Wednesday, 30 October 2019

ಶ್ರೀಕೃಷ್ಣ

ಶ್ರೀಮನ್ನಾರಾಯಣನ ಹತ್ತು ಅವತಾರಗಳಲ್ಲಿ ಎಂಟನೆಯ ದೆ ಶ್ರೀಕೃಷ್ಣ ಅವತಾರ. 
 ಚಂದ್ರವಂಶದ ಯದು ಕುಲದಲ್ಲಿ ಜನಿಸಿದ ಸಾತ್ವತ  ರಾಜನ ಸಂತತಿಯಲ್ಲಿ ಶೂರ ರಾಜನ ಮಗನಾದ ವಸುದೇವನ ಹೆಂಡತಿಯಾದ ದೇವಕಿಯಲ್ಲಿ ಜನಿಸಿದ ಎಂಟು ಮಕ್ಕಳಲ್ಲಿ ಕಡೆಯವ.

 ವೈಕುಂಠದ ದ್ವಾರಪಾಲಕರಾದ ಜಯವಿಜಯರು ಸನಕಾದಿ ಮುನಿಗಳ ಶಾಪ ವನ್ನು ಹೊಂದಿ ಭೂಲೋಕದಲ್ಲಿ ಮೂರನೆಯ ಬಾರಿ ಶಿಶುಪಾಲ ದಂತವಕ್ತ್ರ ಎಂಬ ಹೆಸರಿನಿಂದ ಜನಿಸಲಾಗಿ ಅವರನ್ನು ಸಂಹರಿಸುವ ಸಲುವಾಗಿ ನಾರಾಯಣ ತನ್ನ ಪೂರ್ಣ ಅಂಶದಿಂದ ಭೂಲೋಕದಲ್ಲಿ ಅವತರಿಸುತ್ತಾನೆ. 

 ಈ ಅವತಾರ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದಲ್ಲಿ 28ನೆಯ ದ್ವಾಪರಯುಗದ ಅಂತ್ಯಭಾಗದಲ್ಲಿ ನಡೆಯಿತು. 
 
ದೇವಕಿಯ ಮೊದಲ ಆರು ಗರ್ಭ ಗಳನ್ನು ಕಂಸ ನಾಶಗೊಳಿಸಲು ಏಳನೆಯ ಬಾರಿ ದೇವಕಿ ಗರ್ಭವನ್ನು ಧರಿಸಿದಾಗ ವಿಷ್ಣು ಅವನನ್ನು ವಸುದೇವನ ಮತ್ತೊಬ್ಬ ಪತ್ನಿಯಾದ ರೋಹಿಣಿಯ ಗರ್ಭದಲ್ಲಿ
ಜನಿಸಿದವನೇ ಬಲರಾಮ. 
ಮತ್ತೊಮ್ಮೆ ದೇವಕಿಯು ಗರ್ಭಿಣಿಯಾಗಿ ನವಮಾಸಗಳು ತುಂಬುವ ಬಳಿಕ ಶ್ರಾವಣಮಾಸದ ಕೃಷ್ಣಾಷ್ಟಮಿ ರೋಹಿಣಿ ನಕ್ಷತ್ರ ಬುಧವಾರ ಮಧ್ಯರಾತ್ರಿಯಲ್ಲಿ ಶ್ರೀವಿಷ್ಣು ಭೂಲೋಕದಲ್ಲಿ ಕೃಷ್ಣನಾಗಿ ಅವತರಿಸುತ್ತಾನೆ. 
 ಶ್ರೀಕೃಷ್ಣ ಪರಮಾತ್ಮನ ಲೀಲೆಗಳನ್ನು ನಾವೆಲ್ಲ ಕೇಳಿಯೇ ಇದ್ದೇವೆ. ಅದನ್ನು ಸಂಪೂರ್ಣವಾಗಿ ಮತ್ತೊಂದು ಲೇಖನದಲ್ಲಿ ನಿಮ್ಮ ಮುಂದೆ ತರುತ್ತೇನೆ. ಶ್ರೀಕೃಷ್ಣ ಪರಮಾತ್ಮನ ವಿಚಾರವಾಗಿ ತಿಳಿಯಲುನಾವು ಮಹಾಭಾರತವನ್ನು ಓದಲೇಬೇಕು. 
 ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ. ದೇವಕೀ  ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ. 🙏🙏yashuprasad 🙏

No comments:

Post a Comment