1)ಭವಸಾಗರದಿಂದ ಪಾರಾಗಲು ಸುಲಭೋಪಾಯ ಹರಿನಾಮ.
2)ತನುವನ್ನು ದಂಡಿಸಬೇಕಿಲ್ಲ.
3)ನೀರಿನಲ್ಲಿ ಸದಾಕಾಲ ಮುಳುಗಿ ಚಳಿಯಿಂದ ನಡುಗಬೇಕಿಲ್ಲ.
4) ಉಪವಾಸ ವ್ರತಗಳಾಚರಣೆ ಯನ್ನು ಮಾಡಲೇಬೇಕೆಂದಿಲ್ಲ.
5) ನಾರಾಯಣನ ಪಾದವನ್ನು ಸೇರಲು, ಹರಿನಾಮಸ್ಮರಣೆಗಿಂತ ಮಿಗಿಲಾದುದಿಲ್ಲ.
6)ಮಾನವರ ಹೃದಯದಲ್ಲಿ 'ನಾಮ'ಬೀಜವನ್ನು ಬಿತ್ತಿದವರು ಮಹರ್ಷಿ ಗಳಾದ ನಾರದರು.
7) ಆ ಬೀಜವು ಮೊಳೆತು ಸಸಿಯಾಗಿ, ಚಿಗುರಿ, ಹೂವಾಗಿ, ಕಾಯಾಗಿ, ಪಕ್ವವಾದ ಹಣ್ಣಾಗಿ ಅದನ್ನು ಸವಿಯುವ ಭಾಗ್ಯ ನಮ್ಮದಾಗಿದೆ.
8) ಪರಮಾತ್ಮನ ದಿವ್ಯನಾಮ ಕಲ್ಲು ಸಕ್ಕರೆಯಂತೆ ಬಲುಸವಿಯಾದುದು.
9)ಕೃಷ್ಣ ನಾಮವೆಂಬ ಕಲ್ಲು ಸಕ್ಕರೆಯನ್ನು ಸವಿದುಆನಂದಿಸು ವವರೇ
ಮಹಾಭಾಗ್ಯಶಾಲಿಗಳು.
10)ಭಾಗವತದ ಶ್ರವಣದಿಂದ ಜೀವಿಯ ವಾಸನಾ ಸಮುದ್ರ ಬತ್ತಿಹೋಗುತ್ತದೆ.
11)ಈ ಜಗತ್ತನ್ನು ಬಿಟ್ಟು ಹೋಗುವಾಗ ಆ ಜೀವಿ ಹುರಿದ ಬೀಜದಂತಾಗುವನು.
12)ಇನ್ನವನು ಮೊಳೆಯಲಾರ. ಇನ್ನೊಮ್ಮೆ ಅವನು ಪ್ರಪಂಚಕ್ಕೆ ಬರುವುದಿಲ್ಲ.
13)ಭಗವದ್ಭಕ್ತಿಯ ಆವುಗೆಯಲ್ಲಿ ಬೆಂದ ಆ ಜೀವ ಮತ್ತೊಮ್ಮೆ ಸಂಸಾರಚಕ್ರದಮೇಲೆ ಬರುವುದಿಲ್ಲ.
14)ಭಾಗವತವು ಭಕ್ತಿ ರಸಪ್ರಧಾನವಾಗಿದ್ದು ಜ್ಞಾನ ವೈರಾಗ್ಯಗಳ ಕಡೆಗೆ ಕರೆದೊಯ್ಯುತ್ತದೆ.
15)ವೇದೋಪನಿಷತ್ತುಗಳ ಸಾರದಿಂದ ಭಾಗವತ ಕಥೆ ಹುಟ್ಟಿದೆ. ವೇದವೆಂಬ ಕಲ್ಪವೃಕ್ಷದಿಂದ ಭಾಗವತ ವೆಂಬ ಹಣ್ಣು ದೊರಕಿದೆ. ಇದು ಅಮೃತದಿಂದ ತುಂಬಿದೆ. ಸಿಹಿಯಾಗಿ ರಸವತ್ತಾಗಿದೆ. ಈ ಅಮೃತವನ್ನು ತೃಪ್ತಿಯಾಗುವವರೆಗೂಕುಡಿದುಪರಮಾನಂದವನ್ನು ಪಡೆಯಬಹುದು.
16)ಸಂಸಾರವೆಂಬಕಗ್ಗತ್ತಲೆಗೆ ಸಿಕ್ಕಿ, ಜ್ಞಾನವೆಂಬ ಕಣ್ಣು ಕಾಣದಂತಾಗಿರುವ ಜನರ ಉದ್ಧಾರಕ್ಕಾಗಿ ಈ ಭಾಗವತವೆಂಬ ಸೂರ್ಯನು ಹುಟ್ಟಿದ್ದಾನೆ.'
OM SRI GURU RAGHAVENDRAYA NAMAHA.
No comments:
Post a Comment