Wednesday, 30 October 2019

ಮತ್ಸ್ಯಾವತಾರ

ಶ್ರೀಮನ್ನಾರಾಯಣ ರಾಕ್ಷಸ ಸಂಹಾರಕ್ಕಾಗಿ ಈ ಭೂಲೋಕದಲ್ಲಿ ಹಲವಾರು ಅವತಾರಗಳನ್ನು ಎತ್ತಿದ್ದಾನೆ. ಭಗವಂತನ ಲೀಲೆಗೆ ಪಾತ್ರ ರಾಗದಿ ರುವವರು ಯಾರು. ಅಂತಹ ಭಗವಂತನ ಹತ್ತು ಅವತಾರಗಳಲ್ಲಿ ಮೊದಲನೆಯ ಅವತಾರವೇ ಮತ್ಸ್ಯಾವತಾರ. 

 ಸೋಮಕ ಎಂಬ ರಾಕ್ಷಸ ವೇದ ಗಳನ್ನೆಲ್ಲ ಅಪಹರಿಸಿ ಕೊಂಡೊಯ್ದಾಗ ಶ್ರೀಮನ್ನಾರಾಯಣ ಮತ್ಸ್ಯಾವತಾರವನ್ನು ತಳೆದು ವೇದಗಳನ್ನೆಲ್ಲಾ  ತಿರುಗಿಸಿ ತಂದುಕೊಡುತ್ತಾನೆ.
 
ಬಹಳ ಹಿಂದೆ ಸೂರ್ಯಪುತ್ರ   ವೈವಸ್ವತಮನು ವಿಷ್ಣುವನ್ನು ಕುರಿತು ತಪಸ್ಸು ಮಾಡುತ್ತಿರುತ್ತಾನೆ. ಪ್ರಳಯಕಾಲದಲ್ಲಿ ಚರಾಚರರೂಪವಾದ ಜಗತ್ತನ್ನು ಒಬ್ಬನೇ ಸ್ವತಂತ್ರವಾಗಿ ಅನಾಯಾಸದಿಂದ ಕಾಪಾಡುವ ಸಾಮರ್ಥ್ಯವನ್ನು ಅನು ಗ್ರಹಿಸುವಂತೆ ವರವನ್ನು ಪಡೆಯುತ್ತಾನೆ. 
 ಒಮ್ಮೆ ಮನು ತರ್ಪಣ ಮಾಡುತ್ತಿದ್ದಾಗ ಆತನ ಮೇಲೆ ಒಂದು ಮೀನು ಬಿದ್ದು ಬಿಡುತ್ತದೆ. ಕರುಣಾ ಶಾಲಿ ಯಾದ ಮನು ಅದನ್ನು ಕಾಪಾಡಲು ತನ್ನ ಅರ್ಗ್ಯ ಪಾತ್ರೆಯೊಳಗೆ ಹಾಕುತ್ತಾನೆ. ಒಂದೇ ರಾತ್ರಿಯಲ್ಲಿ ಆ ಮೀನು 16 ಅಂಗುಲ ಬೆಳೆಯುತ್ತದೆ. ಅದನ್ನು ನೋಡಿ ಆ ಮೀನನ್ನು ಜಲಾಶಯಕ್ಕೆ ಬಿಡಲಾಗುತ್ತದೆ. ಆ ಮೀನು ಒಂದೇ ರಾತ್ರಿಯಲ್ಲಿ ಆರು ಮೊಳದುದ್ದ ದೊಡ್ಡ ಮೀನಾಗಿ ಬೆಳೆದು ಅಯ್ಯೋ ನನ್ನನ್ನು ಕಾಪಾಡು ಕಾಪಾಡು ಎಂದು ಜೋರಾಗಿ ಮೊರೆ ಇಡುತ್ತದೆ. 
 ಕ್ರಮವಾಗಿ ಮಡುವಿನಿಂದ, ನದಿಯಿಂದ, ಕೊನೆಗೆ ಸಮುದ್ರಕ್ಕೆ ಸೇರುತ್ತದೆ. 
 ಸಮುದ್ರದ ನೀರನ್ನೆಲ್ಲ ಆವರಿಸಿಕೊಂಡಅದರ  ಸಾಮರ್ಥ್ಯವನ್ನು ನೋಡಿ ಭಯಬೀತ ನಾಗುತ್ತಾನೆ. 
 ನಂತರ ಅವನು ಭಯದಲ್ಲಿ ನೀನ್ಯಾರು ರಾಕ್ಷಸನೋ  ಅಥವಾ ಈ ವಿಶ್ವವನ್ನು ವ್ಯಾಪಿಸಿರುವ ವಿಷ್ಣುವೋ ಎಂದು ಕೇಳುತ್ತಾನೆ. 
 ಆಗ ಮತ್ಸ್ಯ ರೂಪಿಯಾದ ಶ್ರೀಮನ್ನಾರಾಯಣನು ಅರಸನೇ !ಇನ್ನು ಕೆಲಕಾಲದಲ್ಲಿ ಈ ಭೂಮಿಯಲ್ಲ ಮುಳುಗಿ ಹೋಗುತ್ತದೆ. ಇಲ್ಲಿರುವ ದೇವ ನಿರ್ಮಿತವಾದ ಹಡಗಿನಲ್ಲಿ ಸಕಲ ವಿಧವಾದ ಸ್ವೇದಜ,  ಅಂಡಜ, ಉದ್ಬೀಜ ಜರಾಯುಜ ಗಳೆಂಬ ಪ್ರಾಣಿ ವರ್ಗಗಳನ್ನು ಇದರಲ್ಲಿ ಇಟ್ಟು ಕಾಪಾಡು 

 ಪ್ರಳಯ ಮಾರುತದಿಂದ ತಲೆಕೆಳಗಾಗುವ ಸಂದರ್ಭದಲ್ಲಿ ನೀನು ಈ ಹಡಗನ್ನು ನನ್ನ ಕೊಂಬಿನ ಮೇಲೆ ಇಟ್ಟು ಜೋಪಾನ ಮಾಡು. ಪ್ರಳಯ ಮುಗಿದ ಬಳಿಕ ಕೃತಯುಗ ಪ್ರಾರಂಭವಾದಾಗ ನೀನು ಜಗತ್ತಿಗೆ ದೈವತ್ವ ಪರಾಕ್ರಮಗಳು ನಿನಗೆ ಲಭಿಸುತ್ತದೆ. ಆಗ ನೀನು ಮನ್ವಂತರಾಧಿಪತ್ಯ  ಪಡೆದು ದೇವತೆಗಳಿಗೂ ಪೂಜಾನೀಯಾನಾಗುವೆ ಎಂದು ಹೇಳುತ್ತಿದ್ದಂತೆ ಪೂರ್ವ ಕಲ್ಪದ ಅವಸಾನದಲ್ಲಿ ಪ್ರಳಯ ಉಂಟಾಗುತ್ತದೆ. ಪ್ರಪಂಚವೇ ಸಮುದ್ರದಲ್ಲಿ ಮುಳುಗಿ ಹೋಗಿತ್ತು. ಚತುರ್ಮುಖಬ್ರಹ್ಮ ನಿದ್ದೆಯಲ್ಲಿದ್ದಾಗ ಆತನ ನಾಲ್ಕು ಬಾಯಿಗಳಿಂದ ಹೊರಬರುತ್ತಿದ್ದ ವೇದ ರಾಶಿಯನ್ನು ಹಯಗ್ರೀವಎಂಬ ಅಸುರ ಅಪಹರಿಸುತ್ತಾನೆ. ಆ ಕಾಲದಲ್ಲಿ ಭಗವದ್ಭಕ್ತಾಗ್ರೆಸನಾ  ಗಿದ್ದ ಸತ್ಯವ್ರತನೆಂಬ ರಾಜರ್ಷಿ  ಕೃತಮಾಲಾ ಎಂಬ ನದಿ ಮಧ್ಯದಲ್ಲಿ ನಿಂತು ತಪಸ್ಸು ಮಾಡುತ್ತಿದ್ದಾಗ ಒಂದು ಚಿಕ್ಕ ಮೀನು ನೀರಿನಲ್ಲಿ ಬಂದು ಅವನ ಕೈಯ್ಯಲ್ಲಿ ಸೇರುತ್ತದೆ. ಸತ್ಯವ್ರತ ಅದನ್ನು ನದಿಯೊಳಗೆ ಬಿಟ್ಟ. ಆಗ ಆ ಮೀನು ಸತ್ಯವ್ರತ ನನ್ನು ಕುರಿತು ನನ್ನನ್ನು ಈ ಜಲಚರಗಳು  ತಿಂದು ಹಾಕಿಬಿಡುತ್ತವೆ ನನ್ನನ್ನು ಕಾಪಾಡು ಎಂದು ಬೇಡುತ್ತದೆ.    ಅದನ್ನು ಕಾಪಾಡಲು ತಯಾರಾದ ಸತ್ಯವ್ರತ ಅದನ್ನು ಎತ್ತಿಕೊಂಡು ತನ್ನ ಆಶ್ರಮಕ್ಕೆ ತಂದು ಕಾಪಾಡು ತೊಡಗಿದ. ಕ್ರಮವಾಗಿ ಅದು ಮಡಕೆ ಕುಡಿಕೆ ಗುಡಾಣ ಸರೋವರ ನದಿ ಎಂದು ಸರೋವರಗಳ ಮೂಲಕ ಸಮುದ್ರವನ್ನು ಸೇರುತ್ತದೆ. ಸತ್ಯವ್ರತ ಮತ್ಸ್ಯ ರೂಪಿಯಾದ ಪರಮಾತ್ಮನ ಅನುಗ್ರಹದಿಂದ ಅಂದಿಗೆ ಏಳನೆಯ ದಿನದಲ್ಲಿ ನಡೆದ ಪ್ರಳಯದಲ್ಲಿ ದಿವ್ಯ ಹಡಗಿನ ಮೂಲಕ ಜಗತ್ತನ್ನು ಕಾಪಾಡಿ ವೈವಸ್ವತ ಮನು ವಾದ.

No comments:

Post a Comment