Thursday, 17 July 2025

ಯಾರು ಶ್ರೇಷ್ಠರು

***ಯಾರು ಶ್ರೇಷ್ಠರು👇👇***
ದೇವಲೋಕದಲ್ಲಿ ನಾರದ ಮಹರ್ಷಿಗಳು ಹಾಗೂ ತುಂಬುರು ಮಹರ್ಷಿಗಳು ಮಹಾನ್ ಸಂಗೀತ ವಿದ್ವಾಂಸರಾಗಿದ್ದರು ಇಬ್ಬರಿಗೂ ತಮ್ಮ ಜ್ಞಾನದ ಬಗ್ಗೆ ಅಪಾರವಾದ ಹೆಮ್ಮೆಯಿತ್ತು. ಒಮ್ಮೆ ಇಬ್ಬರು ಪರಸ್ಪರ ಮಾತನಾಡುತ್ತಾ ನನ್ನ ಸಂಗೀತ ಜ್ಞಾನವೇ ಅಧಿಕ ನನ್ನ ಸಂಗೀತ ಜ್ಞಾನವೇ ಅಧಿಕ ಇಂದು ಪರಸ್ಪರ ವಾಗ್ವದಕ್ಕೆ ಒಳಗಾದರು ಏನೇ ಮಾಡಿದರಖ ಇಬ್ಬರು ತಮ್ಮ ತಮ್ಮ ಪಟ್ಟುಗಳನ್ನು ಬಿಡಲ್ಲ. ತಮ್ಮ ಜಗಳವನ್ನು ತೀರ್ಮಾನಿಸಲು ವಿಷ್ಣುವಿನ ಬಳಿಗೆ ಹೋದರು. ಆದರೆ ವಿಷ್ಣು ಅವರ ವಾದಗಳನ್ನು ಆಲಿಸುತ್ತಾ ಯಾವ ತೀರ್ಮಾನವನ್ನು ಕೊಡಲಿಲ್ಲ ಏಕೆಂದರೆ ಒಬ್ಬರ ಬಗ್ಗೆ ತೀರ್ಮಾನ ಕೊಟ್ಟರೆ ಮತ್ತೊಬ್ಬರಿಗೆ ಸಿಟ್ಟು ಬರುತ್ತದೆ ಅನ್ಯಾಯವಾಗಿ ಅವರಿಬ್ಬರ ನಡುವೆ ಕಲಹ ಏರ್ಪಡುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದೆನಣಿಸಿದ ಮಹಾವಿಷ್ಣು ಅವರಿಬ್ಬರನ್ನು ಕೂರಿಸಿಕೊಂಡು,
    "ನೀವಿಬ್ಬರು ಮಹಾನ್ ಸಂಗೀತಗಾರರು ಅದರಲ್ಲಿ ಅನುಮಾನವೇ ಇಲ್ಲ ಆದರೆ ನನಗೆ ಸಂಗೀತದ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ ಏಕೆಂದರೆ ನಾನೇನು ಸಂಗೀತವನ್ನು ನುಡಿಸುವುದಿಲ್ಲ.ನಿಮ್ಮ ಸಂಗೀತ ಜ್ಞಾನವನ್ನು ಅಳೆಯಲು ನಾನು ಶಕ್ತನಲ್ಲ. ನಿಮ್ಮ ಸಂಗೀತಜ್ಞಾನವನ್ನು ಅಳೆದು ಅದಕ್ಕೆ ಸೂಕ್ತವಾದ ತೀರ್ಮಾನವನ್ನು ಕೊಡಲು ನನ್ನ ಭಕ್ತನಾದ ಹನುಮಂತನಿಂದ ಮಾತ್ರ ಸಾಧ್ಯ ಅವನು ಈಗ ಹಿಮಾಲಯದ ತಪ್ಪಲಲ್ಲಿ ನನ್ನ ಧ್ಯಾನವನ್ನು ಮಾಡುತ್ತಾ ಕುಳಿತಿದ್ದಾನೆ. ನೀವು ಅಲ್ಲಿಗೆ ಹೋಗಿ ಅವನಿಂದ ನ್ಯಾಯವನ್ನು ಪಡೆಯಿರಿ. ಅವನ ತೀರ್ಮಾನದಿಂದ ನಿಮ್ಮಿಬ್ಬರಲ್ಲಿ ಯಾರು ಖ್ಯಾತ ಸಂಗೀತಗಾರರು ಎಂಬುದು ಬೆಳಕಿಗೆ ಬರುತ್ತದೆ ನೀವು ಹನುಮಂತ ಸಂಪರ್ಕಿಸಿ" ಎಂದು ಹೇಳಿದನು.
    ಅಂತೆಯೇ ನಾರದ ಮಹರ್ಷಿಗಳು ಹಾಗೂ ತುಂಬು ಮಹರ್ಷಿಗಳು ಹನುಮಂತನನ್ನು ಹುಡುಕುತ್ತಾ ಹಿಮಾಲಯದ ತಪ್ಪಲಿಗೆ ಧಾವಿಸಿದರು. ಆದರೆ ಎಷ್ಟೇ ಹುಡುಕಿದರು ಅವರಿಗೆ ಹನುಮಂತನು ಗೋಚರವಾಗಲಿಲ್ಲ. ಆದರೆ ಬೆಟ್ಟದ ಯಾವುದೋ ಒಂದು ಭಾಗದಿಂದ ಸುಶ್ರಾವ್ಯವಾಗಿ ಪಟಿಸುತ್ತಿರುವ ರಾಮಧ್ಯಾನ ಮಾತ್ರ ಕೇಳಿಬರುತ್ತಿತ್ತು.ಆಗ ಅವರು ಹನುಮಂತನನ್ನು ಹುಡುಕುತ್ತಾ ಹುಡುಕುತ್ತಾ ಹೋದಾಗ, ಹಿಮಾಲಯದಲ್ಲಿರುವ ದಟ್ಟವಾದ ಹಿಮದ ಬಂಡೆಗಳಿಂದ ತುಂಬಿರುವ ಪ್ರದೇಶದಲ್ಲಿ ಹನುಮಂತನು ರಾಮಧ್ಯಾನದಲ್ಲಿ ತಲ್ಲೀನರಾಗಿರುವುದು ನೋಡಿದರು.
    ಹನುಮಂತನನ್ನು ಎಷ್ಟು ಬಾರಿ ಕರೆದರೂ ಅವನಿಗೆ ತನ್ನ ಭಕ್ತಿ ಪರಾಕಾಷ್ಠೆಯಲ್ಲಿರುವಾಗ ನಾರದ ಮಹರ್ಷಿಗಳ ಹಾಗೂ ತುಂಬುರರ ಕರೆಗಳು ಕೇಳಿಸಲೇ ಇಲ್ಲ. ಕೊನೆಗೆ ಹನುಮಂತ ನೊಂದಿಗೆ ಇವರೂ ರಾಮಧ್ಯಾನ ವನ್ನು ಪಟಿಸಲು ಪ್ರಾರಂಭಿಸಿದರು ಸಾಕಷ್ಟು ಕಾಲ ರಾಮನನ್ನು ಪ್ರಾರ್ಥಿಸಿದ ಮೇಲೆ ಹನುಮಂತನು ಎತ್ತಲಿಂದಲೋ ರಾಮಧ್ಯಾನ ಕೇಳುತ್ತಿದೆಯಲ್ಲ ಎನ್ನುತ್ತಾ ಕಣ್ಣು ಬಿಟ್ಟನು. ಆಗ ದೂರದಲ್ಲಿ ನಿಂತು ರಾಮನಾಮವನ್ನು ಜಪಿಸುತ್ತಿದ್ದ ನಾರದ ಮಹರ್ಷಿಗಳು ಹಾಗೂ ತುಕಬುಲರನ್ನು ಕಂಡು,
    "ಸ್ವಾಮಿ, ತಮ್ಮಿಬ್ಬರಿಗೂಗೂ ಸಾಷ್ಟಾಂಗ ನಮಸ್ಕಾರಗಳು ಇದೇನು ತಾವು ಇಲ್ಲಿವರೆಗೂ ಪಾದಗಳನ್ನು ಬೆಳೆಸಿದ್ದೀರಿ? ನನ್ನಿಂದ ಏನಾದರೂ ಕಾರ್ಯವಾಗಬೇಕಾಗಿದೆಯೇ? ದಯಮಾಡಿ ತಿಳಿಸಿರಿ ಖಂಡಿತ ಮಾಡಿಕೊಡುವೆ" ಎಂದನು. ಆಗ ನಾರದ ಮಹರ್ಷಿಗಳು,
    ಹನುಮಂತ ನಿನಗೆ ಗೊತ್ತಿರುವಂತೆ ನಾವಿಬ್ಬರೂ ಅಸಾಮಾನ್ಯ ಸಂಗೀತ ವಿದ್ವಾಂಸರು ಈಗ ನಮ್ಮಿಬ್ಬರಲ್ಲೂ ಒಂದು ಸಣ್ಣ ಕಲಹ ಏರ್ಪಟ್ಟಿದೆ. ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬುದು ಗೊತ್ತಾಗಬೇಕಾಗಿದೆ ನಾವಿಬ್ಬರು ವಿಷ್ಣುವಿನ ಮುಂದೆ ನಮ್ಮ ಕಚೇರಿಯನ್ನು ಏರ್ಪಡಿಸಿ ಅವನನ್ನು ತಿಳಿಸಿದ್ದೇವೆ. ವಿಷ್ಣುವಿನ ಬಳಿ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂದು ಕೇಳಿದರೆ ಅದಕ್ಕೆ 
"ನಾನೇನು ದೊಡ್ಡ ಸಂಗೀತ ವಿದ್ವಾಂಸನಲ್ಲ ಇದರ ಬಗ್ಗೆ ನಿಮಗೆ ಸರಿಯಾದ ತೀರ್ಪು ಬೇಕಿದ್ದರೆ ಹೋಗಿ ನನ್ನ ಭಕ್ತನಾದ ಹನುಮಂತನನ್ನು ವಿಚಾರಿಸಿ ಅವನು ನ್ಯಾಯವಾದ ತೀರ್ಪನ್ನು ಕೊಡುತ್ತಾನೆ" ಎಂದು ಹೇಳಿದ. ಅದಕ್ಕೋಸ್ಕರವಾಗಿ ನಾವಿಬ್ಬರೂ ನಿನ್ನ ಬಳಿ ಬಂದಿದ್ದೇವೆ ನಮ್ಮ ಸಂಗೀತಗಳನ್ನು ನಿನಗೆ ಒಪ್ಪಿಸುತ್ತೇವೆ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ತೀರ್ಪನ್ನು ಕೊಡಬೇಕು ಎಂದು ಕೇಳಿಕೊಂಡರು.
    ಅದಕ್ಕೆ ಹನುಮಂತನು ಸಮ್ಮತಿ ನೀಡಿದಾಗ ಒಬ್ಬರಾದ ಮೇಲೆ ಒಬ್ಬರಂತೆ ಒಬ್ಬರು ಮಹರ್ಷಿಗಳು ತಮ್ಮ ವಿದ್ವತ್ತಿನ ಮಹತ್ವವನ್ನು ಸಂಗೀತದ ಮೂಲಕ ಉಣಬಡಿಸಿದರು ತಾಳ್ಮೆಯಿಂದ ಇಬ್ಬರ ಸಂಗೀತಗಳನ್ನು ಕೇಳಿದ ಹನುಮಂತನು,
    "ನೀವಿಬ್ಬರೂ ತುಂಬಾ ಚೆನ್ನಾಗಿ ಸಂಗೀತವನ್ನು ನುಡಿ ಸುತ್ತೀರಿ ಹಾಗಾಗಿ ನಿಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎಂದು ಹೇಳುವುದೇ ಕಷ್ಟ ಒಬ್ಬರಿಗೆ ಇನ್ನೊಬ್ಬರು ಪೂರಕವಾಗಿ ಹಾಡುತ್ತೀರಿ. ನಮ್ಮ ಎರಡು ಕಣ್ಣುಗಳಲ್ಲಿ ಯಾವ ಕಣ್ಣು ಶ್ರೇಷ್ಠ ಎಂದು ಕೇಳಿದರೆ ಹೇಳುವುದು ಕಷ್ಟ ಎರಡು ಕಣ್ಣುಗಳಂತೆ ನೀವಿಬ್ಬರೂ ಅದ್ಭುತವಾಗಿ ಹಾಡುತ್ತೀರಿ. ಅದರಲ್ಲಿ ಅನುಮಾನವೇ ಇಲ್ಲ.ಆದರೆ ನಾನು ಅಂತಿಮ ತೀರ್ಮಾನ ಕೊಡುವುದಕ್ಕೆ ಮುಂಚೆ ನನ್ನ ಸಂಗೀತ ನಾದವನ್ನು ಕೇಳಿ" ಎಂದು ಹೇಳಿದನು. ಅದಕ್ಕೆ ನಾರದ ಮತ್ತು ತುಂಬುರು ಮಹರ್ಷಿಗಳು ಒಪ್ಪಿಕೊಂಡು ಹನುಮಂತನ ನಾದವನ್ನು ಕೇಳಲು ತಯಾರಾದರು.
    ಹನುಮಂತನ ರಾಮಧ್ಯಾನ ಸಂಗೀತ ಕಚೇರಿಯನ್ನು ಪ್ರಾರಂಭಿಸಿದ. ಅದೆಂತಹ ಭಕ್ತಿ, ಆದೆಂತಹ ಆನಂದ, ಅದೆಂತಹ ತನ್ಮಯತೆ, ಆ ಮಧುರವಾದ ಕಂಠಸಿರಿಗೆ ಹೋಲಿಕೆಯೇ ಇಲ್ಲ, ಆತನು ತನ್ನ ನಾದವನ್ನು ಅರ್ಥಾತ್ ರಾಮನಾಮವನ್ನು ಪಟಿಸುತ್ತಾ ಹೋದಂತೆ ಹಿಮಾಲಯ ಪರ್ವತಗಳಲ್ಲಿ ಇರುವ ಬಂಡೆಗಳೆಲ್ಲ ಕರಗತೊಡಗಿದವು. ಹರಿದುಬಂದ ಆ ನೀರಿನಲ್ಲಿ ಹನುಮಂತ ಮತ್ತು ದುಂಬುರು ಮಹರ್ಷಿಗಳು ಮುಳುಗಿ ಹೋದರು. ಆ ಪ್ರವಾಹವನ್ನು ತಾಳಲಾಗದೆ ಇಬ್ಬರು
    "ಸಾಕು ನಿಲ್ಲಿಸು ಹನುಮಂತ, ನಿನ್ನ ನಾದ ಪ್ರವಾಹವನ್ನು ನಿಲ್ಲಿಸು" ಎಂದು ಹೇಳತೊಡಗಿದರು. ಅವರ ಪ್ರಾರ್ಥನೆಗೆ ಕಿವಿಗೊಟ್ಟ ಹನುಮಂತನು ತನ್ನ ಸಂಗೀತದ ನಾದವನ್ನು ನಿಲ್ಲಿಸಿದನು. ಹನುಮಂತನು ತನ್ನ ಸಂಗೀತ ಪ್ರವಾಹವನ್ನು ನಿಲ್ಲಿಸಿದ ತಕ್ಷಣ ಪ್ರವಾಹದೋಪಾದಿಯಲ್ಲಿ ಹರಿಯುತ್ತಿರುವ ನೀರಿನ ಪ್ರವಾಹವು ಹಾಗೆ ನಿಂತುಹೋಯಿತು. ಔ ಮತ್ತೊಮ್ಮೆ ಹಿಮದ ಬಂಡೆಗಳಾಗಿ ಪರಿವರ್ತನೆಗೊಂಡವು. ಇಬ್ಬರು ಮಹರ್ಷಿಗಳು ಬಂಡೆಗಳ ಮಧ್ಯೆ ಸಿಲುಕಿ ಹಾಕಿಕೊಂಡು ಹೊರಬರಲಾಗದೆ ವಿಲವಿಲ ಒದ್ದಾಡ ತೊಡಗಿದರು. ಆಗ ಹನುಮಂತನೇ ಮತ್ತೊಮ್ಮೆ ತನ್ನ ಸಂಗೀತವನ್ನು ಪ್ರಾರಂಭಿಸಿ ಬಂಡೆಗಳು ಕರಗುವಂತೆ ಮಾಡಬೇಕಾಯಿತು. ಹನುಮಂತನ ಸಂಗೀತ ಸಾಗರದ ಅಸಾಮಾನ್ಯ ಪ್ರತಿಭೆಯನ್ನು ಕಂಡು ಇಬ್ಬರು ಮಹರ್ಷಿಗಳು ಮೂಕಸ್ಮಿತರಾದರು. 
       "ಹನುಮಂತ, ನೀನು ಒಬ್ಬ ಅಸಾಮಾನ್ಯ ಸಂಗೀತಗಾರ, ಏಕೆಂದರೆ ನಿನ್ನ ಸಂಗೀತದಲ್ಲಿ ನಾದದ ಜೊತೆಗೆ ರಾಮನ ಅನನ್ಯವಾದ ಭಕ್ತಿ ಮಿಳಿತವಾಗಿದೆ. ಯಾರಿಂದಲೂ ನಿನ್ನನ್ನು ಮೀರಿಸಲು ಸಾಧ್ಯವಿಲ್ಲ"
 ಎಂದು ಅವನನ್ನು ಹಾಡಿ ಹೊಗಳುತ್ತಾ ಸ್ವರ್ಗದತ್ತ ಪ್ರಯಾಣ ಬೆಳೆಸಿದರು.

No comments:

Post a Comment