Tuesday, 17 December 2019

ದೇವಸ್ಥಾನಕ್ಕೆ ಹೋದಾಗ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಸಿಗುವ ಫಲ

ಬಹಳಷ್ಟು ಜನ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಮರಳುತ್ತಾರೆ. ಆದ್ರೆ ಇನ್ನು ಕೆಲವರು ಶ್ರದ್ದಾ ಭಕ್ತಿಯಿಂದ ದೇವರ ಪೂಜೆಯನ್ನು ಮುಗಿಸಿ ದೇವಲಾಯ್ಡ ಸುತ್ತಲೂ ಪ್ರದಕ್ಷಿಣೆ ಹಾಕಿ ದೇವರ ಸನ್ನಿದಿಯಲ್ಲಿ ಸ್ವಲ್ಪ ಹೊತ್ತು ಕೂತು ಮತ್ತೆ ಮರಳಿ ಮನೆಗೆ ಬರುತ್ತಾರೆ. ಆದ್ರೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುವುದರಿಂದ ಏನು ಫಲವಿದೆ ಅನ್ನೋದನ್ನ ತಿಳಿಯೋಣ ಬಹುತೇಕ ಜನರಿಗೆ ಅದರಲ್ಲೂ ಇಂದಿನ ದಿನಗಳಲ್ಲಿ ಇದರ ಬಗ್ಗೆ ತಿಳಿಯುವುದು ಬಳಷ್ಟು ಕಡಿಮೆ ಆಗಾಗಿ ಪ್ರದಕ್ಷಿಣೆ ಏಕೆ ಹಾಕಬೇಕು ಇದರಿಂದ ಸಿಗುವ ಫಲವೇನು ತಿಳಿಯೋಣ.

ಪ್ರದಕ್ಷಿಣೆ ಹಿಂದಿನ ಕಾಲದಿಂದಲೂ ಕೂಡ ನಮ್ಮ ಹಿರಿಯರು ಮಾಡಿಕೊಂಡು ಬಂದಿರುವಂತ ಪದ್ಧತಿ ಹಾಗೂ ನಂಬಿಕೆ ಪ್ರದಶಿನೇ ಹಾಕುವುದರಿಂದ ಜನ್ಮ ಜನ್ಮಾಂತರದ ಪಾಪ ನಿವಾರಣೆಯಾಗುತ್ತದೆ. ಹಾಗೂ ಪ್ರದಕ್ಷಿಣೆ ಹಾಕುವುದರಿಂದ ಪಾಪವನ್ನು ಕಳೆದುಕೊಳ್ಳಬಹುದು ಜೊತೆಗೆ ಮನಸ್ಸನ್ನು ಏಕಾಗ್ರತೆ ಮಾಡುತ್ತದೆ ಚಂಚಲ ಮನಸ್ಥಿತಿ ಕಡಿಮೆಯಾಗುವುದು ಎಂಬುದಾಗಿ ಪಂಡಿತರು ಹೇಳುತ್ತಾರೆ. ಇನ್ನು ಹಿಂದೂ ಪೂಜಾ ಪ್ರಯೋಗ ವಿಧಿಗಳಲ್ಲಿ ಬರಿ ನಮಸ್ಕಾರಂ ಕುರ್ಯಾತ್‌ ಎಂದು ಎಲ್ಲೂ ಹೇಳುವುದಿಲ್ಲ ಬದಲಿಗೆ ‘ಪ್ರದಕ್ಷಿಣ ನಮಸ್ಕಾರಂ ಕುರ್ಯಾತ್‌’ ಎಂದೇ ಹೇಳಲಾಗಿದೆ. ಹಾಗಾಗಿ ಇದಕ್ಕೆ ಹಿಂದೂ ಧಾರ್ಮಿಕತೆಯಲ್ಲಿ ವಿಶೇಷವಾದ ಮಹತ್ವವಿದೆ.

ನಾವುಗಳು ಹಿಂದಿನಿಂದಲೂ ಕೂಡ ದೇವಸ್ಥಾನಕ್ಕೆ ಹೋದಾಗ 108 ಅಥವಾ ಯಥಾಶಕ್ತಿ ಪ್ರದಕ್ಷಿಣೆ ಹಾಕಬೇಕು ಎಂದು ನಾವೆಲ್ಲಾ ನಂಬಿ ದ್ದೇವೆ. ಪ್ರದಕ್ಷಿಣೆಯ ಹಿಂದಿರುವುದು ಜ್ಯೋತಿರ್ವಿಜ್ಞಾನ ಹೌದು ನಾವುಗಳು ಪ್ರಕೃತಿಯೇ ದೇವರು ಎಂದು ನಂಬಿರುವ ಹಿಂದೂಗಳು ಪೂಜಾವಿಧಿಯನ್ನೂ ಪ್ರಕೃತಿ ನಿಯಮಕ್ಕೆ ಅನುಗುಣವಾಗಿಯೇ ರೂಪಿಸಿ ಕೊಂಡಿದ್ದೇವೆ. ಹಾಗೆಯೆ ಸೂರ್ಯನಿಂದ ಭೂಮಿಗೆ ಶಕ್ತಿ ಸಿಗುತ್ತದೆಯೋ ಹಾಗೆ ದೇವರು ಎಂಬ ಪರಮೋಚ್ಚ ಶಕ್ತಿಯ ಸುತ್ತ ಪ್ರದಕ್ಷಿಣೆ ಮಾಡುವುದರಿಂದ ನಮಗೂ ಶಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ.

ಅಷ್ಟೇ ಅಲ್ದೆ ಪ್ರದಕ್ಷಿಣೆಯು ಏಕರೂಪದ ಪುನರಾವರ್ತಿ ಕ್ರಿಯೆಯಾಗಿರುವುದರಿಂದ ಅಲ್ಲಿ ಏಕಾಗ್ರತೆ ಸುಲಭವಾಗಿ ಸಿದ್ಧಿಸುತ್ತದೆ. ಯಾವುದಾದರೂ ಒಂದು ಶಕ್ತಿಗೆ ಸಂಪೂರ್ಣ ಶರಣಾಗಲು ಈ ಏಕಾಗ್ರತೆ ಅತ್ಯಗತ್ಯ. ಆದ್ದರಿಂದ ದೇವಾಲಯಕ್ಕೆ ಹೋಗುವಾಗ ಪ್ರದಕ್ಷಣೆ ಹಾಕಿ ಬಂದರೆ ಮನಸ್ಸಿಗೆ ಹಾಗೂ ದೇಹಕ್ಕೂ ನೆಮ್ಮದಿ ಸಿಗುವಂತಾಗುತ್ತದೆ. ನಿಮ್ಮ ಜೀವನದಲ್ಲಿ ಎಂತಹ ಕಠಿಣ ಸಮಸ್ಯೆಗಳು ಇರಲಿ ಒಂದೇ ಕರೆ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ದೈವಜ್ಞ ಜ್ಯೋತಿಷ್ಯರು ಎಂ.ಪಿ ಶರ್ಮ 98455 59493 ಸಮಸ್ಯೆ ಎಷ್ಟೇ ಕಠಿಣವಾದರೂ 3 ದಿನದಲ್ಲಿ ಪರಿಹಾರ ನೀಡುತ್ತೇವೆ. ಎಂಪಿ ಶರ್ಮ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ




No comments:

Post a Comment