Saturday, 30 May 2020

ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬಾರದು ಎಂಬುವ ವಿಚಾರಧಾರೆ

ಶುಭ ಮಂಗಳವಾರ ಸರ್ವಮಂಗಲೆಯ ಅನುಗ್ರಹ ನಿಮದಾಗಲಿ ಶುಭೋದಯ ಸುದಿನಮಸ್ತು

🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬಾರದು ಎಂಬುವ ವಿಚಾರಧಾರೆ

ನಿಂಬೆಹಣ್ಣು ಸ್ತ್ರೀ ದೇವತೆಯಾದ ಪಾರ್ವತೀ ದೇವಿಗೆ ತುಂಬಾ ಇಷ್ಟವಾದುದು .
ದೇವಿಗೆ ನಿಂಬೆಹಣ್ಣಿನ ಹಾರ ಹಾಕುತ್ತಾರೆ ..
ನಿಂಬೆಹಣ್ಣಿನ ದೀಪಗಳನ್ನು ಪಾರ್ವತೀ ಸ್ವರೂಪರಾದ ಅಂಭಾಭವಾನಿ, ಕಾಳೀ ಮಂದಿರ, ಚೌಡೇಶ್ವರೀ, ..ಇತ್ಯಾದಿ
ಮಾರಿಯಮ್ಮ, ದುರ್ಗಾ ಹಾಗೂ ಶಕ್ತಿ ದೇವಾಲಯಗಳಲ್ಲಿ ದೀಪ ಹಚ್ಚುತ್ತಾರೆ .

"ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿ ಹಾಗೂ ಸರಸ್ವತೀ ದೇವಾಲಯದಲ್ಲಿ ಹಚ್ಚಬಾರದು.." ಒಂದು ವೇಳೆ ಹಚ್ಚಿದರೆ ಮನೆಯಲ್ಲಿ ಸಂತೋಷ ಇರುವುದಿಲ್ಲ, ಯಾವಾಗಲೂ ಜಗಳ, ಹಣಕಾಸಿನ ಸ್ಥಿತಿ ಕಷ್ಟವಾಗುತ್ತದೆ..

ಮಂಗಳವಾರ ದೀಪ ಹಚ್ಚುವುದಕ್ಕಿಂತ ಶುಕ್ರವಾರದ ದೀಪ ಹೆಚ್ಚು ಫಲ ಕೊಡುತ್ತದೆ..ಯಾಕೆಂದರೆ ಮಂಗಳವಾರದ ದೀಪವು ರಜೋಗುಣದಿಂದ ಕೂಡಿರುತ್ತದೆ.., ಶುಕ್ರವಾರದ ದೀಪವು ಸತ್ವಗುಣದಿಂದ ಕೂಡಿರುತ್ತದೆ...

ಶುಕ್ರವಾರದ ದಿವಸ ದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚಿ ನಂತರ ಮನೆಯ ಯಜಮಾನರ ಅಥವಾ ಪೂಜೆ ಮಾಡುವವರ ಹೆಸರಲ್ಲಿ ದೇವಿಗೆ ಅಷ್ಟೋತ್ತರ ಮಾಡಿಸಿ, ಕೋಸಂಬರಿ, ಪಾನಕ, ಮಜ್ಜಿಗೆ, ಹಣ್ಣುಗಳನ್ನು ಕೊಡಬೇಕು.. ದೇವರಿಗೆ ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ಕೊಡಬೇಕು..
ಅರಿಸಿನ, ಕುಂಕುಮ, ಹೂವು, ರವಿಕೆ ಕಣ, ಸೀರೆ ಎಲ್ಲವೂ ಕೊಡಬಹುದು..
ಇವೆಲ್ಲಾ ದೇವಿಗೆ ತುಂಬಾ ಇಷ್ಟ..
ಹೀಗೆ ಮಾಡಿದರೆ ನೆನೆದ ಕಾರ್ಯಗಳು ಸುಸೂತ್ರವಾಗಿಯೂ, ಶೀಘ್ರವಾಗಿಯೂ, ನೆರವೇರುತ್ತದೆ..

"ನಿಂಬೆಹಣ್ಣಿನ ದೀಪ ಹಚ್ಚುವಾಗ ಗಮನಿಸಬೇಕಾದ ಅಂಶಗಳು."!

೧. ಯಾವುದೇ ಕಾರಣಕ್ಕೂ ಒಂದೇ ಮನೆಯಲ್ಲಿ ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪ ಹಚ್ಚಬಾರದು..

೨. ಯಾವುದೇ ಕಾರಣಕ್ಕು ನಿಂಬೆಹಣ್ಣಿನ ದೀಪ ಮನೆಯಲ್ಲಿ ಹಚ್ಚಬಾರದು..

೩. ಯಾವುದೇ ಕಾರಣಕ್ಕು ಹೆಂಗಸರು ರಜಸ್ವಲೆ ಇರುವಾಗ ಹಚ್ಚಬಾರದು..

೪. ಯಾವುದೇ ಕಾರಣಕ್ಕೂ ಹೆಂಗಸರು 4 ನೇ ದಿನದ ನೀರು ಹಾಕಿಕೊಂಡು ಅಥವಾ 5 ನೇ ದಿನದ ನೀರು ಹಾಕಿಕೊಂಡು, ನಿಂಬೆಹಣ್ಣಿನ ದೀಪ ಹಚ್ಚಬಾರದು..

೫. ನಿಂಬೆಹಣ್ಣಿನ ದೀಪವನ್ನು ಮೈಲಿಗೆ ಇರುವಾಗ ಹಚ್ಚಬಾರದು..

೬. ಯಾವುದೇ ಕಾರಣಕ್ಕೂ ಆರೋಗ್ಯ ಸರಿಯಿಲ್ಲದಿರುವಾಗ ನಿಂಬೆಹಣ್ಣಿನ ದೀಪ ಹಚ್ಚಬಾರದು..

೭. ಯಾವುದೇ ಕಾರಣಕ್ಕೂ ಹಬ್ಬ ಮತ್ತು ಹಿರಿಯರ ದಿವಸ ನಿಂಬೆ ದೀಪ ಹಚ್ಚಬಾರದು..

೮. ಯಾವುದೇ ಕಾರಣಕ್ಕು ಮಕ್ಕಳ ಹುಟ್ಟುಹಬ್ಬ ಹಾಗೂ ಮನೆಯವರ ಮದುವೆ ದಿವಸ ನಿಂಬೆಹಣ್ಣಿನ ದೀಪ ಹಚ್ಚಬಾರದು..

೯. ಯಾವುದೇ ಕಾರಣಕ್ಕೂ ಬೇರೆಯವರ ಮನೆಗೆ ಹೋದಾಗ ನಿಂಬೆಹಣ್ಣಿನ ದೀಪ ಹಚ್ಚಬಾರದು..

೧೦. ಹೆಣ್ಣುಮಕ್ಕಳು ಅಕ್ಕ ತಂಗಿಯರ ಮನೆಗೆ ಅಥವಾ ತಾಯಿಯ ಮನೆಗೆ ಹೋದಾಗ ನಿಂಬೆಹಣ್ಣಿನ ದೀಪ ಹಚ್ಚಬಾರದು..

೧೧. ಯಾರೋಂದಿಗಾದರೂ ಜಗಳ ಮಾಡಿ ನಿಂಬೆ ದೀಪ ಹಚ್ಚಬಾರದು..

೧೨. ಸುಮಂಗಲಿಯರು ರೇಷ್ಮೆ ಸೀರೆ ಉಟ್ಟು ದೇವರಿಗೆ ನಿಂಬೆಹಣ್ಣಿನ ದೀಪ ಹಚ್ಚಿದರೆ, ಶೀಘ್ರದಲ್ಲಿ ದೇವಿಯ ಅನುಗ್ರಹದಿಂದ ಸಕಲ ಕಾರ್ಯವು ನಿರ್ವಿಘ್ನವಾಗಿ ನೆರವೇರುತ್ತದೆ..

೧೩. ಸುಮಂಗಲಿಯರು ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚೋವಾಗ ಚೂಡಿದಾರ್ ಅಥವಾ ಬೇರೆತರಹದ ಉಡುಗಳನ್ನು ಧರಿಸಿ , ಪೂಜೆ ಮಾಡಿದರೆ ಫಲ ಸಿಗುವುದಿಲ್ಲ ಮತ್ತು ಕೆಲಸವೂ ಆಗುವುದಿಲ್ಲ..

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment