#ತುಳಸಿ_ಗಿಡದಿಂದ_ವಾಸ್ತು_ದೋಷ_ಪರಿಹಾರ!
ತುಳಸಿ ಗಿಡವು ಒಂದು ಅದ್ಭುತ ಔಷಧಿ ಸಸ್ಯ ಎಂದೇ ಹೆಸರಾಗಿದೆ. ಇದರ ಉಪಯೋಗ ಮತ್ತು ಮಹತ್ವವನ್ನು ಆಯುರ್ವೇದ ಶಾಸ್ತ್ರದಲ್ಲಿ ಸಾರಿ ಹೇಳಲಾಗಿದೆ.
ಈ ಸಸ್ಯಕ್ಕೆ ನಮ್ಮ ದೇಶದ ಜನ ಸಂಪ್ರದಾಯದಲ್ಲಿ ಪವಿತ್ರ ಸ್ಥಾನವಿದೆ. ಮನೆ ಮುಂದೆ ಬೆಳೆಸಿ ಪೂಜಿಸುವ ಪರಿಪಾಠವೂ ಇದೆ. ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಬೃಂದಾವನವಿರುತ್ತದೋ, ಆ ಮನೆಗೆ ಯಾವ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ ಎಂಬುದು ಹಿಂದೂ ಸಂಸ್ಕೃತಿಯಲ್ಲಿದೆ. ಜತೆಗೆ ಮನೆಯವರೆಲ್ಲರಿಗೂ ಆರೋಗ್ಯ. ಮನೆಯ ಸ್ತ್ರೀಗೆ ಸೌಭಾಗ್ಯ ಬರುತ್ತದೆ. ಇದು ಬೆಳೆದ ಸುತ್ತಮುತ್ತಲ ಪ್ರದೇಶವು ಪವಿತ್ರವಾಗುತ್ತದೆ. ಇದರ ಮೇಲೆ ಬೀಸುವ ಗಾಳಿಯನ್ನು ಸೇವಿಸಿದರೆ ಆರೋಗ್ಯವಂತರಾಗಿ ಮತ್ತು ಜನ್ಮ ಜನ್ಮಾಂತರದ ಪಾಪಗಳ ಪರಿಹಾರವಾಗುತ್ತದೆ. ನಮ್ಮ ವಾಸ್ತು ಶಾಸ್ತ್ರದಲ್ಲಿ ಈ ತುಳಸಿ ಗಿಡದಿಂದ ಅದ್ಭುತವಾದ ಪರಿಹಾರಗಳನ್ನು ಪಡೆಯುತ್ತೇವೆ. ಸಕಲ ವಾಸ್ತು ದೋಷಗಳನ್ನು ನಿವಾರಣೆ ಮಾಡಿಕೊಂಡು ಸುಖ ಸಂತೋಷದಿದ ಬಾಳಬಹುದು.
ಪುರಾತನ ಗ್ರಂಥಗಳ ಪ್ರಕಾರ ತುಳಸಿಯು ಅಗೋಚರವಾಗಿ ಬಹಳ ಭಾರವನ್ನು ನೀಡುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿಯುವುದಿಲ್ಲ. ಈ ತುಳಸಿಯ ಒಂದು ದಳವು ಶ್ರೀಮನ್ ನಾರಾಯಣನ ತೂಕಕ್ಕೆ ಸಮವಾಗಿದೆ.
ನಮ್ಮ ವಾಸ್ತು ಶಾಸ್ತ್ರದ ಪ್ರಕಾರ ಎಲ್ಲಿ ಭಾರ ಬೇಕೋ ಅಥವಾ ಎಲ್ಲಿ ವಾಸ್ತು ದೋಷವಿದೆಯೋ ಅಲ್ಲಿ ಇಟ್ಟು ಪೂಜಿಸಬೇಕು. ಸಾಮಾನ್ಯವಾಗಿ ನೈರುತ್ಯ ಮತ್ತು ದಕ್ಷಿಣದಲ್ಲಿ ಭಾರವಿರಬೇಕಾಗುತ್ತದೆ. ಈ ದಿಕ್ಕುಗಳಲ್ಲಿ ಸ್ಥಾಪಿಸಿದರೆ ಸಮತೋಲನ ಮಾಡಬಹುದು. ಆದರೆ, ಇದು ದೇವರಿಗೆ ಸಮಾನವೆಂದು ಈಶಾನ್ಯದಲ್ಲಿ ಬೆಳೆಸಿದರೆ ಕೆಲಸ ಕಾರ್ಯಗಳಲ್ಲಿ ತೊಂದರೆ ಮತ್ತು ಮಾನಸಿಕವಾಗಿ ಅಸಮತೋಲನ ಪಡಬೇಕಾಗುತ್ತದೆ.
ಆದರೆ, ಈಗಾಗಲೇ ನೈರುತ್ಯದಲ್ಲಿ ನೀರಿನ ಟ್ಯಾಂಕ್ ಇದ್ದರೆ ಆ ಜಾಗದಲ್ಲಿ ಇಡಬಾರದು ಪಶ್ಚಿಮ ಅಥವಾ ದಕ್ಷಿಣದಲ್ಲಿಡಬೇಕು. ಗೃಹ ಪ್ರವೇಶಕ್ಕೆ ಮೊದಲು ಮೂರು ದಿನ ಮುಂಚಿತವಾಗಿ ತುಳಸಿ ಗಿಡವನ್ನು ಇಟ್ಟು ನೀರೆರೆಯಬೇಕು. ಈ ಗಿಡವು ಒಣಗಿದರೆ ವಾಸ್ತು ದೋಷ ಅಥವಾ ಬೇರಾವುದೋ ದೋಷವಿದೆ ಎಂದು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ.
ಈ ಪವಿತ್ರವಾದ ತುಳಸಿ ಗಿಡವನ್ನು ಎಲ್ಲಿ ಪೂಜಿಸುತ್ತಾರೋ ಅಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ಶ್ರೀಲಕ್ಷ್ಮಿ, ಸರಸ್ವತಿ, ಮಂಗಳಗೌರಿ, ಸಪ್ತ ಋಷಿಗಳು, ಸಪ್ತ ಕನ್ಯೆಯರು, ಅಷ್ಟ ದಿಕ್ಪಾಲಕರು, 33 ಕೋಟಿ ದೇವತೆಗಳು, ಸಪ್ತ ಸಮುದ್ರಗಳು, ಸರ್ವ ತೀರ್ಥಗಳು, ಸರ್ವ ಜೀವ ನದಿಗಳು, ಯಕ್ಷ ಕಿನ್ನರ ಕಿಂಪುರುಷ, ಗರುಡು ಗಂಧರ್ವರು, ಚತುರ್ವೇದಗಳು, ಸಪ್ತ ಕೋಟಿ ಮಹಾ ಮಂತ್ರಗಳನ್ನು ಅಷ್ಟ ದಶ ಪುರಾಣಗಳು, ಕಾಮಧೇನು, ಕಲ್ಪ ವೃಕ್ಷಾದಿಗಳು ಇರುತ್ತಾರೆಂದು ಅಗಸ್ತ್ಯ ಸಂಹಿತೆಯಲ್ಲಿ ಉಲ್ಲೇಖವಾಗಿದೆ.
ಈ ಪವಿತ್ರವಾದ ತುಳಸಿ ಗಿಡವನ್ನು ಯಾರ ಮನೆಯ ಅಂಗಳದಲ್ಲಿ ಕ್ರಮಬದ್ಧವಾಗಿ ಬೆಳೆಸುತ್ತಾರೋ ಅವರ ಮನೆಯಲ್ಲಿ ಭೂತ, ಪ್ರೇತ, ಪಿಶಾಚಿ, ಬ್ರಹ್ಮ ರಾಕ್ಷಸ, ಶಾಕಿನಿ, ಡಾಕಿನಿ, ಭೂತ ಗಣಗಳು ನಿವಾರಣೆಯಾಗಿ ಉತ್ತಮ ಜೀವನ ನಡೆಸಬಹುದು.
ತುಳಸಿ ಗಿಡದಲ್ಲಿನ ಬದಲಾವಣೆಗಳಿಂದ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಗಳು ತಿಳಿದುಕೊಳ್ಳಿ.
ಮನೆಯ ಮುಂದಿರುವ ತುಳಸಿ ಗಿಡದಿಂದಾಗುವ ಪ್ರಯೋಜನಗಳ ಕುರಿತು ನಿಮಗೆಲ್ಲಾ ತಿಳಿದಿದೆ. ಇದರಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ಆಧ್ಯಾತ್ಮಿಕವಾಗಿಯೂ ತುಳಸಿಗಿಡ ಮನೆಯಲ್ಲಿದ್ದರೆ ಒಳ್ಳೆಯದು, ಇದರಿಂದ ಎಲ್ಲಾ ಒಳ್ಳೆಯದೇ ಆಗುತ್ತದೆ.
ಆದರೆ ಮನೆಯಲ್ಲಿನ ತುಳಸಿ ಗಿಡ ಕೆಲವು ಕಾರಣಗಳಿಂದ ತನ್ನ ಅಸಲಿ ಬಣ್ಣ ಬದಲಾಗುವುದು, ಆಕಸ್ಮಿಕವಾಗಿ ಎಲೆಗಳು ಒಣಗುವುದು, ಉದುರುವುದು ಹೀಗೆ ಅನೇಕ ರೀತಿಯಲ್ಲಿ ಬದಲಾವಣೆಗಳಾಗುತ್ತವೆ. ಇದರಿಂದ ಆ ಮನೆಯಲ್ಲಿರುವವರಿಗೆ ಭವಿಷ್ಯದಲ್ಲಾಗುವ ಘಟನೆಗಳ ಕುರಿತು ತಿಳಿಯಬಹುದಂತೆ.
ಈ ಕ್ರಮದಲ್ಲಿ ತುಳಸಿಗಿಡ ಹೇಗೆ ಬದಲಾದರೆ ಏನಾಗುತ್ತದೆ ಎಂದು ತಿಳಿಯೋಣ.
ಎಲೆಗಳು ಸಡನ್ ಆಗಿ ಬಣ್ಣ ಬದಲಾಯಿಸಿದರೆ….
ತುಳಸಿ ಗಿಡದ ಎಲೆಗಳು ಸಡನ್ ಆಗಿ ಬಣ್ಣ ಬದಲಾದರೆ ಅದರರ್ಥ, ಆ ಮನೆಯಲ್ಲಿನವರ ಮೇಲೆ ಕ್ಷುದ್ರಶಕ್ತಿ ಪ್ರಯೋಗಿಸಲಿದ್ದಾರೆ ಎಂದರ್ಥವಂತೆ.
ಆರೋಗ್ಯಕರ ತುಲಸಿಗಿಡ ಎಲೆಗಳು ಸಡನ್ ಆಗಿ ಒಣಗಿದರೆ.
ನಿತ್ಯ ನೀರು ಹಾಕಿ ಬೆಳಸುತ್ತಿರುವ ತುಲಸಿಗಿಡ ಎಲೆಗಳು ಸಡನ್ ಆಗಿ ಒಣಗಿದರೆ ಅದರ ಅರ್ಥ, ಆ ಮನೆಯ ಯಜಮಾನ ಕೆಲವೇ ದಿನಗಳಲ್ಲಿ ಭಯಂಕರ ರೋಗಕ್ಕೆ ತುತ್ತಾಗಲಿದ್ದಾನೆ ಎಂದರ್ಥ.
ತುಳಸಿಗಿಡಕ್ಕೆ ನೀರು ಹಾಕಿಲ್ಲವೆಂದರೂ ಸೊಂಪಾಗಿ ಬೆಳೆಯುತ್ತಿದೆ ಎಂದರೆ!
ಮನೆಯಲ್ಲಿನ ತುಳಸಿ ಗಿಡಕ್ಕೆ ನೀರು ಹಾಕಿಲ್ಲವೆಂದರೂ ಸೊಂಪಾಗಿ ಬೆಳೆಯುತ್ತದೆ ಎಂದರೆ , ಆಮನೆಯಲ್ಲಿರುವವರಿಗೆ ಅದೃಷ್ಟ ಕುಲಾಯಿಸಲಿದೆ. ಭವಿಷ್ಯದಲ್ಲಿ ಅವರು ಭಾರಿ ಸಂಪತ್ತು ಗಳಿಸಲಿದ್ದಾರಂತೆ.
ತುಳಸಿಗಿಡ ನೆಟ್ಟ ಕುಂಡಿಯಲ್ಲಿ……
ತುಳಸಿಗಿಡ ನೆಟ್ಟ ಕುಂಡಿಯಲ್ಲಿ ಮತ್ತೊಂದು ತುಳಸಿಗಿಡ ಬೆಳೆದರೆ, ಮನೆಯಲ್ಲಿರುವವರಿಗೆ ಉದ್ಯೋಗರೀತ್ಯ ಉನ್ನತ ಸ್ಥಾನಕ್ಕೆ ಏರಲಿದ್ದಾರಂತೆ. ಅಂದುಕೊಂಡ ಎಲ್ಲಾ ಕಾರ್ಯಗಳು ಅಡ್ಡಿ ಆತಂಕಗಳಿಲ್ಲದೆ ಸಾಗಲಿವೆಯಂತೆ.
ಕಾರಣಾಂತರಗಳಿಂದ ತುಳಸಿಗಿಡ ಒಣಗಿದರೆ..
ತುಳಸಿಗಿಡ ಕಾರಣಾಂತರಗಳಿಂದ ಒಣಗಿದರೆ, ತಕ್ಷಣ ನೀರು ಹಾಕಿ ಸೊಂಪಾಗಿ ಬೆಳೆಯುವಂತೆ ಆರೈಕೆ ಮಾಡಬೇಕು. ಇಲ್ಲವಾದರೆ ಒಳ್ಳೆಯದಾಗಲ್ವಂತೆ. ತುಳಸಿಗಿಡ ಹಸಿರಾಗಿ ಸೊಂಪಾಗಿ ಬೆಳೆದಿರುವ ಮನೆಯಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಯಾವುದೇ ಸಮಸ್ಯೆಗಳು ಬರುವುದಿಲ್ಲ.
No comments:
Post a Comment