Wednesday, 30 October 2019

ವರಾಹ ಅವತಾರ

ಭಗವಂತನಾದ ಶ್ರೀಮನ್ನಾರಾಯಣನ ಮೂರನೆಯ ಅವತಾರವೇ ವರಾಹ ಅವತಾರ. ಭಗವಂತನ ಲೀಲಾ ಅವತಾರಗಳ ವರ್ಣಿಸುತ್ತಾ ಹೋದಷ್ಟು ನಮಗೆ ಎಲ್ಲಿಲ್ಲದ ಆನಂದ ದೊರೆಯುತ್ತದೆ. 
 
ಹಿರಣ್ಯಾಕ್ಷ ವಧೆ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಶ್ವೇತವರಾಹ ಕಲ್ಪದಲ್ಲಿ ನಡೆದಿದೆ.
 
ಹಿರಣ್ಯಾಕ್ಷ ಒಬ್ಬ ರಾಕ್ಷಸ. ಕಶ್ಯಪ ಮುನಿಯಿಂದ ಸ್ಥಿತಿಯಲ್ಲಿ ಜನಿಸಿದವ ಇವನ ಸಹೋದರನೇ ಹಿರಣ್ಯಕಶಿಪು. ಹಿರಣ್ಯಾಕ್ಷ ಋಷಭಾನು ಅಥವಾ ಋಷಭದ್ಭಾನು ವೆಂಬ ತರುಣಿಯನ್ನು ಮದುವೆಯಾಗಿ ಶಕುನಿ, ಶಂಬರ, ದೃಷ್ಟಿ ಭೂತ ಸಂತಾಪನ,  ವೃಕ ಕಾಲ ನಾಭ, ಮಹಾನಾಥ ಹರಿಸ್ಮ್ಯಾಶ್ರು   ಉತ್ಕಟ ಮುಂತಾದ ಅನೇಕ ಮಂದಿ ಪುತ್ರರನ್ನು ಪಡೆಯುತ್ತಾನೆ.

 ಇವ ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ಅನೇಕ ವರಗಳನ್ನು ಪಡೆದು ದೇವತೆಗಳನ್ನು ಪೀಡಿಸಿ ಲೋಕಕಂಟಕನಾಗಿ ಎಲ್ಲರಿಗೂ ಹಿಂಸೆಯನ್ನು ನೀಡುತ್ತಿರುತ್ತಾನೆ. ಭೂಮಿಯನ್ನು ಸಮುದ್ರದೊಳಗೆ ಅಡಗಿಸಿರುತ್ತಾನೆ. 
 
ಹಿರಣ್ಯಾಕ್ಷನನ್ನು ಸಂಹರಿಸುವುದಕ್ಕಾಗಿ ವಿಷ್ಣು ಈ ಅವತಾರವನ್ನು ಕೈಗೊಳ್ಳುತ್ತಾನೆ.
 
ಪ್ರಳಯ ಜಲದಲ್ಲಿ ಮುಳುಗಿಹೋಗಿದ್ದ ಭೂಮಿಯನ್ನು ಉದ್ಧರಿಸುವುದು ಕ್ಕೋಸ್ಕರ ಅನಂತನಾದ ಶ್ರೀ ಭಗವಂತನು ಸಮಸ್ತ ಯಜ್ಞಮಯವಾದವರಾಹ ದೇಹ ದಲ್ಲಿ ಅವತರಿಸುತ್ತಾನೆ.
 
ವರಾಹ ಅವತಾರದಲ್ಲಿ ಆತನು ಸಮುದ್ರದೊಳಗಣ ತನ್ನನ್ನು ಎದುರಿಸಲು ಬಂದ ದೈತ್ಯನಾದ  ಹಿರಣ್ಯಾಕ್ಷನನ್ನು ಇಂದ್ರನು  ವಜ್ರಾಯುಧದಿಂದ  ಪರ್ವತವನ್ನು ಸೀಳಿದಂತೆ ತನ್ನ ಕೊರೆದಾಡಿನಿಂದ  ಸೀಳಿ ಹಾಕಿ ಬಿಟ್ಟನು.
✍️yashu✍️

No comments:

Post a Comment