Saturday, 11 April 2020

ನಿಮ್ಮ ಆತ್ಮ ಎಷ್ಟು ಬಾರಿ ಪುರ್ನಜನ್ಮ ಪಡೆದಿದೆ ಎಂದು ತಿಳಿಸುವ ಸೂಚನೆಗಳಿವು..!

ಪುನರ್ಜನ್ಮದ ವಿಚಾರಗಳು ಎಲ್ಲರನ್ನೂ ಬೆರಗುಗೊಳಿಸುತ್ತವೆ. ಕೆಲವರು ಪುನರ್ಜನ್ಮವಿದೆ ಎಂದು ನಂಬಿದರೆ,ಮತ್ತೆ ಕೆಲವರು ಪುನರ್ಜನ್ಮ ವಿಲ್ಲ ಎಂದು ನಂಬುವರಿದ್ದಾರೆ ಎಂದು ಹೇಳಬಹುದು. ನಿಮ್ಮ ಹಿಂದಿನ ಜನ್ಮಕ್ಕೆ ಸಂಬಂಧಿಸಿದ ಭಾವನೆಗಳು ಪ್ರಸ್ತುತ ಜೀವನಕ್ಕೆ ಯಾವುದೇ ಸಂಬಂಧ ಹೊಂದಿಲ್ಲದಿದ್ದರೂ, ಅಂಥ ಭಾವನೆಗಳನ್ನು ನೀವು ಅನುಭವಿಸುತ್ತೀರಿ ಎಂದಾದರೆ ಅದು ಹಿಂದಿನ ಜನ್ಮಕ್ಕೂ ಈ ಜನ್ಮಕ್ಕೂ ಸಂಬಂಧ ಹೊಂದಿರಬಹುದು. ಯೆಸ್, ನಿಮಗೆ ಆಶ್ಚರ್ಯವಾಗಬಹುದು. ಕೆಲವೊಮ್ಮೆ ನಮ್ಮ ಜೀವನಶೈಲಿಗೆ ಸಂಬಂಧಿಸಿದ ಘಟನೆಗಳು ಅಥವಾ ಅಭ್ಯಾಸಗಳು ನಾವು ಅನುಭವಿಸುವುದನ್ನು ನೋಡುತ್ತಿರುತ್ತೇವೆ. ಇಂತಹ ಅನುಭವಗಳಿಂದ ಜನರು ಅಚ್ಚರಿಗೆ ಒಳಗಾಗುತ್ತಾರೆ. ನಿಮಗೆ ನಂಬಲಿಕ್ಕೆ ಸಾಧ್ಯವಾಗದೇ ಇರಬಹುದು ಆದರೆ ಈ ಅನುಭವಗಳು, ಘಟನೆಗಳು ನಿಮ್ಮ ಹಿಂದಿನ ಜೀವನಕ್ಕೆ ಸಂಬಂಧಿಸಿರಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಇಲ್ಲಿ ತಿಳಿಸಲಾದ ಸೂಚನೆಗಳು ನಿಮ್ಮಲ್ಲಿ ಕಂಡು ಬಂದರೆ ನೀವು ಸಹ ಹಲವು ಬಾರಿ ಪುನರ್ಜನ್ಮ ಪಡೆದೀರಿ ಎಂದು ಸೂಚಿಸುತ್ತದೆ. ನೀವು ಯಾವುದರ ಬಗ್ಗೆಯಾದರೂ ಹೆದರುತ್ತಿದ್ದರೆ, ನಿಮ್ಮ ವರ್ತಮಾನ ಜೀವನಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಸಹ ಭಯ ಕಾಡುತ್ತದೆ. ನಿಮ್ಮ ಆತ್ಮ ಎಷ್ಟು ಬಾರಿ ಪುನರ್ಜನ್ಮ ಪಡೆದಿದೆ? ಎಂದು ತಿಳಿಸುವ ಕೆಲವು ಸೂಚನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

1. ಒಂದೇ ಕನಸು ಪದೇ ಪದೇ ಬೀಳುವುದು

ನಿಮಗೆ ಒಂದೇ ಕನಸು ಪದೇ ಪದೇ ಬೀಳುತ್ತಿದ್ದರೆ ಹಿಂದಿನ ಜನ್ಮಕ್ಕೆ ಸಂಬಂಧಿಸಿದೆ ಎಂದು ಹೇಳಬಹುದು. ಕನಸಿನಲ್ಲಿ ಕಾಣುವ ಜನರು ನಿಮಗೆ ಪರಿಚಿತರಂತೆ ಕಾಣುತ್ತಾರೆ. ನೀವು ಅವರನ್ನು ಎಲ್ಲಿ ನೋಡಿದ್ದೀರಿ ಎಂಬುದು ನಿಮಗೆ ನೆನಪಿರುವುದಿಲ್ಲ. ಆದರೆ ಅವರನ್ನು ಎಲ್ಲೋ ನೋಡಿದ್ದೀರಿ ಎಂದು ನೀವು ಭಾವಿಸುತ್ತೀರಿ.

2. ಮೊದಲ ಭೇಟಿಯಲ್ಲೇ ಅಪರಿಚಿತರು ನಮ್ಮವರು ಎನ್ನುವ ಭಾವನೆ

ನೀವು ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾಗಲು ಹೋಗುತ್ತೀರಿ. ಆದರೆ ಭೇಟಿಯ ವೇಳೆ ಅವರು ನಮಗೆ ದೀರ್ಘಕಾಲದಿಂದಲೂ ಪರಿಚಿತರೋ ಎನ್ನುವ ಭಾವನೆ ನಮ್ಮಲ್ಲಿ ಮೂಡುತ್ತದೆ. ಇದರಿಂದ ವಿಚಿತ್ರವಾದ ಭಾವನೆ ಉಂಟಾಗುವ ಅನುಭವ ಕಾಣಬಹುದು. ಹೀಗೆ ಯಾಕಾಗುತ್ತಿದೆ.. ಅಪರಿಚಿತರ ಜತೆ ನಾವೇಕೆ ಇಷ್ಟು ಹತ್ತಿರವಾಗಿದ್ದೀವಿ ಎಂದು ನಿಮಗೆ ಅರ್ಥವಾಗದೇ ಇರಬಹುದು.

3. ಯಾವುದೇ ವಸ್ತು, ವ್ಯಕ್ತಿ ಬಗ್ಗೆ ವಿಶೇಷ ಕ್ರೇಜ್

ನೀವು ಯಾವುದಾದರೂ ವ್ಯಕ್ತಿ ಅಥವಾ ವಸ್ತು ಬಗ್ಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಿದ್ದರೆ ಅದು ಪುನರ್ಜನ್ಮವನ್ನು ಸೂಚಿಸುತ್ತದೆ. ಅಂದರೆ ವಯೋವೃದ್ಧರು, ಅನಾಥರು, ಅಥವಾ ಭಿಕ್ಷುಕರು ಕಂಡಾಗ ನಿಮಗೆ ಅವರ ಮೇಲೆ ವಿಶೇಷವಾದಂತಹ ಸಹಾನೂಭೂತಿ ಮೂಡುತ್ತದೆ. ಇವರಿಗಾಗಿ ಏನನ್ನಾದರೂ ಮಾಡಲು ನಿಮಗೆ ಆಸಕ್ತಿ ಹೆಚ್ಚುತ್ತದೆ.


4. ಕೆಟ್ಟದ್ದು ಸಂಭವಿಸಿದರೆ, ಮೊದಲೇ ಮುನ್ಸೂಚನೆ ದೊರೆಯುವುದು

ಕೆಲವು ಜನರಿಗೆ ಕೆಟ್ಟದ್ದು ಸಂಭವಿಸುವ ಮುನ್ನ ಮುನ್ಸುಚನೆ ದೊರೆಯುತ್ತದೆ. ಅಂದರೆ ಕೆಟ್ಟದ್ದು ಆಗುತ್ತದೆ ಎಂದು ಕೆಲವರು ತುಂಬಾ ಹೆದರುತ್ತಾರೆ. ಈ ಹೆದರಿಕೆಗೆ ಕಾರಣವೆಂದರೆ ಅವರ ಮನಸ್ಸಿನಲ್ಲಿ ಉಂಟಾಗುವ ಮುನ್ಸೂಚನೆಗಳೇ ಕಾರಣವಾಗುತ್ತದೆ. ಅಷ್ಟೋ ಬಾರಿ ಕೆಟ್ಟದ್ದು ಸಂಭವಿಸುತ್ತದದೆ ಎನ್ನುವ ಮೂನ್ಸುಚನೆ ದೊರೆಯುತ್ತದೆ. ಈ ಭಾವನೆ ಸುಳ್ಳು ಎಂದು ಅವರು ಅಲ್ಲಗಳೆಯುವುದಿಲ್ಲ. ಯಾಕೆಂದರೆ ಅಂಥವರಲ್ಲಿ ಕೆಟ್ಟದ್ದು ಸಂಭವಿಸುವುದರ ಬಗ್ಗೆ ಪ್ರೂವ್ ಆಗ್ತಾನೆ ಇರುತ್ತದೆ.

5. ಅನಗತ್ಯ ವಿಷಯಗಳ ಬಗ್ಗೆ ಭಯ ಕಾಡುತ್ತಿದ್ದರೆ

ಭಯ ಎನ್ನುವುದು ನೈಸರ್ಗಿಕ ವಿಷಯ ಎಂದು ಹೇಳಬಹುದು. ಆದರೆ ಬಣ್ಣ, ಸಂಖ್ಯೆ, ಸ್ಥಳ, ಬಟ್ಟೆ ಮುಂತಾದ ಅನಗತ್ಯ ವಿಷಯಗಳಿಗೆ ನೀವು ಭಯ ಪಡಲು ಪ್ರಾರಂಭಿಸುತ್ತೀರಾ. ಅದು ಸಾಮಾನ್ಯ ವಿಷಯವೆಂದು ನಿಮಗೆ ಎನ್ನಿಸುವುದಿಲ್ಲ. ಕೆಲವರಲ್ಲಿ ಭಯ ತುಂಬಾ ಅಧಿಕವಾಗಿರುತ್ತದೆ.

6. ಅಪರಿಚಿತ ಸ್ಥಳಗಳು..
ನೀವು ನಗರ, ರಸ್ತೆ, ಹಳ್ಳಿ, ಪಟ್ಟಣದ ಮೂಲಕ ಹಾದು ಹೋಗುತ್ತಿದ್ದರೆ ಆಗ ನಿಮಗೆ ಇದ್ದಕ್ಕಿದ್ದಂತೆ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅನ್ನಿಸುತ್ತದೆ. ಆ ಸ್ಥಳಗಳು ನಿಮಗೆ ಆಕರ್ಷಿಸುತ್ತವೆ ಎಂದು ಹೇಳಬಹುದು. ಈ ಸೂಚನೆಯೂ ಸಹ ನಿಮ್ಮ ಹಿಂದಿನ ಜನ್ಮಕ್ಕೆ ಸಂಬಂಧಿಸಿರಬಹುದು.

7. ಸಾಮಾಜಿಕ ಸ್ಥಾನಮಾನ, ಖ್ಯಾತಿ ಬಗ್ಗೆ ಯೋಚಿಸವುದಿಲ್ಲ

ಸಜಹವಾಗಿಯೇ ಮನುಷ್ಯ ಸಾಮಾಜಿಕ ಸ್ಥಾನಮಾನ ಹಾಗೂ ಖ್ಯಾತಿ ಪಡೆಯಲು ಹಂಬಲಿಸುತ್ತಾನೆ. ಇದನ್ನು ಪಡೆಯಲು ಸಾಕಷ್ಟು ಶ್ರಮ ವಹಿಸುವವರು ಇದ್ದಾರೆ. ಆದರೆ ಪುನರ್ಜನ್ಮ ಪಡೆದ ಆತ್ಮ ಸಾಮಾಜಿಕ ಸ್ಥಾನಮಾನ, ಖ್ಯಾತಿ ಇತರ ವಿಷಯಗಳಿಗಾಗಿ ಹಂಬಲಿಸುವುದಿಲ್ಲ. ಇದರ ಬದಲಾಗಿ ನೀವು ಆಧ್ಯಾತ್ಮಿಕವಾಗಿ ಬೆಳೆಯಲು ಬಯಸಬಹುದು. ಉತ್ತಮ ವ್ಯಕ್ತಿಯಾಗಿ ವಿಕಸನಗೊಳ್ಳಲು ಹಾಗೂ ಇತರ ಜನರಿಗೆ ಸಹಾಯ ಮಾಡಲು ನೀವು ಮುಂದಾಗಬಹುದು.

No comments:

Post a Comment