ವೃಷಭಾನು ಹಾಗೂ ಕೀರ್ತಿ ಎನ್ನುವವರ ದಂಪತಿಗಳ ಮಗಳಾಗಿ ಜನಿಸುತ್ತಾಳೆ ಇಲ್ಲಿಂದಲೇ ರಾಧಾ ಹಾಗೂ ಕೃಷ್ಣ ಇವರಿಬ್ಬರ ಪ್ರೇಮ ಕಥೆ ಪ್ರಾರಂಭವಾಗುತ್ತದೆ ಇವರಿಬ್ಬರೂ ಸಹ ಪರಸ್ಪರರಿಗಾಗಿಯೇ ಜನ್ಮ ಪಡೆದರು ಯಾಕೆ ಅವರ ಮದುವೆ ಜರುಗಲಿಲ್ಲ ಹಾಗೂ ಕೃಷ್ಣ ಯಾಕೆ ರಾಧೆಯನ್ನು ತೊರೆದು ಹೋದ ಕೃಷ್ಣನ ನೆಚ್ಚಿನ ಮುರಾರಿ ಅಥವಾ ಆತನ ಕೊಳಲು ಯಾಕೆ ಮುರಿದು ಹೋಯಿತು.
ಕೊನೆಗೆ ರಾಧೆಯ ಮರಣ ಹೇಗೆ ಹಾಗೂ ಯಾಕೆ ಸಂಭವಿಸಿತು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ರಾಧೆಯು ಹುಟ್ಟಿದಾಗ ಆಕೆ ಕಣ್ಣನ್ನೇ ತೆರೆದಿರಲಿಲ್ಲ ಯಾವಾಗ ತಾನು ಕೃಷ್ಣನನ್ನು ನೋಡುವೆನೋ ಆಗಷ್ಟೇ ಕಣ್ಣನ್ನು ತೆರೆದು ಜಗತ್ತನ್ನು ನೋಡುವೆನು ಎಂದು ವಚನವನ್ನು ಪಡೆದುಕೊಂಡು ಬಂದವಳು ರಾಧಾಕೃಷ್ಣ ಇವರಿಬ್ಬರ ನಡುವೆ ಮುಗಿಯದ ಅನುಬಂಧ ಇತ್ತು.
ಇದು ಎಲ್ಲರಿಗಿಂತ ಹಾಗೂ ಎಲ್ಲದಕ್ಕಿಂತ ಪರಮ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ ಆಕೆ ತನ್ನ ಐದನೇ ವಯಸ್ಸಿನವರೆಗೂ ಸಹ ಆಕೆ ಕಣ್ಣನ್ನು ತೆರೆದಿರಲಿಲ್ಲ ಕೃಷ್ಣ ಬಂದು ಅವಳ ಎದುರು ಬಂದು ನಿಂತಾಗಲೇ ಆಕೆ ಕಣ್ಣನ್ನು ಬಿಟ್ಟು ಜಗತ್ತನ್ನು ನೋಡಿದ್ದು! ಕೃಷ್ಣನು ತನ್ನ ಲೀಲೆಗಳಿಂದ ಹಾಗೂ ತನ್ನ ಮಧುರ ಗಾಯನದಿಂದಾಗಿ ಬೃಂದಾವನದಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದ.
ರಾಧಾಕೃಷ್ಣರ ಪ್ರೇಮ ಅವರಿಬ್ಬರಿಗೂ ಎಂಟನೇ ವಯಸ್ಸು ಇದ್ದಾಗಿನಿಂದಲೂ ಶುರುವಾಗಿತ್ತು ಯಾವಾಗಲೂ ಕೃಷ್ಣ ತನ್ನ ಕೊಳಲ ನಾದದಿಂದ ಶಿಶ್ರಾವ್ಯವಾಗಿ ನುಡಿಸುತ್ತಿದ್ದನೋ ಆಗ ರಾಧೆ ಕೃಷ್ಣನು ನುಡಿಸಿದ ನಾದದಿಂದ ಅವನಿದ್ದಂತಹ ಸ್ಥಳಕ್ಕೆ ಬರುತ್ತಿದ್ದಳು ಇವರಿಬ್ಬರೂ ಆ ಮಧುರವಾದ ನಾದದ ಉನ್ಮಾದದಲ್ಲಿ ಗಂಟೆಗಟ್ಟಲೆ ಅದನ್ನು ಆಸ್ವಾದಿಸುತ್ತಾ ಕಳೆದು ಹೋಗುತ್ತಿದ್ದರು ಯಮುನಾ ನದಿಯ ತೀರದಲ್ಲಿ ಅದೆಷ್ಟೋ ಒಂದು ಪರಸ್ಪರ ಆಲಂಗಿಸಿಕೊಂಡು ಮೈಮರೆಯುತ್ತಿದ್ದರು.
No comments:
Post a Comment