Tuesday, 9 June 2020

ಬಿಳಿ ಎಕ್ಕದ ಬೇರನ್ನು ಮನೆಯೊಳಗೆ ನಿವಾರಣೆಯಾಗುವುದು ನಿಮ್ಮೆಲ್ಲ ತೊಂದರೆ...*

🕉 ಶ್ರೀ ಗುರುಭ್ಯೋ ನಮಃ 🕉    ‌            ‌     ‌                        ‌      ‌                         ‌                                                                                                       ‌        ‌             ‌         ‌                                                              *ಬಿಳಿ ಎಕ್ಕದ ಬೇರನ್ನು ಮನೆಯೊಳಗೆ   ನಿವಾರಣೆಯಾಗುವುದು ನಿಮ್ಮೆಲ್ಲ ತೊಂದರೆ...*

ವಿಶೇಷ ಹಾಗೂ ಅಪರೂಪದ ಹೂವು ಬಿಳಿ ಎಕ್ಕ. ಬಿಳಿ ಎಕ್ಕವನ್ನು ಸಾಮಾನ್ಯವಾಗಿ ಶಿವನ ಆರಾಧನೆಗೆ ಬಳಸಲಾಗುವುದು. ಧಾರ್ಮಿಕ ಚಟುವಟಿಕೆಗೆ ಹೊರತಾಗಿ ತಂತ್ರವಿದ್ಯೆಯಲ್ಲೂ ಬಳಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ಕೆಲವು ಗಿಡ ಮರಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಗಿಡಗಳು ದೇವರ ಪ್ರತಿ ರೂಪ ಎಂದು ಸಹ ನಂಬಲಾಗುವುದು. ಅಂತಹ ಪವಿತ್ರ ಸಸ್ಯಗಳು ದೇವರಿಗೂ ಅತ್ಯಂತ ಪ್ರಿಯವಾಗಿರುತ್ತವೆ. ವಿಶೇಷವಾದ ಸಸ್ಯಗಳು ಧಾರ್ಮಿಕ ಹಿನ್ನೆಲೆಯಿಂದ ಶ್ರೇಷ್ಠತೆಯನ್ನು ಪಡೆದುಕೊಂಡಂತೆ ವೈದ್ಯಕೀಯ ಶಾಸ್ತ್ರದಲ್ಲೂ ಉತ್ತಮ ಔಷಧೀಯ ಗುಣಗಳನ್ನು ಒಳಗೊಂಡಿರುತ್ತವೆ. ಅಂತಹ ಒಂದು ಶ್ರೇಷ್ಠ ಶಕ್ತಿಯನ್ನು ಹೊಂದಿರುವ ಸಸ್ಯಗಳಲ್ಲಿ ಎಕ್ಕದ ಗಿಡವೂ ಒಂದು. ಇದರಲ್ಲಿ ಎರಡು ಬಗೆಯ ಎಕ್ಕವನ್ನು ಕಾಣಬಹುದು. ಅದರಲ್ಲಿ ಬಿಳಿ ಎಕ್ಕವು ಧಾರ್ಮಿಕವಾಗಿ ಅತ್ಯಂತ ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ. ಇದನ್ನು ವೈಜ್ಞಾನಿಕವಾಗಿ ಕ್ಯಾಲೊಟ್ರೊಪಿಸ್ ಗಿಗಾಂಟಿಯಾ ಎಂದು ಸಹ ಕರೆಯುತ್ತಾರೆ. ಈ ಸಸ್ಯಕ್ಕೆ ಹಿಂದೂ ಧರ್ಮದಲ್ಲಿ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ.
ಜೀವನದಲ್ಲಿ ಸಕಲ ಯಶಸ್ಸನ್ನು ಪಡೆಯಲು ನಿತ್ಯವೂ ಸೂರ್ಯನನ್ನು ಹೀಗೆ ಆರಾಧಿಸಿ
ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಸ್ತು ಹಾಗೂ ವಿಷಯಗಳಲ್ಲೂ ವಿಶೇಷವಾಗಿ ದೇವರ ರೂಪವನ್ನು ಕಾಣುತ್ತೇವೆ. ಅಂತೆಯೇ ಭಕ್ತಿ ಭಾವದಿಂದ ಅವುಗಳ ಆರಾಧನೆಯನ್ನು ಸಹ ಮಾಡಲಾಗುವುದು. ಸಾವಿರಾರು ವರ್ಷಗಳ ಪೌರಾಣಿಕ ಇತಿಹಾಸ ಹಾಗೂ ಹಿನ್ನೆಲೆಯನ್ನು ಒಳಗೊಂಡ ಹಿಂದೂ ಧರ್ಮದಲ್ಲಿ ಅನೇಕ ದೇವರುಗಳನ್ನು ಕಾಣಬಹುದು. ಪ್ರತಿಯೊಂದು ದೈವಶಕ್ತಿಯಲ್ಲೂ ವಿಶೇಷ ಚಿಂತನೆಗಳು ಹಾಗೂ ಶಕ್ತಿಗಳಿರುವುದನ್ನು ಕಾಣಬಹುದು. ಅಂತೆಯೇ ಪ್ರತಿಯೊಂದು ದೇವತೆಗಳಿಗೂ ವಿಭಿನ್ನವಾದ ಹೂವು, ಗಿಡ, ಮರ, ಹಣ್ಣು, ಸ್ಥಳ ಹಾಗೂ ಪ್ರಾಣಿ-ಪಕ್ಷಿಗಳು ಆತ್ಮೀಯ ವಸ್ತುಗಳಾಗಿರುತ್ತವೆ. ಅವುಗಳ ಬಳಕೆಯಿಂದ ದೇವತೆಗಳನ್ನು ಪೂಜಿಸಿದರೆ ವಿಶೇಷವಾದ ಆಶೀರ್ವಾದ ಲಭಿಸುವುದು. ಜೀವನವೂ ಸಂತೃಪ್ತಿಯಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ.
‌                                                  ‌       ‌                                                                  *ಬಿಳಿ ಎಕ್ಕವನ್ನು ಗುರುತಿಸುವುದು ಹೇಗೆ ?*
ಬಿಳಿ ಎಕ್ಕವು ಸಾಮಾನ್ಯ ಎಕ್ಕಕ್ಕಿಂತ ಸ್ವಲ್ಪ ವಿಭಿನ್ನವಾಗಿರುತ್ತದೆ. ಇದರ ಎಲೆ ಆಲದ ಮರದ ಎಲೆಗಳಂತೆ ದಪ್ಪವಾಗಿರುತ್ತದೆ. ಆ ಎಲೆಗಳು ಹಣ್ಣಾಗಿ ಉದುರುವ ಸಮಯದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಬಿಳಿ ಎಕ್ಕದ ಹೂವುಗಳು ಚಿಕ್ಕಚಿಕ್ಕದಾಗಿರುತ್ತವೆ. ಗೊಂಚಲುಗಳ ಆಕಾರದಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳ ಮೇಲೆ ವರ್ಣ ರಂಜಿತ ರೇಖೆಗಳಿರುವುದನ್ನು ಗಮನಿಸಬಹುದು. ಆದರೆ ಆ ಹೂವುಗಳು ಮೂಲತಃ ಬಿಳಿ ಬಣ್ಣಗಳಿಂದ ಕೂಡಿರುತ್ತವೆ. ಅದರ ಹಣ್ಣುಗಳು ಮಾವಿನ ಹಣ್ಣಿನ ಆಕಾರದಲ್ಲಿ ಇರುತ್ತದೆ. ಅದರ ಒಳಗೆ ಬಿಳಿ ಹತ್ತಿಯ ರಚನೆಗಳಂತೆ ಕೂಡಿರುತ್ತದೆ. ಈ ಗಿಡದ ರೆಂಬೆಗಳು, ಎಲೆಗಳು ಹಾಗೂ ಹೂವುಗಳನ್ನು ಮುರಿದಾಗ ಬಿಳಿ ಬಣ್ಣದ ರಸ ಬರುತ್ತದೆ. ಆ ರಸವು ಮನುಷ್ಯರಿಗೆ ಅತ್ಯಂತ ವಿಷಕಾರಿ. ಅದು ಕಣ್ಣು, ಮೂಗು ಸೇರಿದಂತೆ ಯಾವುದೇ ಸೂಕ್ಷ್ಮ ಅಂಗಗಳಿಗೆ ತಾಗಿದರೆ ಅಲ್ಲಿಯೇ ಸುಡುತ್ತದೆ. ಹಾಗಾಗಿ ಚಿಕ್ಕಮಕ್ಕಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು.

*ಗಣೇಶ ಮತ್ತು ಬಿಳಿ ಎಕ್ಕದ ಗಿಡ*
ಎಕ್ಕ ಗಿಡದ ಬೇರಿನಿಂದ ಮಾಡಿದ ಗಣೇಶನ ಮೂರ್ತಿಯು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಎರಡು ಅಥವಾ ಮೂರು ವರ್ಷಗಳ ಹಳೆಯದಾದ ಸಸ್ಯವನ್ನು ಎಚ್ಚರಿಕೆಯಿಂದ ಬೇರು ಸಹಿತ ಕೀಳಬೇಕು. ನಂತರ ಬಹಳ ನಾಜೂಕಿನಿಂದ ಗಣೇಶನ ವಿಗ್ರಹವನ್ನು ಕೆತ್ತಬೇಕಾಗುತ್ತದೆ. ಈ ಬೇರಿನಿಂದ ಮಾಡಿದ ಗಣೇಶನ ಮೂರ್ತಿಯನ್ನು ಶುಭ ಸಮಯದಲ್ಲಿ ದೇವರ ಪೀಠದಲ್ಲಿ ಸ್ಥಾಪಿಸಿ, ಪೂಜೆ ಮಾಡಬೇಕು. ಆಗ ಜೀವನದಲ್ಲಿ "ತ್ರಿಸುಖ" ಅಥವಾ ಜೀವನದ ಎಲ್ಲಾ ಸಂತೋಷಗಳು ಲಭ್ಯವಾಗುತ್ತವೆ ಎಂದು ಹೇಳಲಾಗುವುದು.
ಗಣೇಶನ ಮೂರ್ತಿಗೆ ಕೆಂಪು ಬಟ್ಟೆಯನ್ನು ಧರಿಸಿ, ಕೆಂಪು ಹೂವು, ಕೆಂಪು ಶ್ರೀಗಂಧದ ಲೇಪನ ಮತ್ತು ಕೆಂಪು ರತ್ನಗಳನ್ನು ಅರ್ಪಿಸಬೇಕು. ಬೆಲ್ಲದಿಂದ ಮಾಡಿದ ಲಡ್ಡುಗಳನ್ನು ನೈವೇದ್ಯಕ್ಕೆ ಇಡಬೇಕು. ನಂತರ ಗಣೇಶನಿಗೆ ಹೇಳುವ "ಓಂ ವಕ್ರತುಂಡಾಯ ಹಂ" ಮಂತ್ರವನ್ನು ಪಠಿಸಬೇಕು. ಈ ರೀತಿಯಾಗಿ ಗಣೇಶನನ್ನು ಆರಾಧಿಸುವುದರಿಂದ ಗಣೇಶನು ಜೀವನದಲ್ಲಿ ಸಂತೋಷವನ್ನು ನೀಡುವನು.
ಶಿವ ಮತ್ತು ಎಕ್ಕದ ಹೂವು
ಮಂದಾರ ಪುಷ್ಪ ಎಂದು ಕರೆಯಲ್ಪಡುವ ಎಕ್ಕದ ಹೂವು ಶಿವನಿಗೆ ಅತ್ಯಂತ ಪ್ರಿಯವಾದದ್ದು. ಕೆಲವು ವಿಧಗಳಲ್ಲಿ ಎಕ್ಕದ ಹೂವನ್ನು ಶಿವನ ಆತ್ಮಕ್ಕೆ ಹೋಲಿಸಲಾಗುತ್ತದೆ. ಈ ಹೂವು ಶಿವನಂತೆ ಸರಳ ಹಾಗೂ ಬಹಳ ಪವಿತ್ರತೆಯಿಂದ ಕೂಡಿದೆ. ಶಿವನು ಉದ್ವೇಗಕ್ಕೆ ಒಳಗಾಗುವಂತೆಯೇ, ಹೂವನ್ನು ಎಚ್ಚರಿಕೆಯಿಂದ ನಿರ್ವಹಿಸದೆ ಇದ್ದರೆ ಅದು ಅತ್ಯಂತ ವಿಷಕಾರಿ. ಶಿವನು ಹೇಗ ಕಷ್ಟಗಳನ್ನು ಬಗೆಹರಿಸುವ ದೇವನೋ ಹಾಗೆಯೇ ಎಕ್ಕದ ಹೂವುಗಳು ಅದ್ಭುತ ರೀತಿಯ ಔಷಧೀಯ ಗುಣಗಳನ್ನು ಒಳಗೊಂಡಿದೆ. ಅದರಿಂದ ಸಾಕಷ್ಟು ಅನಾರೋಗ್ಯಗಳಿಗೆ ಔಷಧಿಯನ್ನಾಗಿಯೂ ಬಳಸಲಾಗುತ್ತದೆ. ಈ ಮಂದಾರ ಅಥವಾ ಬಿಳಿ ಎಕ್ಕವನ್ನು ಭಕ್ತಿಯಿಂದ ಶಿವ ಲಿಂಗಕ್ಕೆ ಅರ್ಪಿಸಿದರೆ ಶಿವನು ಸಂತುಷ್ಟನಾಗಿ ನಿಮಗೆ ಸಮೃದ್ಧಿಯ ಆಶೀರ್ವಾದವನ್ನು ನೀಡುತ್ತಾನೆ.
ಸಂತೋಷ ಮತ್ತು ಸಮೃದ್ಧಿಗೆ
ರವಿ ಪುಷ್ಯಾ ನಕ್ಷತ್ರಕ್ಕೆ ಸೇರಿದ ದಿನದಂದು, ಎಕ್ಕ ಗಿಡದ ಬೇರನ್ನು ಪವಿತ್ರವಾದ ಒಂದು ಕೆಂಪು ಬಟ್ಟೆಯಲ್ಲಿ ಸುತ್ತಬೇಕು. ನಂತರ ಅದನ್ನು ಮನೆಯೊಳಗೆ ಒಂದು ಸ್ವಚ್ಛ ಹಾಗೂ ಸುರಕ್ಷಿತವಾದ ಸ್ಥಳದಲ್ಲಿ ಇರಿಸಿ. ಈ ಕ್ರಮವನ್ನು ಅನುಸರಿಸಿದರೆ ಮನೆಯ ಸದಸ್ಯರ ನಡುವೆ ಹೊಂದಾಣಿಕೆ, ಸಂತೋಷ, ಶಾಂತಿ ಹಾಗೂ ಸಮೃದ್ಧಿಯು ನೆಲೆಸುತ್ತದೆ ಎಂದು ಹೇಳಲಾಗುವುದು.

*ಬಿಳಿ ಎಕ್ಕದ ಸಸ್ಯಕ್ಕೆ ಪ್ರಾರ್ಥನೆ ಸಲ್ಲಿಸಿ*
ನಿತ್ಯವೂ ನೀವು ಬಿಳಿ ಎಕ್ಕದ ಗಿಡಕ್ಕೆ ಪ್ರಾರ್ಥನೆಯನ್ನು ಸಲ್ಲಿಸಿ. ಇಲ್ಲವಾದರೆ ಬಿಳಿ ಎಕ್ಕದ ಸಸ್ಯದ ಕೆಳಗೆ ಕುಳಿತು ಪ್ರಾರ್ಥನೆ ಮಾಡಿ. ನೀವು ಮಾಡುವ ಪ್ರಾರ್ಥನೆಗೆ ಬೇಗ ಫಲವನ್ನು ಪಡೆದುಕೊಳ್ಳುವಿರಿ. ಈ ಗಿಡದ ಮುಂದೆ ಅಥವಾ ಕೆಳಗೆ ಕುಳಿತು "ಓಂ ಗಂ ಗಣಪತಯೇ ನಮಃ" ಎನ್ನುವ ಮಂತ್ರವನ್ನು ಹೇಳಿದರೆ ನೀವು ಬಯಸುವ ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷವಾದ ಯಶಸ್ಸನ್ನು ಸಾಧಿಸಬಹುದು.
 ‌       ‌                                                                                                                             *ಎಕ್ಕ ಗಿಡದ ತಿಲಕ*     
ಬಿಳಿ ಎಕ್ಕ ಗಿಡದ ಬೇರನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಆ ಪೇಸ್ಟ್ ಅನ್ನು ತಿಲಕದ ರೂಪದಲ್ಲಿ ನಿತ್ಯವೂ ಅನ್ವಯಿಸಿಕೊಳ್ಳಿ. ಆಗ ನೀವು ಹೆಚ್ಚಿನ ಜನರನ್ನು ಆಕರ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಂತೆಯೇ ಯಾರೂ ಸಹ ನಿಮ್ಮನ್ನು ತಿರಸ್ಕರಿಸಲು ಇಷ್ಟಪಡುವುದಿಲ್ಲ.
ಎಕ್ಕದ ಭಸ್ಮ
ಬೆಂಕಿಯ ಕುಂಡದಲ್ಲಿ ಒಂದು ಸಣ್ಣ ಶಂಖ ಮತ್ತು ಬಿಳಿ ಎಕ್ಕದ ಬೇರನ್ನು ಹಾಕಿ. ನಂತರ ಆ ಭಸ್ಮವನ್ನು ಸಂಗ್ರಹಿಸಿ. ಸಂಗ್ರಹಿಸಿಕೊಂಡ ಭಸ್ಮವನ್ನು ನಿತ್ಯವೂ ತಿಲಕದ ರೂಪದಲ್ಲಿ ಧರಿಸಿ. ಆಗ ನೀವು ಕೆಟ್ಟ ಅದೃಷ್ಟ ಹಾಗೂ ಕೆಟ್ಟ ಶಕ್ತಿ ಯಾವುದೂ ನಿಮ್ಮ ಬಳಿ ಸುಳಿಯದು. ಎಲ್ಲವೂ ದೂರ ಸರಿಯುತ್ತವೆ.
ಶತ್ರುಗಳನ್ನು ಶಾಂತಗೊಳಿಸುವುದು
ಬಿಳಿ ಎಕ್ಕದ ಎಲೆಯ ಮೇಲೆ ಎಕ್ಕದ ಸಸ್ಯ ರಸವನ್ನು ಬಳಸಿ, ಶತ್ರುವಿನ ಹೆಸರನ್ನು ಬರೆಯಿರಿ. ನಂತರ ಅದನ್ನು ಮಣ್ಣಿನೊಳಗೆ ಹೂಳಿ ಇಡಬೇಕು. ಆಗ ನಿಮ್ಮ ಶತ್ರುವು ನಿಮ್ಮ ತಂಟೆಗೆ ಬರುವುದಿಲ್ಲ. ಇಲ್ಲವೇ ಎಲೆಯ ಮೇಲೆ ಹೆಸರನ್ನು ಬರೆದು ಹರಿವ ನೀರಿನಲ್ಲಿ ಬಿಡಿ. ಆಗ ನಿಮ್ಮ ಶತ್ರು ನಿಮ್ಮನ್ನು ಬಿಟ್ಟು ಬೇರೆಡೆಗೆ ಹೋಗುತ್ತಾನೆ.
ಎಕ್ಕದ ಬೀಜದ ಹತ್ತಿ
ಎಕ್ಕದ ಬೀಜದ ಒಳಗೆ ಇರುವ ಹತ್ತಿಯನ್ನು ತೆಗೆದುಕೊಂಡು, ಬತ್ತಿಯನ್ನು ಮಾಡಿ. ನಂತರ ಅದನ್ನು ದೇವರ ದೀಪ ಮತ್ತು ಲಕ್ಷ್ಮಿ ದೇವಿಯ ಪೂಜೆಗೆ ವಿಶೇಷ ಬತ್ತಿಯನ್ನಾಗಿ ಬಳಸಿ. ಇದರಿಂದ ಆರತಿ ಹಾಗೂ ದೀಪವನ್ನು ಬೆಳಗುವುದರಿಂದ ಲಕ್ಷ್ಮಿಯು ಅತ್ಯಂತ ಸಂತೋಷದಿಂದ ಆಶೀರ್ವಾದ ಮಾಡುವಳು.
ದುಷ್ಟ ಶಕ್ತಿಯಿಂದ ಮಗುವನ್ನು ರಕ್ಷಿಸಲು
ಮಕ್ಕಳನ್ನು ದುಷ್ಟ ಶಕ್ತಿಗಳ ದೃಷ್ಟಿಯಿಂದ ಪಾರು ಮಾಡಲು ಬಿಳಿ ಎಕ್ಕ ವಿಶೇಷವಾದ ಸಹಾಯ ಮಾಡುವುದು. ಒಂದು ಬಟ್ಟೆಯ ಚೀಲದಲ್ಲಿ ಬಿಳಿ ಎಕ್ಕ ಸಸ್ಯದ ಬೇರು, ಬೆಳ್ಳುಳ್ಳಿ, ಬಿಳಿ ಹರಳು ಮತ್ತು ನವಿಲು ಗರಿಯನ್ನು ಇಡಿ. ನಂತರ ಆ ಚೀಲವನ್ನು ಸೂಕ್ತ ಜಾಗದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮಕ್ಕಳು ಯಾವುದೇ ಕೆಟ್ಟ ಶಕ್ತಿಯ ಕಣ್ಣುಗಳಿಗೆ ಗುರಿಯಾಗುವುದಿಲ್ಲ. ದುಸ್ವಪ್ನಗಳಿಗೆ ಅಥವಾ ಅನಗತ್ಯವಾಗಿ ಹೆದರುವುದಿಲ್ಲ.
ಸುರಕ್ಷಿತ ಪ್ರಯಾಣಕ್ಕೆ
ಪ್ರಯಾಣದ ಸಮಯದಲ್ಲಿ ನೀವು ಬಿಳಿ ಎಕ್ಕದ ಬೇರನ್ನು ನಿಮ್ಮ ಬಳಿ ಇಟ್ಟುಕೊಂಡರೆ ಅಪಘಾತದ ಭಯ ಇರುವುದಿಲ್ಲ. ಪ್ರಯಾಣವು ಸುಖಕರವಾಗಿರುತ್ತದೆ. ಪ್ರಯಾಣದ ಸಂದರ್ಭದಲ್ಲಿ ಅಪಘಾತದ ಭಯದಿಂದ ಮುಕ್ತಿ ಹೊಂದಲು ನೀವು "ಓಂ ನಮೋ ಅಗ್ನಿ ರೂಪಾಯ ಹ್ರೀಂ ನಮಃ" ಎಂದು ಜಪಿಸಬೇಕು.

No comments:

Post a Comment