Tuesday, 9 June 2020

ಜಾತಕದಲ್ಲಿ ಗುರು ಸ್ಥಾನದ ಫಲ ಹಾಗೂ ಗುರು ಗ್ರಹ ಮತ್ತು ಗುರುವಿನ ಮಹತ್ವ

*🕉️ ಶ್ರೀ ಗುರುಭ್ಯೋ ನಮಃ 🕉️*    ‌            ‌                                         ‌     ‌               ‌                                                           ‌                                                                                   *ಜಾತಕದಲ್ಲಿ ಗುರು ಸ್ಥಾನದ ಫಲ ಹಾಗೂ ಗುರು ಗ್ರಹ ಮತ್ತು ಗುರುವಿನ ಮಹತ್ವ*
 ‌          ‌                                                                               ಪ್ರಥಮವಾಗಿ ಎಲ್ಲರಿಗೂ ಗುರುವಾರದ ಶುಭಾಶಯಗಳು. 
ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಅವಶ್ಯಕತೆ ಇದ್ದೇ ಇದೆ. 
ಏಕೆಂದರೆ ಗುರುವಿಲ್ಲದೆ ಕಲಿತ ವಿದ್ಯೆ ಶೂನ್ಯ ಎನ್ನುತ್ತಾರೆ. ಒಬ್ಬ ಕಳ್ಳನಿಗೂ ಗುರು ಬೇಕು ಎನ್ನುತ್ತಾರೆ 
ಶ್ರೀ ರಾಮಕೃಷ್ಣ ಪರಮಹಂಸರು. ಶ್ರೀಕೃಷ್ಣನಿಗೆ ಸಾಂದೀಪನಿ ಗುರು, ಶ್ರೀ ಶಂಕರಾಚಾರ‍್ಯರಿಗೆ ಶ್ರೀ ಗೋವಿಂದ ಭಗವತ್ಪಾದರು ಗುರು, ಶ್ರೀ ರಾಮಕೃಷ್ಣ ಪರಮಹಂಸರಿಗೆ ತೋತಾಪುರಿ ಗುರು, ಪಾಂಡವರಿಗೆ ಮತ್ತು ಕೌರವರಿಗೆ ದ್ರೋಣಾಚಾರ‍್ಯರು ಗುರು, ಶ್ರೀರಾಮ ಲಕ್ಷ್ಮಣರಿಗೆ ವಿಶ್ವಾಮಿತ್ರರು ಗುರು.
‌                                                                                                      *ಗುರುವಿನಲ್ಲಿ ಮೂರು ವಿಧ* :
1. ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವ ಗುರು.
2. ಶೈಕ್ಷಣಿಕ, ವ್ಯಾವಹಾರಿಕ ಬದುಕಿಗೆ ಬೇಕಾದ ಶಿಕ್ಷಣ ನೀಡುವ ಗುರು.
3. ಅಂಗೀರಸ ಪುತ್ರನಾದ ಬೃಹಸ್ಪತಿ ಅಥವಾ ಗುರು.
ಈತ ನವಗ್ರಹಗಳಲ್ಲಿ ಒಂದಾದ ಗ್ರಹ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಗುರುವಿನ ಸ್ಥಾನಕ್ಕೆ ಬಹಳ ಮಹತ್ವವಿದೆ. 
ಈ ಗುರು ನಮ್ಮ ನಿತ್ಯ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರುತ್ತಾನೆ ಎಂದು ವ್ಯಕ್ತಿಯ ಜಾತಕ ಅಥವಾ ಕುಂಡಲಿ ಮತ್ತು ರಾಶಿಯ ಮೂಲಕ ತಿಳಿಯಬಹುದು.
ಗುರು ಗ್ರಹ: ನವಗ್ರಹಗಳಲ್ಲಿ ಅತ್ಯಂತ ಶುಭ ಹಾಗೂ ಶಾಂತ ಗ್ರಹ ಎಂದರೆ ಗುರು.
ಈತನ ಸ್ವಕ್ಷೇತ್ರ ಧನುಸ್ಸು ಮತ್ತು ಮೀನ ರಾಶಿ. ಕಟಕರಾಶಿ ಉಚ್ಚರಾಶಿಯಾದರೆ ಮಕರ ನೀಚರಾಶಿಯಾಗಿದೆ. ಗುರು ವಿದ್ಯಾವಂತನು, ಶಾಂತ ಸ್ವಭಾವದವನು, ಆಧ್ಯಾತ್ಮಿಕ ಶಾಸ್ತ್ರ ನಿಪುಣನು, ಸಮಾಜ ಕಾರ‍್ಯದಲ್ಲಿ ಪ್ರವೀಣ, ಬುದ್ಧಿವಂತನು, ಪರೋಪಕಾರಿ, ಹಣದ ವಿಷಯದಲ್ಲಿ ಉದಾರಿ, ಪುತ್ರಕಾರಕ, ಶಿಕ್ಷಣ ನೀಡುವವನೂ ಆಗಿರುವನು.
೧. ಜಾತಕದಲ್ಲಿ ಗುರು
ಕುಂಡಲಿಯಲ್ಲಿ ಗುರುವು ಲಗ್ನ ಅಥವಾ ಮೊದಲನೆ ಭಾವದಲ್ಲಿ ಇದ್ದರೆ ಆ ಜಾತಕದವರು ಸುಂದರ ದೇಹವುಳ್ಳವರು, ಅವರು ದೀರ್ಘ ಆಯುಸ್ಸು ಉಳ್ಳವರು, ಪಂಡಿತರೂ, ಧೀರರೂ, ಶ್ರೇಷ್ಠ ವ್ಯಕ್ತಿಯೂ ಆಗಿರುತ್ತಾರೆ.
೨. ಕುಂಡಲಿಯಲ್ಲಿ ಗುರುವು ಎರಡನೇ ಮನೆಯಲ್ಲಿದ್ದರೆ ಆ ಜಾತಕದವರು ಧನಿಕರೂ, ಉತ್ತಮ ಆಹಾರ ಸೇವಿಸುವವರೂ, ವಾಕ್‌ ಚಾತುರ‍್ಯ ಹೊಂದಿರುವವರೂ, ಮೃದುಭಾಷಿಗಳೂ ಆಗಿರುತ್ತಾರೆ.
೩. ಮೂರನೇ ಮನೆಯಲ್ಲಿದ್ದರೆ ಬೇರೆಯವರಿಂದ ತಿರಸ್ಕರಿಸಲ್ಪಡುವವರೂ, ಕೃಪಣರೂ, ಸ್ತ್ರೀಯರಿಂದ ಪರಾಜಿತನೂ, ಹೆಚ್ಚು ಪಾಪ ಕಾರ್ಯ ಮಾಡುವವರೂ ಆಗಿರುತ್ತಾರೆ.
೪. ಕುಂಡಲಿಯಲ್ಲಿ ಗುರು 4ನೇ ಮನೆಯಲ್ಲಿದ್ದರೆ ಆ ಜಾತಕರು ವಾಹನ ಸುಖವನ್ನು ಹೊಂದುವರು, ಬುದ್ಧಿವಂತರೂ, ಭೋಗವಂತರೂ, ಶ್ರೇಷ್ಠರೂ, ಶತ್ರುಗಳನ್ನು ಜಯಿಸುವವರೂ ಆಗಿರುತ್ತಾರೆ.
೫. ಗುರು ಐದನೇ ಮನೆಯಲ್ಲಿದ್ದರೆ ಪುತ್ರ ಸಂತಾನ, ಉತ್ತಮ ಮಿತ್ರರನ್ನು ಹೊಂದುವರು. ಧೈರ‍್ಯವಂತರಾಗಿದ್ದು ಎಲ್ಲಾ ವಿಧದ ಸುಖವನ್ನು ಹೊಂದುತ್ತಾರೆ.
೬. ಆರನೇ ಮನೆಯಲ್ಲಿದ್ದರೆ ಕೊಟ್ಟ ಮಾತಿನಂತೆ ನಡೆಯುವವರು, ಯಾವಾಗಲೂ ಹೊಟ್ಟೆಗೆ ಸಂಬಂಧಪಟ್ಟ ತೊಂದರೆ ಅನುಭವಿಸುವರು. ಪತ್ನಿಯಿಂದ ಕೀರ್ತಿಯನ್ನು ಹೊಂದುವರು.
೭. ಗುರುವು 7ನೇ ಮನೆಯಲ್ಲಿದ್ದರೆ ಭಾಗ್ಯವಂತರಾಗಿ ಉತ್ತಮ ಪತ್ನಿ ಅಥವಾ ಪತಿಯನ್ನು ಹೊಂದುತ್ತಾರೆ. ಸಂಸಾರದಲ್ಲಿ ನೆಮ್ಮದಿಯಿಂದ ಇರುವವರೂ, ಸಮಯಕ್ಕೆ ಸರಿಯಾಗಿ ಮಾತಾಡುವವರೂ ಕವಿಯೂ, ಲೇಖಕರೂ ಆಗಿರುತ್ತಾರೆ.
೮. ಗುರುವು 8 ನೇ ಮನೆಯಲ್ಲಿದ್ದರೆ ಆಯಸ್ಸು ಕಡಿಮೆ ಇರುತ್ತದೆ. ಸಾಲಗಾರರೂ, ಆರೋಗ್ಯದಲ್ಲಿ ಆಗಾಗ ತೊಂದರೆ ಅನುಭವಿಸುವವರೂ, ಉತ್ತಮ ಕೆಲಸದಲ್ಲಿ ಇರುವವರೂ ಆಗಿರುತ್ತಾರೆ.
೯. ಗುರುವು 9ನೇ ಮನೆಯಲ್ಲಿದ್ದರೆ ದೇವರಲ್ಲಿ, ಗುರುಹಿರಿಯರಲ್ಲಿ ಅಪಾರ ಭಕ್ತಿ ಹೊಂದಿರುವವರೂ, ವಿದ್ಯಾವಂತರೂ, ಮಂತ್ರಿಗಳ ಭಾಗ್ಯ ಹೊಂದಿರುವವರೂ,
೧೦. ಗುರುವು 10ನೇ ಮನೆಯಲ್ಲಿದ್ದರೆ ಪ್ರಾರಂಭಿಸಿದ ಕೆಲಸವನ್ನು ಯಶಸ್ವಿಯಾಗಿ ಮಾಡುವವರೂ, ಸಕಲ ಉಪಾಯ ಮತ್ತು ಕುಶಲತೆಯನ್ನು ಹೊಂದಿರುವವರೂ, ವಾಹನ, ಧನ, ಭಾಗ್ಯ, ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಮಾಡುವವರು ಆಗಿರುತ್ತಾರೆ.
೧೧. ಗುರುವು 11ನೇ ಮನೆಯಲ್ಲಿದ್ದರೆ ಅಧಿಕ ಲಾಭ ಗಳಿಸುವವರು, ಅನೇಕ ಸೇವಕರನ್ನು ಹೊಂದಿರುವವರು, ಜನಗಳಿಂದ ಪ್ರೀತಿ ಹೊಂದುವವರು, ಅಲ್ಪ ಸಂತಾನ ಹೊಂದಿರುವವರು ಆಗಿರುತ್ತಾರೆ.
೧೨. ಗುರುವು 12ನೇ ಮನೆಯಲ್ಲಿದ್ದರೆ ಆಲಸಿಯೂ, ಜಗಳಗಂಟರೂ, ಜನಗಳಲ್ಲಿ ದ್ವೇಷ ಹೊಂದಿದವರೂ, ಯಾವ ಕೆಲಸಕ್ಕೂ ಹೇಸದವರೂ ಆಗಿರುತ್ತಾರೆ.
‌                                                                                                                     ನಿಮ್ಮ ಜಾತಕದಲ್ಲಿ ಗುರುಗ್ರಹ ಬಲ ವಿಲ್ಲದಿದ್ದರೇ ಅಥವಾ ನೀಚ ಅಥವಾ ಆಗ್ರಹದ ದೋಷ ತಿಳಿದು ಸೂಕ್ತವಾದ ಪರಿಹಾರ ಮಾಡಿ ಎಲ್ಲವೂ ಶುಭವಾಗುತ್ತದೆ.
*#ಗುರುಗ್ರಹದ_ಅನುಗ್ರಹಕ್ಕೆ_ಪರಿಹಾರಗಳು :
* ಗುರುಗ್ರಹದ ವಿಗ್ರಹಕ್ಕೆ ಪ್ರತಿದಿನ ಹಳದಿ ಬಟ್ಟೆ ಅಥವಾ ಹಳದಿ ಬಣ್ಣದ ಹೂಗಳನ್ನು ಅರ್ಪಿಸಿ.
* ಮಾನಸಿಕ ಅಸ್ವಸ್ಥರಿಗೆ ಆಹಾರವನ್ನು ನೀಡಿ.
* ಬಡಮಕ್ಕಳಿಗೆ ವಿದ್ಯಾಭ್ಯಾಸದ ಸಾಮಗ್ರಿಗಳನ್ನು ನೀಡಿ.
* ಪುಷ್ಯರಾಗದ ಉಂಗುರವನ್ನು ಧರಿಸಿ. ಇದು ನಿಮ್ಮ ಜನ್ಮ ಲಗ್ನದಿಂದ ಪರಿಶೀಲಿಸಿ ನಂತರವೇ ಧರಿಸಬೇಕು.
* ಗುರುವಿನ ಅಷ್ಟೋತ್ತರ ಪಠಿಸಿ
* ಗುರುವಾರ ಗುರವಿನ ದೇವಾಲಯಕ್ಕೆ ಹೋಗುವುದು.
* ಗೋವುಗಳಿಗೆ ಪ್ರತಿದಿನ ಅಕ್ಕಿ ಮತ್ತು ಬೆಲ್ಲವನ್ನು ಕೊಡಿ.
* ಗುರು ಜಪ ಅಥವಾ ಗುರು ಶಾಂತಿ ಮಾಡಿಸಿ.
* ಗುರು ದತ್ತಾತ್ರೇಯ ಮತ್ತು ದಕ್ಷಿಣಾಮೂರ್ತಿ ಅಷ್ಟೋತ್ತರ ಪಠಿಸಿ.                                                                                         ‌* ಗುರು ಹಾಗೂ ಗುರು ಸಮಾನರಾದ ವ್ಯಕ್ತಿಗಳೊಂದಿಗೆ ಗೌರವದಿಂದ ವರ್ತಿಸಿ ಮತ್ತು ಅವರ ಸೇವೆ ಮಾಡುತ್ತಿರಬೇಕು.                                                                      * ಪುರೋಹಿತರು, ಅರ್ಚಕರು, ಜ್ಯೋತಿಷ್ಯಿಗಳು, ಸನ್ಯಾಸಿಗಳು, ಸಾಧು ಸಂತರು, ಧಾರ್ಮಿಕ ಕಾರ್ಯಕರ್ತರ ಸೇವೆ, ಸತ್ಕಾರಗಳನ್ನು ಮಾಡುತ್ತಿರಬೇಕು. ಯಾವುದೇ ಕಾರಣಕ್ಕೂ ಅವರಿಗೆ ಅಪಚಾರ ಅಥವಾ ಅವಮಾನ ಮಾಡಬಾರದು.

No comments:

Post a Comment