Saturday, 30 May 2020

"ಶಂಖದಿಂದ ಬಂದದ್ದೇ ತೀರ್ಥ" ಎಂಬುದು ಎಲ್ಲರಿಗೂ ಗೊತ್ತಿರುವ ಮಾತು.

"ಶಂಖದಿಂದ ಬಂದದ್ದೇ ತೀರ್ಥ" ಎಂಬುದು ಎಲ್ಲರಿಗೂ ಗೊತ್ತಿರುವ ಮಾತು. 

ಆದರೆ "ಶಂಖಕರ್ಣನ ಬಾಯಿಂದ ಬಂದದ್ದೇ ತೀರ್ಥ" ಎಂಬುದು ಅನೇಕರಿಗೆ ಗೊತ್ತಿಲ್ಲದ ಮಾತು.

 ವೃಷಭೇಶ್ವರ(ನಂದೀಶ್ವರ)ನ ಮತ್ತೊಂದು ಹೆಸರೇ "ಶಂಖಕರ್ಣ". 

ಈ ನಂದೀಶ್ವರನ ಬಾಯಿಂದ ಬಂದ ಜಲ ಸಾಮಾನ್ಯವಾದುದಲ್ಲ. ಅದು ಪವಿತ್ರಗಂಗಾಜಲಕ್ಕೆ ಸಮ. 

ಆದ್ದರಿಂದಲೇ ಶೈವ-ವೀರಶೈವರು ಶಿವನ ಅಭಿಷೇಕ ಮಾಡುವಾಗ ನಂದಿಮುಖದ ಧಾರಾಪಾತ್ರೆ, ಅರ್ಘ್ಯಪಾತ್ರೆ, ಕಮಂಡಲು, ಶೃಂಗಿ ಮುಂತಾದವುಗಳನ್ನು ಬಳಸುತ್ತಾರೆ.

 ಹಾಗೇನೇ ಯಾಗಂಟಿ(ಆಂಧ್ರಪ್ರದೇಶ) ಮೊದಲಾದ ತೀರ್ಥಕ್ಷೇತ್ರಗಳಲ್ಲಿ ನಂದಿಮುಖದಿಂದ ಬರುವ ತೀರ್ಥಸ್ನಾನಕ್ಕೂ ಅದರದೇ ಆದ ಮಹತ್ವವಿದೆ. 

ಕರ್ನಾಟಕದಿಂದ ಶ್ರೀಶೈಲ ಕ್ಷೇತ್ರಕ್ಕೆ ಬರುವ ಅನೇಕ ವೀರಶೈವಭಕ್ತರು ಮರಳಿ ಊರಿಗೆ ಹೋಗುವಾಗ ತಪ್ಪದೇ ದರ್ಶನ, ತೀರ್ಥಸ್ನಾನ ಮಾಡುವ ಮಹತ್ವದಕ್ಷೇತ್ರಗಳೆಂದರೆ ಮಹಾನಂದಿ ಹಾಗೂ ಯಾಗಂಟಿ. 

ನಮ್ಮ ದೇಶದಲ್ಲಿ ನಂದಿಮುಖದಿಂದ ಬರುವ ತೀರ್ಥದ ಕ್ಷೇತ್ರಗಳು ಇನ್ನೂ ಕೆಲವು ಕಡೆ ಇವೆ. ನಮ್ಮಲ್ಲಿ ಈ ನಂದೀಶ್ವರನ ಬಾಯಿಂದ ಬಂದ ಪವಿತ್ರಜಲದಿಂದ ಸ್ನಾನ ಮಾಡಿದರೆ ಪಾಪವಿಮೋಚನೆಯಾಗುತ್ತದೆ ಎಂಬ ದೃಢವಾದ ನಂಬಿಕೆಯಿದೆ. 

 ಇಂತಹ ನಂದೀಶ್ವರನ ತೀರ್ಥ ಕ್ಷೇತ್ರಗಳು ಬೆಟ್ಟ ಗುಡ್ಡಗಳಲ್ಲಿ ಇರುವುದರಿಂದ ಇವುಗಳ ಮಹತ್ವ ಇನ್ನೂ ಹೆಚ್ಚಿದೆ.

 ನಿಸರ್ಗದ ಮಡಿಲಲ್ಲಿ ಇರುವ ನಂದೀಶ್ವರನ ತೀರ್ಥವನ್ನು ಪಾನಮಾಡಿದರೂ, ಸ್ನಾನಮಾಡಿದರೂ ಆರೋಗ್ಯಕ್ಕೆ ಒಳ್ಳೆಯದೆಂದು ನಮ್ಮ ಆಯುರ್ವೇದ ಪಂಡಿತರು ಹೇಳುತ್ತಾರೆ.

 ಭಕ್ತಿಯುಳ್ಳವರು ಈ ನಂದಿತೀರ್ಥವನ್ನು ಮನೆಗೆ ಒಯ್ದು  ಶುಭಕಾರ್ಯಗಳಲ್ಲಿ ಬಳಸುತ್ತಾರೆ. ಪುಟ್ಟಮಕ್ಕಳು ಶಿವನಿಗಿಂತ ನಂದೀಶ್ವರನನ್ನು ಹೆಚ್ಚು ಇಷ್ಟಪಡುವುದುಂಟು.

 ಅವರನ್ನು ಶಿವನ ದೇವಸ್ಥಾನಕ್ಕೆ ಕರೆದೊಯ್ದರೆ ನಂದೀಶ್ವರನ ಜೊತೆ ಆಟ ಆಡುತ್ತಿರುತ್ತಾರೆ. ಇನ್ನು ನಂದೀಶ್ವರನ ಬಾಯಿಂದ ಬರುವ ಜಲದಿಂದ ಸ್ನಾನ ಅಂದ್ರೆ ಅವರಿಗೆ ಎಲ್ಲಿಲ್ಲದ ಆನಂದ. ನಂದಿ ಅಂದ್ರೇನೇ "ಆನಂದ". 

ಸರ್ವಜನ ಸುಖಿನೋಭವಂತು ಶಿವರ್ಪಣಮಸ್ತು

No comments:

Post a Comment