲಿ 7 ನದಿಗಳು ಸೇರುವ ಒಂದೇ ಒಂದು ಸ್ಥಳ ಸಂಗಮೇಶ್ವರ.
ಈ ದೇವಾಲಯದಲ್ಲಿ ಎಲ್ಲ ದೇವಾಲಯಗಳ ತರಹ ಪೂಜೆಗಳು ದಿನ ನಡೆಯುದಿಲ್ಲ ,ತುಂಬಾ ತಿಂಗಳುಗಳು ನೀರಿನಲ್ಲಿ ಈ ದೇವಾಲಯ ಮುಳುಗಿರುತ್ತದೆ .
No comments:
Post a Comment