ಶುಭ ಸಮಾರಂಭಗಳಲ್ಲಿ ಮಾವಿನ ತೋರಣವನ್ನು ಯಾಕೆ ಕಟ್ಟುತ್ತಾರೆ .?
ಮನೆಯಲ್ಲಿ ,ಮದುವೆ;ಮುಂಜಿ ಅಥವಾ ಶುಭ ಸಮಾರಂಭಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿದ್ದಾಗ ಮಾವಿನ ತೋರಣ ಕಟ್ಟುತ್ತಾರೆ.!
ಈ ತೋರಣ ಅಲಂಕಾರಕ್ಕೆ ;ಸಂಪ್ರದಾಯಕ್ಕೆ ಮಾತ್ರ ಸಿಮಿತವಲ್ಲ.
ಮಾವಿನ ಎಲೆಗಳು ದ್ಯುತಿಸಂಶ್ಲೇಷಣ ಕ್ರೀಯೆಯನ್ನು ನಡೆಸುತ್ತವೆ.ಅಂದರೆ ಇಂಗಾಲದಡೈಆಕ್ಸೈಡ್'ನ್ನು ತನ್ನೊಳಗೆ ತೆಗೆದುಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.! ಅಂದರೆ ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು ಸೇರಿದಾಗ ಅಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ,ಹೀಗೆ ಹಲವಾರು ಜನ ಸೇರಿದಾಗ ನಮಗೆ ಉಸಿರಾಟದ ತೊಂದರೆಯಾಗುತ್ತಲ್ಲವೆ.? ನಮ್ಮ ದೇಹಕ್ಕೆ ಆಮ್ಲಜನಕ ಬೇಕಲ್ಲವೆ ?.ಆದುದರಿಂದ ಈ ಆಮ್ಲಜನಕದ ಕೊರತೆಯನ್ನು ನಿಗಿಸಲು ಮಂಟಪದ ಸುತ್ತಮುತ್ತ ಮಾವಿನ ಎಲೆಯ ತೋರಣ ಕಟ್ಟುತ್ತಾರೆ.!!
ಮನಸ್ಸು ಉತ್ಸಾಹದಿಂದ,ಆಹ್ಲಾದಕರವಾಗಿರಲು ಅದೆ ರೀತಿ ಮನೆಯೊಳಗೆ ತಾಜಾತನ ಇರುವಂತೆ ಕಾಪಾಡಲು ಧನಾತ್ಮಕವಾಗಿ ಯೋಚಿಸಲು,ಮನಸ್ಸು ಹಿಡಿತದಲ್ಲಿರಲು ಈ ರೀತಿ ಮಾವಿನ ತೋರಣ ಕಟ್ಟುತ್ತಾರೆ.!
• ಮಾವಿನ ಎಲೆಯೆ ಏಕೆ ತೋರಣಕ್ಕೆ ಉಪಯೋಗಿಸುತ್ತಾರೆ.?
ಇತರೆ ಮರದ ಎಲೆಗಳನ್ನು ಹೋಲಿಸಿದರೆ ಮಾವಿನ ಎಲೆ ಅತಿ ಹೆಚ್ಚು ಕಾಲ ತಾಜಾವಾಗಿ ಹಸಿರಾಗಿ ಇರುತ್ತದೆ.! ಹಸಿರಿದಷ್ಟು ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪತಿ ಮಾಡುತ್ತವೆ.!
ಸನಾತನವಾಗಿ ಆಚರಿಸಿಕೊಂಡು ಬರುತ್ತಿರುವ ಪದ್ಧತಿ ಅತಿ ಶ್ರೀಮಂತವಾದುದು.! ನಾವು ಅದನ್ನು ಅರಿತು,ಅದರ ಆಚರಣೆಯನ್ನು ಮಾಡಿದರೆ ನೆಮ್ಮದಿಯ ಜೀವನ ನಡೆಸಬಹುದು.!
No comments:
Post a Comment