Monday, 8 June 2020

ಶ್ರೀ ಕೊಲ್ಲೂರು ಮೂಕಾಂಬಿಕೆ

ಶ್ರೀ ಕೊಲ್ಲೂರು ಮೂಕಾಂಬಿಕೆ🙏🕉️🔯⚛️
 
ಇಲ್ಲಿ ಕೈ ಮುಗಿದರೆ ಸಾವಿರ ದೇವಸ್ಥಾನಕ್ಕೆ ಕೈ ಮುಗಿದಂತೆ.
  

ಮೂಕಾಂಬಿಕಾ ದೇವಾಲಯವು ದಕ್ಷಿಣಭಾರತದ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿದೆ. ಕೊಲ್ಲೂರು ತಪ್ಪಲಿನಲ್ಲಿ ಪಶ್ಚಿಮ ಕರಾವಳಿ ನೆಲೆಗೊಂಡಿದೆ, ಮತ್ತು ನೈಸರ್ಗಿಕ ಸೌಂದರ್ಯ ಹಾಗೂ ಧಾರ್ಮಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ.

ಕೊಲ್ಲೂರು ದೇವಾಲಯ🕉️
ಈ ದೇವಾಲಯದಲ್ಲಿ ಶಕ್ತಿಯನ್ನು ಶ್ರೀ ಮುಕಾಂಬಿಕ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಕೊಲ್ಲೂರು ದೇವಾಲಯವನ್ನು ಸಾಮಾನ್ಯವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ 'ಮುಕಾಂಬಿ' ಅಥವಾ 'ಮೂಂಗ್ಬಂಗಿ' ಎಂದು ಕರೆಯಲಾಗುತ್ತದೆ.

 ಮೂಕಾಂಬಿಕೆಯು ಮಹಾಲಕ್ಷ್ಮಿ, ಮಹಾಸರಸ್ವತಿ, ಮಹಾಕಾಳಿ ಅಧಿಕಾರಗಳ ಒಂದು ರೂಪವಾಗಿದೆ.
ಹಿಂದೂಗಳ ಪವಿತ್ರ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರವಾಗಿದೆ.

ಸಾವಿರಾರು ದೇವಾಲಯಕ್ಕೆ ಸಮ,🕉️

ಸ್ಕಂದ ಪುರಾಣದಲ್ಲಿ ಮುಕಾಂಬಿಕ ಜ್ಯೋತಿರ್ಲಿಂಗವು ಪುರುಷರು ಮತ್ತು ಪ್ರಕೃತಿಯ ಏಕೀಕರಣದಿಂದಾಗಿ ಎನ್ನಲಾಗುತ್ತದೆ. ಇಲ್ಲಿ ಪ್ರಾರ್ಥನೆ ಮಾಡಿದ್ರೆ ಸಾವಿರಾರು ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಿರುವುದಕ್ಕೆ ಸಮನಾಗಿರುತ್ತದೆ ಎಂದು ನಂಬಲಾಗಿದೆ.

ಪೌರಾಣಿಕ ಕಥೆ🕉️

ಈ ದೇವಸ್ಥಾನಕ್ಕೆ ಸೇರಿದ ಅನೇಕ ಪೌರಾಣಿಕ ಕಥೆಗಳಿವೆ. ಪ್ರಾಚೀನ ಕಾಲದಲ್ಲಿ ಕೋಲಾ ಎನ್ನುವ ಮಹರ್ಷಿ ಒಂದು ದೈತ್ಯ ರಾಕ್ಷಸನಿಗೆ ಬಲಿಯಾಗುತ್ತಾರೆ. ಆ ರಾಕ್ಷಸನು ಹೆಚ್ಚು ಶಕ್ತಿ ಪಡೆಯುವ ನಿಟ್ಟಿನಲ್ಲಿ ಪರಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದನು, ಶ್ರೀ ಮೂಕಾಂಬಿಕೆಯು ಸರಸ್ವತಿ ರೂಪದಲ್ಲಿ ಆ ರಾಕ್ಷಸನು ತನ್ನ ಇಚ್ಛೆಯನ್ನು ದೇವರ ಮುಂದೆ ಪ್ರಕಟಗೊಳಿಸದಂತೆ ಆತನನ್ನು ಮೂಕನನ್ನಾಗಿ ಮಾಡಿ ಅವನಿಂದ ಲೋಕಕ್ಕೆ ಆಗುತ್ತಿದ್ದ ಸಂಕಷ್ಟದಿಂದ ಪಾರು ಮಾಡಿದಳು.

ಮೂಕಾಸುರ:

ಮೂಕನಾದರಿಂದ ಆ ರಾಕ್ಷಸನ ಹೆಸರು ಮೂಕಾಸುರವೆಂದಾಯಿತು. ಮೂಕನಾದ ಕಾರಣ ಆತಂಕಕ್ಕೊಳಗಾಗಿ ಆತನು ಋಷಿಮುನಿಗಳಿಗೆ ಕಾಟ ನೀಡಲಾರಂಭಿಸಿದನು. ಆಗ ಪಾರ್ವತಿಯು ಶಕ್ತಿಯ ರೂಪದಲ್ಲಿ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಹಾಗಾಗಿ ದೇವಿಯ ಹೆಸರು ಮೂಕಾಂಬಿಕೆ ಎಂದಾಯಿತು. ಕೋಲಾ ಮಹರ್ಷಿಯ ಹೆಸರಿನಿಂದ ಊರಿನ ಹೆಸರು ಕೊಲ್ಲೂರು ಎಂದಾಯಿತು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ  ಅತ್ಯಂತ ಪ್ರಸಿದ್ಧ ಪೂಜಾ ಸ್ಥಳಗಳ ಪೈಕಿ ಒಂದೆನಿಸಿದೆ. ಸೌಪರ್ಣಿಕಾ ನದಿಯ ದಂಡೆಗಳು ಮತ್ತು ಸೊಂಪಾಗಿ ರಸಭರಿತವಾಗಿರುವ ಹಸಿರು ಹುಲ್ಲಿನಿಂದಾವೃತವಾದ ಕೊಡಚಾದ್ರಿ ಬೆಟ್ಟದಿಂದ ಸಾದರಪಡಿಸಲ್ಪಟ್ಟಿರುವ ಚಿತ್ರಸದೃಶ ಪರಿಸರದಲ್ಲಿ, ಮಂಗಳೂರಿನಿಂದ ೧೪೭ ಕಿ.ಮೀ.ಗಳಷ್ಟು ಅಂತರದಲ್ಲಿ ನೆಲೆಗೊಂಡಿರುವ ಈ ದೇವಸ್ಥಾನವು ಪ್ರತಿವರ್ಷವೂ ಲಕ್ಷಗಟ್ಟಲೆ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಕೊಲ್ಲೂರಿನಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವೊಂದನ್ನು ಸ್ಥಾಪಿಸುವ ಪರಿಕಲ್ಪನೆಯನ್ನು ಆದಿ ಶಂಕರರು ಗ್ರಹಿಸಿದರು ಮತ್ತು ಸುಮಾರು ೧೨೦೦ ವರ್ಷಗಳಷ್ಟು ಹಿಂದೆಯೇ ದೇವಸ್ಥಾನದಲ್ಲಿ ದೇವತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಮೂಕಾಂಬಿಕಾ ದೇವತೆಯು ಶಕ್ತಿ, ಸರಸ್ವತಿ ಮತ್ತು ಮಹಾಲಕ್ಷ್ಮಿಯ ಒಂದು ಅವಿರ್ಭವಿಸುವಿಕೆ ಅಥವಾ ಅವತಾರ ಎಂಬುದಾಗಿ ಪರಿಗಣಿಸಲ್ಪಟ್ಟಿರುವುದರಿಂದ, ಮೂಕಾಂಬಿಕಾ ದೇವಿಯ ದೇವಸ್ಥಾನದಲ್ಲಿ ಜನರು ಅತೀವವಾದ ನಂಬಿಕೆಯನ್ನು ಇರಿಸಿಕೊಂಡಿದ್ದಾರೆ. ವಾಸ್ತವವಾಗಿ ಹೇಳಬೇಕೆಂದರೆ, ಮೂಕಾಂಬಿಕಾ ದೇವಿಯ ದೇವಸ್ಥಾನವು ಕರ್ನಾಟಕದಲ್ಲಿನ 'ಸಪ್ತ ಮುಕ್ತಿಸ್ಥಳ' ತೀರ್ಥಯಾತ್ರಾ ತಾಣಗಳ ಪೈಕಿ ಒಂದೆನಿಸಿದೆ. ಆ ತಾಣಗಳೆಂದರೆ: ಕೊಲ್ಲೂರು, ಉಡುಪಿ, ಸುಬ್ರಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣ. 

ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವು ನೆಲೆಗೊಂಡಿದೆ. ಶಿವ ಮತ್ತು ಶಕ್ತಿ ಈ ಇಬ್ಬರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಈ ದೇವತೆಯು ಕಂಡುಬರುತ್ತಾಳೆ. ಶ್ರೀಚಕ್ರದ ಮೇಲೆ ಸ್ಥಾಪಿಸಲಾಗಿರುವ ದೇವತೆಯ ಪಂಚಲೋಹ ದ (ಐದು ಧಾತುಗಳನ್ನು ಬೆರೆಸಿದ ಲೋಹದ) ವಿಗ್ರಹವನ್ನು ಆದಿ ಶಂಕರಾಚಾರ್ಯರು ಈ ಸ್ಥಳಕ್ಕೆ ತಾವು ಭೇಟಿನೀಡಿದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ದೇವತೆಯ ಮೂಲಸ್ಥಳವು ಕೊಡಚಾದ್ರಿ ಶಿಖರದ ತುದಿಯ (೩೮೮೦') ಮೇಲಿದೆ ಎಂಬುದಾಗಿಯೂ ಮತ್ತು ಕೊಡಚಾದ್ರಿಯನ್ನು ಸಂಪೂರ್ಣವಾಗಿ ಚಾರಣಮಾಡಿಕೊಂಡು ಮೂಲಸ್ಥಳವನ್ನು ತಲುಪುವುದು ಸಾಮಾನ್ಯ ಜನರಿಗೆ ಅತ್ಯಂತ ಕಷ್ಟಕರವಾಗಿದ್ದರಿಂದ, ಶಂಕರಾಚಾರ್ಯರು ದೇವಸ್ಥಾನವನ್ನು ಕೊಲ್ಲೂರಿನಲ್ಲಿ ಪುನರ್‌‌-ಸ್ಥಾಪಿಸಿದರು ಎಂಬುದಾಗಿಯೂ ನಂಬಲಾಗಿದೆ.ಇಲ್ಲಿ ಪಂಚಮುಖಿ ಗಣೇಶನ ಒಂದು ಮನಮೋಹಕ ಶಿಲ್ಪವಿರುವುದನ್ನು ಕಾಣಬಹುದು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿರುವ ಇತರ ದೇವತೆಗಳಲ್ಲಿ ಇವು ಸೇರಿವೆ: ಶ್ರೀ ಸುಬ್ರಮಣ್ಯ, ಶ್ರೀ ಪಾರ್ಥೀಶ್ವರ, ಶ್ರೀ ಪಂಚಮುಖ ಗಣಪತಿ, ಶ್ರೀ ಚಂದ್ರಮೌಳೀಶ್ವರ, ಶ್ರೀ ಪ್ರಾಣಲಿಂಗೇಶ್ವರ, ಶ್ರೀ ನಂಜುಂಡೇಶ್ವರ, ಶ್ರೀ ಆಂಜನೇಯ, ಶ್ರೀ ವೆಂಕಟರಮಣ, ಶ್ರೀ ತುಳಸಿ ಗೋಪಾಲಕೃಷ್ಣ.

ನವರಾತ್ರಿ ಉತ್ಸವದ ಕೊನೆಯ ದಿನದಂದು ಇಲ್ಲಿನ ಸರಸ್ವತಿ ಮಂಟಪದಲ್ಲಿ, ಪುಟ್ಟ ಮಕ್ಕಳಿಗೆ ಅವರದೇ ಮಾತೃಭಾಷೆಯ ವರ್ಣಮಾಲೆಯ ಅಕ್ಷರಗಳಲ್ಲಿ ದೀಕ್ಷೆ ಅಥವಾ ಉಪದೇಶವನ್ನು ನೀಡಲಾಗುತ್ತದೆ ಮತ್ತು ಇದು ವಿದ್ಯಾರಂಭದ ದ್ಯೋತಕವಾಗಿರುತ್ತದೆ.

ಇತರ ಆಕರ್ಷಣೆಗಳು:🕉️
 ಇಲ್ಲಿ ನೀವು ಕಾಶಿ ತೀರ್ಥಕ್ಕೆ ಭೇಟಿ ನೀಡಬಹುದು. ಇದು ನದಿಯ ಗೋಳವಾಗಿದ್ದು, ನಿಮ್ಮ ಕುಟುಂಬ ಸ್ನೇಹಿತರೊಂದಿಗೆ ನೀವು ಉತ್ತಮ ಸಮಯ ಕಳೆಯಬಹುದು. ಇದು ಮೂಕಾಂಬಿಕಾ ದೇವಸ್ಥಾನದಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಇದಲ್ಲದೆ, ನೀವು ಅನೆಗುಡ್ಡ ವಿನಾಯಕ ದೇವಸ್ಥಾನದ ಭೇಟಿಯನ್ನೂ ಮಾಡಬಹುದು. ನೀವು ಕೊಡಚಾದ್ರಿ ಬೆಟ್ಟ, ಮುಕಾಂಬಿಕ ವನ್ಯಜೀವಿ ಧಾಮ, ಮರವಂತೆ ಬೀಚ್ ಇತ್ಯಾದಿಗಳನ್ನು ಭೇಟಿ ಮಾಡಬಹುದು.

ಶಂಕರಾಚಾರ್ಯ ರು  ಕೊಲ್ಲೂರು ಮೂಕಾಂಬಿಕೆ ದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಕಾಲ ಕ್ರಿಸ್ತ ಪೂರ್ವ ಸುಮಾರು 491 ರ ಆಸುಪಾಸು..ದೇವಾಲಯ ಕಟ್ಟಿದ ಕಾಲಮಾನ ಸಹ 2000 ವರ್ಷಗಳ ಹಿಂದಕ್ಕೆ ಕೊಡೊಯ್ಯುತ್ತದೆ.  ಈಗಲೂ ಕೊಡಚಾದ್ರಿ ಬೆಟ್ಟದ  ತುದಿಯ ಮೇಲೆ ಪಾಳು ಬಿದ್ದಿರುವ ಶಂಕರಾಚಾರ್ಯರ ಪೀಠ(ಗುಡಿ) ಇದೆ. ಇಲ್ಲಿಂದ ಮುಂದಕ್ಕೆ ಕೆಳಗೆ ದಟ್ಟ ಕಾನನದ ಮಧ್ಯೆ ಸುಮಾರು 2 ಕೀ ಮೀ ಕ್ರಮಿಸಿದರೆ ಮೂಕಾಂಬಿಕೆಯ ಮೂಲಸ್ಥಾನ ಸಿಗುವುದು, ಆದರೆ ಬಹಳ ಎಚ್ಚರಿಕೆಯಿಂದ ಸಾಗಬೇಕು ದಾರಿ ಬಹಳ ಕಠಿಣವಾದದ್ದು.
ಶಂಕರಾಚಾರ್ಯರ ಜನನ ಕ್ರಿಸ್ತ ಪೂರ್ವ 509 ಎಂದು ದ್ವಾರಕಾ, ಪುರಿ,  ಕಂಚಿ ಮಠದ ದಾಖಲೆಗಳೇ ಸ್ಪಷ್ಟಪಡಿಸುತ್ತವೆ.
ಮ್ಯಾಕ್ಸ್ ಮುಲ್ಲರ್ ನಂತಹವರು ಬರೆದ  ಪಾಶ್ಚಾತ್ಯ ಇತಿಹಾಸಕಾರರ ಅಭಿಪ್ರಾಯ ನಿಜ ಎಂದು ನಂಬಿ ಮೂರ್ಖರಾಗಿದ್ದೇವೆ.

No comments:

Post a Comment