Tuesday, 9 June 2020

ಜೀವನದಲ್ಲಿ ಯಶಸ್ಸು, ಆರೋಗ್ಯ ಮತ್ತು ಸಮೃದ್ಧಿಗಾಗಿ ಜ್ಯೋತಿಷ್ಯ ಪರಿಹಾರಗಳು*

🕉 ಶ್ರೀ ಗುರುಭ್ಯೋ ನಮಃ 🕉    ‌         ‌              ‌                          ‌        ‌         ‌                                                              *ಜೀವನದಲ್ಲಿ ಯಶಸ್ಸು, ಆರೋಗ್ಯ ಮತ್ತು ಸಮೃದ್ಧಿಗಾಗಿ ಜ್ಯೋತಿಷ್ಯ ಪರಿಹಾರಗಳು*

ಸಂಬಳದ ಹಣ ಕೈಗೆ ಬರುತ್ತಿಲ್ಲವೇ? ಜೀವನದಲ್ಲಿ ನೀವು ಭರವಸೆಯನ್ನು ಕಳೆದುಕೊಂಡಿದ್ದೀರಾ?ಹಾಗಿದ್ದರೆ ಚಿಂತೆ ಬಿಡಿ. ಯಾಕೆಂದರೆ ಈ ಎಲ್ಲಾ ತೊಂದರೆಗಳ ನಿವಾರಣೆಗೆ ಕೆಲವು ಸುಲಭ ಜ್ಯೋತಿಷ್ಯ ಪರಿಹಾರಗಳಿವೆ!ಅದು ನಿಮ್ಮ ಪ್ರತಿಕೂಲ ಹಂತದಿಂದ ನಿಮಗೆ ಸಹಾಯ ಮಾಡುತ್ತದೆ. ಉತ್ತಮ ವ್ಯವಹಾರ, ಕೆಲಸದಲ್ಲಿ ಸಮೃದ್ಧಿ ಮತ್ತು ಉದ್ಯೋಗ ಇತ್ಯಾದಿಗಳನ್ನು ಪಡೆಯಲು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸುಲಭ ಪರಿಹಾರಗಳಿವೆ.

ಜೀವನದಲ್ಲಿ ಯಾರು ಯಶಸ್ವಿಯಾಗಲು ಬಯಸುವುದಿಲ್ಲ ಹೇಳಿ? ನಾವೆಲ್ಲರೂ ಇತರರಿಗಿಂತ ವೇಗವಾಗಿ ಯಶಸ್ಸು ಕಾಣೋಕೆ ಬಯಸುತ್ತೇವೆ. ಇದು ಖಂಡಿತವಾಗಿ ತಪ್ಪಲ್ಲ. ಆದರೆ ಕೆಲವೊಮ್ಮೆ ನಾವು ಎಷ್ಟೇ ಪ್ರಾಮಾಣಿಕತೆಯಿಂದ ಪ್ರಯತ್ನಿಸಿದರೂ ನಾವು ಅಂದುಕೊಂಡ ಕೆಲಸಗಳು ಈಡೇರುವುದಿಲ್ಲ. ಇಲ್ಲದ ಚಿಂತೆಯಿಂದ ಆರೋಗ್ಯ ಸಹ ಕೈಕೊಡುತ್ತದೆ. ಮೇಲಿಂದ ಮೇಲೆ ಕಷ್ಟಗಳನ್ನು ಅನುಭವಿಸಿ ಮನಸು ಕುಗ್ಗಿ ಹೋಗುತ್ತದೆ. ಸತತವಾಗಿ ಸೋಲುಗಳನ್ನು ಅನುಭವಿಸಿ ಧೈರ್ಯಗೆಡುತ್ತೇವೆ. ಆದರೆ ಎಲ್ಲಾ ಕಷ್ಟಗಳಿಗೂ ಪರಿಹಾರ ಇದ್ದೇ ಇರುತ್ತದೆ. ಸ್ವಲ್ಪ ತಾಳ್ಮೆ, ಧೈರ್ಯ, ನಂಬಿಕೆ ಇದ್ದರೆ ಎಲ್ಲಕ್ಕೂ ಒಂದು ಮಾರ್ಗ ಇದ್ದೇ ಇರುತ್ತದೆ. ನಿಮ್ಮ ಮಹತ್ವಾಕಾಂಕ್ಷೆಗಳನ್ನು ನೀವು ಶೀಘ್ರವಾಗಿ ಸಾಧಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ ನೋಡಿ.
‌                                                                                                                                                                    1. ಪ್ರತಿ ಶನಿವಾರ ಅಶ್ವತ್ಥ ವೃಕ್ಷಕ್ಕೆ ನೀರು ಹಾಕಿ ಮತ್ತು ಮರದ ಬುಡದಲ್ಲಿ ಸಾಸಿವೆ ದೀಪವನ್ನು ಹಚ್ಚಿ. ಇದರಿಂದ ಎಲ್ಲವೂ ಶುಭವಾಗುತ್ತದೆ.

2. ಕೈಯಲ್ಲಿ ಒಂದು ಕೆಲಸ ಅಂತ ಇದ್ದರೆ ಮನಸಿಗೆ ಎಷ್ಟೋ ನೆಮ್ಮದಿ ದೊರೆಯುತ್ತದೆ. ಆದರೆ ಕೆಲವೊಮ್ಮೆ ಕೆಲಸ ಸಿಗೋದೆ ಒಂದು ದೊಡ್ಡ ಕಷ್ಟವಾಗಿಬಿಡುತ್ತದೆ. ದೀರ್ಘಕಾಲದವರೆಗೆ ನಿರುದ್ಯೋಗಿಗಳಾಗಿದ್ದು, ಉತ್ತಮ ಉದ್ಯೋಗವನ್ನು ಪಡೆಯಲು ಬಯಸಿದರೆ, ಹಳದಿ ನಿಂಬೆಹಣ್ಣು ತೆಗೆದುಕೊಂಡು ಅದನ್ನು 4 ಸಮಾನ ಭಾಗಗಳಾಗಿ ಕತ್ತರಿಸಿ. ಪ್ರತಿ ತುಂಡನ್ನು ನಾಲ್ಕು ರಸ್ತೆ ಸೇರುವ ಸ್ಥಳದಲ್ಲಿ ನಿಂತು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎಸೆಯಿರಿ. ಸತತ 11 ದಿನಗಳ ಕಾಲ ತಪ್ಪದೇ ಹೀಗೆ ಮಾಡಿದ್ದಲ್ಲಿ ನಿಮಗೆ ಒಂದೊಳ್ಳೆ ಉದ್ಯೋಗ ಸಿಗುತ್ತದೆ.

3. ಇನ್ನೂ ಕೆಲವೊಮ್ಮೆ ಕೆಲಸ ಸಿಕ್ಕರೂ ವೃತ್ತಿಯಲ್ಲಿ ಕೆಲವು ಕಿರಿಕಿರಿ ಉಂಟಾಗುತ್ತದೆ. ನಿಮಗೂ ವೃತ್ತಿಯಲ್ಲಿ ಸಮಸ್ಯೆ ಇದ್ದರೆ, ಶುಕ್ರವಾರ ರಾತ್ರಿ ಕಪ್ಪು ಬೇಳೆ ಅಂದರೆ ಉದ್ದಿನ ಕಾಳನ್ನು ನೆನೆಸಿ, ಮರುದಿನ ಸಾಸಿವೆ ಎಣ್ಣೆಯಲ್ಲಿ ಅದನ್ನು ಬೆರೆಸಿ. ಅದನ್ನು ಮೂರು ಭಾಗಗಳಾಗಿ ವಿಂಗಡಿಸಿ. ಅದರ ಮೂರನೇ ಒಂದು ಭಾಗವನ್ನು ಕುದುರೆ ಅಥವಾ ಎಮ್ಮೆಗೆ ನೀಡಬಹುದು, 2 ನೇ ಭಾಗವನ್ನು ಕುಷ್ಠರೋಗಿಗೆ ನೀಡಬಹುದು ಮತ್ತು ನಿಮ್ಮ ಕೈಯಲ್ಲಿ ಕೊನೆಯ ಭಾಗವನ್ನು ತೆಗೆದುಕೊಂಡು ಅದನ್ನು ನಿಮ್ಮ ತಲೆಯ ಸುತ್ತಲೂ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ. ಇದನ್ನು 40 ದಿನಗಳವರೆಗೆ ನಿರಂತರವಾಗಿ ಮಾಡಿ. ನಿಮ್ಮ ಅಡಚಣೆಗಳೆಲ್ಲಾ ನಿವಾರಣೆಯಾಗುವುದು.
‌                                                                                                                                               4. ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರು ನಮಗೆ ಇಷ್ಟವಾದ ಕೆಲಸ ಸಿಗೋದಿಲ್ಲ. ಇನ್ನೂ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರು ಪ್ರಮೋಷನ್ ಸಿಗೋದಿಲ್ಲ. ನಿಮಗೆ ಇಷ್ಟವಾದ ಪೋಸ್ಟಿಂಗ್ ಅಥವಾ ಪ್ರಮೋಷನ್ ನ ಅಗತ್ಯವಿದ್ದರೆ, ಸ್ನಾನದ ನಂತರ, 27 ದಿನಗಳವರೆಗೆ, ಸತತವಾಗಿ, ಬೆಳಿಗ್ಗೆ ಉದಯಿಸುತ್ತಿರುವ ಸೂರ್ಯನಿಗೆ ನೀರು ಮತ್ತು ಹೂವನ್ನು ಅರ್ಪಿಸಿ.
 ಸೂರ್ಯನಿಗೆ ಆರ್ಘ್ಯ ನೀಡಿ.
‌                                                                                             5. ನಿಮ್ಮ ಕುಟುಂಬದಲ್ಲಿ ಯಾರಾದರೂ ಪರೀಕ್ಷೆಗೆ, ಸಂದರ್ಶನಕ್ಕಾಗಿ, ಹೊಸ ಉದ್ಯಮವನ್ನು ಪ್ರಾರಂಭಿಸಲು ಅಥವಾ ಹೊಸ ಹುದ್ದೆಯನ್ನು ಪಡೆಯಲು ಹೊರಟಾಗ, ಸ್ವಲ್ಪ ಹೆಸರುಬೇಳೆ ತೆಗೆದುಕೊಂಡು ಅದನ್ನು ಆ ವ್ಯಕ್ತಿಯ ಮೇಲೆ ಹಾಕಿ. ಆ ವ್ಯಕ್ತಿ ಹೊರಟ ನಂತರ ಧಾನ್ಯಗಳನ್ನು ಗುಡಿಸಿ ಹೊರಗೆ ಎಸೆಯಿರಿ. ಇದು ಆ ವ್ಯಕ್ತಿಗೆ ಯಶಸ್ಸನ್ನು ತಂದುಕೊಡುತ್ತದೆ.
ದಿನನಿತ್ಯ ಈ 5 ಕಾರ್ಯಗಳನ್ನು ಮಾಡಿದರೆ ಮನೆಯ ಸಂಪತ್ತು ವೃದ್ಧಿಯಾಗುವುದು..!
‌                                                                                                                                                                                                6. ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಒಳ್ಳೆ ಆರೋಗ್ಯ ಇದ್ದರೆ ಅವರೇ ಪುಣ್ಯವಂತರು. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಕುಟುಂಬದ ಯಾವುದಾದರೂ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದು ಮತ್ತು ನೀವು ಅವರನ್ನು ರೋಗ ಮುಕ್ತರನ್ನಾಗಿ ಮಾಡಿ, ಫಿಟ್ ಮತ್ತು ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರೆ, ಇದನ್ನು ಮಾಡಿ -
ಪ್ರತಿದಿನ ಬೆಳಿಗ್ಗೆ ಕಲ್ಲಿನ ಮೇಲೆ ಹಳದಿ ಗಂಧ(ಚಂದನ)ವನ್ನು ಅರೆದು ಈ ಪೇಸ್ಟನ್ನು ಆ ವ್ಯಕ್ತಿಯ ಹಣೆಗೆ ಹಚ್ಚಿ ಹಾಗೂ ಅದನ್ನು ಒರೆಸಿಕೊಳ್ಳದಂತೆ ಆ ವ್ಯಕ್ತಿಗೆ ಹೇಳಿ. ಈ ತಿಲಕವನ್ನು ಕೆಲವು ಭಜನೆ ಮತ್ತು ಮಂತ್ರಗಳನ್ನು ಜಪಿಸಿದ ನಂತರ ಅಥವಾ ಸಾಮೂಹಿಕ ಪ್ರಾರ್ಥನೆ ಮಾಡಿದ ನಂತರ ಹಚ್ಚಿಕೊಂಡರೆ ಅದು ಚೆನ್ನಾಗಿ ಕೆಲಸ ಮಾಡುತ್ತದೆ.
‌    ‌                                                                                             7. ಮಗಳ ಮದುವೆ ಮಾಡೋದೇ ದೊಡ್ಡ ಜವಾಬ್ದಾರಿ. ಮದುವೆ ಆದ ನಂತರ ಮುದ್ದಿನಿಂದ ಸಾಕಿದ ಮಗಳಿಗೆ ಮನೆಯಲ್ಲಿ ಯಾವುದೇ ತೊಂದರೆ ಆಗಬಾರದು ಅನ್ನೋದು ಎಲ್ಲಾ ತಂದೆ ತಾಯಿಯ ಆಶಯ! ಹಾಗಾಗಿ ನಿಮ್ಮ ಮಗಳು ಮದುವೆಯಾದ ನಂತರ ಮೊದಲ ಬಾರಿಗೆ ತನ್ನ ಗಂಡನ ಮನೆಗೆ ಹೊರಟಾಗ, ಹೀಗೆ ಮಾಡಿ ಒಂದು ಲೋಟದಲ್ಲಿ ನೀರು ತುಂಬಿಸಿ, ಅದರಲ್ಲಿ ಸ್ವಲ್ಪ ಅರಿಶಿನವನ್ನು ಹಾಕಿ. ಅದನ್ನು ನಿಮ್ಮ ಮಗಳ ತಲೆಯ ಸುತ್ತ ಏಳು ಬಾರಿ ತಿರುಗಿಸಿ ನಂತರ ಹೊರಗೆ ಎಸೆಯಿರಿ. ಅವಳು ದಾರಿಯಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಮತ್ತು ಗಂಡನ ಮನೆಯ ಎಲ್ಲಾ ಸದಸ್ಯರಿಂದ ಗೌರವ ಮತ್ತು ಪ್ರಶಂಸೆಯನ್ನು ಪಡೆಯುತ್ತಾಳೆ.

8. ಪ್ರಯಾಣಿಸುವಾಗ ಅಥವಾ ಸ್ಥಳಾಂತರಗೊಳ್ಳುವಾಗ ನಿಮ್ಮ ಅಮೂಲ್ಯವಾದ ವಸ್ತುಗಳು, ಆಭರಣಗಳು ಅಥವಾ ಹಣವನ್ನು ತೆಗೆದುಕೊಂಡು ಹೊರಟಾಗ, ಅದರ ಸುರಕ್ಷತೆಗಾಗಿ, ಆಂಜನೇಯ ಸ್ವಾಮಿಯ ಪಾದಗಳಿಂದ ತೆಗೆದುಕೊಂಡ ಕುಂಕುಮವನ್ನು ನಿಮ್ಮ ಅಮೂಲ್ಯ ವಸ್ತುಗಳನ್ನು ಇಟ್ಟುಕೊಂಡಿರುವ ಚೀಲ ಅಥವಾ ವಸ್ತುವಿನ ಮೇಲೆ ಹಾಕಿ. ಇದರಿಂದ ದಾರಿಯಲ್ಲಿ ಡಕಾಯತಿ ಅಥವಾ ಲೂಟಿ ಆಗುವ ಯಾವುದೇ ಅಪಾಯವಿರುವುದಿಲ್ಲ. ಇತರರಿಗೆ ತಿಳಿಯದಂತೆ ಈ ಪ್ರಯೋಗವನ್ನು ಮಾಡಬೇಕು.

No comments:

Post a Comment