Monday, 25 May 2020

🌺 ಗೋದಾನದ ಮಹಿಮೆ ಹೇಳಿದ ಬ್ರಹ್ಮ ,🌺

,🌹  ಮಹಾಭಾರತ ಸಾರ- 47 🌹

🌺  ಗೋದಾನದ ಮಹಿಮೆ ಹೇಳಿದ ಬ್ರಹ್ಮ ,🌺

ಒಂದು ದಿನ ಬ್ರಹ್ಮದೇವರ ಮತ್ತು ದೇವೀಂದ್ರರ ನಡುವೆ ಸಂವಾದ ನಡೆದಿತ್ತು.
ತಿಳಿದೋ ತಿಳಿಯದೋ  ಯಾರಾದರೂ ಹಣದ ಆಸೆಗಾಗಿ ಗೋವುಗಳನ್ನು ಕದ್ದು ಬೇರೆಯವರಿಗೆ ಮಾರಿದರೆ ಅಂಥವರಿಗೆ ಎಂಥ ಗತಿ ಉಂಟಾಗುತ್ತದೆ ಎಂದು ಇಂದ್ರ ಕೇಳುತ್ತಾನೆ.

ಗೋವು ಕಳ್ಳತನ ಮಾಡಿ ದಾನ ಮಾಡುವುದಾಗಲಿ,  ಮಾರಾಟ ಮಾಡುವುದಾಗಲಿ, ಗೋಮಾಂಸ ಸೇವಿಸುವುದಾಗಲಿ ಮಹಾ ಪಾಪ. ಗೋವು ಕಳ್ಳತನ ಮಾಡಿ ಕಟುಗರಿಗೆ ಮಾರಿದರೆ ಅಥವಾ ಗೋ ಮಾಂಸ ತಿಂದವರಿಗೆ ಹತ್ಯೆಗೊಳಗಾದ ಗೋವಿನಲ್ಲಿ ಎಷ್ಟು ರೋಮಗಳಿರುತ್ತವೆಯೋ ಅಷ್ಟು ವರ್ಷಗಳ ಕಾಲ ನರಕಯಾತನೆ ಅನುಭವಿಸುತ್ತಾರೆ ಎಂದು ಬ್ರಹ್ಮ ಹೇಳುತ್ತಾನೆ.

ಒಬ್ಬ ವ್ಯಕ್ತಿ ಶಾಸ್ತ್ರೋಕ್ತವಾಗಿ ಗೋದಾನ ಮಾಡಿದರೆ ಹಿಂದಿನ ಏಳು ತಲೆಮಾರಿನವರು ಹಾಗೂ ಮುಂದಿನ ಏಳು ತಲೆಮಾರಿನವರನ್ನು ಉದ್ಧಾರ ಮಾಡಿದ ಪುಣ್ಯ ಸಿಗುತ್ತದೆ. 
ಯಾರೂ ಶಾಸ್ತ್ರೋಕ್ತವಾಗಿ ಗೋದಾನ ಮಾಡುವರೋ ಅವರಿಗೆ ಸನಾತನವಾದ ಶುಭಲೋಕಗಳು ಪ್ರಾಪ್ತವಾಗುತ್ತವೆ ಎಂದು ಬ್ರಹ್ಮ ದೇವರು ಉಪದೇಶಿಸುತ್ತಾರೆ.

ಬ್ರಹ್ಮ ದೇವರಿಂದ ಅರಿತ ಗೋದಾನದ ಮಹಿಮೆಯನ್ನು ದೇವೀಂದ್ರನು ದಶರಥ ಮಹಾರಾಜನಿಗೆ ಹೇಳಿದ. 
ದಶರಥನು ಶ್ರೀರಾಮನಿಗೆ, 
ರಾಮನು ಲಕ್ಷ್ಮಣನಿಗೆ  ಹೇಳಿದ. ವನವಾಸದ ಸಂದರ್ಭದಲ್ಲಿ ಲಕ್ಷ್ಮಣನು ಅಲ್ಲಿದ್ದ ಋಷಿಗಳಿಗೆ ಗೋದಾನದ ಮಹಾತ್ಮ್ಮೆ ಉಪದೇಶ ಮಾಡಿದ.ಹೀಗೆ ಪರಂಪರಾಗತವಾಗಿ ಬಂದ ಗೋ ವ್ರತವನ್ನು ಕಠೋರ ವ್ರತನಿಷ್ಠ ರಾದ ಋಷಿಗಳು ಹಾಗೂ ಧಾರ್ಮಿಕರಾದ ರಾಜರು ಅನುಷ್ಠಾನಕ್ಕೆ ತಂದರು ಎಂದು ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಹೇಳಿದರು.
ಮಾತಾಪಿತೃಗಳ ಶುಶ್ರೂಷೆಯಿಂದ ಯಾವ ಫಲ ಸಿಗುತ್ತದೆ ಎಂದು ಧರ್ಮರಾಜ ಪ್ರಶ್ನಿಸುತ್ತಾನೆ. 
ಮಾತಾ ಪಿತೃಗಳ ಶುಶ್ರೂಷೆ ಮಾಡದೇ ಇರುವವರಿಗೆ ಭಗವಂತನ ಅನುಗ್ರಹ ವಾಗುವುದಿಲ್ಲ. 
ತಂದೆ ತಾಯಿಗಳ ಸೇವೆ ಮಾಡದೆ ತೀರ್ಥ ಯಾತ್ರೆ ಮಾಡಿದರೆ ಪ್ರಯೋಜನವಾಗದು. 
ಮಾತಾ ಪಿತೃಗಳ ಸೇವೆ ಮಾಡಿದವರಿಗೆ ಸ್ವರ್ಗಲೋಕದಲ್ಲಿ ಸರ್ವ ಸನ್ಮಾನಿತವಾದ ಸ್ಥಾನಮಾನ ಸಿಗುತ್ತದೆ ಎಂದು ಭೀಷ್ಮರು ಹೇಳುತ್ತಾರೆ.
ಸಹಸ್ರ ಅಶ್ವಮೇಧಯಾಗ ಮಾಡಿದ ಪುಣ್ಯ ಒಂದು ಕಡೆ,  ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಗಳಿಸಿದ ಪುಣ್ಯವನ್ನು ಇನ್ನೊಂದು ತಕ್ಕಡೆಯಲ್ಲಿಟ್ಟು ತೂಕ ಮಾಡಿದರೆ ಸತ್ಯ ನಿಷ್ಠೆ ಪ್ರಾಮಾಣಿಕತೆ ಯಿಂದ ಗಳಿದ ಪುಣ್ಯದ ತೂಕವೇ ಹೆಚ್ಚಾಗುತ್ತದೆ. ಸತ್ಯಕ್ಕೆ ಸದಾ ಗೆಲವುವಿದೆ ಎಂದು ಭೀಷ್ಮರು ಹೇಳುತ್ತಾರೆ.
ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನೂ ಧರ್ಮ ರಕ್ಷಿಸುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಧರ್ಮಕ್ಕೆ ಜಯ ಸಿಕ್ಕಿದ್ದನ್ನು ನೀನೇ ನೋಡಿರುವಿಯಲ್ಲ. ಅಧರ್ಮದಿಂದ ಪಡೆದ ಸುಖ ಕ್ಷಣಿಕ. ಧರ್ಮದಿಂದ ಪಡೆದ ಸುಖ ಶಾಸ್ವತವಾಗಿರುತ್ತದೆ.

 ಆದರೆ ಮಾನವರು ಕ್ಷಣಿಕ ಸುಖದ ಹಿಂದೆ ಬಿದ್ದಿದ್ದಾರೆ. ಕ್ಷಣಿಕ ಸುಖ ಮೊದಲಿಗೆ ಹಿತವೆನಿಸಿದರೂ ಶಾಶ್ವತ ದುಃಖಕ್ಕೆ ಕಾರಣವಾಗುತ್ತದೆ. ಆದರೆ ಶಾಸ್ವತ ಸುಖ ಮೊದಲಿಗೆ ಕಹಿ ಅನುಭವ ನೀಡಿದರೂ ಶಾಶ್ವತ ಸಿಹಿಯನ್ನು ಕೊಡುತ್ತದೆ ಎಂದು ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಉಪದೇಶ ನೀಡಿದರು.

ಶ್ರೀ ಕೃಷ್ಣಾ ರ್ಪಣಮಸ್ತು 

🙏🙏🙏🙏🙏🙏🙏🙏

No comments:

Post a Comment