#ಇಂದು_ಯೋಗಿನಿ_ಏಕಾದಶಿ_ವ್ರತ
ಇಲ್ಲಿದೆ ವ್ರತದ ಪ್ರಯೋಜನ ಮತ್ತು ಆಚರಣೆಯ ವಿಧಾನ
ಇಂದು ದೇಶದ ಹಲವೆಡೆ 2020 ಯೋಗಿನಿ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನದಂದು ವಿಷ್ಣುವನ್ನು ಆರಾಧಿಸಲಾಗುತ್ತದೆ. ಯೋಗಿನಿ ಏಕಾದಶಿ ವ್ರತವನ್ನು ಆಚರಿಸುವುದರ ಮಹತ್ವ, ಪ್ರಯೋಜನ, ಆಚರಿಸುವ ವಿಧಾನ, ಆಚರಣೆಗೆ ಶುಭ ಸಮಯ ಮತ್ತು ಈ ವ್ರತದ ಹಿನ್ನೆಲೆ ಇಲ್ಲಿದೆ.
ನಿರ್ಜಲ ಏಕಾದಶಿ ನಂತರ ಮತ್ತು ದೇವಶಯನಿ ಏಕಾದಶಿಗೂ ಮುನ್ನ ಬರುವ ಏಕಾದಶಿಯನ್ನು 'ಯೋಗಿನಿ ಏಕಾದಶಿ' ಎಂದು ಕರೆಯಲಾಗುತ್ತದೆ. ಉತ್ತರ ಭಾರತದ ಪಂಚಾಂಗದ ಪ್ರಕಾರ, ಯೋಗಿನಿ ಏಕಾದಶಿ ಅಥವಾ 2020 ಯೋಗಿನಿ ಏಕಾದಶಿಯು ಆಶಾಡ ತಿಂಗಳ ಕೃಷ್ಣ ಪಕ್ಷದ ಅಮಯದಲ್ಲಿ ಬರುತ್ತದೆ ಹಾಗೂ ದಕ್ಷಣ ಭಾರತದ ಪಂಚಾಂಗದ ಪ್ರಕಾರ, 2020 ಯೋಗಿನಿ ಏಕಾದಶಿಯು ಜ್ಯೇಷ್ಠ ತಿಂಗಳ ಕೃಷ್ಣ ಪಕ್ಷದ ಸಮಯದಲ್ಲಿ ಬರುತ್ತದೆ.
ಈ ದಿನ ವಿಷ್ಣುವನ್ನು ಪೂಜಿಸಲಾಗುತ್ತದೆ ಹಾಗೂ ಆತನ ಆಶೀರ್ವಾದವನ್ನು ಪಡೆಯಲು ಉಪವಾಸ ವ್ರತವನ್ನು ಕೈಗೊಳ್ಳಲಾಗುತ್ತದೆ. ಈ ವರ್ಷದ ಯೋಗಿನಿ ಏಕಾದಶಿಯನ್ನು 2020 ರ ಜೂನ್ 17 ರಂದು ದೇಶದ ಹಲವೆಡೆ, ಹಲವು ವಿಷ್ಣು ಆರಾಧಕರು ಆಚರಿಸುತ್ತಾರೆ
ಯೋಗಿನಿ ಏಕಾದಶಿಯನ್ನು ಆಚರಿಸುವುದರಿಂದ ಎಲ್ಲಾ ಪಾಪಗಳು ನಿರ್ಮೂಲನೆಯಾಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಯೋಗಿನಿ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಸ್ವರ್ಗವು ಪ್ರಾಪ್ತಿಯಾಗುತ್ತದೆ. ಯೋಗಿನಿ ಏಕಾದಶಿಯು ಕೇವಲ ಒಂದು ಲೋಕದಲ್ಲಿ ಮಾತ್ರವಲ್ಲ, ತ್ರಿಲೋಕದಲ್ಲೂ ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ಏಕಾದಶಿ ಉಪವಾಸವನ್ನು ಆಚರಿಸಿದರೆ 88 ಸಾವಿರ ಬ್ರಾಹ್ಮಣರಿಗೆ ಆಹಾರವನ್ನು ನೀಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ.
ಯೋಗಿನಿ ಏಕಾದಶಿ ಪೂಜಾ ವಿಧಾನ:
ಏಕಾದಶಿಯಂದು ಬೆಳಗ್ಗೆ ಬೇಗ ಎದ್ದು, ಮನೆಯನ್ನು ಸ್ವಚ್ಛಗೊಳಿಸಿ. ನಂತರ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಈಗ ಮನೆಯ ಪೂಜಾಸ್ಥಳದಲ್ಲಿ ವಿಷ್ಣುವಿನ ವಿಗ್ರಹವನ್ನೋ, ಫೋಟೋವನ್ನೂ ಇಟ್ಟು ಆ ವಿಗ್ರಹಕ್ಕೆ ಅಕ್ಷತೆಯನ್ನು, ಹೂಗಳನ್ನು, ತುಳಸಿ ಎಲೆಗಳನ್ನು ಮತ್ತು ತೆಂಗಿನಕಾಯಿಯನ್ನು ಅರ್ಪಿಸಿ. ತದನಂತರ ಅರಳಿ ಮರವನ್ನು ಪೂಜಿಸಿ, ಮರುದಿನ ಏಕಾದಶಿ ಕಥೆಯನ್ನು ಕೇಳಿ ಅಥವಾ ವಿಷ್ಣುವಿನ ಪಾರಾಯಣ ಮಾಡಿ.
ಯೋಗಿನಿ ಏಕಾದಶಿ ಕಥೆ:
ಸ್ವರ್ಗಧಾಮ ಎಂಬಲ್ಲಿನ ಅಲಕಾಪುರಿ ಪಟ್ಟಣದಲ್ಲಿ ಕುಬೇರ ಎನ್ನುವ ರಾಜನಿದ್ದನು. ಈ ರಾಜಜನು ಶಿವನ ಪರಮ ಭಕ್ತನಾಗಿದ್ದನು ಹಾಗೂ ಒಂದು ದಿನ ಕೂಡ ತಪ್ಪಿಸದೇ ಪ್ರತಿನಿತ್ಯ ಶಿವನನ್ನು ಆರಾಧಿಸುತ್ತಿದ್ದನು. ರಾಜನ ಪೂಜೆಗಾಗಿ ಹೇಮ ಎನ್ನುವ ಕೆಲಸಗಾರನು ರಾಜನಿಗೆ ಪ್ರತಿನಿತ್ಯ ಹೂವುಗಳನ್ನು ತರುತ್ತಿದ್ದನು. ಹೇಮನಿಗೆ ವಿಶಾಲಾಕ್ಷಿ ಎನ್ನುವ ಸ್ಪುರದ್ರೂಪಿ ಸತಿಯಿದ್ದಳು. ಒಂದು ದಿನ ರಾಜ ಕುಬೇರನಿಗೆ ಪೂಜೆಗೆಂದು ಹೂವು ತರಲು ಹೇಮ ನು ಮಾನಸ ಸರೋವರಕ್ಕೆ ಹೋಗುತ್ತಾನೆ. ಅಲ್ಲಿಂದ ಹೂವುಗಳನ್ನು ತೆಗೆದುಕೊಮಡು ಹಿಂದಿರುಗುವಾಗ ಕಾಮಾಸಕ್ತನಾಗಿ ಹೆಂಡತಿಯೊಂದಿಗೆ ವಿನೋದವನ್ನು ಕಳೆಯತ್ತಾನೆ.
ಇತ್ತ ರಾಜ ಕುಬೇರನು ಶಿವ ಪೂಜೆಯ ಹೂವಿಗಾಗಿ ಹೇಮನನ್ನು ಕಾಯುತ್ತಿರುತ್ತಾನೆ. ಮಧ್ಯಾಹ್ನವಾದರೂ ಕೂಡ ಹೇಮ ಕುಬೇರನಿಗೆ ಹೂವುಗಳನ್ನು ತಂದುಕೊಡುವುದಿಲ್ಲ. ಆಗ ರಾಜನು ತನ್ನ ಸೇವಕರನ್ನು ಕರೆದು, ಹೇಮ ನ ಮನೆಗೆ ಹೋಗಿ ಏನಾಯಿತೆಂದು ತಿಳಿದು ಬರಲು ಕಳುಹಿಸುತ್ತಾನೆ. ಸ್ವಲ್ಪ ಸಮಯದ ಬಳಿಕ ಸೇವಕರು ಬಂದು ರಾಜನಲ್ಲಿ, ಹೇಮ ಓರ್ವ ಕಾಮುಕ. ಆತ ದೇವರಿಗೆ ಹೂವುಗಳನ್ನು ತರುವುದು ಬಿಟ್ಟು ಹೆಂಡತಿಯೊಂದಿಗೆ ರಾಸಲೀಲೆಯಾಡುತ್ತಿದ್ದಾನೆಂದು ಹೇಳುತ್ತಾರೆ. ಇದರಿಂದ ಕೋಪಗೊಂಡ ರಾಜ ಕುಬೇರನು ತನ್ನ ಸೇವಕರ ಬಳಿ ಹೇಮನನ್ನು ಕರೆತರುವಂತೆ ಹೇಳಿ ಕಳುಹಿಸುತ್ತಾನೆ. ಹೇಮನು ಭಯದಿಂದಲೇ ನಡುಗುತ್ತಾ ಅರಸನ ಬಳಿ ಬರುತ್ತಾನೆ. ಈಗಾಗಲೇ ಕೋಪಗೊಂಡಿದ್ದ ಅರಸ ಕುಬೇರನು ಹೇಮನಿಗೆ ನಿನ್ನಿಂದ ನನ್ನ ಶಿವಪೂಜೆ ಹಾಳಾಯಿತು. ನನ್ನ ಶಿವಪೂಜೆಗೆ ನೀನು ಅಗೌರವ ತೋರಿಸಿದ್ದೀಯಾ ಎಂದು ಆತನನ್ನು ಶಪಿಸುತ್ತಾನೆ. ನೀವು ಸ್ರೀ ಸಂಪರ್ಕವನ್ನು ಕಳೆದುಕೊಳ್ಳುವಿರಿ ಹಾಗೂ ನೀನು ಕುಷ್ಠರೋಗದಿಂದ ಸಾವನ್ನಪ್ಪುತ್ತೀಯಾ ಎಂದು ಶಾಪವನ್ನು ನೀಡುತ್ತಾನೆ. ರಾಜ ಕುಬೇರನ ಶಾಪದಿಂದ ಹೇಮನ ಪತ್ನಿಯು ಮಾಯವಾಗುತ್ತಾಳೆ. ಹೇಮನು ಕುಷ್ಠರೋಗದಿಂದ ಬಳಲುತ್ತಾನೆ. ಹೇಮನು ಕುಷ್ಠರೋಗದಿಂದ ನರಕವನ್ನೇ ಅನುಭವಿಸುತ್ತಾನೆ. ಕುಡಿಯಲು ನೀರಿಲ್ಲದೆ, ಸೇವಿಸಲು ಆಹಾರವಿಲ್ಲದೆ ಭಯಾನಕ ಕಾಡಿನಲ್ಲಿ ಒಂಟಿಯಾಗಿ ಅಲೆದಾಡಲು ಆರಂಭಿಸಿದನು.
ಅಲೆದಾಡುತ್ತ ಕೆಲಸಗಾರ ಹೇಮನು ಬ್ರಹ್ಮನಿಗಿಂತಲೂ ಹೆಚ್ಚು ವಯಸ್ಕನಾಗಿದ್ದ. ಹಾಗೂ ಈತ ಒಂದು ದಿನ ಕಾಡಿನಲ್ಲಿ ಅಲೆದಾಡುತ್ತಾ ಮಾರ್ಕಂಡೇಯ ಮುನಿಯ ಆಶ್ರಮವನ್ನು ತಲುಪುತ್ತಾನೆ. ಹೇಮನು ಋಷಿ ಮಾರ್ಕಂಡೇಯನನ್ನು ನೋಡಿದಾಕ್ಷಣ ಆತನ ಪಾದಗಳಿಗೆ ಎರಗುತ್ತಾನೆ. ಆಗ ಮಾರ್ಕಂಡೇಯ ಋಷಿಯು ನೀನು ಯಾವ ಪಾಪದಿಂದ ಈ ನೋವನ್ನು ಅನುಭವಿಸುತ್ತಿದ್ದೀಯಾ ಎಂದು ಕೇಳುತ್ತಾರೆ. ಆಗ ಹೇಮನು ನಡೆದೆಲ್ಲಾ ಘಟನೆಗಳನ್ನು ಮಾರ್ಕಂಡೇಯನಿಗೆ ಹೇಳುತ್ತಾನೆ. ಆಗ ಮಾರ್ಕಂಡೇಯನು ನೀನು ನನ್ನ ಬಳಿ ಸತ್ಯವನ್ನೇ ಹೇಳಿದ್ದೀಯಾ. ಹಾಗಾಗಿ ನೀನು ಮೋಕ್ಷವನ್ನು ಅಥವಾ ಇದರಿಂದ ಹೊರಬರಲು ನಿನಗೊಂದು ಉಪಯಾವನ್ನು ಹೇಳುತ್ತೇನೆ ಹಾಗೇ ಮಾಡು ಇದರಿಂದ ನಿನ್ನ ಪಾಪ ಶಮನವಾಗುತ್ತದೆ ಎಂದು ಹೇಳುತ್ತಾನೆ.
ಪಾಪದ ಮೋಕ್ಷಕ್ಕಾಗಿ ಮಾರ್ಕಂಡೇಯನು ಹೇಮನಿಗೆ ಆಶಾಢ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸಲಾಗುವ ಯೋಗಿನಿ ಏಕಾದಶಿಯಂದು ಕಠಿಣ ಉಪವಾಸವನ್ನು ಆಚರಿಸು ಇದರಿಂದ ನಿನ್ನ ಪಾಪಗಳು ಪರಿಹಾರವಾಗುತ್ತದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಹೇಮನು ಮಾರ್ಕಂಡೇಯನಿಗೆ ಧನ್ಯವಾದವನ್ನು ಸಲ್ಲಿಸಿ ಅಲ್ಲೇ ಆಶ್ರಮದಲ್ಲಿ ತನ್ನ ಯೋಗಿನಿ ಏಕಾದಶಿ ವ್ರತವನ್ನು ಕಠಿಣ ಪರಿಶ್ರಮದಿಂದ, ಶ್ರದ್ಧಾ, ಭಕ್ತಿಯಿಂದ ಪೂರ್ಣಗೊಳಿಸುತ್ತಾನೆ. ಇದರಿಂದ ಆತನ ಪಾಪವು ನಿವಾರಣೆಯಾಗಿ, ಹೇಮನು ತನ್ನ ಹಳೆಯ ರೂಪವನ್ನು ಮತ್ತೊಮ್ಮೆ ಪಡೆದುಕೊಳ್ಳುತ್ತಾನೆ. ಹಾಗೂ ತಾನು ಕಳೆದುಕೊಂಡ ಪತ್ನಿಯನ್ನು ಮತ್ತೊಮ್ಮೆ ಪಡೆದುಕೊಂಡು ಆಕೆಯೊಂದಿಗೆ ಸಂತಸದ ದಿನಗಳನ್ನು ಕಳೆಯುತ್ತಾನೆ.
#ಸರ್ವೆ_ಜನ_ಸುಖಿನೋಭವಂತು
#ಶ್ರೀ_ಕೃಷ್ಣಾರ್ಪಣ_ಮಸ್ತು
No comments:
Post a Comment