Tuesday, 9 June 2020

ಗ್ರಾಮದೇವತೆ ಮಹಿಮೆ

🕉 ಶ್ರೀ ಗುರುಭ್ಯೋ ನಮಃ 🕉   ‌     ‌                                                                       *ಗ್ರಾಮದೇವತೆ ಮಹಿಮೆ*

ಗ್ರಾಮದೇವತೆಯನ್ನು ಪೂಜಿಸುವುದರಿಂದ ಗ್ರಾಮದಲ್ಲಿ ಹರಡುವ ರೋಗಗಳುˌ ಶತ್ರುಭಾಧೆˌ ಚೋರಭಾಧೆˌ ಮಾರಕಾದಿ ಉಪದ್ರವಗಳಿಂದ ನಾವು ಪಾರಾಗಬಹುದು.

ಗ್ರಾಮ ದೇವತೆ ಕೋಪಗೊಂಡರೆ ಗ್ರಾಮ ಕಳಾಹೀನವಾಗುವುದು. ಕ್ಷಾಮˌ ರೋಗ-ರುಜಿನಗಳು ಬಂದು ಗ್ರಾಮವನ್ನು ನಾಶ ಮಾಡುವುದು.

ಗ್ರಾಮ ದೇವತೆಯ ತೃಪ್ತಿಗಾಗಿ ಪೂಜೆˌ ಅಭಿಷೇಕ, ಹವನ, ಹೋಮ, ಅನ್ನ ಸಂತರ್ಪಣೆಗಳನ್ನು  ಮಾಡುತ್ತಾ ಇರಬೇಕು. ತಾಯಿಯನ್ನು ತಲೆಯ ಮೇಲೆ ಹೊತ್ತುಕೊಂಡು ಇಡೀ ಗ್ರಾಮವನ್ನೆಲ್ಲಾ ಸುತ್ತಾಡಿ ಬರಬೇಕು. ಇದರಿಂದ ಸಂತುಷ್ಟಗೊಂಡು ತಾಯಿಯು ಗ್ರಾಮವನ್ನು ಕಾಪಾಡುವಳು.

ಗ್ರಾಮದೇವತೆಯ ಮಂತ್ರ

*ಓಂ ಜ್ವಲ ಜ್ವಲ ಜ್ವಾಲಾಮುಖಿ ಜ್ವಾಲಾಮುಖಿ ಜ್ವಾಲಾ ಕರಾಳವದನೆ, ಓಂ ಮಹಾಮಾರಿ ಆತ್ರ ಆಗಚ್ಭ, ಅತ್ರ ತಿಷ್ಟಳಂಕ ಶಕ್ತಿ, ಶಾಂಭವಿ ಶಾಂತಿಂ ಕುರು ಕುರು ಜಡಿ ನಾಯಕಿ, ಹ್ರೀಂ ಹಸಕಹ ಹ್ರೀಂ ಮಯಿ ಶೋಣಿಕೆ ಮಂ ಮಾರಿ ಗ್ರಾಮ ರಕ್ಷರಕ್ಷ ಶ್ರೀಂ ಶ್ರೇಯಸಿ ತುಷ್ಟಿಂ ಕರೋಮಿ ಸ್ವಾಹಾ*

ಎಂದು 108 ಸಲ ಜಪಿಸಿದರೆ ತಾಯಿಯ ಅನುಗ್ರಹವಾಗುವುದು.

ಈ ಮಂತ್ರವನ್ನು 10ˌ000 ಸಲ ಜಪ ಮಾಡಿ ಆ ಗ್ರಾಮ ದೇವತೆಯನ್ನು ಸ್ಮರಿಸಿ ಮಲಗಿದರೆ ಆ ಗ್ರಾಮದಲ್ಲಿ ಆಗುವ ವಿದ್ಯಾಮಾನಗಳೆಲ್ಲವೂ ತಿಳಿಯುತ್ತವೆ.

ತಾಯಿಗೆ ತಂಬಿಟ್ಟು ದೀಪ ಇಡಿ.
ಕೋಸಂಬರಿ ಪಾನಕ ನೈವೇದ್ಯ ಮಾಡಿರಿ.

ಮೂಲ ವಿಚಾರ ನೀಡಿದವರು
ಪೂಜ್ಯ ಗುರುಗಳು ವೇದಬ್ರಹ್ಮ ಶ್ರೀ ಗುಂಜೂರು ರಾಮಚಂದ್ರ ಶಾಸ್ತ್ರಿಗಳು.

No comments:

Post a Comment