ವ್ಯಾಪಾರದ ಸ್ಥಳದಲ್ಲಿ ಅಥವಾ ಮನೆಯಲ್ಲಿ ಕೆಟ್ಟ ದೃಷ್ಟಿ ಬಿದ್ದರೆ ನಾನಾ ರೀತಿಯ ತೊಂದರೆಗಳು ಆಗುತ್ತವೆ. ಹಾಗಾಗಿ ಕೆಟ್ಟ ದೃಷ್ಟಿ ನಿವಾರಣೆಗೆ ಹಾಗೂ ಆ ಸ್ಥಳಗಳಲ್ಲಿ ಪಾಸಿಟಿವ್ ಎನರ್ಜಿ ಅಂದರೆ ಸಕಾರಾತ್ಮಕ ಗುಣಗಳು ಪಸರಿಸಲಿ ಅನ್ನೋ ಕಾರಣಕ್ಕೆ ಇದನ್ನು ಬಳಹಷ್ಟು ಜನರು ಈ ವಿಧಾನವನ್ನು ಮಾಡುತ್ತಾರೆ. ಇನ್ನು ಈರೀತಿಯಾಗಿ ಮಾಡುವುದರಿಂದ ಅಂಗಡಿ ಮನೆ ಆಫೀಸ್ ಇವುಗಳ ಮೇಲೆ ಯಾವುದೇ ದೃಷ್ಟ ಶಕ್ತಿಯ ಪ್ರಭಾವ ಬಿರೋದಿಲ್ಲ ಅನ್ನೋದನ್ನ ಪಂಡಿತರು ಹೇಳುತ್ತಾರೆ.
ಅಷ್ಟೇ ಅಲ್ಲದೆ ಈ ನಿಂಬೆಹಣ್ಣು ಪೂಜೆಗಳಿಗೆ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತದೆ ಹಾಗಾಗಿ ಇದನ್ನು ಒಂದು ಗಾಜಿನ ಗ್ಲಾಸ್ ನೀರಿನಲ್ಲಿ ನಿಂಬೆಹಣ್ಣು ಹಾಕಿ ದೇವರ ಫೋಟೋ ಮುಂದೆ ಇಟ್ಟರೆ ಉತ್ತಮ ಅನ್ನೋದನ್ನ ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ತಟಸ್ಥ ಗೊಳಿಸುವುದಲ್ಲದೆ, ಹೆಣ್ಣು ಅಥವಾ ಗಂಡಸರ ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ ಎಂಬುದಾಗಿ ಹೇಳಲಾಗುತ್ತದೆ. ನಿಮ್ಮ ಮನೆಯ ಮೇಲೆ ಅಥವಾ ನಿಮ್ಮ ಮೇಲೆ ಮಾಟ ಮಂತ್ರ ವ್ಯಾಮಾಚಾರ ಆಗಿದ್ರೆ ಈ ನಿಂಬೆಹಣ್ಣು ಕೊಳೆತು ಹೋಗುವ ಸೂಚನೆ ನೀಡುತ್ತದೆ.
ವೈಜ್ಞಾನಿಕವಾಗಿ ಹೇಳುವಾದರೆ ಇದರಿಂದ ಅರೋಗ್ಯ ವೃದ್ಧಿಯಾಗುತ್ತದೆ ಅನ್ನೋದನ್ನ ಹೇಳಲಾಗುತ್ತದೆ ಅದು ಹೇಗೆ.? ನಾವುಗಳು ವಾಸಿಸುವಂತ ಸ್ಥಳದಲ್ಲಿನ ಆಮ್ಲಿಯತೆ ಹೆಚ್ಚಾಗಿದ್ದರೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಆದ್ದರಿಂದ ಇದರಿಂದ ಪರಿಹಾರ ಹೊಂದಲು ಈ ರೀತಿಯ ವಿಧಾನವನ್ನು ಮಾಡುವುದರಿಂದ ಗುಣ ವಾತಾವರಣ ಆಮ್ಲಿಯತೆಯನ್ನು ಹೀರಿ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.
No comments:
Post a Comment