Tuesday, 9 June 2020

ಕೆಲವೊಂದು ಶಿವ ದೇವಾಲಯದಲ್ಲಿ ಅರ್ಧಪ್ರದಕ್ಷಿಣೆ ಯಾಕೆ ಗೊತ್ತಾ?*

🕉 ಶ್ರೀ ಗುರುಭ್ಯೋ ನಮಃ 🕉    ‌       ‌            ‌          ‌                ‌     ‌      ‌      ‌     ‌        ‌                                                      *ಕೆಲವೊಂದು ಶಿವ ದೇವಾಲಯದಲ್ಲಿ ಅರ್ಧಪ್ರದಕ್ಷಿಣೆ ಯಾಕೆ ಗೊತ್ತಾ?*

ಉದ್ಭವ ಲಿಂಗವಿರುವ ಶಿವ ದೇವಾಲಯಗಳಲ್ಲಿ ಶಿವಲಿಂಗದ ಧನಾತ್ಮಕ ಪ್ರಭಾವವನ್ನು ತಡೆದುಕೊಳ್ಳುವ ಶಕ್ತಿ ನಮಗಿಲ್ಲವಾದ್ದ ಕಾರಣದಿಂದ ಪೂರ್ಣ ಸುತ್ತು ಪ್ರದಕ್ಷಿಣೆ ಹಾಕಬೇಕು. ಶಾಸ್ತ್ರ ಹಾಗೂ ಶಿವಪುರಾಣದ ಪ್ರಕಾರ ಶಿವಲಿಂಗದ ಸುತ್ತಲೂ ಅರ್ಧವಿಕ್ರಮವನ್ನು ಮಾಡಬೇಕು. ಅರ್ಧಪ್ರದಕ್ಷಿಣೆಯ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
 

ನಮ್ಮಲ್ಲಿ ಹಲವಾರು ಈಶ್ವರ ದೇವಾಲಯಗಳಿವೆ ಅವುಗಳಲ್ಲಿ ಕೆಲವೊಂದು ಶಿವ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅರ್ಧ ಪ್ರದಕ್ಷಿಣೆಯನ್ನು ಹಾಕಿದರೆ, ಕೆಲವೊಂದು ಶಿವ ದೇವಾಲಯಗಳಲ್ಲಿ ಪೂರ್ಣಸುತ್ತಿನ ಪ್ರದಕ್ಷಿಣೆಯನ್ನು ಮಾಡುತ್ತೇವೆ. ಇದರ ಹಿಂದಿರುವ ಹಿನ್ನಲೆ ಏನು? ಯಾಕೆ ಈ ಅರ್ಧಪ್ರದಕ್ಷಿಣೆ ಕೆಲವೊಂದು ದೇವಾಲಯಗಳಲ್ಲಿ ಮಾತ್ರ ಎನ್ನುವ ನಿಮ್ಮ ಸಂದೇಹಕ್ಕೆ ಉತ್ತರ ಈ ಲೇಖನದಲ್ಲಿದೆ.
 ‌                                             ‌          ‌                                                                                                                             ಪ್ರತಿಯೊಂದು ಹಿಂದೂ ದೇವಾಲಯಗಳನ್ನು ಕಟ್ಟುವಾಗಲೂ ಸ್ಥಳದಲ್ಲಿರುವಂತಹ ಧನಾತ್ಮಕ ಶಕ್ತಿಯನ್ನು ಪರಿಗಣಿಸಿ ಅಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ದೇವರನ್ನು ಪ್ರತಿಷ್ಠಾಪಿಸುವ ಸ್ಥಳವನ್ನು ಗರ್ಭ ಗುಡಿ ಎಂದು ಕರೆಯುತ್ತಾರೆ. ಈ ಗರ್ಭಗುಡಿಯು ದೇವಾಲಯದ ಮಧ್ಯದಲ್ಲಿದ್ದು ಈ ಕೇಂದ್ರ ಭಾಗದಲ್ಲಿ ಕಾಂತೀಯ ಅಲೆಗಳು ಹೆಚ್ಚಾಗಿರುತ್ತದೆ. ಈ ಗರ್ಭಗುಡಿಯ ಸುತ್ತ ಮಾಡುವ ಒಂದು ಕ್ರಿಯೆಯೇ ಪ್ರದಕ್ಷಿಣೆ.
ನಾವು ವೃತ್ತವನ್ನು ಎಳೆಯುವಾಗ ಒಂದು ಕೇಂದ್ರಬಿಂದುವನ್ನು ಹಾಕುತ್ತೇವೆ. ಅಂತೆಯೇ ಕೇಂದ್ರದಲ್ಲಿ ದೇವರ ಅನುಪಸ್ಥಿತಿಯಿದ್ದರೆ ನಾವು ಕೂಡಾ ಅಸ್ತಿತ್ವದಲ್ಲಿ ಇಲ್ಲದಂತೆ. ಹಾಗಾಗಿ ದೇವರನ್ನು ಗೌರವಿಸಲು, ಅಂಗೀಕರಿಸಲು ಹಾಗೂ ಕೃತಜ್ಞತೆಯನ್ನು ತೋರಿಸಲು ಪ್ರದಕ್ಷಿಣೆಯನ್ನು ಹಾಕಬೇಕು. ಋಗ್ವೇದದ ಪ್ರಕಾರ 'ಪ್ರ' ಎಂದರೆ ಕ್ರಿಯಾಪದಗಳಿಗೆ ಪೂರ್ವಪ್ರತ್ಯಯವಾಗಿದ್ದು, ತುಂಬಾ ಅರ್ಥಗಳನ್ನು ನೀಡುತ್ತದೆ. ಇದರರ್ಥ ಮುಂದೆ ಅಥವಾ ಮುಂದಕ್ಕೆ. 'ದಕ್ಷಿಣ' ಎಂದರೆ ದಕ್ಷಿಣ ಎಂದರ್ಥ. ದಕ್ಷಿಣಚರಂ ಅಥವಾ ಶುಭ ಎಂದು ಕರೆಯಲ್ಪಡುವ ಪ್ರದಕ್ಷಿಣಾಕಾರದಲ್ಲಿ ಚಲಿಸುವಾಗ ಒಬ್ಬರ ಬಲಭಾಗವು ದೇವತೆಯನ್ನು ಎದುರಿಸಬೇಕು ಎನ್ನುವುದನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ತುಳಸಿ, ಅಶ್ವತ್ಥ ಹಾಗೂ ದೇವಾಲಯದ ಸುತ್ತಲೂ ಇದೇ ರೀತಿಯಾಗಿ ಪ್ರದಕ್ಷಿಣೆ ಹಾಕಲಾಗುತ್ತದೆ. ಪ್ರದಕ್ಷಿಣೆ ಮಾಡಿದ ನಂತರ ಧ್ಯಾನವನ್ನು ಮಾಡಲಾಗುತ್ತದೆ.

*ಪ್ರದಕ್ಷಿಣೆಯ ಹಿನ್ನೆಲೆ* ‌      ‌        ‌      ‌                                                                             
ಪುರಾಣ ಕಥೆಯ ಪ್ರಕಾರ ಶಿವ ಮತ್ತು ಪಾರ್ವತಿಯು ದೇವತೆಗಳಿಗೆ ದೈವಿಕ ಫಲವನ್ನು ನೀಡಿದರು. ಈ ಹಣ್ಣು ಎಷ್ಟು ದೈವಿಕ ಅಂಶವನ್ನು ಒಳಗೊಂಡಿತ್ತು ಎಂದರೆ ಈ ಹಣ್ಣನ್ನು ಸೇವಿಸುವವನು ಸರ್ವೋಚ್ಛ ಜ್ಞಾನ ಮತ್ತು ಅಮರತ್ವವನ್ನು ಪಡೆಯುವುದು ಖಚಿತವೆಂದು ಹೇಳಲಾಗುತ್ತಿತ್ತು. ಈ ಹಣ್ಣನ್ನು ತಿನ್ನಲು ಬಯಸಿದ ಗಣೇಶ ಹಾಗೂ ಕಾರ್ತಿಕೇಯನ ಮಧ್ಯೆ ವಾದವು ಆರಂಭವಾಯಿತು. ಅವರ ವಾದವನ್ನು ಕೊನೆಗೊಳಿಸುವ ಸಲುವಾಗಿ ಶಿವನು 'ಜಗತ್ತನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಮೊದಲು ಬಂದವನು ಈ ದೈವಿಕ ಫಲವನ್ನು ಸೇವಿಸುತ್ತಾನೆ' ಎಂಬ ಷರತ್ತನ್ನು ವಿಧಿಸಿದನು. ಇದನ್ನು ಗಣೇಶ ಹಾಗೂ ಕಾರ್ತೀಕೇಯ ಒಪ್ಪಿದರು, ಕಾರ್ತಿಕೇಯನು ಸಮಯವನ್ನು ವ್ಯರ್ಥ ಮಾಡದೇ ಹೊರಟೇ ಬಿಟ್ಟ.
ಗಣೇಶನ ವಾಹನವಾದ ಮೂಷಿಕವು ಬೇಗನೆ ಜಗತ್ತನ್ನು ಸುತ್ತಲು ಸಹಾಯ ಮಾಡದು ಎಂದರಿತ ಗಣೇಶನು ತನ್ನ ಬುದ್ಧಿವಂತಿಕೆಯಿಂದ ತನ್ನ ಹೆತ್ತವರಾದ ಶಿವ ಪಾರ್ವತಿಯರನ್ನು ಸುತ್ತಲು ಆರಂಭಿಸಿದನು. ಇದನ್ನು ನೋಡಿದ ಶಿವನು ಗಣೇಶನನ್ನು ಪ್ರಶ್ನೆ ಮಾಡಿದಾಗ, ಗಣೇಶನು 'ನನ್ನ ತಂದೆ ತಾಯಿಯಾದ ನಿಮ್ಮಲ್ಲಿ ನಾನು ಜಗತ್ತನ್ನು ಕಾಣುತ್ತೇನೆ' ಎಂದಾಗ ಶಿವ ಹಾಗೂ ಪಾರ್ವತಿ ಸಂತೋಷಗೊಂಡು ಗಣೇಶನನ್ನೇ ವಿಜಯಿಯನ್ನಾಗಿ ಘೋಷಿಸುತ್ತಾರೆ. ಈ ರೀತಿಯಾಗಿ ಪ್ರದಕ್ಷಿಣೆಯ ಆಚರಣೆ ಅಸ್ತಿತ್ವಕ್ಕೆ ಬಂತು ಎಂದು ಹೇಳಲಾಗುತ್ತದೆ.
 ‌ ‌                                                                                       *ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆ*
ಕೆಲವು ಶಿವಾಲಯಗಳಲ್ಲಿ ಗರ್ಭಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತೇವೆ. ಕೆಲವು ದೇವಾಲಯಗಳಲ್ಲಿ ಪ್ರದಕ್ಷಿಣಾಕಾರವಾಗಿ ಗೋಮುಖಿಯವರೆಗೆ ಬಂದು ಅಲ್ಲಿಂದ ಮತ್ತೆ ಗೋಮುಖಿಯ ಇನ್ನೊಂದು ಭಾಗದಿಂದ ಗರ್ಭಗುಡಿಗೆ ನಮ್ಮ ಎಡಭಾಗವು ಬರುವಂತೆ ಪ್ರದಕ್ಷಿಣೆಯನ್ನು ಹಾಕಬೇಕು.
ಗೋಮುಖಿ ಎಂದರೆ ದೇವರಿಗೆ ಮಾಡುವ ಅಭಿಷೇಕದ ನೀರು ಬೀಳುವ ಸ್ಥಳ. ಇದನ್ನು ದಾಟಬಾರದು. ಎಲ್ಲಾ ಶಿವದೇವಾಲಯಗಳಲ್ಲಿ ಈ ನಿಯಮವಿರುವುದಿಲ್ಲ. ಉದ್ಭವಲಿಂಗವಿರುವ ಶಿವ ದೇವಾಲಯದಲ್ಲಿ ಪೂರ್ಣಪ್ರದಕ್ಷಿಣೆ ಹಾಕಬೇಕು. ಪ್ರತಿಷ್ಠಾಪಿತ ಲಿಂಗವಿರುವ ದೇವಾಲಯದಲ್ಲಿ ಅರ್ಧಪ್ರದಕ್ಷಿಣೆ ಹಾಕಬೇಕು ಎಂಬ ಸಂಪ್ರದಾಯವಿದೆ.

*ಯಾಕೆ ಅರ್ಧಪ್ರದಕ್ಷಿಣೆ ?*
ಉದ್ಭವ ಲಿಂಗವಿರುವ ಶಿವ ದೇವಾಲಯಗಳಲ್ಲಿ ಶಿವಲಿಂಗದ ಧನಾತ್ಮಕ ಪ್ರಭಾವವನ್ನು ತಡೆದುಕೊಳ್ಳುವ ಶಕ್ತಿ ನಮಗಿಲ್ಲವಾದ್ದ ಕಾರಣದಿಂದ ಪೂರ್ಣ ಸುತ್ತು ಪ್ರದಕ್ಷಿಣೆ ಹಾಕಬೇಕು. ಶಾಸ್ತ್ರ ಹಾಗೂ ಶಿವಪುರಾಣದ ಪ್ರಕಾರ ಶಿವಲಿಂಗದ ಸುತ್ತಲೂ ಅರ್ಧವಿಕ್ರಮವನ್ನು ಮಾಡಬೇಕು. ಇದು ಶಿವನ ಆದಿ ಮತ್ತು ಅನಂತವನ್ನು ಸಮರ್ಥಿಸುವ ಕ್ರಿಯೆ. ಆದಿ ಎಂದರೆ ಮೊದಲು, ಅನಂತ ಎಂದರೆ ಶಾಶ್ವತವಾದುದು. ಆದ್ದರಿಂದ ಶಿವಲಿಂಗದಿಂದ ಹರಿಯುವ ದೈವಿಕ ಮತ್ತು ಅಂತ್ಯವಿಲ್ಲದ ಶಕ್ತಿಯು ಗೋಮುಖಿ ಅಂದರೆ ಅಭಿಷೇಕ ತೀರ್ಥ, ಹಾಲು ಹರಿದು ಹೋಗುವ ಮಾರ್ಗದಲ್ಲಿ ಹಾದುಹೋಗುತ್ತದೆ. ಇದು ಶಿವಲಿಂಗದ ಪವಿತ್ರ ಭಾಗವಾಗಿದ್ದು ಇದನ್ನು ಎಂದಿಗೂ ದಾಟಬಾರದೆಂದು ಹೇಳಲಾಗುತ್ತದೆ.

ದಂತಕಥೆಯ ಪ್ರಕಾರ ಶಿವಭಕ್ತನಾಗಿದ್ದ ಗಂಧರ್ವ ಎಂಬ ರಾಜನು ಶಿವದೇವಾಲಯದಲ್ಲಿ ಪ್ರದಕ್ಷಿಣೆ ಹಾಕಲು ಆರಂಭಿಸಿದನು. ಗೊತ್ತಾಗದೇ ಗೋಮುಖಿಯನ್ನು ದಾಟಿಬಿಟ್ಟನು. ಇದರಿಂದ ರಾಜನು ಶಿವನ ಕೋಪಕ್ಕೆ ಗುರಿಯಾಗಿ ತನ್ನ ಅಧಿಕಾರ, ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಕಳೆದುಕೊಳ್ಳಬೇಕಾಗಿ ಬಂತು. ಆದ್ದರಿಂದ ಪ್ರಾಚೀನ ಗ್ರಂಥಗಳಲ್ಲಿ ಶಿವಲಿಂಗಕ್ಕೆ ಮಾಡುವ ಅರ್ಧಪ್ರದಕ್ಷಿಣೆಯ ಬಗ್ಗೆ ಉಲ್ಲೇಖಿಸಲಾಗಿದೆ.

No comments:

Post a Comment