Sunday, 26 April 2020

ಪಂಡರಾಪುರ

ಪಂಡರಾಪುರದ ಹಲವು ರೋಚಕ ವಿಷಯಗಳು. ಭೀಮ ನದಿಯ ತಟದಲ್ಲಿ ಸ್ಥಿತವಾಗಿರುವ ದೇವಾಲಯವೇ ಪಂಡರಾಪುರ. ಈ ದೇವರು ವಿಷ್ಣು ಅಥವಾ ಕೃಷ್ಣನ ಅವತಾರ ಎನ್ನಲಾಗುತ್ತದೆ ಪ್ರತಿ ವರ್ಷ ಇಲ್ಲಿ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ಭೇಟಿ ಕೊಡುತ್ತಾರೆ ಹೌದು ಸ್ನೇಹಿತರೆ ಪಾಂಡುರಂಗ ವಿಠಲ ಸ್ಥಿತವಾದ ಈ ಮಹಾನ್ ಧಾರ್ಮಿಕ ನಗರವೇ ಪಂಡರಾಪುರ. ತಿರುಪತಿ ತಿಮ್ಮಪ್ಪ ಸಿರಿವಂತರ ದೇವತೆ ಎನಿಸಿದರೆ ಪಂಡರಾಪುರದ ವಿಠಲ ದೀನರ ದೇವತೆ ಎನಿಸಿದ್ದಾರೆ ಈ ಕಾರಣಕ್ಕೆ ದಕ್ಷಿಣ ಭಾರತದ ಬಡ ಮಧ್ಯಮ ವರ್ಗದ ಎಲ್ಲಾ ಜಾತಿಯ ಸಮುದಾಯಗಳ ಭಕ್ತರೇ ಹೆಚ್ಚು ಸಂಖ್ಯೆಯಲ್ಲಿ ಇವನ ದರ್ಶನ ಪಡೆಯುತ್ತಾರೆ. ಇಲ್ಲಿನ ಹಲವು ರೋಚಕ ವಿಷಯಗಳನ್ನು ತಿಳಿಸುತ್ತೇವೆ. ಪಂಡರಾಪುರ ಮುಖ್ಯವಾಗಿ ವಿಠಲನ ದೇವಾಲಯದಿಂದ ಹೆಸರುವಾಸಿ ಆಗಿದೆ ವಿಷ್ಣು ಅಥವಾ ಕೃಷ್ಣನ ಅವತಾರ ಎನ್ನಲಾಗುವ ವಿಠಲ ಇಲ್ಲಿ ತನ್ನ ಪತ್ನಿ ರುಕ್ಮಿಣಿ ಜೊತೆ ನೆಲಸಿದ್ದು ಭಕ್ತರನ್ನು ಯಾವಾಗಲೂ ಹರಸುತ್ತಾರೆ ಈ ದೇವಾಲಯ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಭೇಟಿ ನೀಡಲ್ಪಡುವ ದೇವಾಲಯ ಪೈಕಿ ಒಂದಾಗಿದೆ. ಪಂಡರಾಪುರದಲ್ಲಿ ಹರಿಯುವ ಪಾವನ ನದಿ ಚಂದ್ರ ಭಾಗದಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪಗಳು ನಾಶ ಆಗುತ್ತದೆ ಎಂದು ಜನರು ಭಾವಿಸುತ್ತಾರೆ. ಪಂಡರಾಪುರ ವಿಠಲನಿಗೆ ನಡೆದುಕೊಳ್ಳುವ ಸಹಸ್ರಾರು ಭಕ್ತರು ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಇದ್ದಾರೆ. ವಾರ್ಕರಿ ಪಂಥದವರು ವಿಠಲನ ಅಪ್ರತಿಮ ಜನಾಂಗ ಆಗಿದೆ ಪ್ರತಿ ವರ್ಷ ಆಷಾಢ ಏಕಾದಶಿ ಅಂದರೆ ಜೂನ್ ಅಥವಾ ಜುಲೈ ಅಲ್ಲಿ ಕಾರ್ತಿಕ ಏಕಾದಶಿ ಅಂದರೆ ನವೆಂಬರ್ ಅಲ್ಲಿ ವಾರ್ಕರಿ ಜನಾಂಗದವರು ವಿಠಲನ ಸನ್ನಿಧಿಗೆ ಪಾದ ಯಾತ್ರೆ ಕೈ ಗೊಳ್ಳುತ್ತಾರೆ ಇವರು ಗುಂಪು ಗುಂಪು ಆಗಿ ಪಾಲ್ಕೆ ಸಮೇತವಾಗಿ ವಿಠಲನ ದರ್ಶನಕ್ಕೆ ಪಂಡರಾಪುರ ತಲುಪುತ್ತಾರೆ ಈ ಗುಂಪುಗಳನ್ನು ದಿಂಡಿ ಎಂದೇ ಕರೆಯುತ್ತಾರೆ ಈ ಯಾತ್ರೆಯನ್ನು ಪಂಡರಾಪುರ ವರಿ ಎಂದು ಕರೆಯುತ್ತಾರೆ. ಈ ಯಾತ್ರೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಒಂದು ಅದ್ಬುತ ಸಂಪ್ರದಾಯ ಆಗಿದ್ದು ಲಕ್ಷ ಲಕ್ಷ ಜನ ಸಂಖ್ಯೆ ಬಂದು ಇಲ್ಲಿ ಸೇರುತ್ತಾರೆ. ಪಂಡರಾಪುರ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಭೀಮ ನದಿಯ ದಡದಲ್ಲಿ ಇದೆ.

ಪಂಡರಾಪುರ ಸೊಲ್ಲಾಪುರ ದಿಂದ ಸುಮಾರು 64 ಕಿಮೀ ದೂರದಲ್ಲಿ ಇದ್ದರೆ ಹುಬ್ಬಳ್ಳಿ ಧಾರವಾಡ ಇಂದ ಸುಮಾರು 316 ಕಿಮೀ ದೂರದಲ್ಲಿ ಇದೆ. ಹಾಗೆಯೇ ವಿಜಯಪುರ ದಿಂದ 111 ಕಿಮೀ ದೂರದಲ್ಲಿ ಇದ್ದರೆ ಕಲಬುರ್ಗಿ ಯಿಂದ ಸುಮಾರು 198 ಕಿಮೀ ದೂರದಲ್ಲಿ ಇದೆ. ಹಲವಾರು ಪ್ರವಾಸಿಗರು ಹಾಗೂ ಭಕ್ತಾದಿಗಳು ಹೆಚ್ಚಾಗಿ ಸೊಲ್ಲಾಪುರ ದಲ್ಲಿ ಇಳಿದು ಅಲ್ಲಿಂದ ಬಸ್ ಗಳ ಮೂಲಕ ಅಥವಾ ಟ್ಯಾಕ್ಸಿ ಮೂಲಕ ಪಂಡರಾಪುರ ತಲುಪುತ್ತಾರೆ. ಇಲ್ಲಿ ಉಳಿದುಕೊಳ್ಳಲು ಹಲವಾರು ಹೋಟೆಲ್ ಗಳು ಯಾತ್ರಿ ಪ್ರವಾಸಿಗಳು ಸಹಾಯಕ್ಕೆ ಸಿಗುತ್ತದೆ. 












No comments:

Post a Comment