Monday, 16 December 2019

" ಕಾಕ ಬಲಿ " ಎಂದರೆ = #ಕಾಗೆಗಳಿಗೆಅನ್ನನೀಡುವುದು ಎಂದು ಅರ್ಥ

" *#ಕಾಕಬಲಿಏಕೆ*? "

" ಕಾಕ ಬಲಿ " ಎಂದರೆ = #ಕಾಗೆಗಳಿಗೆಅನ್ನನೀಡುವುದು ಎಂದು ಅರ್ಥ!

ಮೃತನಾದ ವ್ಯಕ್ತಿಯ ಸಲುವಾಗಿ 10ನೇ ದಿನ ಈ ಕಾಕ ಬಲಿ ಇಡುವುದುಂಟು.

ಕಾಗೆ ಆ ಬಲಿಯನ್ನು ಮುಟ್ಟದಿದ್ದರೆ ಅಥವಾ ತಿನ್ನದಿದ್ದರೆ ಮೃತನಾದ ವ್ಯಕ್ತಿಗೆ ತೃಪ್ತಿಯಾಗಲಿಲ್ಲ ಎಂದು ಭಾವಿಸುವುದುಂಟು.

ಹಾಗಾದರೆ..

#ಕಾಗೆಗೆ - ಪಿತೃಗಳಿಗೆ ಸಂಬಂಧ ಉಂಟೆ?
ಎಂಬುದಕ್ಕೆ ಉತ್ತರ ಇಲ್ಲಿದೆ.

#ಶ್ರೀರಾಮಾಯಣ ಉತ್ತರಕಾಂಡದಲ್ಲಿ ಒಂದು ಪ್ರಸಂಗ...

ಸೂರ್ಯವಂಶದ ಕ್ಷತ್ರೀಯ ವೀರ " #ಮರುತ್ ". ಅವನು ಶ್ರೀ ಬೃಹಸ್ಪತಿಯ ಸಹೋದರನಾದ ಶ್ರೀ ಸಂವರ್ತನೆಂಬ ಬ್ರಹ್ಮರ್ಷಿಯ ಪೌರೋಹಿತ್ಯದಲ್ಲಿ ದೊಡ್ಡ ಯಜ್ಞವೊಂದನ್ನು ನಡೆಸಿದ.

#ಅದುರಾವಣನಕಾಲ! ಅವನಿಗೆ ಹೆದರಿದ ದೇವತೆಗಳು ಒಬ್ಬೊಬ್ಬರು ಒಂದೊಂದು ಪಕ್ಷಿಯ ರೂಪ ತಾಳಿ ಮರುತ್ತನ ಯಜ್ಞಕ್ಕೆ ಬಂದರು!

ಶ್ರೀ ಬ್ರಹ್ಮದೇವರು " #ಹಂಸ " ರೂಪದಲ್ಲಿ;ಶ್ರೀ ದೇವೇಂದ್ರ " #ನವಿಲು " ರೂಪದಲ್ಲಿ;ಶ್ರೀ ಯಮಧರ್ಮರಾಜರು " #ಕಾಗೆ " ಯ ರೂಪದಲ್ಲಿ ಬಂದರು!

ಹೀಗೆ ಯಜ್ಞದಲ್ಲಿ ಭಾಗವಹಿಸಿದ ಅವರು ತಮ್ಮ ಗೌಪ್ಯತೆಗೆ ಕಾರಣವಾದ ಆ ಪಕ್ಷಿ ಪ್ರಾಣಿಗಳಿಗೆ ಒಂದೊಂದು ವರ ನೀಡಿದರು.

ಶ್ರೀ ಯಮಧರ್ಮರಾಜರು #ಕಾಗೆಗಳಿಗೆದೀರ್ಘಾಯುಷ್ಯವನ್ನು ನೀಡಿದರು. ಯಾವ ರೋಗ ಭಯವೂ ಕಾಗೆಗಳಿಗೆ ಇಲ್ಲ. #ಮನುಷ್ಯನುಕೊಂದರಷ್ಟೇ ಅವುಗಳಿಗೆ ಮರಣ ಬರುತ್ತದೆ.

ಶ್ರೀ ಯಮಧರ್ಮರಾಜರು ಕಾಗೆಗಳಿಗೆ ಇನ್ನೊಂದು ವರವನ್ನು ನೀಡಿದರು...

ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಷುಧಯಾರ್ದಿತಾಃ ।

ತ್ವಯಿ ಭಕ್ತೇ ಸುತೃಪ್ತಾಸ್ತೇ ಭವಿಷ್ಯಂತಿ ಸ ಬಾಂಧವಾ: ।।

#ನನ್ನಲೋಕದಲ್ಲಿರುವಪಿತೃಗಳು, ನೀವು ( ಕಾಗೆಗಳು ) ಅನ್ನವನ್ನು ಸ್ವೀಕರಿಸಿದರೆ ಆ ಮೂಲಕ ಸಂತೃಪ್ತರಾಗುತ್ತಾರೆ. ಈ ಕಾರಣದಿಂದ " ಕಾಕ ಬಲಿ " ಯ ಮೂಲಕ ಪಿತೃಗಳು ತೃಪ್ತರಾಗುವರೆಂಬ ನಂಬಿಕೆ ರೂಢಿಯಲ್ಲಿ ಬಂದಿದೆ.*ಕಾಕಬಲಿ*

#ಶ್ರಾದ್ಧಸಂದರ್ಭದಲ್ಲಿ ಉತ್ತಿಷ್ಠ ಪಿಂಡ ವನ್ನು *#ಕಾಗೆಗೆ* ಇಡುವ ಸಂಪ್ರದಾಯಕ್ಕೆ ಕಾರಣ #ರಾಮಾಯಣಕಾಲದಲ್ಲಿ ಕಾಗೆಗಳಿಗೆ ಪ್ರಾಪ್ತವಾದ ವರಬಲದಿಂದ.  

ಸೂರ್ಯ ವಂಶದ ದೊರೆ ಮರುತ್ ಎಂಬುವವನು ಒಂದು ವಿಶಿಷ್ಟವಾದ ಯಜ್ಜ್ಯವನ್ನು  ಸುವರ್ತನೆಂಬ ಶ್ರೇಷ್ಠ ಮುನಿಯ ಪೌರೋಹಿತ್ಯದಲ್ಲಿ ಮಾಡಿದನು.   ಸುವರ್ತನು ಬೃಹಸ್ಪತಿಯ ಸೋದರ.    ಇಡೀ ವಿಶ್ವವೇ ತನ್ನ ಅಧೀನದಲ್ಲಿರಲಿ ಎಂಬ ಅಪೇಕ್ಷಿತನಾಗಿ ರಾವಣನು ದೇವತೆಗಳನ್ನೂ ಬ್ರಹ್ಮಬಲದಿಂದ ಹೆದರಿಸಿದ್ದನು. 

 ಆ ರಾವಣನ ಉಪಟಳಕ್ಕೆ ಹೆದರಿ ಎಲ್ಲಾ ದೇವತೆಗಳೂ  ವೇಷ ಮರೆಸಿಕೊಂಡು ಕೆಲವು ಪ್ರಾಣಿಗಳ  ರೂಪದಲ್ಲಿ ಯಜ್ಜ್ಞಕ್ಕೆ ಆಗಮಿಸಿದರು.  

ಬ್ರಹ್ಮನು ತನ್ನ ವಾಹನವಾದ ಹಂಸರೂಪದಿ ಬಂದರೆ, ದೇವೇಂದ್ರನು ನವಿಲಿನ ರೂಪದಲ್ಲೂ, ಯಮನು ಕಾಗೆಯ ರೂಪದಲ್ಲೂ, ಕುಬೇರನು ಹಲ್ಲಿಯ ರೂಪದಲ್ಲೂ ಬಂದರು.

ಹೀಗೆ ತಮ್ಮ ಗೌಪ್ಯತೆ ಕಾಪಾಡಲು ಹೊಂದಿದ ಆ ಆ ಪ್ರಾಣಿಗಳಿಗೆ ಒಂದೊಂದು ವರವನ್ನು ಇತ್ತರು.  ಅದರಂತೆ ಯಮನು ಕಾಗೆಗಳಿಗೆ ದೀರ್ಘಾಯಸ್ಸನ್ನೂ ಮತ್ತು ಆ ಕಾಗೆಗಳು ಸ್ವೀಕರಿಸುವ ಉಚ್ಚಿಷ್ಟ ಪಿಂಡದಿಂದ ಪಿತೃ ದೇವತೆಗಳಿಗೆ ತೃಪ್ತರಾಗಲಿ ಎಂದು ವರವನಿತ್ತರು.  

ಅದಕ್ಕೇ ಕಾಗೆಗೆ ಉತ್ತಿಷ್ಠ ಪಿಂಡವನ್ನು ಇಡುವ ಸಂಪ್ರದಾಯ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment