Thursday, 31 October 2019

ಹೆಣ್ಣುಮಕ್ಕಳು ತೆಂಗಿನಕಾಯಿಯನ್ನು ಒಡೆದರೆ ಅದು ಅಶುಭ

ನಮ್ಮ ಹಿಂದೂ ಸಂಪ್ರದಾಯದಲ್ಲಿ ತೆಂಗಿನಕಾಯಿಗೆ ಬಹಳ ಒಳ್ಳೆಯ ಮಹತ್ವವನ್ನು ಕೊಡಲಾಗಿದೆ. ಪ್ರತಿಯೊಂದು ಪೂಜಾ ಹೋಮ ಹವನಗಳಲ್ಲಿ ಮತ್ತು ಮಂಗಳ ಕಾರ್ಯಗಳಲ್ಲಿ ತೆಂಗಿನಕಾಯಿಗೆ ಬಹಳ ಮಹತ್ವದ ಸ್ಥಾನವಿದೆ. ಪ್ರತಿಯೊಂದು ಮಂಗಳ ಕಾರ್ಯಗಳಲ್ಲೂ ಕೂಡ ತೆಂಗಿನ ಕಾಯಿ ಇರಲೇಬೇಕು ಮತ್ತು ತೆಂಗಿನಕಾಯಿಯನ್ನು ಸ್ತ್ರೀ ಸ್ವರೂಪಿಣಿ ಎಂದು ಕರೆಯುತ್ತಾರೆ. ಹಾಗಾದರೆ ಈ ತೆಂಗಿನಕಾಯಿಯನ್ನು ಪೂಜೆಯ ಸಮಯದಲ್ಲಿ ಏಕೆ ಒಡೆಯುತ್ತಾರೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ವಿಷ್ಣು ಭೂಲೋಕಕ್ಕೆ ಬರುವಾಗ ಲಕ್ಷ್ಮೀದೇವಿ ಕಲ್ಪವೃಕ್ಷ ಮತ್ತು ಕಾಮದೇನುಗಳನ್ನು ತನ್ನ ಜೊತೆಗೆ ಕರೆದುಕೊಂಡು ಬರುತ್ತಾನೆ. ಆದ್ದರಿಂದ ಕಲ್ಪವೃಕ್ಷ ಮರದಿಂದ ಬೆಳೆಯುವ ತೆಂಗಿನ ಕಾಯಿಗೆ ತನ್ನದೇ ಆದ ವಿಶೇಷವಾದ ಸ್ಥಾನವಿದೆ. ಇನ್ನು ತೆಂಗಿನಕಾಯಿಯನ್ನು ಲಕ್ಷ್ಮೀಯ ಸ್ವರೂಪ ಎಂದು ಕೂಡ ಕರೆಯುತ್ತಾರೆ.

ಮತ್ತು ಇದೆ ಕಾರಣಕ್ಕೆ ತೆಂಗಿನಕಾಯಿಯನ್ನು ಎಲ್ಲ ಮಂಗಳಕಾರ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಮತ್ತು ಹೋಮ ಹವನಗಳಲ್ಲಿ ತೆಂಗಿನಕಾಯಿಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಕಳಸದ ಸ್ಥಾಪನೆಗೆ ತೆಂಗಿನಕಾಯಿ ಬೇಕೇಬೇಕು ಮತ್ತು ನವರಾತ್ರಿಯಲ್ಲಿ ತೆಂಗಿನಕಾಯಿಗೆ ಬಹಳಷ್ಟು ಮಹತ್ವದ ಸ್ಥಾನವಿದೆ. ಇನ್ನು ಈ ತೆಂಗಿನಕಾಯಿ ವಿಷ್ಣು ದೇವರಿಗೆ ಬಹಳಷ್ಟು ಪ್ರಿಯವಾದದ್ದು ಆದ್ದರಿಂದ ತೆಂಗಿನಕಾಯಿಯನ್ನು ಪ್ರಸಾದ ರೂಪದಲ್ಲಿ ಇಟ್ಟು ಪೂಜೆಯನ್ನು ಮಾಡಲಾಗುತ್ತದೆ. ಇನ್ನು ಪೂಜೆಯ ಸಮಯದಲ್ಲಿ ಕಳಸದಲ್ಲಿ ತೆಂಗಿನಕಾಯಿಯನ್ನು ಇಟ್ಟು ಪೂಜೆ ಮಾಡಲಾಗುತ್ತದೆ ನಂತರ ಕಳಸದ ತೆಂಗಿನ ಕಾಯಿಯನ್ನು ಕಳಸದಲ್ಲಿಯೇ ಇಟ್ಟು ಪೂಜೆಗೆ ಉಪಯೋಗಿಸಿದ ಉಳಿದ ತೆಂಗಿನಕಾಯಿಯನ್ನು ಒಡೆದು ನಂತರ ಅದರಲ್ಲಿ ಪ್ರಸಾದವನ್ನು ಮಾಡಿ ಎಲ್ಲರಿಗೂ ಹಂಚಲಾಗುತ್ತದೆ. ಇನ್ನು ಮುಖ್ಯವಾದ ವಿಷ್ಯಯವೆಂದರೆ ಪೂಜೆ ಮಾಡಿದ ತೆಂಗಿನಕಾಯಿಯನ್ನು ಯಾವುದೇ ಕಾರಣಕ್ಕೂ ಮಹಿಳೆಯರು ಒಡೆಯಬಾರದು.

ಒಂದು ವೇಳೆ ಸ್ತ್ರೀಯರು ತೆಂಗಿನಕಾಯಿಯನ್ನು ಒಡೆದರೆ ಮಾಡಿದ ಪೂಜೆಗೆ ಫಲ ಸಿಗುವುದಿಲ್ಲ ಹಾಗೂ ಅಂದುಕೊಂಡ ಕೆಲಸಗಳು ನೆರವೇರುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು. ಇನ್ನು ತೆಂಗಿನಕಾಯಿಯನ್ನು ಪೂಜೆಗೆ ಬಳಕೆ ಮಾಡುವಾಗ ಯಾವುದೇ ಕಾರಣಕ್ಕೂ ತೆಂಗಿನಕಾಯಿಯ ಜುಟ್ಟನ್ನು ತೆಗೆಯಬಾರದು ಹೀಗೆ ಏನಾದರೂ ತೆಂಗಿನ ಕಾಯಿಯ ಜುಟ್ಟನ್ನು ತೆಗೆದು ಪೂಜೆ ಮಾಡಿದರೆ ಪೂಜೆ ಫಲನೀಡುವುದಿಲ್ಲ. ಪೂಜೆ ಮಾಡಿ ತೆಂಗಿನಕಾಯಿಯನ್ನು ಒಡೆಯುವಾಗ ಆ ತೆಂಗಿನಕಾಯಿ ಹಾಳಾಗಿದ್ದರೆ ಅದು ಅಶುಭ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅದು ಅಶುಭ ಅಲ್ಲ ಹೌದು ಸ್ನೇಹಿತರೆ ತೆಂಗಿನಕಾಯಿ ಹಾಳಾಗಿದ್ದರೆ ನೀವು ಮಾಡಿದಂತಹ ಪೂಜೆಯಲ್ಲಿ ಏನೋ ತೊಂದರೆ ಆಗಿದೆ ಎಂದು ಅರ್ಥ ಮತ್ತು ನೀವು ಆ ತೊಂದರೆಯನ್ನು ಸರಿ ಮಾಡಿಕೊಂಡು ಇನ್ನೊಮ್ಮೆ ಪೂಜೆ ಮಾಡಿ ಅನ್ನುವುದರ ಸೂಚನೆಯಾಗಿದೆ.

ಆದರೆ ಇನ್ನೂ ಕೆಲವರ ಪ್ರಕಾರ ಪೂಜೆಯ ಸಮಯದಲ್ಲಿ ತೆಂಗಿನ ಕಾಯಿ ಹಾಳಾದರೆ ಅದು ಅಶುಭ ಅಲ್ಲ ಅದೊಂದು ಶುಭ ಸೂಚನೆ ಎಂದು ಸಹ ಹೇಳುತ್ತಾರೆ ಒಟ್ಟಿನಲ್ಲಿ ಯಾರೇ ಏನೇ ಹೇಳಿದರೂ ಸಹ ಅವರವರ ನಂಬಿಕೆ ಅವರಿಗೆ ಒಳ್ಳೆಯದು ಹಾಗಾಗಿ ಇದು ಪರಿಪೂರ್ಣವಾಗಿ ಕೆಟ್ಟದ್ದು ಎಂದು ಹೇಳಲಾಗುವುದಿಲ್ಲ ಹಾಗೇನೇ ಒಳ್ಳೆಯದು ಅಂತಾನೂ ಹೇಳಲಾಗುವುದಿಲ್ಲ. ಒಟ್ಟಿನಲ್ಲಿ ದೈವಶಕ್ತಿಯಲ್ಲಿ ನಂಬಿಕೆ ಇಟ್ಟು ಮಾಡಿದ ಎಲ್ಲ ಕೇಲಸಗಳು ಸಹ ಒಳ್ಳೆಯವೇ ಆಗಿರುತ್ತವೆ. ಈ ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮ ಎಲ್ಲಾ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

No comments:

Post a Comment